Homeಚಳವಳಿಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

ಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

- Advertisement -
- Advertisement -

| ಮಾರ್ಕಂಡೇಯ ಕಟ್ಜು |
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅಯೋಧ್ಯೆಯ ಈ ತೀರ್ಪೂ ಸಹ 1975ರ ಎಡಿಎಮ್ ಜಬಲ್‍ಪುರ ವರ್ಸಸ್ ಶಿವಕಾಂತ ಶುಕ್ಲ ತೀರ್ಪಿನ ಗುಂಪಿಗೇ ಸೇರಿಕೊಳ್ಳುತ್ತೆ. ಆದರೆ ಅಲ್ಲಿ ಒಂದು ವ್ಯತ್ಯಾಸವಿತ್ತು- ಅಯೋಧ್ಯೆಯ ತೀರ್ಪಿನಂತೆ ಆ ತೀರ್ಪು ಅವಿರೋಧವಾದ, ಭಿನ್ನಮತವಿಲ್ಲದ ತೀರ್ಪಾಗಿರಲಿಲ್ಲ.

ನ್ಯಾಯಾಲಯವು ಹೇಳಿದ್ದು ಸರಿಯೇ ಇರಬಹುದು. ಆದರೆ ಈ ತೀರ್ಪು ಆಕ್ರಮಣಶೀಲತೆಯನ್ನು ಪೋಷಿಸುವ ಒಂದು ಆತಂಕಕಾರಿ ಬೆಳವಣಿಗೆಯನ್ನು ಹುಟ್ಟುಹಾಕಿದೆ.

ಬಾಬರಿ ಮಸೀದಿಯನ್ನು ಒಂದು ಹಿಂದೂ ದೇವಾಲಯದ ಮೇಲೆ ಅಥವಾ ಅದನ್ನು ನಾಶಗೊಳಿಸಿ ಅದರ ಮೇಲೆ ಕಟ್ಟಲಾಗಿರಬಹುದೇ ಎನ್ನುವುದರ ಪರಿಶೀಲನೆಯ ಅವಶ್ಯಕತೆ ಇಲ್ಲ. ಹಿಂದೂ ದೇವಾಲಯಗಳನ್ನು ಮುಸ್ಲಿಮ್ ದಾಳಿಕೋರರು ಧ್ವಂಸಗೊಳಿಸಿದ್ದು ಹಾಗೂ ಆ ಜಾಗೆಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದು ಸುಳ್ಳಲ್ಲ. ಉದಾಹರಣೆಗೆ, ದೆಹಲಿಯ ಕುತುಬ್ ಮಿನಾರ್‍ದ ಬಳಿ ಇರುವ ಕುವ್ವತ್-ಉಲ್-ಇಸ್ಲಾಮ್ ಮಸೀದಿಯಲ್ಲಿ ಇರುವ ಕಂಬಗಳ ಮೇಲೆ ಹಿಂದು ಕೆತ್ತನೆಗಳಿವೆ ಅಥವಾ ವಾರಣಾಸಿಯಲ್ಲಿಯ ಗ್ಯಾನ್‍ವ್ಯಾಪಿ ಮಸೀದಿಯಲ್ಲೂ ಹಿಂದೂ ಕೆತ್ತನೆಗಳನ್ನು ಕಾಣಬಹುದು ಅಥವಾ ಜೌವನಪುರದ ಅಟಲಾ ದೇವಿ ಮಸೀದಿಯನ್ನು ನೋಡಿ. ಆದರೆ ಭಾರತ ಮುಂದುವರೆಯಬೇಕೆ ಅಥವಾ ಹಿಂದಕ್ಕೆ ಕಾಲನ್ನು ಹಾಕಬೇಕೇ?

ಒಂದು ಹಿಂದು ಮಂದಿರವನ್ನು ಇಂದು ಅಕ್ರಮವಾಗಿ ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಲಾಗಿದ್ದರೆ ಅದು ಬೇರೆ ಮಾತು. ಆದರೆ ಈಗ ಹೇಳಲಾಗುವ ಅಯೋಧ್ಯೆಯ ಘಟನೆ ಆಗಿರುವುದು 500 ವರ್ಷಗಳ ಹಿಂದೆ, ಹಾಗಿರುವಾಗ ಅಂತಹ ಕಟ್ಟಡವನ್ನು ಮರಳಿ ಹಿಂದೂ ಮಂದಿರವಾಗಿ ಮರುನಿರ್ಮಾಣ ಮಾಡುವುದರಲ್ಲಿ ಎಷ್ಟು ಅರ್ಥವಿದೆ? ಈ ರೀತಿಯ ಸೇಡಿನ ಪ್ರವೃತ್ತಿ, ವಿಶ್ವ ಹಿಂದೂ ಪರಿಷತ್‍ನ ಈ ಪ್ರತಿಪಾದನೆ ನಮ್ಮ ಸಮಾಜವನ್ನು ಧ್ರುವೀಕರಿಸುವುದನ್ನು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ; ಚುನಾವಣೆಯಲ್ಲಿ ಮತಗಳನ್ನು ಪಡೆಯಲೋಸುಗ ಕೋಮು ದಳ್ಳುರಿಯನ್ನು ಕಾಪಿಡಲು ಬಯಸುವ ಕೆಲವು ವ್ಯಕ್ತಿಗಳ ರಾಜಕೀಯ ಅಜೆಂಡಾಗೆ ಸಹಾಯವಾಗುವುದಷ್ಟೇ ಇದರಿಂದ ಆಗುತ್ತದೆ.

786 ಮತ್ತು 798 ಪ್ಯಾರಾಗಳಲ್ಲಿ ನ್ಯಾಯಾಲಯ ಹೇಳಿರುವುದು; 1528ರಲ್ಲಿ ನಿರ್ಮಾಣವಾದಾಗಿನಿಂದ 1857ರ ತನಕ ನಮಾಜ್ ಮಾಡುವವರ ಒಡೆತನದಲ್ಲಿ ಈ ಮಸೀದಿ ಇತ್ತು ಎಂದು ಹೇಳಲು ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ? ಆ ಕಾಲದ ಪ್ರತ್ಯಕ್ಷ ಸಾಕ್ಷಿಗಳನ್ನಂತೂ ಇಂದು ತರಲು ಸಾಧ್ಯವಿಲ್ಲ ಹಾಗೂ 1857ರ ಪ್ರಥಮ ಸ್ವಾತಂತ್ರ ಸಮರದಲ್ಲಿ ಅವಧ್‍ನ ಎಲ್ಲಾ ದಾಖಲೆಗಳು ಧ್ವಂಸಗೊಳಿಸಲಾಗಿತ್ತು. ಇರಲಿ, ಆರಾಧನೆಗಾಗಿ ಒಂದು ಮನೆಯನ್ನು ಕಟ್ಟಲಾಗಿದೆ ಎಂದರೆ, ಅದು ಮಂದಿರವೇ ಇರಲಿ ಅಥವಾ ಮಸೀದಿ ಅಥವಾ ಚರ್ಚು ಅಥವಾ ಗುರುದ್ವಾರವೇ ಆಗಿರಲಿ, ಅಲ್ಲಿ ಆರಾಧನೆ ಮಾಡುವ ಸಲುವಾಗಿಯೇ ಕಟ್ಟುತ್ತಾರೆಯೇ ಹೊರತು ಅಲಂಕಾರಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ತೀರ್ಪಿನ 798 ಪ್ಯಾರಾ ಹೀಗಿದೆ: ಮುಸ್ಲಿಮರನ್ನು ಆರಾಧನೆಯಿಂದ ಮತ್ತು ಒಡೆತನದಿಂದ ಹೊರಗಿಡುವುದು ನಡೆದದ್ದು 1949ರ ಡಿಸೆಂಬರ್ 22/23 ಮಧ್ಯದ ರಾತ್ರಿಯಲ್ಲಿ. ಆಗ ಮಸೀದಿಯನ್ನು ಅಪವಿತ್ರಗೊಳಿಸಿ ಹಿಂದೂ ವಿಗ್ರಹಗಳನ್ನು ಸ್ಥಾಪಿಸುವುದರ ಮೂಲಕ ಇದನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ಮುಸ್ಲಿಮ್‍ರನ್ನು ಹೊರಗಿಡುವ ಈ ಕ್ರಿಯೆಯನ್ನು ಯಾವುದೇ ಕಾನೂನಾತ್ಮಕ ಕ್ರಮದಿಂದ ಮಾಡಲಿಲ್ಲ. ಅದನ್ನು ಅವರ ಆರಾಧನೆಯ ಜಾಗೆಯಿಂದ ವಂಚಿತಗೊಳಿಸುವ ಲೆಕ್ಕಾಚಾರದ ಕ್ರಮದಿಂದ ಮಾಡಲಾಗಿತ್ತು.

ಇಂತಹ ಸ್ಪಷ್ಟವಾದ ತೀರ್ಮಾನದ ಹೊರತಾಗಿಯೂ, ನ್ಯಾಯಾಲಯವು ಒಂದು ಯಾವುದೋ ವಿಚಿತ್ರ ತರ್ಕದ ಆಧಾರದ ಮೇಲೆ ವಿವಾದಿತ ಜಾಗೆಯನ್ನು ಹಿಂದುಗಳಿಗೆ ಒಪ್ಪಿಸಿದೆ.

ಹಾಗಾಗಿ, ಅಯೋಧ್ಯೆಯ ತೀರ್ಪು ಕೋಮು ಸಾಮರಸ್ಯಕ್ಕೆ ಕಾರಣವಾಗಬಹುದು ಎನ್ನುವುದು ಮೂರ್ಖತನವಾದೀತು. ಯಾವುದೇ ತುಷ್ಟೀಕರಣವು, 1938ರ ಮೂನಿಕ್ ಒಪ್ಪಂದದಲ್ಲಿ ಆದಂತೆ, ಆಕ್ರಮಣಕಾರಿಯ ಹಸಿವನ್ನು ಹೆಚ್ಚಿಸುತ್ತದೆಯೇ ಹೊರತು, ತಣಿಸುವುದಿಲ್ಲ. “ಅಭಿ ತೋ ಯೆ ಝಾಂಕಿ ಹೈ, ಕಾಶಿ ಮಥುರಾ ಬಾಕಿ ಹೈ”. ಎನ್ನುವ ಘೋಷಣೆಗಳು 1992 ಡಿಸೆಂಬರ್ 6ರ ನಂತರ ಕೇಳಿಬಂದವು ಹಾಗೂ ಮತ್ತೆ ಕೇಳಿಬರಲು ಪ್ರಾರಂಭಿಸಿದರೆ ಆಶ್ಷರ್ಯವಿಲ್ಲ. ದೆಹಲಿಯ ಜಾಮಾ ಮಸ್ಜಿದ್ ಕಟ್ಟಿರುವುದು ಒಂದು ಹಿಂದೂ ಮಂದಿರದ ಮೇಲೆ ಹಾಗೂ ಅದನ್ನು ಮರುಪಡೆಯಬೇಕು ಎಂದು ಬಿಜೆಪಿಯ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ತಾಜ್‍ಮಹಲ್ ಬಗ್ಗೆಯೂ ಬಿಜೆಪಿಯ ಕೆಲವು ಇದೇ ರೀತಿ ಹೇಳಿದ್ದಾರೆ. ಇದು ಕೊನೆಗೊಳ್ಳುವುದು ಯಾವಾಗ?

ರಾಮ ಒಂದು ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿದ್ದು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ರಾಮನನ್ನು ಪೌರಾಣಿಕ ವ್ಯಕ್ತಿ ಅಲ್ಲ, ಅವನೊಬ್ಬ ಐತಿಹಾಸಿಕ ವ್ಯಕ್ತಿ ಎಂದು ಪರಿಗಣಿಸಿದರೂ ಸಾವಿರಾರು ವರ್ಷಗಳ ಮುಂಚೆ ಎಲ್ಲಿ ಹುಟ್ಟಿದ್ದು ಎಂದು ಹೇಗೆ ಹೇಳಬಲ್ಲರು?

ಭಾರತವು ಒಂದು ಭಯಾನಕ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಜಿಡಿಪಿ ಬೆಳವಣಿಗೆ ಕುಸಿದಿದೆ, ಉತ್ಪಾದನಾ ಕ್ಷೇತ್ರ ಕುಸಿದಿದೆ, ವ್ಯಾಪಾರ ಇಳಿಮುಖದಲ್ಲಿದೆ, ನಿರುದ್ಯೋಗದ ದರ ದಾಖಲೆ ಸೃಷ್ಟಿಸುತ್ತಿದೆ, (ಸರಕಾರಿ ದಾಖಲೆಗಳೇ ಇದನ್ನು ಹೇಳುತ್ತಿವೆ). ಮಕ್ಕಳ ಅಪೌಷ್ಟಿಕತೆಯ ಮಟ್ಟ ಭೀಕರವಾಗಿದೆ (ಜಾಗತಿಕ ಹಸಿವು ಸೂಚ್ಯಾಂಕದ ಅನುಗುಣವಾಗಿ, ಪ್ರತಿ ಎರಡನೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ.), 50% ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ, ಆರೋಗ್ಯ ಸೇವೆ ಮತ್ತು ಉತ್ತಮ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿವೆ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ನಮ್ಮ ನಾಯಕರಿಗೆ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿರುವುದು ಸ್ಪಷ್ಟ. ಹಾಗಾಗಿ, ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಹಲವು ಗಿಮಿಕ್ ಮಾಡಲಾಗುತ್ತಿದೆ.

ವಿಧ್ವಂಸಕ ರಾಜಕೀಯ ಶಕ್ತಿಗಳಿಂದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು 1947ರ ವಿಭಜನೆಯ ನಂತರದ ಅತ್ಯಂತ ದೊಡ್ಡ ದುರಂತ. ಅಯೋಧ್ಯೆಯ ತೀರ್ಪು ಸಹಾ ಮಸೀದಿಯನ್ನು ಧ್ವಂಸಗೊಳಿದ್ದು ಕಾನೂನುಬಾಹಿರ ಎಂದು ಹೇಳುತ್ತದೆ. ಆದರೆ ಅದೇ ಉಸಿರಿನಲ್ಲಿ ಆ ಘಟನೆಯನ್ನು ಪವಿತ್ರಗೊಳಿಸುವ ಕೆಲಸವನ್ನೂ ಮಾಡುತ್ತದೆ.

ಭಾಳ ಒಳ್ಳೆಯ ಕೆಲಸ ಮಾಡಿದ್ರಿ, ಮೈ ಲಾಡ್ರ್ಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...