Homeಚಳವಳಿಒಳಮೀಸಲಾತಿ ಕೇಳುವವರೂ... ನೈತಿಕತೆಯೂ.... : ರಘೋತ್ತಮ ಹೊ.ಬ

ಒಳಮೀಸಲಾತಿ ಕೇಳುವವರೂ… ನೈತಿಕತೆಯೂ…. : ರಘೋತ್ತಮ ಹೊ.ಬ

ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುವ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ ಅಂದರೆ ಇದರ ಹಿಂದಿರುವ ಹುನ್ನಾರ?

- Advertisement -
- Advertisement -

ಸುಪ್ರೀಂ ಕೋರ್ಟಿನ ಈಚಿನ ತೀರ್ಪಿನ ನಂತರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟಜಾತಿಗಳೊಳಗಿನ ಒಳಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ರಚನೆಯಾಗಿದ್ದ ಸದಾಶಿವ ಆಯೋಗ ಪರಿಶಿಷ್ಟರಲ್ಲಿ ಬರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಅದರ ತತ್ಸಮಾನ ಜಾತಿಗಳಿಗೆ ಶೇ.5, ಸ್ಪೃಶ್ಯ ಗುಂಪಿಗೆ ಶೇ.3 ಮತ್ತು ಇತರೆ ಪರಿಶಿಷ್ಟ ಸಮುದಾಯಗಳಿಗೆ ಶೇ.1 ಎಂದು ಮೀಸಲಾತಿಯನ್ನು ಹಂಚಿ 2012ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಖಂಡಿತ, ಸಾಮಾಜಿಕ ನ್ಯಾಯದ ಪರ ನಿಲ್ಲುವ ಯಾರೂ ಕೂಡ ಈ ವರದಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ವರದಿ ಅಕ್ಷರಶಃ ಒಪ್ಪತಕ್ಕದ್ದಾಗಿದೆ. ಆದರೆ ಯಾವುದೇ ಒಂದು ವರದಿ ಅದು ಅದೆಷ್ಟು ಪರಿಪೂರ್ಣ, ಅದೆಷ್ಟು ನ್ಯಾಯಬದ್ಧ, ಹಾಗೆಯೇ ಅದರ ಸುತ್ತ ಹುಟ್ಟಿಕೊಳ್ಳುವ ಅನೇಕ ಪ್ರಶ್ನೆಗಳು… ಖಂಡಿತ, ಸದಾಶಿವ ಆಯೋಗದ ಈ ವರದಿಯ ಸುತ್ತಲೂ ಅಂತಹದ್ದೇ ಒಂದಷ್ಟು ಪ್ರಶ್ನೆಗಳು, ವಿಚಾರಗಳು ಹುಟ್ಟಿಕೊಂಡೇ ತೀರುತ್ತವೆ.

ಉದಾಹರಣೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಜನಸಂಖ್ಯೆ ಶೇ.33.4 ಮತ್ತು ಹೊಲೆಯ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಸಂಖ್ಯೆ ಶೇ.32 ಎಂದು ಆಯೋಗ ಹೇಳಿದೆ. ಅಂದರೆ ಇವೆರಡು ಸಮುದಾಯಗಳ ಜನಸಂಖ್ಯೆ ವ್ಯತ್ಯಾಸ ಶೇಕಡ 1 ಅಷ್ಟೇ. ವಿಚಾರವೆಂದರೆ ಹೆಚ್ಚುಕಮ್ಮಿ ಸಮ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳಿಗೆ ಶೇ.15ರ ಮೀಸಲಾತಿಯನ್ನು ಆಯೋಗ ಜನಸಂಖ್ಯೆಯನುಸಾರ ಸಮನಾಗಿ ಹಂಚಬೇಕಿತ್ತು. ಆದರೆ ಈ ನೀತಿಯಿಂದ ದೂರ ಸರಿದಿರುವ ಆಯೋಗ ಒಂದು ಗುಂಪಿಗೆ ಶೇ.6 ಮತ್ತು ಮತ್ತೊಂದು ಗುಂಪಿಗೆ ಶೇ.5 ಎಂದು ಮೀಸಲಾತಿ ಹಂಚಿ ಕೈತೊಳೆದುಕೊಂಡಿದೆ. ಹಾಗೆಯೇ 96 ಲಕ್ಷ ಜನರ ಸಮೀಕ್ಷೆ ನಡೆಸಿರುವ ಆಯೋಗ ಒಂದೆಡೆ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದ 6 ಲಕ್ಷ ಪರಿಶಿಷ್ಟಜಾತಿ ಜನರಿದ್ದಾರೆ ಎಂದು ಹೇಳಿದೆ. ಆಶ್ಚರ್ಯವೆಂದರೆ ಈ ಆರು ಲಕ್ಷ ಜನರಿಗೆ ಯಾವುದೇ ಪ್ರಮಾಣದ ಮೀಸಲಾತಿ ನಿಗದಿಪಡಿಸಲು ಆಯೋಗ ಹೋಗಿಲ್ಲ! ಹಾಗಿದ್ದರೆ ಈ ಜನ ಪರಿಶಿಷ್ಟ ಜಾತಿಯ ಮೀಸಲಾತಿಯ ಅಡಿಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಆಯೋಗ ಉತ್ತರಿಸದೆ ಬಿಟ್ಟಿರುವ ಪ್ರಶ್ನೆ ಇದು. ಇನ್ನು ಆಯೋಗ ತನ್ನ ವರದಿಯಲ್ಲಿ ತಲೆಮಾರುಗಳಿಗೆ ಮೀಸಲಾತಿ ಕೊನೆಗೊಳ್ಳಬೇಕಾದ ವಿಚಾರ ಪ್ರಸ್ತಾಪಿಸಿದೆ. ಕೆನೆ ಪದರದ ಅಂಶವನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ಖಂಡಿತ ಇವೆರಡು ಅಂಶಗಳನ್ನು ಪರಿಶಿಷ್ಟರು ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.

ಅಂದಹಾಗೆ ಒಳಮೀಸಲಾತಿಯ ಹೋರಾಟದ ಹಿನ್ನೆಲೆಯಲ್ಲಿ ಇನ್ನೊಂದು
ಸೈದ್ದಾಂತಿಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಈಚೆಗೆ ಕೆಲವರು ಅದರಲ್ಲೂ ಒಳಮೀಸಲಾತಿಯ ಪ್ರಬಲ ಪ್ರತಿಪಾದಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಮಾತೆಂದರೆ “ಒಳಮೀಸಲಾತಿ ವಿರೋಧಿಗಳು ಅಂಬೇಡ್ಕರ್ ವಿರೋಧಿಗಳಾಗುತ್ತಾರೆ” ಎಂದು‌. ಆದರೆ ವಾಸ್ತವದ ವಿಚಾರವೆಂದರೆ ಒಳಮೀಸಲಾತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವವರು, ಈ ಸಂಬಂಧ ಹೋರಾಡುತ್ತಿರುವವರು ಬಹುತೇಕರು ತಮ್ಮ ಮನೆ, ಬೀದಿ, ಆಚರಣೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲು ಹೋಗುವುದಿಲ್ಲ ಅಥವಾ ಇಟ್ಟುಕೊಳ್ಳುವುದಿಲ್ಲ. ಪ್ರಶ್ನೆಯೇನೆಂದರೆ ಇಂತಹವರಿಗೆ ಸಾಮಾಜಿಕ ನ್ಯಾಯದ ಸಮರ್ಥ ಪ್ರತಿಪಾದನೆಯಾದ ಒಳಮೀಸಲಾತಿಯನ್ನು ಕೇಳುವ ನೈತಿಕತೆಯಾದರೂ ಏನಿದೆ? ಎಂಬುದು.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಅವರ ಆಪ್ತ ಸಹಾಯಕರಾಗಿ ಇದ್ದವರು ಚಮ್ಮಾರ ಸಮುದಾಯದ ನಾನಕ್ ಚಂದ್ ರತ್ತುರವರು. ಅವರ ಇಂಗ್ಲೀಷ್ ಬರಹಗಳನ್ನು ಸಂಪುಟ ರೂಪದಲ್ಲಿ ತಂದವರು ಅವರ ಜೊತೆ ಸದಾ ಇರುತ್ತಿದ್ದ ಭಂಗಿ ಅಥವಾ ಪೌರಕಾರ್ಮಿಕ ಸಮುದಾಯದ ಭಗವಾನ್ ದಾಸ್ ರವರು. ಇನ್ನು ಅಂಬೇಡ್ಕರರಿಗೆ ಒಂದು ರೀತಿಯಲ್ಲಿ ರಕ್ಷಣೆಯ ರೀತಿ ಇದ್ದದ್ದು ಕರ್ನಾಟಕದ ಮೂಲದವರಾದ ಸಮಗಾರ ಸಮುದಾಯದ ಶ್ರೀ ಶಂಕರಾನಂದ ಶಾಸ್ತ್ರಿಯವರು. ಅಂದರೆ ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳು ಉಪಜಾತಿ ಭೇದವಿಲ್ಲದೆ ಅಂಬೇಡ್ಕರರ ಜೊತೆ ಇದ್ದರು. ಸ್ವತಃ ಅಂಬೇಡ್ಕರ್ ಅವರು ಕೂಡ ಈ ಬಗ್ಗೆ 1939 ಜುಲೈ 2ರಂದು ಮುಂಬೈನಲ್ಲಿ ಮಾತನಾಡುತ್ತಾ “ನಾನು ಪರಿಶಿಷ್ಟಜಾತಿಯ ಇಡೀ ಸಮುದಾಯದ ಪರ ಕೆಲಸ ಮಾಡಿದ್ದೇನೆಯೇ ಹೊರತು ಯಾವುದೇ ಒಂದು ಪಂಗಡ ಅಥವಾ ಉಪಜಾತಿ ಪರ ಅಲ್ಲ” ಎಂದಿದ್ದಾರೆ. ಹೀಗಿರುವಾಗ ವಿಶೇಷವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್ ಜಯಂತಿ ಬಂದರೆ ಯಾವುದೋ ಒಂದು ಜಾತಿ ಅಥವಾ ಜಾತಿಯ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತವೆ! ಉಳಿದ ಜಾತಿಗಳು ಮೀಸಲಾತಿಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬರುತ್ತಿದ್ದರೂ, ತಕ್ಕಮಟ್ಟಿಗಾದರು ಉಪಯೋಗ ಪಡೆಯುತ್ತಿದ್ದರೂ ಕೃತಜ್ಞತೆಗೂ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಅಥವಾ ಅವರು ಫೋಟೋ ಮತ್ತೊಂದು ಮಗದೊಂದು ಇಡುವುದಿಲ್ಲ. ದುರಂತವೆಂದರೆ ಅದೇ ಅಂಬೇಡ್ಕರ್ ಗಳಿಸಿಕೊಟ್ಟ ಮೀಸಲಾತಿಯ ಹಂಚಿಕೆಯ ವಿಚಾರ ಬಂದಾಗ ನಾಮುಂದು ತಾಮುಂದು! ಖಂಡಿತ, ಒಳಮೀಸಲಾತಿ ಹಂಚಿಕೆಯ ಚರ್ಚೆಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಾದ ನೋವಿನ ವಿಷಯವಿದು.

ಮತ್ತೊಂದು ಆಶ್ಚರ್ಯದ ಹಾಗೂ ಆತಂಕದ ವಿಚಾರವೆಂದರೆ ಒಳಮೀಸಲಾತಿಯ ಈ ವಿಚಾರದಲ್ಲಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು. ಅಂದರೆ ಯಾವ ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುತ್ತವೆಯೋ ಅಂತಹ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ. ಪ್ರಶ್ನೆಯೆಂದರೆ ಇದರ ಹಿಂದಿರುವ ಹುನ್ನಾರ? ದಲಿತರನ್ನು ಪರಸ್ಪರ ಎತ್ತಿಕಟ್ಟುವ ತಂತ್ರವೇ?

ಒಳಮೀಸಲಾತಿ ಜಾರಿಯಾಗಲೇಬೇಕು. ಆದರೆ ಅದರ ಸುತ್ತ ಹುಟ್ಟಿಕೊಳ್ಳುವ ಅಥವಾ ಅವಿತಿರುವ ಒಂದಷ್ಟು ಇಂತಹ ವಿಚಾರಗಳು ಚರ್ಚೆಗೆ ಬರಬೇಕು. ಆ ಮೂಲಕ ನೊಂದ ಎಲ್ಲಾ ಜನಗಳು ಈಗಲಾದರೂ ತಮ್ಮ ಒಳಮರ್ಮವನ್ನು ಹೊರಜಗತ್ತಿಗೆ ಎಸೆದು ಬಾಬಾಸಾಹೇಬ್ ಅಂಬೇಡ್ಕರ್ ರನ್ನು ತಮ್ಮ ಒಳ ಮನೆಗೆ ಬರಮಾಡಿಕೊಂಡು ಒಳಮೀಸಲಾತಿಯನ್ನು ನಗುನಗುತ್ತಾ ಹಂಚಿಕೊಳ್ಳಬೇಕು. ಸಮಸಮಾಜದ ಹಾದಿಯಲ್ಲಿ ಪರಸ್ಪರ ಒಂದಾಗಿ ಹೆಜ್ಜೆ ಇಡಬೇಕು ಎಂಬುದೇ ಕಳಕಳಿ.

ರಘೋತ್ತಮ ಹೊ.ಬ

(ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‍ರನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಇಂತಹ ಅರ್ದಸತ್ಯದ ಲೇಖನಗಳನ್ನು ನಾನು ನಾನುಗೌರಿ ಹೆಸರಿನ ಪತ್ರಿಕೆಯಲ್ಲಿ ನಿರೀಕ್ಷಿಸಿರಲಿಲ್ಲ
    ಗೌರಿ ಯಾವತ್ತೂ ಅರ್ಧ ಸತ್ಯಗಳ ಪರವಾಗಿರಲಿಲ್ಲ

    • ಒಳಮೀಸಲಾತಿ ಕುರಿತು ಇದುವರೆಗೂ 20 ಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. ಇದು ಅವರ ವಯಕ್ತಿಕ ಅಭಿಪ್ರಾಯ.. ಚರ್ಚೆ, ವಾದ, ಸಂವಾದಕ್ಕೆ ಮುಕ್ತ ಅವಕಾಶವಿದೆ. ನೀವು ಬರೆಯಿರಿ

  2. ಲೇಖನದ ಒಳಮರ್ಮ ಮೇಲ್ನೋಟಕ್ಕೆ ಅಷ್ಟುಸುಲಭಕ್ಕೆ ಸಾಮಾನ್ಯರಿಗೆ ಅರ್ಥವಾಗಲ್ಲ….
    ಆದರೆ ನಾನೂಗೌರಿ ಪತ್ರಿಕೆಯ ಬುದ್ವಂತರಿಗೆ ಅರ್ಥವಾಗಲಿಲ್ಲವೇ…. ಅಥವಾ ….!!?

  3. ಸಾರ್ ನೀವು ಪೂರ್ವಗ್ರಹ ಪೀಡಿತರಾಗಿ ಮಾತಡಿದ್ದಿರಿ ಅನ್ಸುತ್ತೆ ಯಾಕಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಮಾದಿಗರು ಮೊದಲು ನೆನೆಸುವುದು ಅಂಬೇಡ್ಕರ್ ಅವರನ್ನೇ ನಿಮಗೆ ಸಂದೆಹಗಳಿದ್ದರೆ ನಮ್ಮ ಜಿಲ್ಲೆಯಲ್ಲಿ ಬಂದು ನೋಡಿ ಅಂಬೇಡ್ಕರ್ ಅಭಿಮಾನಿಗಳು ಅಲ್ಲದವರು ಯಾರಾದ್ರು ಇದ್ದರೆ ಅದು ಸ್ಪೃಶ್ಯ ಪರಿಶಿಷ್ಟರು ವಿನಃ ಹೊಲೇಮಾದಿಗರಲ್ಲ.. ನಮ್ಮ ಜಿಲ್ಲೆಯ ಪ್ರತಿ ಊರೂ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ ಸಮುದಾಯ ಒಂದಿದ್ದರೆ ಅದು ಮಾದಿಗರು ಎಂದು ಹೇಳಬಲ್ಲೆ, ಅಷ್ಟಕ್ಕೂ ಹೊಲೆ ಮಾದಿಗರು ಒಂದಾಗಿ ಒಳಮೀಸಲಾತಿ ಪ್ರಯೋಜನ ಪಡೆಯಬೇಕೆ ವಿನಃ ನಮ್ಮ ಕಿತ್ತಾಟ ದಿಂದ ಮೂರನೇಯವರು ಹಾಗೂ ಕೆಲವು ರಾಜಕೀಯ ಪಕ್ಷಗಳಿಗೆ ಲಾಭವಾಗಬಾರದು
    ಜೈ ಭೀಮ್..

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...