Homeಸಿನಿಮಾಕ್ರೀಡೆವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

ವಿಂಬಲ್ಡನ್ ಟೆನಿಸ್ ಟೂರ್ನಿ ಆರಂಭ; ಇಲ್ಲ ಭಾರತದ ಪ್ರಾತಿನಿಧ್ಯ!

- Advertisement -
- Advertisement -

ವಿಶ್ವ ಟೆನಿಸ್ ಅಭಿಮಾನಿಗಳು ಕಳೆದ ಎರಡು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದ ಪ್ರತಿಷ್ಠಿತ ಇಂಗ್ಲೆಂಡ್-ವಿಂಬಲ್ಡನ್ ಟೆನಿಸ್ ಟೂರ್ನಿ ಕೊನೆಗೂ ಸೋಮವಾರದಿಂದ ಭರ್ಜರಿಯಾಗಿ ಆರಂಭವಾಗಿದೆ. ಆಸ್ಟ್ರೇಲಿಯಾ ಓಪನ್, ಫ್ರೆಂಚ್ ಓಪನ್, ಯುಎಸ್ ಓಪನ್ ಸೇರಿದಂತೆ ಟೆನಿಸ್ ಜಗತ್ತಿನಲ್ಲಿ ನಾಲ್ಕು ಜನಪ್ರಿಯ ಗ್ರ್ಯಾಂಡ್ ಸ್ಲಾಂ ಟೂರ್ನಿಗಳು ಇದ್ದಾಗ್ಯೂ ವಿಂಬಲ್ಡನ್‌ಗೇ ಅತ್ಯಂತ ಹೆಚ್ಚು ಪ್ರಾಶಸ್ತ್ಯ ಎಂದರೆ ತಪ್ಪಾಗಲಾರದು. 2019ರಲ್ಲಿ ನಡೆದ ಕೊನೆಯ ವಿಂಬಲ್ಡನ್ ಟೂರ್ನಿಯಲ್ಲಿ ಸರ್ಬಿಯಾದ ನಂಬರ್.1 ಆಟಗಾರ ನೊವಾಕ್ ಜಾಕೋವಿಚ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೆ, ಮಹಿಳಾ ವಿಭಾಗದಲ್ಲಿ ಸೈಮನ್ ಹೆಲಿಪ್ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು.

ಆದರೆ, ಕಳೆದ ವರ್ಷ 2020ರಲ್ಲಿ ಮಾರಕ ಕೊರೊನಾ ವೈರಸ್ ಇಡೀ ವಿಶ್ವವನ್ನು ತಲ್ಲಣಕ್ಕೆ ದೂಡಿತ್ತು. ಪರಿಣಾಮ ಎಲ್ಲಾ ಕ್ರೀಡಾ ಕ್ಷೇತ್ರಗಳೂ ನಿಂತ ನೀರಾಗಿದ್ದವು. ಟೆನಿಸ್ ಜಗತ್ತಿನಲ್ಲೂ ಸಹ ಎಲ್ಲಾ ಪ್ರಮುಖ ಟೂರ್ನಿಗಳನ್ನು ಮುಂದೂಡಲಾಗಿತ್ತು. ಇದಕ್ಕೂ ಮುನ್ನ ಈ ರೀತಿ ಆಗಿದ್ದು ಯುದ್ಧದ ಸಮಯದಲ್ಲಿ! 1915-18ರ ಅವಧಿಯಲ್ಲಿ ನಾಲ್ಕು ವರ್ಷ ಮೊದಲ ಮಹಾಯುದ್ಧದ ಕಾರಣಕ್ಕೆ ಈ ಟೂರ್ನಿಯನ್ನು ನಡೆಸಿರಲಿಲ್ಲ. ಅದರ ನಂತರ 2020ರಲ್ಲಿಯೇ ಕೊರೊನಾದಿಂದ ವಿಂಬಲ್ಡನ್‌ಗೆ ಬ್ರೇಕ್ ಬಿದ್ದದ್ದು. ಆದರೆ, ಈಗ ಆತಂಕಗಳು ನಿವಾರಣೆಯಾಗುತ್ತಿದ್ದು, ಟೂರ್ನಿ ಆರಂಭವಾಗಿದೆ.

ವಿಂಬಲ್ಡನ್ ಆರಂಭ ಮತ್ತು ಇತಿಹಾಸ

ಆಲ್ ಇಂಗ್ಲೆಂಡ್ ಲಾನ್ ಟೆನಿಸ್ ಮತ್ತು ಕ್ರೋಕೆ ಕ್ಲಬ್ ಎರಡೂ ಜಂಟಿಯಾಗಿ 23 ಜುಲೈ 1868ರಂದು ಖಾಸಗಿ ಕ್ಲಬ್ ಒಂದನ್ನು ಸ್ಥಾಪಿಸಿದವು. ಇದನ್ನು ’ದಿ ಆಲ್ ಇಂಗ್ಲೆಂಡ್ ಕ್ರೋಕೆ ಕ್ಲಬ್’ ಎಂದು ಕರೆಯಲಾಯಿತು. ಈ ಕ್ಲಬ್‌ನ ಟೆನಿಸ್ ಮೈದಾನ ವಿಂಬಲ್ಡನ್‌ನ ವರ್ಪಲ್ ರಸ್ತೆಯ ನರ್ಸರಿ ರಸ್ತೆಯಲ್ಲಿತ್ತು.

PC : Wikipedia, (ಸ್ಪೆನ್ಸರ್ ಗೋರ್)

1876ರಲ್ಲಿ ಮೇಜರ್ ವಾಲ್ಟರ್ ಕ್ಲೋಪ್ಟನ್ ವಿಂಗ್ಫೀಲ್ಡ್ ಮೊದಲ ಬಾರಿಗೆ ಹೊರಾಂಗಣ ಟೆನಿಸ್ ಅಂಕಣವನ್ನು ನಿರ್ಮಿಸಿದರು. 1877ರ ಜುಲೈ ತಿಂಗಳಲ್ಲಿ ಈ ಕ್ಲಬ್‌ಗೆ ’ದಿ ಆಲ್ ಇಂಗ್ಲೆಂಡ್ ಕ್ರೋಕೆ ಅಂಡ್ ಲಾನ್ ಟೆನಿಸ್ ಕ್ಲಬ್’ ಎಂದು ಮರುನಾಮಕರಣ ಮಾಡಲಾಯಿತು ಮತ್ತು ಸಾಂಪ್ರದಾಯಿಕ ಟೆನಿಸ್‌ನ ಮೊದಲ ಅಂತಾರಾಷ್ಟ್ರೀಯ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಗೆ ಚಾಲನೆ ನೀಡಲಾಯಿತು.

1877ರ ಉದ್ಘಾಟನಾ ವಿಂಬಲ್ಡನ್ ಚಾಂಪಿಯನ್‌ಶಿಪ್ 9 ಜುಲೈ, 1877ರಂದು ಪ್ರಾರಂಭವಾಯಿತು. ಮೊದಲ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಮಾತ್ರ ಆಯೋ ಜಿಸಲಾಗಿತ್ತು. ಆ ವರ್ಷದಲ್ಲಿ 22 ಜನ ಭಾಗವಹಿಸಿದ್ದರು. ತದನಂತರದ ಕಾಲಘಟ್ಟಗಳಲ್ಲಿ ಮಹಿಳಾ ಸಿಂಗಲ್ಸ್, ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಟೂರ್ನಿಗಳನ್ನೂ ಸಹ ಆರಂಭಿ ಸಲಾಯಿತು. ಅಂದಿನಿಂದ ಇಂದಿನವರೆಗೆ ವಿಂಬಲ್ಡನ್ ಟೂರ್ನಿ ಪ್ರತಿ ವರ್ಷ ಜೂನ್ ಕೊನೆಯ ಅಥವಾ ಜುಲೈ ಮೊದಲ ವಾರದಲ್ಲಿ ಪ್ರಾರಂಭಿಸುವುದು ವಾಡಿಕೆ.

ಮೊದಲ ವಿಂಬಲ್ಡನ್ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಸ್ಪೆನ್ಸರ್ ಗೋರ್ ಎಂಬವರು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಈತ ಕ್ರಿಕೆಟ್ ಆಟಗಾರನೂ ಆಗಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸರ್ರೆ ತಂಡವನ್ನೂ ಪ್ರತಿನಿಧಿಸಿದ್ದರು ಎಂಬುದು ಉಲ್ಲೇಖಾರ್ಹ. ಆನಂತರ ಹಲವು ಆಟಗಾರರು ಟಿನಿಸ್ ಲೋಕವನ್ನು ಆಳಿದ್ದಾರೆ. ಆದರೆ, ಸ್ಪೆಫಿ ಗ್ರಾಫ್ ಅವರನ್ನು ಟೆನಿಸ್ ದಂತಕಥೆ ಎಂದು ಬಣ್ಣಿಸಲಾಗುತ್ತಿದೆ. 8 ಬಾರಿ ವಿಂಬಲ್ಡನ್ ಟೆನಿಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಸ್ವಿಜಲೆಂಡ್‌ನ ರೋಜರ್ ಫೆಡರರ್ ಅತಿಹೆಚ್ಚು ಬಾರಿ ಈ ಪ್ರಶಸ್ತಿಯನ್ನು ಗೆದ್ದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರವಾಗಿದ್ದಾರೆ.

ವಿಶೇಷವೆಂದರೆ ಈ ವರ್ಷವೂ ಟೆನಿಸ್ ದಂತಕಥೆ ರೋಜರ್ ಫೆಡರರ್ ಕಣದಲ್ಲಿದ್ದು, ಸರ್ಬಿಯಾದ ರನ್ನಿಂಗ್ ಚಾಂಪಿಯನ್ ನೊವಾಕ್ ಜಾಕೋವಿಚ್ ಮತ್ತು ರಫೇಲ್ ನಡಾಲ್ ಕಠಿಣ ಪೈಪೋಟಿ ನೀಡಲಿದ್ದಾರೆ ಎಂದು ಟೆನಿಸ್ ಅಭಿಮಾನಿಗಳು ಕಾತುರದಿಂದ ಎದುರುನೊಡುತ್ತಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ದಂತೆಕಥೆಯಾಗಿರುವ ಸಹೋದರಿಯರು ಸೆರೆನಾ ವಿಲಿಯಮ್ಸ್-ವೀನಸ್ ವಿಲಿಯಮ್ಸ್, ಸೈಮನ್ ಹೆಲಿಪ್, ನದಿಯಾ ಪೊಡರೊಸ್ಕಾ, ಅಂಜೆಲಿಕಾ ಕೆರ್ಬರ್, ಎಲೀಸ್ ಮಾರ್ಟೆನ್ಸ್ ಸೇರಿದಂತೆ ಅನೇಕ ಪ್ರಮುಖ ಆಟಗಾರ್ತಿಯರಿದ್ದಾರೆ. ಪ್ರಶಸ್ತಿ ಯಾರ ಮುಡಿಗೇರಲಿದೆ ಎಂಬುದನ್ನು ಕಾದುನೋಡಬೇಕಿದೆ.

ಮಹಾಯುದ್ಧದ ಕಾಲದಲ್ಲಿ ಈ ಅಂಗಳದಲ್ಲೂ ಬಿದ್ದಿತ್ತು ಬಾಂಬ್

ಮೊದಲ ಮಹಾಯುದ್ಧದ ಕಾಲದಲ್ಲಿ 1915 ರಿಂದ 1918ರ ವರೆಗೆ ಮೊದಲ ಬಾರಿಗೆ ವಿಂಬಲ್ಡನ್ ಟೂರ್ನಿಯನ್ನು ಆಯೋಜಿಸಲಾಗಿರಲಿಲ್ಲ. 1916ರಲ್ಲಿ ಇಲ್ಲಿನ ಟೆನಿಸ್ ಅಂಗಳದ ಮೇಲೆ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದ್ದವು. ಪರಿಣಾಮ ನಂತರದ ದಿನಗಳಲ್ಲಿ ಸೆಂಟರ್ ಕೋರ್ಟ್ ಅನ್ನು ಮರುನಿರ್ಮಾಣ ಮಾಡಲಾಯಿತು.

ರೋಜರ್ ಫೆಡರರ್ ಹೆಸರಲ್ಲಿದೆ ವಿಶಿಷ್ಟ ದಾಖಲೆ

PC : Fox Sports, (ರೋಜರ್ ಫೆಡರರ್)

ವಿಂಬಲ್ಡನ್ ಗೆಲುವು ಪ್ರತಿಯೊಬ್ಬ ಟೆನಿಸ್ ಆಟಗಾರನಿಗೆ ಒಂದು ಮಹತ್ವದ ಮೈಲಿಗಲ್ಲು. ಆಟಗಾರರು ಒಮ್ಮೆ ವಿಂಬಲ್ಡನ್ ಗೆದ್ದರೆ ಅದು ಅವರ ಜೀವನ ಶೇಷ್ಠ ಸಾಧನೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಸ್ವಿಜರ್ಲೆಂಡ್ ಮೂಲದ ರೋಜರ್ ಫೆಡರರ್ ಒಟ್ಟು 8 ಸಲ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಅದರಲ್ಲೂ 2003ರಿಂದ 2007ರ ವರೆಗೆ ಸತತ 5 ಬಾರಿ ಈ ಟ್ರೋಫಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದರು. ಈ ಹಿಂದೆ ವಿಲಿಯಂ ರೆನ್ಶಾ ಎಂಬವರು 1981ರಿಂದ 1989ರ ಅವಧಿಯಲ್ಲಿ 7 ಬಾರಿ ಈ ಟ್ರೋಫಿಯನ್ನು ಗೆದ್ದದ್ದು ದಾಖಲೆಯಾಗಿ ಉಳಿದಿತ್ತು.

ವಿಂಬಲ್ಡನ್‌ನಲ್ಲಿ ಭಾರತದ ಸಾಧನೆ

ಕ್ರಿಕೆಟ್‌ಗೆ ಟೆನಿಸ್‌ಗಿಂತಲೂ ಅಥವಾ ಬೇರೆ ಯಾವುದೇ ಆಟಕ್ಕಿಂತಲೂ ಹೆಚ್ಚು ಪ್ರಾಶಸ್ತ್ಯ ನೀಡುವ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ದಾಖಲೆಗಳು ಸಾಕಷ್ಟು ಕಡಿಮೆ. ಆದರಲ್ಲೂ ವಿಂಬಲ್ಡನ್‌ನಂತಹ ಗ್ರ್ಯಾಂಡ್‌ಸ್ಲ್ಯಾಮ್ ಟೂರ್ನಿಗಳಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವ ಮಟ್ಟದ್ದಲ್ಲ. ಆದರೂ, 1960 ಮತ್ತು 1961ರಲ್ಲಿ ಸತತ ಎರಡು ಬಾರಿ ಭಾರತದ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಎಂಬವರು ಸೆಮಿಫೈನಲ್‌ಗೆ ತಲುಪಿ ಸಾಧನೆ ಮಾಡಿದ್ದರು. ಆದರೆ, ಟ್ರೋಫಿಗೆ ಮುತ್ತಿಡುವುದು ಸಾಧ್ಯವಾಗಿರಲಿಲ್ಲ.

PC : The Bridge, (ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್)

1999ರಲ್ಲಿ ಭಾರತದ ಖ್ಯಾತ ಟೆನಿಸ್ ಜೋಡಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಮೊದಲ ಬಾರಿಗೆ ಪುರುಷರ ಡಬಲ್ಸ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಈ ಜೋಡಿ ಅದೇ ವರ್ಷ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಯಲ್ಲೂ ಜಯ ಗಳಿಸುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿತ್ತು. ಆ ನಂತರ ಈ ಜೋಡಿ 2017ರವರೆಗೆ 18 ಬಾರಿ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದದ್ದು ಇಂದು ಇತಿಹಾಸ.

ಇನ್ನು ಮಹಿಳಾ ಟೆನಿಸ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಸಾನಿಯಾ ಮಿರ್ಜಾ ಸಹ 2015ರಲ್ಲಿ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೊತೆಗೂಡಿ ರಷ್ಯಾದ ಎಲೆನಾ ವೆಸ್ನೇನಾ ಮತ್ತು ಎಕಟೆರೀನಾ ಮಕರೋವಾ ಜೋಡಿಯನ್ನು ಸೋಲಿಸುವ ಮೂಲಕ ಮಹಿಳಾ ಡಬಲ್ಸ್‌ನಲ್ಲಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು. ಆದರೆ, ಆ ನಂತರದ ದಿನಗಳಿಂದ ಈವರೆಗೆ ಭಾರತ ಮಹಿಳಾ ಟೆನಿಸ್ ಕ್ರೀಡೆಯಲ್ಲಿ ಮತ್ತೊಂದು ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಯ ಬರ ಎದುರಿಸುತ್ತಿದೆ.

ಈ ವರ್ಷ ವಿಂಬಲ್ಡನ್ ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಭಾರತದ ಪರ ಕಣಕ್ಕಿಳಿದಿದ್ದರು. ಆದರೆ ಅರ್ಹತಾ ಸುತ್ತಿನಲ್ಲೇ ಅವರು ಆಸ್ಟ್ರೇಲಿಯಾದ ಮಾರ್ಕ್ ಪೋಮನ್ಸ್ ವಿರುದ್ಧ ಸೋಲುವ ಮೂಲಕ ವಿಂಬಲ್ಡನ್‌ನಲ್ಲಿ ಭಾರತದ ಪ್ರಾತಿನಿಧ್ಯವೇ ಇಲ್ಲದಂತಾಗಿದೆ!


ಇದನ್ನೂ ಓದಿ: ಮುಂದುವರೆದ ಒಕ್ಕೂಟ ಸರ್ಕಾರ-ಟ್ವಿಟರ್‌‌‌ ಸಂಘರ್ಷ: ಮಧ್ಯಪ್ರದೇಶದಲ್ಲೂ ಕೇಸ್‍!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...