Homeಮುಖಪುಟ2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

2021 ವಿಶೇಷವಾಗಿ ಮರೆಯಲೇಬೇಕಾದ ವರ್ಷ

- Advertisement -
- Advertisement -

ಐರ್‍ಲೆಂಡಿನಲ್ಲಿ 1916ರಲ್ಲಿ ನಡೆದ, ಹಿಂಸೆ ಮತ್ತು ಅನೇಕ ಯುವಜನರ ಸಾವಿಗೆ ಕಾರಣವಾದ ’ಈಸ್ಟರ್ ಬಂಡಾಯ’ವನ್ನು ಕುರಿತು ಐರಿಷ್ ಕವಿ ಡಬ್ಲ್ಯೂ.ಬಿ.ಯೇಟ್ಸ್ “ಪ್ರತಿಯೊಂದೂ ಬದಲಾಯಿತು, ತೀವ್ರವಾಗಿ ಬದಲಾಯಿತು, ಹಾಗೂ ಒಂದು ಭಯಂಕರವಾದ ಸೌಂದರ್ಯ ಉದ್ಭವಿಸಿತು” ಎಂದು ಸ್ಮರಣೀಯ ಮಾತುಗಳಲ್ಲಿ ಉದ್ಗರಿಸಿ ಇಂದಿಗೆ ಒಂದು ಶತಮಾನಕ್ಕಿಂತಲೂ ಸ್ವಲ್ಪ ಹೆಚ್ಚು ಕಾಲವಾಯಿತು. ಈ ಮಾತು ನಮ್ಮ ಕಾಲಕ್ಕೂ ಸಮರ್ಪಕವಾಗಿ ಅನ್ವಯಿಸುತ್ತದೆ. 21ನೇ ಶತಮಾನದ ಮೊದಲ ಎರಡು ದಶಕಗಳು ಜಗತ್ತನ್ನು ಅನೇಕ ಮೂಲಭೂತ ರೀತಿಗಳಲ್ಲಿ ಬದಲಾಯಿಸಿದವು; 2021ನೇ ವರ್ಷವು ಆ ಬದಲಾವಣೆಗಳ ವೇಗವನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕ ಚರ್ಚೆಯು ಈ ಬದಲಾವಣೆಗಳನ್ನು ಸಮರ್ಪಕವಾಗಿ ಪ್ರತಿಫಲಿಸಿಲ್ಲದಿರಬಹುದು; ಆದರೆ ಅವು ಸಂಭವಿಸಿಯೇ ಇಲ್ಲ ಎಂದು ಇದರರ್ಥವಲ್ಲ.
ನಿಜವಾಗಿ ಹೇಳಬೇಕೆಂದರೆ, ವಾಸ್ತವ ಸ್ಥಿತಿ ಮತ್ತು ಅದನ್ನು ಕುರಿತ ಗ್ರಹಿಕೆ ಇವುಗಳ ನಡುವೆ ಏನು ಕಂದರವಿದೆಯೋ, ಅದೂ ಸಹ ಈ ಬದಲಾವಣೆಯ ಒಂದು ಭಾಗವೇ ಆಗಿದೆ.

ಕೊರೊನಾ ಒಂದು ಹೊಸ ವೈರಸ್ ಆಗಿದ್ದರೂ, ಒಟ್ಟಾರೆ ಮಹಾ ಸಾಂಕ್ರಾಮಿಕದ ಅನುಭವವೇನೂ ಮಾನವ ಕುಲಕ್ಕೆ ಹೊಸದಲ್ಲ. ಈ ಹಿಂದೆಯೂ ಜಗತ್ತಿನಲ್ಲಿ ಇತರ ಮಹಾ ಸಾಂಕ್ರಾಮಿಕಗಳು, ಪ್ಲೇಗುಗಳು ಹಾಗೂ ನೈಸರ್ಗಿಕ ವಿಕೋಪಗಳು ಸಂಭವಿಸಿವೆ. ಆದರೆ ಈ ಬಾರಿ ಕೊರೊನಾಕ್ಕೆ ಜಗತ್ತಿನಾದ್ಯಂತ ಸಾರ್ವಜನಿಕ ವಲಯಗಳಲ್ಲಿ ನೀಡಲಾದ ಗಮನ ಮಾತ್ರ ಹಿಂದೆಂದೂ ಕಾಣದಿದ್ದಂತಹದು. 2020 ಮತ್ತು 2021ರ ಎರಡು ವರ್ಷಗಳಲ್ಲಿ ಟಿವಿಗಳ ಸಮಯವು ಪ್ರಧಾನವಾಗಿ ಸಾರ್ವಜನಿಕ ಆರೋಗ್ಯ ಮತ್ತು ಸರ್ಕಾರಿ ನಿಯಂತ್ರಣಗಳನ್ನು ಕುರಿತ ಚರ್ಚೆಗಳ ಸುತ್ತಲೇ ಸುತ್ತಿದೆ. ಆದಾಗ್ಯೂ, ಇಷ್ಟೇ ಗಮನಕ್ಕೆ ಅರ್ಹವಾದ ಇನ್ನಿತರ ವಿಚಾರಗಳೂ ಇವೆ. ಅವುಗಳಲ್ಲಿ: ಪ್ರಜಾಪ್ರಭುತ್ವದಂತಹ 20ನೇ ಶತಮಾನದ ಚಿಂತನೆಗಳಿಗೆ ಎಷ್ಟುಮಾತ್ರಕ್ಕೂ ಆಶಾದಾಯಕವಲ್ಲದ ರಾಜಕೀಯ ವಾತಾವರಣ; ಮಾನವರ ಚಿಂತನಾ ಸಾಮರ್ಥ್ಯದ ಮೇಲೆ ಕೃತಕ ಬುದ್ಧಿಮತ್ತೆಯ ಬಿಗಿ ಹಿಡಿತ; ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ನಿಂದ ಪಾಶ್ಚಿಮಾತ್ಯ ಪಡೆಗಳಿಗೆ ಸೋಲು; ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ, ಅತ್ಯಂತ ದುರ್ಗತಿಗೆ ಈಡಾಗಿರುವ ಭೂ ಪರಿಸರ – ಇವೆಲ್ಲವೂ ಸೇರಿವೆ. ಜಗತ್ತನ್ನೊಂದು ’ಜಾಗತಿಕ ಗ್ರಾಮ’ವನ್ನಾಗಿಸುವ ಆಶಾಭಾವನೆಯನ್ನು, ’ಬ್ರೆಕ್ಸಿಟ್’ನ ಹಣೆಬರಹವನ್ನು ಅಂತಿಮಗೊಳಿಸುವ ಮೂಲಕ ನಿರ್ಣಾಯಕವಾಗಿ ಹೊಸಕಿ ಹಾಕಿದ್ದು 2021ರಲ್ಲೇ. ಕೋವಿಡ್‌ನಿಂದಾಗಿ ಒಂದಾದ ಮೇಲೊಂದು ದೇಶಗಳು ತಮ್ಮದೇ ದೇಶಗಳ ಒಳಗೂ ಸಹ ಜನರ ಮುಕ್ತ ಓಡಾಟಕ್ಕೆ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಜಗತ್ತನ್ನು ಕೋವಿಡ್ ಹಿಂದೆಂದಿಗಿಂತಲೂ ಹೆಚ್ಚು ದೂರದೂರ ಮಾಡಿಟ್ಟಿದೆ.

ಅಮೆರಿಕದಲ್ಲೇನೋ ಡೊನಾಲ್ಡ್ ಟ್ರಂಪ್‌ನ ಅಧ್ಯಕ್ಷಗಿರಿ ಕೊನೆಗೊಂಡಿದೆಯಾದರೂ, ಸಾಂಪ್ರದಾಯಿಕತೆ ಮತ್ತು ಸಂಪ್ರದಾಯವಾದಗಳು ಜಗತ್ತಿನಾದ್ಯಂತ ತೀವ್ರ ರೀತಿಯಲ್ಲಿ ಗಟ್ಟಿಗೊಳ್ಳುತ್ತಲೇ ಸಾಗಿವೆ. ಅಲ್ಲಿಇಲ್ಲಿ ಉಳಿದುಕೊಂಡಿರುವ ಪ್ರಜಾಪ್ರಭುತ್ವವು ಅರ್ಥವಾಗದಂತಹ ಸುಸ್ತಿನ ಚಿಹ್ನೆಗಳನ್ನು ಈ ವರ್ಷ ತೋರ್ಪಡಿಸಿತು. ಈ ವರ್ಷದುದ್ದಕ್ಕೂ ನಾಗರಿಕ ಹಕ್ಕುಗಳು ಮೊಟಕುಗೊಳ್ಳುತ್ತಲೇ ಬಂದವು. ಮೂಲಭೂತವಾದಿಗಳು ಮತ್ತು ಅವರ ಖಾಸಗಿ ’ಸೇನೆ’ಗಳು ಸಾಮಾಜಿಕ ಕ್ಷೇತ್ರಗಳು ಮತ್ತು ಸಾಂಸ್ಥಿಕ ಆಶ್ರಯತಾಣಗಳನ್ನು ಆಕ್ರಮಿಸುವುದರಲ್ಲಿ ಹೆಚ್ಚುಹೆಚ್ಚು ಯಶಸ್ವಿಯಾದವು. ಆಘಾತಕಾರಿ ಪ್ರಮಾಣದ ಮೃಗೀಯ ಕ್ರೂರತೆಯ ಹಿಂಸೆ ಮತ್ತು ಅನೇಕ ಛಾಯೆಗಳ ಭಯೋತ್ಪಾದನೆ ದಿನನಿತ್ಯದ ವಿದ್ಯಮಾನವಾಯಿತು. ಪ್ರಭುತ್ವದ ಗೂಢಚಾರಿಕೆ ಹಾಗೂ ನಾಗರಿಕರ ಖಾಸಗಿತನದ ಮೇಲೆ ಪ್ರಭುತ್ವದ ಆಕ್ರಮಣ ಮಾಮೂಲಿ ಸಂಗತಿಯಾಯಿತು. ಅಡೆತಡೆಯಿಲ್ಲದೆ ಹರಿದಾಡುವ (ಸಟ್ಟಾ) ಬಂಡವಾಳ ಹಾಗೂ ತೆರಿಗೆಗಳ್ಳತನಕ್ಕೆ ಅವಕಾಶ ನೀಡುವ ಡಿಜಿಟಲ್ ಕರೆನ್ಸಿ ಒಟ್ಟಾಗಿ ಜಗತ್ತಿನ ಜನಸಂಖ್ಯೆಯ ಬಹುದೊಡ್ಡ ಭಾಗಕ್ಕೂ ಅತಿ ಶ್ರೀಮಂತರಿಗೂ ನಡುವಿನ ಕಂದರವನ್ನು ಮತ್ತಷ್ಟು ಹಿಗ್ಗಿಸಿವೆ. ಒಂದೆಡೆ ಬಹುತೇಕ ದೇಶಗಳಲ್ಲಿ ಉದ್ಯೋಗಾವಕಾಶಗಳು ಪಾತಾಳ ಕಂಡರೆ, ಮತ್ತೊಂದೆಡೆ ಕೆಲವೇ ಕುಬೇರರ ಸಂಪತ್ತು ಸಾಮಾನ್ಯರ ಊಹೆಗೂ ನಿಲುಕದಷ್ಟು ಪ್ರಮಾಣಕ್ಕೆ ಹೆಚ್ಚಳವಾಗಿದೆ. ಕೃತಕ ಬುದ್ಧಿಮತ್ತೆಗೂ ಮನುಷ್ಯರ ಆಲೋಚನಾ ಶಕ್ತಿಗೂ ನಡುವಿನ ಕೊಂಡಿಯು ಮಾನವ ನಡವಳಿಕೆಯನ್ನು ಬದಲಿಸುವತ್ತಲೇ ನಡೆದಿದೆ. ನೆಲಮೂಲ ಭಾಷೆಗಳು ಸಾಮೂಹಿಕ ಮೂಗತನದ ಸ್ಥಿತಿಯನ್ನು ತಲುಪುತ್ತಿವೆ. ಸಾಹಿತ್ಯವು ಮಾಧ್ಯಮಗಳಿಗೆ ಹೆಚ್ಚೆಚ್ಚು ನಿಕಟವಾಗುತ್ತ, ಸಹಜ ಮತ್ತು ಡಿಜಿಟಲ್‌ಗಳ ಒಂದು ಅಮಲೇರಿಸುವಂಥ ಪೋಸ್ಟ್-ಟ್ರೂಥ್ ಮಿಶ್ರಣವನ್ನು ಹುಟ್ಟುಹಾಕುತ್ತಿದೆ. ಕಲೆ, ಸಿನಿಮಾ, ರಂಗಭೂಮಿಗಳು ಮಂಕಾಗಿದ್ದವು. ಇವೆಲ್ಲವೂ 2021ನ್ನು ಒಂದು ವಿಶೇಷವಾಗಿ ಮರೆಯಲೇಬೇಕಾದ ವರ್ಷ ಎನಿಸುವುದಕ್ಕೆ ಕಾರಣಗಳು.

ಚಿಂತನೆಗಳು, ವಿಚಾರಧಾರೆಗಳು ಹಾಗೂ ರಾಷ್ಟ್ರಗಳು ಸಿಲುಕಿಕೊಂಡಿರುವ ಬಿಕ್ಕಟ್ಟಿನ ಸ್ವರೂಪವನ್ನು 2021 ಎತ್ತಿತೋರಿಸಿತು. ಹಿಂದಿನ ಕಾಲಗಳಲ್ಲಿ ಅಸ್ಮಿತೆ (ಐಡೆಂಟಿಟಿ) ಎನ್ನುವುದು ಜನಾಂಗ, ಧರ್ಮ, ರಾಷ್ಟ್ರ, ಜೆಂಡರ್ ಹಾಗೂ ಭಾಷೆಗೆ ಸಂಬಂಧಿಸಿದ್ದಾಗಿತ್ತು. 2021ರಲ್ಲಿ ಅಸ್ಮಿತೆಯು ಹೆಚ್ಚುಹೆಚ್ಚಾಗಿ ತಂತ್ರಜ್ಞಾನಗಳ ಜೊತೆ ಬೆಸೆದುಕೊಳ್ಳುತ್ತಿದೆ; ಸಂಪರ್ಕ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನದ ಧಣಿಗಳು ಪ್ರಭುತ್ವಗಳಿಗಿಂತಲೂ ಪ್ರಬಲವಾಗಿವೆ. “ಇಪ್ಪತ್ತನೆಯ ಶತಮಾನದ ಕೊನೆಯ ಭಾಗದ, ದಂತಕತೆಯಂಥ ನಮ್ಮ ಕಾಲದಲ್ಲಿ ನಾವೆಲ್ಲರೂ ಸೂತ್ರೀಕರಣ ಮತ್ತು ಕೃತಕ ಸೃಷ್ಟಿಯ ಜಂಟಿ ಉತ್ಪನ್ನವಾಗಿರುವ, ಯಂತ್ರ ಮತ್ತು ಜೀವಿ ಈ ಎರಡರ ಮಿಶ್ರತಳಿಗಳಾಗಿದ್ದೇವೆ (Cyborgs). ನಮಗೆ ನಮ್ಮ ರಾಜಕೀಯವನ್ನು ನೀಡುತ್ತಿರುವುದು ಇದೇ” ಎಂದು ಡೋನಾ ಹ್ಯಾರಾವೇ ಹೇಳಿದ್ದರು. ಆ ಮಾತು 2021ರಲ್ಲಿ ಹಿಂದಿಗಿಂತಲೂ ಸತ್ಯವಾಗಿ ಕಾಣುತ್ತವೆ. ಈ ವರ್ಷ ರೋಬೋಗಳಿಗೆ ಪೌರತ್ವ ಗುರುತಿನ ಸಂಖ್ಯೆಗಳನ್ನು (citizenship identity numbers) ನೀಡುವ ಕಾರ್ಯ ಆರಂಭವಾಗಿದೆ; ಇದು ಸದ್ಯದ ಭವಿಷ್ಯದಲ್ಲೇ ಅವುಗಳನ್ನು ರಾಜಕೀಯ ಘಟಕಗಳಂತೆ (political entities) ಪರಿಗಣಿಸುವ ನಿಟ್ಟಿನ ಒಂದು ಹೆಜ್ಜೆಯಾಗಿದೆ. ಮನುಷ್ಯರ ನೆನಪನ್ನೆಲ್ಲಾ ಈಗ ಯಂತ್ರಗಳಿಗೆ ಔಟ್-ಸೋರ್ಸ್ ಮಾಡಲಾಗಿದೆ; ವರ್ತಮಾನದ ಕ್ಷಣಗಳೊಂದಿಗೆ ಅದರ ಸಂಬಂಧ ಜಡವಾದುದು, ಲೌಖಿಕ ಇಹಜೀವನಕ್ಕೆ ಸಂಬಂಧವಿಲ್ಲದ್ದು ಆಗಿರುತ್ತದೆ. ಚರಿತ್ರೆ, ಅಥವಾ ಚರಿತ್ರೆಯೆಂಬ ವಿಚಾರ ಈಗ ಹಾದಿಯ ಕೊನೆ ಮುಟ್ಟಿದಂತಿದೆ. ಇಹದ ನಿಶ್ಚಲತೆಯ ಈ ಕಾಲಘಟ್ಟದಲ್ಲಿ ಮಾನವ ಬುದ್ಧಿಶಕ್ತಿಯು ಮುಂದಕ್ಕೆ ಚಲಿಸುವ ಬದಲು ಅಡ್ಡಡ್ಡವಾಗಿ, ಮನುಷ್ಯ-ಯಂತ್ರ-ಮಿದುಳು ಎಂಬಂತಹ ಒಂದು ಹೊಸ ಸಂಸ್ಕೃತಿಯತ್ತ ಚಲಿಸುತ್ತಿರುವಂತಿದೆ.

ಈ ಜಾಗತಿಕ ಬದಲಾವಣೆಗಳಿಗೆ ಅನುಗುಣವಾಗಿ ಭಾರತದಲ್ಲಿ ಈ ಕೆಳಕಂಡ ಬೆಳವಣಿಗೆಗಳಾದವು: ಪ್ರಭುತ್ವಕ್ಕೂ ಅಂತರರಾಷ್ಟ್ರೀಯ ಐಟಿ ಕಾರ್ಪೊರೇಟ್ ವಲಯಕ್ಕೂ ನಡುವೆ ಕಿತ್ತಾಟಗಳು; ದೇಶದ ಒಕ್ಕೂಟ ರಚನೆಯನ್ನು ದುರ್ಬಲಗೊಳಿಸುವಿಕೆ ಹಾಗೂ ಸಂವಿಧಾನದಲ್ಲಿ ಅಂತರ್ಗತವಾಗಿರುವ ತತ್ವಗಳ ಮೇಲೆ ಹೆಚ್ಚೆಚ್ಚು ದಾಳಿಗಳು; ಸತತವಾಗಿ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಇಂಧನ ಮತ್ತು ಗ್ಯಾಸ್ ಬೆಲೆಗಳ ತೀವ್ರ ಹೆಚ್ಚಳ; ದೇಶದೊಳಗಿನ ಉಪವಲಯಗಳಲ್ಲಿ ಆಂತರಿಕ ಮಿಲಿಟರೀಕರಣದ ಹೆಚ್ಚಳ ಹಾಗೂ ಸಶಸ್ತ್ರ ಪಡೆಗಳಿಗೂ ನಾಗರಿಕರಿಗೂ ನಡುವೆ ಹೆಚ್ಚಿದ ಘರ್ಷಣೆಗಳು; ಭಾರತೀಯರು ಎಂದು ಹೆಮ್ಮೆ ಪಡುವ ಕಾರಣಗಳಿಗಾಗಿ ಪುರಾತನ ಕಾಲದ ಕಡೆ ಹೊರಳುವುದು, ಮತ್ತೊಂದೆಡೆ ವಿಜ್ಞಾನ ಮತ್ತು ಔಷಧಿ ಕ್ಷೇತ್ರದಲ್ಲಿ ಶೋಚನೀಯ ಸಾಧನೆ; ಔಷಧೀಯ ಆಮ್ಲಜನಕ ಇರಬಹುದು, ನೈಸರ್ಗಿಕ ಆಮ್ಲಜನಕ ಇರಬಹುದು – ಅದರ ಕೊರತೆಯಿಂದ ಸಾವುಗಳು ಸಂಭವಿಸುತ್ತಿದ್ದರೆ ಪ್ರಭುತ್ವ ಅದನ್ನು ನಿರಾಕರಿಸುವುದು ಮತ್ತು ಅದರ ಅಂಕಿಅಂಶಗಳನ್ನು ತಿರುಚಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು; ಇತ್ಯಾದಿ. ಎಲ್ಲಾ ದಿಕ್ಕಿನ ಇಂಥ ಕತ್ತಲೆಯಲ್ಲಿ ಮಿಂಚಿದ ಒಂದೇ ಒಂದು ಆಶಾಕಿರಣವೆಂದರೆ, ರೈತ ವಿರೋಧಿ ಕೃಷಿ ಮಸೂದೆಗಳನ್ನು ಹಿಂತೆಗೆಸಲು ಯಶಸ್ವಿಯಾದ ರೈತರ ಅಮೋಘವಾದ ಶಾಂತಿಯುತ ಚಳವಳಿ. ಸಾಮಾಜಿಕ ಪರಿವರ್ತನೆಗೆ ಪ್ರಜಾ ಚಳವಳಿ ಒಂದು ಹಾದಿ ಎಂಬ ನಂಬಿಕೆಯನ್ನು ಅದು ಜೀವಂತವಾಗಿರಿಸಿದೆ. ಅಂಥ ಇನ್ನೊಂದು ಬೆಳ್ಳಿ ಕಿರಣವೆಂದರೆ ಒಲಿಂಪಿಕ್ಸ್ ಮತ್ತಿತರ ಸ್ಪರ್ಧಾತ್ಮಕ ಆಟೋಟಗಳಲ್ಲಿ ಕ್ರೀಡಾಪಟುಗಳ ಸಾಧನೆಗಳು. ಆದಾಗ್ಯೂ ಇವು ಗಾಢವಾಗುತ್ತಿರುವ ಕತ್ತಲೆಯ ನಡುವಿನ ಬೆಳ್ಳಿ ಕಿರಣಗಳು ಮಾತ್ರ.

ವರ್ಷದ ಕೊನೆಯೆಂದರೆ ಸಾಮಾನ್ಯವಾಗಿ ಕ್ರಿಸ್ಮಸ್ ಸಂಭ್ರಮದ ಕಾಲ. ಆದರೆ 2021ರ ಕ್ರಿಸ್ಮಸ್ ಸಮಯದಲ್ಲಿ, ಸ್ಪಷ್ಟವಾಗಿ ಪ್ರಭುತ್ವದ ಬೆಂಬಲದೊಂದಿಗೆ ಹಿಂದುತ್ವ ಮೂಲಭೂತವಾದಿಗಳಿಂದ ಚರ್ಚ್‌ಗಳ ಧ್ವಂಸ, ಪ್ರಾರ್ಥನಾ ಸಭೆಗಳ ಮೇಲೆ ದಾಳಿ ನಡೆದಿವೆ. 2022ರ ವರ್ಷವು ಬದಲಾವಣೆಯನ್ನು ತರುವುದೆಂದು ನಾವು ಆಶಿಸಲು ಬಯಸುತ್ತೇವೆ. ಆದರೆ ಕೇವಲ ಚುನಾವಣಾ ಗೆಲುವುಗಳನ್ನು ಯಾವುದೇ ಬದಲಾವಣೆಯ ಚಿಹ್ನೆಗಳನ್ನಾಗಿ ನೋಡಲು ಸಾಧ್ಯವಿಲ್ಲ. ಭಾರತದ ಯುವ ಪೀಳಿಗೆಯ ಮನಸ್ಸುಗಳನ್ನು ದ್ವೇಷ ಮತ್ತು ತಿರಸ್ಕಾರದ ವಿಷದಿಂದ ತುಂಬಲಾಗಿದೆ. ಮಧ್ಯಮ ವರ್ಗದ ಕೆಲ ವಿಭಾಗಗಳಲ್ಲಿ ತಮ್ಮ ಸಾಪೇಕ್ಷ ಶ್ರೀಮಂತಿಕೆಯಿಂದಾಗಿ ಈಗಲೂ ದುರಹಂಕಾರ ತುಂಬಿದೆ. ಬಹುಪಾಲು ಭಾರತೀಯರು ಕಾಣಬಯಸುವ ಭವಿಷ್ಯ ಏನು ಎಂಬ ಬಗ್ಗೆ ರಾಜಕೀಯ ವರ್ಗಗಳಿಗೆ ಯಾವುದೇ ಸುಳಿವು ಇಲ್ಲ. 2022ರಲ್ಲಿ ಮತ್ತು ಅದರಾಚೆಗೂ ಸಹ ಈ ಪರಿಸ್ಥಿತಿಯನ್ನು ಬದಲಿಸಲು ನಾವೆಲ್ಲರೂ ಅನೇಕ ರಂಗಗಳಲ್ಲಿ ಶ್ರಮಿಸಬೇಕಿದೆ. ಅಂತಹ ಬದಲಾವಣೆಗಾಗಿ ದುಡಿಯುವ ತುಡಿತವಿರುವ ಎಲ್ಲರಿಗೂ 2022ರ ವರ್ಷವು ಸಾಧನೆಯ ವರ್ಷವಾಗಲಿ ಎಂದು ಹಾರೈಸುತ್ತೇನೆ.

ಉಲ್ಲೇಖಗಳು:
ಡೋನಾ ಹಾರಾವೇ: ’ಎ ಸೈಬೋರ್ಗ್ ಮ್ಯಾನಿಫೆಸ್ಟೊ’.
ಡಬ್ಲ್ಯೂ.ಬಿ.ಯೇಟ್ಸ್: ’ಈಸ್ಟರ್ 1916’.

  • (ಕನ್ನಡಕ್ಕೆ): ಸಿರಿಮನೆ ನಾಗರಾಜ್
ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...