Homeಮುಖಪುಟಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ...

ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ ಮೆಸ್ಸಿ ಎಂಡ್‌ ಟೀಮ್‌

ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

- Advertisement -
- Advertisement -

ಫುಟ್ಬಾಲ್‌ ದಂತಕತೆ ಮರಡೋನಾ, ವಿಶ್ವ ಶ್ರೇಷ್ಠ ಆಟಗಾರ ಮೆಸ್ಸಿ ಹೀಗೆ ಜಗತ್ತಿಗೆ ಶ್ರೇಷ್ಠ ಫುಟ್ಬಾಲರ್‌ಗಳನ್ನು ನೀಡಿದ ಅರ್ಜೆಂಟೆನಾ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಯ ಹಂತಕ್ಕೆ ಹೋಗಿ ಮುಗ್ಗರಿಸುತ್ತಿತ್ತು. ವಿಶ್ವ ಶ್ರೇಷ್ಠ ತಂಡವಾಗಿದ್ದರೂ ಕಳೆದ 28 ವರ್ಷಗಳಿಂದ ಯಾವುದೇ ಮಹತ್ವದ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟವನ್ನು ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಸರಿ ಸುಮಾರು ಮೂರು ದಶಕಗಳ ಅರ್ಜೆಂಟಿನಾದ ಪ್ರಶಸ್ತಿ ಬರ    ನೀಗಿದೆ. ಇಂದು ಬೆಳಗಿನ ಜಾವ ಬ್ರೆಜಿಲ್‌ನ ರಿಯೋ ಡಿ ಜನೈರೋದ ವಿಶ್ವ ಪ್ರಸಿದ್ಧ ಮೆರಕಾನಾ ಕ್ರೀಡಾಂಗಣದಲ್ಲಿ ನಡೆದ ಕೋಪ ಅಮೆರಿಕಾ ಚಾಂಪಿಯನ್‌ಶಿಪ್‌ ಟ್ರೋಫಿ ಗೆಲ್ಲುವ ಮೂಲಕ ಲಿಯೋನಲ್‌ ಮೆಸ್ಸಿ ನಾಯಕತ್ವದ ತಂಡ ಲ್ಯಾಟಿನ್ ಅಮೆರಿಕದ ಫುಟ್ಬಾಲ್ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಇಂದು ಬೆಳಗಿನ ಜಾವ ನಡೆದ ಬ್ರೆಜಿಲ್ ಮತ್ತು ಅರ್ಜೆಂಟಿನಾ  ತಂಡಗಳ ನಡುವಿನ ಫೈನಲ್‌ ಪಂದ್ಯ ಕೊನೆ  ಕ್ಷಣದವರೆಗೂ ಫುಟ್ಬಾಲ್‌ ಪ್ರೇಮಿಗಳನ್ನು ರೋಚಕತೆಯ ಉತ್ತುಂಗದಲ್ಲಿ ತಂದು ನಿಲ್ಲಿಸಿತ್ತು. ಜಗತ್ತಿನ ಫುಟ್ಬಾಲ್ ಪ್ರೇಮಿಗಳು ಮೆಸ್ಸಿ ಮತ್ತು ನೆಯ್ಮಾರ್‌ ಗೋಲು ಸಿಡಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಮೆಸ್ಸಿಯಾಗಲಿ ‍ನೆಯ್ಮಾರ್‌ ಆಗಲಿ ಅಂತಿಮ ಹಣಾಹಣಿಯಲ್ಲಿ ಗೋಲು ಸಿಡಿಸದೇ ಫುಟ್ಬಾಲ್‌ ಪ್ರೇಮಿಗಳನ್ನು ನಿರಾಸೆ ಗೊಳಿಸಿದರು. ಅರ್ಜೆಂಟಿನಾದ ಗೆಲುವಿನ ಗೋಲು ಪಂದ್ಯದ 22 ನಿಮಿಷದಲ್ಲಿ ಎಂಜೆಲ್‌ ಡಿ ಮಾರಿಯಾ ಅವರ ಮೂಲಕ ಬಂತು. ಆಮೂಲಕ ಅರ್ಜೆಂಟಿನಾ 1-0 ಗೋಲುಗಳ ಅಂತರದಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿ ಲ್ಯಾಟಿನ್‌ ಅಮೆರಿಕಾದ  ಪುಟ್ಬಾಲ್‌ ಚಾಂಪಿಯನ್ನು ಪಟ್ಟವನ್ನು ಧರಿಸಿತು.

ಅರ್ಜೆಂಟಿನಾ ಗೆಲುವಿನ ರುವಾರಿ ಅಂಜೆಲ್ ಡಿ ಮಾರಿಯಾ

ಮಿಡ್‌ಫೀಲ್ಡರ್‌ ರೋಡ್ರಿಗೊ ಡಿ ಪಾಲ್ ನೀಡಿದ ಲಾಂಗ್‌ ಪಾಸನ್ನು ಮಾರಿಯೋ ಯಾವುದೇ ಪ್ರಮಾದವಿಲ್ಲದೇ ಬ್ರೆಜಿಲ್‌ನ ಗೋಲು ಪೆಟ್ಟಿಗೆ ತಲುಪಿಸಿದರು. ಆ ಕ್ಷಣ ಅರ್ಜೆಂಟಿನಾ ಪಾಳಯದಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತು. ಪಂದ್ಯದ ಅಂತ್ಯದವರೆಗೂ ದಕ್ಷಿಣದ ಅಮೆರಿಕದ ಎರಡು ಶ್ರೇಷ್ಠ ತಂಡಗಳು ಗೋಲು ಗಳಿಸಲು ತೀವ್ರ ಹಣಾಹಣಿ ನಡೆಸಿದವಾದರೂ ಗೋಲ್‌ಕೀಪರ್‌ ಮತ್ತು ಬಲಿಷ್ಠ ರಕ್ಷಣೆಯಿಂದ ಮತ್ತೊಂದು ಗೋಲು ಪಂದ್ಯದಲ್ಲಿ ದಾಖಲಾಗಲಿಲ್ಲ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್‌ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು

ಪಂದ್ಯದ 88 ನೇ ನಿಮಿಷದಲ್ಲಿ  ಲಿಯೋನಲ್‌ ಮೆಸ್ಸಿ ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಚೆಂಡನ್ನು ತಂದು  ಅಭಿಮಾನಿಗಳು ಒಂದು ಕ್ಷಣ ಉಸಿರನ್ನು ಬಿಗಿಹಿಡಿದು ನಿಲ್ಲುವಂತೆ ಮಾಡಿದರು. ಆದರೆ ಮೆಸ್ಸಿ ಫೈನಲ್‌ನಲ್ಲಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಇಡೀ  ಪಂದ್ಯದಲ್ಲಿ ಅರ್ಜೆಂಟಿನಾ ಗೋಲು ಪೆಟ್ಟಿಗೆಗೆ ಭದ್ರ ತಡೆಗೋಡೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೇಜ್‌.  ಫೈನಲ್‌ ಪಂದ್ಯದಲ್ಲಿ ಮಾರ್ಟಿನೇಜ್‌ ತೋರಿದ ಕೆಚ್ಚೆದೆಯ ಪ್ರದರ್ಶನ ಎಂತಹವರನ್ನಾದರೂ ದಂಗುಬಡಿಸದೇ ಇರಲಾರದು. ಬ್ರೆಜಿಲಿಯನ್‌ ಸ್ಟ್ರೈಕರ್‌ಗಳ ಪ್ರಬಲ ದಾಳಿಯನ್ನು ಮೆಟ್ಟಿನಿಂತ ಮಾರ್ಟಿನೇಜ್‌ ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಟ್ರೋಫಿ ಬರಲು ಮುಖ್ಯ ಕಾರಣ.

ಅರ್ಜೆಂಟಿನಾ ಗೋಲ್‌ಕೀಪರ್‌ ಎಮಿಲಿಯಾನೊ ಡಿ ಮಾರ್ಟಿನೇಜ್‌

ಬ್ರೆಜಿಲ್‌ನಲ್ಲಿ ಫೈನಲ್‌ ಪಂದ್ಯ. ಬ್ರೆಜಿಲ್ ಟ್ರೋಫಿಯಿಂದ ಒಂದು ಹೆಜ್ಜೆಯಷ್ಟೆ ದೂರವಿದೆ. ಆಂತಿಮ ಹಣಾಹಣಿ ಸಾಂಪ್ರದಾಯಿಕ ಎದುರಾಳಿ ಅಜೆಂಟಿನಾ ವಿರುದ್ಧ. ಹಾಗಿದ್ದ ಮೇಲೆ ಬ್ರೆಜಿಲಿಯನ್‌ ಅಭಿಮಾನಿಗಳ ಉತ್ಸಾಹಕ್ಕೆಲ್ಲಿ ತಡೆ ? ಅಂತಿಮ ಕ್ಷಣದ ವರೆಗೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ನೆರೆದಿದ್ದ ಸಾವಿರಾರು ಬ್ರೆಜಿಲಿಯನ್‌ ಪ್ರೇಕ್ಷಕರ ಕಂಗಳು ಪಂದ್ಯದಂತ್ಯಕ್ಕೆ ಹನಿಗೂಡಿದ್ದವು. ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

ಕೊರೊನಾ ಸಾಂಕ್ರಾಮಿಕದ ನಡುವೆಯೂ ಜಗತ್ತಿನ ಅತಿ ಹಳೆಯ ಫುಟ್ಬಾಲ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲಿಯನ್‌ ಫುಟ್ಬಾಲ್‌ ಫೆಡರೇಷನ್‌ ನಿಜಕ್ಕೂ ಅಭಿನಂದನೆಗೆ ಅರ್ಹರು. ಕ್ರೀಡಾಕೂಟದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪ್ರತಿಭಟನೆಯನ್ನೆಲ್ಲ ಫುಟ್ಬಾಲ್ ತನ್ನ ತೆಕ್ಕೆಯಲ್ಲಿ ಕರಗಿಸಿಕೊಂಡಿದ್ದು ವಿಶೇಷ.

ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

 2014ರಲ್ಲಿ ಇದೇ ಮೆರಕಾನಾ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಜರ್ಮನಿ ವಿರುದ್ಧ ಪಾರಾಭಾವಗೊಂಡು ನಿರಾಸೆಗೊಳಗಾಗಿತ್ತು. ಇಂದು 2014ರ ಅರ್ಜೆಂಟಿನಾದ  ನಿರಾಸೆಯನ್ನು ಅದೇ ಮೆರಕಾನಾ ಕ್ರೀಡಾಂಗಣ ಮರೆಸಿದೆ.

ವಿಶ್ವ ಫುಟ್ಬಾಲ್‌ನ ಮುಕುಟಮಣಿಯಾಗಿ ಕಂಗೊಳಿಸುತ್ತಿರವ ಮೆಸ್ಸಿ ಕ್ಲಬ್‌ ಫುಟ್ಬಾಲ್‌ನಲ್ಲಿ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಹತ್ತಾರು ಚಾಂಪಿಯನ್‌ ಶಿಫ್‌ ಜಯಿಸಿದ್ದಾರೆ. ಆದರೆ ಅರ್ಜೆಂಟಿನಾದ ಬಿಳಿ ನೀಲಿ ಪಟ್ಟೆಯ ಜೆರ್ಸಿ ತೊಟ್ಟು ದೇಶಕ್ಕೆ ಟ್ರೋಫಿ ಗೆಲ್ಲುವ  ಮೆಸ್ಸಿ ಕನಸು ಇದುವರೆಗೆ ಈಡೇರಿರಲಿಲ್ಲ. ಇಂದು ಮೆಸ್ಸಿ ಮತ್ತು ಅರ್ಜೆಂಟಿನಾದ ದೀರ್ಘಕಾಲದ ಟ್ರೊಫಿ ಕನಸು ನನಸಾಗಿದೆ . ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಸೇರ್ಪಡೆಗೊಂಡಿತು.

ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ

2016 ರ ಜುಲೈ ೧೦ ರಂದು ಅಂದರೆ ಇಂದಿಗೆ ೫ ವರ್ಷ ಮೊದಲು ಫುಟ್ಬಾಲ್ ಕ್ರೀಡೆಯ ಮತ್ತೊಬ್ಬ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ಯುರೋಪಿಯನ್ ಚಾಂಪಿಯಾನ್‌ ಆಗಿ ಹೊರಹೊಮ್ಮಿತ್ತು. ರೊನಾಲ್ಡೋ ಗೆಲುವಿಗೂ ಪೋರ್ಚುಗಲ್‌ ಅಭಿಮಾನಿಗಳು ಹೀಗೆಯೇ ಸಂಭ್ರಮಿಸಿದ್ದರು.

ನಿವೃತ್ತಿಯ ಅಂಚಿನಲ್ಲಿರುವ ಫುಟ್ಬಾಲ್‌ ಜಗತ್ತಿನ ಇಬ್ಬರು ಶ್ರೇಷ್ಠ ಆಟಗಾರರಾದ ಮೆಸ್ಸಿ ಮತ್ತು ರೊನಾಲ್ಡೋ ಇನ್ನೆಷ್ಟು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ತಿಳಿದಿಲ್ಲ. ವರ್ಷಗಳ ಹಿಂದೆ ನಿವೃತ್ತಿಯ ನಿರ್ಧಾರ ಮಾಡಿದ್ದ ಮೆಸ್ಸಿ ಅಭಿಮಾನಿಗಳ ಒತ್ತಾಯ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲುವ ಕನಸಿನಿಂದ ತಮ್ಮ ನಿವೃತ್ತಿಯಿಂದ ಹಿಂದೆ ಸರಿದಿದ್ದರು.

 -ರಾಜೇಶ್ ಹೆಬ್ಬಾರ್‌

  ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...