Homeಕರ್ನಾಟಕಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು - ಅರುಣ್ ಜೋಳದ ಕೂಡ್ಲಿಗಿ

ಒಂದು ರಾಜೀನಾಮೆ ಹುಟ್ಟಿಸಿರುವ ಪ್ರಶ್ನೆಗಳು – ಅರುಣ್ ಜೋಳದ ಕೂಡ್ಲಿಗಿ

- Advertisement -
- Advertisement -

| ಅರುಣ್ ಜೋಳದಕೂಡ್ಲಿಗಿ |

ನಿಷ್ಠಾವಂತ ದಕ್ಷ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳನ್ನು ಒಳಗೊಂಡಂತೆ ಚರ್ಚೆಯಾಗುತ್ತಿದೆ. ಈ ಸಂಗತಿಯನ್ನು ಹೇಗೆ ನೋಡಬೇಕು? ಈ ಘಟನೆ ವಯಕ್ತಿಕ ನಿರ್ಧಾರವೆ ಆಗಿದ್ದರೂ, ಇದು ಹುಟ್ಟಿಸುವ ಪ್ರಶ್ನೆಗಳಾವುವು? ಈಗಿರುವ ನಿಷ್ಠಾವಂತ ಪೋಲೀಸ್ ಅಧಿಕಾರಿಗಳಲ್ಲಿ ಮೂಡಿಸಿದ ಭಾವನೆ ಯಾವುದು? ಪೊಲೀಸ್ ಇಲಾಖೆ ಸೇರಿ ದಕ್ಷ ಅಧಿಕಾರಿಯಾಗಬೇಕೆಂಬ ಕನಸು ಕಟ್ಟಿದ ಯುವಜನರ ಅಭಿಪ್ರಾಯವೇನು? ಇಂತಹ ಅಲ್ಪಸಂಖ್ಯಾತ ದಕ್ಷ ಅಧಿಕಾರಿಗಳ ಕಾರಣಕ್ಕೇ ಪೊಲೀಸ್ ಇಲಾಖೆಯ ಮೇಲೆ ಭರವಸೆ ಇಟ್ಟ ಜನರ ಪರ್ಯಾಯವೇನು? ಅಥವಾ ಇಂತಹ ದಕ್ಷ ಅಧಿಕಾರಿಯನ್ನು ಉಳಿಸಿಕೊಳ್ಳಬೇಕಾದ ಸಮಾಜದ ಪ್ರಾಮಾಣಿಕತೆಯು ಬ್ರಷ್ಟಗೊಂಡಿದೆಯೇ? ಎನ್ನುವಂತಹ ಪ್ರಶ್ನೆಗಳಿವೆ. ಹಾಗೆಯೇ ಪೋಲಿಸ್ ಇಲಾಖೆಯನ್ನು ಒತ್ತಡರಹಿತಗೊಳಿಸಬೇಕೆನ್ನುವ ಸಿದ್ಧ ಉತ್ತರವಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸ್ವತಃ ಅಣ್ಣಾಮಲೈ ಬರೆದ ಪತ್ರದಲ್ಲಿ ಮಧುಕರ್ ಶೆಟ್ಟಿ ಸಾವನ್ನು ಪ್ರಸ್ತಾಪಿಸಿದ್ದಾರೆ. ಮಧುಕರ್ ಶೆಟ್ಟಿ ಬ್ರಷ್ಟಾಚಾರವನ್ನು ತೊಡೆದು ಹಾಕುವ ಖಡಕ್ ಅಧಿಕಾರಿಯಾಗಿದ್ದರು. ಅವರ ಸಾವು ಚರ್ಚಾಸ್ಪದವಾಗಿತ್ತು. ಏನಿಲ್ಲವೆಂದರೂ ಬ್ರಷ್ಟಾಚಾರ ವಿರೋಧಿ ಪ್ರಾಮಾಣಿಕ ಅವಿರತ ದುಡಿಮೆಗೂ ಅವರ ಸಾವಿಗೂ ನಂಟಿತ್ತು. ಇದು ಅಣ್ಣಾಮಲೈ ಅವರನ್ನು ಕಾಡಿರಬಹುದು. ಈ ಪತ್ರ ವ್ಯಕ್ತಿಯೊಬ್ಬರ ಬಿಡುವಿಲ್ಲದ ಸಾಮಾಜಿಕ ತೊಡಗುವಿಕೆ, ಕುಟುಂಬದ ಜತೆಗಿನ ಒಡನಾಟ, ತನ್ನದೇ ವಯಕ್ತಿಕ ಖುಷಿ ಸಂಭ್ರಮಗಳ ಕುರಿತ ಜಿಜ್ಞಾಸೆಗಳನ್ನು ಹುಟ್ಟಿಸಿದೆ. ಸಾಮಾಜಿಕ ತೊಡಗುವಿಕೆಯಲ್ಲಿ ಕುಟುಂಬದ ಆಪ್ತತೆ ಮತ್ತು ವಯಕ್ತಿಕ ಖುಷಿಗಳನ್ನು ಕಳೆದುಕೊಳ್ಳುವ `ಸಾರ್ವಜನಿಕತೆ ಮತ್ತು ವಯಕ್ತಿಕತೆಯ’ ಚರ್ಚೆಯನ್ನು ಮುನ್ನಲೆಗೆ ತಂದಿದೆ.

ಅಣ್ಣಾಮಲೈ ಅವರಂತೆ ರಾಜಿನಾಮೆ ಕೊಡದೆಯೂ, ತಮ್ಮ ಕೆಲಸದಲ್ಲಿದ್ದುಕೊಂಡೇ ಯಾವುದೇ ಒತ್ತಡಗಳನ್ನು ಮೈಮೇಲೆ ಹಾಕಿಕೊಳ್ಳದೆ ಕುಟುಂಬದ ಜೊತೆ ಆರಾಮಾಗಿವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಅವರಲ್ಲಿ ಬಹುಪಾಲು ವೃತ್ತಿ ಬದ್ಧತೆಗೆ ಬದಲಾಗಿ ಕುಟುಂಬದ ಬದ್ಧತೆ ಹೆಚ್ಚಿರುವವರು. ಇಡೀ ವ್ಯವಸ್ಥೆಯೇ ಬ್ರಷ್ಟಗೊಂಡಾಗ, ನೀನೊಬ್ಬ ಪ್ರಮಾಣಿಕನಾದರೆ ಸಮಾಜ ಬದಲಾಗುವುದೇ? ಎನ್ನುವ ಸಿನಿಕತನ ಬಹುಜನರನ್ನು ಪ್ರಭಾವಿಸಿದೆ. ಹೀಗಾಗಿ ಅನೇಕ ಅಧಿಕಾರಿ ವರ್ಗದವರು `ನನ್ನೊಬ್ಬನಿಂದ’ ಏನಾಗುವುದಿದೆ ಎಂದು ವ್ಯವಸ್ಥೆಗೆ ಹೊಂದಿಕೊಳ್ಳುತ್ತಾರೆ. ಸಮಸ್ಯೆ ಇರುವುದು ಈ `ನನ್ನೊಬ್ಬನಿಂದ’ ಎನ್ನುವವರ ಸಂಖ್ಯೆಯೂ ದೊಡ್ಡದಾಗುತ್ತಿರುವುದು. ಈ ನನ್ನಂಥವರೊಬ್ಬರಿಂದಲೂ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ ಎನ್ನುವುದನ್ನು ಅಣ್ಣಾಮಲೈ ತೋರಿಸಿದ್ದರು. ಹಾಗಾಗಿ ಅವರ ರಾಜಿನಾಮೆ ಅಘಾತ ತಂದಿದೆ.

ಪೊಲೀಸ್ ಇಲಾಖೆಯ ಆಚೆಗೂ ಸಮಾಜದ ಒಳಿತಿಗಾಗಿ ದುಡಿಯುವ ಬದ್ಧತೆ ಇರುವ ಯಾವುದೇ ಕ್ಷೇತ್ರದ ಕೆಲಸಗಾರರೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಸದಾ ತಿರುಗಾಡುತ್ತ ಬರೆವ ಚಿಂತಕ ಪ್ರೊ.ರಹಮತ್ ತರೀಕೆರೆ ಅವರ ಮಗಳು ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವುದಿಲ್ಲವೆಂದು ಅಪ್ಪನ ಕುರಿತು ಸಿಡುಕಿನ ಪದ್ಯ ಬರೆದಿದ್ದಳು. ಈ ನಡುವೆ ಎರಡು ಲಕ್ಷದಷ್ಟು ಸಂಬಳ ಪಡೆದು ಕನಿಷ್ಠ ಪಾಠವನ್ನೂ ಮಾಡದೆ ಅರಾಮಾಗಿ ಕುಟುಂಬದ ಜತೆಗಿರುವ ಅದ್ಯಾಪಕರಿದ್ದಾರೆ.

ಉಸಿರುಕಟ್ಟಿಸಿ ದುಡಿಸಿಕೊಳ್ಳುವ ಕಾರ್ಪೋರೇಟ್ ವಲಯದ ನೌಕರ ವರ್ಗವೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯಲಾರರು. ಬಹುತೇಕ ಒಪ್ಪಂದದ ದುಡಿಮೆಯಾದ ಕಾರಣ ಅಣ್ಣಾಮಲೈ ಅವರಂತೆ ಬಿಡುಗಡೆಯೂ ಕಷ್ಟವಿದೆ. ಅಂತೆಯೇ ಸಾರ್ವಜನಿಕ ವಲಯದಲ್ಲಿ ಸಾಮಾಜಿಕ ಬದ್ಧತೆಯ ಅವಿರತ ದುಡಿಮೆಗೂ ಕುಟುಂಬದ ಜತೆಗಿನ ಒಡನಾಟಕ್ಕೂ ನೇರ ಸಂಬಂಧವಿದೆ. ಬಹುತೇಕ ತಮ್ಮ ದುಡಿಮೆಯಲ್ಲಿ ಬದ್ಧತೆ ಕಡಿಮೆ ಮಾಡಿಕೊಂಡವರು ಕುಟುಂಬದ ಜತೆ ಹೆಚ್ಚು ಸಮಯ ಕಳೆಯಬಲ್ಲರು. ಅಪವಾದವೆಂಬಂತೆ ಈ ಎರಡನ್ನೂ ಸರಿದೂಗಿಸುವವರ ಸಂಖ್ಯೆ ವಿರಳ. ಹೀಗಾಗಿ ಅಪ್ರಾಮಾಣಿಕತೆ, ಬ್ರಷ್ಟತೆ, ಸೋಮಾರಿತನ, ತನ್ನ ಕರ್ತವ್ಯದ ನಿಷ್ಠೆ ಇಲ್ಲದಿರುವಂತಹ ಗುಣಗಳಿಗೂ ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವಿಕೆಗೂ ಸಂಬಂಧವಿದೆ. ಈ ನೆಲೆಯಲ್ಲಿ ಅಣ್ಣಾಮಲೈ ಅವರ ರಾಜಿನಾಮೆ ಸಾರ್ವಜನಿಕತೆ ಮತ್ತು ವಯಕ್ತಿಕತೆಯ ಚರ್ಚೆಗೆ ಹೊಸ ದಾರಿಗಳನ್ನು ತೆರೆದಿದೆ.

ಎಷ್ಟೋ ಜನ ಆಡಳಿತದಲ್ಲಿ ದಕ್ಷರಾಗಿದ್ದು, ಸಮಾಜದ ಬಗೆಗಿವ ದೃಷ್ಟಿಕೋನದಲ್ಲಿ ದೋಷವಿರುತ್ತದೆ. ಕಿರಣ್ ಬೇಡಿಯಂತಹ ದಕ್ಷ ಅಧಿಕಾರಿ ಕ್ರಿಮಿನಲ್ ಟ್ರೈಬ್ ಬಗೆಗೆ ಅರಣ್ಯವಾಸಿ ಬುಡಕಟ್ಟುಗಳೆಲ್ಲಾ ಕಳ್ಳರು ಎನ್ನುವ ಅರ್ಥದ ಟ್ವೀಟ್ ಮಾಡಿದ್ದರು. ಅಂತಹ ದಕ್ಷ ಅಧಿಕಾರಿಣಿಗೆ ಬುಡಕಟ್ಟುಗಳ ಬಗೆಗೆ ಮಾನವೀಯ ತಿಳಿವಿರಲಿಲ್ಲ. ಹೀಗೆ ಆಡಳಿತಗಾರರಾಗಿ ಪ್ರಾಮಾಣಿಕರಾಗಿದ್ದವರೂ, ಜಾತಿವಾದಿಯಾಗಿಯೂ, ಕೋಮುವಾದಿಯಾಗಿಯೂ, ಕಾರ್ಪೋರೇಟ್ ಪರವಾಗಿಯೂ ವಿಚಾರ ಭ್ರಷ್ಟರಾಗಿರಲಿಕ್ಕೆ ಸಾಧ್ಯವಿದೆ. ಆದರೆ ಅಣ್ಣಾಮಲೈ ಅವರ ಕೆಲವು ಮಾತು ಭಾಷಣಗಳನ್ನು ಕೇಳಿದರೆ ದಕ್ಷ ಅಧಿಕಾರಿ ಹೇಗೋ, ಸಮಾಜದ ಬಗೆಗೆ ಡೆಮಾಕ್ರಟಿಕ್ ಆದ ಜನಪರ ತಿಳಿವಿನಲ್ಲಿ ಸ್ಪಷ್ಟತೆ ಇದ್ದಂತಿದೆ. ಈ ತಿಳಿವೂ ಕೂಡ ಅವರನ್ನು ರಾಜಿನಾಮೆಗೆ ಪ್ರೇರೇಪಿಸಿರಬಹುದು. ಇದುವೆ ಅವರ ಮುಂದಿನ ದಾರಿಯನ್ನೂ ಸ್ಪಷ್ಟಗೊಳಿಸಬೇಕಿದೆ.

ಈ ಹೊತ್ತಿನ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸತ್ಯದ ಪಾಲುದಾರಿಕೆಗಿಂತ ಸುಳ್ಳಿನ ಪಾಲುದಾರಿಕೆ ಹೆಚ್ಚಿದೆ. ಅಂತೆಯೇ ಭ್ರಷ್ಟತೆಯ ಪಾಲುದಾರರೂ ಹೆಚ್ಚುತ್ತಿದ್ದಾರೆ. ಈ ಮಧ್ಯೆ ಲೋಕಕ್ಕೂ ತನಗೂ ಸಂಬಂಧವಿಲ್ಲ ಎಂದು ಮೌನಧರಿಸುವ ಆಡಳಿತ ವರ್ಗ ಮತ್ತು ಮಧ್ಯಮವರ್ಗದ ಸಜ್ಜನರ ಸಂಖ್ಯೆ ದೊಡ್ಡದಿದೆ. ಇಂತಹ ಸಜ್ಜನರ ಮೌನ ಇವೆಲ್ಲವಕ್ಕಿಂತ ಅಪಾಯಕಾರಿಯಾಗಿದೆ. ಹೀಗಾಗಿ ಅಣ್ಣಾಮಲೈ ಅವರ ರಾಜಿನಾಮೆ ಬಹುಜನರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರಕವಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...