ದೇಶದ ರೈತರು ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ, ಚಳಿ, ಬಿಸಿಲೆನ್ನದೇ ದೇಶದ ರಸ್ತೆಗೆ ಇಳಿದಿದ್ದಾರೆ. ತಮ್ಮ ಹಕ್ಕುಗಳಿಗಾಗಿ, ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೆಹಲಿ ಚಲೋ ನಡೆಸುತ್ತಿದ್ದಾರೆ. ಇಡೀ ದೇಶವೇ ಅವರ ಬೆನ್ನಿಗೆ ನಿಂತಿದೆ. ಅವರಿಗೆ ಈಗ ಬೇಕಿರುವುದು ನೈತಿಕ ಬೆಂಬಲದ ಜೊತೆಗೆ ಆರ್ಥಿಕ ಬೆಂಬಲದ ಅಗ್ಯವಿದೆ. ಅನ್ನದ ಋಣ ತೀರಿಸಲು ಇದೊಂದು ಸವರ್ಣಾವಕಾಶ.
ನಿನ್ನೆ ಮೂವರು ಕೇಂದ್ರ ಸಚಿವರೊಂದಿಗೆ ನಡೆದ ಸಭೆಯಲ್ಲಿ ಸರ್ಕಾರದ ನಿರ್ಧಾರವನ್ನು ರೈತ ಸಂಘಟನೆಗಳು ತಿರಸ್ಕರಿಸಿದ್ದು, ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದು AIKSCC ಅಧಿಕೃತ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರ ರೈತರ ಮುಖ್ಯ ಬೇಡಿಕೆಗಳಾವುದನ್ನು ಒಪ್ಪುವ ಲಕ್ಷಣ ಇಲ್ಲ. ಈ ಹಿನ್ನೆಲೆ ರೈತ ಸಂಘಟನೆಗಳು ಮತ್ತಷ್ಟು ದಿನಗಳ ಕಾಲ ದೀರ್ಘ ಹೋರಾಟಕ್ಕೆ ಅಣಿಯಾಗುತ್ತಿವೆ. ದೆಹಲಿಯಲ್ಲಿ ರೈತರ ಸಂಘರ್ಷ ತಿಂಗಳುಗಟ್ಟಲೆ ನಡೆಯಲಿದೆ. ಲಕ್ಷಾಂತರ ಅನ್ನದಾತರು ತಾವೇ ಕೆಲವು ಸಿದ್ಧತೆ ಮಾಡಿಕೊಂಡು ಬಂದಿದ್ದರೂ ವಿವಿಧ ಮೂಲ ಸೌಲಭ್ಯಗಳ ಅಗತ್ಯ ಇನ್ನೂ ಹೆಚ್ಚಾಗಿದೆ.
ಇದನ್ನೂ ಓದಿ: ಕೃಷಿ ಕಾಯ್ದೆಗಳ ಬಗ್ಗೆ ಸಮಿತಿ ರಚಿಸುವ ಸರ್ಕಾರದ ಪ್ರಸ್ತಾಪ ತಿರಸ್ಕರಿಸಿದ ರೈತ ಮುಖಂಡರು: ಪ್ರತಿಭಟನೆ…
ರಾಜಸ್ಥಾನ, ಉತ್ತರ ಪ್ರದೇಶ, ಉತ್ತರ ಖಂಡ, ಮಧ್ಯಪ್ರದೇಶ ,ಬಿಹಾರ ಮೊದಲಾದ ಬೇರೆ-ಬೇರೆ ರಾಜ್ಯಗಳ ರೈತರು ಈ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆಹಾರ, ನೀರು ಸೇರಿ ಮೂಲಸೌಕರ್ಯಕ್ಕೆ ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದು ಅಖಿಲ ಭಾರತ ಕಿಸಾನ್ ಸಭಾ (AIKS) ಹೇಳಿದೆ.
ಪ್ರತಿಭಟನೆ ತೀವ್ರಗೊಳ್ಳುವಂತೆಯೇ, ಕೇಂದ್ರ ಸರ್ಕಾರದ ದೌರ್ಜನ್ಯ ಕೂಡ ಹೆಚ್ಚಾಗುವ ಸಂಭವವಿದೆ. ಆದ್ದರಿಂದ ದೊಡ್ಡ ಪ್ರಮಾಣದ ಹಣ ಸಹಾಯ ಅಗತ್ಯ ಇದೆ. ದೇಶದ ಜನರು, ಸಾಧ್ಯವಿರುವವರೆಲ್ಲಾ ಧನ ಸಹಾಯ ಮಾಡಿ ಎಂದು ಸಂಘಟನೆ ಮನವಿ ಮಾಡಿದೆ.
ದೇಶದ ಬಹುಸಂಖ್ಯಾತ ಅನ್ನದಾತರು ಬಡವರು, ವಿಶ್ವಕ್ಕೆ ಅನ್ನ ನೀಡುವ ಇವರು ತಮ್ಮ ಸಹಾಯಕ್ಕೆ ಮತ್ತೊಬ್ಬರ ಬಳಿ ಬೇಡುವ ಪರಿಸ್ಥಿತಿ ತಂದಿರುವ ಸರ್ಕಾರದ ವಿರುದ್ಧ ಸಾಮಾಜಿಕ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವೇ ಕೆಲವು ಸಂಖ್ಯೆಯಲ್ಲಿ ಕಾರುಗಳಲ್ಲಿ ಓಡಾಡುವವರನ್ನು ಗುರಿಯಾಗಿಸಿಕೊಂಡು ಮಾತನಾಡುವ ಜನತೆಗೆ ನೆಲ ಮೂಲದ ರೈತರ ಬವಣೆಗಳ ಬಗ್ಗೆ ಕನಿಷ್ಠ ಜ್ಞಾನವು ಇಲ್ಲ ಎಂದು ಟೀಕಿಸಿದ್ದಾರೆ. ಪ್ರತಿದಿನ ನಾವು ತಿನ್ನುವ ಅನ್ನವನ್ನೂ ನೊಡಿದಾಗಲಾದರೂ ಅನ್ನದಾತರ ಬೆಲೆ ಅರ್ಥವಾದಿತ್ತು. ಆದರೆ, ವಾಟ್ಸಾಪ್ ಯೂನಿವರ್ಸಿಟಿಗಳಲ್ಲಿ ಪದವಿ ಪಡೆದ ಜನರು ರೈತರನ್ನು ಭಯೋತ್ಪಾದಕರು ಎನ್ನುವ ಮಟ್ಟಕ್ಕೆ ಬಂದಿದ್ದಾರೆ. ಇದು ಕಳವಳಕಾರಿ ಸಂಗತಿ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆಗೆ ಹರಿದು ಬಂತು ವಿದೇಶಿ ರಾಜಕೀಯ ನಾಯಕರ ಬೆಂಬಲ
ಅನ್ನ ತಿನ್ನುವವರು ಅನ್ನದಾತರನ್ನು ಬೆಂಬಲಿಸಿ ಎಂದರೆ, ನಾನು ರೊಟ್ಟಿ ತಿನ್ನುತ್ತೇನೆ ಎನ್ನುವ ಜನರ ಮನಸ್ಥಿತಿಗಳು ಬದಲಾಗುವವರೆಗೆ ನಮ್ಮ ದೇಶದಲ್ಲಿ ಬದಲಾವಣೆ ಕನಸಿನ ಮಾತು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೇಳುತ್ತಾರೆ.
ಸದ್ಯ ದೇಶದಲ್ಲಿ ಭುಗಿಲೆದ್ದಿರುವ ರೈತರ ಪ್ರತಿಭಟನೆಗೆ ದೇಶದ ಜನರ ನೈತಿಕ ಬೆಂಬಲದ ಜೊತೆಗೆ ಆರ್ಥಿಕ ಬೆಂಬಲದ ಅಗತ್ಯವೂ ಇದ್ದು, ಭಾರತ ಮಾತೆಯ ರೈತ ಮಕ್ಕಳು ತಮಗೆ ಸಹಾಯ ನೀಡಿ ಎಂದು ಕೇಳುತ್ತಿದ್ದಾರೆ. ಅನ್ನದ ಋಣ ತೀರಿಸಲು ಇದೊಂದು ಸುವರ್ಣಾವಕಾಶವೆ ಸರಿ.
ಬ್ಯಾಂಕ್ ಖಾತೆ ವಿವರಗಳು ಹೀಗಿವೆ:
The Bank Account Details are as follows:
Name: All India Kisan Sabha
A/C No: 20032032844
Bank: ALLAHABAD BANK
Address: ALLAHABAD BANK BUILDING,
17 PARLIAMENT STREET, NEW DELHI
State: DELHI
IFSC Code: ALLA0210163 (used for RTGS, IMPS and NEFT transactions)
Branch Code: 210163
MICR Code: 110010026