Homeಮುಖಪುಟನೆನೆಯಬೇಕಿದೆ ಮಹಾತ್ಮನ ಮಡದಿಯನು.... : ಡಿ.ಉಮಾಪತಿ

ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

- Advertisement -
- Advertisement -

ಬಹುಜನ ಭಾರತ: ಡಿ.ಉಮಾಪತಿ

ಇಂದು ಗಾಂಧೀ ಜಯಂತಿ. ಗಾಂಧೀ ಹುಟ್ಟಿ 150 ವರ್ಷಗಳು. ಹಾಗೆಯೇ ಕಸ್ತೂರ ಬಾ ಜನಿಸಿಯೂ 150 ವರ್ಷಗಳು. ಗಾಂಧೀ ಏರಿದ ಎತ್ತರದ ಎಲ್ಲ ಶ್ರೇಯಸ್ಸು ಕಸ್ತೂರ ಬಾ ಅವರದು ಎಂದಿದ್ದ ಈ ದಂಪತಿಗಳ ಹಿರಿಯ ಮಗ ಹರಿಲಾಲ್. ಪುಣೆಯ ಸೆರೆಮನೆ ವಾಸದಲ್ಲಿ ಪತಿಯ ಬಾಹುಗಳಲ್ಲೇ ಪ್ರಾಣಬಿಟ್ಟರು ಕಸ್ತೂರಬಾ.

ಹದಿಮೂರನೆಯ ವಯಸ್ಸಿಗೆ ಮದುವೆ. 1888ರಲ್ಲಿ ತಮ್ಮ 19ನೆಯ ವರ್ಷದಲ್ಲಿ ಮೊದಲ ಮಗ ಹರಿಲಾಲನ ಜನನ. ಮಣಿಲಾಲ್, ರಾಮದಾಸ್ ನಂತರ ಕಿರಿಯ ಮಗ ದೇವದಾಸ್ ಜನಿಸಿದ್ದು 1900ರಲ್ಲಿ. ಆನಂತರ ಪತ್ನಿಯ ಅಭಿಪ್ರಾಯವನ್ನು ಕೇಳುವ ಗೋಜಿಗೆ ಹೋಗದ ಗಾಂಧೀ ಅವರಿಂದ ಬ್ರಹ್ಮಚರ್ಯ ಪಾಲನೆಯ ಏಕಪಕ್ಷೀಯ ನಿರ್ಧಾರ. ಆಗ ಕಸ್ತೂರಬಾ ಅವರ ವಯಸ್ಸು 31. ದಾಂಪತ್ಯ ಜೀವನದ ಈ ಗುರುತರ ನಿರ್ಧಾರ ಕುರಿತು ತಮ್ಮ ನಿಲುಮೆ ಏನಿತ್ತೆಂದು ಆಕೆಯ ಬಾಯಿಂದಲೇ ಹೊರಬಿದ್ದ ಮಾತುಗಳು ಎಲ್ಲಿಯೂ ದಾಖಲಾಗಿಲ್ಲ.

ಕಡುಕೋಪದ ಗಳಿಗೆಗಳಲ್ಲಿ ಕಸ್ತೂರಬಾ ಅವರನ್ನು ಮನೆಯಿಂದ ಹೊರಹಾಕಲು ತಾವು ಮುಂದಾದದ್ದನ್ನು ಗಾಂಧಿಯೇ ಹೇಳಿಕೊಂಡಿದ್ದಾರೆ. ಆಶ್ರಮದ ಕಕ್ಕಸುಗಳನ್ನು ತೊಳೆಯಬೇಕೆಂಬ ಪತಿಯ ಆದೇಶವನ್ನು ಅವರು ತಿರಸ್ಕರಿಸುತ್ತಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲತತ್ವಗಳನ್ನು ಗಾಂಧೀ ಕಲಿತದ್ದು ತಮ್ಮ ಪತ್ನಿಯಿಂದಲೇ..

ಪತಿಗಿಂತ ನಾಲ್ಕು ತಿಂಗಳು 22 ದಿವಸಗಳಷ್ಟು ವಯಸ್ಸಿನಲ್ಲಿ ದೊಡ್ಡವರು ಕಸ್ತೂರಬಾ. ಏಪ್ರಿಲ್ ಹನ್ನೊಂದರಂದು ಆಕೆಯ ಜನ್ಮದಿನದಿಂದು ಬಾ ಅವರನ್ನು ದೇಶ ನೆನೆದದ್ದನ್ನು ಕಂಡವರಿಲ್ಲ. ಗಾಂಧೀಯನ್ನು ಬಿಟ್ಟು ಕಸ್ತೂರಬಾಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಗಾಂಧೀಯನ್ನು ನೆನೆದರೆ ಕಸ್ತೂರಬಾ ಅವರನ್ನು ನೆನೆದಂತೆಯೇ ಎಂಬುದು ನಮ್ಮ ಗಂಡಾಳಿಕೆಯ ಸಾಮೂಹಿಕ ಸಾಕ್ಷಿಪ್ರಜ್ಞೆ. ಗುರುತಿಸದೆ ಮಣ್ಣಾಗಿರುವ ಸಾವಿರಾರು ಅಜ್ಞಾತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಪ್ರತೀಕ ಕಸ್ತೂರಬಾ ಎನ್ನುತ್ತಾರೆ ಹಿರಿಯ ಸರ್ವೋದಯ ಕಾರ್ಯಕರ್ತ ಬಿಜು ನೇಗಿ.

ಹಿರಿಯರು ನಿಶ್ಚಯಿಸಿದಂತೆ ಮೋಹನದಾಸನನ್ನು ವರಿಸಿದ ಕಸ್ತೂರ್ ಕಪಾಡಿಯಾ ವೈವಾಹಿಕ ಜೀವನದ 62 ವರ್ಷಗಳನ್ನು ಗಾಂಧಿಯೊಂದಿಗೆ ಕಳೆದರು. ಕಸ್ತೂರ ಬಾ ಆದರು. ಗುಜರಾತಿನ ಪಟ್ಟಣವೊಂದರ ಶಾಲಾಬಾಲಕನಿಂದ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವರಾಜ್ಯ ಗಳಿಕೆಯ ಹೋರಾಟದ ನಾಯಕನಾಗಿ ಪತಿಯ ರೂಪಾಂತರದಲ್ಲಿ ಜೊತೆಗಿದ್ದು ಏರಿಳಿತಗಳನ್ನು ಹಂಚಿಕೊಂಡವರು. ಪತಿಯ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಮಸುಕಾಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ. ಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಒಮ್ಮೆ ಕಸ್ತೂರಬಾಗೆ ಕಂಠಾಭರಣದ ಉಡುಗೊರೆ ದೊರೆತದ್ದು ನನ್ನ (ದೇಶ) ಸೇವೆಗೋ ಅಥವಾ ನಿನ್ನ ಸೇವೆಗೋ ಎಂದು ದನಿಯೇರಿಸಿದ್ದರು ಬಾಪೂ. ತಿರುಗಿ ಬಾ ನೀಡಿದ ಉತ್ತರ ಹೀಗಿತ್ತು- ‘ಒಪ್ಪುತ್ತೇನೆ. . . ಆದರೆ ನೀವು ಸಲ್ಲಿಸಿದ ಸೇವೆ ನಾನು ಸಲ್ಲಿಸಿದ ಸೇವೆಯೆಂದೇ ಲೆಕ್ಕ. ನಿಮಗಾಗಿ ನಾನು ಹಗಲಿರುಳು ದೇಹ ಸವೆಸಿ ದುಡಿದಿದ್ದೇನೆ. ಅದು ಸೇವೆ ಅಲ್ಲವೇನು. . . .’

ಅಂದಿನಿಂದಲೇ ಅಜ್ಜಿಯ ಬದುಕಿನ ಕತೆಯನ್ನು ತಾತನ ಬದುಕು ಮಬ್ಬಿಗೆ ಸರಿಸಿಬಿಟ್ಟಿತು ಎಂದಿದ್ದಾರೆ ಮೊಮ್ಮಗ ಅರುಣ್ ಗಾಂಧೀ. ಹದಿಮೂರನೆಯ ವಯಸ್ಸಿಗೆ ವಿವಾಹದ ನಂತರ. ಕಸ್ತೂರ್ ಕಪಾಡಿಯಾ ಕಸ್ತೂರಬಾ ಗಾಂಧೀ. ಪೋರಬಂದರು ತೊರೆದು ರಾಜಕೋಟ್ ಮನೆಯಲ್ಲಿ ವಾಸ. ಹೊಸ ಊರು, ಹೊಸ ಮನೆ, ಹೊಸ ಹೆಸರು. ಮೋಹನದಾಸ್ ಶಾಲಾ ವಿದ್ಯಾರ್ಥಿ ಮತ್ತು ಗೃಹಸ್ಥ ಎರಡೂ ಆಗಿದ್ದ. ಪತ್ನಿ ತಾನು ಹೇಳಿದಂತೆ ಕೇಳಬೇಕು ಎಂಬ ಇರಾದೆಗೆ ಬಿದ್ದಿದ್ದ. ಮನೆ ಬಿಟ್ಟು ಹೊರಗೆ ಹೋಗುವುದಾದರೆ ತನ್ನ ಅನುಮತಿ ಪಡೆಯಲೇಬೇಕು. ಎಲ್ಲಿ, ಯಾವಾಗ, ಯಾರನ್ನು, ಯಾಕೆ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಬೇಕು. ತನಗೇ ನಿಷ್ಠಳಾಗಿರಬೇಕು ಎಂದು ವಿಧಿಸಿದ್ದ. ಕಸ್ತೂರಬಾ ಎದುರು ವಾದಿಸುತ್ತಿದ್ದಿಲ್ಲ. . . .ಪ್ರಶ್ನಿಸುತ್ತಿರಲಿಲ್ಲ. ಗಂಡ ಹೇಳುವುದು ಸಕಾರಣ ಅಲ್ಲ ಎನಿಸಿದ್ದನ್ನು ಮೌನವಾಗಿ ತಳ್ಳಿ ಹಾಕುತ್ತಿದ್ದರು. ರಾತ್ರಿ ಆಯಿತೆಂದರೆ ಪತಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಿತ್ತು. ಈ ಮಾತುಗಳನ್ನು ಆಡುತ್ತಿರುವುದು ತನ್ನ ಪತಿಯೇ ಎಂಬ ಸೋಜಿಗ ಬೆರೆತ ವ್ಯಥೆ ಆಕೆಯನ್ನು ಕಾಡಿತ್ತು. ಪತಿ ಸತ್ಯದೊಂದಿಗೆ ಪ್ರಯೋಗಗಳನ್ನು ಮಾಡಿದರೆ, ಆ ಪ್ರಯೋಗಗಳ ಅನುಭವಿಸಿದ್ದು ಪತ್ನಿ.

ಬಾ ಅವರನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳಲ್ಲೂ ಗಾಂಧೀ ವಿಫಲರಾದದ್ದಾಗಿ ಹೇಳಿಕೊಂಡಿದ್ದಾರೆ. ನಾನೆಷ್ಟೇ ಒತ್ತಡ ಹೇರಿದರೂ ಆಕೆ ಕಟ್ಟಕಡೆಗೆ ತನಗೆ ತಿಳಿದಂತೆಯೇ ಮಾಡುವವಳು. ಈ ಕಾರಣದಿಂದಾಗಿ ಮನಸ್ತಾಪಗಳು ಆಗುತ್ತಿದ್ದವು. ಆದರೆ ನನ್ನ ಬದುಕು ವಿಸ್ತಾರಗೊಂಡಂತೆ ನನ್ನ ಪತ್ನಿ ಅರಳಿ ನನ್ನ ಕೆಲಸದಲ್ಲೇ ತನ್ನನ್ನು ತಾನು ಕಳೆದುಕೊಂಡಳು ಎಂದಿದ್ದಾರೆ. ಬಾ ಅವರ ಕೆಚ್ಚು ಮತ್ತು ದೃಢಸಂಕಲ್ಪಗಳೇ ಬದುಕಿನುದ್ದಕ್ಕೂ ಗಾಂಧೀ ಹೋರಾಟದ ಬೆನ್ನೆಲುಬಾಗಿದ್ದವು. 1908ರಲ್ಲಿ ದಕ್ಷಿಣ ಆಫ್ರಿಕೆಯಲ್ಲಿ ಮಾತ್ರವಲ್ಲದೆ 1932, 1933, 1939 ಹಾಗೂ 1943ರಲ್ಲಿ ಗಾಂಧೀ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಆಕೆಯ ವಿನಃ ನಾನು ಕತ್ತಲ ಕೂಪದಲ್ಲಿರುತ್ತಿದ್ದೆ. ನನ್ನಲ್ಲಿ ಎಚ್ಚರದ ಬೆಂಕಿ ಆರದಂತೆ ಕಾಪಾಡಿದಳು. ನನ್ನ ಎಲ್ಲ ರಾಜಕೀಯ ಹೋರಾಟಗಳಲ್ಲೂ ಜೊತೆಗೆ ನಿಂತಳು. ಸಾಧಾರಣ ಅರ್ಥದಲ್ಲಿ ಆಕೆ ಅನಕ್ಷರಸ್ಥಳು. ಆದರೆ ನಿಜವಾದ ಶಿಕ್ಷಣದ ಮಾದರಿಯಾಗಿದ್ದಳು.

ಕಸ್ತೂರ ಬಾ ಬಾಳಸಂಗಾತಿ ಆಗದೆ ಹೋಗಿದ್ದಿದ್ದರೆ ಗಾಂಧೀ ಬ್ಯಾರಿಸ್ಟರೂ ಆಗುತ್ತಿರಲಿಲ್ಲ, ಮಹಾತ್ಮಾ ಎಂದೂ ಎನಿಸಿಕೊಳ್ಳುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋಗಲು ಗಾಂಧೀ ಬಳಿ ಹಣ ಇರಲಿಲ್ಲ. ಕಸ್ತೂರಬಾ ಅವರ ಒಡವೆ ಮಾರಬೇಕಾಯಿತು ಗಾಂಧೀ. ದೇವರಂತೆ ಪೂಜಿಸಬೇಕಾದ ಪರಿಪೂರ್ಣ ಚಿತ್ರವಲ್ಲ, ಪ್ರೀತಿಯಿಂದ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕಿರುವ ವ್ಯಕ್ತಿ ಎಂದಿದ್ದಾರೆ ಗಾಂಧೀ ಮೊಮ್ಮಗ ಗೋಪಾಲಕೃಷ್ಣ ಗಾಂಧೀ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...