Homeಅಂಕಣಗಳುಮಾರಣಹೋಮದ ಪೂರ್ವ ತಯಾರಿ!

ಮಾರಣಹೋಮದ ಪೂರ್ವ ತಯಾರಿ!

- Advertisement -
- Advertisement -

ಸ್ತ್ರಿದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ ಪಢಾವೋ’ (ಮಗಳನ್ನು ಕಾಪಾಡಿರಿ, ಆಕೆಗೆ ಅಕ್ಷರ ಕಲಿಸಿರಿ) ಎಂಬುದು ಖುದ್ದು ಪ್ರಧಾನಮಂತ್ರಿಯವರೇ ವರ್ಷಗಳ ಹಿಂದೆ ನೀಡಿದ ಘೋಷಣೆ. ಎಲ್ಲಿ ನಾರಿಯರು ಪೂಜಿಸಲ್ಪಡುವರೋ ಅಲ್ಲಿ ದೇವಾನುದೇವತೆಗಳೂ ರಮಿಸುವರು ಎಂದು ಅಡಿಗಡಿಗೆ ಹೇಳಿಕೊಳ್ಳಲಾಗುತ್ತದೆ. ಮುಸ್ಲಿಮ್ ನಾರಿಯರು, ದಲಿತ ದಮನಿತ ಆದಿವಾಸಿ ನಾರಿಯರು, ಕ್ರೈಸ್ತ ನಾರಿಯರು, ಕಡೆಗೆ ಉಗ್ರ ಹಿಂದುತ್ವವನ್ನು ಒಪ್ಪದಿರುವ ಹಿಂದೂ ನಾರಿಯರು ನಾರಿಯರೇ ಅಲ್ಲವೇ? ಅವರನ್ನು ಹೀನಾಮಾನ ನಿಂದಿಸಲುಬಹುದೇ? ಮುಸಲ್ಮಾನರೂ ಸೇರಿದಂತೆ ಎಲ್ಲ ದೇಶವಾಸಿಗಳ ಡಿ.ಎನ್.ಎ. ಒಂದೇ ಎಂದು ಸರಸಂಘಚಾಲಕರು ನೀಡಿದ ಹೇಳಿಕೆಗೆ ಅರ್ಥವೇನು?

ಪ್ರಧಾನಿಯಾಗಲಿ, ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಇರಲಿ, ಮುಸಲ್ಮಾನ ಹೆಣ್ಣುಮಕ್ಕಳ ಡಿಜಿಟಲ್ ಹರಾಜಿನ ಕುರಿತು ಈತನಕ ತುಟಿ ಬಿಚ್ಚಿಲ್ಲ. ಬೆಚ್ಚಿಬೀಳಿಸುವ ಆತಂಕಕಾರಿ ಅರ್ಥಗರ್ಭಿತ ಮೌನವಿದು. ಸಮ್ಮತಿಯಲ್ಲದೆ ಇನ್ನೇನೆಂದು ಅರ್ಥೈಸಬೇಕು?

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈಕಟ್ಟಿ ಕುಳಿತಿದೆ ಕಾನೂನು.

ಮನೆಯಲ್ಲಿ ಉಳಿದು ಮಕ್ಕಳನ್ನು ಹೆತ್ತು ಪೋಷಿಸುವ ಪಾತ್ರವನ್ನು ಮಹಿಳೆ ನಿಭಾಯಿಸಬೇಕೆಂಬ ಮಾತನ್ನು ಆರೆಸ್ಸೆಸ್ ಮುಖ್ಯಸ್ಥರು ಕೂಡ ಹೇಳುತ್ತಾರೆ. ಹಿಂದೂಗಳು ಹೆಚ್ಚು ಮಕ್ಕಳನ್ನು ಹೆರಬೇಕೆಂಬ ಕರೆಯನ್ನು ವಿಶ್ವಹಿಂದೂ ಪರಿಷತ್ ನೀಡುತ್ತಲೇ ಬಂದಿದೆ. ತೀವ್ರ ಹಿಂದುತ್ವವಾದಿ ನರಸಿಂಘಾನಂದ್ ಹೆಚ್ಚು ಮಕ್ಕಳನ್ನು ಹೆರದಿರುವ ಹಿಂದೂ ಮಹಿಳೆಯರನ್ನು ರಾಕ್ಷಸಿಯರು ಮತ್ತು ನಾಗಿಣಿಯರು ಎಂದು ಜರೆದರು. ಸಾಧು ಸಂತರು ಎರಡೆರಡು ಸಲ ಮದುವೆಯಾಗಿ ’ಶುದ್ಧ ಹಿಂದೂ ಡಿ.ಎನ್.ಎ’ ವೃದ್ಧಿಸಬೇಕು ಎಂದು ಕರೆ ನೀಡಿದರು. ಕುಣಾಲ್ ಶರ್ಮ ಎಂಬ ಈತನ ಶಿಷ್ಯನೊಬ್ಬನು ಬಡತನದ ಹಿನ್ನೆಲೆಯ ಮುಸ್ಲಿಮ್ ಹೆಣ್ಣುಮಕ್ಕಳ ಮೊಬೈಲು ಫೋನು ನಂಬರುಗಳ ಪಟ್ಟಿಯೊಂದನ್ನು ಹೊರಡಿಸಿ ಅವರನ್ನು ರೇಪ್ ಮಾಡುವಂತೆ ಹಿಂದೂ ಗಂಡಸರಿಗೆ ಕರೆ ನೀಡಿದ. ಮುಸ್ಲಿಮ್ ಹುಡುಗಿಯರ ಮದುವೆ ಮಾಡಿಕೊಂಡು ಅವರನ್ನು ಸರ್ಕಾರಿ ಆಸ್ತಿಯೆಂದು ಬಳಸಿರಿ, ಖುದ್ದು ಭೋಗಿಸಿ ಇತರರಿಗೂ ಕೊಡಿಸಿರಿ. ಆಗ ಮಾತ್ರವೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ (ಸರ್ವರಿಗೂ ನ್ಯಾಯ) ಸಿಕ್ಕೀತು ಎಂದು ಸಾಮಾಜಿಕ
ಜಾಲತಾಣಗಳಲ್ಲಿ ಬೊಗಳಿದ್ದ. ಒಂದನ್ನೊಂದು ಮೀರಿಸುವ ಇಂತಹದೇ ಕಾರ್ಕೋಟಕ ನಂಜಿನ ಹೇಳಿಕೆಗಳಿಂದ ಕಿಕ್ಕಿರಿದಿವೆ ಸಾಮಾಜಿಕ ಜಾಲತಾಣಗಳು.

ಇಸ್ಲಾಮ್ ಕ್ಷಿಪ್ರ ವಿಷವೆಂದೂ, ಕ್ರೈಸ್ತ ಧರ್ಮ ನಿಧಾನ ವಿಷವೆಂದೂ ಎರಡನ್ನೂ ಇಳೆಯಿಂದಲೇ ಅಳಿಸಿಹಾಕಬೇಕೆಂದೂ, ತೀವ್ರ ಹಿಂದುತ್ವವಾದಿಗಳು ಪ್ರಚಾರ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕಿರಿದಿರುವ ಧರ್ಮಾಂಧ ಖಾತೆಗಳು ತಾವು ’ಕಾಲಿಫ್ಲವರ್ ಫಾರ್ಮರ್’ (ಹೂಕೋಸು ರೈತ) ಎಂಬ ಬಣ್ಣನೆ ಹೊಂದಿರುತ್ತಿದ್ದವು. ಈಗಲೂ ಇಂತಹ ಲೆಕ್ಕವಿಲ್ಲದಷ್ಟು ಖಾತೆಗಳು ಕಾಣಸಿಗುತ್ತವೆ. 1989ರ ಭಗಲ್ಪುರ ಕೋಮುಗಲಭೆಗಳಲ್ಲಿ ಒಂದು ಕೋಮಿನವರು ಮತ್ತೊಂದು ಕೋಮಿಗೆ ಸೇರಿದವರನ್ನು ಕೊಂದು ಹೊಲಗಳಲ್ಲಿ ಹುಗಿದು ಮೇಲೆ ಹೂಕೋಸು ಬೆಳೆಯಲಾಗಿತ್ತು. ಹೂಕೋಸು ಕೃಷಿಯ ಈ ಕ್ರೂರ ರೂಪಕ ಇದೀಗ ಪುನಃ ಚಾಲ್ತಿಗೆ ಬಂದಿದೆ.

ಅರವತ್ತು ಲಕ್ಷ ಯಹೂದಿಗಳ ನರಮೇಧ ಸರಣಿಗೆ ಮುನ್ನ ಜರ್ಮನಿ ಇಂತಹುದೇ ದ್ವೇಷದ ಕೃಷಿ ಜರ್ಮನಿಯಲ್ಲಿ ನಡೆದಿತ್ತು. ಶ್ರೇಷ್ಠ ಜರ್ಮನ್ ಜನಾಂಗೀಯ ಶುದ್ಧಿಯ ವ್ಯಸನದ ಬಲೆಗೆ ಸಿಲುಕಿದ್ದ ಹಿಟ್ಲರ್. ಅವನ ನಾಜೀವಾದವು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿತ್ತು.

ಜರ್ಮನರ ಆರ್ಯಜನಾಂಗೀಯ ’ಶುದ್ಧ ಶ್ರೇಷ್ಠ ರಕ್ತ’ವನ್ನು ಯಹೂದಿಗಳ ’ಕೀಳು ರಕ್ತ’ದಿಂದ ಕಲುಷಿತವಾಗದಂತೆ ’ಸಂರಕ್ಷಿಸುವುದು’ ನಾಜೀವಾದದ ಗುರಿಯಾಗಿತ್ತು.

ಒಬ್ಬ ಮನುಷ್ಯನ ರಕ್ತ ಶ್ರೇಷ್ಠ ಅಥವಾ ಮತ್ತೊಬ್ಬನದು ಕನಿಷ್ಠ ಎಂಬ ವಾದಕ್ಕೆ ವೈಜ್ಞಾನಿಕ ಸಮರ್ಥನೆ ಇಲ್ಲ. ಆದರೆ ಹಿಟ್ಲರ್ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಜರ್ಮನ್ ರಕ್ತ ಹೊಂದಿರುವವರಿಗೆ ಮಾತ್ರವೇ ಜರ್ಮನ್ ನಾಗರಿಕತೆ ಮೀಸಲು. ಹೀಗಾಗಿ ಅನ್ಯ ಜನಾಂಗವಾಗಿದ್ದ ಯಹೂದಿಗಳು ಜರ್ಮನ್ ನಾಗರಿಕತೆಗೆ ಅರ್ಹರಲ್ಲ ಎಂದು ಸಾರಲಾಯಿತು. ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು. ಯಹೂದಿಗಳು ಮತ್ತು ಜರ್ಮನರ ನಡುವೆ ವಿವಾಹ ಮತ್ತು ವಿವಾಹೇತರ ಸಂಬಂಧವನ್ನು ನಿಷೇಧಿಸಲಾಯಿತು.

ಮತ ಚಲಾಯಿಸುವ ಹಕ್ಕು, ಸಾರ್ವಜನಿಕ ಸ್ಥಾನಮಾನಗಳಿಗೆ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವ ಹಕ್ಕುಗಳನ್ನು ಯಹೂದಿಗಳಿಗೆ ನಿರಾಕರಿಸಲಾಯಿತು. ಅವರು ರಾಜ್ಯವಿಲ್ಲದ ಪ್ರಜೆಗಳಾದರು. ಪಾಸ್‌ಪೋರ್ಟುಗಳು ವೀಸಾಗಳನ್ನೂ ಅವರು ಹೊಂದುವಂತಿರಲಿಲ್ಲ. ಅಂತಿಮವಾಗಿ ಯಹೂದಿಗಳ ಮಾರಣಹೋಮಕ್ಕೆ ನಡೆಸಲಾದ ಪೂರ್ವಭಾವಿ ತಯಾರಿಯಾಗಿತ್ತು ಇದು.

ಹೆಚ್ಚುಹೆಚ್ಚು ಮಕ್ಕಳನ್ನು ಹೆರುವ ಮೂಲಕ ಶುದ್ಧ ಆರ್ಯ ಜರ್ಮನ್ ಜನಾಂಗದ ಸಂಖ್ಯೆಯನ್ನು ವೃದ್ಧಿಸಬೇಕೆಂದು ಜರ್ಮನ್ ಮಹಿಳೆಯರ ಮೇಲೆ ಅತೀವ ಒತ್ತಡ ಹೇರಲಾಯಿತು. ಸ್ತ್ರೀವಾದಿ ಆಂದೋಲನವನ್ನು ಹೀಗಳೆಯಲಾಯಿತು. ಮಹಿಳೆಯು ಕೇವಲ ಮಕ್ಕಳ ಹೆರುವ ಯಂತ್ರವಾಗಿ ಮನೆಯ ನಾಲ್ಕು ಗೋಡೆಗಳ ಉಳಿಯಬೇಕೆಂದು ನಿರೀಕ್ಷಿಸಲಾಯಿತು. ಹೆರಲು ಅಸಮರ್ಥರಾದ ಹೆಂಡತಿಯರಿಗೆ ವಿಚ್ಛೇದನ ನೀಡಿ ಯುವತಿಯರನ್ನು ವರಿಸಿ ಮಕ್ಕಳ ಹುಟ್ಟಿಸುವಂತೆ ಜರ್ಮನ್ ಪುರುಷರನ್ನು ಪ್ರೋತ್ಸಾಹಿಸಲಾಯಿತು.

ಜರ್ಮನಿಯಲ್ಲಿ ದಫನ್ ಆದದ್ದು ಹಿಟ್ಲರನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

“Birth, Sex and Abuse: Women`s Vioces Under Nazi Rule’’ ಎಂಬ ಹೆಸರಿನ
ಹೊತ್ತಿಗೆಯೊಂದಿದೆ. ಹೊಟ್ಟೆ ತೊಳಸಿ ಬರುವ ಭಯಾನಕ ಅತ್ಯಾಚಾರಗಳ ವಿವರಗಳಿಂದ ಅದು ತುಂಬಿಹೋಗಿದೆ. ಓದುವುದು ಕಡುಕಠಿಣ. ಡಾ.ಬೀವರ್ಲೀ ಛಾಮರ್ಸ್ ಎಂಬಾಕೆ ಈ ಪುಸ್ತಕದ ಲೇಖಕಿ.

ಯಾತನಾ ಶಿಬಿರಗಳಲ್ಲಿ ಯಹೂದಿ ಮಹಿಳೆಯರ ಮೇಲೆ ನಾಜೀಗಳು ನಡೆಸುವ ಅತ್ಯಾಚಾರಗಳನ್ನೂ, ಅಮಾನುಷ ವೈದ್ಯಕೀಯ ಪ್ರಯೋಗಗಳನ್ನೂ, ಅವರನ್ನು ಸೂಳೆಗಾರಿಕೆಗೆ ಬಳಸಿ ಕೊಲ್ಲುವುದನ್ನೂ ಇಲ್ಲಿ ದಾಖಲಿಸಲಾಗಿದೆ. ಕೌಸರ್ ಬೀಬಿಯ ಬಸಿರನ್ನು ಖಡ್ಗದಿಂದ ಬಗೆದು ಭ್ರೂಣವನ್ನು ಎತ್ತಿ ಹಿಡಿದ ಪೈಶಾಚಿಕತೆಯ ಪೂರ್ವನಿದರ್ಶನಗಳು ಇಲ್ಲಿ ಹೇರಳ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ಬುಲ್ಲೀಬಾಯಿ ಸುಲ್ಲೀಡೀಲ್ಸ್ ಹರಾಜಿನ ಅಧಮ ಕೃತ್ಯದ ಹಿಂದೆ ಈ ಬಗೆಯ ಗಂಡಾಳಿಕೆಯೂ ಹೆಡೆಯಾಡಿದೆ.

ಅಪಾಯಕಾರಿ ವ್ಯಾಧಿಯ ನಿಚ್ಚಳ ಲಕ್ಷಣಗಳು ಸಮಕಾಲೀನ ಭಾರತದಲ್ಲಿ ಭುಸುಗುಟ್ಟಿವೆ. ಸೌಹಾರ್ದ ಸಾಮರಸ್ಯದ ಬಹುಮುಖೀ ಸಂಸ್ಕೃತಿಯ ಸಾಮಾಜಿಕ ಹಂದರವನ್ನು ಛಿದ್ರಗೊಳಿಸಿ ದೇಶವನ್ನು ದುರ್ಬಲಗೊಳಿಸುವ ರೋಗದ ಚಿಹ್ನೆಗಳಿವು.

ಈ ರೋಗ ಬಡಿದಿದ್ದ ಜರ್ಮನಿಯು ಕಂಡ ನೀಚಾತಿನೀಚ ನರಮೇಧಗಳ ತಾಜಾ ಉದಾಹರಣೆ ನಮ್ಮ ಕಣ್ಣಮುಂದೆಯೇ ಇದೆ. ಹಗಲು ಕಂಡ ಈ ಭಾವಿಗೆ ರಾತ್ರಿ ಬೀಳತೊಡಗಿದೆ ಭಾರತ.


ಇದನ್ನೂ ಓದಿ: ’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...