Homeಚಳವಳಿಒಳಮೀಸಲಾತಿ ಕೇಳುವವರೂ... ನೈತಿಕತೆಯೂ.... : ರಘೋತ್ತಮ ಹೊ.ಬ

ಒಳಮೀಸಲಾತಿ ಕೇಳುವವರೂ… ನೈತಿಕತೆಯೂ…. : ರಘೋತ್ತಮ ಹೊ.ಬ

ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುವ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ ಅಂದರೆ ಇದರ ಹಿಂದಿರುವ ಹುನ್ನಾರ?

- Advertisement -
- Advertisement -

ಸುಪ್ರೀಂ ಕೋರ್ಟಿನ ಈಚಿನ ತೀರ್ಪಿನ ನಂತರ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟಜಾತಿಗಳೊಳಗಿನ ಒಳಮೀಸಲಾತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ರಚನೆಯಾಗಿದ್ದ ಸದಾಶಿವ ಆಯೋಗ ಪರಿಶಿಷ್ಟರಲ್ಲಿ ಬರುವ ಮಾದಿಗ ಮತ್ತು ಸಮಾನಾಂತರ ಜಾತಿಗಳಿಗೆ ಶೇ.6, ಹೊಲೆಯ ಮತ್ತು ಅದರ ತತ್ಸಮಾನ ಜಾತಿಗಳಿಗೆ ಶೇ.5, ಸ್ಪೃಶ್ಯ ಗುಂಪಿಗೆ ಶೇ.3 ಮತ್ತು ಇತರೆ ಪರಿಶಿಷ್ಟ ಸಮುದಾಯಗಳಿಗೆ ಶೇ.1 ಎಂದು ಮೀಸಲಾತಿಯನ್ನು ಹಂಚಿ 2012ರಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಪ್ರಸ್ತಾಪಿಸಿತ್ತು. ಖಂಡಿತ, ಸಾಮಾಜಿಕ ನ್ಯಾಯದ ಪರ ನಿಲ್ಲುವ ಯಾರೂ ಕೂಡ ಈ ವರದಿಯನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ವರದಿ ಅಕ್ಷರಶಃ ಒಪ್ಪತಕ್ಕದ್ದಾಗಿದೆ. ಆದರೆ ಯಾವುದೇ ಒಂದು ವರದಿ ಅದು ಅದೆಷ್ಟು ಪರಿಪೂರ್ಣ, ಅದೆಷ್ಟು ನ್ಯಾಯಬದ್ಧ, ಹಾಗೆಯೇ ಅದರ ಸುತ್ತ ಹುಟ್ಟಿಕೊಳ್ಳುವ ಅನೇಕ ಪ್ರಶ್ನೆಗಳು… ಖಂಡಿತ, ಸದಾಶಿವ ಆಯೋಗದ ಈ ವರದಿಯ ಸುತ್ತಲೂ ಅಂತಹದ್ದೇ ಒಂದಷ್ಟು ಪ್ರಶ್ನೆಗಳು, ವಿಚಾರಗಳು ಹುಟ್ಟಿಕೊಂಡೇ ತೀರುತ್ತವೆ.

ಉದಾಹರಣೆಗೆ ಮಾದಿಗ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಜನಸಂಖ್ಯೆ ಶೇ.33.4 ಮತ್ತು ಹೊಲೆಯ ಮತ್ತು ಸಂಬಂಧಿತ ಜಾತಿಗಳ ಗುಂಪಿನ ಸಂಖ್ಯೆ ಶೇ.32 ಎಂದು ಆಯೋಗ ಹೇಳಿದೆ. ಅಂದರೆ ಇವೆರಡು ಸಮುದಾಯಗಳ ಜನಸಂಖ್ಯೆ ವ್ಯತ್ಯಾಸ ಶೇಕಡ 1 ಅಷ್ಟೇ. ವಿಚಾರವೆಂದರೆ ಹೆಚ್ಚುಕಮ್ಮಿ ಸಮ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಈ ಸಮುದಾಯಗಳಿಗೆ ಶೇ.15ರ ಮೀಸಲಾತಿಯನ್ನು ಆಯೋಗ ಜನಸಂಖ್ಯೆಯನುಸಾರ ಸಮನಾಗಿ ಹಂಚಬೇಕಿತ್ತು. ಆದರೆ ಈ ನೀತಿಯಿಂದ ದೂರ ಸರಿದಿರುವ ಆಯೋಗ ಒಂದು ಗುಂಪಿಗೆ ಶೇ.6 ಮತ್ತು ಮತ್ತೊಂದು ಗುಂಪಿಗೆ ಶೇ.5 ಎಂದು ಮೀಸಲಾತಿ ಹಂಚಿ ಕೈತೊಳೆದುಕೊಂಡಿದೆ. ಹಾಗೆಯೇ 96 ಲಕ್ಷ ಜನರ ಸಮೀಕ್ಷೆ ನಡೆಸಿರುವ ಆಯೋಗ ಒಂದೆಡೆ ಯಾವ ಗುಂಪಿನಲ್ಲೂ ಗುರುತಿಸಿಕೊಳ್ಳದ 6 ಲಕ್ಷ ಪರಿಶಿಷ್ಟಜಾತಿ ಜನರಿದ್ದಾರೆ ಎಂದು ಹೇಳಿದೆ. ಆಶ್ಚರ್ಯವೆಂದರೆ ಈ ಆರು ಲಕ್ಷ ಜನರಿಗೆ ಯಾವುದೇ ಪ್ರಮಾಣದ ಮೀಸಲಾತಿ ನಿಗದಿಪಡಿಸಲು ಆಯೋಗ ಹೋಗಿಲ್ಲ! ಹಾಗಿದ್ದರೆ ಈ ಜನ ಪರಿಶಿಷ್ಟ ಜಾತಿಯ ಮೀಸಲಾತಿಯ ಅಡಿಯ ವ್ಯಾಪ್ತಿಯಲ್ಲಿ ಬರುವುದಿಲ್ಲವೇ? ಆಯೋಗ ಉತ್ತರಿಸದೆ ಬಿಟ್ಟಿರುವ ಪ್ರಶ್ನೆ ಇದು. ಇನ್ನು ಆಯೋಗ ತನ್ನ ವರದಿಯಲ್ಲಿ ತಲೆಮಾರುಗಳಿಗೆ ಮೀಸಲಾತಿ ಕೊನೆಗೊಳ್ಳಬೇಕಾದ ವಿಚಾರ ಪ್ರಸ್ತಾಪಿಸಿದೆ. ಕೆನೆ ಪದರದ ಅಂಶವನ್ನು ಕೂಡ ಆಯೋಗ ಪ್ರಸ್ತಾಪಿಸಿದೆ. ಖಂಡಿತ ಇವೆರಡು ಅಂಶಗಳನ್ನು ಪರಿಶಿಷ್ಟರು ಒಪ್ಪಲಿಕ್ಕೆ ಸಾಧ್ಯವೇ ಇಲ್ಲ.

ಅಂದಹಾಗೆ ಒಳಮೀಸಲಾತಿಯ ಹೋರಾಟದ ಹಿನ್ನೆಲೆಯಲ್ಲಿ ಇನ್ನೊಂದು
ಸೈದ್ದಾಂತಿಕ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದೆಂದರೆ ಈಚೆಗೆ ಕೆಲವರು ಅದರಲ್ಲೂ ಒಳಮೀಸಲಾತಿಯ ಪ್ರಬಲ ಪ್ರತಿಪಾದಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಒಂದು ಮಾತೆಂದರೆ “ಒಳಮೀಸಲಾತಿ ವಿರೋಧಿಗಳು ಅಂಬೇಡ್ಕರ್ ವಿರೋಧಿಗಳಾಗುತ್ತಾರೆ” ಎಂದು‌. ಆದರೆ ವಾಸ್ತವದ ವಿಚಾರವೆಂದರೆ ಒಳಮೀಸಲಾತಿಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿರುವವರು, ಈ ಸಂಬಂಧ ಹೋರಾಡುತ್ತಿರುವವರು ಬಹುತೇಕರು ತಮ್ಮ ಮನೆ, ಬೀದಿ, ಆಚರಣೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಲು ಹೋಗುವುದಿಲ್ಲ ಅಥವಾ ಇಟ್ಟುಕೊಳ್ಳುವುದಿಲ್ಲ. ಪ್ರಶ್ನೆಯೇನೆಂದರೆ ಇಂತಹವರಿಗೆ ಸಾಮಾಜಿಕ ನ್ಯಾಯದ ಸಮರ್ಥ ಪ್ರತಿಪಾದನೆಯಾದ ಒಳಮೀಸಲಾತಿಯನ್ನು ಕೇಳುವ ನೈತಿಕತೆಯಾದರೂ ಏನಿದೆ? ಎಂಬುದು.

ವಾಸ್ತವವಾಗಿ ಬಾಬಾಸಾಹೇಬ್ ಅಂಬೇಡ್ಕರರ ಜೊತೆ ಅವರ ಆಪ್ತ ಸಹಾಯಕರಾಗಿ ಇದ್ದವರು ಚಮ್ಮಾರ ಸಮುದಾಯದ ನಾನಕ್ ಚಂದ್ ರತ್ತುರವರು. ಅವರ ಇಂಗ್ಲೀಷ್ ಬರಹಗಳನ್ನು ಸಂಪುಟ ರೂಪದಲ್ಲಿ ತಂದವರು ಅವರ ಜೊತೆ ಸದಾ ಇರುತ್ತಿದ್ದ ಭಂಗಿ ಅಥವಾ ಪೌರಕಾರ್ಮಿಕ ಸಮುದಾಯದ ಭಗವಾನ್ ದಾಸ್ ರವರು. ಇನ್ನು ಅಂಬೇಡ್ಕರರಿಗೆ ಒಂದು ರೀತಿಯಲ್ಲಿ ರಕ್ಷಣೆಯ ರೀತಿ ಇದ್ದದ್ದು ಕರ್ನಾಟಕದ ಮೂಲದವರಾದ ಸಮಗಾರ ಸಮುದಾಯದ ಶ್ರೀ ಶಂಕರಾನಂದ ಶಾಸ್ತ್ರಿಯವರು. ಅಂದರೆ ದೇಶದ ಸಮಸ್ತ ಅಸ್ಪೃಶ್ಯ ಸಮುದಾಯಗಳು ಉಪಜಾತಿ ಭೇದವಿಲ್ಲದೆ ಅಂಬೇಡ್ಕರರ ಜೊತೆ ಇದ್ದರು. ಸ್ವತಃ ಅಂಬೇಡ್ಕರ್ ಅವರು ಕೂಡ ಈ ಬಗ್ಗೆ 1939 ಜುಲೈ 2ರಂದು ಮುಂಬೈನಲ್ಲಿ ಮಾತನಾಡುತ್ತಾ “ನಾನು ಪರಿಶಿಷ್ಟಜಾತಿಯ ಇಡೀ ಸಮುದಾಯದ ಪರ ಕೆಲಸ ಮಾಡಿದ್ದೇನೆಯೇ ಹೊರತು ಯಾವುದೇ ಒಂದು ಪಂಗಡ ಅಥವಾ ಉಪಜಾತಿ ಪರ ಅಲ್ಲ” ಎಂದಿದ್ದಾರೆ. ಹೀಗಿರುವಾಗ ವಿಶೇಷವಾಗಿ ಕರ್ನಾಟಕದಲ್ಲಿ ಅಂಬೇಡ್ಕರ್ ಜಯಂತಿ ಬಂದರೆ ಯಾವುದೋ ಒಂದು ಜಾತಿ ಅಥವಾ ಜಾತಿಯ ಸಂಘಟನೆಗಳು ಅಂಬೇಡ್ಕರ್ ಜಯಂತಿ ಆಚರಿಸುತ್ತವೆ! ಉಳಿದ ಜಾತಿಗಳು ಮೀಸಲಾತಿಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಬರುತ್ತಿದ್ದರೂ, ತಕ್ಕಮಟ್ಟಿಗಾದರು ಉಪಯೋಗ ಪಡೆಯುತ್ತಿದ್ದರೂ ಕೃತಜ್ಞತೆಗೂ ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ ಅಥವಾ ಅವರು ಫೋಟೋ ಮತ್ತೊಂದು ಮಗದೊಂದು ಇಡುವುದಿಲ್ಲ. ದುರಂತವೆಂದರೆ ಅದೇ ಅಂಬೇಡ್ಕರ್ ಗಳಿಸಿಕೊಟ್ಟ ಮೀಸಲಾತಿಯ ಹಂಚಿಕೆಯ ವಿಚಾರ ಬಂದಾಗ ನಾಮುಂದು ತಾಮುಂದು! ಖಂಡಿತ, ಒಳಮೀಸಲಾತಿ ಹಂಚಿಕೆಯ ಚರ್ಚೆಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಲೇಬೇಕಾದ ನೋವಿನ ವಿಷಯವಿದು.

ಮತ್ತೊಂದು ಆಶ್ಚರ್ಯದ ಹಾಗೂ ಆತಂಕದ ವಿಚಾರವೆಂದರೆ ಒಳಮೀಸಲಾತಿಯ ಈ ವಿಚಾರದಲ್ಲಿ ಬಲಪಂಥೀಯ ಸಂಘಟನೆಗಳು ಸಕ್ರಿಯವಾಗಿರುವುದು. ಅಂದರೆ ಯಾವ ದಲಿತರ ಮೇಲೆ ದೌರ್ಜನ್ಯ ನಡೆದಾಗ, ದಬ್ಬಾಳಿಕೆ ನಡೆದಾಗ ದೀರ್ಘ ಮೌನಕ್ಕೆ ಶರಣಾಗುತ್ತವೆಯೋ ಅಂತಹ ಬಲಪಂಥೀಯ ಸಂಘಟನೆಗಳು ಪರಿಶಿಷ್ಟರ ಒಳಮೀಸಲಾತಿ ವಿಚಾರದಲ್ಲಿ ಸಭೆ ಸೇರುತ್ತವೆ, ಚರ್ಚೆ ನಡೆಸುತ್ತವೆ. ಪ್ರಶ್ನೆಯೆಂದರೆ ಇದರ ಹಿಂದಿರುವ ಹುನ್ನಾರ? ದಲಿತರನ್ನು ಪರಸ್ಪರ ಎತ್ತಿಕಟ್ಟುವ ತಂತ್ರವೇ?

ಒಳಮೀಸಲಾತಿ ಜಾರಿಯಾಗಲೇಬೇಕು. ಆದರೆ ಅದರ ಸುತ್ತ ಹುಟ್ಟಿಕೊಳ್ಳುವ ಅಥವಾ ಅವಿತಿರುವ ಒಂದಷ್ಟು ಇಂತಹ ವಿಚಾರಗಳು ಚರ್ಚೆಗೆ ಬರಬೇಕು. ಆ ಮೂಲಕ ನೊಂದ ಎಲ್ಲಾ ಜನಗಳು ಈಗಲಾದರೂ ತಮ್ಮ ಒಳಮರ್ಮವನ್ನು ಹೊರಜಗತ್ತಿಗೆ ಎಸೆದು ಬಾಬಾಸಾಹೇಬ್ ಅಂಬೇಡ್ಕರ್ ರನ್ನು ತಮ್ಮ ಒಳ ಮನೆಗೆ ಬರಮಾಡಿಕೊಂಡು ಒಳಮೀಸಲಾತಿಯನ್ನು ನಗುನಗುತ್ತಾ ಹಂಚಿಕೊಳ್ಳಬೇಕು. ಸಮಸಮಾಜದ ಹಾದಿಯಲ್ಲಿ ಪರಸ್ಪರ ಒಂದಾಗಿ ಹೆಜ್ಜೆ ಇಡಬೇಕು ಎಂಬುದೇ ಕಳಕಳಿ.

ರಘೋತ್ತಮ ಹೊ.ಬ

(ಹೊಸ ತಲೆಮಾರಿನ ಪ್ರಖರ ಚಿಂತಕರಲ್ಲಿ ರಘೋತ್ತಮ ಸಹಾ ಒಬ್ಬರು. ಬಹುಜನ ಚಳವಳಿಯ ಭಾಗವಾಗಿ ಗಟ್ಟಿದನಿಯಲ್ಲಿ ವಿಚಾರ ಮಂಡಿಸುತ್ತಾ ಗಮನ ಸೆಳೆದ ಅವರು, ಅಂಬೇಡ್ಕರ್‍ರನ್ನು ಆಳವಾಗಿ ಓದಿಕೊಂಡಿದ್ದು ತಮ್ಮ ನಿಷ್ಠುರ ಅನಿಸಿಕೆಗಳನ್ನು ಹೇಳಲು ಹಿಂಜರಿಯದ ವ್ಯಕ್ತಿತ್ವವುಳ್ಳವರು.)


ಇದನ್ನೂ ಓದಿ: ಜಗದ ಕಣ್ತೆರೆಸಿದ ಮಾದಿಗರ ಒಳಮೀಸಲಾತಿ ಹೋರಾಟ : ಗುರುಪ್ರಸಾದ್ ಕಂಟಲಗೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಇಂತಹ ಅರ್ದಸತ್ಯದ ಲೇಖನಗಳನ್ನು ನಾನು ನಾನುಗೌರಿ ಹೆಸರಿನ ಪತ್ರಿಕೆಯಲ್ಲಿ ನಿರೀಕ್ಷಿಸಿರಲಿಲ್ಲ
    ಗೌರಿ ಯಾವತ್ತೂ ಅರ್ಧ ಸತ್ಯಗಳ ಪರವಾಗಿರಲಿಲ್ಲ

    • ಒಳಮೀಸಲಾತಿ ಕುರಿತು ಇದುವರೆಗೂ 20 ಕ್ಕೂ ಹೆಚ್ಚು ಲೇಖಕರು ಬರೆದಿದ್ದಾರೆ. ಇದು ಅವರ ವಯಕ್ತಿಕ ಅಭಿಪ್ರಾಯ.. ಚರ್ಚೆ, ವಾದ, ಸಂವಾದಕ್ಕೆ ಮುಕ್ತ ಅವಕಾಶವಿದೆ. ನೀವು ಬರೆಯಿರಿ

  2. ಲೇಖನದ ಒಳಮರ್ಮ ಮೇಲ್ನೋಟಕ್ಕೆ ಅಷ್ಟುಸುಲಭಕ್ಕೆ ಸಾಮಾನ್ಯರಿಗೆ ಅರ್ಥವಾಗಲ್ಲ….
    ಆದರೆ ನಾನೂಗೌರಿ ಪತ್ರಿಕೆಯ ಬುದ್ವಂತರಿಗೆ ಅರ್ಥವಾಗಲಿಲ್ಲವೇ…. ಅಥವಾ ….!!?

  3. ಸಾರ್ ನೀವು ಪೂರ್ವಗ್ರಹ ಪೀಡಿತರಾಗಿ ಮಾತಡಿದ್ದಿರಿ ಅನ್ಸುತ್ತೆ ಯಾಕಂದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಮಾದಿಗರು ಮೊದಲು ನೆನೆಸುವುದು ಅಂಬೇಡ್ಕರ್ ಅವರನ್ನೇ ನಿಮಗೆ ಸಂದೆಹಗಳಿದ್ದರೆ ನಮ್ಮ ಜಿಲ್ಲೆಯಲ್ಲಿ ಬಂದು ನೋಡಿ ಅಂಬೇಡ್ಕರ್ ಅಭಿಮಾನಿಗಳು ಅಲ್ಲದವರು ಯಾರಾದ್ರು ಇದ್ದರೆ ಅದು ಸ್ಪೃಶ್ಯ ಪರಿಶಿಷ್ಟರು ವಿನಃ ಹೊಲೇಮಾದಿಗರಲ್ಲ.. ನಮ್ಮ ಜಿಲ್ಲೆಯ ಪ್ರತಿ ಊರೂ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್ ಬಗ್ಗೆ ಹೆಚ್ಚು ಅಭಿಮಾನ ಹೊಂದಿದ ಸಮುದಾಯ ಒಂದಿದ್ದರೆ ಅದು ಮಾದಿಗರು ಎಂದು ಹೇಳಬಲ್ಲೆ, ಅಷ್ಟಕ್ಕೂ ಹೊಲೆ ಮಾದಿಗರು ಒಂದಾಗಿ ಒಳಮೀಸಲಾತಿ ಪ್ರಯೋಜನ ಪಡೆಯಬೇಕೆ ವಿನಃ ನಮ್ಮ ಕಿತ್ತಾಟ ದಿಂದ ಮೂರನೇಯವರು ಹಾಗೂ ಕೆಲವು ರಾಜಕೀಯ ಪಕ್ಷಗಳಿಗೆ ಲಾಭವಾಗಬಾರದು
    ಜೈ ಭೀಮ್..

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...