Homeಅಂಕಣಗಳುಗಾಂಧಿ ಕಥನಕ್ಕೂ ಪ್ರಶಸ್ತಿ

ಗಾಂಧಿ ಕಥನಕ್ಕೂ ಪ್ರಶಸ್ತಿ

- Advertisement -
- Advertisement -

ಗಾಂಧೀಜಿಯನ್ನು ಕೊಂದವರನ್ನು ವೇದಿಕೆಯ ಮೇಲೆ ಸಮರ್ಥಿಸಿಕೊಳ್ಳುವವರನ್ನು ಮಟ್ಟಹಾಕದ, ಅಂತಹವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವವರು ದೇಶ ಆಳುತ್ತಿರುವ ಸಮಯದಲ್ಲಿ ಗಾಂಧೀಜಿ ಕುರಿತ ಪುಸ್ತಕ ಬರೆದವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ಶ್ಯಾನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿರುವುದಲ್ಲದೆ, ಸ್ವತಹ ಬರೆದವರಿಗೇ ಅಚ್ಚರಿ ಮೂಡಿಸಿದೆಯಲ್ಲಾ! ಯಾಕೆಂದರೆ, ಈ ಬಿಜೆಪಿ ಸರಕಾರ ಏನೇ ಮಾಡಿದರು ಅಲ್ಲೊಂದು ಸಂಚು ಅಂತರ್ಗತವಾಗಿ ಕೆಲಸ ಮಾಡಿರುತ್ತದೆ. ಇರಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಒಂದು ಸ್ವತಂತ್ರ ಸಂಸ್ಥೆ ಎಂಬ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಂದು ದೇಶದ ಸ್ವತಂತ್ರ ಸಂಸ್ಥೆಗಳು ಹಿಡಿದಿರುವ ದಾರಿ ನೋಡಿದರೆ ಸರ್ಕಾರದ ಕೈವಾಡಗಳ ಬಗ್ಗೆ ಅನುಮಾನ ಮೂಡದೇ ಇರದು.

ಇಂತಹ ಅನುಮಾನದಲ್ಲಿಯೇ ಯೋಚಿಸುವುದಾದರೆ ಈ ಸರ್ಕಾರಕ್ಕೆ ಮುಂದೆ ಗಾಂಧೀಜಿಯೂ ಬೇಕಾಗಬಹುದು. (ಸದ್ಯಕ್ಕೆ ವಿದೇಶಗಳಲ್ಲಿ ಹಾರ ಹಾಕುವುದಕ್ಕೆ ಮಾತ್ರ ಸೀಮಿತವಾಗಿದೆ ಗಾಂಧಿ ಪ್ರೇಮ!). ಎಲ್ಲಕ್ಕಿಂತ ಮುಖ್ಯವಾಗಿ ಗಾಂಧಿ ಕಥನ ಬರೆದವರ ಈವರೆಗಿನ ಬದುಕು ಮತ್ತು ಬರವಣಿಗೆಯನ್ನೂ ಪ್ರಶಸ್ತಿ ಕೊಟ್ಟವರು ಪರಿಗಣಿಸಿರಬಹುದು. ಅದರಲ್ಲಿ ಪ್ರಧಾನವಾಗಿ, ಬೋಫೋರ್ಸು ಹಗರಣದಷ್ಟೇ ಗಂಭೀರವಾದ ರಫೇಲ್ ಹಗರಣದ ಬಗ್ಗೆ ಗಾಂಧಿ ಕಥನದ ಲೇಖಕರು ಬರೆಯುತ್ತಾ ಈ ರಫೇಲ್ ಒಪ್ಪಂದವನ್ನು ಪ್ರಧಾನಿಯವರು ತ್ವರಿತವಾಗಿ ಮುಗಿಸಿದ್ದಾರೆ, ಇದರಲ್ಲಿ ಅವರ ಸ್ವಂತ ಹಿತಾಸಕ್ತಿ ಏನೂ ಇಲ್ಲ ಎಂದು ಬರೆದಾಗ, ಕ್ಯಾರವಾನ್ ಪತ್ರಿಕೆ ಮೂವತ್ತು ಪೇಜಿನಲ್ಲಿ ರಫೇಲ್ ಹಗರಣದ ವರದಿ ಪ್ರಕಟಿಸಿತ್ತು. ಮುಂದೆ ಇದೇ ಲೇಖಕರು ಬದಲಾಗುತ್ತಿರುವ ಆರೆಸ್ಸೆಸ್ ಎಂದು ವಕಾಲತ್ತು ವಹಿಸಿದರು. ಅದಾದ ಮೇಲೆ ತಮ್ಮ ಮನೆಯ ಮುಂದೆಯೇ ಮಹೇಂದ್ರ ಟಿಕಾಯತ್ ರೈತಚಳವಳಿ ಸಭೆ ಮಾಡಿದಾಗ, ಲೇಖಕರು ತಮ್ಮ ಅನಿಸಿಕೆ ಬಿಟ್ಟು, ರೈತನಾಯಕರಿಗೇ ಈ ಬಗ್ಗೆ ಬರೆಯಿರಿ ಎಂದು ಅಹ್ವಾನ ಕೊಟ್ಟರು. ಸದ್ಯದ ಎಡ ಬಲದ ಚರ್ಚೆಯಲ್ಲಿ ಗಾಂಧಿ ಕಥನಕಾರರು ಬಲಗಡೆಯಿದ್ದಾರೆಂದೂ, ಎಡ ಮತ್ತು ಬಲದ ನಡುವೆ ಹೃದಯವಿದ್ದು ಅದು ಎಡಭಾಗದಲ್ಲಿದೆ ಎಂದೂ, ಗಾಂಧಿ ಕಥನಕಾರರನ್ನು ಕಂಡರಾಗದವರ ಹೇಳಿಕೆ ಕೊಡುತ್ತಿದ್ದಾರೆಲ್ಲಾ ಥೂತ್ತೇರಿ.

ಗಾಂಧಿ ಎಂಬ ಮುಕುಟಮಣಿಯನ್ನು ಸ್ಪರ್ಶಿಸಿದವರಿಗೆಲ್ಲಾ ಒಳ್ಳೆಯದಾಗಿದೆ ಮತ್ತು ಪ್ರಶಸ್ತಿಗಳೂ ಬಂದಿವೆ. ಪ್ರಶಸ್ತಿ ಎಂದ ಮೇಲೆ ಅಲ್ಲೊಂದಿಷ್ಟು ಕಾಸು ಇದ್ದೇ ಇರುತ್ತದೆ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ಗಾಂಧಿ ಕಾರಣವಾಗಿ ಈ ದೇಶದಲ್ಲಿ ಶತಮಾನದಿಂದಲೂ ಅಸಂಖ್ಯಾತ ಜನರು ಪಾವನವಾಗಿದ್ದಾರೆ.
ಗಾಂಧೀಜಿಯವರ ನಂತರ ನಮ್ಮ ಸಮಾಜವಾದಿಗಳು ಅವರ ಮುಂದುವರಿಕೆಯಾಗಿ
ಗೋಚರಿಸಬೇಕಿತ್ತು. ಆದರೆ ನಮ್ಮ ಸಮಾಜವಾದಿಗಳು ಹೋರಾಡಿದ್ದು ತಮ್ಮಗಳ ವಿರುದ್ಧವೇ. ಹೀಗೆ ಎಲ್ಲರನ್ನ ಕಳೆದುಕೊಂಡು ಏಕಾಂತಗೊಂಡಿರುವ ಸಮಾಜವಾದಿಗಳಿಗೆ ಗಾಂಧಿಯೇ ದಿಕ್ಕಾಗಿದ್ದಾರೆ. ಗಾಂಧಿಯವರ ಕಥನ ರೂಪುಗೊಂಡು ಹೊಸ ಸಂವೇದನೆಯ ಗಾಳಿ ಬೀಸಿದ್ದರೂ, ಲೇಖಕರ ಪೂರ್ವಗ್ರಹಗಳು ಹಾಗೂ ಹಠಮಾರಿತನಗಳೇನಾದರೂ ಕಥನದಲ್ಲಿ ಸೂಕ್ಷ್ಮವಾಗಿ ಬೆರೆತು ಕೆಲಸ ಮಾಡಿವೆಯೇ ಎಂಬುದನ್ನು ಕಲಿತ ಸಮಾಜವಾದಿಗಳು ಪತ್ತೆಹಚ್ಚಿ ಹೇಳಬೇಕೆಂದು ಗಾಂಧಿವಾದಿಗಳ ಗೊಣಗಾಟವಾಗಿದೆಯಂತಲ್ಲಾ ಥೂತ್ತೆರಿ.

ನಮ್ಮ ಕರ್ನಾಟಕದಲ್ಲಿ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವಿದೆಯಂತಲ್ಲಾ! ರಾಷ್ಟ್ರಮಟ್ಟದ ವಿರೋಧಿ ನಾಯಕರೆಲ್ಲಾ ಬಂದು ಕುಮಾರಸ್ವಾಮಿಯನ್ನ ಮುಖ್ಯಮಂತ್ರಿಯಾಗಿಸಿ ಆಶೀರ್‍ವಾದ ಮಾಡಿ ಹೋದರು. ಇದೊಂತರ ಶ್ರೀಮಂತರ ಮದುವೆಗೆ ದೇಶದ ಗಣ್ಯರೆಲ್ಲಾ ಬಂದು ಭಾಗವಹಿಸಿದಂತಹ ಪ್ರಸಂಗ. ವರ ಮತ್ತು ವಧುವಿಗೆ ತಾಳೆಯಾಗದೆ, ತಾಜ್ ವೆಸ್ಟ್‌ಎಂಡ್ ಹೋಟೆಲಿನಲ್ಲಿ ಶುರುವಾದ ಸಂಸಾರ ಬಹಳದಿನ ಬಾಳಿಕೆ ಬರಲಿಲ್ಲ. ಹಾಡುಹಗಲೇ ಡೈವರ್ಸು ನಡೆದೇಹೋಯ್ತು. ಇದರ ಸತ್ಯಾಸತ್ಯತೆ ಗ್ರಹಿಸಲಾರದವರೆ ಅಂದಿನಿಂದಲೂ ವರಲುತ್ತ ಡೈವರ್ಸಿಗೆ ಕಾರಣರಾದವರನ್ನು ಹಾದಿಬೀದಿಯಲ್ಲಿ ಬೈಯುತ್ತ ಕಿರುಚುತ್ತಿರಬೇಕಾದರೆ, ಅವರ ಮಾತುಗಳೆಲ್ಲಾ ವಿರೋಧಪಕ್ಷಕ್ಕೊಂದು ವಿರೋಧ ಪಕ್ಷವನ್ನೇ ರೂಪಿಸುತ್ತಿದೆಯಂತಲ್ಲಾ. ಉದಾಹರಣೆಗೆ ರಾಜ್ಯದ ಕಂಟ್ರ್ಯಾಕ್ಟರುಗಳು ಈ ಆಳುವ ರಾಜಕಾರಣಗಳಿಗೆ ನಲವತ್ತು ಪರಸೆಂಟ್ ಕಮಿಶನ್ ಕೊಡಲಾಗುವುದಿಲ್ಲ ಎಂದು ಪತ್ರ ಬರೆದರು. ಕೂಡಲೇ ಕುಮಾರಣ್ಣ ಸದರಿ ಪರಸೆಂಟೇಜ್ ಸಿದ್ದರಾಮಯ್ಯನವರ ಕಾಲದಲ್ಲಿರಲಿಲ್ಲ ಎಂದು ಅವರು ಎದೆ ಮುಟ್ಟಿ ಹೇಳಲಿ ಎಂದು ಸವಾಲೆಸೆದರು. ಹಾಗಾದರೆ ಕುಮಾರಣ್ಣ ತಾಜ್ ವೆಸ್ಟ್ ಹೋಟೆಲಿನಲ್ಲಿದ್ದಾಗ ಪರಸಂಟೇಜು ಸ್ಟಾಪಾಗಿತ್ತೇ ಎಂದು ರೇವಣ್ಣಾಭಿಮಾನಿಗಳ ಪ್ರಶ್ನೆಯಾಗಿದೆಯಂತಲ್ಲಾ? ಪರಸೆಂಟೇಜು ಕೊಟ್ಟುಕೊಟ್ಟು ಸುಸ್ತಾಗಿರುವ ಕಂಟ್ರ್ಯಾಕ್ಟರ್ ಪರವಾಗಿ ನಿಂತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿದ್ದ ಕುಮಾರಣ್ಣ ಉಲ್ಟಾಹೊಡೆದು ವಿರೋಧಪಕ್ಷ ಕಾಂಗ್ರೆಸ್‌ಗೆ ಸರಿಯಾದ ವಿರೋಧಪಕ್ಷವಾಗಿ ಕೆಲಸ ಮಾಡುತ್ತಿದ್ದಾರಂತಲ್ಲಾ ಥೂತ್ತೇರಿ.

ದೀರ್ಘಕಾಲದಿಂದಲೂ ಎಲ್‌ಕೆಜಿಯ ಮಕ್ಕಳಿಗೂ ಹಿಂದಿ ಕಲಿಸುತ್ತಿರುವ ಅಪಾಯದ ಬಗ್ಗೆ ಕನ್ನಡಿಗರ ಒಟ್ಟಾರೆಯಾಗಿ ಗಂಭೀರ ಅರಿವು ಮೂಡಿಲ್ಲ. ತಮ್ಮ ಮಾತೃಭಾಷೆಯನ್ನ ಕೊಂದು ಹಿಂದಿ ಉಳಿಸಲು ಹೋರಾಡುತ್ತಿರುವ ದೃಶ್ಯ ಆತ್ಮಹತ್ಯಾತ್ಮಕವಾಗಿದೆಯೆಲ್ಲಾ ಎಂಬುದು ಕೂಡ. ಇನ್ನ ಬಿಜೆಪಿ ಸರಕಾರ ಬಂದ ಮೇಲೆ ಅದರ ಎಂದಿನ ಸಂಚಿನ ಫಲವಾಗಿ ನಮ್ಮ ರೈಲುಗಳ ಮೈಮೇಲಿಂದ ಕನ್ನಡ ಅಳಿಸಿಹೋಯ್ತು, ಮೈಲಿಗಲ್ಲಿನಿಂದಲೂ ಕನ್ನಡ ಹೋಗಿದೆ. ಗ್ರಾಮಾಂತರ ಪ್ರದೇಶದ ಹೋಟೆಲುಗಳ ಮೆನು ಕಾರ್ಡಿನಿಂದ ಕೂಡ ಕನ್ನಡ ಮರೆಯಾಗಿದೆ. ನಿಮ್ಮ ಯಾವುದೇ ಅಂಗಡಿ ಮುಂಗಟ್ಟು ಹೋಟೆಲು ಇತ್ಯಾದಿ ಕಟ್ಟಡಗಳ ಮೇಲೆ ಮಾತೃಭಾಷೆ ಪ್ರಧಾನವಾಗಿದ್ದು ಉಳಿದ ಭಾಷೆ ಸಣ್ಣದಾಗಿರಲಿ ಎಂಬ ಆದೇಶಕ್ಕೆ ಕೂಡ ಮೂರು ಕಾಸಿನ ಬೆಲೆಯಿಲ್ಲದಂತಾಗಿದೆಯೆಲ್ಲಾ ಥೂತ್ತೆರಿ.


ಇದನ್ನೂ ಓದಿ: ಡಿ.ಎಸ್. ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....