Homeಮುಖಪುಟಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

ಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

- Advertisement -
- Advertisement -

ಪ್ರಸಕ್ತವಾಗಿ ಹಲವು ಪಕ್ಷಗಳು ನಡೆಸುತ್ತಿರುವ ಧರ್ಮ ರಾಜಕಾರಣಗಳು ನಿಜ ಭಾರತವನ್ನು ಅಕ್ಷರಶಃ ಕೊಂದುಹಾಕುತ್ತಿವೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಜನರಲ್ಲಿ ನೆಲೆಸಿದ್ದ ಒಗ್ಗಟ್ಟನ್ನು ಹಳ್ಳಿಹಳ್ಳಿಗಳಲ್ಲೂ ಒಡೆದು ಎಲ್ಲೆಲ್ಲೂ ಆತಂಕದ ಕರಿಛಾಯೆ ಏಳಲು ಕಾರಣೀಕರ್ತರಾಗಿದ್ದಾರೆ. ಇಡೀ ದೇಶಾದ್ಯಂತ ’ಸಾಮರಸ್ಯ’ ಎಂಬುದು ಬರೇ ಚಂದದ ನುಡಿಗಟ್ಟಾಗಿ ಮಾತ್ರ ಉಳಿದಿರುವ ಈ ದಿನಮಾನಗಳಲ್ಲಿ ಹನುಮಂತ ಹಾಲಿಗೇರಿಯವರ ರಚನೆಯ, ಸಿದ್ದರಾಮ ಕೊಪ್ಪರ ನಿರ್ದೇಶನದ ’ಅಲೈದೇವ್ರು’ ನಾಟಕವು ಸಾಮರಸ್ಯದ ಬದುಕು ಇಂದಿನ ತುರ್ತು ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗದ ಕುಪ್ಪಳಿಯಲ್ಲಿ ’ದೇಶಕ್ಕಾಗಿ ನಾವು’ ಸಂಘಟನೆ ಹಮ್ಮಿಕೊಂಡಿದ್ದ ಯುವಜನರ ಅಧ್ಯಯನ ಶಿಬಿರದಲ್ಲಿ ಬೆಂಗಳೂರಿನ ಜನರಂಗ ತಂಡವು ಈ ನಾಟಕವನ್ನು ಪ್ರಸ್ತುತಪಡಿಸಿತು. ಒಂದು ಮುಕ್ಕಾಲು ಗಂಟೆಯ ಈ ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿಕೊಂಡಿರುವ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಕಟ, ನೋವು, ಅಭದ್ರತೆ, ಸಿಟ್ಟು, ಸೆಡವು, ವ್ಯಂಗ್ಯ, ಆಕ್ರೋಶಗಳನ್ನು ತಂಡದ ನಟರು ಪ್ರೇಕ್ಷಕರಿಗೆ ದಾಟಿಸಿ, ಅವರ ಕಣ್ಣುಗಳು ತೇವಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ವರ್ತಮಾನದ ರಾಜಕೀಯ ಹುನ್ನಾರಗಳಾದ ಪೌರತ್ವ ಕಾಯ್ದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವುಗಳು ಕುರಿತು ಎಲ್ಲೂ ಅಂತಿಮ ತೀರ್ಪನ್ನು ನೀಡದೇ, ಅಗ್ರೆಸಿವ್ ದಾರಿಯನ್ನು ಹಿಡಿಯದೇ, ಎರಡೂ ಮಗ್ಗಲುಗಳಿಂದ ಸಂವಾದ ನಡೆಸುವ ಶೈಲಿಯ ನಿರೂಪಣಾ ತಂತ್ರವನ್ನು ನಾಟಕ ಅನುಸರಿಸಿದ್ದು ವಿಶೇಷವಾಗಿತ್ತು.

ವರ್ಷವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಜನಾಂಗಗಳೆರಡೂ ಒಟ್ಟಾಗಿ ನಡೆಸುತ್ತಿದ್ದ ಊರಿನ ಜನಪದ ಮೊಹರಂ (ಅಲೈದೇವ್ರ ಹಬ್ಬ) ಹಬ್ಬವನ್ನು ಎರಡೂ ಕಡೆಯ ಮೂಲಭೂತವಾದಿಗಳಿಂದಾಗಿ ನಿಲ್ಲಿಸಲು ಶತಾಯಗತಾಯ ಪ್ರಯತ್ನಿಸಲಾಗುತ್ತದೆ. ಜನರು ಜಾಗೃತವಾಗಿದ್ದರೆ ಇಂತಹ ಒಡಕು ಎಬ್ಬಿಸುವ ಪ್ರಯತ್ನಗಳು ವಿಫಲವಾಗುತ್ತವೆ ಎಂಬ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಈ ನಾಟಕದಲ್ಲಿ ಎಲ್ಲಿಯೂ ಯಾವುದೇ ಒಂದು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ. ನಮ್ಮ ಹಳ್ಳಿಹಳ್ಳಿಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡಲು ಕಾರಣಗಳು ಯಾವುವು, ಅದರ ಹಿಂದಿರುವ ಶಕ್ತಿಗಳಾವವು, ಅವುಗಳ ಮುಖವಾಡಗಳೇನು ಎಂಬುದನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಜನರ ಬಾಹುಳ್ಯ ಪ್ರದೇಶಗಳಲ್ಲಿ ’ಯಾವಾಗ ಎಲ್ಲಿ ಗಲಾಟೆ-ಗಲಭೆಗಳಾಗಿಬಿಡುತ್ತವೋ’ ಎಂಬ ಆತಂಕ ಮಡುಗಟ್ಟಿದೆ. ಅವುಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಎರಡೂ ಕಡೆಯಲ್ಲಿರುವ ಅತಿರೇಕದ ಧಾರ್ಮಿಕ ವಾದಿಗಳ ತೆವಲುಗಳಲ್ಲಿ ನಿರುಪದ್ರವಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನುಷ್ಯ ಸಹಜ ಪ್ರೀತಿಯೂ ಧರ್ಮದ ಬಣ್ಣ ಬಳಿದುಕೊಳ್ಳುತ್ತಿದೆ. ಇಂತಹ ವಿಷಮ ದಿನಗಳ ತಲ್ಲಣಗಳನ್ನು ’ಅಲೈದೇವ್ರು’ ಒಂದು ಕಥೆಯಾಗಿ-ನಾಟಕ ಪ್ರದರ್ಶನವಾಗಿ ಸಮರ್ಥವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ರಂಗ ಪ್ರಯೋಗದ ದೃಷ್ಟಿಯಲ್ಲಿ ಇದು ಸಾಕಷ್ಟು ಮಾಗಬೇಕಿದೆ. ನಾಟಕದ ಕಂಟೆಂಟ್ ಮತ್ತು ಅವಧಿಯನ್ನು ಗಮನವಿಟ್ಟುಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಬೇಕಿದೆ. ಸಣ್ಣಪುಟ್ಟ ಮಿತಿಗಳನ್ನು ಸರಿಪಡಿಸಿಕೊಂಡರೆ ಈ ನಾಟಕ ಈ ಕಾಲದ ಒಂದೊಳ್ಳೆ ಪ್ರಯತ್ನವೆನಿಸಿಕೊಳ್ಳದೆ ಇರದು. ಜೊತೆಗೆ ಇಂದು ಕೋಮು ವೈಷಮ್ಯದ ರೋಗಗಳಿಗೆ ಮದ್ದಾಗುವುದಕ್ಕೂ ಸಾಧ್ಯವಿದೆ.

ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಕೆಲವು ಮೂಲಭೂತವಾದಿಗಳಿಂದ ಅಪಸ್ವರ ಕೇಳಿಬಂದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಕಾರಣದಿಂದಾಗಿ ಬಹುಶಃ ಧಾರ್ಮಿಕ ಸೂಕ್ಷ್ಮ ಪ್ರದೇಶಗಳೆಂದು ಕರೆಸಿಕೊಳ್ಳುವ ಊರುಗಳಲ್ಲಿ ಇದರ ಪ್ರದರ್ಶನಕ್ಕೆ ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅಂತಹ ಪ್ರದೇಶಗಳಲ್ಲಿಯೇ ಇದು ಹೆಚ್ಚಚ್ಚು ಪ್ರದರ್ಶನಗೊಳ್ಳಬೇಕಿರುವ ಅಗತ್ಯವಿದೆ. ಎಲ್ಲಿ ಗಾಯವಾಗಿದೆಯೋ ಅಲ್ಲಿಯೇ ಮುಲಾಮು ಹಚ್ಚಬೇಕಾದುದು ಅನಿವಾರ್ಯ.

ಸಮಾಜದ ಬಹುಪಾಲು ಸಹೃದಯರು ಧಾರ್ಮಿಕ ಸಾಮರಸ್ಯದ ವಿಚಾರದಲ್ಲಿ ಜಾಣಮೌನ ವಹಿಸುವಾಗ, ಪರಸ್ಪರ ಅರಿತು ಬಾಳಬೇಕಾದ ಅಗತ್ಯಗಳನ್ನು ಗಟ್ಟಿಯಾಗಿ ಮಾತನಾಡದಿರುವಾಗ ಈ ಹೊತ್ತಿನ ತಲ್ಲಣವೊಂದನ್ನು ಇಷ್ಟು ಚಂದವಾಗಿ ಮತ್ತು ನೇರಾನೇರ ಹೇಳುವ ಧೈರ್ಯ ತೋರಿರುವ ರಂಗತಂಡಕ್ಕೆ ಅಭಿನಂದನೆಗಳು.

ಈ ಮಾತೊಂದನ್ನು ಹೇಳಲೇಬೇಕಿದೆಯೆನಿಸುತ್ತಿದೆ. ನಮ್ಮ ನಮ್ಮ ಜಾತಿ-ಮತಗಳನ್ನು ಮನೆಗಷ್ಟೇ
ಸೀಮಿತಗೊಳಿಸಿಕೊಳ್ಳಬೇಕಾಗಿರುವುದು ಶಾಂತಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತೀ ಅಗತ್ಯ. ಇದನ್ನು ಅರ್ಥಮಾಡಿಕೊಳ್ಳದೇ ಪರಸ್ಪರ ಬಡಿದಾಡುತ್ತಿದ್ದರೆ ಮುಂದೆ ಯಾರೂ ಉಳಿಯಲಾರರು. ’ಸಿರಿಯಾ’ದಂತಹ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಅದೆಷ್ಟರಮಟ್ಟಿಗೆ ಮುಗ್ಧಜೀವಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ, ಅಲ್ಲಿನ ಸಾಮಾನ್ಯ ಜನರ ಬದುಕು ಅದೆಷ್ಟು ದಾರುಣವಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಈ ಉದಾಹರಣೆಗಳಿಂದ ಎಚ್ಚೆತ್ತುಕೊಂಡು, ಭಾರತದ ಎಳೆಯ ಮತ್ತು ಯುವ ಮನಸ್ಸುಗಳಲ್ಲಿ ಅಗತ್ಯವಾಗಿ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಬೇಕಿದೆ. ಮತೀಯ ಶಕ್ತಿಗಳ ಕುಟಿಲತೆಗಳು ಹೊಸ ತಲೆಮಾರಿಗೆ ಅರ್ಥವಾಗಬೇಕಿರುವುದು ಇಂದಿನ ಜರೂರತ್ತಾಗಿದೆ. ಧಾರ್ಮಿಕ ಸಾಮರಸ್ಯವನ್ನು ಪುನರ್ ಕಟ್ಟುವ ದೃಷ್ಟಿಯಿಂದ ’ಅಲೈದೇವ್ರು’ ನಾಟಕ ಮಹತ್ವದ್ದಾಗಿ ಕಾಣುತ್ತದೆ.

ನಾಗರಾಜ ಕೂವೆ
ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗಾರಾಜ ಅವರ ’ಕೈತುತ್ತು- ಭಾವನೆಗಳ ಹೊತ್ತು’, ’ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…’ ಎಂಬ ಪುಸ್ತಕಗಳು ಪ್ರಕಟವಾಗಿವೆ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ತಿರುಗಾಟ ಇವರ ಹವ್ಯಾಸಗಳು.


ಇದನ್ನೂ ಓದಿ: ಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಟಕ ಪ್ರದರ್ಶನ ಹಲವು ಮಿತಿಯಿಂದ ಕೂಡಿದೆ. ನಟರು ಪಾತ್ರದಿಂದ ದೂರವೇ ಉಳಿದಿದ್ದಾರೆ. ವಸ್ತು ಸನ್ನಿವೇಶ ವಿನ್ಯಾಸದಲ್ಲಿ ನಿರ್ದೇಶಕರು ಗಮನಹರಿಸಿಲ್ಲ. ನಟರಿಗೆ ಸ್ಪಷ್ಟತೆಯ ಕೊರತೆ ಇದೆ. ಹಲವಾರು ಸಂಭಾಷಣೆ ಮಿಸ್ ಆಗುತ್ತದೆ. ರಂಗಪರಿಕರಗಳ ಬಳಕೆಯಲ್ಲಿ ಗೊಂದಲ ಉಂಟಾಗಿದೆ. ತಾಲೀಮಿನ ಅವಶ್ಯಕತೆ ಇದೆ. ಕೆಲವು ದೃಶ್ಯಗಳನ್ನು ಚೂಯಿಂಗ್ ಗಮ್ಮಿನಂತೆ ಎಳೆಯಲಾಗಿದೆ. ದೃಶ್ಯ ಸಂಯೋಜನೆ ಇಲ್ಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...