Homeಮುಖಪುಟಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ...

ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಕಪ್ : 28 ವರ್ಷಗಳ ನಂತರ ಪ್ರಶಸ್ತಿ ಬರ ನೀಗಿಸಿಕೊಂಡ ಮೆಸ್ಸಿ ಎಂಡ್‌ ಟೀಮ್‌

ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

- Advertisement -
- Advertisement -

ಫುಟ್ಬಾಲ್‌ ದಂತಕತೆ ಮರಡೋನಾ, ವಿಶ್ವ ಶ್ರೇಷ್ಠ ಆಟಗಾರ ಮೆಸ್ಸಿ ಹೀಗೆ ಜಗತ್ತಿಗೆ ಶ್ರೇಷ್ಠ ಫುಟ್ಬಾಲರ್‌ಗಳನ್ನು ನೀಡಿದ ಅರ್ಜೆಂಟೆನಾ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಯ ಹಂತಕ್ಕೆ ಹೋಗಿ ಮುಗ್ಗರಿಸುತ್ತಿತ್ತು. ವಿಶ್ವ ಶ್ರೇಷ್ಠ ತಂಡವಾಗಿದ್ದರೂ ಕಳೆದ 28 ವರ್ಷಗಳಿಂದ ಯಾವುದೇ ಮಹತ್ವದ ಕ್ರೀಡಾಕೂಟದಲ್ಲಿ ಚಾಂಪಿಯನ್‌ ಪಟ್ಟವನ್ನು ಧರಿಸಲು ಸಾಧ್ಯವಾಗುತ್ತಿರಲಿಲ್ಲ. ಸರಿ ಸುಮಾರು ಮೂರು ದಶಕಗಳ ಅರ್ಜೆಂಟಿನಾದ ಪ್ರಶಸ್ತಿ ಬರ    ನೀಗಿದೆ. ಇಂದು ಬೆಳಗಿನ ಜಾವ ಬ್ರೆಜಿಲ್‌ನ ರಿಯೋ ಡಿ ಜನೈರೋದ ವಿಶ್ವ ಪ್ರಸಿದ್ಧ ಮೆರಕಾನಾ ಕ್ರೀಡಾಂಗಣದಲ್ಲಿ ನಡೆದ ಕೋಪ ಅಮೆರಿಕಾ ಚಾಂಪಿಯನ್‌ಶಿಪ್‌ ಟ್ರೋಫಿ ಗೆಲ್ಲುವ ಮೂಲಕ ಲಿಯೋನಲ್‌ ಮೆಸ್ಸಿ ನಾಯಕತ್ವದ ತಂಡ ಲ್ಯಾಟಿನ್ ಅಮೆರಿಕದ ಫುಟ್ಬಾಲ್ ಚಾಂಪಿಯನ್‌ ಆಗಿ ಹೊರ ಹೊಮ್ಮಿದೆ.

ಇಂದು ಬೆಳಗಿನ ಜಾವ ನಡೆದ ಬ್ರೆಜಿಲ್ ಮತ್ತು ಅರ್ಜೆಂಟಿನಾ  ತಂಡಗಳ ನಡುವಿನ ಫೈನಲ್‌ ಪಂದ್ಯ ಕೊನೆ  ಕ್ಷಣದವರೆಗೂ ಫುಟ್ಬಾಲ್‌ ಪ್ರೇಮಿಗಳನ್ನು ರೋಚಕತೆಯ ಉತ್ತುಂಗದಲ್ಲಿ ತಂದು ನಿಲ್ಲಿಸಿತ್ತು. ಜಗತ್ತಿನ ಫುಟ್ಬಾಲ್ ಪ್ರೇಮಿಗಳು ಮೆಸ್ಸಿ ಮತ್ತು ನೆಯ್ಮಾರ್‌ ಗೋಲು ಸಿಡಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು. ಮೆಸ್ಸಿಯಾಗಲಿ ‍ನೆಯ್ಮಾರ್‌ ಆಗಲಿ ಅಂತಿಮ ಹಣಾಹಣಿಯಲ್ಲಿ ಗೋಲು ಸಿಡಿಸದೇ ಫುಟ್ಬಾಲ್‌ ಪ್ರೇಮಿಗಳನ್ನು ನಿರಾಸೆ ಗೊಳಿಸಿದರು. ಅರ್ಜೆಂಟಿನಾದ ಗೆಲುವಿನ ಗೋಲು ಪಂದ್ಯದ 22 ನಿಮಿಷದಲ್ಲಿ ಎಂಜೆಲ್‌ ಡಿ ಮಾರಿಯಾ ಅವರ ಮೂಲಕ ಬಂತು. ಆಮೂಲಕ ಅರ್ಜೆಂಟಿನಾ 1-0 ಗೋಲುಗಳ ಅಂತರದಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿ ಲ್ಯಾಟಿನ್‌ ಅಮೆರಿಕಾದ  ಪುಟ್ಬಾಲ್‌ ಚಾಂಪಿಯನ್ನು ಪಟ್ಟವನ್ನು ಧರಿಸಿತು.

ಅರ್ಜೆಂಟಿನಾ ಗೆಲುವಿನ ರುವಾರಿ ಅಂಜೆಲ್ ಡಿ ಮಾರಿಯಾ

ಮಿಡ್‌ಫೀಲ್ಡರ್‌ ರೋಡ್ರಿಗೊ ಡಿ ಪಾಲ್ ನೀಡಿದ ಲಾಂಗ್‌ ಪಾಸನ್ನು ಮಾರಿಯೋ ಯಾವುದೇ ಪ್ರಮಾದವಿಲ್ಲದೇ ಬ್ರೆಜಿಲ್‌ನ ಗೋಲು ಪೆಟ್ಟಿಗೆ ತಲುಪಿಸಿದರು. ಆ ಕ್ಷಣ ಅರ್ಜೆಂಟಿನಾ ಪಾಳಯದಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತು. ಪಂದ್ಯದ ಅಂತ್ಯದವರೆಗೂ ದಕ್ಷಿಣದ ಅಮೆರಿಕದ ಎರಡು ಶ್ರೇಷ್ಠ ತಂಡಗಳು ಗೋಲು ಗಳಿಸಲು ತೀವ್ರ ಹಣಾಹಣಿ ನಡೆಸಿದವಾದರೂ ಗೋಲ್‌ಕೀಪರ್‌ ಮತ್ತು ಬಲಿಷ್ಠ ರಕ್ಷಣೆಯಿಂದ ಮತ್ತೊಂದು ಗೋಲು ಪಂದ್ಯದಲ್ಲಿ ದಾಖಲಾಗಲಿಲ್ಲ.

ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ: ಅಧ್ಯಕ್ಷ ಜೈರ್‌ ಬೊಲ್ಸೊನಾರೋ ರಾಜೀನಾಮೆಗೆ ಪಟ್ಟು

ಪಂದ್ಯದ 88 ನೇ ನಿಮಿಷದಲ್ಲಿ  ಲಿಯೋನಲ್‌ ಮೆಸ್ಸಿ ಗೋಲು ಪೆಟ್ಟಿಗೆಯ ಹತ್ತಿರಕ್ಕೆ ಚೆಂಡನ್ನು ತಂದು  ಅಭಿಮಾನಿಗಳು ಒಂದು ಕ್ಷಣ ಉಸಿರನ್ನು ಬಿಗಿಹಿಡಿದು ನಿಲ್ಲುವಂತೆ ಮಾಡಿದರು. ಆದರೆ ಮೆಸ್ಸಿ ಫೈನಲ್‌ನಲ್ಲಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಇಡೀ  ಪಂದ್ಯದಲ್ಲಿ ಅರ್ಜೆಂಟಿನಾ ಗೋಲು ಪೆಟ್ಟಿಗೆಗೆ ಭದ್ರ ತಡೆಗೋಡೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿನೇಜ್‌.  ಫೈನಲ್‌ ಪಂದ್ಯದಲ್ಲಿ ಮಾರ್ಟಿನೇಜ್‌ ತೋರಿದ ಕೆಚ್ಚೆದೆಯ ಪ್ರದರ್ಶನ ಎಂತಹವರನ್ನಾದರೂ ದಂಗುಬಡಿಸದೇ ಇರಲಾರದು. ಬ್ರೆಜಿಲಿಯನ್‌ ಸ್ಟ್ರೈಕರ್‌ಗಳ ಪ್ರಬಲ ದಾಳಿಯನ್ನು ಮೆಟ್ಟಿನಿಂತ ಮಾರ್ಟಿನೇಜ್‌ ಅರ್ಜೆಂಟಿನಾ ಮಡಿಲಿಗೆ ಕೋಪಾ ಅಮೆರಿಕ ಟ್ರೋಫಿ ಬರಲು ಮುಖ್ಯ ಕಾರಣ.

ಅರ್ಜೆಂಟಿನಾ ಗೋಲ್‌ಕೀಪರ್‌ ಎಮಿಲಿಯಾನೊ ಡಿ ಮಾರ್ಟಿನೇಜ್‌

ಬ್ರೆಜಿಲ್‌ನಲ್ಲಿ ಫೈನಲ್‌ ಪಂದ್ಯ. ಬ್ರೆಜಿಲ್ ಟ್ರೋಫಿಯಿಂದ ಒಂದು ಹೆಜ್ಜೆಯಷ್ಟೆ ದೂರವಿದೆ. ಆಂತಿಮ ಹಣಾಹಣಿ ಸಾಂಪ್ರದಾಯಿಕ ಎದುರಾಳಿ ಅಜೆಂಟಿನಾ ವಿರುದ್ಧ. ಹಾಗಿದ್ದ ಮೇಲೆ ಬ್ರೆಜಿಲಿಯನ್‌ ಅಭಿಮಾನಿಗಳ ಉತ್ಸಾಹಕ್ಕೆಲ್ಲಿ ತಡೆ ? ಅಂತಿಮ ಕ್ಷಣದ ವರೆಗೂ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ನೆರೆದಿದ್ದ ಸಾವಿರಾರು ಬ್ರೆಜಿಲಿಯನ್‌ ಪ್ರೇಕ್ಷಕರ ಕಂಗಳು ಪಂದ್ಯದಂತ್ಯಕ್ಕೆ ಹನಿಗೂಡಿದ್ದವು. ನೆಯ್ಮಾರ್ ಕ್ರೀಡಾಂಗಣದಲ್ಲಿ ಕಂಬನಿಗರೆದರೆ, ಮೆಸ್ಸಿ ತನ್ನ ಕಿರಿಯ ಸಹೋದರನನ್ನು ಸಂತೈಸುವಂತೆ ನೆಯ್ಮಾರ್‌ರನ್ನು ಅಪ್ಪಿಕೊಂಡು  ಸಮಾಧಾನ ಹೇಳಿದರು. ಸೋಲು ಗೆಲುವಿನ ನಡುವೆ ಕ್ರೀಡೆ ಮಾಡಬೇಕಿದ್ದ ಕೆಲಸವನ್ನು ಕೋಪಾ ಅಮೆರಿಕ ಸದ್ದಿಲ್ಲದೇ ಮಾಡಿಯಾಗಿತ್ತು.

ಕೊರೊನಾ ಸಾಂಕ್ರಾಮಿಕದ ನಡುವೆಯೂ ಜಗತ್ತಿನ ಅತಿ ಹಳೆಯ ಫುಟ್ಬಾಲ್‌ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಬ್ರೆಜಿಲ್ ಸರ್ಕಾರ ಮತ್ತು ಬ್ರೆಜಿಲಿಯನ್‌ ಫುಟ್ಬಾಲ್‌ ಫೆಡರೇಷನ್‌ ನಿಜಕ್ಕೂ ಅಭಿನಂದನೆಗೆ ಅರ್ಹರು. ಕ್ರೀಡಾಕೂಟದ ಆರಂಭದಲ್ಲಿ ಬ್ರೆಜಿಲ್‌ನಲ್ಲಿ ನಡೆದ ಪ್ರತಿಭಟನೆಯನ್ನೆಲ್ಲ ಫುಟ್ಬಾಲ್ ತನ್ನ ತೆಕ್ಕೆಯಲ್ಲಿ ಕರಗಿಸಿಕೊಂಡಿದ್ದು ವಿಶೇಷ.

ಇದನ್ನೂ ಓದಿ: ಡಿಯಾಗೋ ಮರಡೋನಾ: ಫುಟ್‌ಬಾಲ್ ಲೋಕವನ್ನು ಪ್ರಜ್ವಲಿಸಿದ ಅದ್ಭುತ ಮಾಂತ್ರಿಕ

 2014ರಲ್ಲಿ ಇದೇ ಮೆರಕಾನಾ ಕ್ರೀಡಾಂಗಣದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಜರ್ಮನಿ ವಿರುದ್ಧ ಪಾರಾಭಾವಗೊಂಡು ನಿರಾಸೆಗೊಳಗಾಗಿತ್ತು. ಇಂದು 2014ರ ಅರ್ಜೆಂಟಿನಾದ  ನಿರಾಸೆಯನ್ನು ಅದೇ ಮೆರಕಾನಾ ಕ್ರೀಡಾಂಗಣ ಮರೆಸಿದೆ.

ವಿಶ್ವ ಫುಟ್ಬಾಲ್‌ನ ಮುಕುಟಮಣಿಯಾಗಿ ಕಂಗೊಳಿಸುತ್ತಿರವ ಮೆಸ್ಸಿ ಕ್ಲಬ್‌ ಫುಟ್ಬಾಲ್‌ನಲ್ಲಿ ಇದುವರೆಗೆ ನೂರಾರು ಪ್ರಶಸ್ತಿಗಳನ್ನು ಹತ್ತಾರು ಚಾಂಪಿಯನ್‌ ಶಿಫ್‌ ಜಯಿಸಿದ್ದಾರೆ. ಆದರೆ ಅರ್ಜೆಂಟಿನಾದ ಬಿಳಿ ನೀಲಿ ಪಟ್ಟೆಯ ಜೆರ್ಸಿ ತೊಟ್ಟು ದೇಶಕ್ಕೆ ಟ್ರೋಫಿ ಗೆಲ್ಲುವ  ಮೆಸ್ಸಿ ಕನಸು ಇದುವರೆಗೆ ಈಡೇರಿರಲಿಲ್ಲ. ಇಂದು ಮೆಸ್ಸಿ ಮತ್ತು ಅರ್ಜೆಂಟಿನಾದ ದೀರ್ಘಕಾಲದ ಟ್ರೊಫಿ ಕನಸು ನನಸಾಗಿದೆ . ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ ವಿಶ್ವ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದ ದಾಖಲೆಯಾಗಿ ಸೇರ್ಪಡೆಗೊಂಡಿತು.

ಅರ್ಜೆಂಟಿನಾ ಆಟಗಾರರು ಮೆಸ್ಸಿಯನ್ನು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದ ಕ್ಷಣ

2016 ರ ಜುಲೈ ೧೦ ರಂದು ಅಂದರೆ ಇಂದಿಗೆ ೫ ವರ್ಷ ಮೊದಲು ಫುಟ್ಬಾಲ್ ಕ್ರೀಡೆಯ ಮತ್ತೊಬ್ಬ ಶ್ರೇಷ್ಠ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೇತೃತ್ವದ ಪೋರ್ಚುಗಲ್ ಯುರೋಪಿಯನ್ ಚಾಂಪಿಯಾನ್‌ ಆಗಿ ಹೊರಹೊಮ್ಮಿತ್ತು. ರೊನಾಲ್ಡೋ ಗೆಲುವಿಗೂ ಪೋರ್ಚುಗಲ್‌ ಅಭಿಮಾನಿಗಳು ಹೀಗೆಯೇ ಸಂಭ್ರಮಿಸಿದ್ದರು.

ನಿವೃತ್ತಿಯ ಅಂಚಿನಲ್ಲಿರುವ ಫುಟ್ಬಾಲ್‌ ಜಗತ್ತಿನ ಇಬ್ಬರು ಶ್ರೇಷ್ಠ ಆಟಗಾರರಾದ ಮೆಸ್ಸಿ ಮತ್ತು ರೊನಾಲ್ಡೋ ಇನ್ನೆಷ್ಟು ವರ್ಷ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬುದು ತಿಳಿದಿಲ್ಲ. ವರ್ಷಗಳ ಹಿಂದೆ ನಿವೃತ್ತಿಯ ನಿರ್ಧಾರ ಮಾಡಿದ್ದ ಮೆಸ್ಸಿ ಅಭಿಮಾನಿಗಳ ಒತ್ತಾಯ ಮತ್ತು ದೇಶಕ್ಕಾಗಿ ಟ್ರೋಫಿ ಗೆಲ್ಲುವ ಕನಸಿನಿಂದ ತಮ್ಮ ನಿವೃತ್ತಿಯಿಂದ ಹಿಂದೆ ಸರಿದಿದ್ದರು.

 -ರಾಜೇಶ್ ಹೆಬ್ಬಾರ್‌

  ಇದನ್ನೂ ಓದಿ: ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...