HomeಮುಖಪುಟTik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು....

Tik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು….

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಹಳಷ್ಟು ಯುವಕ ಯುವತಿಯರಿಗೆ ಚಿಕ್ಕಂದಿನಿಂದಲೂ ತಾವು ಸಿನೆಮಾ ನಟ ನಟಿಯರಾಗಬೇಕು, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ, ಕನಸು ಇದ್ದೇ ಇರುತ್ತದೆ. ಆದರೆ ಸಾವಿರಕ್ಕೆ ಅಥವಾ ಲಕ್ಷಕ್ಕೆ ಒಬ್ಬರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು ವಾಸ್ತವದ ಸಂಗತಿ. ಇನ್ನುಳಿದವರ ಕೊರಗು ನಿವಾರಿಸಲು ಒಂದು ಮಟ್ಟಿಗೆ ಸಹಾಯ ಮಾಡಿದ್ದು ಫೇಸ್‍ಬುಕ್ ಮತ್ತು ವಾಟ್ಸಾಪ್. ತಮಗನ್ನಿಸಿದ್ದನ್ನು ಬರೆಯುವ, ವಿಡಿಯೊ ಮಾಡಿ ಅಪ್ ಲೋಡ್ ಮಾಡಲು ಅವಕಾಶ ಇದರಿಂದ ಸಿಕ್ಕಿತ್ತು. ಆದರೆ ಯಾವಾಗ ಟಿಕ್ ಟಾಪ್ ಆಪ್ ಬಂದಿತ್ತೋ ಹಲವಾರು ಜನ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಆಪ್ ಮೂಲಕ ಅಭಿನಯಿಸಿ, ನೃತ್ಯ ಮಾಡಿ ಅದನ್ನು ಸಾವಿರಾರು ಜನಕ್ಕೆ ತೋರಿಸಿ ಸಂತೃಪ್ತಿಪಟ್ಟುಕೊಂಡರು. ಅಂತಹ ಆಪ್ ಅನ್ನು ನಿಷೇಧಿಸಬೇಕೆನ್ನುವ ಮೂಲಕ ಸಾವಿರಾರು ಯುವನಜನರಿಗೆ ದಿಢೀರ್ ಶಾಕ್ ನೀಡಲಾಗಿತ್ತು.

20ಕೋಟಿಗೂ ಹೆಚ್ಚು ಜನ ಬಳಸುವ ಟಿಕ್ ಟಾಕ್ ಎಂಬ ಮನರಂಜನಾ ಆಪ್ ಬ್ಯಾನ್ ಆಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಲ್ಲಿ ರದ್ದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದು ಡೌನ್‍ಲೋಡ್‍ಗೆ ಲಭ್ಯವಾಗಿದೆ.

ಆರಂಭದಲ್ಲಿ ಡಬ್‍ಸ್ಮ್ಯಾಷ್ ಎಂದು ಕರೆಯಲ್ಪಡುತ್ತಿದ್ದ ಈ ಆಪ್ ನಂತರ ಮ್ಯುಸಿಕಲಿ ಎಂದಾಗಿತ್ತು. ಕೊನೆಗೆ ಟಿಕ್ ಟಾಕ್ ಎಂದು ಬದಲಿಸಕೊಂಡಮೇಲೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಕೋಟ್ಯಾಂತರ ಜನರು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದರು. ಮಿಮಿಕ್ರಿಯಿಂದ ಆರಂಭವಾದು ಇದು ದೊಡ್ಡ ಸ್ಟಾರ್ ನಟನನ್ನು ಅನುಸರಿಲು ಬಳುಸತ್ತಿದ್ದರು. ಡಬ್‍ಸ್ಮ್ಯಾಷ್ ಮಾಡುವ ಮೂಲಕ ಇಷ್ಟ ಪಟ್ಟ ನಟನ ಅಭಿನಯವನ್ನು ನಕಲು ಮಾಡುವುದು, ಅವರ ಧ್ವನಿಗೆ ಇವರು ಅಭಿನಯಿಸಲು ಶುರು ಮಾಡಿದಾಗ ಇದು ಹೊಸ ರೀತಿಯ ಅಲೆಯನ್ನು ಮೂಡಿಸಿತ್ತು. ಈಗ ಅದೇ ರೀತಿಯ ಹಲವಾರು ಆಪ್ ಬಂದಿದ್ದು ಅದರಲ್ಲಿ ಟಿಕ್ ಟಾಕ್ ಮೇಲುಗೈ ಸಾಧಿಸಿದೆ.

ಮುಖ್ಯವಾಗಿ ಯುವಜನರು ಮತ್ತು ಸ್ಥಳೀಯ ಭಾಷಿಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಆಪ್ ಡೆವಲಪ್ ಮಾಡಿದಂತಿದೆ. ಹಲವು ಸಿನಿಮಾದ ಸಣ್ಣ ದೃಶ್ಯಗಳ ವಾಯ್ಸ್‍ಗೆ ತಮ್ಮ ಅಭಿನಯ ಸೇರಿಸಿ ಚಿಕ್ಕ ವಿಡಿಯೋಗಳನ್ನು ತಯಾರಿಸಿ ಹರಿಯಬಿಡುವುದು, ತಾವೇ ಖುದ್ದಾಗಿ ತಮಾಷೆಯ ಪ್ರಸಂಗಗಳನ್ನು ಅಭಿನಯಿಸಿ ರೆಕಾರ್ಡ್ ಮಾಡುವುದು, ಡ್ಯಾನ್ಸ್‍ಗಳನ್ನು ಮಾಡುವುದು, ಟ್ರೋಲ್ ಮಾಡುವುದು ಸೇರಿದಂತೆ ಹತ್ತು ಹಲವು ಸಣ್ಣ ವಿಡಿಯೋಗಳು ಟಿಕ್ ಟಾಕ್‍ನಲ್ಲಿ ಹರಿದಾಡಿದ್ದವು. ಕಾಲಕ್ಕೆ ತಕ್ಕಂತೆ ಒಂದು ವಿಡಿಯೋ ನೀಡಿ ಅದೇ ಮಾದರಿಯ ವಿಡಿಯೋ ಮಾಡಿ ಕಳಿಸುವಂತೆ ಚಾಲೆಂಜ್ ನೀಡಿ ಈ ಆಪ್‍ನ ಪ್ರಿಯರು ಇದರಲ್ಲೇ ಗಿರಕಿ ಹೊಡೆಯುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡುಬಿಟ್ಟ ವಿಡಿಯೋ ವೈರಲ್ ಆಗಿತ್ತು. ಇಂತಹ ಅತಿರೇಕವಾದಂತಹ ವ್ಯಕ್ತಿಗಳಿಂದಲೇ ಟಿಕ್ ಟಾಕ್ ಬ್ಯಾನ್ ಆಗುವ ಹಂತಕ್ಕೆ ತಲುಪಿತ್ತು.

ಎಲ್ಲಾ ವಯೋಮಾನದವರು ಸಹ ಬೇಸರ ಕಳೆಯಲು, ಟೈಮ್ ಪಾಸ್ ಮಾಡಲು ಟಕ್ ಟಾಕ್ ಬಳಸಿದರೆ ಬಹುಪಾಲು ಯುವ ಜನಾಂಗ ಇದರ ದಾಸರಂದತ್ತಿದೆ. ‘ಯಾವಾಗ ನೋಡಿದರೂ ಟಿಕ್ ಟಾಕ್‍ನಲ್ಲೇ ಮುಳುಗಿರುತ್ತೀಯಲ್ಲ’ ಎಂಬ ಟೀಕೆ ಎಲ್ಲಾ ಕಡೆ ಸಹಜವಾಗಿ ಕೇಳಿ ಬರುತ್ತಿದೆ. ಈ ಆಪ್ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಎಷ್ಟು ನಿಜವೋ, ಅಷ್ಟೇ ಪ್ರಮಾಣದಲ್ಲಿ ಅವರನ್ನು ಸೋಮಾರಿಗಳನ್ನಾಗಿಯೂ ಮಾಡಿತ್ತು.
ಈ ಆಪ್‍ನ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿದರೆ, ಮೊದಲನೇಯದಾಗಿ ಆ ಆಪ್ ಬಳಸಿ ಸಾವಿರಾರು ಜನ ತಮ್ಮ ಸೃಜನಶೀಲತೆಯನ್ನು ಬಹಿರಂಗಪಡಿಸಿದ್ದರು. ಅದರಲ್ಲಿನ ಒಂದೊಂದು ಚಿಕ್ಕ ವಿಡಿಯೋ ಸಹ ವಾವ್ ಅನ್ನಿಸುವಷ್ಟರ ಮಟ್ಟಿಗೆ ಹೊಸತನದಿಂದ ಕೂಡಿ ಎಲ್ಲರನ್ನು ನಗಿಸುತ್ತಿದ್ದವು. ಇದರ ಮೂಲಕ ತಮ್ಮ ಸಾಮಥ್ರ್ಯದ ಅರಿವು ಪಡೆಯುತ್ತಿದ್ದ ಬಹಳಷ್ಟು ಜನ ನಾವು ಏನಾದರೂ ಸಾಧಿಸಬಹುದೆಂಬ ಪ್ರೇರಣೆ ಪಡೆದುದ್ದು ನಿಜ. ಆದರೆ ಇದು ಸ್ವಂತಿಕೆಯನ್ನು ಹಾಳು ಮಾಡುತ್ತಿದೆ, ಗೀಳು ಹುಟ್ಟಿಸಿತ್ತಿದೆ, ಕೆಟ್ಟ ಸಂದೇಶ, ಅತಿರೇಕದ ಸಂದೇಶಗಳು ನುಸುಳುತ್ತಿವೆ ಎಂಬ ಅಪವಾದಗಳು ಇದಕ್ಕಿದ್ದವು.

ಮಧುರೈನ ವಕೀಲ ಮುತ್ತುಕುಮಾರ್‍ರವರು ಈ ಆಪ್‍ನಿಂದ ಅಶ್ಲೀಲತೆ ಮತ್ತು ಅವಘಡ ಸಂಭವಿಸುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಆಪ್‍ಗೆ ತಡೆನೀಡಿತು. ತದನಂತರ ಟಿಕ್ ಟಾಕ್ ನಿರ್ವಹಿಸುವ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದರೂ ಫಲ ಸಿಗದೇ ಅನಿವಾರ್ಯವಾಗಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಿಂದ ಈ ಆಪ್‍ಅನ್ನು ತೆಗೆಯಬೇಕಾಗಿತ್ತು. ಆಗಲೂ ಡೌನ್‍ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಷ್ಟರಲ್ಲಾಗಲೇ ಡೌನ್‍ಲೋಡ್ ಮಾಡಿರುವವರು ಬಳಸಬಹುದಿತ್ತು ಮಾತ್ರವಲ್ಲ ಶೇರ್‍ಇಟ್ ಮತ್ತಿತ್ತರ ಆಪ್‍ಗಳ ಮೂಲಕ ಪರಸ್ಪರ ಕಳಿಸಿಕೊಳ್ಳಬಹುದಿತ್ತು.

ಆದರೆ ಈಗ ಕಂಪನಿಯು ಮದ್ರಾಸ್ ಹೈಕೋರ್ಟ್‍ನಲ್ಲಿ ಇದರಿಂದ ಸಾಮಾಜಿಕ ವಾತಾವರಣ ಹಾಳಾಗುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟ ಪರಿಣಾಮ ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದೆ. ಇದರಿಂದ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ಗೆ ಲಗ್ಗೆ ಇಟ್ಟಿದೆ.

ಆಳುವ ಸರ್ಕಾರಗಳ ಬಳಿ ಇಂತಹ ಆಪ್ ಗಳು ಹೊಂದಿರಬೇಕಾದ ಮಾನದಂಡಗಳು ಕುರಿತು ಸ್ಪಷ್ಟ ನೀತಿ ಇಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಿ ತಜ್ಞರನ್ನು ಒಳಗೊಂಡು ನೀತಿಗಳನ್ನು ರೂಪಿಸಬೇಕಿದೆ. ಅದೇ ರೀತಿ ಈ ಥರದ ಕಂಪನಿಗಳು ಸಹ ಅತಿರೇಕ ಮೀರದ ಹಾಗೆ ತಾವೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಇದೆ.

2014ರಲ್ಲಿ ಆರಂಭಗೊಂಡಿದ್ದ ಈ ಕಂಪನಿ 5 ವರ್ಷಗಳಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ಆಪ್ ಬಳಸಿ ತಮ್ಮ ಸೃಜನಶೀಲತೆ ಬಳಸಿ ವಿಡಿಯೋ ಮಾಡಿದ ಹಲವಾರು ಯುವಕ ಯುವತಿಯರು ರಾತ್ರೋ ರಾತ್ರಿ ಸ್ಟಾರ್‍ಗಳಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹಲವು ಕಾರ್ಯಕ್ರಮಗಳಿಗೆ ಈಗಾಗಲೇ ಅತಿಥಿಗಳು ಆಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು ಸಹ ಕೆಲವು ಜನ ಈ ಆಪ್ ಬಳಸಿದ್ದಾರೆ. ಇನ್ನು ಮುಂದೆಯು ಯುವಜನರು ಇದನ್ನು ಹೆಚ್ಚು ಹೆಚ್ಚು ಸಮಾಜಮುಖಿ ಚಟುವಟಿಕೆಗಳಿಗೆ ಇದನ್ನು ಬಳಸಿದರೆ ಒಳ್ಳೇಯದು. ಅದರ ಜೊತೆಗೇ ಇದರಲ್ಲೇ ಮುಳುಗಿ ಹೋಗದೆ, ಇದರಿಂದ ಒಂದಷ್ಟು ರಿಲ್ಯಾಕ್ಸ್ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ನಾವು ಆಶಿಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...