Homeಮುಖಪುಟಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

ಅಮೇಜಾನ್, ನೆಟ್ ಫ್ಲಿಕ್ಸ್ ಥರ ಅಂಗೈಯಲ್ಲಿ ಸಿನೆಮಾ ತೋರಿಸುವುದು ಕೋಟಿ ವ್ಯವಹಾರ ಎಂಬುದು ನಿಮಗೆ ಗೊತ್ತಾ?

- Advertisement -
- Advertisement -

ತಂತ್ರಜ್ಞಾನ ಬದಲಾದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಿರುತ್ತವೆ .ಹಾಗೇಯೆ ಸಿನೆಮಾ ಮತ್ತು ದೃಶ್ಯ ಮಾಧ್ಯಮ ರಂಗದಲ್ಲಿಯೂ ಸಹ ಸಾಕಷ್ಟು ಬದಲಾವಣೆಗಳಾದವು. ಮೊದಲಿಗೆ ದೂರದರ್ಶನ ಬಂದಾಗ ಹಳ್ಳಿಗಳಲ್ಲಿ ಕೆಲವು ಶ್ರೀಮಂತರ ಮನೆಗಳಲ್ಲಿ ಮಾತ್ರ ಟಿವಿ ಇರುತ್ತಿತ್ತು. ಆಗ ಜನ ವಾರಕ್ಕೆ ಒಮ್ಮೆ ಬರುವ ಸಿನೆಮಾಗಾಗಿ ಕಾಯುತ್ತಿದ್ದರು. ಥೀಯೇಟರ್‍ ಗಳಿಗೆ ಹೋಗಲಾರದ ಜನ ವರ್ಷನು ಗಟ್ಟಲೇ ಹೊಸ ಸಿನೆಮಾ ಟಿವಿಯಲ್ಲಿ ಬರುವುದನ್ನು ಕಾಯುತ್ತಿದ್ದರು. ಈಗ ನಿರಂತರ 24/7 ಸುದ್ದಿವಾಹಿನಿಗಳ ಹಾಗೆ, ಸಿನೆಮಾ ಚಾನೆಲ್ ಗಳು ಸಹ ಬಂದಿದ್ದು ಸಾಕಷ್ಟು ಸಿನೆಮಾಗಳನ್ನು ನೋಡಬಹುದಾಗಿದೆ. ಆದರೆ ಈಗಲೂ ಬಿಡುಗಡೆಯಾದ ಹೊಸ ಸಿನೆಮಾ ಟಿವಿಯಲ್ಲಿ ಬರಲು ಸಾಕಷ್ಟು ತಿಂಗಳ ಸಮಯ ತೆಗೆದುಕೊಳ್ಳತ್ತಿದೆ. ಕೆಲವರು ತಮ್ಮ ನೆಚ್ಚಿನ ನಾಯಕರ ಸಿನೆಮಾಗಳನ್ನು ನೋಡಲೇಬೇಕೆಂದು ಪೈರೆಸಿ ಡಿವಿಡಿ, ಸಿಡಿ ನೋಡುತ್ತಿದ್ದರಾದರು ಅವು ಕ್ಯಾಮರ ಪ್ರಿಂಟ್ ಆಗಿದ್ದು ಗುಣಮಟ್ಟದ್ದಾಗಿರುತ್ತಿರಲಿಲ್ಲ.

ಅವರೆಲ್ಲರ ಸಮಸ್ಯೆ ನೀಗಿಸಿದ್ದೆ ನೆಟ್‍ಪ್ಲಿಕ್ಸ್, ಆಮೇಜಾನ್ ಪ್ರೈಮ್‍ನಂತಹ ಓವರ್ ದಿ ಟಾಪ್ (ಓಟಿಟಿ) ನಂತಹ ವೇದಿಕೆಗಳು. ಇವು ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಒಂದು ತಿಂಗಳ ಒಳಗೆ ಜನರಿಗೆ ತಲುಪಿಸುತ್ತಿವೆ. ರಾಷ್ಟ್ರೀಯ, ಅಂತರಾಷ್ಟ್ರೀಯ, ಮತ್ತು ಸ್ಥಳೀಯ ಸಿನೆಮಾಗಳೇ ಅಲ್ಲದೇ ವೆಬ್‍ಸೀರಿಸ್, ಕಿರುಚಿತ್ರ, ಡಾಕ್ಯುಮೆಂಟರಿ, ಧಾರವಾಹಿ ಇನ್ನೂ ವಿಭಿನ್ನವಾದ ಮನರಂಜನೆ, ಜ್ಞಾನ ಇವೆಲ್ಲವನ್ನು ಕೊಡುತ್ತಿವೆ. ಟಿವಿಯಲ್ಲಿ ಮತ್ತು ಮೋಬೈಲ್‍ನಲ್ಲೂ ಸಮಯವಿದ್ದಾಗ ನೋಡುವ ಅವಕಾಶವನ್ನು ಕಲ್ಪಿಸಿವೆ. ಆದರೆ ಒಂದೇ ಕಂಡಿಷನ್ ಏನಪ್ಪ ಅಂದ್ರೆ ಇವುಗಳಿಗೆ ಇಂತಿಷ್ಟು ಎಂದು ದುಡ್ಡು ಕೊಡಬೇಕು. ಇದಕ್ಕಿಂತ ಮುಂಚೆ ಯೂಟೂಬ್‍ನಲ್ಲಿ ಕೆಲವು ಸಿನೆಮಾಗಳು ಸಿಗುತ್ತಿದ್ದವು ಆದರೆ ಓಟಿಟಿ ವೇದಿಕೆಗಳು ಹೊಸತನಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದರಿಂದ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ.

ಒಟಿಟಿ ಅಂದರೆ ನೇರವಾಗಿ ಕಂಟೆಂಟ್ (ಮೀಡಿಯಾ)ಗಳನ್ನು ಇಂಟರ್ ನೆಟ್ ಮೂಲಕ ಕೇಬಲ್, ಟೆಲಿಕಮ್ಯೂನಿಕೇಶ್ ಇತರ ತಡೆಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವುದಾಗಿದೆ. ಇವುಗಳಲ್ಲಿ ಅಮೇಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗಳು ಇಂದು ಹೆಚ್ಚು ಪ್ರಸಿದ್ದವಾಗಿವೆ. ನೀವು ಒಂದು ಚಂದಾದಾರರಾದರೆ 5 ಟಿವಿ ಅಥವಾ ಮೊಬೈಲ್ ಗಳಲ್ಲಿ ಸೇವೆಯನ್ನು ಪಡೆಯಬಹುದಾಗಿದೆ. ನೂತನ ಚಲನಚಿತ್ರಗಳು, ರಿಯಾಲಿಟಿ ಶೋ ಗಳು, ಕ್ರೀಡೆ, ಧಾರವಾಹಿ, ವೆಬ್ ಸೀರೀಸ್ ಎಲ್ಲವೂ ಸಿಗುತ್ತವೆ. ಕೆಲವೊಂದು ಜಾಗತಿಕ ಸಿನೆಮಾಗಳು ನಿಮ್ಮೂರಿನ ಚಿತ್ರಮಂದಿರಕ್ಕೆ ಬರದೇ ಹೋಗಬಹುದು. ಆಗ ನೀವು ಚಿಂತಿಸಬೇಕಿಲ್ಲ. ಈ ಒಟಿಟಿಗಳ ಮೂಲಕ ಮನೆಯಿಂದಲೇ ವೀಕ್ಷಿಸಬಹುದಾಗಿದೆ.

ಅಂತರ್ಜಾಲದ ಯುಗದಲ್ಲಿ ಡಿಜಿಟಲ್ ಸೇವೆಗಳ ಉಪಯುಕ್ತತೆಗಳು ಶರವೇಗವಾಗಿ ವೃದ್ಧಿಸುತ್ತಿವೆ. 4ಜಿ ಸೇವೆಯ ರಂಗಪ್ರವೇಶದ ಜೊತೆ ಭಾರತದಲ್ಲಿ ಓಟಿಟಿ ವೇದಿಕೆಗಳ ಮೇಲೆ ಆನ್ ಡಿಮಾಂಡ್ ವಿಡಿಯೋ ಸೇವೆಗಳ ಬೇಡಿಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಉದ್ಯಮಗಳು ಅಭಿಪ್ರಾಯಪಡುತ್ತಿವೆ. ಅಂತರಾಷ್ಟ್ರೀಯ ವೃತ್ತಿ ನೈಪುಣ್ಯ ಸೇವೆಗಳ ಕಂಪನಿ ಪ್ರೈಸ್ ವಾಟರ್‍ಹೌಸ್ ಕೂಪರ್ಸ್(ಪಿಡಬ್ಲೂಸಿ) ವರದಿಯ ಪ್ರಕಾರ 2018 ಮುಗಿಯುವ ವೇಳೆಗೆ ನಮ್ಮ ಭಾರತದಲ್ಲಿ ಓಟಿಟಿ ವಿಡಿಯೋ ಸೇವೆಗಳ ಮಾರುಕಟ್ಟೆ 63.8ಕೋಟಿ ಡಾಲರ್ (ಸುಮಾರು ರೂ 4,466 ಕೋಟಿ)ಗಳಿಗೆ ತಲುಪಿತ್ತು. 2023ರ ಹೊತ್ತಿಗೆ ವಾರ್ಷಿಕವಾಗಿ 21.8% ರಷ್ಟು ವೃದ್ದಿಯಿಂದ 170 ಕೋಟಿ ಡಾಲರ್ (ರೂ.11,900ಕೋಟಿಗಳಿಗೆ) ತಲುಪಲಿದೆ ಎಂದು ಪಿಡಬ್ಲೂಸಿ ಅಂದಾಜು ಮಾಡಿದೆ.

ವಿಡಿಯೋ ಆನ್ ಡಿಮಾಂಡ್‍ನ ಸಬ್‍ಸ್ಕ್ರಿಪ್ಶನ್ ಡಿಮಾಂಡ್ ವಾರ್ಷಿಕವಾಗಿ 23.3%ರಷ್ಟು ವೃದ್ದಿಯಾಗಿ 150 ಕೋಟಿ ಡಾಲರ್‍ಗಳಿಗೆ ತಲುಪಲಿದೆಯೆಂದು ಸಿಡಬ್ಲೂಸಿ ವರದಿಯಲ್ಲಿ ಹೇಳಿದೆ. ಅಂದರೆ 2023ರ ಹೊತ್ತಿಗೆ ಒಟಿಟಿ ಕಂಪನಿಗಳ ಒಟ್ಟು ಆದಾಯದಲ್ಲಿ ವಿಡಿಯೋಗಳ ಸಬ್‍ಸ್ಕ್ರಿಪ್ಶನ್ ನಿಂದ ಬರುವ ಪಾಲು 84%ರಷ್ಟಕ್ಕೆ ತಲುಪಲಿದೆ. ಈಗ ಜಾಹಿರಾತಿನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅಷ್ಟೇ ಅಲ್ಲದೇ ನಾಲ್ಕು ವರ್ಷಗಳಲ್ಲಿ ಭಾರತದ ಒಟಿಟಿ ಮಾರುಕಟ್ಟೆ ಕೋರಿಯಾ ದೇಶವನ್ನು ಮೀರಿಸಲಿದೆ. ಪ್ರಪಂಚದಲ್ಲೇ 8ನೇ ಅತಿದೊಡ್ಡ ಒಟಿಟಿ ಮಾರುಕಟ್ಟೆ ಆಗಲಿದೆಯೆಂದು ಸಿಡಬ್ಲೂಸಿ ವರದಿ ಹೇಳುತ್ತಿದೆ. 2023 ಕೊನೆಗೆ ಜಗತ್ತಿನ ಓಟಿಟಿ ಮಾರುಕಟ್ಟೆಯ ಪರಿಮಾಣ 7,280 ಕೋಟಿ ಡಾಲರ್‍ಗಳ ಮಟ್ಟಕ್ಕೆ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ.

ಮನರಂಜನೆಯ ಕ್ಷೇತ್ರದಲ್ಲಿ ಅತ್ಯಧಿಕ ವೃದ್ಧಿ ಓಟಿಟಿಯದೇ…

ಭವಿಷ್ಯತ್ತಿನಲ್ಲಿ ಮಾಧ್ಯಮ , ಮನರಂಜನೆ ರಂಗದಲ್ಲಿ ಓಟಿಟಿ ಸೇವೆಗಳೆ ಹೆಚ್ಚಾಗುತ್ತಿವೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ನಾಲ್ಕು ವರ್ಷದಲ್ಲಿ ಒಟಿಟಿ, ಆನಲೈನ್ ಗೇಮಿಂಗ್, ಅಂತರ್ಜಾಲ ಧಾರವಾಹಿ ವಿಭಾಗದಲ್ಲಿ ಅತ್ಯಧಿಕ ವೃಧ್ದಿಯನ್ನು ನಮೂದಿಸಿವೆ ಎಂದು ಹೇಳುತ್ತಿದೆ. ಎರ್ನೆಸ್ಟ್ ಅಂಡ್ ಯಂಗ್ ವರದಿಯ ಪ್ರಕಾರ 2020ರ ಹೊತ್ತಿಗೆ ದೇಶದಲ್ಲಿ ಒಟಿಟಿ ಸೇವೆಯ ವಿನಿಯೋಗದಾರರ ಸಂಖ್ಯೆ 50ಕೋಟಿಗಳಿಗೆ ತಲಪುವ ಅವಕಾಶವಿದೆ. ಪ್ರಸ್ತುತ ದೇಶದಲ್ಲಿ ಹಿಂದಿ, ಇಂಗ್ಲೀಷ್ ಸಿನೆಮಾಗಳು, ವೆಬ್‍ಸೀರಿಸ್‍ಗಳು, ಇತರ ವಿಡಿಯೋ ಕಂಟೆಂಟ್‍ಗಳನ್ನು ಕಲ್ಪಿಸುವ ಒಟಿಟಿ ಪ್ಲೇಯರ್‍ಗಳೇ ಅಧಿಕ, ಭವಿಷ್ಯತ್ತಿನಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಆನ್ ಡಿಮಾಂಡ್ ವಿಡಿಯೋಗಳು ನೀಡುವ ಸಂಸ್ಥೆಗಳು ರಂಗಪ್ರವೇಶ ಮಾಡಲಿವೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಟಿವಿ ವಾಹಿನಿಗಳ ಹವಾ ಕಡಿಮೆಯಾಗಿಲ್ಲ

ಒಟಿಟಿ ಸೇವೆಗಳು ವೇಗವಾಗಿ ವೃದ್ಧಿ ಹೊಂದುತ್ತಿದ್ದರೂ ಸಹ ಕೇಬುಲ್, ಸೆಟಲೈಟ್ ಟಿವಿ ಚಾನೆಲ್ ಗಳ ಹವಾ ಮುಂದೆಯೂ ಸಹ ಇದೇ ರೀತಿ ಮುಂದುವರೆಯಲಿದೆ ಎಂದು ಮನರಂಜನೆಯ ಕ್ಷೇತ್ರದ ತಜ್ಞರ ಅಭಿಪ್ರಾಯವಾಗಿದೆ. ಕಳೆದ ವರ್ಷದ ಪೇ ಟಿವಿ ಸೇವೆಗಳ ಆದಾಯ 1000 ಕೋಟಿ ಡಾಲರ್ (70000ರೂ ಕೋಟಿ) ಗಳಿಗೆ ತಲುಪಲಿದೆ. 2023ಕ್ಕೆ ಭಾರತ ಜಗತ್ತಿನಲ್ಲೇ ಅತಿದೊಡ್ಡ ಟಿ.ವಿ ಜಾಹಿರಾತು ಮಾರುಕಟ್ಟೆಯಾಗಿ ಅವತರಿಸಲಿದೆ ಎಂದು ಸಿಡಬ್ಲೂಸಿ ಹೇಳುತ್ತಿದೆ. ಟಿವಿ ಜಾಹಿರಾತು ಮಾರುಕಟ್ಟೆ ವರ್ಷ ವರ್ಷ 10.7ರಷ್ಟು ವೃದ್ಧಿಸುತ್ತಿದ್ದು, ಬರುವ ನಾಲ್ಕು ವರ್ಷದಲ್ಲಿ 680 ಕೋಟಿ ಡಾಲರ್‍ಗಳಿಗೆ ತಲುಪಬಹುದೆಂದು ಅಂದಾಜು.

ಭಾರತದಲ್ಲಿ ಎಲ್ಲಾ ವರ್ಗದವರು ಸಿನೆಮಾಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಕಾಲಕಾಲಕ್ಕೆ ಹೊಚ್ಚಹೊಸ ಸಿನೆಮಾಗಳನ್ನು ಸಿಗುವಂತೆ ಮಾಡುವುದು ಕಷ್ಟ. ನಿರಂತರ ಅಧ್ಯಯನಗಳು, ಸಾಮಾಜಿಕ ಜಾಲತಾಣಗಳ ಮೂಲಕ ವಿನಿಯೋಗದಾರರು ಹಚ್ಚು ಇಷ್ಟಪಡುತ್ತಿರುವ ಸಿನೆಮಾಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಟೆಂಟ್ ವಿಭಾಗ ಅಧಿಪತಿ ವಿಜಯ್ ಸುಬ್ರಮಣ್ಯ ಹೇಳುತ್ತಾರೆ.

ಪ್ರಸ್ತುತ ದೇಶದಲ್ಲಿ ವಿಡಿಯೋ ಆನ್ ಡಿಮಾಂಡ್ ವ್ಯಾಪಾರಗಳಿಗೆ ಬಹುತೇಕ ಆದಾಯ ಜಾಹೀರಾತು ಮೂಲಕವೇ ಬರುತ್ತಿದೆ. ಭವಿಷ್ಯತ್ತಿನಲ್ಲಿ ಸಬ್‍ಸ್ಕ್ರಿಪಷನ್ ರೆವೆನ್ಯೂ ಭಾರಿ ಮೊತ್ತದಲ್ಲಿ ಬೆಳೆಯಲಿದೆ ಎಂದು ವೂಟ್ ವಿಡಿಯೋ ಆನ್ ಡಿಮಾಂಡ್ ವಿಭಾಗದ ಮುಖ್ಯಸ್ಥ ಆಕಾಶ್ ಬ್ಯಾನರ್ಜಿ ಅಭಿಪ್ರಾಯಪಡುತ್ತಾರೆ.

ನಮ್ಮ ದೇಶದಲ್ಲಿ ಸುಮಾರು 40 ಒಟಿಟಿ ಕಂಪೆನಿಗಳಿವೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ನೆಟ್‍ಪ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋ, ಹಾಟ್‍ಸ್ಟಾರ್, ಜೆಡ್‍ಈಈ5, ಹಿರೋಸ್ ನವ್, ವೋಟ್, ಸೋನಿ ಲೈವ್, ಏರಟೆಲ್ ಟಿವಿ, ವೊಡಾಫೋನ್ ಪ್ಲೇ, ಜೀಯೋ ಟಿವಿ, ವಯಾಕಾಮ್ 18 ಮುಂತಾದವು..

ಪ್ರಪಂಚಾದ್ಯಾಂತ ಸಿನಿಮಾಗಳನ್ನು ಎಲ್ಲರು ನೋಡತ್ತಾರೆ. ಕೆಲವರಿಗೆ ಆಕ್ಷನ್ ಇಷ್ಟ ಆಗಬಹುದು, ಕೆಲವರಿಗೆ ಯುದ್ದ ಆಧಾರಿತ, ಫಿಕ್ಷನ್, ಕಾಮಿಡಿ, ಹಾರರ್ ಈ ರೀತಿ ಇಷ್ಟ ಆಗಬಹುದು. ಮುಂಚೆ ಟಿವಿಗಳಲ್ಲಿ ಸಿನೆಮಾ ಮತ್ತು ಧಾರಾವಾಹಿ ಮಾತ್ರ ಇತ್ತು. ಈಗ ರಿಯಾಲಿಟಿ ಶೋಗಳು ಬಂದಿದಾವೆ ಆದರೆ ಅವೂ ಕೂಡ ಸತ್ವ ಕಳೆದುಕೊಳ್ಳುತ್ತಿರೋ ಸಮಯದಲ್ಲಿ ಈ ಒಟಿಟಿಗಳಲ್ಲಿ ಯಾವುದೇ ಜಾಹೀರಾತು ಇಲ್ಲದೇ ಕುಟುಂಬದ ಜೊತೆ ಕೂತು ನೋಡಬಹುದು. ತಿಂಗಳಿಗೆ 100 ರಿಂದ 200ರೂ ನಷ್ಟು ಖರ್ಚು ಬರುತ್ತದೆ ಅಷ್ಟೇ. ಅದೇ ನೀವು ಕುಟುಂಬದ ಜೊತೆ ಥೀಯೆಟರ್‍ಗೆ ಹೋದರೆ ಇನ್ನೂ ಜಾಸ್ತಿ ಖರ್ಚು ಆಗುತ್ತೆ. ಆನ್‍ಲೈನ್ ಸ್ಟ್ರೀಮಿಂಗ್ ನಲ್ಲಿರುವ ಪ್ರಯೋಜನ ಅಂದರೆ ನಾವು ಎಲ್ಲಿಯವರೆಗೂ ನೋಡಿ ನಿಲ್ಲಿಸಿರುತ್ತೇವೋ, ಮತ್ತೆ ಸಮಯ ಸಿಕ್ಕಾಗ ಮತ್ತೆ ಅಲ್ಲಿಂದಲೇ ನೋಡಬಹುದು. ಹಾಗೂ ಯಾವುದೇ ದೇಶದ ಭಾಷೆಯಾಗಲಿ ಡಬ್ಬಿಂಗ್ ಇಲ್ಲದಿದ್ದರೆ ಸಬ್‍ಟೈಟಲ್ ಹಾಕಿಕೊಂಡು ನೋಡಬಹುದು. ಸಿನೆಮಾಗಳು ಅಂದ್ರೆ ಬರೀ ಮನರಂಜನೆಯಲ್ಲ ಇದರಿಂದ ಇತಿಹಾಸ, ಜ್ಞಾನ ಎಲ್ಲವೂ ಸಿಗುತ್ತದೆ ಎನ್ನುತ್ತಾರೆ ಟ್ರಾವೆಲ್ ಅಡ್ವೈಸರ್, ಸಿನೆಮಾ ಪ್ರೇಮಿ ಮೋಹನ್ ಕುಮಾರ್ ರವರು. ಇವರು ಬೇರೆ ಬೇರೆ ಭಾಷೆಗಳ ಸಿನೆಮಾಗಳನ್ನು ನೋಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪರಿಚಯಿಸುವ ಹವ್ಯಾಸ ಇಟ್ಟುಕೊಂಡಿದ್ದಾರೆ.

ಸೌಜನ್ಯ: ಆಂಧ್ರಜ್ಯೋತಿ ಬಿಸೆನೆಸ್ ಡೆಸ್ಕ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...