Homeಮುಖಪುಟಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಮಾಡಬೇಕಾದುದೇನು? ಆದರೆ ಮಾಡುತ್ತಿರುವುದೇನು?

- Advertisement -
- Advertisement -
  • ಅಶೋಕ್ ಗುಲಾತಿ, ಹರ್ಷವರ್ಧನ್
  • ಅನುವಾದ: ಟಿ.ಎಸ್‌ ವೇಣುಗೋಪಾಲ್‌

ಈರುಳ್ಳಿ ಬೆಲೆ ಏರುವುದನ್ನು ತಪ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಒಂದು ದೊಡ್ಡ ದುಸ್ವಪ್ನವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಹಿಂದೆ ಯುಪಿಎ ಸರ್ಕಾರವನ್ನು ಇದೇ ಕಾರಣಕ್ಕಾಗಿ ಟೀಕಿಸಿದ್ದ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಪ್ರಧಾನ ಮಂತ್ರಿಯವರು “ಈಗ ನಾವು ಈರುಳ್ಳಿಗಾಗಿಯೂ ಒಂದು ಲಾಕರ್ ತೆರೆಯಬೇಕು. ಅದರಲ್ಲಿ ಈರುಳ್ಳಿಯನ್ನು ಬೀಗ ಹಾಕಿ ಕಾಪಾಡಿಕೊಳ್ಳಬೇಕು . . . ಅತಿಥಿಗಳು ಬಂದಾಗ ಬರೀ ಅದರ ವಾಸನೆಯನ್ನು ಬಡಿಸಬೇಕು . .. ಈ ಯುಪಿಎ ಸರ್ಕಾರಕ್ಕೆ ಈರುಳ್ಳಿಯಿಲ್ಲದೆಯೇ ಕಣ್ಣೀರು ಬರಿಸುವ ಸಾಮರ್ಥ್ಯವಿದೆ. ಅವರು ಮಾಡಿರುವ ಪಾಪಗಳನ್ನು ನೋಡಿ. ಜೋಳ/ಗೋದಿ/ಬಾಜ್ರ ಇವುಗಳನ್ನು ಈರುಳ್ಳಿಯೊಂದಿಗೆ ತಿಂದು ಬದುಕುತ್ತಿದ್ದ ಭಾರತದ ಬಡವರಿಂದ ಈರುಳ್ಳಿಯನ್ನು ಕಸಿದುಕೊಂಡಿದೆ. ಅವರ ಅಧಿಕಾರವನ್ನು ಇಡೀ ಭಾರತದಿಂದ ನಿರ್ಮೂಲನ ಮಾಡಬೇಕಾಗಿದೆ.” ಈಗ ಅವರೇ ಅಧಿಕಾರದಲ್ಲಿದ್ದಾಗ ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಪ್ರಧಾನಿಯವರು ಮೌನವಾಗಿದ್ದಾರೆ.

ಇದರರ್ಥ ಇಷ್ಟೆ. ಬೇರೆಯವರನ್ನು ಟೀಕಿಸುವುದು ಸುಲಭ. ನೀತಿಗಳನ್ನು ರೂಪಿಸುವುದು ಕಷ್ಟದ ಕೆಲಸ. ಅದಕ್ಕೆ ವಿನಯ ಬೇಕು. ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಬೇಕಾದ ಸಂಪನ್ಮೂಲವನ್ನು ಕ್ರೋಡಿಕರಿಸಿಕೊಳ್ಳಬೇಕು. ಅನಂತರ ಅದಕ್ಕೆ ತಕ್ಕ ನೀತಿಯನ್ನು ಜಾರಿಗೊಳಿಸಬೇಕು. ಅದು ಬಾಳುವಂತಿರಬೇಕು.
ಅಂತಹ ನೀತಿ ರೂಪಿಸುವುದಕ್ಕೆ ಸಾಧ್ಯವಿದೆ. ಈರುಳ್ಳಿಗೆ ಸಂಬಂಧಿಸಿದ ಹಾಗೆ ಮತ್ತೆ ಇಂತಹ ಅನಾಹುತ ಆಗದ ಹಾಗೆ ಹೇಗೆ ನೋಡಿಕೊಳ್ಳಬಹುದು ಎಂಬುದನ್ನು ಚರ್ಚಿಸೋಣ.

ಈಗಿನ ಈರುಳ್ಳಿ ಬೆಲೆಯ ಏರಿಕೆಯನ್ನು ಊಹಿಸಬಹುದಿತ್ತು. ಕಳೆದ ಕೆಲವು ತಿಂಗಳುಗಳಲ್ಲಿ ಈರುಳ್ಳಿ ಬೆಲೆ ಹಿಡಿದ ದಾರಿಯನ್ನು ಗಮನಿಸೋಣ. ಸೆಪ್ಟೆಂಬರ್- ಅಕ್ಟೋಬರಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 50-60ರೂಪಾಯಿ ಆಯಿತು. ಸರ್ಕಾರ ಕನಿಷ್ಠ ರಫ್ತು ಬೆಲೆಯನ್ನು ವಿಧಿಸಿತು (ಎಂಇಪಿ), ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳ ಸಂಗ್ರಹದ ಮೇಲೆ ಮಿತಿಯನ್ನು ಹಾಕಿತು. ಅನಂತರ ಈರುಳ್ಳಿ ರಫ್ತನ್ನು ನಿಷೇದಿಸಿತು. ಆದರೆ ಈ ಕ್ರಮಗಳಿಂದ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆಗ ವ್ಯಾಪಾರಿಗಳ ಮೇಲೆ ವರಮಾನ ತೆರಿಗೆ ದಾಳಿಯನ್ನು ಕೂಡ ನಡೆಸಲಾಯಿತು. ನೀತಿಯನ್ನು ರೂಪಿಸುವಲ್ಲಿನ ದಿವಾಳಿತನವನ್ನು ಇದು ತೋರಿಸುತ್ತದೆ.

ಇಂತಹ ಪರಿಸ್ಥಿತಿ ವರ್ಷ ಬಿಟ್ಟು ವರ್ಷ ನಡೆಯುತ್ತಲೇ ಇದೆ. ಆದರೆ ನಾವು ಇದರಿಂದ ಕಲಿಯಲು ತಯಾರಿಲ್ಲ. ದಿವಂಗತ ಅರುಣ್ ಜೇಟ್ಲಿ “ಆಪರೇಷನ್ ಗ್ರೀನ್”ಗಾಗಿ 500 ಕೋಟಿ ರೂಪಾಯಿಗಳನ್ನು 2018ರ ಬಜೆಟ್ಟಿನಲ್ಲಿ ಘೋಷಿಸಿದರು. ಟೊಮೆಟೊ, ಈರುಳ್ಳಿ ಹಾಗೂ ಆಲೂಗೆಡ್ಡೆಯ ಬೆಲೆಗಳನ್ನು ಸ್ಥಿರಗೊಳಿಸುವ ಉದ್ದೇಶಕ್ಕಾಗಿ ಇದನ್ನು ಮಾಡಲಾಗಿತ್ತು. ಆಹಾರ ಸಂಸ್ಕರಣಾ ಮಂತ್ರಾಲಯ ಇದನ್ನು ಜಾರಿಗೊಳಿಸಬೇಕಾಗಿತ್ತು. ಆದರೆ ಈ ಹಣ ಇಲ್ಲಿಯವರಗೆ ಬಿಡುಗಡೆಯಾಗಿಲ್ಲ. ಮಂತ್ರಾಲಯದ ವೆಬ್ ಸೈಟ್ ನೋಡಿದರೆ ಇದು ಸ್ಪಷ್ಟವಾಗುತ್ತದೆ.
ಈಗಿನ ಈರುಳ್ಳಿ ಬೆಲೆ ಏರಿಕೆಯನ್ನು ಊಹಿಸಬಹುದಿತ್ತು. ತೋಟಗಾರಿಕಾ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಈರುಳ್ಳಿಯನ್ನು ಪ್ರಧಾನವಾಗಿ ಬೆಳೆಯುವ ರಾಜ್ಯಗಳಲ್ಲಿ (ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್ ಮತ್ತು ರಾಜಾಸ್ಥಾನ) ಈ ವರ್ಷ ಖಾರೀಫ್ ಇಳುವರಿ ಶೇಕಡ 7ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜು ಮಾಡಿತ್ತು. ಸೆಪ್ಟೆಂಬರ್/ಅಕ್ಟೋಬರಿನಲ್ಲಿ ಬಂದ ತೀವ್ರ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಶೇಕಡ 58ರಷ್ಟು, ಕರ್ನಾಟಕದಲ್ಲಿ ಶೇಕಡ 18ರಷ್ಟು, ಆಂಧ್ರದಲ್ಲಿ ಶೇಕಡ 2ರಷ್ಟು ಬೆಳೆಗಳು ನಾಶವಾದವು. ನಿರಂತರ ಮಳೆಯಿಂದಾಗಿ ಮಹಾರಾಷ್ಟ್ರದಲ್ಲಿ ಈರುಳ್ಳಿ ಕುಯಿಲು ನಿಧಾನವಾಯಿತು. ಸರ್ಕಾರ ನಿಧಾನವಾಗಿ ಎಚ್ಚರಗೊಂಡಿತು. ಎಂಎಂಟಿಸಿಗೆ ಒಂದು ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ನಿರ್ದೇಶಿಸಿತು. ಆಫ್ಗಾನಿಸ್ತಾನ, ಟರ್ಕಿ, ಮತ್ತು ಈಜಿಪ್ಟಿನಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಯಿತು. ಈರುಳ್ಳಿಯನ್ನು ಯಾವ ಬೆಲೆಯಲ್ಲಿ ಆಮದು ಮಾಡಿಕೊಂಡು ಭಾರತದ ಮಾರುಕಟ್ಟೆಯಲ್ಲಿ ಸುರಿಯಲಾಯಿತು ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ.

ಇಂಡಿಯಾ ಜಗತ್ತಿನಲ್ಲೇ ಈರುಳ್ಳಿ ರಫ್ತು ಮಾಡುವ ದೊಡ್ಡ ದೇಶ. ಭಾರತ ಪ್ರತಿವರ್ಷ ಎರಡು ಮಿಲಿಯನ್ ಮೆಟ್ರಿಕ್ ಟನ್ ರಫ್ತು ಮಾಡುತ್ತದೆ (ಚಿತ್ರ 2). ರಫ್ತನ್ನು ನಿಷೇಧಿಸುವ ಬದಲು ಆಮದಿಗೆ ಅವಕಾಶವನ್ನು ಮುಕ್ತವಾಗಿ ಇಟ್ಟುಕೊಂಡರೆ, ದೇಶದಲ್ಲಿ ಈರುಳ್ಳೆ ಬೆಲೆ ಸಿಕ್ಕಾಪಟ್ಟೆ ಏರಿದ ಸಂದರ್ಭದಲ್ಲಿ, ಖಾಸಗಿ ವ್ಯಾಪಾರಿಗಳು ಬೇಕಾದಾಗ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಬಹುದು. ಸರ್ಕಾರದ ನಿಧಾನದ ತೀರ್ಮಾನಕ್ಕೆ ಕಾಯಬೇಕಾಗಿಲ್ಲ. ಹೀಗೆ ಮಾಡುವುದರಿಂದ ಭಾರತ ರಫ್ತುದಾರನಾಗಿ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಅದರಿಂದ ರೈತರಿಗೆ ನಿರಂತರವಾಗಿ ಒಳ್ಳೆಯ ಬೆಲೆ ಸಿಗುತ್ತದೆ. ದಿಢೀರನೆ ರಫ್ತನ್ನು ನಿಷೇದಿಸುವುದು ರೈತ ವಿರೋಧಿ ಮಾತ್ರವಲ್ಲ ಅದು ನಿಜವಾಗಿ ಸರ್ಕಾರದ ನೀತಿಯ ವೈಫಲ್ಯವನ್ನು ತೋರಿಸುತ್ತದೆ. ಗ್ರಾಹಕರ ಆಸಕ್ತಿಯನ್ನು ಈಡೇರಿಸುವ ದೃಷ್ಟಿಯಿಂದ ಭಾರತ “ಆಪರೇಷನ್ ಗ್ರೀನ್” ಯೋಜನೆಗೆ ಸಂಬಂಧಿಸಿದಂತೆ ಸೂಕ್ತ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

ಹಾಗಾದರೆ ರೈತರ ಹಾಗೂ ಗ್ರಾಹಕರ ಆಸಕ್ತಿಯನ್ನು ಕಾಪಾಡುವುದಕ್ಕೆ ಏನು ಮಾಡಬೇಕು?
ಮೊದಲಿಗೆ ರಾಬಿ ಈರುಳ್ಳಿಯನ್ನು ಸಂಗ್ರಹಿಸಿಡುವುದಕ್ಕೆ ಬೃಹತ್ ಪ್ರಮಾಣದಲ್ಲಿ ಸೌಲಭ್ಯ ಕಲ್ಪಿಸಬೇಕು. ರೈತರು ಮತ್ತು ವ್ಯಾಪಾರಿಗಳ ಮಟ್ಟದಲ್ಲಿ ಇದು ನಡೆಯಬೇಕು. ಏಪ್ರಿಲ್ -ಮೇ ತಿಂಗಳಿನಲ್ಲಿ ಈರುಳ್ಳಿ ಬೆಲೆ ಕೆಜಿಗೆ 4-5 ರೂಪಾಯಿ ಇದ್ದಾಗ ಈರುಳ್ಳಿಯನ್ನು ಉದಾಹರಣೆಗೆ ಕೆಜಿಗೆ 10ರೂಪಾಯಿನಂತೆ ಕೊಂಡುಕೊಳ್ಳಬೇಕು. ಆಧುನಿಕ ಖಾಸಗೀ ಕ್ಷೇತ್ರದ ಗೋದಾಮುಗಳಲ್ಲಿ ಶೇಖರಿಸಿಡಬೇಕು. ಪದೇ ಪದೇ ಸಂಗ್ರಹಣೆಯ ಮಿತಿಯನ್ನು ಹೇರುವುದು ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸುವುದು ಇವೆಲ್ಲಾ ಆಧುನಿಕ ಶೀತಸಂಗ್ರಹದಲ್ಲಿ ಖಾಸಗಿಯವರಿಗೆ ಹಣ ಹೂಡುವ ಉತ್ಸಾಹವನ್ನು ಕುಂದಿಸುತ್ತದೆ. ಖಾಸಗಿ ಸಂಗ್ರಹವನ್ನು ಉತ್ತೇಜಿಸಬೇಕು. ಅದಕ್ಕಾಗಿ ಅವಶ್ಯಕ ಸರಕು ಕಾಯ್ದೆ ಹೋಗಬೇಕು. ವ್ಯಾಪಾರಿಗಳು ಒಂದಾಗಿ ಬೆಲೆನಿಯಂತ್ರಿಸುವುದನ್ನು ತಪ್ಪಿಸುವುದಕ್ಕೆ ಭಾರತೀಯ ಸ್ಪರ್ಧಾ ಸಮಿತಿ (ಕಾಂಪಿಟೇಷನ್ ಕಮೀಷನ್ ಆಪ್ ಇಂಡಿಯಾ) ಕಾರ್ಯೋನ್ಮುಖವಾಗಬೇಕು. ಆದಾಯ ತೆರಿಗೆ ಸಿಬ್ಬಂದಿಗಳು ಇದರಲ್ಲಿ ಕೈಹಾಕಬಾರದು.

ಎರಡನೆಯದಾಗಿ ಸರ್ಕಾರ ಒಣಗಿಸಿದ ಈರುಳ್ಳಿ (ಪುಡಿ, ಚೂರು ಇತ್ಯಾದಿ ರೂಪದಲ್ಲಿ) ಬಳಸುವುದಕ್ಕೆ ನಗರಗಳಲ್ಲಿ ಹಾಗೂ ದೊಡ್ಡ ಪ್ರಮಾಣದ ಬಳಕೆದಾರರನ್ನು (ಮಿಲಿಟರಿ, ಆಸ್ಪತ್ರೆ, ಹೋಟಿಲ್ ಇತ್ಯಾದಿಗಳಲ್ಲಿ) ಉತ್ತೇಜಿಸಬೇಕು. ಈರುಳ್ಳಿ ಸೂಕ್ಷ್ಮ ಸರಕಾದ್ದರಿಂದ ಸರ್ಕರ ಕೂಡ ಒಣಗಿದ ಈರುಳ್ಳಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನು ಹೆಚ್ಚು ಕಾಲ ಇಟ್ಟುಕೊಳ್ಳಬಹುದು. ಗುಜರಾತಿನ ಮಹುವಾ ಈಗಾಗಲೇ ಒಣಗಿಸಿದ ಈರುಳ್ಳಿಯ ದೊಡ್ಡ ಕೇಂದ್ರವಾಗಿದೆ. ನೂರಕ್ಕಿಂತ ಹೆಚ್ಚು ಘಟಕಗಳು ಅಲ್ಲಿ ಕೆಲಸಮಾಡುತ್ತಿವೆ. ಆದರೆ ಅದಕ್ಕೆ ಆಂತರರಾಷ್ಟ್ರೀಯ ಮಾರುಕಟ್ಟೆಯ ಕೊರತೆಯಿದೆ. ಸ್ಥಳೀಯವಾಗಿಯೂ ಬೇಡಿಕೆ ಇಲ್ಲ. ಹಾಗಾಗಿ ಕಳೆದ ವರ್ಷದ ಸಂಗ್ರಹವೇ ಇನ್ನೂ ಮಾರಾಟವಾಗದೇ ಹಾಗೇ ಉಳಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಜೈನ್ ಇರಿಗೇಷನ್ ಇಂದು ಭಾರತದಲ್ಲಿ ಅತಿದೊಡ್ಡ ಈರುಳ್ಳಿ ಒಣಗಿಸುವ ಕಂಪೆನಿಯಾಗಿದೆ. ರೈತರಿಗೆ ಕೊಡುವ ಬೆಲೆ ಬೀಜ ಹಾಕುವುದಕ್ಕಿಂತ ಮೊದಲೇ ನಿರ್ಧರಿತವಾಗಿರುತ್ತದೆ. ನಿರ್ಧಾರಿತ ಬೆಲೆಗಿಂತ ಮಾರುಕಟ್ಟೆಯ ಬೆಲೆ ಜಾಸ್ತಿಯಾದರೆ ರೈತರಿಗೆ ಮಾರುಕಟ್ಟೆ ಬೆಲೆಗಿಂತ 60 ಪೈಸೆ ಕಡಿಮೆಮಾಡಿಕೊಂಡು ಹಣ ಕೊಡಲಾಗುತ್ತದೆ. ಅಂತಹ ಒಪ್ಪಂದದ ಕೃಷಿ ಮಾದರಿ ಮಾರುಕಟ್ಟೆಯ ರಿಸ್ಕನ್ನು ಕಮ್ಮಿ ಮಾಡುತ್ತದೆ. ಇದನ್ನು ಹೆಚ್ಚು ವಿಸ್ತರಿಸಬೇಕಾದ ಅವಶ್ಯಕತೆಯಿದೆ.

ಮೂರನೆಯದಾಗಿ, ರೈತ-ಉತ್ಪಾದಕರ ಸಂಘಟನೆಯಲ್ಲಿ ಸಣ್ಣ ರೈತರನ್ನು ಸಂಘಟಿಸಬೇಕು ಮತ್ತು ಸಂಘಟಿತ ಚಿಲ್ಲರೆ ವ್ಯಾಪಾರಿಗಳು ಒಪ್ಪಂದದ ಬೇಸಾಯದ ಮೂಲಕ ನೇರವಾಗಿ ಕೊಳ್ಳಲು ಪ್ರೋತ್ಸಾಹಿಸಬೇಕು. ಮಂಡಿ ವ್ಯವಸ್ಥೆಯನ್ನು ಮೀರಿಕೊಳ್ಳುವುದಕ್ಕೆ ಸಾಧ್ಯವಾಗಬೇಕು. ಜೊತೆಗೆ ಈಗಿರುವ ಎಪಿಎಂಸಿ ಮಂಡಿಗಳ ಮೂಲಸೌಕರ್ಯವನ್ನು ಸಂಪೂರ್ಣ ಸುಧಾರಿಸಬೇಕು. ಇದರೊಂದಿಗೆ ಮಾರುಕಟ್ಟೆ ಸುಧಾರಣೆಯನ್ನು ತರಬೇಕು. ಮೋದಿ ಸರ್ಕಾರ ತನ್ನ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳಲ್ಲಿ ಎಪಿಎಂಸಿ ಸುಧಾರಣೆಯನ್ನು ಮಾಡುವುದಕ್ಕೆ ಇದ್ದ ಸೊಗಸಾದ ಅವಕಾಶವನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲ ಅಂತಹ ಅವಕಾಶಗಳು ದಿನದಿಂದ ದಿನಕ್ಕೆ ಕೈತಪ್ಪಿಹೋಗುತ್ತಿದೆ. ಅದು ಸಾಧ್ಯವಾಗದೆ ಎಲ್ಲವನ್ನೂ ಸೇರಿಸಿಕೊಂಡು ರಾಷ್ಟ್ರೀಯ ಮಾರುಕಟ್ಟೆಗಳನ್ನು ಸ್ಥಾಪಿಸುವ, ಬೆಲೆಗಳನ್ನು ಸ್ಥಿರಗೊಳಿಸುವುದಾಗಲಿ ಅಥವಾ ರೈತರಿಗೆ ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಸಾಧ್ಯತೆ ಕಡಿಮೆ. ಇನ್ನಾದರೂ ಈರುಳ್ಳಿ ದುಸ್ವಪ್ನದಿಂದ ಎಚ್ಚರಗೊಂಡು ಬಾಳಿಕೆಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಒಳ್ಳೆಯದು. ಯೋಚನೆ ಮಾಡದೆ ತಕ್ಷಣಕ್ಕೆ ತೆಗೆದುಕೊಳ್ಳುವ ಕ್ರಮಗಳಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ.

(ಈ ಲೇಖನವು ಮೊದಲ ಬಾರಿಗೆ ಡಿಸೆಂಬರ್ 23, 2019 ರಂದು “ಕೆಲವು ಈರುಳ್ಳಿ ಪಾಠಗಳು” ಎಂಬ ಶೀರ್ಷಿಕೆಯಡಿಯಲ್ಲಿ ಮುದ್ರಣ ಆವೃತ್ತಿಯಲ್ಲಿ ಪ್ರಕಟವಾಯಿತು. ಗುಲಾತಿ ಇನ್ಫೋಸಿಸ್ ಚೇರ್ ಪ್ರೊಫೆಸರ್ ಫಾರ್ ಅಗ್ರಿಕಲ್ಚರ್ ಮತ್ತು ಹರ್ಷವರ್ಧನ್ ಐಸಿಆರ್‌ಐಇಆರ್ ನಲ್ಲಿ ಸಲಹೆಗಾರರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...