Homeಅಂಕಣಗಳುಕೊರೊನಾ ಕಲಿಸಿಕೊಟ್ಟ ಇನ್ನೂ ಒಂದ ಪಾಠ ಏನಪಾ ಅಂದರಾ......

ಕೊರೊನಾ ಕಲಿಸಿಕೊಟ್ಟ ಇನ್ನೂ ಒಂದ ಪಾಠ ಏನಪಾ ಅಂದರಾ……

- Advertisement -
- Advertisement -

ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು.

ಈ ಕೋರೋನಾ ಗದ್ದಲದಾಗ ಬರ್ತಾ ಇರೋ ಸುದ್ದಿಗಳ ಮಹಾಪೂರದಾಗ ಒಂದು ಭಾರಿ ಮಜಾ ಸುದ್ದಿ ಬಂದಿದ್ದು ಏನಪಾ ಅಂದ್ರ ಯಾವ ದೇಶದಾಗ ವಿಕೇಂದ್ರೀಕರಣ ಅದನೋ ಆ ದೇಶದಾಗ ಕೋರೋನಾ ಸರಿಯಾಗಿ ನಿಯಂತ್ರಣಕ್ಕ ಬಂದದ. ಅದು ಇರಲಾರದ ಕಡೆ ಬಹಳ ಸಮಸ್ಯೆ ಆಗೇದ.

ಇದು ಒಂದು ರೀತಿಯ ಚೇತೋಹಾರಿ ಸುದ್ದಿ. ಯಾಕ ಅಂದ್ರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ ಅವರು ಕೋರೋನಾಗೆ ಸಂಪೂರ್ಣ ಚಿಕಿತ್ಸೆ ಸಾಧ್ಯವಿಲ್ಲ. ಅದರ ಗುಣಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು ಅಷ್ಟೇ ಅಂತ ಹೇಳಿದಾರು. ಆದರ ಅಂತರಾಷ್ಟ್ರೀಯ ಅಧ್ಯಯನ ಮಾಡಿದ ಪರಿಣಿತರು ಇದಕ್ಕ ಸಂಪೂರ್ಣ ಉಲ್ಟಾ ಅಭಿಪ್ರಾಯ ಕೊಟ್ಟಾರು.

`ಕೋರೋನಾ ಅನ್ನುವುದು ನಮ್ಮ ಸರ್ಕಾರಿ ವ್ಯವಸ್ಥೆಯ ಶವ ಪರೀಕ್ಷೆ ಮಾಡಿದೆ. ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದೆ’ ಅಂತ ಪಿ.ಸಾಯಿನಾಥ್ ಹೇಳಿದಾರು.

ಹಂಗ ಅಂದ್ರ ಈ ಹಿನ್ನೆಲೆಯೊಳಗ ವಿಕೇಂದ್ರೀಕರಣ ಅಂದ್ರ ಏನು? ಮೊದಲನೆದಾಗಿ, ಅದು ಅಲ್ಲಲ್ಲಿಗೆ ಸಂಬಂಧಪಟ್ಟ ವಿಷಯಗಳಿಗೆ ಅಲ್ಲಲ್ಲೇ ನಿರ್ಧಾರ ತೊಗೋಳೋದು.

ಎರಡನೇಯದು, ಹಳ್ಳಿ, ನಗರಗಳ ಮೇಲೆ ತಾಲೂಕು, ಜಿಲ್ಲೆ, ರಾಜ್ಯ, ಕೇಂದ್ರ ಸರ್ಕಾರಗಳು ರಾಜ್ಯಭಾರ ಮಾಡದೇ, ನಿಗರಾಣಿ ಮಾಡದೇ, ತಮ್ಮ ತಮ್ಮ ಕೆಲಸ ಮಾಡಬೇಕು. ಉದಾಹರಣೆಗೆ ನೋಡೋಣ- ಒಂದು ಹಳ್ಳಿಯೊಳಗ ಒಂದು ಸಂಡಾಸು ಕಟ್ಟಬೇಕು ಅಂದರ ಅದಕ್ಕ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ, ಬೆಂಗಳೂರಿನ ಐಎಏಸ್ಸು, ದೆಹಲಿಯ ಐಎಎಸ್ಸು, ಎಲ್ಲರನ್ನೂ ಪರವಾನಗಿ ಕೇಳಬೇಕು. ಅವರು ಹೂಂ ಅಂದ್ರ ಕಟ್ಟಬೇಕು, ಇಲ್ಲಾಂದರ ಸುಮ್ಮನ ಚರಿಗಿ ತೊಗೊಂಡು ಹೋಲದ ಕಡೆ ಹೋಗಬೇಕು.

ಆದರ ನಿಮ್ಮದಷ್ಟು ನೀವು ನೋಡಿಕೊಳ್ರಿ ಅಂತ ದೆಹಲಿ ಸುಲ್ತಾನರು, ಬೆಂಗಳೂರಿನ ದೊಣ್ಣೆ ನಾಯಕರು ನಮ್ಮನ್ನು ಬಿಟ್ಟರ, ದಿನಾ ಸಂಜೀಕೆ ಹಾವು ಚೋಳು, ಹುಳಾ ಹುಪಟಿ ಹೆದರಿಕೆ ಇರಲಾರದೆ ನಾವು ನಮ್ಮ ಕೆಲಸ ಮುಗಸಬಹುದು.

ಇದಕ್ಕ ಒಂದು ಇಲ್ಲಿಯ ಉದಾಹರಣೆ, ಒಂದು ಹೊರಗಿನ ಉದಾಹರಣೆ ನೋಡೋಣು. ಕೇರಳದಾಗ ಸಣ್ಣ ಹಳ್ಳಿಗಳು ಸಹಿತ ಕೊರೋನಾದ ವಿರುದ್ಧದ ಹೋರಾಟವನ್ನು ಗಂಭೀರವಾಗಿ ತೊಗೊಂಡವು. ಪ್ರತಿ ಹಳ್ಳಿಯ ಪ್ರತಿ ಮನಿಗೆ ಒಬ್ಬ ಡಾಕ್ಟರು ಭೇಟಿ ಕೊಟ್ಟಾರ ಅಂತ ಅಲ್ಲಿಯ ಆರೋಗ್ಯ ಸಚಿವರು ಹೇಳಿಕೆ ಕೊಟ್ಟಾರ.

ಆದರ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯದಾಗ ಜನ ಗಂಭೀರ ರೋಗ ಬಂದು ಸತ್ತಾಗ ನೋಡಲಿಕ್ಕೆ ಒಬ್ಬ ಡಾಕ್ಟರ ಅಲ್ಲಾ, ಒಬ್ಬ ಕಂಪೌಂಡರು ಸಿಗಲಿಲ್ಲ. `ಕೋರೋನಾ ಅಂದ್ರ ಅಂಥಾದೇನೂ ಅಲ್ಲರಿಪಾ, ಅದರಿಂದಾ ಚೇತರಿಸಿಕೊಳ್ಳಬಹುದು’ ಅಂತ ಹೇಳಬೇಕಾದವರು, ಐದೂವರೆ ವರ್ಷ ಎಂಬಿಬಿಎಸ್ಸು ಓದಿದವರು ಹೇಳಬೇಕಾಗಿತ್ತು. ಆದರ ಅವರು ಕನಿಷ್ಟ ಅದನ್ನೂ ಮಾಡದೇ ಹೋದರು. ಅವರಿಗೆ ತಮ್ಮ ಕ್ಲಿನಿಕ್ಕು ಕಾಲಿ ಹೊಡದು ಅದರ ಬಾಡಿಗೆ ಕೊಡೋದು ಮೀ ಮ್ಯಾಲೆ ಬಂದರೂ ಅವರು ತಲಿ ಕೆಡಿಸಿಕೊಳ್ಳದೇ ಕೂತರು. ನಮ್ಮ ಸರ್ಕಾರದವರು ಆ ಡಾಕ್ಟರುಗಳಿಗೆ ಒಂದು ನೋಟೀಸು ಸಹಿತ ಕೊಡಲಿಲ್ಲ.

ಕೇಂದ್ರದ ಕಾನೂನುಗಳು ಬೆಂಗಳೂರಿಗೆ ಅರ್ಥ ಆಗಲಿಲ್ಲ. ರಾಜ್ಯದ ಕಾನೂನುಗಳು ಜಿಲ್ಲೆ, ತಾಲೂಕಿನಾಗ ಜಾರಿ ಆಗಲಿಲ್ಲ. ಮೈಸೂರು, ಬೆಳಾಗಾವಿ, ಉಡುಪಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎಲ್ಲಾ ಶಂಕಿತರನ್ನ ಒಂದೇ ಹಾಲಿನಲ್ಲಿ ಕೂಡಿ ಇಟ್ಟದ್ದಕ್ಕ ಪಾಸಿಟಿವ್ ಇದ್ದವರಿಂದ ಅನೇಕ ನೆಗಾಟಿವ್ ಇದ್ದವರಿಗೆ ಕೋರೋನಾ ಬಂತು. ಅದು ಪೇಪರಿನಾಗ ಬಂದ ಮೇಲೆ ರಾಜ್ಯದ ಹಿರಿಯ ಅಧಿಕಾರಿಗಳ ತಲಿಯೊಳಗ ಟ್ಯೂಬು ಲೈಟು ಹತ್ತಿ ಅವರನ್ನ ಬೇರೆ ಬೇರೆ ರೂಮಿನ್ಯಾಗ ಇಡಲಿಕ್ಕೆ ಹತ್ತಿದರು.

ಅಂತರರಾಜ್ಯ ಓಡಾತದ್ದು ಒಂದು ಜಿಲ್ಲೆ ಯೊಳಗ ಒಂದು ಕಾನೂನು. ಕೆಲವರು ಬಿಡತಾರ, ಕೆಲವರು ಇಲ್ಲ. ಮೊದಲಿಗೆ ನಮ್ಮ ಊರಾಗ ಕರೆಂಟು ಹೋದರ ಕೇಈಬಿಯವರು ಇದು ನಮ್ಮ ಕಡೆ ಇಲ್ಲಾರೀ. ಜೋಗ ಜಲಪಾತದಾಗನ ಹೋಗೇತಿ, ಅಂತಿದ್ದರು. ಹಂಗ ಈಗ ಯಾವುದರ ಗ್ರಾಮ ಪಂಚಾಯಿತಿ, ನಗರಸಭೆ ಒಳಗ ಎನಾರ ಕೆಲಸ ಕೇಳಾಕ ಹೋದರ ಆ ಒಂದು ಕಾಗದ ಪತ್ರ, ದಾಖಲಾತಿ, ಧನಸಹಾಯ ಎಲ್ಲಾ ಬೆಂಗಳೂರಿನಿಂದ ಬರಬೇಕು ದೇಹಲಿಯಿಂದ ಬರಬೇಕು ಅಂತ ಹೇಳಿ ಕೈ ತೊಳಕೋತಾರ.

ಇದು ಬದಲು ಆಗಬೇಕು. ಇದಕ್ಕ ಒಂದು ಉದಾಹರಣೆ ನೋಡೋಣ. ರಾಜ್ಯದಾಗ ಸುಮಾರು 300 ಐಎಎಸ್ಸು, 350 ಐಪಿಎಸ್ಸು ಅಧಿಕಾರಿಗಳು ಅದಾರ. ಅದರಾಗ ಸುಮಾರು 60 ಜನ ಐಎಎಸ್ಸು ಹಾಗೂ 70 ಜನ ಐಪಿಎಸ್ಸು ಮಾತ್ರ ಬೆಂಗಳೂರು ಬಿಟ್ಟು ಹೊರಗ ಇದ್ದಾರ. ಒಬ್ಬ ಅಧಿಕಾರಿ ಸರಾಸರಿ 35 ವರ್ಷ ನೌಕರಿ ಮಾಡತಾರ. ಅದರಾಗ ಬರೇ 10 ವರ್ಷ ಅಷ್ಟನ ಜಿಲ್ಲೆಯೊಳಗ ಕೆಲಸ ಮಾಡತಾರ. ಉಳಿದ 25 ವರ್ಷ ಬೆಂಗಳೂರಿನಯಾಗ ಠಿಕಾಣಿ ಹೊಡಕೊಂಡು ಕೂತಿರತಾರ.

ಇದ್ದದ್ದರಾಗ ಪೊಲೀಸು ಮತ್ತು ಅರಣ್ಯ ಅಧಿಕಾರಿಗಳು ಬೇಕು. ಅವರಿಗೆ ಸುಮಾರು ಹಿರೇತನ ಬಂದ ನಂತರನೂ ಜಿಲ್ಲೆಯೊಳಗ ಕೆಲಸ ಮಾಡಲಿಕ್ಕೆ ಅವಕಾಶ ಐತಿ. ಆಡಳಿತ ಸೇವೆ ಅಧಿಕಾರಿಗಳಿಗೆ ಮಾತ್ರ ಆ ಭಾಗ್ಯ ಇಲ್ಲ. ಅವರು ಒಮ್ಮೆ ವಿಧಾನಸೌಧ ಅನ್ನೋ ಜೇನುಗೂಡಿನೊಳಗ ಹೋಗಿ ಕೂತುಕೊಂಡರು ಅಂದ್ರ ಅವರು ಹೂವಿನ ತೋಟದಾಗ ಅಲಿಯೋ ದಿಲ್ಲಾ, ಹೊರಗ ಹೋಗಿ ಮಕರಂದ ಮೂಸಂಗಿಲ್ಲ. ಬೇಡವಾದ ಮನಸ್ಸಿನಿಂದ ಜಿಲ್ಲಾಕ್ಕ ಉಸ್ತುವಾರಿ ಮಾಡಲಿಕ್ಕೆ ಬರ್ತಾರ. ಅದೂ ಬೆಂಗಳೂರಿನಿಂದ ಬೆಳಿಗ್ಗೆ ತಿಂಡಿ ಮಾಡಿ ಹೊರಟು ಮಧ್ಯಾನ ಐ.ಬಿ. ಒಳಗ ಊಟ ಮಾಡಿ ಸಂಜೀ ಕಾಫಿಗೆ ಮತ್ತ ಡಾಲರ್ ಕಾಲನಿಯ ಮನಿಗೆ ವಾಪಸ್ ಹೋಗೋ ಹಂಗ ತಯಾರಿ ಮಾಡಿಕೊಂಡು ಬಂದಿರತಾರ.

ಯಾವ ದೇಶದ ಶೇಕಡಾ 70 ಜನ ಗ್ರಾಮೀಣ ಪ್ರದೇಶದಾಗ ಇರತಾರೋ, ಆ ದೇಶದಾಗಿನ ಕೇವಲ ಶೇಕಡಾ 20 ಅಧಿಕಾರಿಗಳು ತಮ್ಮ ಸೇವೆಯ ಅವಧಿಯ 25 ಶೇಕಡಾ ಕಾಲವನ್ನು ಮಾತ್ರ ರಾಜಧಾನಿಯಿಂದ ಹೊರಗೆ ಕಳೀತಾರೆ.

ಇದು ಎಲ್ಲರಿಗೂ ಅರ್ಥ ಆದರ ಒಳ್ಳೆಯದು.

ಇನ್ನ ನಮ್ಮನ್ನು ಆಳುವವರು ಬೆಂಗಳೂರಿನ/ದೆಹಲಿಯ ಒಂದು ಮೂಲಿಯೊಳಗ ಕೂತಗೊಂಡು, ಇಡೀ ರಾಜ್ಯಕ್ಕ, ದೇಶಕ್ಕ, ಒಂದೇ ಕಾನೂನು ಅಂತ ಮಾಡೋದು, ಭಾರಿ ಭಯಂಕರ ಪರಿಣಾಮ ಬೀರಬಹುದು. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನ ಮನಸಿನಲ್ಲಿ ಇಟಗೋಬೇಕು. ಅರವತ್ತರ ದಶಕದಾಗ ಹಸಿವಿನ ಮಾರಿಗೆ ಮಹಾ ಔಷಧ ಅಂತ ಹೇಳಿ ಇಡೀ ದೇಶಕ್ಕ ಅಕ್ಕಿ, ಗೋಧಿ, ತಿನಸಲಿಕ್ಕೆ ಹತ್ತಿದರು, ಆಗಿನ ನಮ್ಮ ಆಳುವವರು. ಅದರ ಅವರಿಗೆ ಉತ್ತರ ಕರ್ನಾಟಕದವರು ಜೋಳ ತಿನ್ನೋದು, ದಕ್ಷಿಣದವರು ರಾಗಿ, ಕರಾವಳಿಯವರು ಕೆಂಪು ಅಕ್ಕಿ ತಿನ್ನೋದು ಕಲ್ಪನಾ ಇರಲಿಲ್ಲ. ಇದ್ದರೂ ಒಂದು ದೇಶ, ಒಂದು ನೀತಿ ಅನ್ನೋ ಗದ್ದಲದಾಗ ಅವರಿಗೆ ಇನ್ನೂ ಮಾಡ್ಲಿಕ್ಕೆ ಆಗಲಿಲ್ಲ.

ಅಂದಿನ ಗಡಿಬಿಡಿಯ ನಿರ್ಧಾರ ಇಂದಿಗೂ ಮುಂದುವರೆದಿದೆ. ಕೋಟ್ಯಾಂತರ ಜನರ ಆಹಾರ ಪದ್ಧತಿ ಬದಲು ಆದ ಮೇಲೆ ಸಹಿತ ಸರ್ಕಾರಗಳಿಗೆ ಇಂತಹ ಮೂಲಭೂತ ವಿಷಯಗಳ ಬದಲಾವಣೆ ಸಾಧ್ಯ ಆಗಿಲ್ಲ. ಇದರ ಬದಲಿಗೆ ರಾಜ್ಯದ ಬೇರೆ ಬೇರೆ ಪ್ರದೇಶಗಳಿಗೆ, ಜಿಲ್ಲೆಗಳಿಗೆ ಬೇರೆ ಬೇರೆ ನೀತಿಗಳು ಲಾಗೂ ಆಗಬಹುದು, ಆದರ ತಪ್ಪು ಏನಿಲ್ಲ, ಅದೇನು ದೇಶದ್ರೋಹ ಅಲ್ಲ ಅಂತ ಅವರ ಚಿಂತನೆ ಇಲ್ಲ.

ಈಗಂತೂ ಕಾಲ ಬದಲಾಗಿ ಹೋಗೇದ. ಕೇಂದ್ರ ಆಹಾರ ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಅವರು ಒಂದು ದೇಶ ಒಂದು ಪಡಿತರ ಚೀಟಿ ಅಂತ ಘೋಷಣೆ ಮಾಡಿದಾರ. ಇನ್ನ ಇದರಿಂದ ಏನೇನು ಘಟಿಸಲಿಕ್ಕೆ ಅದನೋ ಏನೋ.

ಪರಿಸರ ರಕ್ಷಣೆಯಂತಹ ಅನೇಕ ವಿಷಯಗಳಲ್ಲಿ ಒಳ್ಳೆ ಪಾಠ ಕಳಿಸಿಕೊಟ್ಟ ಕೋರೋನಾ ಆಡಳಿತದ ವಿಷಯಕ್ಕೆ ನಮಗ ದೋಖಾ ಮಾಡಿತು. ಯಾವ ಜಿಲ್ಲೆಯೊಳಗ ಎಷ್ಟು ಕೇಸು ಅದಾವು ಅನ್ನೋ ಸಣ್ಣ ವಿಷಯದಿಂದ ಹಿಡದು, ದುಡ್ಡು, ಸೂಕ್ತಕ್ರಮದ ಸೂಚಿ, ವಲಸಿಗರ ಓಡಾಟ, ಮುಂತಾದ ಗಂಭೀರ ವಿಷಯಗಳಿನ್ನೂ ಸಹಿತ ಕೇಂದ್ರ ರಾಜ್ಯಗಳಿಗೆ ತಾಕೀತು ಮಾಡಿತು.

ಇದೇ ಸರಿಯಾದ ದಾರಿ ಅಂತ ಜನರಿಗೆ ಗಿಣಿಮಾತು ಹೇಳಿಕೊಟ್ಟಿತು. ಇದನ್ನು ವಿರೋಧಿಸೋದು – ಇತರ ವಿಷಯಗಳನ್ನು ವಿರೋಧಿಸಿದಂತೆ – ರಾಷ್ಟ್ರದ್ರೋಹದ ಮಾದರಿ ಅಂತ ಅನ್ನುವಷ್ಟು ಜನರ ತಲಿಯೊಳಗ ಕೂಡಿಸಿಬಿಟ್ಟಿತು. ವಿಕೇಂದ್ರೀಕರಣಕ್ಕ ಸಂಬಂಧ ಪಟ್ಟಂತೆ, ನಾವು ಯಾವ ದಿಕ್ಕಿನಾಗ ಹೋಗಬೇಕಾಗಿತ್ತೋ ಅದರ ಸಂಪೂರ್ಣ ವಿರುದ್ಧ ದಿಕ್ಕಿನಾಗ ಹೋಗಲಿಕ್ಕ ಹತ್ತೇವಿ. ಇಂತಹ ಕಾಲದಾಗ, ರಾಜನ ಮೈ ಮೇಲೆ ಬಟ್ಟೆಗಳು ಇಲ್ಲ ಅಂತ ಹೇಳೋರು ಯಾರು, ಮನೋಲ್ಲಾಸಿನಿ?


ಇದನ್ನು ಓದಿ: ಚೀನಾದ 1.7 ಲಕ್ಷ ಖಾತೆಗಳನ್ನು ಸ್ಥಗಿತಗೊಳಿಸಿದ ಟ್ವಿಟ್ಟರ್‌: ಕಾರಣವೇನು?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...