Homeಮುಖಪುಟಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

ಬ್ರಾಹ್ಮಣ್ಯದ ವಿರೋಧ ಮತ್ತು ಜಾತಿ ವಾಸ್ತವದ ಪ್ರಶ್ನೆಗೆ ಒಂದು ಉತ್ತರ

"ಅವರು ಇತಿಹಾಸದ ಪುಟಗಳಲ್ಲಿ, ದೇಶದಲ್ಲಿ ಯಾರೂ ಮುಟ್ಟಿಸಿಕೊಳ್ಳದ, ಊರ ಹೊರಗಿಟ್ಟ, ಬದುಕುವ ಎಲ್ಲ ಅವಕಾಶಗಳನ್ನೂ ನಿರಾಕರಿಸಿ ಅತ್ಯಂತ ಕೀಳು ದರ್ಜೆಗೆ ತಳ್ಳಲ್ಪಟ್ಟಂಥ ಜನಸಮುದಾಯಗಳು ಇದ್ದವು ಎಂದು ಓದಿಕೊಳ್ಳಬೇಕಾಗಿ ಬಂದಾಗ, ಆ ಸಮುದಾಯಗಳು ಯಾವವು ಎಂದರೆ ಏನು ಹೇಳುತ್ತೀರಿ?"

- Advertisement -
- Advertisement -

ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶೂದ್ರ ಸಮೂದಾಯದ ಹಿರಿಯ ಮಿತ್ರರೊಬ್ಬರು ನನಗೆ ‘ನೀವು ತುಂಬ ತೀಕ್ಷ್ಣವಾಗಿ ಚಿಂತನೆ ಮಾಡುತ್ತಿರಿ(ಸುಳ್ಳು). ಆದರೆ ನೀವು ಹೆಚ್ಚು ಜಾತಿ ಬಗ್ಗೆಯೇ ಮಾತನಾಡುತ್ತ, ಬ್ರಾಹ್ಮಣರ ಬಗ್ಗೆಯೇ ಹೆಚ್ಚು ದ್ವೇಷ ಮಾಡುತ್ತಿರಿ. ಅದು ಸರಿಯೇ’? ಎಂದರು. ನಾನು ಗಾಬರಿಯಾದೆ. ನನಗೆ ಇದು ಹೊಸ ಆರೋಪವಾಗಿತ್ತು ಮತ್ತು ಅವರಿಗೆ ಉತ್ತರಿಸಲು ಸಾಕಷ್ಟು ಸಮಯದ ಅಗತ್ಯ ಇದ್ದುದರಿಂದ ನಾನು ಅವರ ಮುಖವನ್ನೊಮ್ಮೆ ದಿಟ್ಟಿಸಿ ನೋಡಿ ನಾನು ಈ ವಿಷಯದ ಕುರಿತು ನಂತರ ಮಾತನಾಡುತ್ತೇನೆ ಎಂದು ಹೇಳಿ ಅಲ್ಲಿಂದ ಬಂದು ಬಿಟ್ಟೆ.

ಆ ನನ್ನ ಮಿತ್ರರಿಗೆ ಉತ್ತರ ಇಷ್ಟೇ.

ಭಾರತದಲ್ಲಿ ಯಾವ ವಿಷಯಗಳೂ ಜಾತಿ ಪರೀದಿಯನ್ನು ದಾಟಿ ಬೆಳೆದಿಲ್ಲಿ. ಅದು ಸಾಮಾಜಿಕ ಇರಬಹುದು, ರಾಜಕೀಯ ಇರಬಹುದು , ಅರ್ಥ ವ್ಯವಸ್ಥೆ, ಶಿಕ್ಷಣ, ಸಂಸ್ಕೃತಿ ಯಾವುದನ್ನೇ ತೆಗೆದುಕೊಂಡರೂ ಅದು ಜಾತಿ ಪರಿಮಿತಿಯಲ್ಲೇ ಹರಡಿಕೊಂಡಿದೆ. ನಮ್ಮ ಸಾಮಾಜಿಕ ಸಂಬಂಧಗಳು, ಭೂ ಸಂಬಂಧಗಳು, ವೈವಾಹಿಕ ಸಂಬಂಧಗಳನ್ನು ತೆಗೆದುಕೊಂಡರೂ ಅವುಗಳ ಬೆಳವಣಿಗೆ ಜಾತಿ ಪರಿದಿಯ ಮಿತಿಯಲ್ಲೇ ಇರುತ್ತದೆ. ಶಾಲೆಯಲ್ಲಿ ಸರ್ವಜನಾಂಗದ ತೋಟದಂತೆ ಕಲೆತು ಬೆರೆತು ಕಲಿಯುವ ಮಕ್ಕಳು ಶಾಲೆ ಮುಗಿದ ತಕ್ಷಣ ಹೊರಡುವುದು ಎಲ್ಲಿಗೆ? ಜಾತಿ ಆಧಾರಿತವಾಗಿ ಪ್ರತೇಕವಾಗಿರುವ ತಮ್ಮ ಜಾತಿ ವಾಸಸ್ಥಾನಗಳಿಗೆ. ಅವು ಎಲ್ಲ ರೀತಿಯಲ್ಲೂ ಪ್ರತ್ಯೇಕ ಜಗತ್ತುಗಳೇ ಆಗಿವೆ. ಒಂದಕ್ಕೊಂದು ತೆರೆದುಕೊಳ್ಳಲು ಸಾಧ್ಯವಾಗದಷ್ಟು ಬಿಗಿಯಾಗಿವೆ. ಮಕ್ಕಳು ಬೆಳೆದಂತೆ ಜಾತಿ ಪ್ರಜ್ಞೆ ಕೂಡ ಬಲಿಯುತ್ತ ಹೋಗುತ್ತದೆ. ಜಾತಿ ಪರೀದಿ ದಾಟಿ ಏನು ಬೆಳೆದಿದೆ ಇಲ್ಲಿ?

ಜಾತಿ ಸಮಸ್ಯೆ ಅಂದಾಕ್ಷಣ ದಲಿತ ಮತ್ತು ಸವರ್ಣೀಯರ ಸಂಘರ್ಷ ಅಂತ ಭಾವಿಸಬೇಕಿಲ್ಲ. ಬ್ರಾಹ್ಮಣ ಒಳ ಪಂಗಡಗಳ ಒಳಗೇ ಮೇಲರಿಮೆಗಾಗಿ ಎಷ್ಟು ಸಂಘರ್ಷ ಇದೆ ಎಂಬುದನ್ನು ನಾವು ತಿಳಿಯಬೇಕು. ವೈಶ್ಯ, ಶೂದ್ರ ಸಮುದಾಯಗಳು ಒಳ ಪಂಗಡಗಳಲ್ಲಿ ತಮ್ಮ ತಮ್ಮ ಶ್ರೇಷ್ಠತೆಗಾಗಿ ನಡೆಸುವ ಕಚ್ಚಾಟಗಳನ್ನು ನಾವು ಗಮನಿಸಬೇಕು. ದಲಿತರ ಒಳ ಪಂಗಡಗಳಲ್ಲಿರುವ ಪ್ರತ್ಯೇಕತೆಗಳನ್ನು ನೋಡಬೇಕು. ಇವೆಲ್ಲವೂ ಭಾರತೀಯರನ್ನೂ ಪ್ರತಿ ವಿಷಯದಲ್ಲೂ ಸಾವಿರಾರು ಪ್ರತ್ಯೇಕ ಸಮುದಾಯಗಳನ್ನಾಗಿ ಬೇರ್ಪಡಿಸಿ ವಿಕಾಸಗೊಳಿಸಿವೆ. ಹೀಗಾಗಿ ಇಲ್ಲಿ ಭೀಕರವಾದ ಅಸಮಾನತೆ ಎಲ್ಲ ಹಂತದಲ್ಲೂ ತಾಂಡವಾಡುತ್ತಿರುವುದರಿಂದ ಇದಕ್ಕೆಲ ಜಾತಿ ವ್ಯವಸ್ಥೆಯೇ ಕಾರಣವಾಗಿರುವುರಿಂದ, ಎಲ್ಲವೂ ಜಾತಿ ಆಧಾರಿತವಾಗಿರುವುದರಿಂದ ನಾನು ವಿಷಯಾಧಾರಿತವಾಗಿ ಮಾತನಾಡುವಾಗ ಜಾತಿ ಬಿಟ್ಟು ಮಾತನಾಡಲು ಸಾಧ್ಯವಿಲ್ಲ.

ಇನ್ನೂ ಬ್ರಾಹ್ಮಣರನ್ನು ದ್ವೇಷ ಮಾಡುತ್ತಿರಿ ಎಂಬುದು. ನಾನು ಎಂದೂ ಜನರನ್ನು ದ್ವೇಷಿಸುವುದಿಲ್ಲ. ನಿಲುವುಗಳನ್ನು ಟೀಕಿಸುವುದು, ವಿರೋಧಿಸುವುದು ದ್ವೇಷವಾಗುವುದಿಲ್ಲ. ಆಗಬಾರದು. ಹಾಗೇ ನೋಡಿದರೆ ನಾನು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಹೆಚ್ಚು ವರ್ತಮಾನದ ವಾಸ್ತವದ ಬಗ್ಗೆ ಮಾತನಾಡುತ್ತೇನೆ. ಅದರ ಬಗ್ಗೆ ಮಾತನಾಡುವಾಗ ನಾನು ಹೆಚ್ಚು ಟೀಕಿಸಿದ್ದು ಶೂದ್ರ ಸಮುದಾಯಗಳನ್ನು‌. ಜಾತಿ ಕ್ರೌರ್ಯ, ಮತ್ತು ಆಚರಣೆಯಲ್ಲಿ ಯಾರು ಮುಂದಿದ್ದಾರೆ ಎಂಬ ಕನಿಷ್ಠ ತಿಳುವಳಿಕೆ ನನಗಿದೆ. ದಲಿತರೊಂದಿಗೆ ನಡೆದಿರುವ, ನಡೆಯುತ್ತಿರುವ ಅಂತರ್ಜಾತಿ ಮದುವೆಗಳ ಸಂಬಂಧಗಳನ್ನು ಅತಿ ಹೆಚ್ಚು ಉಳಿಸಿಕೊಳ್ಳುತ್ತಿರುವುದು ಬ್ರಾಹ್ಮಣರೇ. ಅತಿ ಕ್ರೂರವಾಗಿ ಅಂತ್ಯಗೊಳ್ಳುತ್ತಿರುವ ಸಂಬಂಧಗಳು ಶೂದ್ರರೊಂದಿಗಿನ ಸಂಬಂಧಗಳೇ ಆಗಿವೆ. ಆದಾಗ್ಯೂ ಕೂಡ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವಾಗ ಅದರ ಹುಟ್ಟು, ಬೆಳವಣಿಗೆ, ಆಚರಣೆ ಕುರಿತು ಮಾತನಾಡಲೇ ಬೇಕು. ಅಲ್ಲಿ ನಾವು ಬ್ರಾಹ್ಮಣರ ಕುರಿತು ಅಲ್ಲದಿದ್ದರೂ ಬ್ರಾಹ್ಮಣ್ಯದ ಕುರಿತು ಮಾತನಾಡಲೇ ಬೇಕಾಗುತ್ತದೆ. ಅದು ಆ ಸಮುದಾಯವೇ ಹುಟ್ಟು ಹಾಕಿದಂಥ ಒಂದು ಸಿದ್ದಾಂತ. ಅದರ ಹುಟ್ಟನ್ನು ಅವರಿಂದ ಬೇರ್ಪಡಿಸಿ ಮಾತನಾಡಲು ಸಾಧ್ಯವಿಲ್ಲ ಹಾಗಾಗಿ ಬ್ರಾಹ್ಮಣ್ಯದ ಹುಟ್ಟು ಬೆಳವಣಿಗೆ ಬಗ್ಗೆ ಆ ಸಮುದಾಯವನ್ನು ಬಿಟ್ಟು ಮಾತನಾಡಲು ಸಾಧ್ಯವಿಲ್ಲ. ಅದರ ಅರ್ಥ ಸಮುದಾಯವೊಂದು ಇತಿಹಾಸದ ಒಂದು ಕಾಲಘಟ್ಟದಲ್ಲಿ ನಿರ್ಮಿಸಿದ ವ್ಯವಸ್ಥೆಯೊಂದಕ್ಕೆ ಆ ಸಮುದಾಯದಿಂದ ಬಂದಿರುವ ಈಗಿನ ಜನರೆಲ್ಲರೂ ಪ್ರಾಯಶ್ಚಿತ ಪಡಬೇಕು ಅಥವಾ ಅದರ ಜವಾಬ್ದಾರಿ ಹೊರಬೇಕು ಎಂಬುದು ಅತ್ಯಂತ ತರ್ಕವಿಲ್ಲದ ಮಾತು. ಆದರೆ ಅದರ ಹುಟ್ಟನ್ನು ಕುರಿತು ಮಾತನಾಡುವಾಗ ಆ ಸಮುದಾಯವನ್ನು ಗುರುತಿಸಲೇ ಬೇಕಾಗುತ್ತದೆ. ಈಗಲೂ ಆ ಸಮುದಾಯದ ಜನ ತಮ್ಮ ಪೂರ್ವಜರು ಮಾಡಿದ್ದು ಸರಿಯಾದದ್ದು, ಅದರ ಫಲಾನುಭವ ತಮ್ಮ ಹಕ್ಕು ಎಂದು ಭಾವಿಸುವುದಾದರೆ ಖಂಡಿತ ಅಂತಹ ವ್ಯಕ್ತಿಗಳ ಮನಸ್ಥಿತಿಯನ್ನು ನಾನು ವಿರೋಧಿಸುತ್ತೇನೆ.


ಇದನ್ನೂ ಓದಿ: ಜಾತಿ ಮತ್ತು ಮೀಸಲಾತಿ ಬಗ್ಗೆ ನಟಿ ಕಂಗನಾ ರಣಾವತ್‌ಗೊಂದು ಪತ್ರ


ಮಯನ್ಮಾರದ ಬೌದ್ಧರು ರೋಹಿಂಗ್ಯ ಮುಸಲ್ಮಾನರನ್ನು ನೆಡಸಿಕೊಂಡ ಅಮಾನವೀಯ ರೀತಿಯನ್ನು, ಶ್ರೀಲಂಕಾದ ಬೌದ್ಧರು ನಡೆಸಿದ ತಮಿಳರ ನರಹತ್ಯೆಯನ್ನೂ ನಾನು ಮನುಷ್ಯ ಸಮಾಜ ನಡೆಸಬಾರದ ಕೃತ್ಯಗಳೆಂದೆ ಖಂಡಿಸುತ್ತೇನೆ. ಹಾಗೇ ಬ್ರಾಹ್ಮಣ್ಯವನ್ನೂ, ಒಂದು ಕಾಲಘಟ್ಟದಲ್ಲಿ ಜಾತಿ ತಾರತಮ್ಯವನ್ನು ಹುಟ್ಟು ಹಾಕಿ ಜಾರಿಗೆ ತಂದ ಬ್ರಾಹ್ಮಣರ ಕೃತ್ಯವನ್ನೂ ಕೂಡ ವಿರೋಧಿಸುತ್ತೇನೆ. ನನ್ನ ಸಮುದಾಯದ ಮುಂದಿನ ತಲೆಮಾರಿನ ಜನರು ಒಂದು ವೇಳೆ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಿದ್ದರೂ, ಜಾತಿ ಅಸ್ಥಿತ್ವ ಕಾಣೆಯಾದರೂ, ಅವರು ಇತಿಹಾಸದ ಪುಟಗಳಲ್ಲಿ, ದೇಶದಲ್ಲಿ ಯಾರೂ ಮುಟ್ಟಿಸಿಕೊಳ್ಳದ, ಊರ ಹೊರಗಿಟ್ಟ, ಬದುಕುವ ಎಲ್ಲ ಅವಕಾಶಗಳನ್ನೂ ನಿರಾಕರಿಸಿ ಅತ್ಯಂತ ಕೀಳು ದರ್ಜೆಗೆ ತಳ್ಳಲ್ಪಟ್ಟಂಥ ಜನಸಮುದಾಯಗಳು ಇದ್ದವು ಎಂದು ಓದಿಕೊಳ್ಳಬೇಕಾಗಿ ಬಂದಾಗ, ಆ ಸಮುದಾಯಗಳು ಯಾವವು ಎಂದರೆ ಏನು ಹೇಳುತ್ತೀರಿ? ಆಗ ದಲಿತ ಸಮುದಾಯಗಳನ್ನೇ ಗುರುತಿಸಬೇಕಲ್ಲವೇ? ಆಗ ನಮ್ಮ ಪೀಳಿಗೆ, ಒಂದು ವೇಳೆ ತಮ್ಮ ಸಮುದಾಯಗಳು ಹೀಗೆ ಬದುಕಿದ್ದವು ಎಂಬುದು ತಮ್ಮ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ವಿರೋಧಿಸಿದರೆ ಇತಿಹಾಸದ ವಾಸ್ತವವನ್ನು ಬದಲಿಸಿ ಬರೆಯಲು ಸಾಧ್ಯವೇ?.

ಮಹಾಲಿಂಗಪ್ಪ ಆಲಬಾಳ. (ಯುವ ಬರಹಗಾರರು, ಸಾಮಾಜಿಕ ಕಾರ್ಯಕರ್ತರು. ಅಭಿಪ್ರಾಯಗಳು ವಯಕ್ತಿಕವಾದವು.)


ಇದನ್ನೂ ಓದಿ: ಭಾರತದ ಜಾತಿ ವೃಕ್ಷದ ವಿಷಕಾರಿ ಹಣ್ಣು ಖೈರ್ಲಾಂಜಿಯನ್ನು ಮರೆಯಬಾರದು…

Also Read: Mob of 200 People from Dominant Castes Attack Dalits in Ainlasari, Odisha

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...