HomeUncategorizedನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ನಟಿ ಸಂಯುಕ್ತ ಹೆಗ್ಡೆ- ಕವಿತಾ ರೆಡ್ಡಿ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ

ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಕವಿತಾ ರೆಡ್ಡಿ, "ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ" ಎಂದು ಹೇಳಿದ್ದಾರೆ.

- Advertisement -
- Advertisement -

ಶುಕ್ರವಾರ ಸಂಜೆ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾಗಿ ಆರೋಪಿಸಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ನೇತೃತ್ವದ ಜನರ ಗುಂಪು ತಮ್ಮ ಹಲ್ಲೆ ಮಾಡಿದ್ದಾರೆ ಎಂದು ನಟಿ ಸಂಯುಕ್ತ ಹೆಗ್ಡೆ ಆರೋಪಿಸಿದ್ದಾರೆ.

ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್‌ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ನೆರೆದಿದ್ದ ಜನರು ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೆ ವ್ಯಕ್ತಿಯೊಬ್ಬ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ಅವರನ್ನು ಬೆದರಿಸಿರುವುದು ಅವರ ಮತ್ತೊಂದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಡ್ರಗ್ಸ್ ಮಾಫಿಯಾ ಪ್ರಕರಣ: ನಟಿ ರಾಗಿಣಿ ದ್ವಿವೇದಿ ಬಂಧನ

ಕವಿತಾ ರೆಡ್ಡಿ ಕೂಡ ಪೊಲೀಸರನ್ನು ಸ್ಥಳಕ್ಕೆ ಕರೆದು ನಟಿ ಮತ್ತು ಅವರ ಸ್ನೇಹಿತರನ್ನು ಸಾರ್ವಜನಿಕವಾಗಿ  ಅಸಭ್ಯತೆಯಿಂದ ವರ್ತಿಸಿದ್ದಕ್ಕೆ ಕೇಸು ದಾಖಲಿಸಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇನ್ಸ್ಟ್ರಾಗ್ರಾಮ್ ಲೈವ್ ವಿಡಿಯೋದಲ್ಲಿ ಇದು ತುಂಬಾ ತಪ್ಪು ಎಂದು ಹೇಳಿರುವ ಸಂಯುಕ್ತ ಹೆಗ್ಡೆ, “ನಾವು ನಮ್ಮಷ್ಟಕ್ಕೆ ವ್ಯಾಯಾಮ ಮಾಡುತ್ತಿದ್ದೆವು, ಇಲ್ಲಿಗೆ ಬಂದ ಈ ಮಹಿಳೆ (ಕವಿತಾ ರೆಡ್ಡಿ) ಕ್ರೀಡಾ ಉಡುಪಿನ ಬಗ್ಗೆ ತಕರಾರು ತೆಗೆದು ನಾವು ಅಸಭ್ಯವಾಗಿ ವರ್ತಿಸುತ್ತಿದ್ದೇವೆ ಎಂದು ಹೇಳಲು ಪ್ರಾರಂಭಿಸಿದರು. ಪ್ರಸ್ತುತ ಚಿತ್ರರಂಗದಲ್ಲಿ ಡ್ರಗ್ಸ್‌ ಬಗ್ಗೆ ಚರ್ಚೆಯಾಗುತ್ತಿರುವ ಕಾರಣ ಈಗ ಇಲ್ಲಿನ ಜನರು ನಾವು ಡ್ರಗ್ಸ್‌ಗಳನ್ನು ಸೇವಿಸಿದ್ದೇವೆ ಎಂದು ಆರೋಪಿಸುತ್ತಿದ್ದಾರೆ” ಎಂದು ತಾವು ತೊಟ್ಟಿದ್ದು ಕೇವಲ ಕ್ರೀಡಾ ಉಡುಪು ಎಂದು ಸ್ಪಷ್ಟಪಡಿಸಿದರು.

ಘಟನೆ ನಡೆದಾಗ ಪಾರ್ಕ್‌ನಿಂದ ಹೊರ ಹೋಗಲು ಯತ್ನಿಸಿದಾಗಲು ಪಾರ್ಕ್ ಗೇಟ್‌ಗೆ ಬೀಗ ಹಾಕಿ ಅವರನ್ನು ಹೊರಹೋಗದಂತೆ ಅವರನ್ನು ತಡೆದಿದ್ದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಅಷ್ಟೇ ಅಲ್ಲದೆ ಪೊಲೀಸರೊಂದಿಗೆ, ನೀವ್ಯಾಕೆ ಸತ್ಯದ ಪರ ನಿಲ್ಲುತ್ತಿಲ್ಲ ಎಂದು ನಟಿ ಕೇಳಿರುವ ಪ್ರಶ್ನೆಗೆ, ಪೊಲೀಸ್‌ ಅಧಿಕಾರಿಯೊಬ್ಬರು ”ಇದು ತಪ್ಪು ಒಪ್ಪಿನ ಪ್ರಶ್ನೆಯಲ್ಲ, ಇಲ್ಲಿ ಜನ ಸೇರುತ್ತಿದ್ದಾರೆ. ದಯವಿಟ್ಟು ಹೊರಡಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್‌ ಡಿಲಿಟ್‌ ಮಾಡಿದ ವಿಎಚ್‌ಪಿ ಮುಖಂಡ

ಅಷ್ಟೇ ಅಲ್ಲದೆ ತನ್ನ ಗೆಳತಿ ಮೇಲೆ ಕವಿತಾ ಹಲ್ಲೆ ನಡೆಸಲು ಹೋಗಿದ್ದಾರೆ ಎಂದು ನಟಿ ಆರೋಪಿಸಿದ್ದು, ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ. ವಿಡಿಯೋದಲ್ಲಿ ಕವಿತಾ ರೆಡ್ಡಿ ಯುವತಿಯನ್ನು ದೂಡುತ್ತಿರುವುದು ದಾಖಲಾಗಿದೆ.

ನಟಿ ಘಟನೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ನೋವು ತೋಡಿಕೊಂಡಿದ್ದಾರೆ.

ಇಡೀ ಘಟನೆಯಲ್ಲಿ ಕೆಲವು ಜನರು ನಟಿ ಸಂಯುಕ್ತ ಹೆಗ್ಡೆ ಪರವಾಗಿ ಮಾತನಾಡಿದ್ದು ಇನ್ಸ್ಟ್ರಾಗ್ರಾಮ್ ಲೈವ್‌ನಲ್ಲಿ ದಾಖಲಾಗಿದೆ. ತನ್ನನ್ನು ತಾನು ಡಾಕ್ಟರ್‌ ಎಂದು ಪರಿಚಯ ಮಾಡಿಕೊಂಡಿರುವ ಒಬ್ಬರು “ನಟಿ ಸಂಯುಕ್ತ ಹೆಗ್ಡೆ ಬಹಳ ದಿನದಿಂದ ಇಲ್ಲಿ ವ್ಯಾಯಾಮ ಮಾಡಲು ಬರುತ್ತಾರೆ. ಅವರು ಅಸಭ್ಯವಾಗಿ ನಡೆದುಕೊಂಡಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ‌ ಜೊತೆ ಮಾತನಾಡಿದ ಕವಿತಾ ರೆಡ್ಡಿ, “ಸಾರ್ವಜನಿಕ ಪಾರ್ಕ್‌ನಲ್ಲಿ ಯುವತಿಯರು ಸಂಗೀತ ಹಾಕಿ ನೃತ್ಯ ಮಾಡಿ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಜನರು ಕರೆ ಮಾಡಿ ಹೇಳಿದ್ದಕ್ಕೆ ನಾನು ಅಲ್ಲಿ ತಲುಪಿದ್ದೆ. ಅಲ್ಲಿ ತಲುಪಿ ಯುವತಿಯರೊಂದಿಗೆ ಸಂಗೀತ ಹಾಕಿ ನೃತ್ಯ ಮಾಡಲು ಯಾವ ಪಾರ್ಕಿನಲ್ಲೂ ಅವಕಾಶವಿಲ್ಲ. ನೀವು ಇಲ್ಲಿಂದ ಹೊರಡಿ ಎಂದು ವಿನಂತಿಸಿದ್ದೆ. ಆದರೆ ಯುವತಿಯರು ಅದಕ್ಕೂ ಒಪ್ಪದಿದ್ದಕ್ಕೆ  ಪೊಲೀಸರಿಗೆ ಸಂಪರ್ಕಿಸಿ ಅವರ ಪೋಟೋವನ್ನು ಕ್ಲಿಕ್ಕಿಸುವಾಗ ಅದರಲ್ಲಿರುವ ಯುವತಿಯೊಬ್ಬಳು ನನಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅದಕ್ಕಾಗಿ ನಾವು ಅವರನ್ನು ಪ್ರಶ್ನಿಸಲು ಮುಂದೆ ಹೋಗಿದ್ದೆ. ಯುವತಿಯು ಅದೇ ವಿಡಿಯೋವನ್ನು ಟ್ವಿಟ್ಟರ್‌ಗೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.

ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಕವಿತಾ ರೆಡ್ಡಿ, “ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ” ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ನಟಿ ಸಂಯುಕ್ತ ಜೊತೆ ಕವಿತಾ ರೆಡ್ಡಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಹಲವರು ಕಿಡಿಕಾರಿದ್ದಾರೆ.

ನಟಿ ಸಂಯುಕ್ತ ಹೆಗಡೆ ಮೇಲೆ ಹಲ್ಲೆ ನಡೆಸಿದ, ವಸ್ತ್ರದ ಕಾರಣಕ್ಕೆ ಅವರ ಮೇಲೆ ದಾಳಿ ನಡೆಸಿದ ಅಷ್ಟೂ ಜನರ ಮೇಲೆ ಎಫ್ ಐಆರ್ ದಾಖಲಿಸಬೇಕು. ಕಾಂಗ್ರೆಸ್…

Posted by Naveen Soorinje on Saturday, September 5, 2020

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಗಾಯತ್ರಿ ಎಚ್.ಎನ್. ” ಪೋಸ್ಟ್ ಕಾರ್ಡ್ ವಿಕ್ರಮ್ ಹೆಗಡೆ ಕವಿತಾ ರೆಡ್ಡಿನ ಟ್ರೋಲ್ ಮಾಡ್ತಿದಾರೆ ಅನ್ನೋ ಕಾರಣಕ್ಕೆ, ಬಿಜೆಪಿಗಳು ಕಾಂಗ್ರೆಸ್ಸಿಗರನ್ನ ಕಿಚಾಯಿಸ್ತಿದಾರೆ ಅನ್ನೋ ಕಾರಣಕ್ಕೆ ಕವಿತಾ ರೆಡ್ಡಿ ಬಗ್ಗೆ ಸಾಫ್ಟ್ ಆಗಬೇಕಾದ, ಸಂಯುಕ್ತಾ ಬಗ್ಗೆ ರಾಂಗ್ ಆಗಬೇಕಾದ ಅಗತ್ಯ ಇಲ್ಲ.
ಇಂಥ ವಿಷಯಗಳಲ್ಲಿ ತಪ್ಪಾಗಿ ನಡೆದುಕೊಂಡ್ರೆ ನಮಗೆ ಮಾಳವಿಕಾನೂ ಒಂದೇ ಕವಿತಾನೂ ಒಂದೇ ಅನ್ನುವಷ್ಟು ಕ್ಲಾರಿಟಿ ನಮಗಿರಬೇಕು. ಕವಿತಾ ಬಟ್ಟೆ ಬಗ್ಗೆ ಡ್ರಗ್ ಬಗ್ಗೆ ಮಾತಾಡಿರೋದು ಯಾವ ರೀತಿಯಲ್ಲೂ ಸಮರ್ಥನೀಯ ಅಲ್ಲ. ಅವರ ಮುಖ ಉಳಿಸಲಿಕ್ಕೆ ಆಕೆಯ ಒಳ್ಳೆ ಕೆಲಸಗಳ ಪಟ್ಟಿ ಇಟ್ಟು ಸಂಯುಕ್ತಾರನ್ನು ಅಪರಾಧಿ ಮಾಡೋದು ತಪ್ಪು. ಕವಿತಾ ಅವರ ಸಾಮಾಜಿಕ ಚಟುವಟಿಕೆಗಳು ನಿಜ ಕಾಳಜಿಯಿಂದ ಮಾಡಿದ್ದಾಗಿದ್ದರೆ ಖಂಡಿತಾ ಗೌರವ ಇದೆ. ಅದು ಬೇರೆ. ಮತ್ತು ಇದು ಬೇರೆಯೇ. ಹಾಗೇ ನಾಳೆ ಸಂಯುಕ್ತ ಬಿಜೆಪಿ ಜಾಯಿನ್ ಆಗಿ ವೋಟ್ ಫಾರ್ ಮೋದಿ ಅನ್ನಬಹುದು. ಅದು ಆಕೆಯ ಹಣೆಬರಹ. ಅದು ಬೇರೆ ಮತ್ತು ಈಗಿನ ಘಟನೆ ಬೇರೆಯೇ. ಪ್ರತಿಯೊಂದನ್ನೂ ರಾಜಕೀಯವಾಗಿ ನೋಡುವ ಗೀಳು ನಾವು ಬಿಡದೆಹೋದರೆ ಉದ್ಧಾರ ಸಾಧ್ಯವಿಲ್ಲ. ಬಿಜೆಪಿಯವರು ಈ ಹೊತ್ತು ಸಂಯುಕ್ತಾನ ಸಪೋರ್ಟ್ ಮಾಡಿದರೆ, ನಗೆಪಾಟಲಿಗೆ ಈಡಾಗುತ್ತಾರೆ ಹೊರತು ಮತ್ತೇನಲ್ಲ. ಆ ತಲೆಬಿಸಿ ಬಿಟ್ಟು, ನಾಜೂಕು ಸೋಗಲಾಡಿತನ ತೋರದೆ, ವಿಷಯದ ಕುರಿತು ಸ್ಪಷ್ಟವಾಗಿರೋಣ” ಎಂದಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ಮಾಧ್ಯಮಗಳ ವರ್ತನೆಯನ್ನು ಖಂಡಿಸಿ, “ಸುಡುಗಾಡು ನ್ಯೂಸ್ ಚಾನಲ್`ಗಳ ಹೆಡ್ಲೈನ್ ಗಮನಿಸಿ: “ಮತ್ತೆ ಸಂಯುಕ್ತಾ ಹೆಗಡೆ ಕಿರಿಕ್”, “ವಿವಾದ ಸೃಷ್ಟಿಸಿದ ಸಂಯುಕ್ತಾ ಹೆಗಡೆ”, “ಸಂಯುಕ್ತಾ ಹೆಗಡೆ ರಗಳೆ”.ಯಾಕ್ ಹೇಳಿ? ಹುಡ್ಗಿಯ ಚೆಂದ ಚೆಂದ ಫೋಟೋ ಹಾಕಿ ಜೊಲ್ ಪಾರ್ಟಿಗಳನ್ನ ಸ್ಕ್ರೀನ್ ಮುಂದೆ ಕೂರಿಸೋದು ಒಂದಾದ್ರೆ, ಮೂರೊತ್ತೂ ಚಾನಲ್`ಗಳ ಪ್ಯಾನಲ್ಲಲ್ಲಿ ಕೂತು ಸೆಲ್ಫ್ ಪ್ರಮೋಶನ್`ಗೆ ಒದ್ದಾಡೋ ಕವಿತಾ ರೆಡ್ಡಿಗೆ ಅಲ್ಪ ಕಾಣಿಕೆ ಕೊಡೋ ಐಡಿಯಾ ಮತ್ತೊಂದು. ಮತ್ಲಬೀ ದುನಿಯಾ, ಮಾನಗೆಟ್ಟ ಮಿಡಿಯಾ” ಎಂದು ಬರೆದಿದ್ದಾರೆ.

almeida gladson ಎಂಬುವವರು ಕವಿತಾ ರೆಡ್ಡಿಯವರ ವರ್ತನೆಯನ್ನು ಖಂಡಿಸಿ, “ಯಾಕೋ ಇವತ್ತು ಕವಿತಾ ರೆಡ್ಡಿಯವರಲ್ಲಿ ಪ್ರಮೋದ್ ಮುತಾಲಿಕರನ್ನು ಕಂಡೆ. ಯಾವ ವ್ಯತ್ಯಾಸವೂ ಇಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.

ಆದರ್ಶ್ ಅಯ್ಯರ್ ಎಂಬುವವರು, “ನಾನು ನಿಮ್ಮೊಂದಿಗೆ ಸಿಎಎ ವಿರುದ್ಧದ ಹೊರಾಟದಲ್ಲಿ ಭಾಗಿಯಾಗಿದ್ದೆ. ಆದರೆ ನೀವೂ ಒಬ್ಬ ಮಹಿಳೆಯಾಗಿ ಇನ್ನೊಂದು ಮಹಿಳೆಯನ್ನು ಹೀಗೆ ಸಾರ್ವಜನಿಕವಾಗಿ ನಿಂದಿಸಿರುವುದು ಸರಿಯಲ್ಲ” ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: PUBG ನಿಷೇಧದ ಬೆನ್ನಿಗೆ FAU-G ಅನಾವರಣಗೊಳಿಸಿದ ನಟ ಅಕ್ಷಯ್ ಕುಮಾರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...