Homeಅಂಕಣಗಳುವಿಮಾನ ನಿಲ್ದಾಣ ತೆರೆಯಿತು, ವಿ.ಐ.ಎಸ್.ಎಲ್ ಮುಚ್ಚಿತು

ವಿಮಾನ ನಿಲ್ದಾಣ ತೆರೆಯಿತು, ವಿ.ಐ.ಎಸ್.ಎಲ್ ಮುಚ್ಚಿತು

- Advertisement -
- Advertisement -

ಶಿವಮೊಗ್ಗದ ಕಡೆಯಿಂದ ಎರಡು ಸುದ್ದಿಗಳು ಬಂದಿವೆ. ಮೊದಲನೆಯದಾಗಿ ನಾಲ್ಕು ನೂರು ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ವೇಗವಾಗಿ ರೆಡಿಯಾಗಿದೆ. ಅದೇ ಟೈಮಿಗೆ ಸರಿಯಾಗಿ ನೂರು ವರ್ಷದ ಇತಿಹಾಸವಿರುವ ವಿಶ್ವೇಶ್ವರಯ್ಯ ಐರನ್ ಸ್ಟೀಲ್ ಕಂಪನಿ ಮುಚ್ಚುತ್ತಿದೆ. ವಿಶ್ವೇಶ್ವರಯ್ಯನವರೂ ಕೂಡ ನೂರು ವರ್ಷ ಬದುಕಿದ್ದರು. ಕಾರ್ಖಾನೆಗೂ ನೂರು ವರ್ಷ ತುಂಬಿದೆ. ಆದ್ರೂ ಯಾರೂ ಉಳಿಸಿಕೊಳ್ಳುವುದಕ್ಕಾಗಲಿಲ್ಲ ಎನ್ನುತ್ತಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ವೇಗದ ರೈಲು ಬಂದಿದೆ. ಕೇವಲ ಐದು ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಿಂದ ಬೆಂಗಳೂರು ತಲುಪುವ ರೈಲುಗಳಿವೆ. ಮನಸ್ಸು ಮಾಡಿದ್ದರೆ ಮೂರು ಗಂಟೆಯ ಅವಧಿಯಲ್ಲಿ ತಲುಪುವ ರೈಲು ತರಬಹುದಿತ್ತು. ಆಗ ವಿಮಾನ ನಿಲ್ದಾಣಕ್ಕೆ ಸುರಿಯುವ ನಾಲ್ಕು ನೂರು ಕೋಟಿಯನ್ನು ವಿ.ಐ.ಎಸ್.ಎಲ್‌ಗೆ ವಿನಿಯೋಗಿಸಿ ಸಾವಿರಾರು ಕಾರ್ಮಿಕರನ್ನು ಉಳಿಸಿಕೊಳ್ಳಬಹುದಿತ್ತು. ಆದರೇನು ಈ ರಾಜಕಾರಣಿಗಳಿಗೆ ಬಡವರ ಹೊಟ್ಟೆಗಿಂತ, ಅವರಿಂದ ದೂರವಿದ್ದು ಆಕಾಶದಲ್ಲಿ ಹಾರಾಡುವ ಚಪಲ. ಈಗಾಗಲೇ ಅರಗ ಜ್ಞಾನೇಂದ್ರರ ಮುಂದಾಳತ್ವದಲ್ಲಿ ಎಂ.ಪಿ.ಎಂ (ಮೈಸೂರ್ ಪೇಪರ್ ಮಿಲ್ಸ್) ಬಾಗಿ ಹಾಕಿ ಅದನ್ನು ಸ್ಮಾರಕವನ್ನಾಗಿಸಲಾಗಿದೆ ಈಗ ವಿ.ಐ.ಎಸ್.ಎಲ್ ಸರದಿ. ಅಂತೂ ಎಡೂರಪ್ಪನ ಕಾಲದಲ್ಲಿ ಭದ್ರಾವತಿಯ ಎರಡು ಪ್ರಮುಖ ಕಾರ್ಖಾನೆಗಳು ಗುಜರಿಯ ತಾಣವಾಗಿ ಹೋದವಲ್ಲಾ ಥೂತ್ತೇರಿ.

******

ಎಡೂರಪ್ಪ ಶಿವಮೊಗ್ಗಕ್ಕೆ ಹೋದ ಕೂಡಲೇ ಹೆಲಿಪ್ಯಾಡಿಗೆ ಓಡುವ ಮಾರಿಕೊಂಡ ಮಾಧ್ಯಮದವರು, ಅವರ ಹಿಂದೆಯೇ ಹೋಗಿ ಮನೆಯ ವರಾಂಡದಲ್ಲಿ ಠಳಾಯಿಸಿ ಎಡೂರಪ್ಪನವರ ಆತಿಥ್ಯ ಸ್ವೀಕರಿಸಿ ಅವರು ಊರು ಬಿಡುವವರೆಗೂ ಸುತ್ತುವರೆದಿದ್ದರೂ, ಅಪ್ಪಿತಪ್ಪಿ ವಿ.ಐ.ಎಸ್.ಎಲ್ ಕತೆ ಕೇಳಲಿಲ್ಲವಂತಲ್ಲಾ. ಹಾಳಾಗಿ ಹೋಗಲಿ ಭದ್ರಾವತಿಗಾದರೂ ಹೋಗಿ ಕೊನೆಯುಸಿರಿನ ಕಾರ್ಖಾನೆಯ ಅಂತಿಮ ದರ್ಶನ ಪಡೆಯಬಹುದಿತ್ತಲ್ಲಾ. ಏಕೆಂದರೆ ವಿ.ಐ.ಎಸ್.ಎಲ್‌ನ ಕಾರ್ಮಿಕರು ಬರಿ ಕಾರ್ಮಿಕರಾಗಿರಲಿಲ್ಲ. ನಮ್ಮ ಸಂಸ್ಕೃತಿಯ ವಕ್ತಾರರಾಗಿದ್ದರು. ಅವರು ಸ್ಥಾಪಿಸಿಕೊಂಡ ಸಂಘದಿಂದ ನಾಟಕ ಕಲಿತು ಆಡಿದರು, ಇಡೀ ನಾಡಿನಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತಂದರು. ಅವರಾಡಿದಂತೆ ಜೋಕುಮಾರಸ್ವಾಮಿ ಮತ್ತು ಹಯವದನ ನಾಟಕ ಇನ್ನಾರೂ ಆಡಲಿಲ್ಲ. ಕೆಲವರು ಸಿನಿಮಾಕ್ಕೂ ಹೋದರು. ನೂರು ವರ್ಷದಲ್ಲಿ ಭವ್ಯ ಇತಿಹಾಸ ಹೊಂದಿದ ವಿ.ಐ.ಎಸ್.ಎಲ್‌ಗೆ ಕಬ್ಬಿಣದ ಅದಿರಿನ ಕೊರತೆಯಿರಲಿಲ್ಲ. ನಮ್ಮ ನಾಡಿನ ಗಣಿ ಗುಡ್ಡಗಳು ಚೀನಾದಲ್ಲಿ ಶೇಖರಗೊಂಡಿರುವಾಗ ವಿ.ಐ.ಎಸ್.ಎಲ್‌ಗೆ ಅದಿರಿನ ಕೊರತೆಯಿತ್ತೇ? ಆದರೇನು, ನಮ್ಮ ರಾಜಕಾರಣಿಗಳು ಎಲ್ಲವನ್ನು ಸರ್ವನಾಶ ಮಾಡುತ್ತಿದ್ದಾರೆ. ಜನರ ಮನಸ್ಸನ್ನ ಬೇರೆಡೆಗೆ ತಿರುಗಿಸಲು ಉತ್ಸವ ಮಾಡುತ್ತಿದ್ದಾರೆ. ಇದೇ ಎಡೂರಪ್ಪನವರು ಮಾಡಿರುವ ದಾಖಲೆಗಳಲ್ಲಿ ಎಂ.ಪಿ.ಎಂ, ವಿ.ಐ.ಎಸ್.ಎಲ್ ಮುಳುಗಿ ಹೋದ ಘಟನೆಗಳೂ ಸೇರಿವೆಯಂತಲ್ಲಾ, ಥೂತ್ತೇರಿ.

*****

ಬ್ರಾಹ್ಮಣ್ಯದ ಕೈಗೆ ಸಿಕ್ಕಿ ಸಾವಿರಾರು ವರ್ಷದಿಂದ ಶೂದ್ರ ಸಮೂಹ ನರಳುತ್ತಿರುವಾಗ ಬ್ರಾಹ್ಮಣರು ಎಂದೂ ವಿಶ್ವಾಸದ್ರೋಹಿಗಳಲ್ಲ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥಸ್ವಾಮಿ ಘೋಷಿಸಿದ್ದಾರಲ್ಲಾ. ಈ ಬಗ್ಗೆ ಅವರನ್ನೇ ಕೇಳಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು. ರಿಂಗ್ ಟೋನ್, “ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ ತಪ್ಪನೊಡದೆ ಬಂದೆಯಾ…..”

“ಹಲೋ ಯಾರು?”

“ಸ್ವಾಮೀಜಿ, ನಾನು ಯಾಹು ಅಂತ ಪತ್ರಕರ್ತ.”

“ಪತ್ರಕರ್ತರು ಅಂದ ಮೇಲೆ ಪ್ರಶ್ನೆ ವುಂಟಲ್ಲಾ ಕೇಳಿ.”

“ಏನಿಲ್ಲ ತಾವು ಈಚೆಗೆ ಬ್ರಾಹ್ಮಣರು ವಿಶ್ವಾಸದ್ರೋಹಿಗಳಲ್ಲ ಅಂತ ಹೇಳೀದ್ದಿರಿ..”

“ಹೌದು ಹೇಳಿದ್ದೇನೆ.”

“ಈ ಮಾತು ಅಪರಾಧವಾಗುತ್ತೆ ಸ್ವಾಮಿ.”

“ಯಂತಕ್ಕೆ?”

“ನಮ್ಮ ಶ್ರೇಣೀಕರಣದ ವ್ಯವಸ್ಥೆಯಲ್ಲಿ ಬ್ರಾಹ್ಮಣ ಹಿಂದೂ ಧರ್ಮದ ಕಳಸ ಪ್ರಾಯವಾಗಿ ತುದೀಲಿದೆ, ಇನ್ನುಳಿದ ಜಾತಿಗಳು ಕೆಳಗಿವೆ. ಬ್ರಾಹ್ಮಣ ವಿಶ್ವಾಸದ್ರೋಹಿಯಲ್ಲ ಅಂದಕೂಡಲೇ ವಿಶ್ವಾಸದ್ರೋಹದ ಜಾತಿ ಹುಟ್ಟಿಕೊಳ್ಳುತ್ತೆ ಅದ್ಯಾವುದು ಅಂತ?”

“ನಾನು ನಮ್ಮ ಬ್ರಾಹ್ಮಣರ ಬಗ್ಗೆ ಹೇಳಿದ್ದು.”

“ಅದೇ ಸ್ವಾಮಿ ನೀವು ವಿಶ್ವಾಸಿಗರು ಅನ್ನದಾದ್ರೆ ವಿಶ್ವಾಸದ್ರೋಹಿಗಳು ಯಾರಾದರೂ ಇರಬೇಕಲ್ಲವ?”

“ಅದು ನಮಗೆ ಗೊತ್ತಿಲ್ಲ.”

“ಮತ್ತೆ ಬ್ರಾಹ್ಮಣ ಬುದ್ಧಿಶಕ್ತಿಯಿಂದ ಕೆಲಸ ಮಾಡ್ತನೆ ಅಂದಿದ್ದಿರಿ.”

“ಅದು ಹೌದು”

“ಹಾಗಾದರೆ ಉಳಿದವರು ಯಾವ ಶಕ್ತಿ ಬಳಸಿ ಕೆಲಸ ಮಾಡ್ತರೆ?”

“ಅದು ನನಗೆ ಗೊತ್ತಿಲ್ಲ.”

“ಅಂಬೇಡ್ಕರ್ ಯಾವ ಶಕ್ತಿ ಬಳಸಿ ಸಂವಿಧಾನ ಬರೆದರು?”

“ನಾನು ಹೇಳಿದ ಅರ್ಥ ಬೇರೆ.”

“ಯಾವ ಅರ್ಥನೂ ಇಲ್ಲ. ಬ್ರಾಹ್ಮಣ ವಿಶ್ವಾಸದ್ರೋಹಿಯಲ್ಲ, ಆತ ಬುದ್ಧಿಶಕ್ತಿಯಿಂದ ಕೆಲಸ ಮಾಡ್ತನೆ ಅನ್ನೊ ನಿಮ್ಮ ಮಾತನ್ನ ವಿಸ್ತರಿಸೋದಾದ್ರೆ ತನ್ನ ಬುದ್ಧಿಶಕ್ತಿಯಿಂದ ವಿಶ್ವಾಸದ್ರೋಹ ಕಾಣದಂಗೆ ಮಾಡ್ತನಲ್ಲವೆ?”

“ಇದು ಅತಿಯಾಯ್ತು.”

“ಇಲ್ಲ ಸ್ವಾಮಿ ಈ ರಾಷ್ಟ್ರದಲ್ಲಿ ವಿಶ್ವಾಸದ್ರೋಹ ಮಾಡಿದ ನೂರಾರು ಬ್ರಾಹ್ಮಣರ ಪಟ್ಟಿಕೊಡಬಲ್ಲೆ. ಆ ಪಟ್ಟಿ ವಳಗಡೆ ನಿಮ್ಮ ಉಡುಪಿ ಮಠದ ಯತಿಗಳೂ ಅವುರೆ. ರಾಮಚಂದ್ರಾಪುರ ಮಠದ ಯತಿಗಳಂತೂ ಮುಂಚೂಣಿಲವುರೆ. ರಾಜಕೀಯವಾಗಿ ನಿಮಗೆ ಉತ್ತರ ಕೊಡದಾದ್ರೆ ರಾಮಕೃಷ್ಣ ಹೆಗಡೆ ಬ್ರಾಹ್ಮಣರಲ್ಲವ?”

“ಅವರು ಹವ್ಯಕರು.”

“ಹವ್ಯಕ ಬ್ರಾಹ್ಮಣರು ಅನ್ನಿ. ಉಪಪಂಗಡದ ವಿಷಯ ತೆಗೆದು ನುಣುಚಿಕೊಬೇಡಿ.”

“ಇಲ್ಲ ಹೇಳಿ.”

“ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.”

“ಹೌದು ಆಗಿದ್ದರು.”

“ಚುನಾವಣೆಲಿ ದೇವೇಗೌಡ್ರು ಬಂಗಾರಪ್ಪ ಇಡೀ ನಾಡನ್ನ ತಿರುಗಿ ಅವರಿಗಾಗಿ ಮತ ಕೇಳಿದ್ರು.”

“ನನಗೆ ಗೊತ್ತಿಲ್ಲ.”

“ಅದಕ್ಕೆ ಐತಿಹಾಸಿಕ ದಾಖಲೆಗಳಿವೆ ಕೇಳಿ. ಆಗ ಜನತಾರಂಗ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿ ಆಯ್ಕೆ ಮಾಡುವಾಗ ಹೆಗಡೆ ಮುಂಚೂಣಿಗೆ ಬಂದ್ರು.”

“ಅವರ ಬುದ್ಧಿಶಕ್ತಿ ದೊಡ್ಡದಿತ್ತು. ಅದಕ್ಕೆ ಬಂದರು.”

“ಆಯ್ತು ಅವರ ಬುದ್ಧಿಶಕ್ತಿ ಬಗ್ಗೆ ಎಲ್ಲರಿಗೂ ಗೌರವ ಇತ್ತು. ಆಗ ಭಾರತದ ಪಾದಯಾತ್ರೆ ಮಾಡುತಿದ್ದ ಚಂದ್ರಶೇಖರ್ ಕರ್ನಾಟಕವನ್ನ ಸರಿದಾರಿಗೆ ತಂದು ಕೇಂದ್ರಕ್ಕೆ ಬನ್ನಿ. ದೇವೇಗೌಡರನ್ನ ಚೆನ್ನಾಗಿ ನೋಡಿಕೊಳ್ಳಿ ಅಂತ ಹೇಳಿದ್ರು.”

“ನನಗೆ ಗೊತ್ತಿಲ್ಲ.”

“ಗೊತ್ತಿಲ್ಲ ಅಂದ್ರೆ ಕೇಳಿ; ಮುಂದೆ ನಿಮ್ಮ ಹೆಗಡೆ ದೇವೇಗೌಡರ ವಿರುದ್ದ ಪಿತೂರಿ ಮಾಡಿ ಅವರ ವಿರುದ್ಧ ತನಿಖಾ ಆಯೋಗ ಮಾಡಿದ್ರು.”

“ಇದೂ ಕೂಡ ನನಗೆ ಗೊತ್ತಿಲ್ಲ.”

“ಗೊತ್ತಿಲ್ಲದ ಮ್ಯಾಲೆ ಸಾರಾಸಗಟು ನಮ್ಮವರು ದ್ರೋಹಿಗಳಲ್ಲ ಅಂತ ಯಾಕೆ ಪ್ರವಚನ ಕೊಡ್ತೀರಿ? ನಿಮ್ಮ ಕೆಲವು ಮಠಗಳಲ್ಲಿರೋ ಕಾಮುಕರು ಗೋಮುಖರು ಏನೇನು ಮಾಡ್ತ ಅವುರೆ ಅಂತ ದಾಖಲೆ ಕೊಡ್ಲಾ?”

“ನಮಗೆ ಯಂತಕ್ಕೆ ಅದು?”

“ಇರಲಿ, ಮುಂದೆ ನೋಡಿಕಂಡು ಮಾತಾಡಿ. ಒಳ್ಳೆಯ ನಡವಳಿಕೆ ಯಾವ ಜನಾಂಗದ ಸೊತ್ತು ಅಲ್ಲ, ಹಾಗೇನೆ ನೀಚತನವೂ ಯಾವ ಜನಾಂಗದ ಸೊತ್ತೂ ಅಲ್ಲ. ಎಲ್ಲ ಜಾತಿಗಳಲ್ಲಿ ಒಳ್ಳೆತನ ಕೆಟ್ಟತನ ಸಮಾನವಾಗಿರತ್ತೆ. ಕಾಲಮಾನದ ಕಾರಣಕ್ಕೆ ಕೆಟ್ಟತನ ಎಲ್ಲರಲ್ಲೂ ಜಾಸ್ತಿಯಾಗ್ತಾ ಇದೆ. ಇದಕ್ಕೆ ಕಾರಣವನ್ನು ನಿಮ್ಮಂತವರು ಕಂಡು ಹಿಡಿಯಬೇಕು, ಅದು ಬಿಟ್ಟು ನಮ್ಮವರು ಸತ್ಯವಂತರು, ನೀತಿವಂತರು, ಧರ್ಮವಂತರು, ಬುದ್ಧಿವಂತರು ಅಂತ ಬೊಬ್ಬೆ ಹೊಡದ್ರೆ ನೀವು ಹಾಸ್ಯಾಸ್ಪದವಾಗ್ತೀರಿ. ರಿಪೇರಿ ಸಾಧ್ಯವಾಗದ ಸ್ಥಿತಿ ತಲುಪ್ತಿರಿ.”

“ಜಗದ್ಗುರುಗಳಿಗೆ ಹೀಗೆ ಹೇಳುವುದು ಬೇಡ.”

“ತಮ್ಮದ್ಯಾವ ಜಗತ್ತೂ!”

ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...