Homeಅಂಕಣಗಳುಗಾಂಧಿ ಕಥನಕ್ಕೂ ಪ್ರಶಸ್ತಿ

ಗಾಂಧಿ ಕಥನಕ್ಕೂ ಪ್ರಶಸ್ತಿ

- Advertisement -
- Advertisement -

ಗಾಂಧೀಜಿಯನ್ನು ಕೊಂದವರನ್ನು ವೇದಿಕೆಯ ಮೇಲೆ ಸಮರ್ಥಿಸಿಕೊಳ್ಳುವವರನ್ನು ಮಟ್ಟಹಾಕದ, ಅಂತಹವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವವರು ದೇಶ ಆಳುತ್ತಿರುವ ಸಮಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಬರೆದವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಶ್ಯಾನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಲ್ಲದೆ, ಸ್ವತಹ ಬರೆದವರಿಗೇ ಅಚ್ಚರಿ ಮೂಡಿಸಿದೆಯಲ್ಲಾ! ಯಾಕೆಂದರೆ, ಈ ಬಿಜೆಪಿ ಸರಕಾರ ಏನೇ ಮಾಡಿದರು ಅಲ್ಲೊಂದು ಸಂಚು ಅಂತರ್ಗತವಾಗಿ ಕೆಲಸ ಮಾಡಿರುತ್ತದೆ. ಇರಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಸ್ವತಂತ್ರ ಸಂಸ್ಥೆ ಎಂಬ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಂದು ದೇಶದ ಸ್ವತಂತ್ರ ಸಂಸ್ಥೆಗಳು ಹಿಡಿದಿರುವ ದಾರಿ ನೋಡಿದರೆ ಸರ್ಕಾರದ ಕೈವಾಡಗಳ ಬಗ್ಗೆ ಅನುಮಾನ ಮೂಡದೇ ಇರದು.

ಇಂತಹ ಅನುಮಾನದಲ್ಲಿಯೇ ಯೋಚಿಸುವುದಾದರೆ ಈ ಸರ್ಕಾರಕ್ಕೆ ಮುಂದೆ ಗಾಂಧೀಜಿಯೂ ಬೇಕಾಗಬಹುದು. (ಸದ್ಯಕ್ಕೆ ವಿದೇಶಗಳಲ್ಲಿ ಹಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ ಗಾಂಧಿ ಪ್ರೇಮ!). ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಕಥನ ಬರೆದವರ ಈವರೆಗಿನ ಬದುಕು ಮತ್ತು ಬರವಣಿಗೆಯನ್ನೂ ಪ್ರಶಸ್ತಿ ಕೊಟ್ಟವರು ಪರಿಗಣಿಸಿರಬಹುದು. ಅದರಲ್ಲಿ ಪ್ರಧಾನವಾಗಿ, ಬೋಫೋರ್ಸು ಹಗರಣದಷ್ಟೇ ಗಂಭೀರವಾದ ರಫೇಲ್ ಹಗರಣದ ಬಗ್ಗೆ ಗಾಂಧಿ ಕಥನದ ಲೇಖಕರು ಬರೆಯುತ್ತಾ ಈ ರಫೇಲ್ ಒಪ್ಪಂದವನ್ನು ಪ್ರಧಾನಿಯವರು ತ್ವರಿತವಾಗಿ ಮುಗಿಸಿದ್ದಾರೆ, ಇದರಲ್ಲಿ ಅವರ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಬರೆದಾಗ, ಕ್ಯಾರವಾನ್ ಪತ್ರಿಕೆ ಮೂವತ್ತು ಪೇಜಿನಲ್ಲಿ ರಫೇಲ್ ಹಗರಣದ ವರದಿ ಪ್ರಕಟಿಸಿತ್ತು. ಮುಂದೆ ಇದೇ ಲೇಖಕರು ಬದಲಾಗುತ್ತಿರುವ ಆರೆಸ್ಸೆಸ್ ಎಂದು ವಕಾಲತ್ತು ವಹಿಸಿದರು. ಅದಾದ ಮೇಲೆ ತಮ್ಮ ಮನೆಯ ಮುಂದೆಯೇ ಮಹೇಂದ್ರ ಟಿಕಾಯತ್ ರೈತಚಳವಳಿ ಸಭೆ ಮಾಡಿದಾಗ, ಲೇಖಕರು ತಮ್ಮ ಅನಿಸಿಕೆ ಬಿಟ್ಟು, ರೈತನಾಯಕರಿಗೇ ಈ ಬಗ್ಗೆ ಬರೆಯಿರಿ ಎಂದು ಅಹ್ವಾನ ಕೊಟ್ಟರು. ಸದ್ಯದ ಎಡ ಬಲದ ಚರ್ಚೆಯಲ್ಲಿ ಗಾಂಧಿ ಕಥನಕಾರರು ಬಲಗಡೆಯಿದ್ದಾರೆಂದೂ, ಎಡ ಮತ್ತು ಬಲದ ನಡುವೆ ಹೃದಯವಿದ್ದು ಅದು ಎಡಭಾಗದಲ್ಲಿದೆ ಎಂದೂ, ಗಾಂಧಿ ಕಥನಕಾರರನ್ನು ಕಂಡರಾಗದವರ ಹೇಳಿಕೆ ಕೊಡುತ್ತಿದ್ದಾರೆಲ್ಲಾ ಥೂತ್ತೇರಿ.

ಗಾಂಧಿ ಎಂಬ ಮುಕುಟಮಣಿಯನ್ನು ಸ್ಪರ್ಶಿಸಿದವರಿಗೆಲ್ಲಾ ಒಳ್ಳೆಯದಾಗಿದೆ ಮತ್ತು ಪ್ರಶಸ್ತಿಗಳೂ ಬಂದಿವೆ. ಪ್ರಶಸ್ತಿ ಎಂದ ಮೇಲೆ ಅಲ್ಲೊಂದಿಷ್ಟು ಕಾಸು ಇದ್ದೇ ಇರುತ್ತದೆ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ಗಾಂಧಿ ಕಾರಣವಾಗಿ ಈ ದೇಶದಲ್ಲಿ ಶತಮಾನದಿಂದಲೂ ಅಸಂಖ್ಯಾತ ಜನರು ಪಾವನವಾಗಿದ್ದಾರೆ.
ಗಾಂಧೀಜಿಯವರ ನಂತರ ನಮ್ಮ ಸಮಾಜವಾದಿಗಳು ಅವರ ಮುಂದುವರಿಕೆಯಾಗಿ
ಗೋಚರಿಸಬೇಕಿತ್ತು. ಆದರೆ ನಮ್ಮ ಸಮಾಜವಾದಿಗಳು ಹೋರಾಡಿದ್ದು ತಮ್ಮಗಳ ವಿರುದ್ಧವೇ. ಹೀಗೆ ಎಲ್ಲರನ್ನ ಕಳೆದುಕೊಂಡು ಏಕಾಂತಗೊಂಡಿರುವ ಸಮಾಜವಾದಿಗಳಿಗೆ ಗಾಂಧಿಯೇ ದಿಕ್ಕಾಗಿದ್ದಾರೆ. ಗಾಂಧಿಯವರ ಕಥನ ರೂಪುಗೊಂಡು ಹೊಸ ಸಂವೇದನೆಯ ಗಾಳಿ ಬೀಸಿದ್ದರೂ, ಲೇಖಕರ ಪೂರ್ವಗ್ರಹಗಳು ಹಾಗೂ ಹಠಮಾರಿತನಗಳೇನಾದರೂ ಕಥನದಲ್ಲಿ ಸೂಕ್ಷ್ಮವಾಗಿ ಬೆರೆತು ಕೆಲಸ ಮಾಡಿವೆಯೇ ಎಂಬುದನ್ನು ಕಲಿತ ಸಮಾಜವಾದಿಗಳು ಪತ್ತೆಹಚ್ಚಿ ಹೇಳಬೇಕೆಂದು ಗಾಂಧಿವಾದಿಗಳ ಗೊಣಗಾಟವಾಗಿದೆಯಂತಲ್ಲಾ ಥೂತ್ತೆರಿ.

ನಮ್ಮ ಕರ್ನಾಟಕದಲ್ಲಿ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವಿದೆಯಂತಲ್ಲಾ! ರಾಷ್ಟ್ರಮಟ್ಟದ ವಿರೋಧಿ ನಾಯಕರೆಲ್ಲಾ ಬಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯಾಗಿಸಿ ಆಶೀರ್‍ವಾದ ಮಾಡಿ ಹೋದರು. ಇದೊಂತರ ಶ್ರೀಮಂತರ ಮದುವೆಗೆ ದೇಶದ ಗಣ್ಯರೆಲ್ಲಾ ಬಂದು ಭಾಗವಹಿಸಿದಂತಹ ಪ್ರಸಂಗ. ವರ ಮತ್ತು ವಧುವಿಗೆ ತಾಳೆಯಾಗದೆ, ತಾಜ್ ವೆಸ್ಟ್‌ಎಂಡ್ ಹೋಟೆಲಿನಲ್ಲಿ ಶುರುವಾದ ಸಂಸಾರ ಬಹಳದಿನ ಬಾಳಿಕೆ ಬರಲಿಲ್ಲ. ಹಾಡುಹಗಲೇ ಡೈವರ್ಸು ನಡೆದೇಹೋಯ್ತು. ಇದರ ಸತ್ಯಾಸತ್ಯತೆ ಗ್ರಹಿಸಲಾರದವರೆ ಅಂದಿನಿಂದಲೂ ವರಲುತ್ತ ಡೈವರ್ಸಿಗೆ ಕಾರಣರಾದವರನ್ನು ಹಾದಿಬೀದಿಯಲ್ಲಿ ಬೈಯುತ್ತ ಕಿರುಚುತ್ತಿರಬೇಕಾದರೆ, ಅವರ ಮಾತುಗಳೆಲ್ಲಾ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವನ್ನೇ ರೂಪಿಸುತ್ತಿದೆಯಂತಲ್ಲಾ. ಉದಾಹರಣೆಗೆ ರಾಜ್ಯದ ಕಂಟ್ರ್ಯಾಕ್ಟರುಗಳು ಈ ಆಳುವ ರಾಜಕಾರಣಗಳಿಗೆ ನಲವತ್ತು ಪರಸೆಂಟ್ ಕಮಿಶನ್ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು. ಕೂಡಲೇ ಕುಮಾರಣ್ಣ ಸದರಿ ಪರಸೆಂಟೇಜ್ ಸಿದ್ದರಾಮಯ್ಯನವರ ಕಾಲದಲ್ಲಿರಲಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲೆಸೆದರು. ಹಾಗಾದರೆ ಕುಮಾರಣ್ಣ ತಾಜ್ ವೆಸ್ಟ್ ಹೋಟೆಲಿನಲ್ಲಿದ್ದಾಗ ಪರಸಂಟೇಜು ಸ್ಟಾಪಾಗಿತ್ತೇ ಎಂದು ರೇವಣ್ಣಾಭಿಮಾನಿಗಳ ಪ್ರಶ್ನೆಯಾಗಿದೆಯಂತಲ್ಲಾ? ಪರಸೆಂಟೇಜು ಕೊಟ್ಟುಕೊಟ್ಟು ಸುಸ್ತಾಗಿರುವ ಕಂಟ್ರ್ಯಾಕ್ಟರ್ ಪರವಾಗಿ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕುಮಾರಣ್ಣ ಉಲ್ಟಾಹೊಡೆದು ವಿರೋಧಪಕ್ಷ ಕಾಂಗ್ರೆಸ್‌ಗೆ ಸರಿಯಾದ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದಾರಂತಲ್ಲಾ ಥೂತ್ತೇರಿ.

ದೀರ್ಘಕಾಲದಿಂದಲೂ ಎಲ್‌ಕೆಜಿಯ ಮಕ್ಕಳಿಗೂ ಹಿಂದಿ ಕಲಿಸುತ್ತಿರುವ ಅಪಾಯದ ಬಗ್ಗೆ ಕನ್ನಡಿಗರ ಒಟ್ಟಾರೆಯಾಗಿ ಗಂಭೀರ ಅರಿವು ಮೂಡಿಲ್ಲ. ತಮ್ಮ ಮಾತೃಭಾಷೆಯನ್ನ ಕೊಂದು ಹಿಂದಿ ಉಳಿಸಲು ಹೋರಾಡುತ್ತಿರುವ ದೃಶ್ಯ ಆತ್ಮಹತ್ಯಾತ್ಮಕವಾಗಿದೆಯೆಲ್ಲಾ ಎಂಬುದು ಕೂಡ. ಇನ್ನ ಬಿಜೆಪಿ ಸರಕಾರ ಬಂದ ಮೇಲೆ ಅದರ ಎಂದಿನ ಸಂಚಿನ ಫಲವಾಗಿ ನಮ್ಮ ರೈಲುಗಳ ಮೈಮೇಲಿಂದ ಕನ್ನಡ ಅಳಿಸಿಹೋಯ್ತು, ಮೈಲಿಗಲ್ಲಿನಿಂದಲೂ ಕನ್ನಡ ಹೋಗಿದೆ. ಗ್ರಾಮಾಂತರ ಪ್ರದೇಶದ ಹೋಟೆಲುಗಳ ಮೆನು ಕಾರ್ಡಿನಿಂದ ಕೂಡ ಕನ್ನಡ ಮರೆಯಾಗಿದೆ. ನಿಮ್ಮ ಯಾವುದೇ ಅಂಗಡಿ ಮುಂಗಟ್ಟು ಹೋಟೆಲು ಇತ್ಯಾದಿ ಕಟ್ಟಡಗಳ ಮೇಲೆ ಮಾತೃಭಾಷೆ ಪ್ರಧಾನವಾಗಿದ್ದು ಉಳಿದ ಭಾಷೆ ಸಣ್ಣದಾಗಿರಲಿ ಎಂಬ ಆದೇಶಕ್ಕೆ ಕೂಡ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆಯೆಲ್ಲಾ ಥೂತ್ತೆರಿ.


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...