Homeಚಳವಳಿದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ದೌರ್ಜನ್ಯ ಸಹಿಸಲಾರದೆ ಮಹಾರಾಷ್ಟ್ರದ ಜಿರ್ನಿಯಾ ತಾಲೂಕಿನ ಖಾರ್ಗೊನೆಯಿಂದ ಓಡಿ ಹೋದ ಒಂದಷ್ಟು ಕೂಲಿಕಾರರು ತಮ್ಮೂರು ತಲುಪಿ 6 ಹುಡುಗಿಯರ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಿದ್ದ ಕತೆಗಳನ್ನು ಹೇಳಿಕೊಂಡಿದ್ದಾರೆ.

- Advertisement -
- Advertisement -

ಕಬ್ಬು ಕಟಾವಿಗೆ ಬಂತೆಂದರೆ ಗುತ್ತಿಗೆದಾರರಿಗದು ದುಡ್ಡಿನ ಸುಗ್ಗಿಯ ಸಮಯ. ಪುಣೆ ಬೆಳಗಾವಿ, ಪುಣೆ ಸೊಲ್ಲಾಪುರ ರೋಡುಗಳು ತುಂಬಿದ ಟ್ರ್ಯಾಕ್ಟರುಗಳಿಂದ ಗುಡುಗುಡಿಸುತ್ತವೆ. ಆ ಟ್ರ್ಯಾಕ್ಟರುಗಳಲ್ಲಿ ಮನೆಯ ಎಲ್ಲಾ ಸಾಮಾನುಗಳು, ಹಾಸಿಗೆ ಹೊದಿಕೆ, ಗುಡಾರ, ಪ್ಲಾಸ್ಟಿಕ್ ಹೊದಿಕೆಗಳು, ಅವನ್ನು ನಿಲ್ಲಿಸುವ ಕಂಬಗಳು. . . ಮಕ್ಕಳು ಮರಿಗಳು, ಮನೆಯ ಎಲ್ಲಾ ಸದಸ್ಯರುಗಳು. ಹೊರಡುವುದೆಲ್ಲಿಗೆ? ಸಾಂಗ್ಲಿ, ಸಾತಾರ, ಕೊಲ್ಲಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕಬ್ಬಿನ ಗದ್ದೆಗಳಿಗೆ. ನೋಡ ನೋಡುವಷ್ಟರಲ್ಲಿ ಗದ್ದೆಗಳಲ್ಲಿ ಕಂಬಗಳು ಎದ್ದು ನಿಲ್ಲುತ್ತವೆ, ಪ್ಲಾಸ್ಟಿಕ್ ಹೊದಿಕೆಯ ಮುಸುಕು ಹಾಕಿಕೊಂಡು ಅವು ಮನೆಗಳೆನಿಸುತ್ತವೆ. ಮನೆಯ ಸಾಮಾನು, ಹಾಸಿಗೆ ಹೊದಿಕೆ ಮಕ್ಕಳೆಲ್ಲ ಟ್ರ್ಯಾಕ್ಟರ್ ಇಳಿದು ಆ ಮನೆಯೊಳಗೆ ತುಂಬಿಕೊಳ್ಳುತ್ತವೆ. ಮುಂದಿನ ಎರಡು ತಿಂಗಳು ಇದೇ ಅವರ ಮನೆ, ಇದೇ ಅವರ ಊರು.

ಎಲ್ಲಿಯ ಜನರಿವರು? ಎಳೆ ಹಿಡಿದು ಹುಡುಕುತ್ತ ಹೋದರೆ ದಾರ ಅತ್ತ ಸಾಂಗ್ಲಿ ಸಾತಾರ ದಾಟಿ ದೂರದ ಮಧ್ಯಪ್ರದೇಶದವರೆಗೂ ಸಾಗುತ್ತದೆ. ದೇಶ ಭಾಷೆ ಗೊತ್ತಿಲ್ಲದ ಈ ಜಾಗಕ್ಕೆ ಕಬ್ಬು ಕಡಿಯಲು ಬಂದಿಳಿದ ಈ ಕುಟುಂಬಗಳಿಗೆ ಗೊತ್ತಿರುವುದೊಂದೇ, ದುಡಿತ ದುಡಿತ ದುಡಿತ. . .

ಮಹಾರಾಷ್ಟ್ರ ಕರ್ನಾಟಕಗಳಲ್ಲಿ ಕಬ್ಬು ಬೆಳೆಗಾರರಿಗೆ ನಿಶ್ಚಿಂತೆ. ಲಾರಿ ತಂದು ಕೂಲಿಕಾರರನ್ನು ತಂದು ಫ್ಯಾಕ್ಟರಿಗಳವರು ತಾವೇ ಕಬ್ಬು ಕೊಯ್ದು, ಸುಲಿಸಿ ಒಯ್ಯುತ್ತಾರೆ ಎಂದು. ಆದರೆ ಆ ಫ್ಯಾಕ್ಟರಿಗಳು ಎಲ್ಲಿಂದ ಕೂಲಿಕಾರರನ್ನು ತರುತ್ತಾರೆ, ಹೇಗೆ ತರುತ್ತಾರೆ, ಹೇಗೆ ಅವರನ್ನು ನಡೆಸಿಕೊಳ್ಳುತ್ತಾರೆ ಕಲ್ಪನೆಯೂ ಇಲ್ಲ. ಹೆಚ್ಚಾಗಿ ಮಂತ್ರಿ ಮಹೋದಯರುಗಳ ಒಡೆತನದಲ್ಲಿಯೇ ಇರುವ ಮಹಾರಾಷ್ಟ್ರ ಕರ್ನಾಟಕದ ಈ ಶುಗರ್ ಫ್ಯಾಕ್ಟರಿಗಳು ಅಕ್ರಮ ಗುತ್ತಿಗೆದಾರರ ಮೂಲಕ ಅತೀವ ಬಡತನ ಇರುವಂತಹ ಮಧ್ಯಪ್ರದೇಶದ ಗುಡ್ಡಗಾಡು ಜನರಿಗೆ ಮಳೆಗಾಲವಿನ್ನೂ ಮುಗಿಯುವ ಮೊದಲೇ ಮೂವತ್ತು-ನಲವತ್ತು ಸಾವಿರಗಳ ಆಮಿಷವೊಡ್ಡಿ ಬಲೆ ಹಾಕುತ್ತಾರೆ. ಉದ್ಯೋಗವಿಲ್ಲದೆ ಹಸಿವೆಯಿಂದ ಕಂಗೆಟ್ಟಿರುವ ಬುಡಕಟ್ಟು ಸಮುದಾಯಗಳಿಗೆ ಸಾಲ ಕೊಡುವವನೇ ದೇವರು. ಒಳ್ಳೆಯ ಉದ್ಯೋಗ, ಉತ್ತಮ ವೇತನ, ಉತ್ತಮ ಪರಿಸರ ಎಂದೆಲ್ಲಾ ಹುರಿದುಂಬಿಸಿ ಆ ಮುಗ್ಧರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ ಗುತ್ತಿಗೆದಾರ. ಎಂತೆಂಥವರು ಹೇಗೆ ಹೇಗೆ ದೂರದೂರಿಗೆ ಉದ್ಯೋಗಕ್ಕಾಗಿ ಹೋಗಿರುತ್ತಾರೆ ಎಂಬ ಕಲ್ಪನೆ ಎಲ್ಲರಿಗೂ ಲಾಕ್‌ಡೌನ್ ಅವಧಿಯಲ್ಲಿ ಬಂದಿರಲಿಕ್ಕೆ ಸಾಕು. ಅಂದಿಗೂ ಇಂದಿಗೂ ಕೂಲಿಕಾರರ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಉದ್ಯೋಗ ಭದ್ರತೆ, ಜೀವನ ಭದ್ರತೆ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಎಲ್ಲವೂ ಕಾನೂನಿನ ಪುಸ್ತಕಗಳಲ್ಲಿಯೇ ಅವಿತುಕೊಂಡಿರುವಾಗ ಈ ಜನರ ಬದುಕು ಇನ್ನೂ ಎಪ್ಪತ್ತು ವರ್ಷಗಳಾದರೂ ಕತ್ತಲಲ್ಲಿಯೇ!

ಅಕ್ಟೋಬರ್‌ದಿಂದ ತಾವು ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ಬರುತ್ತೇವೆಂದು ಹೇಳಿ ಕೂಲಿಕಾರರು ಸಾಲ ಸ್ವೀಕರಿಸಿದವರು ಹೇಳಿದ ವೇಳೆಗೆ ಹೇಳಿದ ಜಾಗದಲ್ಲಿ ಹಾಜರಾಗುತ್ತಾರೆ. ಬೆಳಗಿನ ಜಾವ 5 ರಿಂದ ಸಂಜೆಯವರೆಗೆ ಕಬ್ಬು ಕಟಾವು, ಆ ನಂತರ ಕತ್ತಲಲ್ಲಿಯೇ ಲಾರಿಗೆ ಹೇರುವ ಕೆಲಸ. ದಿನಕ್ಕೆ ಎರಡು ಜನರ ಕೆಲಸ, ಎರಡು ದಿನದ ಕೆಲಸ ಮಾಡಿದರೂ ಕನಿಷ್ಟ ಕೂಲಿಯ ಹೆಸರಿಲ್ಲ. ಗುತ್ತಿಗೆದಾರನ ಕೃಪಾಕಟಾಕ್ಷವಿದ್ದರೆ ಕೂಲಿ. ಸಂಬಳ ಹೇಳದಿದ್ದರೂ ಆತ ಹೇಳಿದಷ್ಟು ಕೆಲಸ, ಆತ ಸಾಕು ಎಂದೆನ್ನುವವರೆಗೆ ಕೆಲಸ. ಈ ಗುತ್ತಿಗೆದಾರರ ಬಳಿ ಲೈಸೆನ್ಸ್ ಇಲ್ಲ. ಅಂತರರಾಜ್ಯ ಕೂಲಿಕಾರರಿಗೆ ಸಂಬಂಧಿಸಿದ ಕಾನೂನಿನ ಪಾಲನೆ ಇಲ್ಲ. ಕೆಲಸಗಾರರ ನೋಂದಣಿ ಇಲ್ಲ. ಅತ್ಯಾಚಾರದಿಂದ ಹಿಡಿದು ಎಲ್ಲಾ ರೀತಿಯ ದೌರ್ಜನ್ಯ ನಡೆಯುವುದಿಲ್ಲಿ.

ದೌರ್ಜನ್ಯ ಸಹಿಸಲಾರದೆ ಮಹಾರಾಷ್ಟ್ರದ ಜಿರ್ನಿಯಾ ತಾಲೂಕಿನ ಖಾರ್ಗೊನೆಯಿಂದ ಓಡಿ ಹೋದ ಒಂದಷ್ಟು ಕೂಲಿಕಾರರು ತಮ್ಮೂರು ತಲುಪಿ 6 ಹುಡುಗಿಯರ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಿದ್ದ ಕತೆಗಳನ್ನು ಹೇಳಿಕೊಂಡಾಗಲೇ ಏನು ನಡೆಯುತ್ತಿದೆ ಎಂಬುದು ಸುತ್ತಲಿನವರಿಗೆ ಅರಿವು. `ನಮ್ಮ ಲೆಕ್ಕ ಪತ್ರ ಮಾಡಿಕೊಡಿ ನಾವು ಹೋಗುತ್ತೇವೆ’ ಎಂದಾಗ ನಾಲ್ವರನ್ನು ನಿರಾಣಿ ಶುಗರ್ಸ್ ಫ್ಯಾಕ್ಟರಿಯಲ್ಲಿ ಲಾಕಪ್‌ನಲ್ಲಿಡಲಾಯಿತೆಂದು ಈ ಕೂಲಿಕಾರರೇ ಹೇಳುತ್ತಾರೆ. ಮಧ್ಯಪ್ರದೇಶದ ಬರ್ವಾನಿಯ `ಜಾಗೃತ ಆದಿವಾಸಿ ದಲಿತ ಸಂಘಟನೆ’ಗೆ ತಿಳಿಸಿದಾಗ ಅವರು ಅಲ್ಲಿನ ಪೊಲೀಸ್ ಸಹಾಯದಿಂದ ಬೆಳಗಾವಿ ಜಿಲ್ಲಾಡಳಿತಕ್ಕೆ ಸಂಪರ್ಕಿಸಿ ಈ ಕೂಲಿಕಾರರ ಬಿಡುಗಡೆಗೆ ಪ್ರಯತ್ನ ಮಾಡಿದರು. ಬೆಳಗಾವಿ, ಬಾಗಲಕೋಟೆ, ಪುಣೆ, ಸಾತಾರಾ, ಜಿಲ್ಲೆಗಳಲ್ಲಿ ಹರಡಿ ಹೋಗಿರುವ ಕೂಲಿಕಾರರನ್ನು ರಕ್ಷಿಸಲು ಮಧ್ಯಪ್ರದೇಶದ ಜಾಗೃತ ಆದಿವಾಸಿ ಸಂಘಟನೆ ಮತ್ತು ಬೆಳಗಾವಿಯ ಸ್ಥಳೀಯ ಸಂಘಟನೆ, ಪಿಯುಸಿಎಲ್ ಎಲ್ಲವೂ ಸತತ ಪ್ರಯತ್ನ ಮಾಡಿ 250 ಕೂಲಿಕಾರರನ್ನು ಜೀತಮುಕ್ತಗೊಳಿಸಿದ್ದಾರೆ.

ಅವಧಿ ಮೀರಿ ಕೆಲಸ ಮಾಡಿಸುವುದು, ಸಂಬಳ ಕೊಡದೆ ಕೆಲಸ ಮಾಡಿಸುವುದು, ಸಾಲ ಕೊಟ್ಟು ಕನಿಷ್ಟ ಕೂಲಿಗಿಂತಲೂ ಕಡಿಮೆ ಸಂಬಳ ಕೊಡುವುದು ಇವೆಲ್ಲವೂ ಜೀತ (ವಿಮುಕ್ತಿ) ಕಾನೂನಿನ ಪ್ರಕಾರ ಜೀತವೆನಿಸಿಕೊಳ್ಳುತ್ತವೆ. ಬುಡಕಟ್ಟು ಜನರನ್ನು ಒತ್ತಾಯದಿಂದ ದುಡಿಸಿಕೊಳ್ಳುವುದು, ದೌರ್ಜನ್ಯವೆಸಗುವುದು ಎಸ್‌ಸಿ, ಎಸ್ಟಿ ದೌರ್ಜನ್ಯ (ತಡೆ) ಕಾನೂನಿನಡಿ ಅಪರಾಧವಾಗುತ್ತದೆ. 1979ರ ಅಂತರರಾಜ್ಯ ವಲಸೆ ಕಾನೂನಿನಡಿಯಲ್ಲಿ ಈ ರೀತಿ ಕೆಲಸಗಾರರನ್ನು ಒಯ್ಯುವವ ಲೈಸೆನ್ಸ್ ಇರುವ ಗುತ್ತಿಗೆದಾರನಾಗಿರಬೇಕಲ್ಲದೆ ಆ ಕೂಲಿಕಾರರನ್ನು ಎರಡೂ ರಾಜ್ಯಗಳಲ್ಲಿ ನೋಂದಣಿ ಮಾಡಿಸಿರಬೇಕು. ತಾವು ಎಲ್ಲಿ, ಏನು ಕೆಲಸ ಮಾಡುತ್ತಿದ್ದೇವೆ, ನಿಯಮಿತವಾಗಿ ಕನಿಷ್ಟ ಕೂಲಿಗಿಂತ ಹೆಚ್ಚು ಹಣವನ್ನು ಕೂಲಿಯಾಗಿ ಪಡೆಯುತ್ತಿದ್ದೇವೆ, ಜೀವನ ಸೌಲಭ್ಯಗಳೆಲ್ಲ ಇವೆ ಎಂದು ಹೇಳುವಂಥ ಪಾಸ್ ಬುಕ್ ಒಂದನ್ನು ಕೂಲಿಕಾರರಿಗೆ ಕೊಟ್ಟಿರಬೇಕು. ಇವೊಂದನ್ನೂ ಮಾಡದ ಈ ಗುತ್ತಿಗೆದಾರರು ಮಾನವ ಕಳ್ಳಸಾಗಾಣಿಕೆಯಲ್ಲಿ ನಿರತರಾಗಿರುವಂತೇ ಅಪರಾಧಿಗಳು.
ಜೀತಕ್ಕೊಳಪಟ್ಟ ಕೂಲಿಕಾರರನ್ನು ಬಿಡುಗಡೆಗೊಳಿಸಿ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ಒದಗಿಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಜಿಲ್ಲಾ ನ್ಯಾಯಾಧೀಶರುಗಳಿಗೆ ಸೂಕ್ತವಾದ ಆದೇಶಗಳನ್ನು ಕೊಟ್ಟಿದೆ. ಆದಾಗ್ಯೂ ಇನ್ನೂವರೆಗೆ ಯಾವುದೇ ನ್ಯಾಯಾಲಯ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಘಾತಕಾರಿ ವಿಚಾರ.

ಮಧ್ಯ ಪ್ರದೇಶದ ಸರಕಾರ ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ಮುಂದಾಳು ಬಿರ್ಸಾ ಅವರ ಜಯಂತಿ ಅಂಗವಾಗಿ 23 ಕೋಟಿ ಖರ್ಚು ಮಾಡಿ ಬುಡಕಟ್ಟು ವೀರರನ್ನು ಸ್ಮರಿಸಿದೆ. ಆದರೆ ಇದೇ ಸರಕಾರ ತನ್ನಲ್ಲಿರುವ ಅಪಾರ ಸಂಖ್ಯೆಯ ಬುಡಕಟ್ಟು ಜನರ ಹಸಿವು, ದೈನೇಸಿ ಸ್ಥಿತಿಯಲ್ಲಿ ಬದಲಾವಣೆ ತರಲು ಏನೂ ಮಾಡುತ್ತಿಲ್ಲ. ಪೊಲೀಸರು ಮತ್ತು ಆಡಳಿತದ ನಿಷ್ಕ್ರಿಯತೆ ಆದಿವಾಸಿಗಳಿಗೆ ಹೊಸದೇನೂ ಅಲ್ಲ. ನರ್ಮದಾ ಹೋರಾಟದ ದಿನಗಳಿಂದಲೂ ನೋಡುತ್ತಲೇ ಬರುತ್ತಿದ್ದೇವೆ ಅದನ್ನು. ಆದರೂ ಎದೆಗುಂದದ ಆದಿವಾಸಿಗಳು ತಮ್ಮ ಸಂಘಟನೆಯ ಮೂಲಕ ಅಕ್ರಮ ಗುತ್ತಿಗೆದಾರರನ್ನು ಜೈಲಿಗಟ್ಟುವ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ.
ಸರಕಾರ ಬೃಹತ್ ಅಣೆಕಟ್ಟು ಕಟ್ಟುತ್ತದೆ. ಆದಿವಾಸಿಗಳ ಜೀವನವನ್ನು ಮುಳುಗಿಸುತ್ತದೆ. ಜಲಾಶಯದಿಂದ ನೀರು ಹರಿಸಿ ಕಬ್ಬು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಮಂತ್ರಿ ಮಹೋದಯರುಗಳ ಸಕ್ಕರೆ ಕಾರ್ಖಾನೆಗಳೇಳುತ್ತವೆ. ಜೋಳ, ಗೋಧಿ, ಭತ್ತ ಬೆಳೆಗಳ ಜಾಗದಲ್ಲಿ ಎದ್ದು ನಿಂತ ಕಬ್ಬು. ಅತ್ತ ಭೂಮಿ ಕಳೆದುಕೊಂಡು, ಪುನರ್ವಸತಿ ಇಲ್ಲದೆಯೇ, ಉದ್ಯೋಗವೂ ಇಲ್ಲದೆಯೇ ಹಸಿವಿನಿಂದ ಕಂಗೆಟ್ಟುಹೋದ ಬುಡಕಟ್ಟು ಜನರು. ಅವರನ್ನು ಕೂಲಿಕಾರರನ್ನಾಗಿ ಬಳಸಿಕೊಳ್ಳಲು ಅದೇ ಫ್ಯಾಕ್ಟರಿಗಳಿಂದ ಅಕ್ರಮ ಗುತ್ತಿಗೆದಾರರು. ವೃತ್ತ ಪೂರ್ಣಗೊಂಡಿತಲ್ಲವೇ?

  • ಶಾರದಾ ಗೋಪಾಲ

(ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಆಹಾರದ ಹಕ್ಕಿಗಾಗಿ ಆಂದೋಲನ, ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.)


ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...