Homeಅಂಕಣಗಳುದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

- Advertisement -
- Advertisement -

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅಮಾನತುರದ್ದಾಗಿದೆ. ಬರೋಬ್ಬರಿ ಒಂದು ದಶಕ ನಡೆದ ಕುಸ್ತಿಯಲ್ಲಿ ಈ ಜಟ್ಟಿ ಜಯಗಳಿಸಿದ್ದಾರಲ್ಲಾ.

ಅಗ್ರಹಾರದಿಂದ ಬಂದವನಿರಬೇಕು; ಗೋದಿ ಮುದ್ದೆಯಂತಿದ್ದ ಆಕಾರ ಬೇರೆ; ಕೃಷ್ಣಮೂರ್ತಿ ಹೆಸರು, ಈತ ಭೂಸುರೋತ್ತಮನಾದ ವಿಪ್ರನೇ ಇರಬೇಕು ಎಂದು ನಮ್ಮ ಜಾತಿ ಮನಸ್ಸುಗಳಿಗೆ ಸಾಕ್ಷಿಯೊದಗಿಸಿತ್ತು. ಆಗ ನಮಗೆ ಅಗ್ರಹಾರಗಳನ್ನ ಕಂಡರೆ ಆಗುತ್ತಿರಲಿಲ್ಲ. ನಮಗೇ ಏನು, ನಾಯಿ ಹಂದಿಗಳಿಗೂ ಹಿಡಿಸುತ್ತಿರಲಿಲ್ಲ. ಕಾರಣ ಅಲ್ಲಿನ ಅಂಗಳದಲ್ಲಿ ಯಾವ ಮೂಳೆಯೂ ಸಿಗುತ್ತಿರಲಿಲ್ಲ. ಇನ್ನ ಹಂದಿಗಳಿಗಂತೂ ತೊಳೆದು ಎಸೆದಂತಹ ಇಸ್ತ್ರಿ ಎಲೆಯಿಂದ ಏನೂ ಪ್ರಯೋಜನವಾಗದೆ ವಾಪಸ್ಸು ಬರುತ್ತಿದ್ದವು. ಇಂತಹ ನಮ್ಮ ಪೂರ್ವಾಗ್ರಹದ ಕಾಲದಲ್ಲಿ ಲಂಕೇಶರ ಎದುರು ಪ್ರಕಾಶ್ ಬೆಳವಾಡಿಯಿಂದ ಹಿಡಿದು ಮಹಾಬಲ, ಸತ್ಯ, ಸದಾಶಿವ ಇವರೆಲ್ಲ ಕುಳಿತು ಬ್ರಾಹ್ಮಣದ ಟೀಕೆಯನ್ನು ಅನುಮಾನ ಬರದಂತೆ ಸಹಿಸಿಕೊಳ್ಳುತ್ತಿದ್ದರು. ಅಂತವರ ಪೈಕಿ ಅಗ್ರಹಾರದ ಕೃಷ್ಣಮೂರ್ತಿಯೂ ಎಂದು ನಂಬಿದ್ದೆವು. ಲಂಕೇಶರ ವಿಶೇಷ ಪ್ರೀತಿಗೆ ಪಾತ್ರವಾಗಿ ನಮ್ಮಲ್ಲೊಂದಿಷ್ಟು ಅಸಹನೆ ಮೂಡುತ್ತಿರುವಾಗಲೆ ಕೃಷ್ಣಮೂರ್ತಿ ಅಗ್ರಹಾರದಿಂದ ಬಂದ ಅಸಾಮಿಯಲ್ಲ, ಅರಮನೆ ಎದುರು ಮಹಾರಾಜರ ಸಮ್ಮುಖದಲ್ಲಿ ಮುಷ್ಠಿಯಿಂದ ಎದುರಾಳಿಯ ವಿರುದ್ಧ ಹೋರಾಡುವವರೆಂದು ಗೊತ್ತಾಗಿ ಹೋಯ್ತಲ್ಲಾ, ಥೂತ್ತೇರಿ.

*****

ಉನ್ನತ ಸ್ಥಾನಕ್ಕೆ ಹೋದಮೇಲೂ ವಿಪ್ರೋತ್ತಮರು ತಾವು ತಯಾರಾದ ಅಗ್ರಹಾರಕ್ಕೆ ಬಂದು ಹೋಗುವಂತೆ ಕೃಷ್ಣಮೂರ್ತಿ ಲಂಕೇಶರ ವಟಾರಕ್ಕೆ ಬಂದು ಹೋಗುತ್ತಿದ್ದರು. ಆಗ ಚೆನೈನಲ್ಲಿದ್ದ ಪ್ರಾದೇಶಿಕ ಕೇಂದ್ರ ಸಾಹಿತ್ಯ ಅಕಾಡೆಮಿ ಕಚೇರಿಯನ್ನ ಬೆಂಗಳೂರಿಗೆ ತಂದರು. ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಹಣ ಕೊಟ್ಟರು, ಪುಸ್ತಕ ಕೊಟ್ಟರು. ಜರಗನಹಳ್ಳಿ ಶಿವಶಂಕರ್, ಲಂಕೇಶ್ ಶಿಷ್ಯ ದಳವಾಯಿಗೆ ಅಕಾಡೆಮಿ ಪುಸ್ತಕ ಕೊಟ್ಟರು. ದಳವಾಯಿಯಂತೂ ಹೋದವನು ಮತ್ತೆ ಬರಲೇ ಇಲ್ಲ. ತಮ್ಮ ಭಾಷೆ ಮತ್ತು ಪ್ರಾದೇಶಿಕ ಕಾಳಜಿಯ ಬಗ್ಗೆ ಪಕ್ಷಪಾತದ ಆಪಾದನೆ ಬಂದು ಅಗ್ರಹಾರ ತನಿಖೆ ಎದುರಿಸುವ ಸಮಯದಲ್ಲಿ ಫಲಾನುಭವಿಗಳ್ಯಾರೂ ಸಹಾಯಕ್ಕೆ ಬರಲಿಲ್ಲ. ತನಿಖಾಧಿಕಾರಿಗಳಿಗೆ ಒಂದು ಮನವಿಯನ್ನೂ ಕೊಡಲಿಲ್ಲ. ಇಂತಹ ಸಮಯದಲ್ಲಿ ಕವಿ ಸಿ.ಪ.ಶೆಟ್ಟಿಯ ಹಠದಿಂದಾಗಿ ಅಗ್ರಹಾರ ಅಮಾನತುಗೊಂಡರಂತಲ್ಲಾ, ಥೂತ್ತೇರಿ.

*****

ಕನ್ನಡದ ಕೆಲಸಕ್ಕಾಗಿ ಕನ್ನಡಿಗನಿಂದಲೇ ತೊಂದರೆಗೆ ಸಿಕ್ಕಿಕೊಂಡ ಅಗ್ರಹಾರ ಈ ಒಂದು ದಶಕದಲ್ಲಿ ಅರಾಮವಾಗಿಯೇ ಇದ್ದರು. ಪ್ರೆಸ್‌ಕ್ಲಬ್ಬಿನ ಗೆಳೆಯರ ಪಾರ್ಟಿಯ ಬಿಲ್ಲನ್ನು ತಾವೇ ಕೊಡುತ್ತಿದ್ದರು. ನಿವೃತ್ತಿಯ ಸವಲತ್ತುಗಳು ಸಿಗದಿದ್ದರೂ ಬೇಸರ ಮಾಡಿಕೊಳ್ಳದೆ ನಾನೊಬ್ಬ ಕಳಂಕ ಹೊತ್ತವನೆಂದು ಅರಾಮವಾಗಿಯೇ ಹೇಳುತ್ತಿದ್ದರು. ಈ ಜಟ್ಟಿಯ ವಿರುದ್ಧ ಹಠ ಸಾಧಿಸಿದ ಸಿ.ಪ.ಶೆಟ್ಟಿಯ ಒಂದು ಪ್ರಸಂಗ ಹೇಳುವುದಾದರೆ ನಮ್ಮ ಸಂಸ್ಕೃತಿ ಮತ್ತು ರಾಜಕಾರಣದ ನಡುವಿನ ಸೇತುವೆಯಂತಿದ್ದ ಎಂ.ಪಿ. ಪ್ರಕಾಶ್ ಅವರು ಸಿ.ಪ.ಶೆಟ್ಟರ ಕವಿತ್ವಕ್ಕೆ ಮಾರುಹೋಗಿ ಹೂವಿನಡಗಲಿಗೆ ಕರೆದು ಸನ್ಮಾನ ಮಾಡಿದರು. ಜರಿಪೇಟ ಜಗಮಗಿಸುವ ಶಾಲು ಪರಿಮಳ ಭರಿತ ಹಾರ ಹಾಕಿಸಿಕೊಂಡ ಸಿ.ಪ.ಶೆಟ್ಟಿ ’ಈ ಸನ್ಮಾನದ ಗೌರವ ಏನದಾವಲ್ಲ ಇವು ಭಾಳ ವೆಚ್ಚದವು, ಅದಕ ನಾನು ಈ ಸಭೆ ಮುಗಿಯೂ ಮಟ್ಟ ಇವನ್ನ ತೆಗೆಯೂದಿಲ್ಲ, ಹಾಗೇ ಕುಂದರತೀನಿ’ ಎಂದು ಹಾಗೇ ಕುಂತರು. ಆದರೆ ಅವರ ಅಕ್ಕಪಕ್ಕದಲ್ಲಿದ್ದ ಗೌರವಾನ್ವಿತರು ಹಾಗೆ ಮಾಡದೆ ಸನ್ಮಾನಕ್ಕೆ ಗೌರವ ತೋರಿದರು. ಸಭೆ ಗಂಟೆಗಟ್ಟಲೆ ಮುಂದುವರಿದಾಗ ಸಿ.ಪ.ಶೆಟ್ಟರು ಹಾಸ್ಯಸ್ಪದ ವ್ಯಕ್ತಿಯಂತೆ ಕಂಡರಂತಲ್ಲಾ, ಥೂತ್ತೇರಿ.

*****

ಈಗ ಕಾಲ ಬದಲಾಗಿದೆ. ಮುಂದೆ ಅಗ್ರಹಾರನಂತಹ ಕಾರ್ಯದರ್ಶಿ ಸಿ.ಪ.ಶೆಟ್ಟಿಯಂತಹ ಕವಿ ಎಲ್ಲವೂ ಅಪ್ರಸ್ತುತವಾಗಿರುವಂತಹ ಪ್ರಳಯ ಅರಂಭಗೊಂಡಿದೆಯಂತಲ್ಲಾ. ಈವರೆಗಿನ ಕನ್ನಡ ಸಾಹಿತ್ಯಕ್ಕೆ ಬದಲು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡಿಗರ ಮೇಲೆ ಹೇರುವ ಸೂಚನೆಯಾಗಿ, ನಮ್ಮ ಮಕ್ಕಳು ಓದುವ ಪಠ್ಯ ಪುಸ್ತಕದೊಳಕ್ಕೆ ಹೆಡಗೇವಾರ್, ಗೋಳವಲ್‌ಕರ್, ದೀನದಯಾಳು, ಹೊ.ವೆ. ಶೇಷಾದ್ರಿ, ಸಾವರ್ಕರ್ ಸೇರಲಿದ್ದಾರಂತಲ್ಲಾ. ಇದು ಹಾಳುಬಿದ್ದು ಹೋಗಲಿ, ಲಂಕೇಶ್ ನಮ್ಮವರು ಎಂದು ಜಗಳ ಮಾಡುತ್ತಿದ್ದ ಅವರ ಒಂದು ಬಳಗ ಲಂಕೇಶರ ಪಾಠವನ್ನೆ ಕೈಬಿಟ್ಟ ಲಾಟಿ ವೀರರ ಬಗ್ಗೆ ಚಕಾರವೆತ್ತಿಲ್ಲವಂತಲ್ಲಾ. ಇದಕ್ಕೂ ಕಾರಣವಿದೆ. ಲಂಕೇಶ್ ಎಂದೂ ತನ್ನ ಜಾತಿ ಬಗ್ಗೆ ಹೇಳಿಕೊಳ್ಳಲಿಲ್ಲ, ಸ್ವಜಾತಿಯವರಿಗೆ ಸಹಾಯ ಮಾಡಲಿಲ್ಲ, ಹತ್ತಿರವೂ ಸೇರಿಸಲಿಲ್ಲ. ಅದ್ದರಿಂದ ಇವರ ಮೌನ ಸಹಜವಾದುದೆ. ಆದರೆ ಲಂಕೇಶ್ ಸೃಷ್ಟಿಸಿ ಹೋಗಿದ್ದ ಜನ ಈಗ ಮೌನಿಗಳಾಗಿರುವ ಬಗ್ಗೆ ಕೇಳಿದಾಗ “ನೋಡ್ರಿ ಹೆಡಗೆವಾರಲ್ಲ, ಪೆಟ್ಟಿಗೆವಾರನ್ನ ಪಠ್ಯಕ್ಕೆ ಸೇರಿಸಿದರೂ ಏನೂ ಆಗಲ್ಲ. 1969-70ನೇ ಇಸವಿಲಿ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಎರಡೂ ವರ್ಷ ಪಠ್ಯ ಪುಸ್ತಕ ಮಾಡಿದ್ರು, ಏನಾಯ್ತು ಯಾವನಾದ್ರು ಒಬ್ಬ ಇಂಜಿನಿಯರ್ ಬಂದನೇ? ವಿಶ್ವೇಶ್ವರಯ್ಯನವರ ವಿಷಯ ಹೇಳುನೂ, ಅಂಗೆ ಈ ಹೆಡಗೆವಾರ್ ಲಾಟಿ ಲಡ್ಡಿದದು ಹೋಗುತ್ತೆ” ಎಂದರಲ್ಲಾ ಥೂತ್ತೇರಿ.


ಇದನ್ನೂ ಓದಿ:  ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...