Homeಚಳವಳಿ100 ಗಂಟೆ ಪೂರೈಸಿದ ಅಂಬೇಡ್ಕರ್ ಓದು ಸರಣಿ: ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಜ್ಞಾನ ಭಂಡಾರವಿದು

100 ಗಂಟೆ ಪೂರೈಸಿದ ಅಂಬೇಡ್ಕರ್ ಓದು ಸರಣಿ: ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಜ್ಞಾನ ಭಂಡಾರವಿದು

ಶೇ.50 ರಷ್ಟು ಮಹಿಳೆಯರು ಓದಿದ್ದಾರೆ. ಸುಮಾರು 6-7 ಲಕ್ಷ ಜನರು ಕೇಳಿಸಿಕೊಂಡಿದ್ದಾರೆ. ಹಲವರು ಮೊದಲ ಬಾರಿಗೆ ಅಂಬೇಡ್ಕರ್ ಬರಹಗಳನ್ನು ಓದಿದ್ದಾರೆ. ಇದು ಸರಣಿಯ ಯಶಸ್ಸು.

- Advertisement -
- Advertisement -

ಇಂದು ಬಾಬಾ ಸಾಹೇಬ್ ಭೀಮ್‌ರಾವ್ ಅಂಬೇಡ್ಕರ್‌ರವರ 131ನೇ ಜನ್ಮದಿನ. ಅಂಬೇಡ್ಕರ್ ನೆನಪಿನಲ್ಲಿ ಜಗತ್ತಿನಾದ್ಯಂತ ಸಮಾನತೆಯ ದಿನವನ್ನಾಗಿ ಇಂದು ಆಚರಿಸಲಾಗುತ್ತಿದೆ. ಅಂಬೇಡ್ಕರ್ ಬದುಕು, ಬರಹ ಹೋರಾಟದ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಅಂಬೇಡ್ಕರ್‌ರವರ ಮೂಲ ಬರಹಗಳನ್ನು ಕನ್ನಡದಲ್ಲಿ ಕೇಳುವ ವಿಶಿಷ್ಟ ಪ್ರಯತ್ನವಾದ ‘ಅಂಬೇಡ್ಕರ್ ಓದು ಸರಣಿಯು’ 100 ಗಂಟೆಗಳ ಕಾಲ ಪೂರೈಸಿ ಮುನ್ನಡೆಯುತ್ತಿದೆ. ಆ ಮೂಲಕ ಡಿಜಿಟಲ್ ಮಾಧ್ಯಮಗಳಲ್ಲಿಯೂ ಅಂಬೇಡ್ಕರ್ ವಿಚಾರಗಳು ಹರಿದಾಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಜಾನಪದ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಅರುಣ್ ಜೋಳದ ಕೂಡ್ಲಿಗಿಯವರು ಸೆಪ್ಟೆಂಬರ್ 7, 2020 ರಂದು ಆರಂಭಿಸಿದ ಈ ಅಂಬೇಡ್ಕರ್ ಓದು ಸರಣಿಯಲ್ಲಿ ಒಟ್ಟು 470 ಸಂಚಿಕೆಗಳು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿವೆ. 321 ಜನ ಅಂಬೇಡ್ಕರ್‌ರವರ ಬರಹಗಳನ್ನು ಓದಿಕೊಂಡು ನಂತರ ಆಡಿಯೊ ಮಾಡಿ ಇನ್ನಿತರರು ಕೇಳುವಂತೆ ಮಾಡಿದ್ದಾರೆ. ಅದರಲ್ಲಿ 155 ಮಹಿಳೆಯರು ಸಹ ಸಹಭಾಗಿಗಳಾಗಿರುವುದು ವಿಶೇಷವಾಗಿದೆ.

Arun jolad Kudligi ಯೂಟ್ಯೂಬ್ ಚಾನೆಲ್‌ನಲ್ಲಿ ಈ ಎಲ್ಲಾ 470 ಸಂಚಿಕೆಗಳನ್ನು ಯಾರೂ ಬೇಕಾದರೂ ಉಚಿತವಾಗಿ ಕೇಳಬಹುದಾಗಿದೆ. ಅಂಬೇಡ್ಕರ್‌ರವರು ಬರೆದಿರುವ ‘ಹಿಂದೂ ಧರ್ಮದ ತತ್ವಜ್ಞಾನ, ಬುದ್ಧ ಮತ್ತು ಆತನ ಧಮ್ಮ, ಸ್ಟೇಟ್ಸ್ ಅಂಡ್ ಮೈನಾರೀಟಿಸ್’ ಸೇರಿದಂತೆ ಹಲವಾರು ಪುಸ್ತಕಗಳ ಪ್ರಮುಖ ಭಾಗಗಳನ್ನು ಆಡಿಯೋ ಮಾಡುವ ಮೂಲಕ “ಅಂಬೇಡ್ಕರ್ ಕೇಳು” ಎಂಬುದಾಗಿ ಈ ಅಭಿಯಾನ ನಡೆಯುತ್ತಿದೆ. ಅಲ್ಲದೆ ಈ ಸರಣಿಯಲ್ಲಿ ಅಂಬೇಡ್ಕರ್‌ರವರ ಲೇಖನಗಳು- ಬರಹಗಳು, ಪತ್ರಿಕಾ ಹೇಳಿಕೆಗಳು, ಭಾಷಣಗಳು, ಟಿಪ್ಪಣಿಗಳು ಮತ್ತು ಪತ್ರಗಳು ಸಹ ಇದ್ದು, ಅಂಬೇಡ್ಕರ್‌ರವರ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

“ಇಂದು ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಡಿಜಿಟಲ್ ಸ್ಪೇಸ್‌ಗಳಲ್ಲಿ ವ್ಯಯಿಸುತ್ತಿದ್ದಾರೆ. ಅಲ್ಲಿಯೂ ಸಹ ಅಂಬೇಡ್ಕರ್‌ ಬರಹಗಳು ಕೇಳಲು, ಓದಲು ಸಿಗುವಂತೆ ಮಾಡಬೇಕು ಎಂಬ ಉದ್ದೇಶದಿಂದ ಈ ಸರಣಿ ಆರಂಭಿಸಿದೆವು. ಎಲ್ಲರ ಅಂಬೇಡ್ಕರ್ ಎನ್ನುವ ತತ್ವದಡಿ ಸಹಭಾಗಿತ್ವದ ಒಳಗೊಳ್ಳುವಿಕೆಯ ಮೂಲಕ ಇದು ಯಶಸ್ಸು ಗಳಿಸಿದೆ. ಹಾಗಾಗಿ ಇದು ಎಲ್ಲರ ಸಹಭಾಗಿತ್ವದ ಗೆಲುವು ಎಂದು ಕರೆಯಬಹುದು” ಎನ್ನುತ್ತಾರೆ ಸರಣಿಯನ್ನು ಆರಂಭಿಸಿದ ಅರುಣ್ ಜೋಳದ ಕೂಡ್ಲಿಗಿಯವರು.

ಶೇ.50 ರಷ್ಟು ಮಹಿಳೆಯರು ಈ ಅಭಿಯಾನದ ಭಾಗವಾಗಿದ್ದಾರೆ. ಸುಮಾರು 6-7 ಲಕ್ಷ ಜನರು ಈ ಬರಹಗಳನ್ನು ಕೇಳಿಸಿಕೊಂಡಿದ್ದಾರೆ. ಇದುವರೆಗೂ ಅಂಬೇಡ್ಕರ್ ಬರಹಗಳನ್ನು ಓದಲು ಸಾಧ್ಯವಾಗದಿದ್ದವರು ಈ ಸರಣಿ ಆರಂಭವಾದ ನಂತರ ಮೊದಲ ಬಾರಿಗೆ ಅಂಬೇಡ್ಕರ್ ಬರಹಗಳನ್ನು ಓದಿದ್ದಾರೆ. ಅಂಬೇಡ್ಕರ್ ಚಿಂತನೆಗೆ ಪ್ರವೇಶ ಮಾಡಲಾಗದಿರುವವರನ್ನು ಗುರುತಿಸಿ ಒಳಗೊಳ್ಳುತ್ತಿದ್ದೇವೆ, ಇದೆಲ್ಲವೂ ಈ ಸರಣಿಯ ಸಾಧನೆ ಎಂದು ಅವರು ಹೇಳುತ್ತಾರೆ.

ಇನ್ನು ಮುಂದೆ ಅಂಬೇಡ್ಕರ್‌ರವರ ಬಹುಮುಖ್ಯವಾದ ದೊಡ್ಡ ಪುಸ್ತಕಗಳನ್ನು ಓದುವ ಯೋಜನೆ ಹಾಕಿಕೊಂಡಿದ್ದೇವೆ. ಹಿಂದೂ ಧರ್ಮದ ತತ್ವಜ್ಞಾನ ಎಂಬ 100 ಪುಟದ ಪುಸ್ತಕವನ್ನು 20 ಜನರು ಓದಲು ಹಂಚಿಕೊಂಡಿದ್ದೇವೆ. ಅಂಬೇಡ್ಕರ್‌ರವರ ಎಲ್ಲಾ ಬರಹಗಳನ್ನು ಇಲ್ಲಿ ತರಲು ಸಾಧ್ಯವಾಗದಿದ್ದರೂ ಅಂಬೇಡ್ಕರ್‌ರವರು ಬರೆದ, ಆಲೋಚಿಸಿದ ನೂರಾರು ಕ್ಷೇತ್ರಗಳ ಪ್ರಮುಖ ಭಾಗಗಳನ್ನು ಇಲ್ಲಿ ತರಲು ಉದ್ದೇಶಿಸಿದ್ದೇವೆ ಎಂದರು.

ಅಂಬೇಡ್ಕರ್ ಬರಹಗಳನ್ನು ಕೇಳಲು ಇರುವ ಅದ್ಭುತ ಜ್ಞಾನ ಭಂಡಾರವಾಗಿ ಈ ಅಂಬೇಡ್ಕರ್ ಓದು ಸರಣಿ ರೂಪುಗೊಂಡಿದೆ ಮತ್ತು ಮುಂದುವರೆಯುತ್ತಿದೆ. ನಿಮ್ಮ ಮೊಬೈಲ್‌ಗೆ ಒಂದು ಹೆಡ್‌ಫೋನ್ ಸಿಕ್ಕಿಸಿ ನಿಮ್ಮ ನಿಮ್ಮ ಕೆಲಸ ಮಾಡುತ್ತಲೇ ಅಂಬೇಡ್ಕರ್ ಚಿಂತನೆಗಳನ್ನು ಕೇಳಿಸಿಕೊಂಡು ಮನಸ್ಸಿಗೆ ಇಳಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. ಮುಂದೆಯು ಕೇಳಲು ಚಾನೆಲ್ ಸಬ್‌ಸ್ಕ್ರೈಬ್‌ ಮಾಡಿ. ಅದೇ ರೀತಿಯಾಗಿ ನೀವು ಸಹ ಅಂಬೇಡ್ಕರ್ ಬರಹಗಳನ್ನು ಓದಿ ಸರಣಿಗೆ ಕೊಡುಗೆ ನೀಡಲು ಬಯಸಿದರೆ ಆಯೋಜಕರಾದ ಡಾ. ಅರುಣ್ ಜೋಳದ ಕೂಡ್ಲಿಗಿಯವರನ್ನು (9901445702) ಸಂಪರ್ಕಿಸಬಹುದು.


ಇದನ್ನೂ ಓದಿ: ಹಲವು ಧ್ವನಿಗಳಲ್ಲಿ ಅಂಬೇಡ್ಕರ್ ವಿಚಾರಗಳನ್ನು ಹಿಡಿದಿಡುತ್ತಿರುವ ಓದು ಅಭಿಯಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...