Homeಮುಖಪುಟಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ...

ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ ಮೆಸ್ಸಿ ಎಂಡ್‌ ಟೀಮ್‌

ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

- Advertisement -
- Advertisement -

ಫುಟ್ಬಾಲ್‌ ದಂತಕತೆ ಮರಡೋನಾ, ವಿಶ್ವ ಶ್ರೇಷ್ಠ ಆಟಗಾರ ಮೆಸ್ಸಿ ಹೀಗೆ ಜಗತ್ತಿಗೆ ಶ್ರೇಷ್ಠ ಫುಟ್ಬಾಲರ್‌ಗಳನ್ನು ನೀಡಿದ ಅರ್ಜೆಂಟೆನಾ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಯ ಹಂತಕ್ಕೆ ಹೋಗಿ ಮುಗ್ಗರಿಸುತ್ತಿತ್ತು. ವಿಶ್ವ ಶ್ರೇಷ್ಠ ತಂಡವಾಗಿದ್ದರೂ ಕಳೆದ 28 ವರ್ಷಗಳಿಂದ ಯಾವುದೇ ಮಹತ್ವದ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟವನ್ನು ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಸರಿ ಸುಮಾರು ಮೂರು ದಶಕಗಳ ಅರ್ಜೆಂಟಿನಾದ ಪ್ರಶಸ್ತಿ ಬರ    ನೀಗಿದೆ. ಇಂದು ಬೆಳಗಿನ ಜಾವ ಬ್ರೆಜಿಲ್‌ನ ರಿಯೋ ಡಿ ಜನೈರೋದ ವಿಶ್ವ ಪ್ರಸಿದ್ಧ ಮೆರಕಾನಾ ಕ್ರೀಡಾಂಗಣದಲ್ಲಿ ನಡೆದ ಕೋಪ ಅಮೆರಿಕಾ ಚಾಂಪಿಯನ್‌ಶಿಪ್‌ ಟ್ರೋಫಿ ಗೆಲ್ಲುವ ಮೂಲಕ ಲಿಯೋನಲ್‌ ಮೆಸ್ಸಿ ನಾಯಕತ್ವದ ತಂಡ ಲ್ಯಾಟಿನ್ ಅಮೆರಿಕದ ಫುಟ್ಬಾಲ್ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಇಂದು ಬೆಳಗಿನ ಜಾವ ನಡೆದ ಬ್ರೆಜಿಲ್ ಮತ್ತು ಅರ್ಜೆಂಟಿನಾ  ತಂಡಗಳ ನಡುವಿನ ಫೈನಲ್‌ ಪಂದ್ಯ ಕೊನೆ  ಕ್ಷಣದವರೆಗೂ ಫುಟ್ಬಾಲ್‌ ಪ್ರೇಮಿಗಳನ್ನು ರೋಚಕತೆಯ ಉತ್ತುಂಗದಲ್ಲಿ ತಂದು ನಿಲ್ಲಿಸಿತ್ತು. ಜಗತ್ತಿನ ಫುಟ್ಬಾಲ್ ಪ್ರೇಮಿಗಳು ಮೆಸ್ಸಿ ಮತ್ತು ನೆಯ್ಮಾರ್‌ ಗೋಲು ಸಿಡಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಮೆಸ್ಸಿಯಾಗಲಿ ‍ನೆಯ್ಮಾರ್‌ ಆಗಲಿ ಅಂತಿಮ ಹಣಾಹಣಿಯಲ್ಲಿ ಗೋಲು ಸಿಡಿಸದೇ ಫುಟ್ಬಾಲ್‌ ಪ್ರೇಮಿಗಳನ್ನು ನಿರಾಸೆ ಗೊಳಿಸಿದರು. ಅರ್ಜೆಂಟಿನಾದ ಗೆಲುವಿನ ಗೋಲು ಪಂದ್ಯದ 22 ನಿಮಿಷದಲ್ಲಿ ಎಂಜೆಲ್‌ ಡಿ ಮಾರಿಯಾ ಅವರ ಮೂಲಕ ಬಂತು. ಆಮೂಲಕ ಅರ್ಜೆಂಟಿನಾ 1-0 ಗೋಲುಗಳ ಅಂತರದಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿ ಲ್ಯಾಟಿನ್‌ ಅಮೆರಿಕಾದ  ಪುಟ್ಬಾಲ್‌ ಚಾಂಪಿಯನ್ನು ಪಟ್ಟವನ್ನು ಧರಿಸಿತು.

ಅರ್ಜೆಂಟಿನಾ ಗೆಲುವಿನ ರುವಾರಿ ಅಂಜೆಲ್ ಡಿ ಮಾರಿಯಾ

ಮಿಡ್‌ಫೀಲ್ಡರ್‌ ರೋಡ್ರಿಗೊ ಡಿ ಪಾಲ್ ನೀಡಿದ ಲಾಂಗ್‌ ಪಾಸನ್ನು ಮಾರಿಯೋ ಯಾವುದೇ ಪ್ರಮಾದವಿಲ್ಲದೇ ಬ್ರೆಜಿಲ್‌ನ ಗೋಲು ಪೆಟ್ಟಿಗೆ ತಲುಪಿಸಿದರು. ಆ ಕ್ಷಣ ಅರ್ಜೆಂಟಿನಾ ಪಾಳಯದಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತು. ಪಂದ್ಯದ ಅಂತ್ಯದವರೆಗೂ ದಕ್ಷಿಣದ ಅಮೆರಿಕದ ಎರಡು ಶ್ರೇಷ್ಠ ತಂಡಗಳು ಗೋಲು ಗಳಿಸಲು ತೀವ್ರ ಹಣಾಹಣಿ ನಡೆಸಿದವಾದರೂ ಗೋಲ್‌ಕೀಪರ್‌ ಮತ್ತು ಬಲಿಷ್ಠ ರಕ್ಷಣೆಯಿಂದ ಮತ್ತೊಂದು ಗೋಲು ಪಂದ್ಯದಲ್ಲಿ ದಾಖಲಾಗಲಿಲ್ಲ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್‌ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು

ಪಂದ್ಯದ 88 ನೇ ನಿಮಿಷದಲ್ಲಿ  ಲಿಯೋನಲ್‌ ಮೆಸ್ಸಿ ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಚೆಂಡನ್ನು ತಂದು  ಅಭಿಮಾನಿಗಳು ಒಂದು ಕ್ಷಣ ಉಸಿರನ್ನು ಬಿಗಿಹಿಡಿದು ನಿಲ್ಲುವಂತೆ ಮಾಡಿದರು. ಆದರೆ ಮೆಸ್ಸಿ ಫೈನಲ್‌ನಲ್ಲಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಇಡೀ  ಪಂದ್ಯದಲ್ಲಿ ಅರ್ಜೆಂಟಿನಾ ಗೋಲು ಪೆಟ್ಟಿಗೆಗೆ ಭದ್ರ ತಡೆಗೋಡೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೇಜ್‌.  ಫೈನಲ್‌ ಪಂದ್ಯದಲ್ಲಿ ಮಾರ್ಟಿನೇಜ್‌ ತೋರಿದ ಕೆಚ್ಚೆದೆಯ ಪ್ರದರ್ಶನ ಎಂತಹವರನ್ನಾದರೂ ದಂಗುಬಡಿಸದೇ ಇರಲಾರದು. ಬ್ರೆಜಿಲಿಯನ್‌ ಸ್ಟ್ರೈಕರ್‌ಗಳ ಪ್ರಬಲ ದಾಳಿಯನ್ನು ಮೆಟ್ಟಿನಿಂತ ಮಾರ್ಟಿನೇಜ್‌ ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಟ್ರೋಫಿ ಬರಲು ಮುಖ್ಯ ಕಾರಣ.

ಅರ್ಜೆಂಟಿನಾ ಗೋಲ್‌ಕೀಪರ್‌ ಎಮಿಲಿಯಾನೊ ಡಿ ಮಾರ್ಟಿನೇಜ್‌

ಬ್ರೆಜಿಲ್‌ನಲ್ಲಿ ಫೈನಲ್‌ ಪಂದ್ಯ. ಬ್ರೆಜಿಲ್ ಟ್ರೋಫಿಯಿಂದ ಒಂದು ಹೆಜ್ಜೆಯಷ್ಟೆ ದೂರವಿದೆ. ಆಂತಿಮ ಹಣಾಹಣಿ ಸಾಂಪ್ರದಾಯಿಕ ಎದುರಾಳಿ ಅಜೆಂಟಿನಾ ವಿರುದ್ಧ. ಹಾಗಿದ್ದ ಮೇಲೆ ಬ್ರೆಜಿಲಿಯನ್‌ ಅಭಿಮಾನಿಗಳ ಉತ್ಸಾಹಕ್ಕೆಲ್ಲಿ ತಡೆ ? ಅಂತಿಮ ಕ್ಷಣದ ವರೆಗೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ನೆರೆದಿದ್ದ ಸಾವಿರಾರು ಬ್ರೆಜಿಲಿಯನ್‌ ಪ್ರೇಕ್ಷಕರ ಕಂಗಳು ಪಂದ್ಯದಂತ್ಯಕ್ಕೆ ಹನಿಗೂಡಿದ್ದವು. ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

ಕೊರೊನಾ ಸಾಂಕ್ರಾಮಿಕದ ನಡುವೆಯೂ ಜಗತ್ತಿನ ಅತಿ ಹಳೆಯ ಫುಟ್ಬಾಲ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲಿಯನ್‌ ಫುಟ್ಬಾಲ್‌ ಫೆಡರೇಷನ್‌ ನಿಜಕ್ಕೂ ಅಭಿನಂದನೆಗೆ ಅರ್ಹರು. ಕ್ರೀಡಾಕೂಟದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪ್ರತಿಭಟನೆಯನ್ನೆಲ್ಲ ಫುಟ್ಬಾಲ್ ತನ್ನ ತೆಕ್ಕೆಯಲ್ಲಿ ಕರಗಿಸಿಕೊಂಡಿದ್ದು ವಿಶೇಷ.

ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

 2014ರಲ್ಲಿ ಇದೇ ಮೆರಕಾನಾ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಜರ್ಮನಿ ವಿರುದ್ಧ ಪಾರಾಭಾವಗೊಂಡು ನಿರಾಸೆಗೊಳಗಾಗಿತ್ತು. ಇಂದು 2014ರ ಅರ್ಜೆಂಟಿನಾದ  ನಿರಾಸೆಯನ್ನು ಅದೇ ಮೆರಕಾನಾ ಕ್ರೀಡಾಂಗಣ ಮರೆಸಿದೆ.

ವಿಶ್ವ ಫುಟ್ಬಾಲ್‌ನ ಮುಕುಟಮಣಿಯಾಗಿ ಕಂಗೊಳಿಸುತ್ತಿರವ ಮೆಸ್ಸಿ ಕ್ಲಬ್‌ ಫುಟ್ಬಾಲ್‌ನಲ್ಲಿ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಹತ್ತಾರು ಚಾಂಪಿಯನ್‌ ಶಿಫ್‌ ಜಯಿಸಿದ್ದಾರೆ. ಆದರೆ ಅರ್ಜೆಂಟಿನಾದ ಬಿಳಿ ನೀಲಿ ಪಟ್ಟೆಯ ಜೆರ್ಸಿ ತೊಟ್ಟು ದೇಶಕ್ಕೆ ಟ್ರೋಫಿ ಗೆಲ್ಲುವ  ಮೆಸ್ಸಿ ಕನಸು ಇದುವರೆಗೆ ಈಡೇರಿರಲಿಲ್ಲ. ಇಂದು ಮೆಸ್ಸಿ ಮತ್ತು ಅರ್ಜೆಂಟಿನಾದ ದೀರ್ಘಕಾಲದ ಟ್ರೊಫಿ ಕನಸು ನನಸಾಗಿದೆ . ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಸೇರ್ಪಡೆಗೊಂಡಿತು.

ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ

2016 ರ ಜುಲೈ ೧೦ ರಂದು ಅಂದರೆ ಇಂದಿಗೆ ೫ ವರ್ಷ ಮೊದಲು ಫುಟ್ಬಾಲ್ ಕ್ರೀಡೆಯ ಮತ್ತೊಬ್ಬ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ಯುರೋಪಿಯನ್ ಚಾಂಪಿಯಾನ್‌ ಆಗಿ ಹೊರಹೊಮ್ಮಿತ್ತು. ರೊನಾಲ್ಡೋ ಗೆಲುವಿಗೂ ಪೋರ್ಚುಗಲ್‌ ಅಭಿಮಾನಿಗಳು ಹೀಗೆಯೇ ಸಂಭ್ರಮಿಸಿದ್ದರು.

ನಿವೃತ್ತಿಯ ಅಂಚಿನಲ್ಲಿರುವ ಫುಟ್ಬಾಲ್‌ ಜಗತ್ತಿನ ಇಬ್ಬರು ಶ್ರೇಷ್ಠ ಆಟಗಾರರಾದ ಮೆಸ್ಸಿ ಮತ್ತು ರೊನಾಲ್ಡೋ ಇನ್ನೆಷ್ಟು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ತಿಳಿದಿಲ್ಲ. ವರ್ಷಗಳ ಹಿಂದೆ ನಿವೃತ್ತಿಯ ನಿರ್ಧಾರ ಮಾಡಿದ್ದ ಮೆಸ್ಸಿ ಅಭಿಮಾನಿಗಳ ಒತ್ತಾಯ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲುವ ಕನಸಿನಿಂದ ತಮ್ಮ ನಿವೃತ್ತಿಯಿಂದ ಹಿಂದೆ ಸರಿದಿದ್ದರು.

 -ರಾಜೇಶ್ ಹೆಬ್ಬಾರ್‌

  ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...