Homeಅಂತರಾಷ್ಟ್ರೀಯಚೀನಾ-ಭಾರತ ಗಡಿ ಸಮಸ್ಯೆ: ಮಧ್ಯಸ್ಥಿಕೆ ವಹಿಸುವ ಆಶಯ ವ್ಯಕ್ತಪಡಿಸಿದ ಟ್ರಂಪ್!

ಚೀನಾ-ಭಾರತ ಗಡಿ ಸಮಸ್ಯೆ: ಮಧ್ಯಸ್ಥಿಕೆ ವಹಿಸುವ ಆಶಯ ವ್ಯಕ್ತಪಡಿಸಿದ ಟ್ರಂಪ್!

ಚೀನಾ ಭಾರತವನ್ನು ಬೆದರಿಸುತ್ತಿದೆಯೇ ಎಂಬ ಪ್ರಶ್ನೆಗೆ, "ಅದು ನಿಜವಲ್ಲ. ಆದರೆ ಚೀನಾ ಖಂಡಿತವಾಗಿಯೂ ಅದರತ್ತ ಸಾಗುತ್ತಿದೆ. ಬಹಳಷ್ಟು ಜನರು ತಿಳಿದುಕೊಂಡಿರುವುದಕ್ಕಿಂತ ಅವರು ಹೆಚ್ಚು ಬಲವಾಗಿದ್ದಾರೆ” ಎಂದು ಟ್ರಂಪ್ ಹೇಳಿದರು.

- Advertisement -
- Advertisement -

ಭಾರತ-ಚೀನಾ ಗಡಿ ಸಮಸ್ಯೆಯು ತುಂಬಾ ಕೆಟ್ಟ ಪರಿಸ್ಥಿತಿಯಿಂದ ಕೂಡಿದೆ. ಹಾಗಾಗಿ ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ವ್ಯಕ್ತಪಡಿಸಿದ್ದಾರೆ.

“ಗಡಿ ಸಮಸ್ಯೆಯ ಬಗ್ಗೆ ಭಾರತ ಮತ್ತು ಚೀನಾ ದೇಶಗಳೊಂದಿಗೆ ಮಾತನಾಡುತ್ತಿದ್ದೇವೆ. ನಾವು ಚೀನಾ ಮತ್ತು ಭಾರತದ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯ ಮಾಡಲು ಸಿದ್ಧರಾಗಿದ್ದೇವೆ” ಎಂದು ಟ್ರಂಪ್ ಶುಕ್ರವಾರ (ಸೆಪ್ಟೆಂಬರ್ 4) ಸಂಜೆ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಎಂದು ದಿ ಫೆಡರಲ್ ವರದಿ ಮಾಡಿದೆ.

ಚೀನಾ ಭಾರತವನ್ನು ಬೆದರಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, “ಅದು ನಿಜವಲ್ಲ. ಆದರೆ ಚೀನಾ ಖಂಡಿತವಾಗಿಯೂ ಅದರತ್ತ ಸಾಗುತ್ತಿದೆ. ಬಹಳಷ್ಟು ಜನರು ತಿಳಿದುಕೊಂಡಿರುವುದಕ್ಕಿಂತ ಅವರು ಹೆಚ್ಚು ಬಲಗೊಂಡಿದ್ದಾರೆ” ಎಂದು ಟ್ರಂಪ್ ಹೇಳಿದರು.

ಇದನ್ನೂ ಓದಿ: IPS‌ ಪ್ರೊಬೇಷನರಿ ಅಧಿಕಾರಿಗಳೊಂದಿಗೆ ಮೋದಿ ಸಂವಾದ: ಮುಂದುವರಿದ ಡಿಸ್‌ಲೈಕ್ಸ್ ಸುರಿಮಳೆ

ಭಾರತ ಮತ್ತು ಇತರ ದೇಶಗಳ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಮುಂದಾಗಿರುವುದು ಇದೇ ಮೊದಲಲ್ಲ. ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದಲ್ಲಿ ಮಧ್ಯಪ್ರವೇಶಿಸಲು ಅಮೇರಿಕಾ ಅಧ್ಯಕ್ಷರು ಏಪ್ರಿಲ್‌ನಲ್ಲಿಯೇ ಪ್ರಸ್ತಾಪಿಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಉಲ್ಬಣಗೊಂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ನಿವಾರಿಸಲು ಮಧ್ಯಸ್ಥಿಕೆ ವಹಿಸಲು ಮತ್ತು ಸಹಾಯ ಮಾಡಲು ಟ್ರಂಪ್ ಹಲವು ಬಾರಿ ಪ್ರಸ್ತಾಪಿಸಿದ್ದರು. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರದೊಂದಿಗಿನ ವಿಷಯವು ಆಂತರಿಕ ವಿಷಯ ಎಂದು ಭಾರತವು ಪ್ರತಿ ಬಾರಿಯೂ ನಯವಾಗಿ ನಿರಾಕರಿಸಿತ್ತು.

ನಿನ್ನೆಯ ವರದಿಯಂತೆ, ಪೂರ್ವ ಲಡಾಖ್‍‌ ಸಮೀಪದ ದಕ್ಷಿಣ ಪ್ಯಾಂಗ್ಯೊಂಗ್ ಪ್ರದೇಶದಲ್ಲಿ ಚೀನಿ ಯುದ್ಧ ಟ್ಯಾಂಕ್‍ಗಳು ಹಾಗೂ ಸೇನಾ ಪಡೆಗಳು ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡಿದ್ದು, ಪಿರಂಗಿದಳವು ವಾಸ್ತವಿಕ ನಿಯಂತ್ರಣ ರೇಖೆಯಿಂದ 20 ಕಿಲೋ ಮೀಟರ್‌‌ ದೂರದಲ್ಲಿದೆ ಎಂದು ತಿಳಿದುಬಂದಿತ್ತು. ಆಗಸ್ಟ್ 30 ರಂದು ಚೀನಾ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿ ಈ ಪ್ರದೇಶದ ಕೆಲವೊಂದು ಪ್ರಮುಖ ಸ್ಥಳಗಳ ಮೇಲೆ ಭಾರತ ನಿಯಂತ್ರಣ ಸಾಧಿಸಿದ ನಂತರದ ಬೆಳವಣಿಗೆ ಇದಾಗಿದೆ.


ಇದನ್ನೂ ಓದಿ: ಭಾರತ-ಚೀನಾ: ಗಡಿಯಲ್ಲಿ ಜಮಾವಣೆಗೊಂಡ ಚೀನಿ ಯುದ್ಧ ಟ್ಯಾಂಕ್‌‌ಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಣದುಬ್ಬರ, ಉದ್ಯೋಗಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ: ಪ್ರಿಯಾಂಕಾ...

0
'ಆಡಳಿತಾರೂಢ ಬಿಜೆಪಿ ಹಣದುಬ್ಬರವನ್ನು ಹೇಗೆ ನಿಯಂತ್ರಿಸುತ್ತದೆ ಅಥವಾ ಜನರಿಗೆ ಉದ್ಯೋಗವನ್ನು ನೀಡುತ್ತದೆ ಎಂಬುದರ ಕುರಿತು ಮಾತನಾಡುವ ಬದಲು ದೇವರ ಹೆಸರಿನಲ್ಲಿ ಮತ ಕೇಳುತ್ತಿದೆ' ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ...