Homeಚಳವಳಿಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

ಅಯೋಧ್ಯೆ ತೀರ್ಪು- ವಿಚಿತ್ರ ತರ್ಕದ ಆಧಾರ: ಮಾರ್ಕಂಡೇಯ ಕಟ್ಜು

- Advertisement -
- Advertisement -

| ಮಾರ್ಕಂಡೇಯ ಕಟ್ಜು |
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ

ಅಯೋಧ್ಯೆಯ ಈ ತೀರ್ಪೂ ಸಹ 1975ರ ಎಡಿಎಮ್ ಜಬಲ್‍ಪುರ ವರ್ಸಸ್ ಶಿವಕಾಂತ ಶುಕ್ಲ ತೀರ್ಪಿನ ಗುಂಪಿಗೇ ಸೇರಿಕೊಳ್ಳುತ್ತೆ. ಆದರೆ ಅಲ್ಲಿ ಒಂದು ವ್ಯತ್ಯಾಸವಿತ್ತು- ಅಯೋಧ್ಯೆಯ ತೀರ್ಪಿನಂತೆ ಆ ತೀರ್ಪು ಅವಿರೋಧವಾದ, ಭಿನ್ನಮತವಿಲ್ಲದ ತೀರ್ಪಾಗಿರಲಿಲ್ಲ.

ನ್ಯಾಯಾಲಯವು ಹೇಳಿದ್ದು ಸರಿಯೇ ಇರಬಹುದು. ಆದರೆ ಈ ತೀರ್ಪು ಆಕ್ರಮಣಶೀಲತೆಯನ್ನು ಪೋಷಿಸುವ ಒಂದು ಆತಂಕಕಾರಿ ಬೆಳವಣಿಗೆಯನ್ನು ಹುಟ್ಟುಹಾಕಿದೆ.

ಬಾಬರಿ ಮಸೀದಿಯನ್ನು ಒಂದು ಹಿಂದೂ ದೇವಾಲಯದ ಮೇಲೆ ಅಥವಾ ಅದನ್ನು ನಾಶಗೊಳಿಸಿ ಅದರ ಮೇಲೆ ಕಟ್ಟಲಾಗಿರಬಹುದೇ ಎನ್ನುವುದರ ಪರಿಶೀಲನೆಯ ಅವಶ್ಯಕತೆ ಇಲ್ಲ. ಹಿಂದೂ ದೇವಾಲಯಗಳನ್ನು ಮುಸ್ಲಿಮ್ ದಾಳಿಕೋರರು ಧ್ವಂಸಗೊಳಿಸಿದ್ದು ಹಾಗೂ ಆ ಜಾಗೆಗಳಲ್ಲಿ ಮಸೀದಿಗಳನ್ನು ನಿರ್ಮಿಸಿದ್ದು ಸುಳ್ಳಲ್ಲ. ಉದಾಹರಣೆಗೆ, ದೆಹಲಿಯ ಕುತುಬ್ ಮಿನಾರ್‍ದ ಬಳಿ ಇರುವ ಕುವ್ವತ್-ಉಲ್-ಇಸ್ಲಾಮ್ ಮಸೀದಿಯಲ್ಲಿ ಇರುವ ಕಂಬಗಳ ಮೇಲೆ ಹಿಂದು ಕೆತ್ತನೆಗಳಿವೆ ಅಥವಾ ವಾರಣಾಸಿಯಲ್ಲಿಯ ಗ್ಯಾನ್‍ವ್ಯಾಪಿ ಮಸೀದಿಯಲ್ಲೂ ಹಿಂದೂ ಕೆತ್ತನೆಗಳನ್ನು ಕಾಣಬಹುದು ಅಥವಾ ಜೌವನಪುರದ ಅಟಲಾ ದೇವಿ ಮಸೀದಿಯನ್ನು ನೋಡಿ. ಆದರೆ ಭಾರತ ಮುಂದುವರೆಯಬೇಕೆ ಅಥವಾ ಹಿಂದಕ್ಕೆ ಕಾಲನ್ನು ಹಾಕಬೇಕೇ?

ಒಂದು ಹಿಂದು ಮಂದಿರವನ್ನು ಇಂದು ಅಕ್ರಮವಾಗಿ ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ಕಟ್ಟಲಾಗಿದ್ದರೆ ಅದು ಬೇರೆ ಮಾತು. ಆದರೆ ಈಗ ಹೇಳಲಾಗುವ ಅಯೋಧ್ಯೆಯ ಘಟನೆ ಆಗಿರುವುದು 500 ವರ್ಷಗಳ ಹಿಂದೆ, ಹಾಗಿರುವಾಗ ಅಂತಹ ಕಟ್ಟಡವನ್ನು ಮರಳಿ ಹಿಂದೂ ಮಂದಿರವಾಗಿ ಮರುನಿರ್ಮಾಣ ಮಾಡುವುದರಲ್ಲಿ ಎಷ್ಟು ಅರ್ಥವಿದೆ? ಈ ರೀತಿಯ ಸೇಡಿನ ಪ್ರವೃತ್ತಿ, ವಿಶ್ವ ಹಿಂದೂ ಪರಿಷತ್‍ನ ಈ ಪ್ರತಿಪಾದನೆ ನಮ್ಮ ಸಮಾಜವನ್ನು ಧ್ರುವೀಕರಿಸುವುದನ್ನು ಬಿಟ್ಟರೆ ಮತ್ತೇನೂ ಮಾಡುವುದಿಲ್ಲ; ಚುನಾವಣೆಯಲ್ಲಿ ಮತಗಳನ್ನು ಪಡೆಯಲೋಸುಗ ಕೋಮು ದಳ್ಳುರಿಯನ್ನು ಕಾಪಿಡಲು ಬಯಸುವ ಕೆಲವು ವ್ಯಕ್ತಿಗಳ ರಾಜಕೀಯ ಅಜೆಂಡಾಗೆ ಸಹಾಯವಾಗುವುದಷ್ಟೇ ಇದರಿಂದ ಆಗುತ್ತದೆ.

786 ಮತ್ತು 798 ಪ್ಯಾರಾಗಳಲ್ಲಿ ನ್ಯಾಯಾಲಯ ಹೇಳಿರುವುದು; 1528ರಲ್ಲಿ ನಿರ್ಮಾಣವಾದಾಗಿನಿಂದ 1857ರ ತನಕ ನಮಾಜ್ ಮಾಡುವವರ ಒಡೆತನದಲ್ಲಿ ಈ ಮಸೀದಿ ಇತ್ತು ಎಂದು ಹೇಳಲು ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಆದರೆ ಇದನ್ನು ಸಾಧಿಸುವುದಾದರೂ ಹೇಗೆ? ಆ ಕಾಲದ ಪ್ರತ್ಯಕ್ಷ ಸಾಕ್ಷಿಗಳನ್ನಂತೂ ಇಂದು ತರಲು ಸಾಧ್ಯವಿಲ್ಲ ಹಾಗೂ 1857ರ ಪ್ರಥಮ ಸ್ವಾತಂತ್ರ ಸಮರದಲ್ಲಿ ಅವಧ್‍ನ ಎಲ್ಲಾ ದಾಖಲೆಗಳು ಧ್ವಂಸಗೊಳಿಸಲಾಗಿತ್ತು. ಇರಲಿ, ಆರಾಧನೆಗಾಗಿ ಒಂದು ಮನೆಯನ್ನು ಕಟ್ಟಲಾಗಿದೆ ಎಂದರೆ, ಅದು ಮಂದಿರವೇ ಇರಲಿ ಅಥವಾ ಮಸೀದಿ ಅಥವಾ ಚರ್ಚು ಅಥವಾ ಗುರುದ್ವಾರವೇ ಆಗಿರಲಿ, ಅಲ್ಲಿ ಆರಾಧನೆ ಮಾಡುವ ಸಲುವಾಗಿಯೇ ಕಟ್ಟುತ್ತಾರೆಯೇ ಹೊರತು ಅಲಂಕಾರಕ್ಕಾಗಿ ಅಲ್ಲ ಎನ್ನುವುದು ಸಾಮಾನ್ಯ ಜ್ಞಾನ.

ತೀರ್ಪಿನ 798 ಪ್ಯಾರಾ ಹೀಗಿದೆ: ಮುಸ್ಲಿಮರನ್ನು ಆರಾಧನೆಯಿಂದ ಮತ್ತು ಒಡೆತನದಿಂದ ಹೊರಗಿಡುವುದು ನಡೆದದ್ದು 1949ರ ಡಿಸೆಂಬರ್ 22/23 ಮಧ್ಯದ ರಾತ್ರಿಯಲ್ಲಿ. ಆಗ ಮಸೀದಿಯನ್ನು ಅಪವಿತ್ರಗೊಳಿಸಿ ಹಿಂದೂ ವಿಗ್ರಹಗಳನ್ನು ಸ್ಥಾಪಿಸುವುದರ ಮೂಲಕ ಇದನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ಮುಸ್ಲಿಮ್‍ರನ್ನು ಹೊರಗಿಡುವ ಈ ಕ್ರಿಯೆಯನ್ನು ಯಾವುದೇ ಕಾನೂನಾತ್ಮಕ ಕ್ರಮದಿಂದ ಮಾಡಲಿಲ್ಲ. ಅದನ್ನು ಅವರ ಆರಾಧನೆಯ ಜಾಗೆಯಿಂದ ವಂಚಿತಗೊಳಿಸುವ ಲೆಕ್ಕಾಚಾರದ ಕ್ರಮದಿಂದ ಮಾಡಲಾಗಿತ್ತು.

ಇಂತಹ ಸ್ಪಷ್ಟವಾದ ತೀರ್ಮಾನದ ಹೊರತಾಗಿಯೂ, ನ್ಯಾಯಾಲಯವು ಒಂದು ಯಾವುದೋ ವಿಚಿತ್ರ ತರ್ಕದ ಆಧಾರದ ಮೇಲೆ ವಿವಾದಿತ ಜಾಗೆಯನ್ನು ಹಿಂದುಗಳಿಗೆ ಒಪ್ಪಿಸಿದೆ.

ಹಾಗಾಗಿ, ಅಯೋಧ್ಯೆಯ ತೀರ್ಪು ಕೋಮು ಸಾಮರಸ್ಯಕ್ಕೆ ಕಾರಣವಾಗಬಹುದು ಎನ್ನುವುದು ಮೂರ್ಖತನವಾದೀತು. ಯಾವುದೇ ತುಷ್ಟೀಕರಣವು, 1938ರ ಮೂನಿಕ್ ಒಪ್ಪಂದದಲ್ಲಿ ಆದಂತೆ, ಆಕ್ರಮಣಕಾರಿಯ ಹಸಿವನ್ನು ಹೆಚ್ಚಿಸುತ್ತದೆಯೇ ಹೊರತು, ತಣಿಸುವುದಿಲ್ಲ. “ಅಭಿ ತೋ ಯೆ ಝಾಂಕಿ ಹೈ, ಕಾಶಿ ಮಥುರಾ ಬಾಕಿ ಹೈ”. ಎನ್ನುವ ಘೋಷಣೆಗಳು 1992 ಡಿಸೆಂಬರ್ 6ರ ನಂತರ ಕೇಳಿಬಂದವು ಹಾಗೂ ಮತ್ತೆ ಕೇಳಿಬರಲು ಪ್ರಾರಂಭಿಸಿದರೆ ಆಶ್ಷರ್ಯವಿಲ್ಲ. ದೆಹಲಿಯ ಜಾಮಾ ಮಸ್ಜಿದ್ ಕಟ್ಟಿರುವುದು ಒಂದು ಹಿಂದೂ ಮಂದಿರದ ಮೇಲೆ ಹಾಗೂ ಅದನ್ನು ಮರುಪಡೆಯಬೇಕು ಎಂದು ಬಿಜೆಪಿಯ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ತಾಜ್‍ಮಹಲ್ ಬಗ್ಗೆಯೂ ಬಿಜೆಪಿಯ ಕೆಲವು ಇದೇ ರೀತಿ ಹೇಳಿದ್ದಾರೆ. ಇದು ಕೊನೆಗೊಳ್ಳುವುದು ಯಾವಾಗ?

ರಾಮ ಒಂದು ನಿರ್ದಿಷ್ಟ ಸ್ಥಳದಲ್ಲಿ ಹುಟ್ಟಿದ್ದು ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ. ಒಂದು ವೇಳೆ ರಾಮನನ್ನು ಪೌರಾಣಿಕ ವ್ಯಕ್ತಿ ಅಲ್ಲ, ಅವನೊಬ್ಬ ಐತಿಹಾಸಿಕ ವ್ಯಕ್ತಿ ಎಂದು ಪರಿಗಣಿಸಿದರೂ ಸಾವಿರಾರು ವರ್ಷಗಳ ಮುಂಚೆ ಎಲ್ಲಿ ಹುಟ್ಟಿದ್ದು ಎಂದು ಹೇಗೆ ಹೇಳಬಲ್ಲರು?

ಭಾರತವು ಒಂದು ಭಯಾನಕ ಆರ್ಥಿಕ ಸಂಕಷ್ಟದಿಂದ ನಲುಗುತ್ತಿದೆ. ಜಿಡಿಪಿ ಬೆಳವಣಿಗೆ ಕುಸಿದಿದೆ, ಉತ್ಪಾದನಾ ಕ್ಷೇತ್ರ ಕುಸಿದಿದೆ, ವ್ಯಾಪಾರ ಇಳಿಮುಖದಲ್ಲಿದೆ, ನಿರುದ್ಯೋಗದ ದರ ದಾಖಲೆ ಸೃಷ್ಟಿಸುತ್ತಿದೆ, (ಸರಕಾರಿ ದಾಖಲೆಗಳೇ ಇದನ್ನು ಹೇಳುತ್ತಿವೆ). ಮಕ್ಕಳ ಅಪೌಷ್ಟಿಕತೆಯ ಮಟ್ಟ ಭೀಕರವಾಗಿದೆ (ಜಾಗತಿಕ ಹಸಿವು ಸೂಚ್ಯಾಂಕದ ಅನುಗುಣವಾಗಿ, ಪ್ರತಿ ಎರಡನೇ ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ.), 50% ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ರೈತರ ಆತ್ಮಹತ್ಯೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ, ಆರೋಗ್ಯ ಸೇವೆ ಮತ್ತು ಉತ್ತಮ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿವೆ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ.

ನಮ್ಮ ನಾಯಕರಿಗೆ ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಬಗ್ಗೆ ಯಾವುದೇ ಕಲ್ಪನೆ ಇಲ್ಲದಿರುವುದು ಸ್ಪಷ್ಟ. ಹಾಗಾಗಿ, ಇವುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಹಲವು ಗಿಮಿಕ್ ಮಾಡಲಾಗುತ್ತಿದೆ.

ವಿಧ್ವಂಸಕ ರಾಜಕೀಯ ಶಕ್ತಿಗಳಿಂದ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು 1947ರ ವಿಭಜನೆಯ ನಂತರದ ಅತ್ಯಂತ ದೊಡ್ಡ ದುರಂತ. ಅಯೋಧ್ಯೆಯ ತೀರ್ಪು ಸಹಾ ಮಸೀದಿಯನ್ನು ಧ್ವಂಸಗೊಳಿದ್ದು ಕಾನೂನುಬಾಹಿರ ಎಂದು ಹೇಳುತ್ತದೆ. ಆದರೆ ಅದೇ ಉಸಿರಿನಲ್ಲಿ ಆ ಘಟನೆಯನ್ನು ಪವಿತ್ರಗೊಳಿಸುವ ಕೆಲಸವನ್ನೂ ಮಾಡುತ್ತದೆ.

ಭಾಳ ಒಳ್ಳೆಯ ಕೆಲಸ ಮಾಡಿದ್ರಿ, ಮೈ ಲಾಡ್ರ್ಸ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...