Homeಮುಖಪುಟಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

ಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

- Advertisement -
- Advertisement -

ಕರಾವಳಿಯ ಅತ್ಯಂತ ಭೀಕರ ಕೋಮುಗಲಭೆ ನಡೆದ ಸುರತ್ಕಲ್ ಸುತ್ತಮುತ್ತಲಿನ ಕೋಮುಗಲಭೆಗಳು, ಕೊಲೆಗಳು ಅಲ್ಲಿಗೇ ನಿಲ್ಲಲಿಲ್ಲ. ಅದು ಇಂದಿನ ವರೆಗೂ ಮುಂದುವರಿದಿದೆ. ಕೃಷ್ಣಾಪುರ-ಕಾಟಿಪಳ್ಳ ಪ್ರದೇಶಗಳಲ್ಲಿ ಮತ್ತೆ ಮತ್ತೆ ಘರ್ಷಣೆಗಳು ನಡೆಯುತ್ತಾ ಬಂದಿವೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಈ ಪ್ರದೇಶದಲ್ಲಿ ಇರುವುದು ಹೆಚ್ಚಾಗಿ ಬಂದರು ನಿರ್ಮಾಣದ ವೇಳೆ ನಿರಾಶ್ರಿತರಾದವರ ಮನೆಗಳು. ಸರಕಾರ ಅವರಿಗೆ ಸೈಟುಗಳನ್ನು ಹಂಚುವಾಗ ಹಿಂದೂ ಮತ್ತು ಮುಸ್ಲಿಮರಿಗೆ ಮಿಶ್ರ ಮಾಡಿ ಹಂಚಬೇಕಿತ್ತು. ಆದರೆ, ಅದು ಕೆಲವು ಬ್ಲಾಕ್‌ಗಳಲ್ಲಿ ಕೇವಲ ಹಿಂದೂಗಳಿಗೆ ಮತ್ತು ಕೆಲವು ಬ್ಲಾಕ್‌ಗಳಲ್ಲಿ ಮುಸ್ಲಿಮರಿಗೆ ಮಾತ್ರ ಸೈಟುಗಳನ್ನು ಹಂಚಿತ್ತು. ಪರಿಣಾಮವಾಗಿ ಯಾವುದೇ ಕೋಮು ಉದ್ವಿಗ್ನತೆ ಉಂಟಾದಾಗ ಈ ಎರಡು ಪ್ರದೇಶಗಳು ಎರಡು ದೇಶಗಳಂತೆ ಕಂಡು, ಎರಡೂ ಕಡೆ ಜನರು ಜಮಾಯಿಸುತ್ತಾರೆ.

ಅಲ್ಲದೇ, ಬಂದರು ಆದ ಬಳಿಕ ಪಣಂಬೂರು, ಕುಳಾಯಿ, ಸುರತ್ಕಲ್, ನೆರೆಯ ಕಾನ, ಬಾಳ ಮುಂತಾದ ಕಡೆ ಎಂಆರ್‌ಪಿಎಲ್ ಸಹಿತ ಹಲವು ಚಿಕ್ಕದೊಡ್ಡ ಉದ್ದಿಮೆಗಳ ಜೊತೆ ಹಲವಾರು ರೀತಿಯ ದಂಧೆಗಳು ಆರಂಭವಾಗಿದ್ದವು. ಹಾಗಾಗಿ ವಹಿವಾಟು ಸಂಬಂಧಿ ವೈಯಕ್ತಿಕ ದ್ವೇಷಗಳೂ ಕೋಮುಗಲಾಟೆಗೆ ಕಾರಣಗಳಾಗುತ್ತಿದ್ದವು.

ಸುರತ್ಕಲ್‌ ಪ್ರದೇಶದಲ್ಲಿ ಮತ್ತೆ ನಡೆದ ಘಟನೆಯೆಂದರೆ 2006ಲ್ಲಿ ನಡೆದ ಮಾರ್ಬಲ್ ಅಂಗಡಿಯೊಂದರ ಮಾಲಕನಾಗಿದ್ದ ಸುಖಾನಂದ ಶೆಟ್ಟಿ ಕೊಲೆ. ಮೂಲತಃ ಮುಲ್ಕಿಯ ಶೆಟ್ಟಿ  ಹಿಂದೂತ್ವವಾದಿ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ಗೋವು ಸಾಗಾಟಗಾರರ ಮೇಲೆ ದಾಳಿ, ಲವ್ ಜೆಹಾದ್ ವಿಷಯದಲ್ಲಿ ಹಲ್ಲೆ ಮುಂತಾಗಿ ಯುವಕರಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದ ವ್ಯಕ್ತಿ. ಈತನನ್ನು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆಯಲ್ಲಿದ್ದ ಆತನ ಮಾರ್ಬಲ್ ಅಂಗಡಿಗೆ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿತ್ತು. ಈ ಪ್ರಕರಣದ ವಿಚಾರಣೆ ಕೆಲವರ್ಷ ನಡೆದು 17 ಆರೋಪಿಗಳಿಗೆ ಖುಲಾಸೆಯಾಗಿತ್ತು. ಇವರಲ್ಲಿ ಕೆಲವರು ಬಾಡಿಗೆ ಹತ್ಯೆಯಿಂದ ಹಿಡಿದು ಹಲವು ರೀತಿಯ ಕ್ರಿಮಿನಲ್ ಕೃತ್ಯಗಳಲ್ಲಿ ಬಾಗಿಯಾದ ಪಕ್ಕಾ ರೌಡಿಗಳಿದ್ದರು. ಈ ಪ್ರಕರಣದಲ್ಲಿಯೂ ಘರ್ಷಣೆಯ ಕಿಚ್ಚು ಹೊತ್ತಿದ್ದು, ಎಜೆ ಆಸ್ಪತ್ರೆ ಬಳಿ ಗೋಲಿಬಾರ್ ಕೂಡಾ ನಡೆದಿತ್ತು. ಗಲಭೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇವರಲ್ಲಿ ಒಬ್ಬನಾದ ಕಬೀರ್ ಎಂಬಾತನನ್ನು ಗುರುಪುರ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ, ನಂತರ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಯಿತು. ಬಾಡಿಗೆ ಹಂತಕನೆಂದು ಕುಖ್ಯಾತಿ ಗಳಿಸಿದ್ದ ಮುಲ್ಕಿ ರಫೀಕ್ ಯಾನೆ ಕೊಳಚೆಕಂಬ್ಳ ರಫೀಕ್‌ನನ್ನು ತಮಿಳುನಾಡಿನಿಂದ ಪೊಲೀಸರು ಬಂಧಿಸಿತಂದಿದ್ದರು. ನಂತರ ಈತ ಮಣಿಪಾಲದ ಬಳಿ ರೈಲು ನಿಲ್ದಾಣದ ಎದುರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇನ್ನೊಬ್ಬ ರೌಡಿ ಮಾಡೂರು ಯೂಸುಫ್ ಅಥವಾ ಇಸುಬುನನ್ನು ಮಂಗಳೂರು ಜೈಲಿನಲ್ಲಿ ಸಹಕೈದಿಗಳು ಕೊಂದಿದ್ದರು. ಬುಲೆಟ್ ಸುಧೀರ್ ಎಂಬಾತ ಕುಂದಾಪುರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಇದರ ಅರ್ಥವೆಂದರೆ, ಕರಾವಳಿಯಲ್ಲಿ ನಡೆಯುವ ಕೋಮುಗಲಭೆಗಳು, ಕೊಲೆಗಳು ನೇರವಾಗಿ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಅವು ಧರ್ಮರಾಜಕಾರಣ ಮತ್ತು ಎರಡು ನಂಬರ್ ದಂಧೆಗಳಿಗೆ, ಇತರ ವ್ಯವಹಾರಗಳಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನಡೆದ ಎಲ್ಲಾ ಕೋಮು ಗಲಭೆ ಮತ್ತು ಆ ಸಂಬಂಧಿ ಕೊಲೆಗಳ ವಿಷಯವನ್ನು ಬರೆಯುತ್ತಾ ಹೋದರೆ, ಒಂದು ಪುಸ್ತಕವನ್ನೇ ಬರೆಯಬೇಕಾದೀತು.  ಸುರತ್ಕಲ್‌ ಪರಿಸರದಲ್ಲಿ 2018ರಲ್ಲಿಯೇ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಂಬಾತನ ಕೊಲೆ ನಡೆದಿದ್ದರೆ, ಪ್ರತೀಕಾರವೋ ಎಂಬಂತೆ ಕೆಲದಿನಗಳಲ್ಲೇ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬಾತನ ಕೊಲೆ ನಡೆದಿತ್ತು.

ಇಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಎಲ್ಲಾ ಪ್ರಕರಣಗಳಲ್ಲಿ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸರು ಪಕ್ಷಪಾತದ ಆರೋಪಕ್ಕೆ ಗುರಿಯಾಗಿ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದಿದ್ದವು. ಸುರತ್ಕಲ್ ಠಾಣೆಯಂತೂ ಹಲವಾರು ಬಾರಿ ಗುಂಪು ಮುತ್ತಿಗೆಗೆ ಗುರಿಯಾಗಿದೆ.

ಆದುದರಿಂದ ಇಲ್ಲಿ ಎಲ್ಲಾ ಪ್ರಕರಣಗಳನ್ನು ಕಾಲಾನುಕ್ರಮದಲ್ಲಿ ಹೇಳಲು ಹೋಗದೆ, ಅತ್ಯಂತ ಸೂಕ್ಷ್ಮವಾದ ಕೆಲವು ಪ್ರದೇಶಗಳು ಮತ್ತು ಅವುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಎಲ್ಲಾ ಘಟನೆಗಳು ಒಂದೇ ಮಾದರಿ (ಮೋಡಸ್ ಒಪೆರಾಂಡಿ)ಯಲ್ಲಿ ನಡೆದಿದ್ದು, ಎರಡೂ ಕೋಮುಗಳು ಮತ್ತು ಅವುಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಒಂದೇ ರೀತಿ ಇರುವುದರಿಂದ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ.

ಸುರತ್ಕಲ್‌ನಂತೆ ಕೋಮುಸೂಕ್ಷ್ಮವಾಗಿದ್ದು, ಹಲವಾರು ಕೊಲೆ ಮತ್ತು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿರುವುದೆಂದರೆ, ಪೊಳಲಿ ಮತ್ತು ಮಾಡೂರು ಪರಿಸರ. ಇಲ್ಲಿ ಏನಾದರೂ ಆರಂಭವಾದರೆ, ಅದು ಬಜ್ಪೆ, ಬಿ.ಸಿ.ರೋಡು, ಮಾರಿಪಳ್ಳ, ಫರಂಗಿಪೇಟೆ ಮುಂತಾದ ಕಡೆಗಳಿಗೆ ವ್ಯಾಪಿಸುತ್ತದೆ. ವರ್ಷಗಳ ಹಿಂದೆ ಇಲ್ಲಿ ಪೊಳಲಿ ಕಮಲಾಕ್ಷ ಎಂಬಾತನ ಕೊಲೆ ನಡೆದಿತ್ತು. ಕಾಟಿಪಳ್ಳ-ಕೃಷ್ಣಾಪುರದಂತೆಯೇ ಮಾಡೂರಿನಲ್ಲಿ ಮುಸ್ಲಿಂ ಬಾಹುಳ್ಯವಿದ್ದರೆ, ಸುತ್ತಲೂ ಹಿಂದೂ ಬಾಹುಳ್ಯವಿದೆ. ನಂತರ ನಾಗೇಶ ಶೆಟ್ಟಿಗಾರ್ ಎಂಬಾತನ ಕೊಲೆ ನಡೆಯಿತು. ತಕ್ಷಣವೇ ಮಂಗಳೂರಿನ ಜಪ್ಪು ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು. ಇದು ಪ್ರತೀಕಾರಾರ್ಥ ಕೊಲೆ ಎಂದು ಹೇಳಲಾಗಿತ್ತು.

ನಂತರ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ಮಾಡೂರಿನ ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಅವರ ಕಚೇರಿಯಲ್ಲಿಯೇ, ಅವರ ಹೆಂಡತಿ ಮಕ್ಕಳ ಕಣ್ಣೆದುರೇ, ಭೀಕರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿಗಳೆಂದರೆ ಪೊಳಲಿ ಅನಂತು ಮತ್ತು ಇತರರು. ಮಾಡೂರು ಇಸುಬು ಕೊಲೆ ಪ್ರಕರಣವನ್ನು ಹಿಂದೆ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬಿಡುಗಡೆ ಹೊಂದಿದ ಅನಂತುವನ್ನು ಹಿಂದೂತ್ವವಾದಿ ಸಂಘಟನೆಗಳು ಮಂಗಳೂರಿನಿಂದ ಪೊಳಲಿಗೆ ಮೆರವಣಿಗೆಯಲ್ಲಿ ಒಯ್ದಿದ್ದರು. ನಂತರ ಒಂಟಿಯಾಗಿ ಹೋಗುತ್ತಿದ್ದ ಆತನನ್ನು ಪ್ರತೀಕಾರವಾಗಿ ಕೊಲ್ಲಲಾಗಿತ್ತು. ಬೆನ್ನಲ್ಲೇ ಜಬ್ಬಾರ್ ಹತ್ಯೆಯಲ್ಲಿ ಶಾಮೀಲಾಗಿದ್ದನೆನ್ನಲಾದ ಸಂತೋಷ ಯಾನೆ ಕ್ಯಾಂಡಲ್ ಸಂತು ಎಂಬಾತನ ಕೊಲೆಯೂ ನಡೆದಿತ್ತು. ಈ ರೀತಿಯ ಕೊಲೆಗಳ ಸರಣಿ ಉಳ್ಳಾಲ ಮತ್ತಿತರ ಕಡೆಗಳಲ್ಲೂ ನಡೆದಿದ್ದು, ಕೋಮು ವಿಷ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. (ಇನ್ನಷ್ಟು ಕೋಮುಸಂಬಂಧಿ ಘಟನೆಗಳು ಮತ್ತು ಹುನ್ನಾರಗಳ ವಿವರ ಮುಂದೆ ನೋಡೋಣ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...