Homeಮುಖಪುಟಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

ಕರಾವಳಿಯ ಕೋಮುದ್ವೇಷದ ಇನ್ನೊಂದು ರಕ್ತಸಿಕ್ತ ಅಧ್ಯಾಯಕ್ಕೆ ಕಾರಣಗಳು: ನಿಖಿಲ್ ಕೋಲ್ಪೆ

- Advertisement -
- Advertisement -

ಕರಾವಳಿಯ ಅತ್ಯಂತ ಭೀಕರ ಕೋಮುಗಲಭೆ ನಡೆದ ಸುರತ್ಕಲ್ ಸುತ್ತಮುತ್ತಲಿನ ಕೋಮುಗಲಭೆಗಳು, ಕೊಲೆಗಳು ಅಲ್ಲಿಗೇ ನಿಲ್ಲಲಿಲ್ಲ. ಅದು ಇಂದಿನ ವರೆಗೂ ಮುಂದುವರಿದಿದೆ. ಕೃಷ್ಣಾಪುರ-ಕಾಟಿಪಳ್ಳ ಪ್ರದೇಶಗಳಲ್ಲಿ ಮತ್ತೆ ಮತ್ತೆ ಘರ್ಷಣೆಗಳು ನಡೆಯುತ್ತಾ ಬಂದಿವೆ. ಇದಕ್ಕೆ ಒಂದು ಪ್ರಮುಖ ಕಾರಣವೂ ಇದೆ. ಈ ಪ್ರದೇಶದಲ್ಲಿ ಇರುವುದು ಹೆಚ್ಚಾಗಿ ಬಂದರು ನಿರ್ಮಾಣದ ವೇಳೆ ನಿರಾಶ್ರಿತರಾದವರ ಮನೆಗಳು. ಸರಕಾರ ಅವರಿಗೆ ಸೈಟುಗಳನ್ನು ಹಂಚುವಾಗ ಹಿಂದೂ ಮತ್ತು ಮುಸ್ಲಿಮರಿಗೆ ಮಿಶ್ರ ಮಾಡಿ ಹಂಚಬೇಕಿತ್ತು. ಆದರೆ, ಅದು ಕೆಲವು ಬ್ಲಾಕ್‌ಗಳಲ್ಲಿ ಕೇವಲ ಹಿಂದೂಗಳಿಗೆ ಮತ್ತು ಕೆಲವು ಬ್ಲಾಕ್‌ಗಳಲ್ಲಿ ಮುಸ್ಲಿಮರಿಗೆ ಮಾತ್ರ ಸೈಟುಗಳನ್ನು ಹಂಚಿತ್ತು. ಪರಿಣಾಮವಾಗಿ ಯಾವುದೇ ಕೋಮು ಉದ್ವಿಗ್ನತೆ ಉಂಟಾದಾಗ ಈ ಎರಡು ಪ್ರದೇಶಗಳು ಎರಡು ದೇಶಗಳಂತೆ ಕಂಡು, ಎರಡೂ ಕಡೆ ಜನರು ಜಮಾಯಿಸುತ್ತಾರೆ.

ಅಲ್ಲದೇ, ಬಂದರು ಆದ ಬಳಿಕ ಪಣಂಬೂರು, ಕುಳಾಯಿ, ಸುರತ್ಕಲ್, ನೆರೆಯ ಕಾನ, ಬಾಳ ಮುಂತಾದ ಕಡೆ ಎಂಆರ್‌ಪಿಎಲ್ ಸಹಿತ ಹಲವು ಚಿಕ್ಕದೊಡ್ಡ ಉದ್ದಿಮೆಗಳ ಜೊತೆ ಹಲವಾರು ರೀತಿಯ ದಂಧೆಗಳು ಆರಂಭವಾಗಿದ್ದವು. ಹಾಗಾಗಿ ವಹಿವಾಟು ಸಂಬಂಧಿ ವೈಯಕ್ತಿಕ ದ್ವೇಷಗಳೂ ಕೋಮುಗಲಾಟೆಗೆ ಕಾರಣಗಳಾಗುತ್ತಿದ್ದವು.

ಸುರತ್ಕಲ್‌ ಪ್ರದೇಶದಲ್ಲಿ ಮತ್ತೆ ನಡೆದ ಘಟನೆಯೆಂದರೆ 2006ಲ್ಲಿ ನಡೆದ ಮಾರ್ಬಲ್ ಅಂಗಡಿಯೊಂದರ ಮಾಲಕನಾಗಿದ್ದ ಸುಖಾನಂದ ಶೆಟ್ಟಿ ಕೊಲೆ. ಮೂಲತಃ ಮುಲ್ಕಿಯ ಶೆಟ್ಟಿ  ಹಿಂದೂತ್ವವಾದಿ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದು, ಗೋವು ಸಾಗಾಟಗಾರರ ಮೇಲೆ ದಾಳಿ, ಲವ್ ಜೆಹಾದ್ ವಿಷಯದಲ್ಲಿ ಹಲ್ಲೆ ಮುಂತಾಗಿ ಯುವಕರಿಗೆ ಸಕ್ರಿಯ ಬೆಂಬಲ ನೀಡುತ್ತಿದ್ದ ವ್ಯಕ್ತಿ. ಈತನನ್ನು ಸುರತ್ಕಲ್ ಸಮೀಪದ ಕುಳಾಯಿ ಹೊನ್ನಕಟ್ಟೆಯಲ್ಲಿದ್ದ ಆತನ ಮಾರ್ಬಲ್ ಅಂಗಡಿಗೆ ಕಾರಿನಲ್ಲಿ ಬಂದ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿತ್ತು. ಈ ಪ್ರಕರಣದ ವಿಚಾರಣೆ ಕೆಲವರ್ಷ ನಡೆದು 17 ಆರೋಪಿಗಳಿಗೆ ಖುಲಾಸೆಯಾಗಿತ್ತು. ಇವರಲ್ಲಿ ಕೆಲವರು ಬಾಡಿಗೆ ಹತ್ಯೆಯಿಂದ ಹಿಡಿದು ಹಲವು ರೀತಿಯ ಕ್ರಿಮಿನಲ್ ಕೃತ್ಯಗಳಲ್ಲಿ ಬಾಗಿಯಾದ ಪಕ್ಕಾ ರೌಡಿಗಳಿದ್ದರು. ಈ ಪ್ರಕರಣದಲ್ಲಿಯೂ ಘರ್ಷಣೆಯ ಕಿಚ್ಚು ಹೊತ್ತಿದ್ದು, ಎಜೆ ಆಸ್ಪತ್ರೆ ಬಳಿ ಗೋಲಿಬಾರ್ ಕೂಡಾ ನಡೆದಿತ್ತು. ಗಲಭೆಗಳಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇವರಲ್ಲಿ ಒಬ್ಬನಾದ ಕಬೀರ್ ಎಂಬಾತನನ್ನು ಗುರುಪುರ ಬಳಿ ಬೈಕಿಗೆ ಕಾರು ಡಿಕ್ಕಿ ಹೊಡೆಸಿ, ನಂತರ ತಲವಾರಿನಿಂದ ಕೊಚ್ಚಿ ಕೊಲೆ ಮಾಡಲಾಯಿತು. ಬಾಡಿಗೆ ಹಂತಕನೆಂದು ಕುಖ್ಯಾತಿ ಗಳಿಸಿದ್ದ ಮುಲ್ಕಿ ರಫೀಕ್ ಯಾನೆ ಕೊಳಚೆಕಂಬ್ಳ ರಫೀಕ್‌ನನ್ನು ತಮಿಳುನಾಡಿನಿಂದ ಪೊಲೀಸರು ಬಂಧಿಸಿತಂದಿದ್ದರು. ನಂತರ ಈತ ಮಣಿಪಾಲದ ಬಳಿ ರೈಲು ನಿಲ್ದಾಣದ ಎದುರು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಇನ್ನೊಬ್ಬ ರೌಡಿ ಮಾಡೂರು ಯೂಸುಫ್ ಅಥವಾ ಇಸುಬುನನ್ನು ಮಂಗಳೂರು ಜೈಲಿನಲ್ಲಿ ಸಹಕೈದಿಗಳು ಕೊಂದಿದ್ದರು. ಬುಲೆಟ್ ಸುಧೀರ್ ಎಂಬಾತ ಕುಂದಾಪುರದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಇದರ ಅರ್ಥವೆಂದರೆ, ಕರಾವಳಿಯಲ್ಲಿ ನಡೆಯುವ ಕೋಮುಗಲಭೆಗಳು, ಕೊಲೆಗಳು ನೇರವಾಗಿ ಧರ್ಮಕ್ಕೆ ಸಂಬಂಧಿಸಿದವುಗಳಲ್ಲ. ಅವು ಧರ್ಮರಾಜಕಾರಣ ಮತ್ತು ಎರಡು ನಂಬರ್ ದಂಧೆಗಳಿಗೆ, ಇತರ ವ್ಯವಹಾರಗಳಿಗೆ ಸಂಬಂಧಿಸಿದವುಗಳಾಗಿವೆ. ಇಲ್ಲಿ ನಡೆದ ಎಲ್ಲಾ ಕೋಮು ಗಲಭೆ ಮತ್ತು ಆ ಸಂಬಂಧಿ ಕೊಲೆಗಳ ವಿಷಯವನ್ನು ಬರೆಯುತ್ತಾ ಹೋದರೆ, ಒಂದು ಪುಸ್ತಕವನ್ನೇ ಬರೆಯಬೇಕಾದೀತು.  ಸುರತ್ಕಲ್‌ ಪರಿಸರದಲ್ಲಿ 2018ರಲ್ಲಿಯೇ ಕಾಟಿಪಳ್ಳದಲ್ಲಿ ದೀಪಕ್ ರಾವ್ ಎಂಂಬಾತನ ಕೊಲೆ ನಡೆದಿದ್ದರೆ, ಪ್ರತೀಕಾರವೋ ಎಂಬಂತೆ ಕೆಲದಿನಗಳಲ್ಲೇ ಕೊಟ್ಟಾರ ಚೌಕಿಯಲ್ಲಿ ಬಶೀರ್ ಎಂಬಾತನ ಕೊಲೆ ನಡೆದಿತ್ತು.

ಇಲ್ಲಿ ಇನ್ನೊಂದು ವಿಷಯವನ್ನು ಇಲ್ಲಿ ಉಲ್ಲೇಖಿಸಬೇಕು. ಎಲ್ಲಾ ಪ್ರಕರಣಗಳಲ್ಲಿ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸರು ಪಕ್ಷಪಾತದ ಆರೋಪಕ್ಕೆ ಗುರಿಯಾಗಿ ಪ್ರತಿಭಟನೆ, ಪೊಲೀಸ್ ಠಾಣೆಗೆ ಮುತ್ತಿಗೆ ಮುಂತಾದ ಘಟನೆಗಳು ನಡೆದಿದ್ದವು. ಸುರತ್ಕಲ್ ಠಾಣೆಯಂತೂ ಹಲವಾರು ಬಾರಿ ಗುಂಪು ಮುತ್ತಿಗೆಗೆ ಗುರಿಯಾಗಿದೆ.

ಆದುದರಿಂದ ಇಲ್ಲಿ ಎಲ್ಲಾ ಪ್ರಕರಣಗಳನ್ನು ಕಾಲಾನುಕ್ರಮದಲ್ಲಿ ಹೇಳಲು ಹೋಗದೆ, ಅತ್ಯಂತ ಸೂಕ್ಷ್ಮವಾದ ಕೆಲವು ಪ್ರದೇಶಗಳು ಮತ್ತು ಅವುಗಳಲ್ಲಿ ನಡೆದ ಪ್ರಮುಖ ಘಟನೆಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದಕ್ಕೆ ಇನ್ನೊಂದು ಕಾರಣವೆಂದರೆ, ಎಲ್ಲಾ ಘಟನೆಗಳು ಒಂದೇ ಮಾದರಿ (ಮೋಡಸ್ ಒಪೆರಾಂಡಿ)ಯಲ್ಲಿ ನಡೆದಿದ್ದು, ಎರಡೂ ಕೋಮುಗಳು ಮತ್ತು ಅವುಗಳನ್ನು ಬೆಂಬಲಿಸುವ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ ಒಂದೇ ರೀತಿ ಇರುವುದರಿಂದ ಅವುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ.

ಸುರತ್ಕಲ್‌ನಂತೆ ಕೋಮುಸೂಕ್ಷ್ಮವಾಗಿದ್ದು, ಹಲವಾರು ಕೊಲೆ ಮತ್ತು ಪ್ರತೀಕಾರದ ಕೊಲೆಗಳಿಗೆ ಸಾಕ್ಷಿಯಾಗಿರುವುದೆಂದರೆ, ಪೊಳಲಿ ಮತ್ತು ಮಾಡೂರು ಪರಿಸರ. ಇಲ್ಲಿ ಏನಾದರೂ ಆರಂಭವಾದರೆ, ಅದು ಬಜ್ಪೆ, ಬಿ.ಸಿ.ರೋಡು, ಮಾರಿಪಳ್ಳ, ಫರಂಗಿಪೇಟೆ ಮುಂತಾದ ಕಡೆಗಳಿಗೆ ವ್ಯಾಪಿಸುತ್ತದೆ. ವರ್ಷಗಳ ಹಿಂದೆ ಇಲ್ಲಿ ಪೊಳಲಿ ಕಮಲಾಕ್ಷ ಎಂಬಾತನ ಕೊಲೆ ನಡೆದಿತ್ತು. ಕಾಟಿಪಳ್ಳ-ಕೃಷ್ಣಾಪುರದಂತೆಯೇ ಮಾಡೂರಿನಲ್ಲಿ ಮುಸ್ಲಿಂ ಬಾಹುಳ್ಯವಿದ್ದರೆ, ಸುತ್ತಲೂ ಹಿಂದೂ ಬಾಹುಳ್ಯವಿದೆ. ನಂತರ ನಾಗೇಶ ಶೆಟ್ಟಿಗಾರ್ ಎಂಬಾತನ ಕೊಲೆ ನಡೆಯಿತು. ತಕ್ಷಣವೇ ಮಂಗಳೂರಿನ ಜಪ್ಪು ಪ್ರದೇಶದಲ್ಲಿ ಮುಸ್ಲಿಂ ಯುವಕನೊಬ್ಬನ ಕೊಲೆ ನಡೆದಿತ್ತು. ಇದು ಪ್ರತೀಕಾರಾರ್ಥ ಕೊಲೆ ಎಂದು ಹೇಳಲಾಗಿತ್ತು.

ನಂತರ ಎಲ್ಲರನ್ನೂ ಬೆಚ್ಚಿ ಬೀಳಿಸಿದ ಘಟನೆ ಎಂದರೆ, ಮಾಡೂರಿನ ಕಾಂಗ್ರೆಸ್ ನಾಯಕ ಮತ್ತು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿದ್ದ ಅಬ್ದುಲ್ ಜಬ್ಬಾರ್ ಅವರನ್ನು ಅವರ ಕಚೇರಿಯಲ್ಲಿಯೇ, ಅವರ ಹೆಂಡತಿ ಮಕ್ಕಳ ಕಣ್ಣೆದುರೇ, ಭೀಕರವಾಗಿ ಕೊಚ್ಚಿ ಕೊಲ್ಲಲಾಗಿತ್ತು. ಈ ಪ್ರಕರಣದ ಆರೋಪಿಗಳೆಂದರೆ ಪೊಳಲಿ ಅನಂತು ಮತ್ತು ಇತರರು. ಮಾಡೂರು ಇಸುಬು ಕೊಲೆ ಪ್ರಕರಣವನ್ನು ಹಿಂದೆ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಬಿಡುಗಡೆ ಹೊಂದಿದ ಅನಂತುವನ್ನು ಹಿಂದೂತ್ವವಾದಿ ಸಂಘಟನೆಗಳು ಮಂಗಳೂರಿನಿಂದ ಪೊಳಲಿಗೆ ಮೆರವಣಿಗೆಯಲ್ಲಿ ಒಯ್ದಿದ್ದರು. ನಂತರ ಒಂಟಿಯಾಗಿ ಹೋಗುತ್ತಿದ್ದ ಆತನನ್ನು ಪ್ರತೀಕಾರವಾಗಿ ಕೊಲ್ಲಲಾಗಿತ್ತು. ಬೆನ್ನಲ್ಲೇ ಜಬ್ಬಾರ್ ಹತ್ಯೆಯಲ್ಲಿ ಶಾಮೀಲಾಗಿದ್ದನೆನ್ನಲಾದ ಸಂತೋಷ ಯಾನೆ ಕ್ಯಾಂಡಲ್ ಸಂತು ಎಂಬಾತನ ಕೊಲೆಯೂ ನಡೆದಿತ್ತು. ಈ ರೀತಿಯ ಕೊಲೆಗಳ ಸರಣಿ ಉಳ್ಳಾಲ ಮತ್ತಿತರ ಕಡೆಗಳಲ್ಲೂ ನಡೆದಿದ್ದು, ಕೋಮು ವಿಷ ಎಷ್ಟರ ಮಟ್ಟಿಗೆ ಹರಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. (ಇನ್ನಷ್ಟು ಕೋಮುಸಂಬಂಧಿ ಘಟನೆಗಳು ಮತ್ತು ಹುನ್ನಾರಗಳ ವಿವರ ಮುಂದೆ ನೋಡೋಣ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...

85 ಕೋಟಿ ರೂ. ವಂಚನೆ ಪ್ರಕರಣ: ಲೋಧಾ ಡೆವಲಪರ್ಸ್‌ನ ಮಾಜಿ ನಿರ್ದೇಶಕರನ್ನು ಬಂಧಿಸಿದ ಇಡಿ

85 ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮುಂಬೈ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆ ಲೋಧಾ ಡೆವಲಪರ್ಸ್‌ನ ಮಾಜಿ ನಿರ್ದೇಶಕ ರಾಜೇಂದ್ರ ಲೋಧಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ (Pe.13)...

ಹೆತ್ತವರ ಹತ್ಯೆ ಪ್ರಕರಣ: ಸ್ಕಿಜೋಫ್ರೇನಿಯಾ ಎಂಬ ಮನೋರೋಗದಿಂದ ಬಳಲುತ್ತಿದ್ದ ಬೆಂಗಳೂರು ಟೆಕ್ಕಿ ರೋಹನ್ ಚಂದ್ರ ಭಟ್ 

ಬೆಂಗಳೂರು: ಬುಧವಾರ ತನ್ನ ಹೆತ್ತವರನ್ನು ಇರಿದು ಕೊಂದ 33 ವರ್ಷದ ಅಮೆರಿಕದಿಂದ ಹಿಂದಿರುಗಿದ ಟೆಕ್ಕಿ ರೋಹನ್ ಚಂದ್ರ ಭಟ್, ವರ್ಷಗಳಿಂದ ಕೆಲಸವಿಲ್ಲದ ಕಾರಣ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಅನ್ನುವುದು ದೃಢವಾಗಿದೆ.  ಬುಧವಾರ ಬೆಳಿಗ್ಗೆ 8.30 ರ...

ಬಿಕ್ಲುಶಿವ ಹತ್ಯೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಬಂಧನ: ಇಂದು ಕೋರ್ಟ್‌ಗೆ ಹಾಜರು

ಬೆಂಗಳೂರು ನಗರ ಪೊಲೀಸ್‌ ವ್ಯಾಪ್ತಿಯ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲುಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಆರಿ ಹಿನ್ನಡೆಯಾಗಿದೆ. ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ...