Homeಮುಖಪುಟಆನಂದ್‌ ತೇಲ್‌ತುಂಬ್ಡೆ: ಬಂಧನದಲ್ಲಿ ಅಂಬೇಡ್ಕರ್ ಆತ್ಮಬಂಧು

ಆನಂದ್‌ ತೇಲ್‌ತುಂಬ್ಡೆ: ಬಂಧನದಲ್ಲಿ ಅಂಬೇಡ್ಕರ್ ಆತ್ಮಬಂಧು

ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದ್ದರು ತೇಲ್ತುಂಬ್ಡೆ..

- Advertisement -
- Advertisement -

ಕಾಕತಾಳೀಯವೇ ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ 129ರ ಜಯಂತಿಯ ದಿನವೇ ಡಾ.ಅಂಬೇಡ್ಕರ್ ಕುಟುಂಬ ಸದಸ್ಯ ಮತ್ತು ಅವರ ಬೌದ್ಧಿಕ ವಾರಸುದಾರ ಹಾಗೂ ಚಿಂತಕ ಆನಂದ್ ತೇಲ್ತುಂಬ್ಡೆ ಜೈಲಿಗೆ ಹೋಗಬೇಕಾಗಿ ಬಂದಿರುವುದು ಒಂದು ಐತಿಹಾಸಿಕ ದುರಂತ.

ಸ್ವಾತಂತ್ರ್ಯಾನಂತರದಲ್ಲಿ ಅತಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ತೇಲ್ತುಂಬ್ಡೆ ಡಾಕ್ಟರ್ ಅಂಬೇಡ್ಕರ್ ಸ್ಪೂರ್ತಿಯಿಂದ ಕೇವಲ ತನ್ನ ಸ್ವಂತಶಕ್ತಿಯಿಂದ ಅತ್ಯಂತ ಪ್ರತಿಭಾವಂತನಾದ ಚಿಂತಕನಾಗಿ ಬೆಳೆದರು. ಬಹುಶಃ ನನಗೆ ತಿಳಿದಂತೆ ಅಂಬೇಡ್ಕರ್ ಬರಹಗಳನ್ನು ಅಷ್ಟು ಸಂಪೂರ್ಣವಾಗಿ ಓದಿದವರು ಬಹಳ ಕಡಿಮೆ. ಆನಂದ್ ಅಂಬೇಡ್ಕರ್‌ರನ್ನು ಆಳವಾಗಿ ಅಧ್ಯಯನ ಮಾಡಿದ್ದೇ ಅಲ್ಲದೇ ಮಾರ್ಕ್ಸಿಸಂಅನ್ನು ಕೂಡ ಆಳವಾಗಿ ಅಧ್ಯಯನ ಮಾಡಿದರು. ಮಾರ್ಕ್ಸಿಸಂನ ಚಾರಿತ್ರಿಕ, ತಾತ್ವಿಕ, ನೈತಿಕ ದೃಷ್ಟಿಕೋನಗಳನ್ನು ಹೆಚ್ಚು ಸಮಗ್ರವಾಗಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಬಹಳ ಆಶ್ಚರ್ಯವೆಂದರೆ ಗಾಂಧಿಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ವಾದಿಸುತ್ತಾರೆ. ಈ ಮೂರು ಚಿಂತನೆಗಳ ಧಾರೆಗಳ ಪ್ರಭಾವದಿಂದ ಅವರು ರಚಿಸಿದ 29 ಪುಸ್ತಕಗಳನ್ನು ನೋಡಬಹುದು. ಈ ಪುಸ್ತಕಗಳೆಲ್ಲಾ ಆನಂದ್‌ರ ಬೌದ್ಧಿಕ ಶಿಖರಗಳಿಗೆ ಕನ್ನಡಿಯಾಗಿವೆ.

ಆನಂದ್ ಚಿಕ್ಕಂದಿನಿಂದಲೇ ಬಹಳ ಚುರುಕಾದ ವಿದ್ಯಾರ್ಥಿ. ಕಡು ಬಡತನದ ಕಾರಣಕ್ಕೆ ರಜೆಯಲ್ಲಿ ಮನೆಗಳಿಗೆ ಸುಣ್ಣ ಬಳಿಯಲು ಹೋಗಿ ಅದರಿಂದ ಬಂದ ಹಣದಿಂದ ವಿದ್ಯಾಭ್ಯಾಸ ಮಾಡಿದರು. ಒಮ್ಮೆ ನಾನು ಆನಂದ್ ಅವರ ತಾಯಿಯನ್ನು ಭೇಟಿಯಾದಾಗ ನಿಮ್ಮ ಮಗನಿಗೆ ಹೆಸರು ಪ್ರತಿಷ್ಟೆ ಎಲ್ಲಾ ಇದೆ, ಒಳ್ಳೆಯ ಮಗನಿಗೆ ತಾಯಿ ನೀವು ಅಂದಾಗ ನನ್ನ ಮುಖವನ್ನೆಲ್ಲಾ ತನ್ನ ಕೈಗಳಿಂದ ಅಪ್ಯಾಯಮಾನವಾಗಿ ಸವರಿದಳು. ಆ ತಾಯಿ ಮನಸ್ಸೆಲ್ಲಾ ಪ್ರೀತಿ ತುಂಬಿದ ಮನುಷ್ಯಳಂತೆ ಕಂಡರು. ಆನಂದ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಆ ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಮಾಡಿದರು. ಇದರ ಜೊತೆಗೆ ಪ್ರತಿಷ್ಠಿತ ಅಹ್ಮದಾಬಾದ್ ಐ.ಐ.ಎಮ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಆಧುನಿಕ ಐ.ಟಿ ರಂಗದಲ್ಲಿ ಮೆಗಾ ಅನಾಲಿಟಿಕ್ಸ್‌ನಲ್ಲಿ ಪ್ರಾವಿಣ್ಯತೆ ಗಳಿಸಿದರು. ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗಿರುವ ಅನುಭವವನ್ನು ನೋಡಿ ಭಾರತ ಸರ್ಕಾರ ಅವರಿಗೆ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಜವಾಬ್ದಾರಿಯನ್ನು ನೀಡಿತು. ಈ ಅಪಾರವಾದ ಅನುಭವದಿಂದ ಮತ್ತೊಂದು ಪ್ರತಿಷ್ಠಿತ ಐಐಟಿ ಗೋರಕ್‌ಪುರ್‌ನಲ್ಲಿ ಪ್ರಾಧ್ಯಾಪಕರಾಗಿ ಆಹ್ವಾನಿಸಿ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್ ಬೋಧನೆಯ ಜವಬ್ದಾರಿಯನ್ನು ನೀಡಿತು. ಅಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಗೋವಾ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೆಗಾ ಅನಾಲಿಟಿಕ್ ಬೋಧಿಸುವುದಕ್ಕೆ ಆಹ್ವಾನಿಸಿತು. ಈ ವಲಯದಲ್ಲಿ ಪ್ರಾವೀಣ್ಯತೆ ಹೊಂದಿದ ಕೇವಲ ಇಪ್ಪತ್ತು ಜನ ನಿಪುಣರಲ್ಲಿ ಆನಂದ್ ಒಬ್ಬರು. ನಿಜಕ್ಕೂ ಈ ಅರ್ಹತೆಗಳಿಂದಲೇ ಕರ್ನಾಟಕದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಆನಂದ್ ಈ ವಲಯಗಳಿಗೆ ಸೀಮಿತವಾಗಿದ್ದರೆ ಬಹುಶಃ ಭಾರತ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಗಳನ್ನೇ ಕೊಡುತ್ತಿತ್ತು. ಸಾಕಷ್ಟು ಐಟಿ ನಿಪುಣರ ರೀತಿ ಕೇವಲ ತಮ್ಮ ವಲಯ ಬಿಟ್ಟು ಬೇರೆ ತಲೆಕೆಡಿಸಿಕೊಳ್ಳದ ಮನಸ್ಥಿತಿ ಅಲ್ಲದೇ, ಆನಂದ್‌ಗೆ ಇರುವ ಸಾಮಾಜಿಕ ಹಿನ್ನೆಲೆಯ ಕಾರಣ ಸಮಾಜದಲ್ಲಿ ಇರುವ ತಾರತಮ್ಯ, ಅಸಮಾನತೆ, ಬಡತನ, ಜಾತಿಪದ್ಧತಿ, ನಿರುದ್ಯೋಗ, ಭೂಮಿ ಸಮಸ್ಯೆ, ಜಾಗತೀಕರಣ, ಸಾಮ್ರಾಜ್ಯಶಾಹಿ ಲೂಟಿ, ಭೂಸ್ವಾಮ್ಯ ಸಂಬಂದಗಳು, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳ ಮೇಲೆ ಸ್ಪಂದಿಸುತ್ತಾ ಬಂದರು. ಒಂದು ಕಡೆ ತನ್ನ ಅನಲಿಟಿಕ್ಸ್ ಜವಾಬ್ದಾರಿಯನ್ನು ನಿರ್ವಹಿಸುತ್ತಾ ನಿರಂತರವಾಗಿ ಈ ಸಮಸ್ಯೆಗಳೆಲ್ಲವುಗಳ ಮೇಲೆ ಬರೆದರು. ಉದಾಹರಣೆಗೆ ಆತ ರಚಿಸಿದ ಗುಣಮಟ್ಟದ ಪುಸ್ತಕ ಕೈರ್‍ಲಾಂಜಿ ಕೇವಲ ಹತ್ತು ದಿನಗಳಲ್ಲಿ ಅದು ಚೈನಾದ ಬೀಜಿಂಗ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಾ ವಿಮಾನದಲ್ಲಿ, ವಿಮಾನಾಶ್ರಯದಲ್ಲಿ ಕಳೆದ ಸಮಯದಲ್ಲಿ ಬರೆದರು. ನವಯಾನ ಎನ್ನುವ ಪ್ರಕಾಶಕ ಸಂಸ್ಥೆಯ ಮುಖ್ಯಸ್ಥ ಎಸ್.ಆನಂದ್ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಆನಂದ್ ಬಹಳ ಸೃಜನಶೀಲರೆಂದು ಹೇಳಿದ್ದಾರೆ.

ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಜಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಆಳವಾದ ಬರವಣಿಗೆಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ ಪ್ರತ್ಯೇಕವಾಗಿ ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು. ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಕುಟುಂಬದ ಸದಸ್ಯ ಬಂದರು ಎನ್ನುವುದು ದೊಡ್ಡ ಸುದ್ದಿಯಾಯಿತು. ನಾನು ಪಾತಪಲ್ಲೆಗೆ ಹೋದಾಗ ಬೋಯ ಸಮುದಾಯದವರು ಅಂಬೇಡ್ಕರ್ ಮೊಮ್ಮಗ ಬರುವಷ್ಟು ಅಪರಾಧ ನಾವು ಏನು ಮಾಡಿದ್ದೇವೆ ಎಂದರು. ಆನಂದ್ ಬಂದ ಕಾರಣದಿಂದ ಜಿಲ್ಲಾ ಯಂತ್ರಾಂಗವು ಸಹ ಸ್ಪಂದಿಸಿತು. ಇದು ಕೇವಲ ಒಂದು ಉದಾಹರಣೆ. ಇಷ್ಟು ಅಪರೂಪವಾದ ವ್ಯಕ್ತಿಯನ್ನು ಯುಎಪಿಎ ಕಾಯ್ದೆಯ ಕೆಳಗೆ ಬಂಧಿಸುವುದು ಎಂದರೆ ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.

ಇಷ್ಟಕ್ಕೂ ಆನಂದ್ ಮಾಡಿದ ಅಪರಾಧವೇನು, ಅವರ ಮೇಲೆ ಹೊರೆಸಿದ ಅಪರಾಧವೇನಾಗಿತ್ತು? ಅವರ ಮೇಲೆ ಹೊರೆಸಿದ ಅಪರಾಧ ಭೀಮಾ ಕೊರೆಗಾವ್ ಘಟನೆಯ ಜೊತೆ ಸಂಬಂಧವಿದೆ, ಭೀಮಾ ಕೊರೆಗಾವ್ ಮಾವೋಯಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತೆನ್ನುವುದು ಪ್ರಧಾನವಾದ ಆರೋಪ. ಭೀಮಾ ಕೋರೆಗಾವ್ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ರಾಜಕೀಯ ಹೋರಾಟದ ಶ್ರಮದ ಭಾಗ. ಅಂದಾಜು ಎರಡು ಶತಮಾನಗಳ ಕೆಳಗೆ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಬ್ರೀಟಿಷ್ ಸೈನ್ಯದಲ್ಲಿ ದಲಿತರು ಮುಖ್ಯವಾದ ಪಾತ್ರ ನಿರ್ವಹಿಸಿದರು. ಈ ಘಟನೆಯ ಮೂಲಕ ದಲಿತರಲ್ಲಿ ಚೈತನ್ಯವನ್ನು, ಆತ್ಮವಿಶ್ವಾಸವನ್ನು ಬೆಳೆಸಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯಾವ ವರ್ಷವೂ ಇಲ್ಲದೇ 2018ರಲ್ಲಿಯೇ ಇದು ವಿವಾದಾಸ್ಪದವಾಗಿ ಬದಲಾಯಿತು. ಅದನ್ನು ಕೇಂದ್ರ, ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಇದನ್ನು ಬಳಸಿಕೊಂಡು ದೇಶದಲ್ಲಿನ ಹನ್ನೊಂದು ಮಂದಿ ಅತ್ಯಂತ ಪ್ರತಿಭಾವಂತರನ್ನು ಅರೆಸ್ಟು ಮಾಡಿತು. ಮೌಲ್ಯಗಳುಳ್ಳ, ಮೌಲಿಕ ಬದುಕು ನಡೆಸುತ್ತಿರುವ, ವ್ಯವಸ್ಥೆಯ ಜೊತೆ ರಾಜಿಯಾದರೇ ಅದೆಷ್ಟೋ ಬಿರುದು, ಪದವಿಗಳನ್ನಾದರೂ ಪಡೆದು ಜೀವನದಲ್ಲಿ ಸುಖವಾಗಿ ಬದುಕಬಲ್ಲವರಾಗಿದ್ದ ಆ 11 ಜನರು ಇಂದು ಈ ರೀತಿಯಲ್ಲಿ ಜೈಲಿನಲ್ಲಿ ಬಂದಿಗಳಾಗಿದ್ದಾರೆ. ಮೊದಲಿಗೆ ಒಂಬತ್ತು ಮಂದಿಯನ್ನು ಪೂನಾ ಪೋಲಿಸರು ಬಂಧಿಸಿದರು. ಇದರಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಹೊರಗಡೆ ಇದ್ದುಬಿಟ್ಟಿದ್ದರು. ಆನಂದ್ ವಿಷಯದಲ್ಲಿ ಬಾಂಬೆ ಹೈಕೋರ್ಟ್, ಹಾಗೆಯೇ ನವಲಖ ವಿಷಯದಲ್ಲಿ ದೆಹಲಿ ಹೈಕೋರ್ಟ್ ಕೆಲವು ಸಾಂಕೇತಿಕ ಲೋಪಗಳಿಂದ ಸ್ಟೇ ಕೊಟ್ಟಿದ್ದರು. ಈ ಸ್ಟೇ ಮುಂದುವರೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಹೋಯಿತು. ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಪಾಲುದಾರರನ್ನು ನಾವು ಭೇಟಿಯಾಗಿದ್ದೆವು. ಭೀಮಾ ಕೊರೇಗಾವ್ ಘಟನೆ ಹಾಗೂ ಪ್ರಧಾನಮಂತ್ರಿ ಮೇಲೆ ಹತ್ಯೆಗೆ ಪಿತೂರಿ ಎನ್ನುವುದು ಕೇವಲ ಕಾಲ್ಪನಿಕ, ಇವು ಅಮಾಯಕರ ಮೇಲೆ ಹಾಕಿದ ಕೇಸುಗಳೆಂದು ಎನ್.ಸಿ.ಪಿ ಹಿರಿಯ ನಾಯಕ ಶರದ್ ಪವಾರ್ ನಮ್ಮೊಡನೆ ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಕೇಸಾದ 18 ತಿಂಗಳ ನಂತರ ಕೇಂದ್ರ ಸರ್ಕಾರವು ಈ ಒಟ್ಟು ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಿಂದ ತೆಗೆದು ತಾವೇ ಇದನ್ನು ಎನ್.ಐ.ಎ ಮುಖಾಂತರ ಡೀಲ್ ಮಾಡುತ್ತೇವೆಂದು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿತು. ಈ ನಿರ್ಣಯದ ನಂತರ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಅವರ ಬಂಧನಕ್ಕಿದ್ದ ತಡೆಯಾಜ್ಞೆ ತೆರವಾಗಿ ಈಗ ಬಂಧನಕ್ಕೆ ಆದೇಶಿಸಲಾಗಿದೆ.

ಆನಂದ್ ಅರೆಸ್ಟ್‌ನ್ನು ದೇಶದೆಲ್ಲೆಡೆ ಅಲ್ಲದೇ, ಅಂತರ್ರಾಷ್ಟ್ರೀಯವಾಗಿಯೂ ನೋಮ್‌ಚಾಮಸ್ಕಿಯೊಂದಿಗೆ ಬಹಳ ಜನ ಪ್ರತಿಭಟಿಸಿದರು. ಅವರು ಅರೆಸ್ಟ್ ಆಗುತ್ತಾರೆ ಎನ್ನುವ ಸುದ್ದಿ ಬರುತ್ತಿದ್ದಂತೆ ಅಂದಾಜು ಹದಿನೇಳು ಸಾವಿರ ಟ್ವಿಟ್ಸ್ ಅದನ್ನು ವಿರೋಧಿಸಿ ಬಂದದ್ದು ನೋಡಿದರೆ ಅವರಿಗಿರುವ ಬೆಂಬಲ ಎಂದು ತಿಳಿಯುತ್ತದೆ. ಆನಂದ್ ಅಖಿಲ ಭಾರತೀಯ ಶಿಕ್ಷಣ ಹಕ್ಕು ವೇದಿಕೆಯ ಅಧ್ಯಕ್ಷ ಮಂಡಳಿಯ ಸದಸ್ಯರು. ಈ ವೇದಿಕೆ ಆನಂದ್ ಬಂಧನವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ವೇದಿಕೆಯು ಎಲ್ಲರಿಗೂ ಸಮಾನವಾದ, ಗುಣಮಟ್ಟದ, ಉಚಿತವಾದ ಶಿಕ್ಷಣ ಸಿಗಬೇಕೆಂದು ಕಳೆದ ದಶಕಗಳಿಂದ ಹೋರಾಡುತ್ತಿದೆ. ಈ ಹೋರಾಟದ ಪ್ರಮುಖ ಭಾಗವಾಗಿ ಆನಂದ್ ಇದ್ದಾರೆ. ಒಂದು ಕಡೆ ಕೊರೊನಾ ಕರಾಳ ನೃತ್ಯ ಮಾಡುತ್ತಿದೆ, ಮನುಷ್ಯ ಜೀವಿಯ ಭವಿಷ್ಯವೇನೋ ತೀರ್ಮಾನಿಸಿಕೊಳ್ಳಿ ಎನ್ನುತ್ತಿದೆ. ಕಾಣಿಸದ ನಿರ್ಜೀವಿಯೊಂದು ಜಗತ್ತೆಲ್ಲವನ್ನು ಜೈಲುಗಳೊಳಕ್ಕೆ ತಳ್ಳಿದೆ. ಮನೆಯಿಂದ ಕದಲುವುದಕ್ಕೆ ಬಿಡುವುದಿಲ್ಲವೆನ್ನುತ್ತಿದೆ. ಭೀಮಾ ಕೊರೆಗಾವ್ ಘಟನೆಯಲ್ಲಿ ವರವರರಾವ್ ಅಂತಹ ಮಿತ್ರರನ್ನು ಗೃಹಬಂಧನವೆಂದು ಒಂದಷ್ಟು ಕಾಲ ಮನೆಯಲ್ಲೇ ನಿರ್ಬಂಧಿಸಿದರು. ಇಂದು ಕರೊನಾ ಎಲ್ಲರನ್ನೂ ಗೃಹ ಬಂಧನಕ್ಕೆ ತಳ್ಳಿದೆ. ಈಗ ಜೈಲಿನಲ್ಲಿರುವ ಖೈದಿಗಳನ್ನು ಕನಿಷ್ಟ ಆರು ವಾರಗಳ ಪೆರೊಲ್ ಮೇಲೆ ಬಿಡುಗಡೆ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದರ ಭಾಗವಾಗಿಯೇ ಮಹಾರಾಷ್ಟ್ರದಲ್ಲಿ 11,000 ಮಂದಿಯನ್ನು ಬಿಡುಗಡೆ ಮಾಡಿದ್ದಾರೆ. ಬಹಳ ಆಶ್ಚರ್ಯವೆಂದರೆ ಅಂತಹದೊಂದು ಆದೇಶ ಜಾರಿಯಲ್ಲಿರುವಾಗಲೇ ಆನಂದ್‌ರಂತಹವರಿಗೆ ಆ ಅವಕಾಶವೂ ಇಲ್ಲದೇ, ವಕೀಲರು ವಾದಿಸಿದರು ಸಹ ಕೇಳದೆ, ಒಂದು ವಾರದಲ್ಲಿ ಶರಣಾಗಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆ ವಾರಾಂತ್ಯ ವಿಚಿತ್ರವಾಗಿ ಡಾ.ಅಂಬೇಡ್ಕರ್ ಜಯಂತಿ, 14 ಏಪ್ರಿಲ್ ಆಗಿದೆ. ಅಂಬೇಡ್ಕರ್ ಮೇಲೆ ಗೌರವದ ಸೂಚನೆಯಾಗಿ ಕೇಂದ್ರ ಸರ್ಕಾರ ರಜೆ ಪ್ರಕಟಿಸಿದೆ. ಒಂದು ಕಡೆ ಅಂಬೇಡ್ಕರ್‌ವರಿಗೆ ಗೌರವ ಸೂಚಿಸುತ್ತಲೇ ಆತನ ಕುಟುಂಬ ಸದಸ್ಯನನ್ನು ಜೈಲು ಪಾಲು ಮಾಡುತ್ತಿರುವುದರಲ್ಲಿ ಸರ್ಕಾರದ ದ್ವಂದ್ವ ನೀತಿ ಕಾಣಿಸುತ್ತದೆ ಎಂದು ಆನಂದ್ ಹೇಳಿರುವುದು ಎಲ್ಲರನ್ನು ಆಲೋಚಿಸುವಂತೆ ಮಾಡುತ್ತಿದೆ. ದೇಶವು ತನ್ನ ಸ್ವಭಾವವನ್ನ ತನಗೆ ತಿಳಿಯದ ಹಾಗೆಯೇ ಬಹಿರಂಗಪಡಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನದ ಅವಶ್ಯಕತೆ ಇಲ್ಲ.

ತೆಲುಗು ಮೂಲ: ಪ್ರೊ.ಜಿ.ಹರಗೋಪಾಲ್

ಅನುವಾದ: ಅನಿಲ್‌ಕುಮಾರ್ ಚಿಕ್ಕದಾಳವಟ್ಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಯೋಗ್ಯರ ಕೈಯಲ್ಲಿ ದೇಶದ ಹಿಡಿತ ಸೀಮಿತವಾದಾಗ ಇಂತಹ ದುರಂತಗಳು ಎದುರಾಗಬಹುದು

    ಪ್ರಭುದ್ಧ ಭಾರತೀಯ ಸಮೂಹಕ್ಕೆ ಜ್ಞಾನದ ಕೊರತೆ ಮತ್ತಿನ್ನೊಂದು ಏನಪ್ಪಾ ಅಂದರೆ ಮತ ಮಾರಿಕೊಳ್ಳುವ ತನವನ್ನು ಹೋಗಲಾಡಿಸಬೇಕು
    ಕಾಂಗ್ರೆಸ್ ತೋರಿಸಿಕೊಟ್ಟ ಪಾಠ ಬಿಜೆಪಿಯವರು ನೂರುಪಟ್ಟು ಜಾಸ್ತಿ ಮಾಡುತ್ತಿದ್ದಾರೆ ಅಂದರೆ ಒಂದೇ ನಾಣ್ಯದ ಮುಖವಿದ್ದಂತೆ ಎಂದರೆ ತಪ್ಪಾಗಲಾರದು ಜೈ ಭೀಮ್ ಜೈ ಭಾರತ್

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...