Homeಚಳವಳಿಒಳಮೀಸಲಾತಿ ಕೇಳುವವರೂ... ನೈತಿಕತೆಯೂ.... : ರಘೋತ್ತಮ ಹೊ.ಬ

ಒಳಮೀಸಲಾತಿ ಕೇಳುವವರೂ… ನೈತಿಕತೆಯೂ…. : ರಘೋತ್ತಮ ಹೊ.ಬ

ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುವ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ ಅಂದರೆ ಇದರ ಹಿಂದಿರುವ ಹುನ್ನಾರ?

- Advertisement -
- Advertisement -

ಸುಪ್ರೀಂ ಕೋರ್ಟಿನ ಈಚಿನ ತೀರ್ಪಿನ ನಂತರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟಜಾತಿಗಳೊಳಗಿನ ಒಳಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ರಚನೆಯಾಗಿದ್ದ ಸದಾಶಿವ ಆಯೋಗ ಪರಿಶಿಷ್ಟರಲ್ಲಿ ಬರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಅದರ ತತ್ಸಮಾನ ಜಾತಿಗಳಿಗೆ ಶೇ.5, ಸ್ಪೃಶ್ಯ ಗುಂಪಿಗೆ ಶೇ.3 ಮತ್ತು ಇತರೆ ಪರಿಶಿಷ್ಟ ಸಮುದಾಯಗಳಿಗೆ ಶೇ.1 ಎಂದು ಮೀಸಲಾತಿಯನ್ನು ಹಂಚಿ 2012ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಖಂಡಿತ, ಸಾಮಾಜಿಕ ನ್ಯಾಯದ ಪರ ನಿಲ್ಲುವ ಯಾರೂ ಕೂಡ ಈ ವರದಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ವರದಿ ಅಕ್ಷರಶಃ ಒಪ್ಪತಕ್ಕದ್ದಾಗಿದೆ. ಆದರೆ ಯಾವುದೇ ಒಂದು ವರದಿ ಅದು ಅದೆಷ್ಟು ಪರಿಪೂರ್ಣ, ಅದೆಷ್ಟು ನ್ಯಾಯಬದ್ಧ, ಹಾಗೆಯೇ ಅದರ ಸುತ್ತ ಹುಟ್ಟಿಕೊಳ್ಳುವ ಅನೇಕ ಪ್ರಶ್ನೆಗಳು… ಖಂಡಿತ, ಸದಾಶಿವ ಆಯೋಗದ ಈ ವರದಿಯ ಸುತ್ತಲೂ ಅಂತಹದ್ದೇ ಒಂದಷ್ಟು ಪ್ರಶ್ನೆಗಳು, ವಿಚಾರಗಳು ಹುಟ್ಟಿಕೊಂಡೇ ತೀರುತ್ತವೆ.

ಉದಾಹರಣೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಜನಸಂಖ್ಯೆ ಶೇ.33.4 ಮತ್ತು ಹೊಲೆಯ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಸಂಖ್ಯೆ ಶೇ.32 ಎಂದು ಆಯೋಗ ಹೇಳಿದೆ. ಅಂದರೆ ಇವೆರಡು ಸಮುದಾಯಗಳ ಜನಸಂಖ್ಯೆ ವ್ಯತ್ಯಾಸ ಶೇಕಡ 1 ಅಷ್ಟೇ. ವಿಚಾರವೆಂದರೆ ಹೆಚ್ಚುಕಮ್ಮಿ ಸಮ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳಿಗೆ ಶೇ.15ರ ಮೀಸಲಾತಿಯನ್ನು ಆಯೋಗ ಜನಸಂಖ್ಯೆಯನುಸಾರ ಸಮನಾಗಿ ಹಂಚಬೇಕಿತ್ತು. ಆದರೆ ಈ ನೀತಿಯಿಂದ ದೂರ ಸರಿದಿರುವ ಆಯೋಗ ಒಂದು ಗುಂಪಿಗೆ ಶೇ.6 ಮತ್ತು ಮತ್ತೊಂದು ಗುಂಪಿಗೆ ಶೇ.5 ಎಂದು ಮೀಸಲಾತಿ ಹಂಚಿ ಕೈತೊಳೆದುಕೊಂಡಿದೆ. ಹಾಗೆಯೇ 96 ಲಕ್ಷ ಜನರ ಸಮೀಕ್ಷೆ ನಡೆಸಿರುವ ಆಯೋಗ ಒಂದೆಡೆ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದ 6 ಲಕ್ಷ ಪರಿಶಿಷ್ಟಜಾತಿ ಜನರಿದ್ದಾರೆ ಎಂದು ಹೇಳಿದೆ. ಆಶ್ಚರ್ಯವೆಂದರೆ ಈ ಆರು ಲಕ್ಷ ಜನರಿಗೆ ಯಾವುದೇ ಪ್ರಮಾಣದ ಮೀಸಲಾತಿ ನಿಗದಿಪಡಿಸಲು ಆಯೋಗ ಹೋಗಿಲ್ಲ! ಹಾಗಿದ್ದರೆ ಈ ಜನ ಪರಿಶಿಷ್ಟ ಜಾತಿಯ ಮೀಸಲಾತಿಯ ಅಡಿಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಆಯೋಗ ಉತ್ತರಿಸದೆ ಬಿಟ್ಟಿರುವ ಪ್ರಶ್ನೆ ಇದು. ಇನ್ನು ಆಯೋಗ ತನ್ನ ವರದಿಯಲ್ಲಿ ತಲೆಮಾರುಗಳಿಗೆ ಮೀಸಲಾತಿ ಕೊನೆಗೊಳ್ಳಬೇಕಾದ ವಿಚಾರ ಪ್ರಸ್ತಾಪಿಸಿದೆ. ಕೆನೆ ಪದರದ ಅಂಶವನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ಖಂಡಿತ ಇವೆರಡು ಅಂಶಗಳನ್ನು ಪರಿಶಿಷ್ಟರು ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.

ಅಂದಹಾಗೆ ಒಳಮೀಸಲಾತಿಯ ಹೋರಾಟದ ಹಿನ್ನೆಲೆಯಲ್ಲಿ ಇನ್ನೊಂದು
ಸೈದ್ದಾಂತಿಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಈಚೆಗೆ ಕೆಲವರು ಅದರಲ್ಲೂ ಒಳಮೀಸಲಾತಿಯ ಪ್ರಬಲ ಪ್ರತಿಪಾದಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಮಾತೆಂದರೆ “ಒಳಮೀಸಲಾತಿ ವಿರೋಧಿಗಳು ಅಂಬೇಡ್ಕರ್ ವಿರೋಧಿಗಳಾಗುತ್ತಾರೆ” ಎಂದು‌. ಆದರೆ ವಾಸ್ತವದ ವಿಚಾರವೆಂದರೆ ಒಳಮೀಸಲಾತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವವರು, ಈ ಸಂಬಂಧ ಹೋರಾಡುತ್ತಿರುವವರು ಬಹುತೇಕರು ತಮ್ಮ ಮನೆ, ಬೀದಿ, ಆಚರಣೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲು ಹೋಗುವುದಿಲ್ಲ ಅಥವಾ ಇಟ್ಟುಕೊಳ್ಳುವುದಿಲ್ಲ. ಪ್ರಶ್ನೆಯೇನೆಂದರೆ ಇಂತಹವರಿಗೆ ಸಾಮಾಜಿಕ ನ್ಯಾಯದ ಸಮರ್ಥ ಪ್ರತಿಪಾದನೆಯಾದ ಒಳಮೀಸಲಾತಿಯನ್ನು ಕೇಳುವ ನೈತಿಕತೆಯಾದರೂ ಏನಿದೆ? ಎಂಬುದು.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಅವರ ಆಪ್ತ ಸಹಾಯಕರಾಗಿ ಇದ್ದವರು ಚಮ್ಮಾರ ಸಮುದಾಯದ ನಾನಕ್ ಚಂದ್ ರತ್ತುರವರು. ಅವರ ಇಂಗ್ಲೀಷ್ ಬರಹಗಳನ್ನು ಸಂಪುಟ ರೂಪದಲ್ಲಿ ತಂದವರು ಅವರ ಜೊತೆ ಸದಾ ಇರುತ್ತಿದ್ದ ಭಂಗಿ ಅಥವಾ ಪೌರಕಾರ್ಮಿಕ ಸಮುದಾಯದ ಭಗವಾನ್ ದಾಸ್ ರವರು. ಇನ್ನು ಅಂಬೇಡ್ಕರರಿಗೆ ಒಂದು ರೀತಿಯಲ್ಲಿ ರಕ್ಷಣೆಯ ರೀತಿ ಇದ್ದದ್ದು ಕರ್ನಾಟಕದ ಮೂಲದವರಾದ ಸಮಗಾರ ಸಮುದಾಯದ ಶ್ರೀ ಶಂಕರಾನಂದ ಶಾಸ್ತ್ರಿಯವರು. ಅಂದರೆ ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳು ಉಪಜಾತಿ ಭೇದವಿಲ್ಲದೆ ಅಂಬೇಡ್ಕರರ ಜೊತೆ ಇದ್ದರು. ಸ್ವತಃ ಅಂಬೇಡ್ಕರ್ ಅವರು ಕೂಡ ಈ ಬಗ್ಗೆ 1939 ಜುಲೈ 2ರಂದು ಮುಂಬೈನಲ್ಲಿ ಮಾತನಾಡುತ್ತಾ “ನಾನು ಪರಿಶಿಷ್ಟಜಾತಿಯ ಇಡೀ ಸಮುದಾಯದ ಪರ ಕೆಲಸ ಮಾಡಿದ್ದೇನೆಯೇ ಹೊರತು ಯಾವುದೇ ಒಂದು ಪಂಗಡ ಅಥವಾ ಉಪಜಾತಿ ಪರ ಅಲ್ಲ” ಎಂದಿದ್ದಾರೆ. ಹೀಗಿರುವಾಗ ವಿಶೇಷವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್ ಜಯಂತಿ ಬಂದರೆ ಯಾವುದೋ ಒಂದು ಜಾತಿ ಅಥವಾ ಜಾತಿಯ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತವೆ! ಉಳಿದ ಜಾತಿಗಳು ಮೀಸಲಾತಿಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬರುತ್ತಿದ್ದರೂ, ತಕ್ಕಮಟ್ಟಿಗಾದರು ಉಪಯೋಗ ಪಡೆಯುತ್ತಿದ್ದರೂ ಕೃತಜ್ಞತೆಗೂ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಅಥವಾ ಅವರು ಫೋಟೋ ಮತ್ತೊಂದು ಮಗದೊಂದು ಇಡುವುದಿಲ್ಲ. ದುರಂತವೆಂದರೆ ಅದೇ ಅಂಬೇಡ್ಕರ್ ಗಳಿಸಿಕೊಟ್ಟ ಮೀಸಲಾತಿಯ ಹಂಚಿಕೆಯ ವಿಚಾರ ಬಂದಾಗ ನಾಮುಂದು ತಾಮುಂದು! ಖಂಡಿತ, ಒಳಮೀಸಲಾತಿ ಹಂಚಿಕೆಯ ಚರ್ಚೆಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಾದ ನೋವಿನ ವಿಷಯವಿದು.

ಮತ್ತೊಂದು ಆಶ್ಚರ್ಯದ ಹಾಗೂ ಆತಂಕದ ವಿಚಾರವೆಂದರೆ ಒಳಮೀಸಲಾತಿಯ ಈ ವಿಚಾರದಲ್ಲಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು. ಅಂದರೆ ಯಾವ ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುತ್ತವೆಯೋ ಅಂತಹ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ. ಪ್ರಶ್ನೆಯೆಂದರೆ ಇದರ ಹಿಂದಿರುವ ಹುನ್ನಾರ? ದಲಿತರನ್ನು ಪರಸ್ಪರ ಎತ್ತಿಕಟ್ಟುವ ತಂತ್ರವೇ?

ಒಳಮೀಸಲಾತಿ ಜಾರಿಯಾಗಲೇಬೇಕು. ಆದರೆ ಅದರ ಸುತ್ತ ಹುಟ್ಟಿಕೊಳ್ಳುವ ಅಥವಾ ಅವಿತಿರುವ ಒಂದಷ್ಟು ಇಂತಹ ವಿಚಾರಗಳು ಚರ್ಚೆಗೆ ಬರಬೇಕು. ಆ ಮೂಲಕ ನೊಂದ ಎಲ್ಲಾ ಜನಗಳು ಈಗಲಾದರೂ ತಮ್ಮ ಒಳಮರ್ಮವನ್ನು ಹೊರಜಗತ್ತಿಗೆ ಎಸೆದು ಬಾಬಾಸಾಹೇಬ್ ಅಂಬೇಡ್ಕರ್ ರನ್ನು ತಮ್ಮ ಒಳ ಮನೆಗೆ ಬರಮಾಡಿಕೊಂಡು ಒಳಮೀಸಲಾತಿಯನ್ನು ನಗುನಗುತ್ತಾ ಹಂಚಿಕೊಳ್ಳಬೇಕು. ಸಮಸಮಾಜದ ಹಾದಿಯಲ್ಲಿ ಪರಸ್ಪರ ಒಂದಾಗಿ ಹೆಜ್ಜೆ ಇಡಬೇಕು ಎಂಬುದೇ ಕಳಕಳಿ.

ರಘೋತ್ತಮ ಹೊ.ಬ

(ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‍ರನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಇಂತಹ ಅರ್ದಸತ್ಯದ ಲೇಖನಗಳನ್ನು ನಾನು ನಾನುಗೌರಿ ಹೆಸರಿನ ಪತ್ರಿಕೆಯಲ್ಲಿ ನಿರೀಕ್ಷಿಸಿರಲಿಲ್ಲ
    ಗೌರಿ ಯಾವತ್ತೂ ಅರ್ಧ ಸತ್ಯಗಳ ಪರವಾಗಿರಲಿಲ್ಲ

    • ಒಳಮೀಸಲಾತಿ ಕುರಿತು ಇದುವರೆಗೂ 20 ಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. ಇದು ಅವರ ವಯಕ್ತಿಕ ಅಭಿಪ್ರಾಯ.. ಚರ್ಚೆ, ವಾದ, ಸಂವಾದಕ್ಕೆ ಮುಕ್ತ ಅವಕಾಶವಿದೆ. ನೀವು ಬರೆಯಿರಿ

  2. ಲೇಖನದ ಒಳಮರ್ಮ ಮೇಲ್ನೋಟಕ್ಕೆ ಅಷ್ಟುಸುಲಭಕ್ಕೆ ಸಾಮಾನ್ಯರಿಗೆ ಅರ್ಥವಾಗಲ್ಲ….
    ಆದರೆ ನಾನೂಗೌರಿ ಪತ್ರಿಕೆಯ ಬುದ್ವಂತರಿಗೆ ಅರ್ಥವಾಗಲಿಲ್ಲವೇ…. ಅಥವಾ ….!!?

  3. ಸಾರ್ ನೀವು ಪೂರ್ವಗ್ರಹ ಪೀಡಿತರಾಗಿ ಮಾತಡಿದ್ದಿರಿ ಅನ್ಸುತ್ತೆ ಯಾಕಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಮಾದಿಗರು ಮೊದಲು ನೆನೆಸುವುದು ಅಂಬೇಡ್ಕರ್ ಅವರನ್ನೇ ನಿಮಗೆ ಸಂದೆಹಗಳಿದ್ದರೆ ನಮ್ಮ ಜಿಲ್ಲೆಯಲ್ಲಿ ಬಂದು ನೋಡಿ ಅಂಬೇಡ್ಕರ್ ಅಭಿಮಾನಿಗಳು ಅಲ್ಲದವರು ಯಾರಾದ್ರು ಇದ್ದರೆ ಅದು ಸ್ಪೃಶ್ಯ ಪರಿಶಿಷ್ಟರು ವಿನಃ ಹೊಲೇಮಾದಿಗರಲ್ಲ.. ನಮ್ಮ ಜಿಲ್ಲೆಯ ಪ್ರತಿ ಊರೂ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ ಸಮುದಾಯ ಒಂದಿದ್ದರೆ ಅದು ಮಾದಿಗರು ಎಂದು ಹೇಳಬಲ್ಲೆ, ಅಷ್ಟಕ್ಕೂ ಹೊಲೆ ಮಾದಿಗರು ಒಂದಾಗಿ ಒಳಮೀಸಲಾತಿ ಪ್ರಯೋಜನ ಪಡೆಯಬೇಕೆ ವಿನಃ ನಮ್ಮ ಕಿತ್ತಾಟ ದಿಂದ ಮೂರನೇಯವರು ಹಾಗೂ ಕೆಲವು ರಾಜಕೀಯ ಪಕ್ಷಗಳಿಗೆ ಲಾಭವಾಗಬಾರದು
    ಜೈ ಭೀಮ್..

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...