Homeಕರ್ನಾಟಕಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು - ಅರುಣ್ ಜೋಳದ ಕೂಡ್ಲಿಗಿ

ಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು – ಅರುಣ್ ಜೋಳದ ಕೂಡ್ಲಿಗಿ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ನಿಷ್ಠಾವಂತ ದಕ್ಷ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಚರ್ಚೆಯಾಗುತ್ತಿದೆ. ಈ ಸಂಗತಿಯನ್ನು ಹೇಗೆ ನೋಡಬೇಕು? ಈ ಘಟನೆ ವಯಕ್ತಿಕ ನಿರ್ಧಾರವೆ ಆಗಿದ್ದರೂ, ಇದು ಹುಟ್ಟಿಸುವ ಪ್ರಶ್ನೆಗಳಾವುವು? ಈಗಿರುವ ನಿಷ್ಠಾವಂತ ಪೋಲೀಸ್ ಅಧಿಕಾರಿಗಳಲ್ಲಿ ಮೂಡಿಸಿದ ಭಾವನೆ ಯಾವುದು? ಪೊಲೀಸ್ ಇಲಾಖೆ ಸೇರಿ ದಕ್ಷ ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿದ ಯುವಜನರ ಅಭಿಪ್ರಾಯವೇನು? ಇಂತಹ ಅಲ್ಪಸಂಖ್ಯಾತ ದಕ್ಷ ಅಧಿಕಾರಿಗಳ ಕಾರಣಕ್ಕೇ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಟ್ಟ ಜನರ ಪರ್ಯಾಯವೇನು? ಅಥವಾ ಇಂತಹ ದಕ್ಷ ಅಧಿಕಾರಿಯನ್ನು ಉಳಿಸಿಕೊಳ್ಳಬೇಕಾದ ಸಮಾಜದ ಪ್ರಾಮಾಣಿಕತೆಯು ಬ್ರಷ್ಟಗೊಂಡಿದೆಯೇ? ಎನ್ನುವಂತಹ ಪ್ರಶ್ನೆಗಳಿವೆ. ಹಾಗೆಯೇ ಪೋಲಿಸ್ ಇಲಾಖೆಯನ್ನು ಒತ್ತಡರಹಿತಗೊಳಿಸಬೇಕೆನ್ನುವ ಸಿದ್ಧ ಉತ್ತರವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸ್ವತಃ ಅಣ್ಣಾಮಲೈ ಬರೆದ ಪತ್ರದಲ್ಲಿ ಮಧುಕರ್ ಶೆಟ್ಟಿ ಸಾವನ್ನು ಪ್ರಸ್ತಾಪಿಸಿದ್ದಾರೆ. ಮಧುಕರ್ ಶೆಟ್ಟಿ ಬ್ರಷ್ಟಾಚಾರವನ್ನು ತೊಡೆದು ಹಾಕುವ ಖಡಕ್ ಅಧಿಕಾರಿಯಾಗಿದ್ದರು. ಅವರ ಸಾವು ಚರ್ಚಾಸ್ಪದವಾಗಿತ್ತು. ಏನಿಲ್ಲವೆಂದರೂ ಬ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಅವಿರತ ದುಡಿಮೆಗೂ ಅವರ ಸಾವಿಗೂ ನಂಟಿತ್ತು. ಇದು ಅಣ್ಣಾಮಲೈ ಅವರನ್ನು ಕಾಡಿರಬಹುದು. ಈ ಪತ್ರ ವ್ಯಕ್ತಿಯೊಬ್ಬರ ಬಿಡುವಿಲ್ಲದ ಸಾಮಾಜಿಕ ತೊಡಗುವಿಕೆ, ಕುಟುಂಬದ ಜತೆಗಿನ ಒಡನಾಟ, ತನ್ನದೇ ವಯಕ್ತಿಕ ಖುಷಿ ಸಂಭ್ರಮಗಳ ಕುರಿತ ಜಿಜ್ಞಾಸೆಗಳನ್ನು ಹುಟ್ಟಿಸಿದೆ. ಸಾಮಾಜಿಕ ತೊಡಗುವಿಕೆಯಲ್ಲಿ ಕುಟುಂಬದ ಆಪ್ತತೆ ಮತ್ತು ವಯಕ್ತಿಕ ಖುಷಿಗಳನ್ನು ಕಳೆದುಕೊಳ್ಳುವ `ಸಾರ್ವಜನಿಕತೆ ಮತ್ತು ವಯಕ್ತಿಕತೆಯ’ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ಅಣ್ಣಾಮಲೈ ಅವರಂತೆ ರಾಜಿನಾಮೆ ಕೊಡದೆಯೂ, ತಮ್ಮ ಕೆಲಸದಲ್ಲಿದ್ದುಕೊಂಡೇ ಯಾವುದೇ ಒತ್ತಡಗಳನ್ನು ಮೈಮೇಲೆ ಹಾಕಿಕೊಳ್ಳದೆ ಕುಟುಂಬದ ಜೊತೆ ಆರಾಮಾಗಿವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಅವರಲ್ಲಿ ಬಹುಪಾಲು ವೃತ್ತಿ ಬದ್ಧತೆಗೆ ಬದಲಾಗಿ ಕುಟುಂಬದ ಬದ್ಧತೆ ಹೆಚ್ಚಿರುವವರು. ಇಡೀ ವ್ಯವಸ್ಥೆಯೇ ಬ್ರಷ್ಟಗೊಂಡಾಗ, ನೀನೊಬ್ಬ ಪ್ರಮಾಣಿಕನಾದರೆ ಸಮಾಜ ಬದಲಾಗುವುದೇ? ಎನ್ನುವ ಸಿನಿಕತನ ಬಹುಜನರನ್ನು ಪ್ರಭಾವಿಸಿದೆ. ಹೀಗಾಗಿ ಅನೇಕ ಅಧಿಕಾರಿ ವರ್ಗದವರು `ನನ್ನೊಬ್ಬನಿಂದ’ ಏನಾಗುವುದಿದೆ ಎಂದು ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಸಮಸ್ಯೆ ಇರುವುದು ಈ `ನನ್ನೊಬ್ಬನಿಂದ’ ಎನ್ನುವವರ ಸಂಖ್ಯೆಯೂ ದೊಡ್ಡದಾಗುತ್ತಿರುವುದು. ಈ ನನ್ನಂಥವರೊಬ್ಬರಿಂದಲೂ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಅಣ್ಣಾಮಲೈ ತೋರಿಸಿದ್ದರು. ಹಾಗಾಗಿ ಅವರ ರಾಜಿನಾಮೆ ಅಘಾತ ತಂದಿದೆ.

ಪೊಲೀಸ್ ಇಲಾಖೆಯ ಆಚೆಗೂ ಸಮಾಜದ ಒಳಿತಿಗಾಗಿ ದುಡಿಯುವ ಬದ್ಧತೆ ಇರುವ ಯಾವುದೇ ಕ್ಷೇತ್ರದ ಕೆಲಸಗಾರರೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಸದಾ ತಿರುಗಾಡುತ್ತ ಬರೆವ ಚಿಂತಕ ಪ್ರೊ.ರಹಮತ್ ತರೀಕೆರೆ ಅವರ ಮಗಳು ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವುದಿಲ್ಲವೆಂದು ಅಪ್ಪನ ಕುರಿತು ಸಿಡುಕಿನ ಪದ್ಯ ಬರೆದಿದ್ದಳು. ಈ ನಡುವೆ ಎರಡು ಲಕ್ಷದಷ್ಟು ಸಂಬಳ ಪಡೆದು ಕನಿಷ್ಠ ಪಾಠವನ್ನೂ ಮಾಡದೆ ಅರಾಮಾಗಿ ಕುಟುಂಬದ ಜತೆಗಿರುವ ಅದ್ಯಾಪಕರಿದ್ದಾರೆ.

ಉಸಿರುಕಟ್ಟಿಸಿ ದುಡಿಸಿಕೊಳ್ಳುವ ಕಾರ್ಪೋರೇಟ್ ವಲಯದ ನೌಕರ ವರ್ಗವೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಬಹುತೇಕ ಒಪ್ಪಂದದ ದುಡಿಮೆಯಾದ ಕಾರಣ ಅಣ್ಣಾಮಲೈ ಅವರಂತೆ ಬಿಡುಗಡೆಯೂ ಕಷ್ಟವಿದೆ. ಅಂತೆಯೇ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಬದ್ಧತೆಯ ಅವಿರತ ದುಡಿಮೆಗೂ ಕುಟುಂಬದ ಜತೆಗಿನ ಒಡನಾಟಕ್ಕೂ ನೇರ ಸಂಬಂಧವಿದೆ. ಬಹುತೇಕ ತಮ್ಮ ದುಡಿಮೆಯಲ್ಲಿ ಬದ್ಧತೆ ಕಡಿಮೆ ಮಾಡಿಕೊಂಡವರು ಕುಟುಂಬದ ಜತೆ ಹೆಚ್ಚು ಸಮಯ ಕಳೆಯಬಲ್ಲರು. ಅಪವಾದವೆಂಬಂತೆ ಈ ಎರಡನ್ನೂ ಸರಿದೂಗಿಸುವವರ ಸಂಖ್ಯೆ ವಿರಳ. ಹೀಗಾಗಿ ಅಪ್ರಾಮಾಣಿಕತೆ, ಬ್ರಷ್ಟತೆ, ಸೋಮಾರಿತನ, ತನ್ನ ಕರ್ತವ್ಯದ ನಿಷ್ಠೆ ಇಲ್ಲದಿರುವಂತಹ ಗುಣಗಳಿಗೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವಿಕೆಗೂ ಸಂಬಂಧವಿದೆ. ಈ ನೆಲೆಯಲ್ಲಿ ಅಣ್ಣಾಮಲೈ ಅವರ ರಾಜಿನಾಮೆ ಸಾರ್ವಜನಿಕತೆ ಮತ್ತು ವಯಕ್ತಿಕತೆಯ ಚರ್ಚೆಗೆ ಹೊಸ ದಾರಿಗಳನ್ನು ತೆರೆದಿದೆ.

ಎಷ್ಟೋ ಜನ ಆಡಳಿತದಲ್ಲಿ ದಕ್ಷರಾಗಿದ್ದು, ಸಮಾಜದ ಬಗೆಗಿವ ದೃಷ್ಟಿಕೋನದಲ್ಲಿ ದೋಷವಿರುತ್ತದೆ. ಕಿರಣ್ ಬೇಡಿಯಂತಹ ದಕ್ಷ ಅಧಿಕಾರಿ ಕ್ರಿಮಿನಲ್ ಟ್ರೈಬ್ ಬಗೆಗೆ ಅರಣ್ಯವಾಸಿ ಬುಡಕಟ್ಟುಗಳೆಲ್ಲಾ ಕಳ್ಳರು ಎನ್ನುವ ಅರ್ಥದ ಟ್ವೀಟ್ ಮಾಡಿದ್ದರು. ಅಂತಹ ದಕ್ಷ ಅಧಿಕಾರಿಣಿಗೆ ಬುಡಕಟ್ಟುಗಳ ಬಗೆಗೆ ಮಾನವೀಯ ತಿಳಿವಿರಲಿಲ್ಲ. ಹೀಗೆ ಆಡಳಿತಗಾರರಾಗಿ ಪ್ರಾಮಾಣಿಕರಾಗಿದ್ದವರೂ, ಜಾತಿವಾದಿಯಾಗಿಯೂ, ಕೋಮುವಾದಿಯಾಗಿಯೂ, ಕಾರ್ಪೋರೇಟ್ ಪರವಾಗಿಯೂ ವಿಚಾರ ಭ್ರಷ್ಟರಾಗಿರಲಿಕ್ಕೆ ಸಾಧ್ಯವಿದೆ. ಆದರೆ ಅಣ್ಣಾಮಲೈ ಅವರ ಕೆಲವು ಮಾತು ಭಾಷಣಗಳನ್ನು ಕೇಳಿದರೆ ದಕ್ಷ ಅಧಿಕಾರಿ ಹೇಗೋ, ಸಮಾಜದ ಬಗೆಗೆ ಡೆಮಾಕ್ರಟಿಕ್ ಆದ ಜನಪರ ತಿಳಿವಿನಲ್ಲಿ ಸ್ಪಷ್ಟತೆ ಇದ್ದಂತಿದೆ. ಈ ತಿಳಿವೂ ಕೂಡ ಅವರನ್ನು ರಾಜಿನಾಮೆಗೆ ಪ್ರೇರೇಪಿಸಿರಬಹುದು. ಇದುವೆ ಅವರ ಮುಂದಿನ ದಾರಿಯನ್ನೂ ಸ್ಪಷ್ಟಗೊಳಿಸಬೇಕಿದೆ.

ಈ ಹೊತ್ತಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯದ ಪಾಲುದಾರಿಕೆಗಿಂತ ಸುಳ್ಳಿನ ಪಾಲುದಾರಿಕೆ ಹೆಚ್ಚಿದೆ. ಅಂತೆಯೇ ಭ್ರಷ್ಟತೆಯ ಪಾಲುದಾರರೂ ಹೆಚ್ಚುತ್ತಿದ್ದಾರೆ. ಈ ಮಧ್ಯೆ ಲೋಕಕ್ಕೂ ತನಗೂ ಸಂಬಂಧವಿಲ್ಲ ಎಂದು ಮೌನಧರಿಸುವ ಆಡಳಿತ ವರ್ಗ ಮತ್ತು ಮಧ್ಯಮವರ್ಗದ ಸಜ್ಜನರ ಸಂಖ್ಯೆ ದೊಡ್ಡದಿದೆ. ಇಂತಹ ಸಜ್ಜನರ ಮೌನ ಇವೆಲ್ಲವಕ್ಕಿಂತ ಅಪಾಯಕಾರಿಯಾಗಿದೆ. ಹೀಗಾಗಿ ಅಣ್ಣಾಮಲೈ ಅವರ ರಾಜಿನಾಮೆ ಬಹುಜನರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಕವಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...