Homeಮುಖಪುಟಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

ಸಾಮರಸ್ಯದ ಅಗತ್ಯವನ್ನು ಕಟ್ಟಿಕೊಡುವ ’ಅಲೈದೇವ್ರು’ ನಾಟಕ

- Advertisement -
- Advertisement -

ಪ್ರಸಕ್ತವಾಗಿ ಹಲವು ಪಕ್ಷಗಳು ನಡೆಸುತ್ತಿರುವ ಧರ್ಮ ರಾಜಕಾರಣಗಳು ನಿಜ ಭಾರತವನ್ನು ಅಕ್ಷರಶಃ ಕೊಂದುಹಾಕುತ್ತಿವೆ. ಕೋಮುವಾದಿಗಳು ಮತ್ತು ಮೂಲಭೂತವಾದಿಗಳು ಜನರಲ್ಲಿ ನೆಲೆಸಿದ್ದ ಒಗ್ಗಟ್ಟನ್ನು ಹಳ್ಳಿಹಳ್ಳಿಗಳಲ್ಲೂ ಒಡೆದು ಎಲ್ಲೆಲ್ಲೂ ಆತಂಕದ ಕರಿಛಾಯೆ ಏಳಲು ಕಾರಣೀಕರ್ತರಾಗಿದ್ದಾರೆ. ಇಡೀ ದೇಶಾದ್ಯಂತ ’ಸಾಮರಸ್ಯ’ ಎಂಬುದು ಬರೇ ಚಂದದ ನುಡಿಗಟ್ಟಾಗಿ ಮಾತ್ರ ಉಳಿದಿರುವ ಈ ದಿನಮಾನಗಳಲ್ಲಿ ಹನುಮಂತ ಹಾಲಿಗೇರಿಯವರ ರಚನೆಯ, ಸಿದ್ದರಾಮ ಕೊಪ್ಪರ ನಿರ್ದೇಶನದ ’ಅಲೈದೇವ್ರು’ ನಾಟಕವು ಸಾಮರಸ್ಯದ ಬದುಕು ಇಂದಿನ ತುರ್ತು ಅಗತ್ಯ ಎಂಬುದನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.

ಶಿವಮೊಗ್ಗದ ಕುಪ್ಪಳಿಯಲ್ಲಿ ’ದೇಶಕ್ಕಾಗಿ ನಾವು’ ಸಂಘಟನೆ ಹಮ್ಮಿಕೊಂಡಿದ್ದ ಯುವಜನರ ಅಧ್ಯಯನ ಶಿಬಿರದಲ್ಲಿ ಬೆಂಗಳೂರಿನ ಜನರಂಗ ತಂಡವು ಈ ನಾಟಕವನ್ನು ಪ್ರಸ್ತುತಪಡಿಸಿತು. ಒಂದು ಮುಕ್ಕಾಲು ಗಂಟೆಯ ಈ ನಾಟಕದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವೆನಿಸಿಕೊಂಡಿರುವ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರ ಸಂಕಟ, ನೋವು, ಅಭದ್ರತೆ, ಸಿಟ್ಟು, ಸೆಡವು, ವ್ಯಂಗ್ಯ, ಆಕ್ರೋಶಗಳನ್ನು ತಂಡದ ನಟರು ಪ್ರೇಕ್ಷಕರಿಗೆ ದಾಟಿಸಿ, ಅವರ ಕಣ್ಣುಗಳು ತೇವಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ವರ್ತಮಾನದ ರಾಜಕೀಯ ಹುನ್ನಾರಗಳಾದ ಪೌರತ್ವ ಕಾಯ್ದೆ, ಲವ್ ಜಿಹಾದ್, ಗೋಹತ್ಯೆ ನಿಷೇಧ ಮುಂತಾದವುಗಳು ಕುರಿತು ಎಲ್ಲೂ ಅಂತಿಮ ತೀರ್ಪನ್ನು ನೀಡದೇ, ಅಗ್ರೆಸಿವ್ ದಾರಿಯನ್ನು ಹಿಡಿಯದೇ, ಎರಡೂ ಮಗ್ಗಲುಗಳಿಂದ ಸಂವಾದ ನಡೆಸುವ ಶೈಲಿಯ ನಿರೂಪಣಾ ತಂತ್ರವನ್ನು ನಾಟಕ ಅನುಸರಿಸಿದ್ದು ವಿಶೇಷವಾಗಿತ್ತು.

ವರ್ಷವರ್ಷಗಳಿಂದ ಹಿಂದೂ ಮತ್ತು ಮುಸ್ಲಿಂ ಜನಾಂಗಗಳೆರಡೂ ಒಟ್ಟಾಗಿ ನಡೆಸುತ್ತಿದ್ದ ಊರಿನ ಜನಪದ ಮೊಹರಂ (ಅಲೈದೇವ್ರ ಹಬ್ಬ) ಹಬ್ಬವನ್ನು ಎರಡೂ ಕಡೆಯ ಮೂಲಭೂತವಾದಿಗಳಿಂದಾಗಿ ನಿಲ್ಲಿಸಲು ಶತಾಯಗತಾಯ ಪ್ರಯತ್ನಿಸಲಾಗುತ್ತದೆ. ಜನರು ಜಾಗೃತವಾಗಿದ್ದರೆ ಇಂತಹ ಒಡಕು ಎಬ್ಬಿಸುವ ಪ್ರಯತ್ನಗಳು ವಿಫಲವಾಗುತ್ತವೆ ಎಂಬ ಸಂದೇಶದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ಈ ನಾಟಕದಲ್ಲಿ ಎಲ್ಲಿಯೂ ಯಾವುದೇ ಒಂದು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ. ನಮ್ಮ ಹಳ್ಳಿಹಳ್ಳಿಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಡಲು ಕಾರಣಗಳು ಯಾವುವು, ಅದರ ಹಿಂದಿರುವ ಶಕ್ತಿಗಳಾವವು, ಅವುಗಳ ಮುಖವಾಡಗಳೇನು ಎಂಬುದನ್ನು ನಾಟಕ ಬಿಚ್ಚಿಡುತ್ತಾ ಹೋಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಜನರ ಬಾಹುಳ್ಯ ಪ್ರದೇಶಗಳಲ್ಲಿ ’ಯಾವಾಗ ಎಲ್ಲಿ ಗಲಾಟೆ-ಗಲಭೆಗಳಾಗಿಬಿಡುತ್ತವೋ’ ಎಂಬ ಆತಂಕ ಮಡುಗಟ್ಟಿದೆ. ಅವುಗಳು ಧಾರ್ಮಿಕ ಸೂಕ್ಷ್ಮ ಪ್ರದೇಶಗಳಾಗಿ ಮಾರ್ಪಟ್ಟಿವೆ. ಎರಡೂ ಕಡೆಯಲ್ಲಿರುವ ಅತಿರೇಕದ ಧಾರ್ಮಿಕ ವಾದಿಗಳ ತೆವಲುಗಳಲ್ಲಿ ನಿರುಪದ್ರವಿ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮನುಷ್ಯ ಸಹಜ ಪ್ರೀತಿಯೂ ಧರ್ಮದ ಬಣ್ಣ ಬಳಿದುಕೊಳ್ಳುತ್ತಿದೆ. ಇಂತಹ ವಿಷಮ ದಿನಗಳ ತಲ್ಲಣಗಳನ್ನು ’ಅಲೈದೇವ್ರು’ ಒಂದು ಕಥೆಯಾಗಿ-ನಾಟಕ ಪ್ರದರ್ಶನವಾಗಿ ಸಮರ್ಥವಾಗಿ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ರಂಗ ಪ್ರಯೋಗದ ದೃಷ್ಟಿಯಲ್ಲಿ ಇದು ಸಾಕಷ್ಟು ಮಾಗಬೇಕಿದೆ. ನಾಟಕದ ಕಂಟೆಂಟ್ ಮತ್ತು ಅವಧಿಯನ್ನು ಗಮನವಿಟ್ಟುಕೊಂಡು ಸಣ್ಣಪುಟ್ಟ ಬದಲಾವಣೆ ಮಾಡಬೇಕಿದೆ. ಸಣ್ಣಪುಟ್ಟ ಮಿತಿಗಳನ್ನು ಸರಿಪಡಿಸಿಕೊಂಡರೆ ಈ ನಾಟಕ ಈ ಕಾಲದ ಒಂದೊಳ್ಳೆ ಪ್ರಯತ್ನವೆನಿಸಿಕೊಳ್ಳದೆ ಇರದು. ಜೊತೆಗೆ ಇಂದು ಕೋಮು ವೈಷಮ್ಯದ ರೋಗಗಳಿಗೆ ಮದ್ದಾಗುವುದಕ್ಕೂ ಸಾಧ್ಯವಿದೆ.

ಈ ನಾಟಕ ಬೆಂಗಳೂರಿನಲ್ಲಿ ಪ್ರದರ್ಶನಗೊಂಡಾಗ ಕೆಲವು ಮೂಲಭೂತವಾದಿಗಳಿಂದ ಅಪಸ್ವರ ಕೇಳಿಬಂದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಕಾರಣದಿಂದಾಗಿ ಬಹುಶಃ ಧಾರ್ಮಿಕ ಸೂಕ್ಷ್ಮ ಪ್ರದೇಶಗಳೆಂದು ಕರೆಸಿಕೊಳ್ಳುವ ಊರುಗಳಲ್ಲಿ ಇದರ ಪ್ರದರ್ಶನಕ್ಕೆ ಆಯೋಜಕರು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅಂತಹ ಪ್ರದೇಶಗಳಲ್ಲಿಯೇ ಇದು ಹೆಚ್ಚಚ್ಚು ಪ್ರದರ್ಶನಗೊಳ್ಳಬೇಕಿರುವ ಅಗತ್ಯವಿದೆ. ಎಲ್ಲಿ ಗಾಯವಾಗಿದೆಯೋ ಅಲ್ಲಿಯೇ ಮುಲಾಮು ಹಚ್ಚಬೇಕಾದುದು ಅನಿವಾರ್ಯ.

ಸಮಾಜದ ಬಹುಪಾಲು ಸಹೃದಯರು ಧಾರ್ಮಿಕ ಸಾಮರಸ್ಯದ ವಿಚಾರದಲ್ಲಿ ಜಾಣಮೌನ ವಹಿಸುವಾಗ, ಪರಸ್ಪರ ಅರಿತು ಬಾಳಬೇಕಾದ ಅಗತ್ಯಗಳನ್ನು ಗಟ್ಟಿಯಾಗಿ ಮಾತನಾಡದಿರುವಾಗ ಈ ಹೊತ್ತಿನ ತಲ್ಲಣವೊಂದನ್ನು ಇಷ್ಟು ಚಂದವಾಗಿ ಮತ್ತು ನೇರಾನೇರ ಹೇಳುವ ಧೈರ್ಯ ತೋರಿರುವ ರಂಗತಂಡಕ್ಕೆ ಅಭಿನಂದನೆಗಳು.

ಈ ಮಾತೊಂದನ್ನು ಹೇಳಲೇಬೇಕಿದೆಯೆನಿಸುತ್ತಿದೆ. ನಮ್ಮ ನಮ್ಮ ಜಾತಿ-ಮತಗಳನ್ನು ಮನೆಗಷ್ಟೇ
ಸೀಮಿತಗೊಳಿಸಿಕೊಳ್ಳಬೇಕಾಗಿರುವುದು ಶಾಂತಿ ಮತ್ತು ಸಾಮರಸ್ಯದ ದೃಷ್ಟಿಯಿಂದ ಅತೀ ಅಗತ್ಯ. ಇದನ್ನು ಅರ್ಥಮಾಡಿಕೊಳ್ಳದೇ ಪರಸ್ಪರ ಬಡಿದಾಡುತ್ತಿದ್ದರೆ ಮುಂದೆ ಯಾರೂ ಉಳಿಯಲಾರರು. ’ಸಿರಿಯಾ’ದಂತಹ ದೇಶಗಳಲ್ಲಿ ಧಾರ್ಮಿಕ ಮೂಲಭೂತವಾದ ಅದೆಷ್ಟರಮಟ್ಟಿಗೆ ಮುಗ್ಧಜೀವಗಳ ನೆಮ್ಮದಿಯನ್ನು ಕಿತ್ತುಕೊಂಡಿದೆ, ಅಲ್ಲಿನ ಸಾಮಾನ್ಯ ಜನರ ಬದುಕು ಅದೆಷ್ಟು ದಾರುಣವಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ. ಈ ಉದಾಹರಣೆಗಳಿಂದ ಎಚ್ಚೆತ್ತುಕೊಂಡು, ಭಾರತದ ಎಳೆಯ ಮತ್ತು ಯುವ ಮನಸ್ಸುಗಳಲ್ಲಿ ಅಗತ್ಯವಾಗಿ ಸಾಮರಸ್ಯದ ಅಗತ್ಯವನ್ನು ಒತ್ತಿಹೇಳಬೇಕಿದೆ. ಮತೀಯ ಶಕ್ತಿಗಳ ಕುಟಿಲತೆಗಳು ಹೊಸ ತಲೆಮಾರಿಗೆ ಅರ್ಥವಾಗಬೇಕಿರುವುದು ಇಂದಿನ ಜರೂರತ್ತಾಗಿದೆ. ಧಾರ್ಮಿಕ ಸಾಮರಸ್ಯವನ್ನು ಪುನರ್ ಕಟ್ಟುವ ದೃಷ್ಟಿಯಿಂದ ’ಅಲೈದೇವ್ರು’ ನಾಟಕ ಮಹತ್ವದ್ದಾಗಿ ಕಾಣುತ್ತದೆ.

ನಾಗರಾಜ ಕೂವೆ
ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಗಾರಾಜ ಅವರ ’ಕೈತುತ್ತು- ಭಾವನೆಗಳ ಹೊತ್ತು’, ’ನನ್ನಯ ಹಕ್ಕಿ ಬಿಟ್ಟೆ ಬಿಟ್ಟೆ…’ ಎಂಬ ಪುಸ್ತಕಗಳು ಪ್ರಕಟವಾಗಿವೆ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ತಿರುಗಾಟ ಇವರ ಹವ್ಯಾಸಗಳು.


ಇದನ್ನೂ ಓದಿ: ಹಳ್ಳಿಗಳ ಹಿಂದೂ ಮುಸ್ಲಿಂ ಸಹಬಾಳ್ವೆ ಏನಾಗುತ್ತಿದೆ?: ಅಲೈದೇವ್ರು ನಾಟಕ ನೋಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ನಾಟಕ ಪ್ರದರ್ಶನ ಹಲವು ಮಿತಿಯಿಂದ ಕೂಡಿದೆ. ನಟರು ಪಾತ್ರದಿಂದ ದೂರವೇ ಉಳಿದಿದ್ದಾರೆ. ವಸ್ತು ಸನ್ನಿವೇಶ ವಿನ್ಯಾಸದಲ್ಲಿ ನಿರ್ದೇಶಕರು ಗಮನಹರಿಸಿಲ್ಲ. ನಟರಿಗೆ ಸ್ಪಷ್ಟತೆಯ ಕೊರತೆ ಇದೆ. ಹಲವಾರು ಸಂಭಾಷಣೆ ಮಿಸ್ ಆಗುತ್ತದೆ. ರಂಗಪರಿಕರಗಳ ಬಳಕೆಯಲ್ಲಿ ಗೊಂದಲ ಉಂಟಾಗಿದೆ. ತಾಲೀಮಿನ ಅವಶ್ಯಕತೆ ಇದೆ. ಕೆಲವು ದೃಶ್ಯಗಳನ್ನು ಚೂಯಿಂಗ್ ಗಮ್ಮಿನಂತೆ ಎಳೆಯಲಾಗಿದೆ. ದೃಶ್ಯ ಸಂಯೋಜನೆ ಇಲ್ಲ.

LEAVE A REPLY

Please enter your comment!
Please enter your name here

- Advertisment -

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...