Homeಮುಖಪುಟಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

ಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

- Advertisement -
- Advertisement -

ತಂತ್ರಜ್ಞಾನ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ .ಹಾಗೇಯೆ ಸಿನೆಮಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾದವು. ಮೊದಲಿಗೆ ದೂರದರ್ಶನ ಬಂದಾಗ ಹಳ್ಳಿಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಆಗ ಜನ ವಾರಕ್ಕೆ ಒಮ್ಮೆ ಬರುವ ಸಿನೆಮಾಗಾಗಿ ಕಾಯುತ್ತಿದ್ದರು. ಥೀಯೇಟರ್‍ ಗಳಿಗೆ ಹೋಗಲಾರದ ಜನ ವರ್ಷನು ಗಟ್ಟಲೇ ಹೊಸ ಸಿನೆಮಾ ಟಿವಿಯಲ್ಲಿ ಬರುವುದನ್ನು ಕಾಯುತ್ತಿದ್ದರು. ಈಗ ನಿರಂತರ 24/7 ಸುದ್ದಿವಾಹಿನಿಗಳ ಹಾಗೆ, ಸಿನೆಮಾ ಚಾನೆಲ್ ಗಳು ಸಹ ಬಂದಿದ್ದು ಸಾಕಷ್ಟು ಸಿನೆಮಾಗಳನ್ನು ನೋಡಬಹುದಾಗಿದೆ. ಆದರೆ ಈಗಲೂ ಬಿಡುಗಡೆಯಾದ ಹೊಸ ಸಿನೆಮಾ ಟಿವಿಯಲ್ಲಿ ಬರಲು ಸಾಕಷ್ಟು ತಿಂಗಳ ಸಮಯ ತೆಗೆದುಕೊಳ್ಳತ್ತಿದೆ. ಕೆಲವರು ತಮ್ಮ ನೆಚ್ಚಿನ ನಾಯಕರ ಸಿನೆಮಾಗಳನ್ನು ನೋಡಲೇಬೇಕೆಂದು ಪೈರೆಸಿ ಡಿವಿಡಿ, ಸಿಡಿ ನೋಡುತ್ತಿದ್ದರಾದರು ಅವು ಕ್ಯಾಮರ ಪ್ರಿಂಟ್ ಆಗಿದ್ದು ಗುಣಮಟ್ಟದ್ದಾಗಿರುತ್ತಿರಲಿಲ್ಲ.

ಅವರೆಲ್ಲರ ಸಮಸ್ಯೆ ನೀಗಿಸಿದ್ದೆ ನೆಟ್‍ಪ್ಲಿಕ್ಸ್, ಆಮೇಜಾನ್ ಪ್ರೈಮ್‍ನಂತಹ ಓವರ್ ದಿ ಟಾಪ್ (ಓಟಿಟಿ) ನಂತಹ ವೇದಿಕೆಗಳು. ಇವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಒಳಗೆ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಮತ್ತು ಸ್ಥಳೀಯ ಸಿನೆಮಾಗಳೇ ಅಲ್ಲದೇ ವೆಬ್‍ಸೀರಿಸ್, ಕಿರುಚಿತ್ರ, ಡಾಕ್ಯುಮೆಂಟರಿ, ಧಾರವಾಹಿ ಇನ್ನೂ ವಿಭಿನ್ನವಾದ ಮನರಂಜನೆ, ಜ್ಞಾನ ಇವೆಲ್ಲವನ್ನು ಕೊಡುತ್ತಿವೆ. ಟಿವಿಯಲ್ಲಿ ಮತ್ತು ಮೋಬೈಲ್‍ನಲ್ಲೂ ಸಮಯವಿದ್ದಾಗ ನೋಡುವ ಅವಕಾಶವನ್ನು ಕಲ್ಪಿಸಿವೆ. ಆದರೆ ಒಂದೇ ಕಂಡಿಷನ್ ಏನಪ್ಪ ಅಂದ್ರೆ ಇವುಗಳಿಗೆ ಇಂತಿಷ್ಟು ಎಂದು ದುಡ್ಡು ಕೊಡಬೇಕು. ಇದಕ್ಕಿಂತ ಮುಂಚೆ ಯೂಟೂಬ್‍ನಲ್ಲಿ ಕೆಲವು ಸಿನೆಮಾಗಳು ಸಿಗುತ್ತಿದ್ದವು ಆದರೆ ಓಟಿಟಿ ವೇದಿಕೆಗಳು ಹೊಸತನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್ ನೆಟ್ ಮೂಲಕ ಕೇಬಲ್, ಟೆಲಿಕಮ್ಯೂನಿಕೇಶ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಇವುಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳು ಇಂದು ಹೆಚ್ಚು ಪ್ರಸಿದ್ದವಾಗಿವೆ. ನೀವು ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್ ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನೂತನ ಚಲನಚಿತ್ರಗಳು, ರಿಯಾಲಿಟಿ ಶೋ ಗಳು, ಕ್ರೀಡೆ, ಧಾರವಾಹಿ, ವೆಬ್ ಸೀರೀಸ್ ಎಲ್ಲವೂ ಸಿಗುತ್ತವೆ. ಕೆಲವೊಂದು ಜಾಗತಿಕ ಸಿನೆಮಾಗಳು ನಿಮ್ಮೂರಿನ ಚಿತ್ರಮಂದಿರಕ್ಕೆ ಬರದೇ ಹೋಗಬಹುದು. ಆಗ ನೀವು ಚಿಂತಿಸಬೇಕಿಲ್ಲ. ಈ ಒಟಿಟಿಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.

ಅಂತರ್ಜಾಲದ ಯುಗದಲ್ಲಿ ಡಿಜಿಟಲ್ ಸೇವೆಗಳ ಉಪಯುಕ್ತತೆಗಳು ಶರವೇಗವಾಗಿ ವೃದ್ಧಿಸುತ್ತಿವೆ. 4ಜಿ ಸೇವೆಯ ರಂಗಪ್ರವೇಶದ ಜೊತೆ ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಆನ್ ಡಿಮಾಂಡ್ ವಿಡಿಯೋ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಉದ್ಯಮಗಳು ಅಭಿಪ್ರಾಯಪಡುತ್ತಿವೆ. ಅಂತರಾಷ್ಟ್ರೀಯ ವೃತ್ತಿ ನೈಪುಣ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ನಮ್ಮ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಿಂದ 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಪಿಡಬ್ಲೂಸಿ ಅಂದಾಜು ಮಾಡಿದೆ.

ವಿಡಿಯೋ ಆನ್ ಡಿಮಾಂಡ್‍ನ ಸಬ್‍ಸ್ಕ್ರಿಪ್ಶನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಶನ್ ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹಿರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೋರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆ ಆಗಲಿದೆಯೆಂದು ಸಿಡಬ್ಲೂಸಿ ವರದಿ ಹೇಳುತ್ತಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪರಿಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಮನರಂಜನೆಯ ಕ್ಷೇತ್ರದಲ್ಲಿ ಅತ್ಯಧಿಕ ವೃದ್ಧಿ ಓಟಿಟಿಯದೇ…

ಭವಿಷ್ಯತ್ತಿನಲ್ಲಿ ಮಾಧ್ಯಮ , ಮನರಂಜನೆ ರಂಗದಲ್ಲಿ ಓಟಿಟಿ ಸೇವೆಗಳೆ ಹೆಚ್ಚಾಗುತ್ತಿವೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಒಟಿಟಿ, ಆನಲೈನ್ ಗೇಮಿಂಗ್, ಅಂತರ್ಜಾಲ ಧಾರವಾಹಿ ವಿಭಾಗದಲ್ಲಿ ಅತ್ಯಧಿಕ ವೃಧ್ದಿಯನ್ನು ನಮೂದಿಸಿವೆ ಎಂದು ಹೇಳುತ್ತಿದೆ. ಎರ್ನೆಸ್ಟ್ ಅಂಡ್ ಯಂಗ್ ವರದಿಯ ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ ಒಟಿಟಿ ಸೇವೆಯ ವಿನಿಯೋಗದಾರರ ಸಂಖ್ಯೆ 50ಕೋಟಿಗಳಿಗೆ ತಲಪುವ ಅವಕಾಶವಿದೆ. ಪ್ರಸ್ತುತ ದೇಶದಲ್ಲಿ ಹಿಂದಿ, ಇಂಗ್ಲೀಷ್ ಸಿನೆಮಾಗಳು, ವೆಬ್‍ಸೀರಿಸ್‍ಗಳು, ಇತರ ವಿಡಿಯೋ ಕಂಟೆಂಟ್‍ಗಳನ್ನು ಕಲ್ಪಿಸುವ ಒಟಿಟಿ ಪ್ಲೇಯರ್‍ಗಳೇ ಅಧಿಕ, ಭವಿಷ್ಯತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆನ್ ಡಿಮಾಂಡ್ ವಿಡಿಯೋಗಳು ನೀಡುವ ಸಂಸ್ಥೆಗಳು ರಂಗಪ್ರವೇಶ ಮಾಡಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಟಿವಿ ವಾಹಿನಿಗಳ ಹವಾ ಕಡಿಮೆಯಾಗಿಲ್ಲ

ಒಟಿಟಿ ಸೇವೆಗಳು ವೇಗವಾಗಿ ವೃದ್ಧಿ ಹೊಂದುತ್ತಿದ್ದರೂ ಸಹ ಕೇಬುಲ್, ಸೆಟಲೈಟ್ ಟಿವಿ ಚಾನೆಲ್ ಗಳ ಹವಾ ಮುಂದೆಯೂ ಸಹ ಇದೇ ರೀತಿ ಮುಂದುವರೆಯಲಿದೆ ಎಂದು ಮನರಂಜನೆಯ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕಳೆದ ವರ್ಷದ ಪೇ ಟಿವಿ ಸೇವೆಗಳ ಆದಾಯ 1000 ಕೋಟಿ ಡಾಲರ್ (70000ರೂ ಕೋಟಿ) ಗಳಿಗೆ ತಲುಪಲಿದೆ. 2023ಕ್ಕೆ ಭಾರತ ಜಗತ್ತಿನಲ್ಲೇ ಅತಿದೊಡ್ಡ ಟಿ.ವಿ ಜಾಹಿರಾತು ಮಾರುಕಟ್ಟೆಯಾಗಿ ಅವತರಿಸಲಿದೆ ಎಂದು ಸಿಡಬ್ಲೂಸಿ ಹೇಳುತ್ತಿದೆ. ಟಿವಿ ಜಾಹಿರಾತು ಮಾರುಕಟ್ಟೆ ವರ್ಷ ವರ್ಷ 10.7ರಷ್ಟು ವೃದ್ಧಿಸುತ್ತಿದ್ದು, ಬರುವ ನಾಲ್ಕು ವರ್ಷದಲ್ಲಿ 680 ಕೋಟಿ ಡಾಲರ್‍ಗಳಿಗೆ ತಲುಪಬಹುದೆಂದು ಅಂದಾಜು.

ಭಾರತದಲ್ಲಿ ಎಲ್ಲಾ ವರ್ಗದವರು ಸಿನೆಮಾಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಹೊಚ್ಚಹೊಸ ಸಿನೆಮಾಗಳನ್ನು ಸಿಗುವಂತೆ ಮಾಡುವುದು ಕಷ್ಟ. ನಿರಂತರ ಅಧ್ಯಯನಗಳು, ಸಾಮಾಜಿಕ ಜಾಲತಾಣಗಳ ಮೂಲಕ ವಿನಿಯೋಗದಾರರು ಹಚ್ಚು ಇಷ್ಟಪಡುತ್ತಿರುವ ಸಿನೆಮಾಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಟೆಂಟ್ ವಿಭಾಗ ಅಧಿಪತಿ ವಿಜಯ್ ಸುಬ್ರಮಣ್ಯ ಹೇಳುತ್ತಾರೆ.

ಪ್ರಸ್ತುತ ದೇಶದಲ್ಲಿ ವಿಡಿಯೋ ಆನ್ ಡಿಮಾಂಡ್ ವ್ಯಾಪಾರಗಳಿಗೆ ಬಹುತೇಕ ಆದಾಯ ಜಾಹೀರಾತು ಮೂಲಕವೇ ಬರುತ್ತಿದೆ. ಭವಿಷ್ಯತ್ತಿನಲ್ಲಿ ಸಬ್‍ಸ್ಕ್ರಿಪಷನ್ ರೆವೆನ್ಯೂ ಭಾರಿ ಮೊತ್ತದಲ್ಲಿ ಬೆಳೆಯಲಿದೆ ಎಂದು ವೂಟ್ ವಿಡಿಯೋ ಆನ್ ಡಿಮಾಂಡ್ ವಿಭಾಗದ ಮುಖ್ಯಸ್ಥ ಆಕಾಶ್ ಬ್ಯಾನರ್ಜಿ ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ ಸುಮಾರು 40 ಒಟಿಟಿ ಕಂಪೆನಿಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೆಟ್‍ಪ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‍ಸ್ಟಾರ್, ಜೆಡ್‍ಈಈ5, ಹಿರೋಸ್ ನವ್, ವೋಟ್, ಸೋನಿ ಲೈವ್, ಏರಟೆಲ್ ಟಿವಿ, ವೊಡಾಫೋನ್ ಪ್ಲೇ, ಜೀಯೋ ಟಿವಿ, ವಯಾಕಾಮ್ 18 ಮುಂತಾದವು..

ಪ್ರಪಂಚಾದ್ಯಾಂತ ಸಿನಿಮಾಗಳನ್ನು ಎಲ್ಲರು ನೋಡತ್ತಾರೆ. ಕೆಲವರಿಗೆ ಆಕ್ಷನ್ ಇಷ್ಟ ಆಗಬಹುದು, ಕೆಲವರಿಗೆ ಯುದ್ದ ಆಧಾರಿತ, ಫಿಕ್ಷನ್, ಕಾಮಿಡಿ, ಹಾರರ್ ಈ ರೀತಿ ಇಷ್ಟ ಆಗಬಹುದು. ಮುಂಚೆ ಟಿವಿಗಳಲ್ಲಿ ಸಿನೆಮಾ ಮತ್ತು ಧಾರಾವಾಹಿ ಮಾತ್ರ ಇತ್ತು. ಈಗ ರಿಯಾಲಿಟಿ ಶೋಗಳು ಬಂದಿದಾವೆ ಆದರೆ ಅವೂ ಕೂಡ ಸತ್ವ ಕಳೆದುಕೊಳ್ಳುತ್ತಿರೋ ಸಮಯದಲ್ಲಿ ಈ ಒಟಿಟಿಗಳಲ್ಲಿ ಯಾವುದೇ ಜಾಹೀರಾತು ಇಲ್ಲದೇ ಕುಟುಂಬದ ಜೊತೆ ಕೂತು ನೋಡಬಹುದು. ತಿಂಗಳಿಗೆ 100 ರಿಂದ 200ರೂ ನಷ್ಟು ಖರ್ಚು ಬರುತ್ತದೆ ಅಷ್ಟೇ. ಅದೇ ನೀವು ಕುಟುಂಬದ ಜೊತೆ ಥೀಯೆಟರ್‍ಗೆ ಹೋದರೆ ಇನ್ನೂ ಜಾಸ್ತಿ ಖರ್ಚು ಆಗುತ್ತೆ. ಆನ್‍ಲೈನ್ ಸ್ಟ್ರೀಮಿಂಗ್ ನಲ್ಲಿರುವ ಪ್ರಯೋಜನ ಅಂದರೆ ನಾವು ಎಲ್ಲಿಯವರೆಗೂ ನೋಡಿ ನಿಲ್ಲಿಸಿರುತ್ತೇವೋ, ಮತ್ತೆ ಸಮಯ ಸಿಕ್ಕಾಗ ಮತ್ತೆ ಅಲ್ಲಿಂದಲೇ ನೋಡಬಹುದು. ಹಾಗೂ ಯಾವುದೇ ದೇಶದ ಭಾಷೆಯಾಗಲಿ ಡಬ್ಬಿಂಗ್ ಇಲ್ಲದಿದ್ದರೆ ಸಬ್‍ಟೈಟಲ್ ಹಾಕಿಕೊಂಡು ನೋಡಬಹುದು. ಸಿನೆಮಾಗಳು ಅಂದ್ರೆ ಬರೀ ಮನರಂಜನೆಯಲ್ಲ ಇದರಿಂದ ಇತಿಹಾಸ, ಜ್ಞಾನ ಎಲ್ಲವೂ ಸಿಗುತ್ತದೆ ಎನ್ನುತ್ತಾರೆ ಟ್ರಾವೆಲ್ ಅಡ್ವೈಸರ್, ಸಿನೆಮಾ ಪ್ರೇಮಿ ಮೋಹನ್ ಕುಮಾರ್ ರವರು. ಇವರು ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪರಿಚಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಸೌಜನ್ಯ: ಆಂಧ್ರಜ್ಯೋತಿ ಬಿಸೆನೆಸ್ ಡೆಸ್ಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...