Homeಮುಖಪುಟಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಅತ್ಮಕ್ಕೆ ಬರ ಬಿದ್ದ ಆಡಳಿತದಲ್ಲಿ ಕೊರೊನಾ ಜೊತೆ ಬದುಕುವುದಾ ಕಲಿಯಬೇಕು.

ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು.

- Advertisement -
- Advertisement -

ದೃಶ್ಯ -1
ಲಾಕ್ ಡೌನ್ ನಿಂದ ಕಂಗಾಲಾಗಿ ತಲೆ ಮೇಲೆ ಗಂಟು ಮೂಟೆ, ಹೆಗಲಲ್ಲಿ ನಿದ್ದೆಗೆ ಜಾರಿದ ಮಗುವನ್ನು ಕಟ್ಟಿಕೊಂಡು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕುಟುಂಬಗಳನ್ನು ಸಂದರ್ಶಿಸುವ ಬಿಬಿಸಿಯ ವರದಿಗಾರನೋರ್ವ ವಲಸಿಗನ ಬರಿಗಾಲ ಕಂಡು ತನ್ನ ಷೂ ಗಳನ್ನೆ ಕಳಚಿ ವಲಸಿಗನಿಗೆ ಹಾಕಿ ಕಳುಹಿಸುತ್ತಾನೆ.

ದೃಶ್ಯ-2
ಖ್ಯಾತ ಪತ್ರಕರ್ತೆ ಬರ್ಕಾದತ್ ಮಕ್ಕಳು – ಮರಿಗಳ ಜೊತೆ ವಲಸೆ ಹೊರಟ ತಾಯಿಯೊಬ್ಬಳನ್ನು ಸಂದರ್ಶಿಸುವಾಗ ನೋಡುಗರ ಕಣ್ಣು ನೀರಾಡದೆ ಇರದು.

ದೃಶ್ಯ-3
ಮುಂಬೈ -ನಾಸಿಕ ಹೆದ್ದಾರಿಯಲ್ಲಿ ಲಕ್ನೋಗೆ ಟೆಂಪೋ ದಲ್ಲಿ ಅನ್ನ ನೀರು ಇಲ್ಲದೆ ವಲಸೆ ಹೊರಟಿದ್ದ ಹತ್ತಾರು ಕುಟುಂಬಗಳನ್ನು ಸಂದರ್ಶಿಸುವ ಎನ್.ಡಿಟಿ.ವಿ ವರದಿಗಾರ ತನ್ನ ಬಳಿ ಇದ್ದ ಬಿಸ್ಕೇಟ್ ಪೊಟ್ಟಣಗಳನ್ನು ಕೊಟ್ಟು ಮುಂದೆ ಹೋಗಿ ವಾಪಾಸ್ ಬರುವಾಗ ಅದೇ ಹೆದ್ದಾರಿಯಲ್ಲಿ ಟೆಂಪೋ ಅಪಘಾತಕ್ಕೀಡಾಗಿ ಚಾಲಕ ಸಾವು ಕಂಡು ಹೆಂಡತಿ ಮಕ್ಕಳು, ಕಾರ್ಮಿಕರು ಗಾಯಗೊಂಡದ್ದನ್ನು ಕಾಣುತ್ತಾನೆ. ಯಾವೊಬ್ಬ ಪತ್ರಕರ್ತನಿಗೂ ತಮ್ಮ ವೃತ್ತಿ ಜೀವನದಲ್ಲಿ ಇಂತಹ ಸಂದರ್ಭ ಕಾಣುವ ದಿನಗಳು ಬರದಿರಲಿ ಎಂದು ಆದ್ರಃಗೊಳ್ಳುತ್ತಾನೆ.

ಲಾಕ್‌ಡೌನ್ ಕಾಲದಲ್ಲಿ ಇಂತಹ ಅನೇಕ ಘಟನೆಗಳು, ದುಃಖಗಳ ಮಡುವೇ ಹರಿದಿದೆ. ಕಂಡಿದ್ದು ಕೆಲವು ಮಾತ್ರ. ಇದಕ್ಕೆಲ್ಲಾ ಯಾರೂ ಹೊಣೆ ಎಂದು ಯಾರಾದರೂ ಯೋಚಿಸಿದ್ದೀರಾ?

ಕೊರೊನಾ ಸೋಂಕು ವಿರುದ್ದ ಹೋರಾಟದಲ್ಲಿ ಭಾರತ ಎಡವಿದ್ದು, ಕೊರೊನಾ ಸೋಂಕಿನಿಂದ ಬಾಧಿತರಾಗುವುದಕ್ಕಿಂತ ಅದರ ನಿರ್ಬಂಧ , ದಿಗ್ಬಂಧನಗಳಿಂದ ಜನ ನರಳಿದ್ದು, ಸಾವು ಕಂಡಿದ್ದೇ ಹೆಚ್ಚು. ಚೀನಾ, ಅಮೇರಿಕಾ, ಇಟಲಿಯಂತ ದೊಡ್ಡ ದೊಡ್ಡ ರಾಷ್ಟ್ರಗಳನ್ನು ಕೊರೊನಾ ಕಾಡಿದ್ದು ಕಣ್ಣ ಮುಂದೆ ಇರುವಾಗ ಅದನ್ನು ನಿರ್ಲಕ್ಷಿಸುವುದು ಭಾರತಕ್ಕೆ ಸಾಧ್ಯವೇ ಇಲ್ಲ ನಿಜ, ಆದರೆ ಎಚ್ಚೆತ್ತುಕೊಳ್ಳುವ ಕಾಲಕ್ಕೆ ಮೈಮರೆತು ಮೆರೆದಾಡಿದ್ದರಿಂದ ರೋಗಕ್ಕಿಂತ ಅದರ ನೆರಳಲ್ಲಿ ಸೃಷ್ಟಿಸಿದ ಭಯ (ಭಯೋತ್ಪಾದನೆ) ವೇ ಭೀಕರತೆಯಿಂದ ಕೂಡಿದೆ.

ನಲವತ್ತೈದು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಬಾಧಿತರ ಸಂಖ್ಯೆ ಇಂದಿಗೆ ಒಟ್ಟು 90,927 ಆಗಿದ್ದರೆ, 2872 ಜನ ಸಾವು ಕಂಡಿದ್ದಾರೆ. (ಸೋಂಕಿತರ ಸಂಖ್ಯೆ ಲಕ್ಷ ದಾಟುವತ್ತ ಸಾಗಿದೆ.) ಅಂದರೆ ಸುಮಾರು ಶೇ. 3ರಷ್ಟು ಜನ ಸೋಂಕಿನಿಂದ ಸಾವು ಕಂಡಿದ್ದಾರೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ಗುಣಮುಖರಾಗಿರುವುದನ್ನು ಗಮನಿಸಬೇಕು. ಸಾವು ಕಂಡವರಲ್ಲಿ ವೃದ್ದರೇ ಹೆಚ್ಚಾಗಿರುವುದರಿಂದ ಅದು ವಯೋಸಹಜ ಕಾರಣಗಳನ್ನು ಅವಲಂಬಿಸಿದೆ. ಈ ಪ್ರಮಾಣವನ್ನು ಅಮೇರಿಕಾಕ್ಕೆ ಹೋಲಿಸಿದಾಗ ಭಾರತದ ಸ್ಥಿತಿ ಅಷ್ಟೇನೂ ಭೀಕರವಾಗಿಲ್ಲ ಎಂಬುದು ಕಾಣುತ್ತದೆ. ಭಾರತದ ನೈಸರ್ಗಿಕ ವಾತಾವರಣ, ಇಲ್ಲಿನ ಜನರಲ್ಲಿನ ರೋಗನಿರೋಧಕ ಸಾಮರ್ಥ್ಯ ವೇ ದೊಡ್ಡಮಟ್ಟದ ಜೀವ ನಷ್ಟವನ್ನು ತಂದೊಡ್ಡುವಲ್ಲಿ ತಡೆಯೊಡ್ಡಿದೆ. ಜನವರಿ ತಿಂಗಳಲ್ಲೇ ಕೊರೊನಾ ಜಗತ್ತಿನಾದ್ಯಂತ ವಿಸ್ತರಗೊಳ್ಳುತ್ತಿರುವ ಸೂಚನೆಗಳು ಕಾಣತೊಡಗಿದ್ದರೂ ಭಾರತ ಅಮೇರಿಕಾದ ಅಧ್ಯಕ್ಷರನ್ನು ಕರೆದು ಕಳುಹಿಸುವ ಉತ್ಸಾಹದಲ್ಲಿ ಓಡಾಡತೊಡಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ಕರೆಗಳನ್ನು ಭಾರತ ಕಿರುಗಣ್ಣಿನಿಂದಲೂ ನೋಡಲಿಲ್ಲ. ರಾಹುಲ್‌ಗಾಂಧಿ ಯ ಎಚ್ಚರಿಕೆಯ ಟ್ವೀಟ್‌ನ್ನು ಎಂದಿನಂತೆ ಲೇವಡಿ ಮಾಡಿತು ಸರ್ಕಾರ. ಭಾರತದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ನಿದ್ದೆಗೆ ಜಾರಿತ್ತು.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಹೊತ್ತಿಗೆ ಕೊರೊನಾ ಸೋಂಕು ದೇಶದ ಮೂಲೆ ಮೂಲೆಗಳನ್ನು ತಲುಪಿ ಕೇಕೆ ಹಾಕುತ್ತಿತ್ತು. ಯಾವ ಪೂರ್ವ ಸಿದ್ದತೆಯೂ ಇಲ್ಲದೆ ದಿಢೀರನೆ ಘೋಷಿಸಿದ ಲಾಕ್ ಡೌನ್ ದೇಶದ ಜನರನ್ನು ಕೊರೊನಾ ಸೋಂಕಿಗಿಂತಲೂ ಭೀಕರವಾಗಿ ಭಾದಿಸಿಬಿಟ್ಟಿದೆ. ರೋಗದ ದ್ವಾರಬಾಗಿಲುಗಳಾದ ವಿಮಾನ ನಿಲ್ದಾಣಗಳನ್ನು ತೆರೆದಿಟ್ಟುಕೊಂಡು ಒಳಮನೆಯ ಕಿಟಕಿಗಳನ್ನು ಮುಚ್ಚಿಸಿ ಉಸಿರುಗಟ್ಟಿಸಿದಂತೆ ಆಗಿ ಹೋಯಿತು. ಜನರನ್ನು ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ದೂಡುವಲ್ಲಿ ಸರ್ಕಾರವೇ ಯಶಸ್ವಿಯಾಗಿದೆ.

ಕೋಟ್ಯಾಂತರ ವಲಸೆ ಕಾರ್ಮಿಕರ ಬದುಕು ಬರ್ಬರವಾಯಿತು, ಜನಸಾಮಾನ್ಯರು , ಮಧ್ಯಮ ವರ್ಗದವರು ಅನ್ನಕ್ಕಾಗಿ ಪರದಾಡುವಂತಾಯಿತು. ಒಂದು ಸರ್ಕಾರವೇ ಜನರನ್ನು ವ್ಯವಸ್ಥಿತವಾಗಿ ಬೀದಿಗೆ ನೂಕಿ ಹಸಿವಿಗೆ ಈಡು ಮಾಡುವ, ಆರ್ಥಿಕತೆಯನ್ನು ಪಾತಾಳಕ್ಕೆ ತುಳಿಯುವ ಹೊಣೆಗೇಡಿತವನ್ನು ಮಾಡಿ ಕೈಚೆಲ್ಲಿ ಕುಳಿತುಕೊಂಡಿತು. ಆಶ್ಚರ್ಯವೆಂದರೆ ಈ ದೇಶದ ಕಾರ್ಮಿಕ ಸಚಿವಾಲಯಕ್ಕೆ ತನ್ನ ದೇಶದಲ್ಲಿ ಎಷ್ಟು ಪ್ರಮಾಣದ ಕಾರ್ಮಿಕರಿದ್ದಾರೆ. ಅವರ ಹಕ್ಕು, ಸವಲತ್ತುಗಳೇನು? ಅದಕ್ಕಾಗಿ ಖಜಾನೆಯಲ್ಲಿ ಇರಬಹುದಾದ ಮೊತ್ತವೆಷ್ಟು,? ಒಂದು ಪಕ್ಷ ಕಾರ್ಮಿಕರ ಬದುಕಿಗೆ ದಿಢೀರನೆ ನಷ್ಟವೊಂದು ಒದಗಿ ಬಂದರೆ ಅವರಿಗಾಗಿ ಮಾಡಬಹುದಾದ ತಕ್ಷಣದ ಕ್ರಮಗಳೇನು ಎಂಬ ಯಾವ ಡಾಟಾವೂ ಇಲ್ಲದಿರುವುದು ಬೆಳಕಿಗೆ ಬಂತು. ಆರೋಗ್ಯ ಸಚಿವಾಲಯವೂ ಕೂಡ ಇಂತಹುದ್ದೆ ಸ್ಥಿತಿಯಲ್ಲಿರುವುದು ಜಗಜ್ಜಾಹೀರಾಯಿತು. ದಾರಿ ಹಿಡಿದು ಹೊರಟ 16 ಜನ ವಲಸೆ ಕಾರ್ಮಿಕರು ರೈಲಿಗೆ ಸಿಕ್ಕು ಸತ್ತದ್ದು, ಲಕ್ನೋದ ಹೆದ್ದಾರಿಯಲ್ಲಿ 24 ವಲಸೆ ಕಾರ್ಮಿಕರ ದೇಹಗಳು ನುಜ್ಜುಗುಜ್ಜಾಗಿ ಚೆಲ್ಲಾಡಿದ್ದು ಪ್ರಭುತ್ವ ಪ್ರಾಯೋಜಿತ ಕೊಲೆ ಎಂದು ಈ ದೇಶದ ಮಾಧ್ಯಮಗಳಿಗೆ ಅನಿಸಲೇ ಇಲ್ಲ. ಇದಕ್ಕೆ ಯಾರನ್ನೂ ಹೊಣೆ ಗಾರರನ್ನಾಗಿ ಮಾಡಲಿಲ್ಲ. ರಾಜೀನಾಮೆ ಕೇಳಲಿಲ್ಲ.! ಈ ದೇಶದ ಪ್ರಧಾನಿಯ 56 ಇಂಚು ಎದೆ ಕ್ಷಣಕಾಲವೂ ಕದಲಿಲ್ಲ. ಯಾವೊಬ್ಬ ಸಚಿವನೂ ನೈತಿಕ ಹೊಣೆ ಹೊರಲಿಲ್ಲ. ವಿಪಕ್ಷಗಳು ಹರತಾಳ ನಡೆಸಲಿಲ್ಲ. ಎಂತಹ ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬುದನ್ನು ಯೋಚಿಸಿ.

ಲಾಕ್ ಡೌನ್ ನಿಂದ ಕಂಗಾಲಾಗಿ ಬೀದಿಗಿಳಿದ ವಲಸೆ ಕಾರ್ಮಿಕರು, ಬಡಕುಟುಂಬಗಳು ಕೊರೊನಾ ಸೋಂಕು ನಿಂದ ಸಾಯುವ ಭೀತಿಗಿಂತ ಅಭದ್ರತೆ, ಹಸಿವಿನಿಂದ ಸಾಯುವ ಆತಂಕವನ್ನು ಹೊತ್ತು ದೇಶದ ಉದ್ದಗಲಕ್ಕೂ ಹೊರಟು ಬಿಟ್ಟಿದ್ದರು. ಸೋಂಕಿನಿಂದ ಸತ್ತವರಿಗಿಂತ ಇಂತಹ ಅಭದ್ರತೆ, ಹಸಿವಿನಿಂದ ಸತ್ತವರ ಪ್ರಮಾಣವೇ ಹೆಚ್ಚಾಗಿದೆ. ಇದಾವುದನ್ನೂ ಕಂಡೂ ಕಾಣದೆ ಇದ್ದ ಸರ್ಕಾರಗಳು ಸ್ಪೆಷಲ್ ಫ್ಲೈಟ್ ಗಳಲ್ಲಿ ತಮ್ಮ ತಮ್ಮ ಕುಟುಂಬಸ್ಥರುನ್ನು ಬಂಧು ಬಾಂಧವರನ್ನು ವಿದೇಶದಿಂದ ಸುರಕ್ಷಿತವಾಗಿ ಮನಗೆ ಕರೆಯಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು. ಜನರಿಗೆ ಅನ್ನಕ್ಕಿಂತ ಭಾಷಣಗಳನ್ನು ಉಣಿಸಿದ್ದೇ ಹೆಚ್ಚು. ದೇಶಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಬೇಕು, ಚಪ್ಪಾಳೆ ತಟ್ಟಿ, ಜಾಗಟೆ ಬಾರಿಸಿ, ಹೆಲಿಕಾಪ್ಟರ್ ಗಳಿಂದ ಹೂಮಳೆಗೆರೆಯಿರಿ ಎಂದು ದಿಕ್ಕು ತಪ್ಪಿಸಲಾಯಿತು. ಈ ಸದ್ದು-ಸಂಭ್ರಮಗಳ ಅಬ್ಬರದಲ್ಲಿ ದೇಶದುದ್ದಗಲಕ್ಕೂ ದಾರಿ ಹುಡುಕುತ್ತಾ ಹೊರಟ ಸುಮಾರು ಎರಡು ಕೋಟಿ ವಲಸೆ ಕಾರ್ಮಿಕರ ಹಸಿವಿನ ಆಕ್ರಂದನ, ಬರಿಗಾಲ ಸದ್ದುಗಳು ಜಗತ್ತಿಗೆ ತಿಳಿಯದಾಯಿತು. ಮಾಧ್ಯಮಗಳು ಚಪ್ಪಾಳೆ ತಟ್ಟುವುದನ್ನು, ಹೂಮಳೆಗೆರೆಯುವುದನ್ನು ಕೊಂಡಾಡುವಲ್ಲಿ ಮುಳುಗಿದವೆ ವಿನಃ ವಲಸೆ ಹೊರಟ ಜನರ ದುಃಖ, ದುಮ್ಮಾನಗಳಿಗೆ ಕ್ಯಾಮರಾ ಹಿಡಿಯಲಿಲ್ಲ. ಪೆನ್ನುಗಳು ತಹತಹಿಸಲಿಲ್ಲ.

ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ತಲುಪುತ್ತಿರುವ ಹೊತ್ತಿನಲ್ಲಿ ಇನ್ನೇನು ದೇಶ ನಾಶವಾಗಿಬಿಡುತ್ತದೆ. ಜನರೆಲ್ಲಾ ರೋಗಕ್ಕೆ ತುತ್ತಾಗಿ ಇಲ್ಲವಾಗಿಬಿಡುತ್ತಾರೆ ಎಂಬ ಪೋಬಿಯಾವನ್ನು ಬಿತ್ತಲಾಗುತ್ತಿದೆ. ಸೋಂಕು ಪೀಡಿತರಲ್ಲಿ ಶೇ. 50 ರಷ್ಟು ಜನ ರೋಗವನ್ನು ಎದುರಿಸಿ ಗುಣಮುಖರಾಗುತ್ತಿರುವ ಆಶಾದಾಯಕ ಬೆಳವಣಿಗೆಯನ್ನು ಜನರಿಗೆ ತಿಳಿಸುತ್ತಿಲ್ಲ. ಮದ್ದೇ ಇಲ್ಲದ ಈ ಸೋಂಕನ್ನು ಲಾಕ್ ಡೌನ್ ಎಂಬ ದಿಗ್ಬಂಧನಗಳಿಂದ ಕಟ್ಟಿಹಾಕುವುದಷ್ಟೇ ನಮಗೆ ಉಳಿದಿರುವ ದಾರಿ ಎಂದೇ ಭಾವಿಸಿರುವ ಮಾಧ್ಯಮಗಳು ಲಾಕ್ ಡೌನ್ ಎಂಬ ಅಸ್ತ್ರದಿಂದ ಭಾರತದೊಳಗಿನ ಬಡ ಭಾರತವನ್ನು ದಂಡಿಸಲು ಪ್ರಚೋದಿಸುತ್ತಿವೆ. ಜಾಗತೀಕರಣವನ್ನು ಹಾಸು ಹೊದ್ದು, ಉಣ್ಣುತ್ತಿರುವಾಗ ಈ ದೇಶದ ಪ್ರಧಾನಿ ಆತ್ಮ ನಿರ್ಭರ ಎಂಬ ಕಗ್ಗ ವಾಚನ ಮಾಡುತ್ತಿದ್ದಾರೆ.

ಜನತೆ ಈ ರೋಗದ ಜೊತೆ ಗುದ್ದಾಡುತ್ತಲೆ ಬದುಕಬೇಕೆಂಬ ಪರ‍್ಯಾಯ ಮಾರ್ಗಗಳನ್ನು ತೋರುವ, ಜನರಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕೊರೊನಾ ಬರುವುದಕ್ಕಿಂತಲೂ ಮೊದಲೇ ವಿಫಲತೆಯ ಸೋಂಕು ಹಿಡಿದು ಉಸಿರೆಳೆಯುತ್ತಿತ್ತು. ಈಗ ಎಲ್ಲಾ ಅಸಮರ್ಥತೆಯನ್ನು ಕೊರೊನಾ ತಲೆಗೆಕಟ್ಟಿ ತಲೆ ಉಳಿಸಿಕೊಳ್ಳುವ ಕೆಲಸ ನಡೆದಿದೆ. ಇತ್ತ ಜನತೆ ಕೊರೊನಾ ಫೋಬಿಯಾದಿಂದ ಹೊರಬಂದು ಕೊರೊನಾ ಜೊತೆಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.

(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವೈಯಕ್ತಿಕವಾದವುಗಳು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...