Homeಅಂಕಣಗಳುಮಾರಣಹೋಮದ ಪೂರ್ವ ತಯಾರಿ!

ಮಾರಣಹೋಮದ ಪೂರ್ವ ತಯಾರಿ!

- Advertisement -
- Advertisement -

ಸ್ತ್ರಿದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ ಪಢಾವೋ’ (ಮಗಳನ್ನು ಕಾಪಾಡಿರಿ, ಆಕೆಗೆ ಅಕ್ಷರ ಕಲಿಸಿರಿ) ಎಂಬುದು ಖುದ್ದು ಪ್ರಧಾನಮಂತ್ರಿಯವರೇ ವರ್ಷಗಳ ಹಿಂದೆ ನೀಡಿದ ಘೋಷಣೆ. ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವಾನುದೇವತೆಗಳೂ ರಮಿಸುವರು ಎಂದು ಅಡಿಗಡಿಗೆ ಹೇಳಿಕೊಳ್ಳಲಾಗುತ್ತದೆ. ಮುಸ್ಲಿಮ್ ನಾರಿಯರು, ದಲಿತ ದಮನಿತ ಆದಿವಾಸಿ ನಾರಿಯರು, ಕ್ರೈಸ್ತ ನಾರಿಯರು, ಕಡೆಗೆ ಉಗ್ರ ಹಿಂದುತ್ವವನ್ನು ಒಪ್ಪದಿರುವ ಹಿಂದೂ ನಾರಿಯರು ನಾರಿಯರೇ ಅಲ್ಲವೇ? ಅವರನ್ನು ಹೀನಾಮಾನ ನಿಂದಿಸಲುಬಹುದೇ? ಮುಸಲ್ಮಾನರೂ ಸೇರಿದಂತೆ ಎಲ್ಲ ದೇಶವಾಸಿಗಳ ಡಿ.ಎನ್.ಎ. ಒಂದೇ ಎಂದು ಸರಸಂಘಚಾಲಕರು ನೀಡಿದ ಹೇಳಿಕೆಗೆ ಅರ್ಥವೇನು?

ಪ್ರಧಾನಿಯಾಗಲಿ, ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಇರಲಿ, ಮುಸಲ್ಮಾನ ಹೆಣ್ಣುಮಕ್ಕಳ ಡಿಜಿಟಲ್ ಹರಾಜಿನ ಕುರಿತು ಈತನಕ ತುಟಿ ಬಿಚ್ಚಿಲ್ಲ. ಬೆಚ್ಚಿಬೀಳಿಸುವ ಆತಂಕಕಾರಿ ಅರ್ಥಗರ್ಭಿತ ಮೌನವಿದು. ಸಮ್ಮತಿಯಲ್ಲದೆ ಇನ್ನೇನೆಂದು ಅರ್ಥೈಸಬೇಕು?

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ ಕಾನೂನು.

ಮನೆಯಲ್ಲಿ ಉಳಿದು ಮಕ್ಕಳನ್ನು ಹೆತ್ತು ಪೋಷಿಸುವ ಪಾತ್ರವನ್ನು ಮಹಿಳೆ ನಿಭಾಯಿಸಬೇಕೆಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥರು ಕೂಡ ಹೇಳುತ್ತಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂಬ ಕರೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಲೇ ಬಂದಿದೆ. ತೀವ್ರ ಹಿಂದುತ್ವವಾದಿ ನರಸಿಂಘಾನಂದ್ ಹೆಚ್ಚು ಮಕ್ಕಳನ್ನು ಹೆರದಿರುವ ಹಿಂದೂ ಮಹಿಳೆಯರನ್ನು ರಾಕ್ಷಸಿಯರು ಮತ್ತು ನಾಗಿಣಿಯರು ಎಂದು ಜರೆದರು. ಸಾಧು ಸಂತರು ಎರಡೆರಡು ಸಲ ಮದುವೆಯಾಗಿ ’ಶುದ್ಧ ಹಿಂದೂ ಡಿ.ಎನ್.ಎ’ ವೃದ್ಧಿಸಬೇಕು ಎಂದು ಕರೆ ನೀಡಿದರು. ಕುಣಾಲ್ ಶರ್ಮ ಎಂಬ ಈತನ ಶಿಷ್ಯನೊಬ್ಬನು ಬಡತನದ ಹಿನ್ನೆಲೆಯ ಮುಸ್ಲಿಮ್ ಹೆಣ್ಣುಮಕ್ಕಳ ಮೊಬೈಲು ಫೋನು ನಂಬರುಗಳ ಪಟ್ಟಿಯೊಂದನ್ನು ಹೊರಡಿಸಿ ಅವರನ್ನು ರೇಪ್ ಮಾಡುವಂತೆ ಹಿಂದೂ ಗಂಡಸರಿಗೆ ಕರೆ ನೀಡಿದ. ಮುಸ್ಲಿಮ್ ಹುಡುಗಿಯರ ಮದುವೆ ಮಾಡಿಕೊಂಡು ಅವರನ್ನು ಸರ್ಕಾರಿ ಆಸ್ತಿಯೆಂದು ಬಳಸಿರಿ, ಖುದ್ದು ಭೋಗಿಸಿ ಇತರರಿಗೂ ಕೊಡಿಸಿರಿ. ಆಗ ಮಾತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಸರ್ವರಿಗೂ ನ್ಯಾಯ) ಸಿಕ್ಕೀತು ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಬೊಗಳಿದ್ದ. ಒಂದನ್ನೊಂದು ಮೀರಿಸುವ ಇಂತಹದೇ ಕಾರ್ಕೋಟಕ ನಂಜಿನ ಹೇಳಿಕೆಗಳಿಂದ ಕಿಕ್ಕಿರಿದಿವೆ ಸಾಮಾಜಿಕ ಜಾಲತಾಣಗಳು.

ಇಸ್ಲಾಮ್ ಕ್ಷಿಪ್ರ ವಿಷವೆಂದೂ, ಕ್ರೈಸ್ತ ಧರ್ಮ ನಿಧಾನ ವಿಷವೆಂದೂ ಎರಡನ್ನೂ ಇಳೆಯಿಂದಲೇ ಅಳಿಸಿಹಾಕಬೇಕೆಂದೂ, ತೀವ್ರ ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕಿರಿದಿರುವ ಧರ್ಮಾಂಧ ಖಾತೆಗಳು ತಾವು ’ಕಾಲಿಫ್ಲವರ್ ಫಾರ್ಮರ್’ (ಹೂಕೋಸು ರೈತ) ಎಂಬ ಬಣ್ಣನೆ ಹೊಂದಿರುತ್ತಿದ್ದವು. ಈಗಲೂ ಇಂತಹ ಲೆಕ್ಕವಿಲ್ಲದಷ್ಟು ಖಾತೆಗಳು ಕಾಣಸಿಗುತ್ತವೆ. 1989ರ ಭಗಲ್ಪುರ ಕೋಮುಗಲಭೆಗಳಲ್ಲಿ ಒಂದು ಕೋಮಿನವರು ಮತ್ತೊಂದು ಕೋಮಿಗೆ ಸೇರಿದವರನ್ನು ಕೊಂದು ಹೊಲಗಳಲ್ಲಿ ಹುಗಿದು ಮೇಲೆ ಹೂಕೋಸು ಬೆಳೆಯಲಾಗಿತ್ತು. ಹೂಕೋಸು ಕೃಷಿಯ ಈ ಕ್ರೂರ ರೂಪಕ ಇದೀಗ ಪುನಃ ಚಾಲ್ತಿಗೆ ಬಂದಿದೆ.

ಅರವತ್ತು ಲಕ್ಷ ಯಹೂದಿಗಳ ನರಮೇಧ ಸರಣಿಗೆ ಮುನ್ನ ಜರ್ಮನಿ ಇಂತಹುದೇ ದ್ವೇಷದ ಕೃಷಿ ಜರ್ಮನಿಯಲ್ಲಿ ನಡೆದಿತ್ತು. ಶ್ರೇಷ್ಠ ಜರ್ಮನ್ ಜನಾಂಗೀಯ ಶುದ್ಧಿಯ ವ್ಯಸನದ ಬಲೆಗೆ ಸಿಲುಕಿದ್ದ ಹಿಟ್ಲರ್. ಅವನ ನಾಜೀವಾದವು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿತ್ತು.

ಜರ್ಮನರ ಆರ್ಯಜನಾಂಗೀಯ ’ಶುದ್ಧ ಶ್ರೇಷ್ಠ ರಕ್ತ’ವನ್ನು ಯಹೂದಿಗಳ ’ಕೀಳು ರಕ್ತ’ದಿಂದ ಕಲುಷಿತವಾಗದಂತೆ ’ಸಂರಕ್ಷಿಸುವುದು’ ನಾಜೀವಾದದ ಗುರಿಯಾಗಿತ್ತು.

ಒಬ್ಬ ಮನುಷ್ಯನ ರಕ್ತ ಶ್ರೇಷ್ಠ ಅಥವಾ ಮತ್ತೊಬ್ಬನದು ಕನಿಷ್ಠ ಎಂಬ ವಾದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಹಿಟ್ಲರ್ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜರ್ಮನ್ ರಕ್ತ ಹೊಂದಿರುವವರಿಗೆ ಮಾತ್ರವೇ ಜರ್ಮನ್ ನಾಗರಿಕತೆ ಮೀಸಲು. ಹೀಗಾಗಿ ಅನ್ಯ ಜನಾಂಗವಾಗಿದ್ದ ಯಹೂದಿಗಳು ಜರ್ಮನ್ ನಾಗರಿಕತೆಗೆ ಅರ್ಹರಲ್ಲ ಎಂದು ಸಾರಲಾಯಿತು. ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಯಹೂದಿಗಳು ಮತ್ತು ಜರ್ಮನರ ನಡುವೆ ವಿವಾಹ ಮತ್ತು ವಿವಾಹೇತರ ಸಂಬಂಧವನ್ನು ನಿಷೇಧಿಸಲಾಯಿತು.

ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಸ್ಥಾನಮಾನಗಳಿಗೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕುಗಳನ್ನು ಯಹೂದಿಗಳಿಗೆ ನಿರಾಕರಿಸಲಾಯಿತು. ಅವರು ರಾಜ್ಯವಿಲ್ಲದ ಪ್ರಜೆಗಳಾದರು. ಪಾಸ್‌ಪೋರ್ಟುಗಳು ವೀಸಾಗಳನ್ನೂ ಅವರು ಹೊಂದುವಂತಿರಲಿಲ್ಲ. ಅಂತಿಮವಾಗಿ ಯಹೂದಿಗಳ ಮಾರಣಹೋಮಕ್ಕೆ ನಡೆಸಲಾದ ಪೂರ್ವಭಾವಿ ತಯಾರಿಯಾಗಿತ್ತು ಇದು.

ಹೆಚ್ಚುಹೆಚ್ಚು ಮಕ್ಕಳನ್ನು ಹೆರುವ ಮೂಲಕ ಶುದ್ಧ ಆರ್ಯ ಜರ್ಮನ್ ಜನಾಂಗದ ಸಂಖ್ಯೆಯನ್ನು ವೃದ್ಧಿಸಬೇಕೆಂದು ಜರ್ಮನ್ ಮಹಿಳೆಯರ ಮೇಲೆ ಅತೀವ ಒತ್ತಡ ಹೇರಲಾಯಿತು. ಸ್ತ್ರೀವಾದಿ ಆಂದೋಲನವನ್ನು ಹೀಗಳೆಯಲಾಯಿತು. ಮಹಿಳೆಯು ಕೇವಲ ಮಕ್ಕಳ ಹೆರುವ ಯಂತ್ರವಾಗಿ ಮನೆಯ ನಾಲ್ಕು ಗೋಡೆಗಳ ಉಳಿಯಬೇಕೆಂದು ನಿರೀಕ್ಷಿಸಲಾಯಿತು. ಹೆರಲು ಅಸಮರ್ಥರಾದ ಹೆಂಡತಿಯರಿಗೆ ವಿಚ್ಛೇದನ ನೀಡಿ ಯುವತಿಯರನ್ನು ವರಿಸಿ ಮಕ್ಕಳ ಹುಟ್ಟಿಸುವಂತೆ ಜರ್ಮನ್ ಪುರುಷರನ್ನು ಪ್ರೋತ್ಸಾಹಿಸಲಾಯಿತು.

ಜರ್ಮನಿಯಲ್ಲಿ ದಫನ್ ಆದದ್ದು ಹಿಟ್ಲರನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

“Birth, Sex and Abuse: Women`s Vioces Under Nazi Rule’’ ಎಂಬ ಹೆಸರಿನ
ಹೊತ್ತಿಗೆಯೊಂದಿದೆ. ಹೊಟ್ಟೆ ತೊಳಸಿ ಬರುವ ಭಯಾನಕ ಅತ್ಯಾಚಾರಗಳ ವಿವರಗಳಿಂದ ಅದು ತುಂಬಿಹೋಗಿದೆ. ಓದುವುದು ಕಡುಕಠಿಣ. ಡಾ.ಬೀವರ್ಲೀ ಛಾಮರ್ಸ್ ಎಂಬಾಕೆ ಈ ಪುಸ್ತಕದ ಲೇಖಕಿ.

ಯಾತನಾ ಶಿಬಿರಗಳಲ್ಲಿ ಯಹೂದಿ ಮಹಿಳೆಯರ ಮೇಲೆ ನಾಜೀಗಳು ನಡೆಸುವ ಅತ್ಯಾಚಾರಗಳನ್ನೂ, ಅಮಾನುಷ ವೈದ್ಯಕೀಯ ಪ್ರಯೋಗಗಳನ್ನೂ, ಅವರನ್ನು ಸೂಳೆಗಾರಿಕೆಗೆ ಬಳಸಿ ಕೊಲ್ಲುವುದನ್ನೂ ಇಲ್ಲಿ ದಾಖಲಿಸಲಾಗಿದೆ. ಕೌಸರ್ ಬೀಬಿಯ ಬಸಿರನ್ನು ಖಡ್ಗದಿಂದ ಬಗೆದು ಭ್ರೂಣವನ್ನು ಎತ್ತಿ ಹಿಡಿದ ಪೈಶಾಚಿಕತೆಯ ಪೂರ್ವನಿದರ್ಶನಗಳು ಇಲ್ಲಿ ಹೇರಳ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ಬುಲ್ಲೀಬಾಯಿ ಸುಲ್ಲೀಡೀಲ್ಸ್ ಹರಾಜಿನ ಅಧಮ ಕೃತ್ಯದ ಹಿಂದೆ ಈ ಬಗೆಯ ಗಂಡಾಳಿಕೆಯೂ ಹೆಡೆಯಾಡಿದೆ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗದ ಚಿಹ್ನೆಗಳಿವು.

ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.


ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿ ಆಗದಂತೆ ತಡೆದಿದ್ದು ರಾಹುಲ್ ಗಾಂಧಿ : ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಕಾಂಗ್ರೆಸ್‌ನಲ್ಲಿದ್ದಾಗ ನಾನು ಮುಖ್ಯಮಂತ್ರಿಯಾಗದಂತೆ ರಾಹುಲ್ ಗಾಂಧಿ ತಡೆದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ (ಫೆ.17) ಆರೋಪಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "2014 ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ...

ಮಮತಾ ಬ್ಯಾನರ್ಜಿ ವಿರುದ್ಧ ಇಡಿ ಅರ್ಜಿ: ಮಾರ್ಚ್ 18ಕ್ಕೆ ವಿಚಾರಣೆ ಮುಂದೂಡಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಇತರರ ವಿರುದ್ಧದ ಐ-ಪ್ಯಾಕ್ ಕಚೇರಿ ಶೋಧಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ...