Homeಕರ್ನಾಟಕಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು - ಅರುಣ್ ಜೋಳದ ಕೂಡ್ಲಿಗಿ

ಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು – ಅರುಣ್ ಜೋಳದ ಕೂಡ್ಲಿಗಿ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ನಿಷ್ಠಾವಂತ ದಕ್ಷ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಚರ್ಚೆಯಾಗುತ್ತಿದೆ. ಈ ಸಂಗತಿಯನ್ನು ಹೇಗೆ ನೋಡಬೇಕು? ಈ ಘಟನೆ ವಯಕ್ತಿಕ ನಿರ್ಧಾರವೆ ಆಗಿದ್ದರೂ, ಇದು ಹುಟ್ಟಿಸುವ ಪ್ರಶ್ನೆಗಳಾವುವು? ಈಗಿರುವ ನಿಷ್ಠಾವಂತ ಪೋಲೀಸ್ ಅಧಿಕಾರಿಗಳಲ್ಲಿ ಮೂಡಿಸಿದ ಭಾವನೆ ಯಾವುದು? ಪೊಲೀಸ್ ಇಲಾಖೆ ಸೇರಿ ದಕ್ಷ ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿದ ಯುವಜನರ ಅಭಿಪ್ರಾಯವೇನು? ಇಂತಹ ಅಲ್ಪಸಂಖ್ಯಾತ ದಕ್ಷ ಅಧಿಕಾರಿಗಳ ಕಾರಣಕ್ಕೇ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಟ್ಟ ಜನರ ಪರ್ಯಾಯವೇನು? ಅಥವಾ ಇಂತಹ ದಕ್ಷ ಅಧಿಕಾರಿಯನ್ನು ಉಳಿಸಿಕೊಳ್ಳಬೇಕಾದ ಸಮಾಜದ ಪ್ರಾಮಾಣಿಕತೆಯು ಬ್ರಷ್ಟಗೊಂಡಿದೆಯೇ? ಎನ್ನುವಂತಹ ಪ್ರಶ್ನೆಗಳಿವೆ. ಹಾಗೆಯೇ ಪೋಲಿಸ್ ಇಲಾಖೆಯನ್ನು ಒತ್ತಡರಹಿತಗೊಳಿಸಬೇಕೆನ್ನುವ ಸಿದ್ಧ ಉತ್ತರವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸ್ವತಃ ಅಣ್ಣಾಮಲೈ ಬರೆದ ಪತ್ರದಲ್ಲಿ ಮಧುಕರ್ ಶೆಟ್ಟಿ ಸಾವನ್ನು ಪ್ರಸ್ತಾಪಿಸಿದ್ದಾರೆ. ಮಧುಕರ್ ಶೆಟ್ಟಿ ಬ್ರಷ್ಟಾಚಾರವನ್ನು ತೊಡೆದು ಹಾಕುವ ಖಡಕ್ ಅಧಿಕಾರಿಯಾಗಿದ್ದರು. ಅವರ ಸಾವು ಚರ್ಚಾಸ್ಪದವಾಗಿತ್ತು. ಏನಿಲ್ಲವೆಂದರೂ ಬ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಅವಿರತ ದುಡಿಮೆಗೂ ಅವರ ಸಾವಿಗೂ ನಂಟಿತ್ತು. ಇದು ಅಣ್ಣಾಮಲೈ ಅವರನ್ನು ಕಾಡಿರಬಹುದು. ಈ ಪತ್ರ ವ್ಯಕ್ತಿಯೊಬ್ಬರ ಬಿಡುವಿಲ್ಲದ ಸಾಮಾಜಿಕ ತೊಡಗುವಿಕೆ, ಕುಟುಂಬದ ಜತೆಗಿನ ಒಡನಾಟ, ತನ್ನದೇ ವಯಕ್ತಿಕ ಖುಷಿ ಸಂಭ್ರಮಗಳ ಕುರಿತ ಜಿಜ್ಞಾಸೆಗಳನ್ನು ಹುಟ್ಟಿಸಿದೆ. ಸಾಮಾಜಿಕ ತೊಡಗುವಿಕೆಯಲ್ಲಿ ಕುಟುಂಬದ ಆಪ್ತತೆ ಮತ್ತು ವಯಕ್ತಿಕ ಖುಷಿಗಳನ್ನು ಕಳೆದುಕೊಳ್ಳುವ `ಸಾರ್ವಜನಿಕತೆ ಮತ್ತು ವಯಕ್ತಿಕತೆಯ’ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ಅಣ್ಣಾಮಲೈ ಅವರಂತೆ ರಾಜಿನಾಮೆ ಕೊಡದೆಯೂ, ತಮ್ಮ ಕೆಲಸದಲ್ಲಿದ್ದುಕೊಂಡೇ ಯಾವುದೇ ಒತ್ತಡಗಳನ್ನು ಮೈಮೇಲೆ ಹಾಕಿಕೊಳ್ಳದೆ ಕುಟುಂಬದ ಜೊತೆ ಆರಾಮಾಗಿವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಅವರಲ್ಲಿ ಬಹುಪಾಲು ವೃತ್ತಿ ಬದ್ಧತೆಗೆ ಬದಲಾಗಿ ಕುಟುಂಬದ ಬದ್ಧತೆ ಹೆಚ್ಚಿರುವವರು. ಇಡೀ ವ್ಯವಸ್ಥೆಯೇ ಬ್ರಷ್ಟಗೊಂಡಾಗ, ನೀನೊಬ್ಬ ಪ್ರಮಾಣಿಕನಾದರೆ ಸಮಾಜ ಬದಲಾಗುವುದೇ? ಎನ್ನುವ ಸಿನಿಕತನ ಬಹುಜನರನ್ನು ಪ್ರಭಾವಿಸಿದೆ. ಹೀಗಾಗಿ ಅನೇಕ ಅಧಿಕಾರಿ ವರ್ಗದವರು `ನನ್ನೊಬ್ಬನಿಂದ’ ಏನಾಗುವುದಿದೆ ಎಂದು ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಸಮಸ್ಯೆ ಇರುವುದು ಈ `ನನ್ನೊಬ್ಬನಿಂದ’ ಎನ್ನುವವರ ಸಂಖ್ಯೆಯೂ ದೊಡ್ಡದಾಗುತ್ತಿರುವುದು. ಈ ನನ್ನಂಥವರೊಬ್ಬರಿಂದಲೂ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಅಣ್ಣಾಮಲೈ ತೋರಿಸಿದ್ದರು. ಹಾಗಾಗಿ ಅವರ ರಾಜಿನಾಮೆ ಅಘಾತ ತಂದಿದೆ.

ಪೊಲೀಸ್ ಇಲಾಖೆಯ ಆಚೆಗೂ ಸಮಾಜದ ಒಳಿತಿಗಾಗಿ ದುಡಿಯುವ ಬದ್ಧತೆ ಇರುವ ಯಾವುದೇ ಕ್ಷೇತ್ರದ ಕೆಲಸಗಾರರೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಸದಾ ತಿರುಗಾಡುತ್ತ ಬರೆವ ಚಿಂತಕ ಪ್ರೊ.ರಹಮತ್ ತರೀಕೆರೆ ಅವರ ಮಗಳು ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವುದಿಲ್ಲವೆಂದು ಅಪ್ಪನ ಕುರಿತು ಸಿಡುಕಿನ ಪದ್ಯ ಬರೆದಿದ್ದಳು. ಈ ನಡುವೆ ಎರಡು ಲಕ್ಷದಷ್ಟು ಸಂಬಳ ಪಡೆದು ಕನಿಷ್ಠ ಪಾಠವನ್ನೂ ಮಾಡದೆ ಅರಾಮಾಗಿ ಕುಟುಂಬದ ಜತೆಗಿರುವ ಅದ್ಯಾಪಕರಿದ್ದಾರೆ.

ಉಸಿರುಕಟ್ಟಿಸಿ ದುಡಿಸಿಕೊಳ್ಳುವ ಕಾರ್ಪೋರೇಟ್ ವಲಯದ ನೌಕರ ವರ್ಗವೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಬಹುತೇಕ ಒಪ್ಪಂದದ ದುಡಿಮೆಯಾದ ಕಾರಣ ಅಣ್ಣಾಮಲೈ ಅವರಂತೆ ಬಿಡುಗಡೆಯೂ ಕಷ್ಟವಿದೆ. ಅಂತೆಯೇ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಬದ್ಧತೆಯ ಅವಿರತ ದುಡಿಮೆಗೂ ಕುಟುಂಬದ ಜತೆಗಿನ ಒಡನಾಟಕ್ಕೂ ನೇರ ಸಂಬಂಧವಿದೆ. ಬಹುತೇಕ ತಮ್ಮ ದುಡಿಮೆಯಲ್ಲಿ ಬದ್ಧತೆ ಕಡಿಮೆ ಮಾಡಿಕೊಂಡವರು ಕುಟುಂಬದ ಜತೆ ಹೆಚ್ಚು ಸಮಯ ಕಳೆಯಬಲ್ಲರು. ಅಪವಾದವೆಂಬಂತೆ ಈ ಎರಡನ್ನೂ ಸರಿದೂಗಿಸುವವರ ಸಂಖ್ಯೆ ವಿರಳ. ಹೀಗಾಗಿ ಅಪ್ರಾಮಾಣಿಕತೆ, ಬ್ರಷ್ಟತೆ, ಸೋಮಾರಿತನ, ತನ್ನ ಕರ್ತವ್ಯದ ನಿಷ್ಠೆ ಇಲ್ಲದಿರುವಂತಹ ಗುಣಗಳಿಗೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವಿಕೆಗೂ ಸಂಬಂಧವಿದೆ. ಈ ನೆಲೆಯಲ್ಲಿ ಅಣ್ಣಾಮಲೈ ಅವರ ರಾಜಿನಾಮೆ ಸಾರ್ವಜನಿಕತೆ ಮತ್ತು ವಯಕ್ತಿಕತೆಯ ಚರ್ಚೆಗೆ ಹೊಸ ದಾರಿಗಳನ್ನು ತೆರೆದಿದೆ.

ಎಷ್ಟೋ ಜನ ಆಡಳಿತದಲ್ಲಿ ದಕ್ಷರಾಗಿದ್ದು, ಸಮಾಜದ ಬಗೆಗಿವ ದೃಷ್ಟಿಕೋನದಲ್ಲಿ ದೋಷವಿರುತ್ತದೆ. ಕಿರಣ್ ಬೇಡಿಯಂತಹ ದಕ್ಷ ಅಧಿಕಾರಿ ಕ್ರಿಮಿನಲ್ ಟ್ರೈಬ್ ಬಗೆಗೆ ಅರಣ್ಯವಾಸಿ ಬುಡಕಟ್ಟುಗಳೆಲ್ಲಾ ಕಳ್ಳರು ಎನ್ನುವ ಅರ್ಥದ ಟ್ವೀಟ್ ಮಾಡಿದ್ದರು. ಅಂತಹ ದಕ್ಷ ಅಧಿಕಾರಿಣಿಗೆ ಬುಡಕಟ್ಟುಗಳ ಬಗೆಗೆ ಮಾನವೀಯ ತಿಳಿವಿರಲಿಲ್ಲ. ಹೀಗೆ ಆಡಳಿತಗಾರರಾಗಿ ಪ್ರಾಮಾಣಿಕರಾಗಿದ್ದವರೂ, ಜಾತಿವಾದಿಯಾಗಿಯೂ, ಕೋಮುವಾದಿಯಾಗಿಯೂ, ಕಾರ್ಪೋರೇಟ್ ಪರವಾಗಿಯೂ ವಿಚಾರ ಭ್ರಷ್ಟರಾಗಿರಲಿಕ್ಕೆ ಸಾಧ್ಯವಿದೆ. ಆದರೆ ಅಣ್ಣಾಮಲೈ ಅವರ ಕೆಲವು ಮಾತು ಭಾಷಣಗಳನ್ನು ಕೇಳಿದರೆ ದಕ್ಷ ಅಧಿಕಾರಿ ಹೇಗೋ, ಸಮಾಜದ ಬಗೆಗೆ ಡೆಮಾಕ್ರಟಿಕ್ ಆದ ಜನಪರ ತಿಳಿವಿನಲ್ಲಿ ಸ್ಪಷ್ಟತೆ ಇದ್ದಂತಿದೆ. ಈ ತಿಳಿವೂ ಕೂಡ ಅವರನ್ನು ರಾಜಿನಾಮೆಗೆ ಪ್ರೇರೇಪಿಸಿರಬಹುದು. ಇದುವೆ ಅವರ ಮುಂದಿನ ದಾರಿಯನ್ನೂ ಸ್ಪಷ್ಟಗೊಳಿಸಬೇಕಿದೆ.

ಈ ಹೊತ್ತಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯದ ಪಾಲುದಾರಿಕೆಗಿಂತ ಸುಳ್ಳಿನ ಪಾಲುದಾರಿಕೆ ಹೆಚ್ಚಿದೆ. ಅಂತೆಯೇ ಭ್ರಷ್ಟತೆಯ ಪಾಲುದಾರರೂ ಹೆಚ್ಚುತ್ತಿದ್ದಾರೆ. ಈ ಮಧ್ಯೆ ಲೋಕಕ್ಕೂ ತನಗೂ ಸಂಬಂಧವಿಲ್ಲ ಎಂದು ಮೌನಧರಿಸುವ ಆಡಳಿತ ವರ್ಗ ಮತ್ತು ಮಧ್ಯಮವರ್ಗದ ಸಜ್ಜನರ ಸಂಖ್ಯೆ ದೊಡ್ಡದಿದೆ. ಇಂತಹ ಸಜ್ಜನರ ಮೌನ ಇವೆಲ್ಲವಕ್ಕಿಂತ ಅಪಾಯಕಾರಿಯಾಗಿದೆ. ಹೀಗಾಗಿ ಅಣ್ಣಾಮಲೈ ಅವರ ರಾಜಿನಾಮೆ ಬಹುಜನರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಕವಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...