Homeಮುಖಪುಟಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

‘ಬಡವನ ಸಿಟ್ಟು ದವಡೆಗೆ ಮೂಲ’, ‘ಬಡವ ನೀನ್ ಮಡಗಿದಂಗೆ ಇರು’ ಎನ್ನುವ ಗಾದೆಗಳು ಜನಸಾಮಾನ್ಯರ ನಡುವೆ ಜನಪ್ರಿಯವಾಗಿವೆ. ವ್ಯವಸ್ಥೆಯ ಬಗ್ಗೆ ಜನರ ಆಕ್ರೋಶ ವ್ಯಕ್ತಪಡಿಸಲು, ಹೋರಾಟ ನಡೆಸಲು ಬಿಡದ ವಿದ್ಯಮಾನವನ್ನು ಈ ಗಾದೆಗಳು ಪ್ರತಿನಿಧಿಸಿದರೂ, ‘ಬಡವರ ಸಿಟ್ಟು ರಟ್ಟೆಗೆ ಬಂದ್ರೆ ಸರ್ಕಾರಗಳು ಪೀಸ್, ಪೀಸ್’ ಎಂಬ ಹೋರಾಟದ ಸ್ಲೋಗನ್ ಕೂಡ ಒಂದು ಮಟ್ಟಕ್ಕೆ ಜನಪ್ರಿಯವೇ. ಸಿನಿಮಾವೊಂದು ಈ ಸ್ಲೋಗನ್‌ ಅನ್ನು ಪ್ರತಿನಿಧಿಸಬಹುದೇ? ಜನಸಾಮಾನ್ಯರು, ಬಡವರು ತಮ್ಮ ಅನ್ಯಾಯಗಳ ವಿರುದ್ಧ ಸಿಡಿದೆದ್ದರೆ ಏನಾಗಬಹುದು? ಅಂತಹ ಶೋಧನೆಯ ಚಿತ್ರ ಆಕ್ಟ್-1978.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಹಲವು ತಿಂಗಳುಗಳ ಲಾಕ್ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಹೊಸ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ಇಂದು ಬಿಡುಗಡೆಯಾಗಿರುವ ಆಕ್ಟ್-1978 ಚಿತ್ರ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

ನಮ್ಮ ವ್ಯವಸ್ಥೆಯಲ್ಲಿ ನೂರಾರು ಸಮಸ್ಯೆಗಳಿವೆ. ಬಡತನ, ಜಾತಿಪದ್ದತಿ, ಪ್ರಾದೇಶಿಕ ಅಸಮಾನತೆ, ಧಾರ್ಮಿಕ ತಾರತಮ್ಯ, ಭ್ರಷ್ಟಾಚಾರ, ಖಾಸಗೀಕರಣ, ರೈತ-ಕಾರ್ಮಿಕರ ಬೆವರಿನ ಲೂಟಿ, ನಾಡು ನುಡಿಯ ಅವಹೇಳನ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳ ನಡುವೆ ನೊಂದ ರೈತನ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ದುಷ್ಪರಿಣಾಮಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ.

ಒಂದು ಕಡೆ ಬೆಳೆದ ಬೆಳೆಗೆ ಬೆಲೆ ಸಿಗದೇ ತಮ್ಮ ಕುಟುಂಬಕ್ಕಾದರೂ ಪರಿಹಾರ ಸಿಗಲಿ ಎಂದು ತೆಂಗಿನ ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ತಂದೆ. ಇನ್ನೊಂದು ಕಡೆ ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿರುವ ಗಂಡ. ಈ ನಡುವೆ ತನಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಹಣಕ್ಕಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುತ್ತಿರುವ ತುಂಬು ಗರ್ಭಿಣಿ ಕಥಾನಾಯಕಿ. ಯಾವುದೇ ಕಾರಣಕ್ಕೂ ಲಂಚ ನೀಡಿ ಭ್ರಷ್ಟ ವ್ಯವಸ್ಥೆಯಲ್ಲಿ ಭಾಗಿಯಾಗುವುದಿಲ್ಲ ಎಂಬುವ ನೈತಿಕ ಸಿಟ್ಟು. ಇದರಿಂದ ಹತಾಶಳಾಗಿ, ತನ್ನದಲ್ಲದ ತಪ್ಪಿಗೆ 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಮೌನಿಯಾಗಿರುವ ರೈತ ಮುದುಕನ ಜೊತೆ ಸೇರಿ, ಸರ್ಕಾರಕ್ಕೆ ಹೇಗೆ ತಲೆನೋವಾಗುತ್ತಾಳೆ ಎಂಬ ಕಥಾಹಂದರದ ಆಕ್ಟ್-1978, ಹೋಸ್ಟೇಜ್ ಡ್ರಾಮಾ ಸಿನೆಮಾಗಳಿಗೆ ಹೊಸ ಸೇರ್ಪಡೆಯಾಗಿದೆ.

ಈ ಸಿನಿಮಾ ನೋಡುವ ವೀಕ್ಷಕನಿಗೆ ಸರ್ಕಾರಿ ಕಚೇರಿಗಳಲ್ಲಿ ತಮಗಾದ ಕೆಟ್ಟ ಅನುಭವಗಳು ನೆನಪಿಗೆ ಬರಬಹುದು. ಆದರೆ ನಮ್ಮ ಜನರು ಅಸಾಮಾನ್ಯ ತಾಳ್ಮೆಯುಳ್ಳವರು. ಅದಕ್ಕೆ ಚಿತ್ರದಲ್ಲಿಯೂ ಒಂದು ಉದಾಹರಣೆಯಿದೆ. 22 ನೇ ವಯಸ್ಸಿಗೆ ಒಂದಷ್ಟು ಲಂಚ ಕೊಟ್ಟು ಅಡೆಂಡರ್ ಆಗಿ ಕೆಲಸಕ್ಕೆ ಸೇರುವ ಬೆಂಜಮಿನ್ ತನಗೆ 37 ವರ್ಷವಾದರೂ ಸಹ ತನ್ನ ಹುದ್ದೆ ಪರ್ಮನೆಂಟ್ ಆಗುತ್ತದೆ ಎಂಬ ಆಸೆಯಿಟ್ಟುಕೊಂಡು ಹಿರಿಯ ಅಧಿಕಾರಿಗೆ ತನಗೆ ಬರುವ ಸಂಬಳದಲ್ಲಿ 25% ಲಂಚ ಕೊಡುತ್ತಿರುತ್ತಾನೆ. ಆದರೆ ಕಥಾನಾಯಕಿ ವಿದ್ಯಾವಂತೆ ಗೀತಾ (ಯಜ್ಞಶೆಟ್ಟಿ) ಮಾತ್ರ ತಾನು ಎನ್ ಸಿ ಸಿಯಲ್ಲಿದ್ದಾಗ ಪ್ರತಿಜ್ಞೆ ಮಾಡಿದಂತೆ ಲಂಚಕೊಡಲೊಲ್ಲಳು, ಮಾತ್ರವಲ್ಲ ಅದೇ ಆದರ್ಶಗಳನ್ನು ಉಳಿಸಿಕೊಂಡು ಬಂದಿರುವವಳು. ತನಗಾದ ನೋವು ಮತ್ತು ಅನ್ಯಾಯಕ್ಕೆ ನ್ಯಾಯ ಪಡೆಯಲು ತೀವ್ರ ಹೆಜ್ಜೆ ಇಟ್ಟು, ಬಾಂಬ್ ಕಟ್ಟಿಕೊಂಡು, ಬಂದೂಕು ಹಿಡಿದು, ತನಗೆ ಅನ್ಯಾಯ ಮಾಡಿದ ಸರ್ಕಾರಿ ನೌಕರರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಿ ಜಡಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಬಲ್ಲಳು.

ಹತಾಶಗೊಂಡ ಜನ ಯಾವ ಮಟ್ಟಕ್ಕೂ ಹೋಗಬಲ್ಲರು ಎಂಬುದನ್ನು ಸಿನಿಮಾ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರೂ (ಲಂಚ ಕೊಡುವವರು, ಪಡೆಯುವವರು) ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಅಭಿಲಾಷೆ. ಸಾಮಾನ್ಯ ಜನರ ನೋವನ್ನು, ಆಕ್ರೋಶವನ್ನು ಹಿರಿತೆರೆಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರದ ಮೊದಲಾರ್ಧದಲ್ಲಿ ಕಚಗುಳಿ ಇಡುವ ಹಾಸ್ಯ ಕೂಡ ಮುದ ನೀಡುತ್ತವೆ. ಗಾಂಧಿ ವೇಷಧಾರಿಯ ಪ್ರತಿಭಟನೆಯನ್ನು ಸಮಾಜ ನಿರ್ಲಕ್ಷಿಸುವುದು, ಮಾಧ್ಯಮಗಳು ಬಾಯಿಗೆ ಬಂದಂತೆ ಸಂದರ್ಭವನ್ನು ತಿರುಚುವುದು ಇವೆಲ್ಲವೂ ಚಿತ್ರದಲ್ಲಿ ಸೂಚ್ಯವಾಗಿ ಅಡಕಗೊಂಡಿದೆ.

ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಮಂಸೋರೆ ತಾನೊಬ್ಬ ಸಮರ್ಥ ಕಮರ್ಷಿಯಲ್ ಸಿನಿಮಾ ನಿರ್ದೇಶಕನೂ ಹೌದು ಎಂಬುದನ್ನು ಆಕ್ಟ್ 1978 ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಬೆಲ್ ಬಾಟಂ ಚಿತ್ರಕಥೆ ಮೂಲಕ ಮನೆಮಾತಾಗಿರುವ ಯುವ ಬರಹಗಾರ ದಯಾನಂದ್ ಟಿ.ಕೆ ಮತ್ತು ವೀರು ಮಲ್ಲಣರವರ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಜೀವತುಂಬಿದೆ. ‘I Need Respect’ ಎನ್ನುವ ಡೈಲಾಗ್ ಚಿತ್ರದ ಧ್ಯೇಯವಾಕ್ಯವೂ ಅನಿಸುತ್ತದೆ. ಯಜ್ಞಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ರವರ ಅಭಿನಯ ಗಮನಸೆಳೆಯುತ್ತದೆ.

ಚಿತ್ರ ದ್ವಿತಿಯಾರ್ಧದಲ್ಲಿ ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಭ್ರಷ್ಟಾಚಾರ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರವಿದೆ ಎಂಬ ಸರಳ ನಿರೂಪಣೆ, ಇಡೀ ಆಡಳಿತ ವ್ಯವಸ್ಥೆಯನ್ನು ಅದಕ್ಕೆ ಲಿಂಕ್ ಮಾಡಲು ಸಾಧ್ಯವಾಗದಿರುವುದು, ಕಾರ್ಪೋರೆಟ್ ಸಂಸ್ಥೆಗಳು ಈ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಅಂಶವನ್ನು ನಿಭಾಯಿಸಲು ಸಾಧ್ಯವಾಗದಿರುವುದು, ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ ಸ್ತರದ ಹುದ್ದೆಗಳಲ್ಲಿ ಇರುವ ಜಾತಿ ತಾರತಮ್ಯ ಮತ್ತು ಅದು ಸೃಷ್ಟಿಸಿರುವ ತೀವ್ರ ಭ್ರಷ್ಟಾಚಾರ ಇವುಗಳ ಬಗ್ಗೆ ಅಷ್ಟು ಎಚ್ಚರ ವಹಿಸದೆ ಹೋಗಿರುವುದು ಇಂತಹ ಸಂಗತಿಗಳು ಕಥಾಹಂದರವನ್ನು ತೆಳುವಾಗಿಸಿ ಇನ್ನಷ್ಟು ಪರಿಣಾಮಕಾರಿಯಾಗುವ ಅವಕಾಶವನ್ನು ಈ ಚನಲಚಿತ್ರ ಕೈಚೆಲ್ಲಿದೆ ಅನ್ನಿಸದೆ ಇರದು.

ಈ ಎಲ್ಲವನ್ನು ಒಂದೇ ಚಿತ್ರದಲ್ಲಿ ತರಲು ಸಾಧ್ಯವಿಲ್ಲ ಎನ್ನುವ ಅರಿವಿರುತ್ತಲೇ, ಇದರಲ್ಲಿ ಕೆಲವಾದರೂ ಸೇರಿದರೆ ಚಿತ್ರ ಮತ್ತಷ್ಟು ಸಮಗ್ರವಾಗುತ್ತಿತ್ತು. ಒಟ್ಟಿನಲ್ಲಿ ಜನಮುಖಿ ಕಥಾಹಂದರವುಳ್ಳ ಚಿತ್ರವೊಂದನ್ನು ಕಮರ್ಷಿಯಲ್ ಆಯಾಮದಲ್ಲಿ ತರಲು, ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಉತ್ತಮ ಕನ್ನಡ ಚಿತ್ರ ನೀಡಲು ಚಿತ್ರತಂಡ ಯಶಸ್ವಿಯಾಗಿದೆ.


ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...