Homeಮುಖಪುಟಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

ಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

- Advertisement -
- Advertisement -

ಪ್ರಸಕ್ತವಾಗಿ ಹಲವು ಪಕ್ಷಗಳು ನಡೆಸುತ್ತಿರುವ ಧರ್ಮ ರಾಜಕಾರಣಗಳು ನಿಜ ಭಾರತವನ್ನು ಅಕ್ಷರಶಃ ಕೊಂದುಹಾಕುತ್ತಿವೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಜನರಲ್ಲಿ ನೆಲೆಸಿದ್ದ ಒಗ್ಗಟ್ಟನ್ನು ಹಳ್ಳಿಹಳ್ಳಿಗಳಲ್ಲೂ ಒಡೆದು ಎಲ್ಲೆಲ್ಲೂ ಆತಂಕದ ಕರಿಛಾಯೆ ಏಳಲು ಕಾರಣೀಕರ್ತರಾಗಿದ್ದಾರೆ. ಇಡೀ ದೇಶಾದ್ಯಂತ ’ಸಾಮರಸ್ಯ’ ಎಂಬುದು ಬರೇ ಚಂದದ ನುಡಿಗಟ್ಟಾಗಿ ಮಾತ್ರ ಉಳಿದಿರುವ ಈ ದಿನಮಾನಗಳಲ್ಲಿ ಹನುಮಂತ ಹಾಲಿಗೇರಿಯವರ ರಚನೆಯ, ಸಿದ್ದರಾಮ ಕೊಪ್ಪರ ನಿರ್ದೇಶನದ ’ಅಲೈದೇವ್ರು’ ನಾಟಕವು ಸಾಮರಸ್ಯದ ಬದುಕು ಇಂದಿನ ತುರ್ತು ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗದ ಕುಪ್ಪಳಿಯಲ್ಲಿ ’ದೇಶಕ್ಕಾಗಿ ನಾವು’ ಸಂಘಟನೆ ಹಮ್ಮಿಕೊಂಡಿದ್ದ ಯುವಜನರ ಅಧ್ಯಯನ ಶಿಬಿರದಲ್ಲಿ ಬೆಂಗಳೂರಿನ ಜನರಂಗ ತಂಡವು ಈ ನಾಟಕವನ್ನು ಪ್ರಸ್ತುತಪಡಿಸಿತು. ಒಂದು ಮುಕ್ಕಾಲು ಗಂಟೆಯ ಈ ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿಕೊಂಡಿರುವ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಕಟ, ನೋವು, ಅಭದ್ರತೆ, ಸಿಟ್ಟು, ಸೆಡವು, ವ್ಯಂಗ್ಯ, ಆಕ್ರೋಶಗಳನ್ನು ತಂಡದ ನಟರು ಪ್ರೇಕ್ಷಕರಿಗೆ ದಾಟಿಸಿ, ಅವರ ಕಣ್ಣುಗಳು ತೇವಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ವರ್ತಮಾನದ ರಾಜಕೀಯ ಹುನ್ನಾರಗಳಾದ ಪೌರತ್ವ ಕಾಯ್ದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವುಗಳು ಕುರಿತು ಎಲ್ಲೂ ಅಂತಿಮ ತೀರ್ಪನ್ನು ನೀಡದೇ, ಅಗ್ರೆಸಿವ್ ದಾರಿಯನ್ನು ಹಿಡಿಯದೇ, ಎರಡೂ ಮಗ್ಗಲುಗಳಿಂದ ಸಂವಾದ ನಡೆಸುವ ಶೈಲಿಯ ನಿರೂಪಣಾ ತಂತ್ರವನ್ನು ನಾಟಕ ಅನುಸರಿಸಿದ್ದು ವಿಶೇಷವಾಗಿತ್ತು.

ವರ್ಷವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಜನಾಂಗಗಳೆರಡೂ ಒಟ್ಟಾಗಿ ನಡೆಸುತ್ತಿದ್ದ ಊರಿನ ಜನಪದ ಮೊಹರಂ (ಅಲೈದೇವ್ರ ಹಬ್ಬ) ಹಬ್ಬವನ್ನು ಎರಡೂ ಕಡೆಯ ಮೂಲಭೂತವಾದಿಗಳಿಂದಾಗಿ ನಿಲ್ಲಿಸಲು ಶತಾಯಗತಾಯ ಪ್ರಯತ್ನಿಸಲಾಗುತ್ತದೆ. ಜನರು ಜಾಗೃತವಾಗಿದ್ದರೆ ಇಂತಹ ಒಡಕು ಎಬ್ಬಿಸುವ ಪ್ರಯತ್ನಗಳು ವಿಫಲವಾಗುತ್ತವೆ ಎಂಬ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಈ ನಾಟಕದಲ್ಲಿ ಎಲ್ಲಿಯೂ ಯಾವುದೇ ಒಂದು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ. ನಮ್ಮ ಹಳ್ಳಿಹಳ್ಳಿಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡಲು ಕಾರಣಗಳು ಯಾವುವು, ಅದರ ಹಿಂದಿರುವ ಶಕ್ತಿಗಳಾವವು, ಅವುಗಳ ಮುಖವಾಡಗಳೇನು ಎಂಬುದನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಜನರ ಬಾಹುಳ್ಯ ಪ್ರದೇಶಗಳಲ್ಲಿ ’ಯಾವಾಗ ಎಲ್ಲಿ ಗಲಾಟೆ-ಗಲಭೆಗಳಾಗಿಬಿಡುತ್ತವೋ’ ಎಂಬ ಆತಂಕ ಮಡುಗಟ್ಟಿದೆ. ಅವುಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಎರಡೂ ಕಡೆಯಲ್ಲಿರುವ ಅತಿರೇಕದ ಧಾರ್ಮಿಕ ವಾದಿಗಳ ತೆವಲುಗಳಲ್ಲಿ ನಿರುಪದ್ರವಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನುಷ್ಯ ಸಹಜ ಪ್ರೀತಿಯೂ ಧರ್ಮದ ಬಣ್ಣ ಬಳಿದುಕೊಳ್ಳುತ್ತಿದೆ. ಇಂತಹ ವಿಷಮ ದಿನಗಳ ತಲ್ಲಣಗಳನ್ನು ’ಅಲೈದೇವ್ರು’ ಒಂದು ಕಥೆಯಾಗಿ-ನಾಟಕ ಪ್ರದರ್ಶನವಾಗಿ ಸಮರ್ಥವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ರಂಗ ಪ್ರಯೋಗದ ದೃಷ್ಟಿಯಲ್ಲಿ ಇದು ಸಾಕಷ್ಟು ಮಾಗಬೇಕಿದೆ. ನಾಟಕದ ಕಂಟೆಂಟ್ ಮತ್ತು ಅವಧಿಯನ್ನು ಗಮನವಿಟ್ಟುಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಬೇಕಿದೆ. ಸಣ್ಣಪುಟ್ಟ ಮಿತಿಗಳನ್ನು ಸರಿಪಡಿಸಿಕೊಂಡರೆ ಈ ನಾಟಕ ಈ ಕಾಲದ ಒಂದೊಳ್ಳೆ ಪ್ರಯತ್ನವೆನಿಸಿಕೊಳ್ಳದೆ ಇರದು. ಜೊತೆಗೆ ಇಂದು ಕೋಮು ವೈಷಮ್ಯದ ರೋಗಗಳಿಗೆ ಮದ್ದಾಗುವುದಕ್ಕೂ ಸಾಧ್ಯವಿದೆ.

ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಕೆಲವು ಮೂಲಭೂತವಾದಿಗಳಿಂದ ಅಪಸ್ವರ ಕೇಳಿಬಂದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಕಾರಣದಿಂದಾಗಿ ಬಹುಶಃ ಧಾರ್ಮಿಕ ಸೂಕ್ಷ್ಮ ಪ್ರದೇಶಗಳೆಂದು ಕರೆಸಿಕೊಳ್ಳುವ ಊರುಗಳಲ್ಲಿ ಇದರ ಪ್ರದರ್ಶನಕ್ಕೆ ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅಂತಹ ಪ್ರದೇಶಗಳಲ್ಲಿಯೇ ಇದು ಹೆಚ್ಚಚ್ಚು ಪ್ರದರ್ಶನಗೊಳ್ಳಬೇಕಿರುವ ಅಗತ್ಯವಿದೆ. ಎಲ್ಲಿ ಗಾಯವಾಗಿದೆಯೋ ಅಲ್ಲಿಯೇ ಮುಲಾಮು ಹಚ್ಚಬೇಕಾದುದು ಅನಿವಾರ್ಯ.

ಸಮಾಜದ ಬಹುಪಾಲು ಸಹೃದಯರು ಧಾರ್ಮಿಕ ಸಾಮರಸ್ಯದ ವಿಚಾರದಲ್ಲಿ ಜಾಣಮೌನ ವಹಿಸುವಾಗ, ಪರಸ್ಪರ ಅರಿತು ಬಾಳಬೇಕಾದ ಅಗತ್ಯಗಳನ್ನು ಗಟ್ಟಿಯಾಗಿ ಮಾತನಾಡದಿರುವಾಗ ಈ ಹೊತ್ತಿನ ತಲ್ಲಣವೊಂದನ್ನು ಇಷ್ಟು ಚಂದವಾಗಿ ಮತ್ತು ನೇರಾನೇರ ಹೇಳುವ ಧೈರ್ಯ ತೋರಿರುವ ರಂಗತಂಡಕ್ಕೆ ಅಭಿನಂದನೆಗಳು.

ಈ ಮಾತೊಂದನ್ನು ಹೇಳಲೇಬೇಕಿದೆಯೆನಿಸುತ್ತಿದೆ. ನಮ್ಮ ನಮ್ಮ ಜಾತಿ-ಮತಗಳನ್ನು ಮನೆಗಷ್ಟೇ
ಸೀಮಿತಗೊಳಿಸಿಕೊಳ್ಳಬೇಕಾಗಿರುವುದು ಶಾಂತಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತೀ ಅಗತ್ಯ. ಇದನ್ನು ಅರ್ಥಮಾಡಿಕೊಳ್ಳದೇ ಪರಸ್ಪರ ಬಡಿದಾಡುತ್ತಿದ್ದರೆ ಮುಂದೆ ಯಾರೂ ಉಳಿಯಲಾರರು. ’ಸಿರಿಯಾ’ದಂತಹ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಅದೆಷ್ಟರಮಟ್ಟಿಗೆ ಮುಗ್ಧಜೀವಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ, ಅಲ್ಲಿನ ಸಾಮಾನ್ಯ ಜನರ ಬದುಕು ಅದೆಷ್ಟು ದಾರುಣವಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಈ ಉದಾಹರಣೆಗಳಿಂದ ಎಚ್ಚೆತ್ತುಕೊಂಡು, ಭಾರತದ ಎಳೆಯ ಮತ್ತು ಯುವ ಮನಸ್ಸುಗಳಲ್ಲಿ ಅಗತ್ಯವಾಗಿ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಬೇಕಿದೆ. ಮತೀಯ ಶಕ್ತಿಗಳ ಕುಟಿಲತೆಗಳು ಹೊಸ ತಲೆಮಾರಿಗೆ ಅರ್ಥವಾಗಬೇಕಿರುವುದು ಇಂದಿನ ಜರೂರತ್ತಾಗಿದೆ. ಧಾರ್ಮಿಕ ಸಾಮರಸ್ಯವನ್ನು ಪುನರ್ ಕಟ್ಟುವ ದೃಷ್ಟಿಯಿಂದ ’ಅಲೈದೇವ್ರು’ ನಾಟಕ ಮಹತ್ವದ್ದಾಗಿ ಕಾಣುತ್ತದೆ.

ನಾಗರಾಜ ಕೂವೆ
ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗಾರಾಜ ಅವರ ’ಕೈತುತ್ತು- ಭಾವನೆಗಳ ಹೊತ್ತು’, ’ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…’ ಎಂಬ ಪುಸ್ತಕಗಳು ಪ್ರಕಟವಾಗಿವೆ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ತಿರುಗಾಟ ಇವರ ಹವ್ಯಾಸಗಳು.


ಇದನ್ನೂ ಓದಿ: ಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಟಕ ಪ್ರದರ್ಶನ ಹಲವು ಮಿತಿಯಿಂದ ಕೂಡಿದೆ. ನಟರು ಪಾತ್ರದಿಂದ ದೂರವೇ ಉಳಿದಿದ್ದಾರೆ. ವಸ್ತು ಸನ್ನಿವೇಶ ವಿನ್ಯಾಸದಲ್ಲಿ ನಿರ್ದೇಶಕರು ಗಮನಹರಿಸಿಲ್ಲ. ನಟರಿಗೆ ಸ್ಪಷ್ಟತೆಯ ಕೊರತೆ ಇದೆ. ಹಲವಾರು ಸಂಭಾಷಣೆ ಮಿಸ್ ಆಗುತ್ತದೆ. ರಂಗಪರಿಕರಗಳ ಬಳಕೆಯಲ್ಲಿ ಗೊಂದಲ ಉಂಟಾಗಿದೆ. ತಾಲೀಮಿನ ಅವಶ್ಯಕತೆ ಇದೆ. ಕೆಲವು ದೃಶ್ಯಗಳನ್ನು ಚೂಯಿಂಗ್ ಗಮ್ಮಿನಂತೆ ಎಳೆಯಲಾಗಿದೆ. ದೃಶ್ಯ ಸಂಯೋಜನೆ ಇಲ್ಲ.

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...