HomeಮುಖಪುಟTik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು....

Tik tok : ಮತ್ತೆ ಬಂದ ಟಿಕ್ ಟಾಕ್ ಆಪ್ ಸುತ್ತಾ ನಾವು ತಿಳಿದಿರಬೇಕಾದ ಸಂಗತಿಗಳು….

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಹಳಷ್ಟು ಯುವಕ ಯುವತಿಯರಿಗೆ ಚಿಕ್ಕಂದಿನಿಂದಲೂ ತಾವು ಸಿನೆಮಾ ನಟ ನಟಿಯರಾಗಬೇಕು, ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲ, ಕನಸು ಇದ್ದೇ ಇರುತ್ತದೆ. ಆದರೆ ಸಾವಿರಕ್ಕೆ ಅಥವಾ ಲಕ್ಷಕ್ಕೆ ಒಬ್ಬರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುವುದು ವಾಸ್ತವದ ಸಂಗತಿ. ಇನ್ನುಳಿದವರ ಕೊರಗು ನಿವಾರಿಸಲು ಒಂದು ಮಟ್ಟಿಗೆ ಸಹಾಯ ಮಾಡಿದ್ದು ಫೇಸ್‍ಬುಕ್ ಮತ್ತು ವಾಟ್ಸಾಪ್. ತಮಗನ್ನಿಸಿದ್ದನ್ನು ಬರೆಯುವ, ವಿಡಿಯೊ ಮಾಡಿ ಅಪ್ ಲೋಡ್ ಮಾಡಲು ಅವಕಾಶ ಇದರಿಂದ ಸಿಕ್ಕಿತ್ತು. ಆದರೆ ಯಾವಾಗ ಟಿಕ್ ಟಾಪ್ ಆಪ್ ಬಂದಿತ್ತೋ ಹಲವಾರು ಜನ ತಮ್ಮ ಕನಸನ್ನು ನನಸು ಮಾಡಿಕೊಂಡರು. ಈ ಆಪ್ ಮೂಲಕ ಅಭಿನಯಿಸಿ, ನೃತ್ಯ ಮಾಡಿ ಅದನ್ನು ಸಾವಿರಾರು ಜನಕ್ಕೆ ತೋರಿಸಿ ಸಂತೃಪ್ತಿಪಟ್ಟುಕೊಂಡರು. ಅಂತಹ ಆಪ್ ಅನ್ನು ನಿಷೇಧಿಸಬೇಕೆನ್ನುವ ಮೂಲಕ ಸಾವಿರಾರು ಯುವನಜನರಿಗೆ ದಿಢೀರ್ ಶಾಕ್ ನೀಡಲಾಗಿತ್ತು.

20ಕೋಟಿಗೂ ಹೆಚ್ಚು ಜನ ಬಳಸುವ ಟಿಕ್ ಟಾಕ್ ಎಂಬ ಮನರಂಜನಾ ಆಪ್ ಬ್ಯಾನ್ ಆಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡುತ್ತಿತ್ತು. ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಲ್ಲಿ ರದ್ದಾಗಿ ಡೌನ್‍ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈಗ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದು ಡೌನ್‍ಲೋಡ್‍ಗೆ ಲಭ್ಯವಾಗಿದೆ.

ಆರಂಭದಲ್ಲಿ ಡಬ್‍ಸ್ಮ್ಯಾಷ್ ಎಂದು ಕರೆಯಲ್ಪಡುತ್ತಿದ್ದ ಈ ಆಪ್ ನಂತರ ಮ್ಯುಸಿಕಲಿ ಎಂದಾಗಿತ್ತು. ಕೊನೆಗೆ ಟಿಕ್ ಟಾಕ್ ಎಂದು ಬದಲಿಸಕೊಂಡಮೇಲೆ ಸಾಕಷ್ಟು ಜನಪ್ರಿಯತೆಯ ಜೊತೆಗೆ ಕೋಟ್ಯಾಂತರ ಜನರು ಡೌನ್‍ಲೋಡ್ ಮಾಡಿಕೊಂಡು ಬಳಸಲು ಆರಂಭಿಸಿದ್ದರು. ಮಿಮಿಕ್ರಿಯಿಂದ ಆರಂಭವಾದು ಇದು ದೊಡ್ಡ ಸ್ಟಾರ್ ನಟನನ್ನು ಅನುಸರಿಲು ಬಳುಸತ್ತಿದ್ದರು. ಡಬ್‍ಸ್ಮ್ಯಾಷ್ ಮಾಡುವ ಮೂಲಕ ಇಷ್ಟ ಪಟ್ಟ ನಟನ ಅಭಿನಯವನ್ನು ನಕಲು ಮಾಡುವುದು, ಅವರ ಧ್ವನಿಗೆ ಇವರು ಅಭಿನಯಿಸಲು ಶುರು ಮಾಡಿದಾಗ ಇದು ಹೊಸ ರೀತಿಯ ಅಲೆಯನ್ನು ಮೂಡಿಸಿತ್ತು. ಈಗ ಅದೇ ರೀತಿಯ ಹಲವಾರು ಆಪ್ ಬಂದಿದ್ದು ಅದರಲ್ಲಿ ಟಿಕ್ ಟಾಕ್ ಮೇಲುಗೈ ಸಾಧಿಸಿದೆ.

ಮುಖ್ಯವಾಗಿ ಯುವಜನರು ಮತ್ತು ಸ್ಥಳೀಯ ಭಾಷಿಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಆಪ್ ಡೆವಲಪ್ ಮಾಡಿದಂತಿದೆ. ಹಲವು ಸಿನಿಮಾದ ಸಣ್ಣ ದೃಶ್ಯಗಳ ವಾಯ್ಸ್‍ಗೆ ತಮ್ಮ ಅಭಿನಯ ಸೇರಿಸಿ ಚಿಕ್ಕ ವಿಡಿಯೋಗಳನ್ನು ತಯಾರಿಸಿ ಹರಿಯಬಿಡುವುದು, ತಾವೇ ಖುದ್ದಾಗಿ ತಮಾಷೆಯ ಪ್ರಸಂಗಗಳನ್ನು ಅಭಿನಯಿಸಿ ರೆಕಾರ್ಡ್ ಮಾಡುವುದು, ಡ್ಯಾನ್ಸ್‍ಗಳನ್ನು ಮಾಡುವುದು, ಟ್ರೋಲ್ ಮಾಡುವುದು ಸೇರಿದಂತೆ ಹತ್ತು ಹಲವು ಸಣ್ಣ ವಿಡಿಯೋಗಳು ಟಿಕ್ ಟಾಕ್‍ನಲ್ಲಿ ಹರಿದಾಡಿದ್ದವು. ಕಾಲಕ್ಕೆ ತಕ್ಕಂತೆ ಒಂದು ವಿಡಿಯೋ ನೀಡಿ ಅದೇ ಮಾದರಿಯ ವಿಡಿಯೋ ಮಾಡಿ ಕಳಿಸುವಂತೆ ಚಾಲೆಂಜ್ ನೀಡಿ ಈ ಆಪ್‍ನ ಪ್ರಿಯರು ಇದರಲ್ಲೇ ಗಿರಕಿ ಹೊಡೆಯುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಒಬ್ಬ ಯುವಕ ಚಾಕುವಿನಿಂದ ಕತ್ತು ಕುಯ್ದುಕೊಳ್ಳುವಂತೆ ಅಭಿನಯಿಸಲು ಹೋಗಿ ನಿಜವಾಗಿಯೂ ಕತ್ತು ಕುಯ್ದುಕೊಂಡುಬಿಟ್ಟ ವಿಡಿಯೋ ವೈರಲ್ ಆಗಿತ್ತು. ಇಂತಹ ಅತಿರೇಕವಾದಂತಹ ವ್ಯಕ್ತಿಗಳಿಂದಲೇ ಟಿಕ್ ಟಾಕ್ ಬ್ಯಾನ್ ಆಗುವ ಹಂತಕ್ಕೆ ತಲುಪಿತ್ತು.

ಎಲ್ಲಾ ವಯೋಮಾನದವರು ಸಹ ಬೇಸರ ಕಳೆಯಲು, ಟೈಮ್ ಪಾಸ್ ಮಾಡಲು ಟಕ್ ಟಾಕ್ ಬಳಸಿದರೆ ಬಹುಪಾಲು ಯುವ ಜನಾಂಗ ಇದರ ದಾಸರಂದತ್ತಿದೆ. ‘ಯಾವಾಗ ನೋಡಿದರೂ ಟಿಕ್ ಟಾಕ್‍ನಲ್ಲೇ ಮುಳುಗಿರುತ್ತೀಯಲ್ಲ’ ಎಂಬ ಟೀಕೆ ಎಲ್ಲಾ ಕಡೆ ಸಹಜವಾಗಿ ಕೇಳಿ ಬರುತ್ತಿದೆ. ಈ ಆಪ್ ಜನರಿಗೆ ಅತಿ ಹೆಚ್ಚು ಮನರಂಜನೆ ನೀಡಿದ್ದು ಎಷ್ಟು ನಿಜವೋ, ಅಷ್ಟೇ ಪ್ರಮಾಣದಲ್ಲಿ ಅವರನ್ನು ಸೋಮಾರಿಗಳನ್ನಾಗಿಯೂ ಮಾಡಿತ್ತು.
ಈ ಆಪ್‍ನ ಅನುಕೂಲ ಮತ್ತು ಅನಾನುಕೂಲಗಳನ್ನು ನೋಡಿದರೆ, ಮೊದಲನೇಯದಾಗಿ ಆ ಆಪ್ ಬಳಸಿ ಸಾವಿರಾರು ಜನ ತಮ್ಮ ಸೃಜನಶೀಲತೆಯನ್ನು ಬಹಿರಂಗಪಡಿಸಿದ್ದರು. ಅದರಲ್ಲಿನ ಒಂದೊಂದು ಚಿಕ್ಕ ವಿಡಿಯೋ ಸಹ ವಾವ್ ಅನ್ನಿಸುವಷ್ಟರ ಮಟ್ಟಿಗೆ ಹೊಸತನದಿಂದ ಕೂಡಿ ಎಲ್ಲರನ್ನು ನಗಿಸುತ್ತಿದ್ದವು. ಇದರ ಮೂಲಕ ತಮ್ಮ ಸಾಮಥ್ರ್ಯದ ಅರಿವು ಪಡೆಯುತ್ತಿದ್ದ ಬಹಳಷ್ಟು ಜನ ನಾವು ಏನಾದರೂ ಸಾಧಿಸಬಹುದೆಂಬ ಪ್ರೇರಣೆ ಪಡೆದುದ್ದು ನಿಜ. ಆದರೆ ಇದು ಸ್ವಂತಿಕೆಯನ್ನು ಹಾಳು ಮಾಡುತ್ತಿದೆ, ಗೀಳು ಹುಟ್ಟಿಸಿತ್ತಿದೆ, ಕೆಟ್ಟ ಸಂದೇಶ, ಅತಿರೇಕದ ಸಂದೇಶಗಳು ನುಸುಳುತ್ತಿವೆ ಎಂಬ ಅಪವಾದಗಳು ಇದಕ್ಕಿದ್ದವು.

ಮಧುರೈನ ವಕೀಲ ಮುತ್ತುಕುಮಾರ್‍ರವರು ಈ ಆಪ್‍ನಿಂದ ಅಶ್ಲೀಲತೆ ಮತ್ತು ಅವಘಡ ಸಂಭವಿಸುತ್ತಿದೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಕೋರ್ಟ್ ಆಪ್‍ಗೆ ತಡೆನೀಡಿತು. ತದನಂತರ ಟಿಕ್ ಟಾಕ್ ನಿರ್ವಹಿಸುವ ಚೀನಾ ಮೂಲದ ಬೈಟ್‍ಡ್ಯಾನ್ಸ್ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟೆಲೇರಿದರೂ ಫಲ ಸಿಗದೇ ಅನಿವಾರ್ಯವಾಗಿ ಆಪಲ್ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಸ್ಟೋರ್‍ನಿಂದ ಈ ಆಪ್‍ಅನ್ನು ತೆಗೆಯಬೇಕಾಗಿತ್ತು. ಆಗಲೂ ಡೌನ್‍ಲೋಡ್ ಮಾಡಿಕೊಳ್ಳಲು ಆಗುತ್ತಿರಲಿಲ್ಲವಾದರೂ ಅಷ್ಟರಲ್ಲಾಗಲೇ ಡೌನ್‍ಲೋಡ್ ಮಾಡಿರುವವರು ಬಳಸಬಹುದಿತ್ತು ಮಾತ್ರವಲ್ಲ ಶೇರ್‍ಇಟ್ ಮತ್ತಿತ್ತರ ಆಪ್‍ಗಳ ಮೂಲಕ ಪರಸ್ಪರ ಕಳಿಸಿಕೊಳ್ಳಬಹುದಿತ್ತು.

ಆದರೆ ಈಗ ಕಂಪನಿಯು ಮದ್ರಾಸ್ ಹೈಕೋರ್ಟ್‍ನಲ್ಲಿ ಇದರಿಂದ ಸಾಮಾಜಿಕ ವಾತಾವರಣ ಹಾಳಾಗುತ್ತಿಲ್ಲವೆಂದು ಮನವರಿಕೆ ಮಾಡಿಕೊಟ್ಟ ಪರಿಣಾಮ ಮದ್ರಾಸ್ ಹೈಕೋರ್ಟ್ ನಿಷೇಧ ತೆರವುಗೊಳಿಸಿದೆ. ಇದರಿಂದ ಈ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‍ಗೆ ಲಗ್ಗೆ ಇಟ್ಟಿದೆ.

ಆಳುವ ಸರ್ಕಾರಗಳ ಬಳಿ ಇಂತಹ ಆಪ್ ಗಳು ಹೊಂದಿರಬೇಕಾದ ಮಾನದಂಡಗಳು ಕುರಿತು ಸ್ಪಷ್ಟ ನೀತಿ ಇಲ್ಲ. ಈ ಕುರಿತು ಗಂಭೀರವಾಗಿ ಯೋಚಿಸಿ ತಜ್ಞರನ್ನು ಒಳಗೊಂಡು ನೀತಿಗಳನ್ನು ರೂಪಿಸಬೇಕಿದೆ. ಅದೇ ರೀತಿ ಈ ಥರದ ಕಂಪನಿಗಳು ಸಹ ಅತಿರೇಕ ಮೀರದ ಹಾಗೆ ತಾವೇ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯೂ ಇದೆ.

2014ರಲ್ಲಿ ಆರಂಭಗೊಂಡಿದ್ದ ಈ ಕಂಪನಿ 5 ವರ್ಷಗಳಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿದೆ. ಈ ಆಪ್ ಬಳಸಿ ತಮ್ಮ ಸೃಜನಶೀಲತೆ ಬಳಸಿ ವಿಡಿಯೋ ಮಾಡಿದ ಹಲವಾರು ಯುವಕ ಯುವತಿಯರು ರಾತ್ರೋ ರಾತ್ರಿ ಸ್ಟಾರ್‍ಗಳಾಗಿದ್ದಾರೆ. ಸೆಲೆಬ್ರಿಟಿಗಳಂತೆ ಹಲವು ಕಾರ್ಯಕ್ರಮಗಳಿಗೆ ಈಗಾಗಲೇ ಅತಿಥಿಗಳು ಆಗಿದ್ದಾರೆ. ಸಾಮಾಜಿಕ ಜಾಗೃತಿ ಮೂಡಿಸಲು ಸಹ ಕೆಲವು ಜನ ಈ ಆಪ್ ಬಳಸಿದ್ದಾರೆ. ಇನ್ನು ಮುಂದೆಯು ಯುವಜನರು ಇದನ್ನು ಹೆಚ್ಚು ಹೆಚ್ಚು ಸಮಾಜಮುಖಿ ಚಟುವಟಿಕೆಗಳಿಗೆ ಇದನ್ನು ಬಳಸಿದರೆ ಒಳ್ಳೇಯದು. ಅದರ ಜೊತೆಗೇ ಇದರಲ್ಲೇ ಮುಳುಗಿ ಹೋಗದೆ, ಇದರಿಂದ ಒಂದಷ್ಟು ರಿಲ್ಯಾಕ್ಸ್ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯವನ್ನು ಉತ್ತಮಪಡಿಸಿಕೊಳ್ಳುವ ಕಡೆ ಗಮನ ನೀಡಬೇಕೆಂದು ನಾವು ಆಶಿಸುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...