Homeಮುಖಪುಟನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

ನಕ್ಕು ನಗಿಸುವ ಕಲೆ ಬಗ್ಗೆ ನಿಮಗೆ ಗೊತ್ತಾ? ಇದರಿಂದಾಗುವ ಪ್ರಯೋಜನಗಳು ಬಹಳ

- Advertisement -
- Advertisement -

ಜೀವನ ಕಲೆಗಳು: ಅಂಕಣ -30

ನಕ್ಕು ನಗಿಸುವ ಕಲೆ

ಇದೂ ಕಲಿಯುವಂತಹ ಕಲೆಯೇ ಎಂದು ನೀವು ಆಶ್ಚರ್ಯದಿಂದ ಕೇಳಬಹುದು. ಹೌದು, ಇದೂ ಸಹ ಕಲಿಯಬಹುದಾದಂತಹ ಜೀವನಾವಶ್ಯಕ ಕಲೆ. ನಕ್ಕು ನಗಿಸುವ ಕಲೆ (ಸೆನ್ಸ್ ಆಫ್ ಹ್ಯೂಮರ್) ಇಲ್ಲದ ಮಾನವ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ, ಹೆಚ್ಚು ಪ್ರಯೋಜನವಿಲ್ಲ. ಆದರೆ ನಾವು ಹೇಗೆ, ಏಕೆ ನಗುತ್ತೇವೆ ಮತ್ತು ಇತರರನ್ನು ನಗಿಸುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವದ ಪರೀಕ್ಷೆಯೂ ಆಗುತ್ತದೆ. ನಗುವುದರಿಂದ ಹಲವು ರೋಗಗಳೂ ಸಹ ತಾವಾಗಿಯೇ ಗುಣವಾಗುತ್ತವೆ ಎಂಬುದು ಹಲವರ ಅಭಿಪ್ರಾಯ.

ಇಂದಿನ ಜೀವನದಲ್ಲಿ ಹಾಸ್ಯರಸವನ್ನು ಆಸ್ವಾದಿಸುವ ಮುನ್ನ ನಿಮ್ಮ ಹಾಸ್ಯದಿಂದ ಅಥವಾ ಆಸ್ವಾದನೆಯಿಂದ ಇನ್ನೊಬ್ಬರಿಗೆ ಕಷ್ಟವಾಗುತ್ತಿದೆಯೇ ಇಲ್ಲವೇ ಎಂಬುದನ್ನು ಮೊದಲು ಅರಿಯಿರಿ.

·         ಮೊದಲು ನಿಮ್ಮ ಮುಖದಲ್ಲಿ ನಗುವಿರಲಿ, ಆದರೆ ನಿಮ್ಮ ಹಾಸ್ಯವನ್ನು ಹಂಚಿಕೊಳ್ಳುವಾಗ ಮಿಕ್ಕವರಿಗಿಂತ ನೀವೇ ಹೆಚ್ಚಾಗಿ/ಜೋರಾಗಿ ನಗಬೇಡಿ.

·         ಹಾಸ್ಯವನ್ನು ಹುಡುಕುವ ಪ್ರಯತ್ನ ಸತತವಾಗಿ ಮಾಡುತ್ತಿರಿ. ಹಾಸ್ಯ ಸಾಹಿತ್ಯ ಓದಿ, ಕಾಮೆಡಿ ಶೋ ನೋಡಿ.

·         ಯಾರಾದರೂ ನಿಮ್ಮನ್ನು ಕೋಪ ಬರುವಂತೆ ಮಾಡಿದಲ್ಲಿ, ಅವರಿಗೆ ನಿಮ್ಮ ಕೋಪದ ಶಕ್ತಿ ತೋರಿಸದೆ, ನಿಮ್ಮ ಹಾಸ್ಯದ ರುಚಿ ತೋರಿಸಿ.

·         ನಿಮ್ಮ ಜೀವನದ ಅತ್ಯಂತ ಹೀನಾಯಕರ (embarassing) ಕ್ಷಣದ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಿ. ಇದರಿಂದ ನಿಮ್ಮ ಮೇಲೆ ನೀವೇ ನಗುವುದನ್ನು ಕಲಿಯಬಹುದು.

·         ಇತರರು ನಿಮಗೆ ಹಾಸ್ಯ ಪ್ರಸಂಗ ತಿಳಿಸಿದಾಗ ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಮತ್ತು ನಗುವುದನ್ನು ಕಲಿಯಿರಿ.

ಹಾಸ್ಯ ಒಂದು ರೀತಿಯ ಸಮಾನತೆ ತರುವ ವ್ಯವಸ್ಥೆ. ನಮ್ಮನ್ನು ನಗಿಸುತ್ತಿರುವ ವ್ಯಕ್ತಿಯ ಮೇಲೆ ನಾವು ಸಹಜವಾಗಿ ಕೋಪ ಮಾಡಿಕೊಳ್ಳುವುದು ಕಷ್ಟ, ತನ್ನ ಚೇಷ್ಟೆಯಿಂದ ಅವಾಂತರ ಮಾಡಿದ ಮಗು ನಿಮ್ಮದೇ ಆಗಿರಬಹುದು. ಒಮ್ಮೆ ಅದರ ಹಿಂದಿರುವ ಹಾಸ್ಯವನ್ನು ಅರ್ಥ ಮಾಡಿಕೊಂಡರೆ, ನಾವೂ ಅವರೊಂದಿಗೆ ನಗಲು ಪ್ರಾರಂಭಿಸಬಹುದು. ಹೀಗೆ ಹಾಸ್ಯವನ್ನು ಹಂಚಿಕೊಳ್ಳುವುದರಿಂದ ಸ್ನೇಹವೂ, ಸೌಹಾರ್ದವೂ ಬೆಳೆಯುತ್ತದೆ.

ಹಾಸ್ಯ ಯಾರಿಗೆ ತಾನೇ ಇಷ್ಟವಾಗುದಿಲ್ಲ, ಚಿಕ್ಕ ಮಕ್ಕಳು ಕಾರ್ಟೂನ್ ಟಿವಿ ಮುಂದೆ ಮೈಮರೆತು ನೋಡುತ್ತ ಕುಳಿತಿರುವುದನ್ನು, ಮತ್ತೆ ಅದೇ ಸಮಯದಲ್ಲಿ, ತಾಯಿ ಅವರಿಗೆ ತಿಳಿಯದಂತೆಯೇ ಅವರಿಗೆ ಇಷ್ಟವಾಗದ ತಿನಿಸುಗಳನ್ನು ತಿನ್ನಿಸಿದರೂ, ತಿನ್ನುವ ದೃಶ್ಯವನ್ನು ಬಹುತೇಕ ಮನೆಗಳಲ್ಲಿ ಕಂಡಿದ್ದೇವೆ. ಆಗ ಅವರಿಗೆ ಇಷ್ಟವಾಗುವುದು ದೈಹಿಕ ಹಾಸ್ಯ, ಅಂದರೆ ಯಾರೋ ಜಾರಿ ಬೀಳುವುದು, ಬೀಳಿಸುವುದು, ಸೊಟ್ಟ ಮೂತಿಗಳನ್ನು ಮಾಡುವುದು, ಬೇರೆಯವರನ್ನು ಅಣಕಿಸುವುದು ಇತ್ಯಾದಿ. ಶಾಲೆಯ ಮಕ್ಕಳೂ ಸಹ ಸ್ವಲ್ಪ ದೊಡ್ಡವರಾದ ಮೇಲೆ, ಭಾಷೆಯ ಅಂಗವಾಗಿ, ನಗೆಹನಿ ಮುಂತಾದುದನ್ನು ಸಂಗ್ರಹಿಸುವ ಮತ್ತು ಸ್ನೇಹಿತರ ಜೊತೆ ಅದನ್ನು ಹಂಚಿಕೊಳ್ಳುವ ಕೆಲಸ ಪ್ರಾರಂಭಿಸುತ್ತಾರೆ. ಆದರೆ ಯಾವುದು ಚಿಕ್ಕಂದಿನಲ್ಲಿ ಹಾಸ್ಯ ಎಂದು ಅನಿಸುತ್ತಿತ್ತೋ ಅದು ದೊಡ್ಡವರಾದಂತೆ ಹಾಸ್ಯ ಎಂದು ಅನಿಸುವುದಿಲ್ಲ. ಹಾಗಾಗಿ ಭಾಷೆಯಲ್ಲಿ, ಸಾಹಿತ್ಯದಲ್ಲಿ, ಸನ್ನಿವೇಶದಲ್ಲಿ, ಸಿನಿಮಾ, ನಾಟಕ, ಟಿವಿ ಸೀರಿಯಲ್ ಇವುಗಳಲ್ಲಿ ಹಾಸ್ಯ ಹುಡುಕುವ ಕೆಲಸ ಮುಂದುವರೆಯುತ್ತದೆ.

ಹಾಸ್ಯ ಹೇಗಿರಬೇಕು? ಎಲ್ಲರೂ ಒಟ್ಟಾಗಿ ಕೂತು ಅದನ್ನು ಆಸ್ವಾದಿಸುವಂತಿರಬೇಕು. ಒಬ್ಬರಿಗೆ ಅಥವಾ ಕೆಲವರಿಗೆ ಹಿಂಸೆ ಕೊಡುವಂತಹ ಪ್ರಯತ್ನ ಹಾಸ್ಯವಲ್ಲ. ಒಬ್ಬರನ್ನು ಅಥವಾ ಒಂದು ಗುಂಪು/ಸಮುದಾಯವನ್ನು ಹೀಯಾಳಿಸುವುದು ಹಾಸ್ಯವಲ್ಲ. ಇನ್ನೊಬ್ಬರ ದೈಹಿಕ ನ್ಯೂನತೆಯನ್ನು ಅಣಕಿಸುವುದು, ಅದರ ಮೇಲೆ ಟೀಕೆ ಟಿಪ್ಪಣಿ ಮಾಡುವುದು ಹಾಸ್ಯವಲ್ಲ.ಅದರ ಸೃಷ್ಟಿ ಹೇಗೆ ಮತ್ತು ಏಕೆ ಆಗಿದೆ ಎಂಬುದರ ಮೇಲೆಯೂ ಹಾಸ್ಯದ ಗುಣಮಟ್ಟ ನಿರ್ಧಾರವಾಗುತ್ತದೆ. ಎಲ್ಲಾ ಹಾಸ್ಯವೂ ಜನರು ಗಹಗಹಿಸಿ ನಗುವಂತಹ ರೀತಿಯದ್ದಾಗಿರಬೇಕಿಲ್ಲ. ಬಿಗುಪಿನ ವಾತಾವರಣವನ್ನು ತಿಳಿಗೊಳಿಸುವ ಮಂದಹಾಸ್ಯವೂ ಪ್ರಯೋಜನಕಾರಿ. ಒಬ್ಬರ ಅಥವಾ ಒಂದು ವ್ಯವಸ್ಥೆಯ ದೌರ್ಬಲ್ಯವನ್ನು ಹಾಸ್ಯದ ಮೂಲಕ ತೋರಿಸಿ, ಅದನ್ನು ಸರಿಪಡಿಸುವ ಅಥವಾ ಇತರರಿಗೆ ತಿಳಿಸುವ ಪ್ರಯತ್ನದಲ್ಲಿ ಹಾಸ್ಯ ಮಾಧ್ಯಮವಾದಲ್ಲಿ ಅದಕ್ಕೆ ಬೆಲೆ ಇರುತ್ತದೆ.

ಸಿಟ್ಟಿನಿಂದ ಅಥವಾ ಗಂಭೀರವಾಗಿ ಮಾಡಿದ ವಿಮರ್ಶಾತ್ಮಕ ಟೀಕೆಗಿಂತಲೂ ಹಾಸ್ಯದಿಂದ ಮಾಡಿದ ಟೀಕೆ ಎದುರಾಳಿಯ ಗಂಟಲಿಗೆ ಸಿಕ್ಕಿಕೊಳ್ಳದೆ ಸಲೀಸಾಗಿ ಮನಸ್ಸಿಗೆ ಇಳಿಯುತ್ತದೆ. ಸಂವಹನದಲ್ಲಿ ಕಷ್ಟಕರ ಸಂದೇಶವನ್ನು ಸಮರ್ಪಕವಾಗಿ  ತಲುಪಿಸಲು ಹಾಸ್ಯ ಸಹಕಾರಿಯಾಗುತ್ತದೆ. ಹಾಸ್ಯ ಅವಮಾನ ಅಥವಾ ಅವಹೇಳನಕಾರಿಯಾಗಿರಬಾರದು.

ಹಾಸ್ಯದಲ್ಲಿ ಸನ್ನಿವೇಶ ಮುಖ್ಯ ಪಾತ್ರ ವಹಿಸುತ್ತದೆ. ಒಂದೇ ತರಹದ ಹಾಸ್ಯ ಎಲ್ಲಾ ಸನ್ನಿವೇಶದಲ್ಲೂ ಸರಿಹೊಂದುವುದಿಲ್ಲ. ನಿಮ್ಮ ಹಾಸ್ಯದ ಗುರಿ ಯಾರು? ಇದರಿಂದ ಕೇಳುವವರಲ್ಲಿ ಯಾವ ಭಾವನೆ ಜಾಗೃತವಾಗುತ್ತದೆ ಮತ್ತು ಅದು ಇಲ್ಲಿ ಕೇಳಿಸಿಕೊಳ್ಳುತ್ತಿರುವ ಗುಂಪಿಗೆ ಸೂಕ್ತವೇ? ಇದೇ ಹಾಸ್ಯ ಮುಂದೆ ಬೇರೆಯವರಿಗೆ ತಲುಪಿದರೆ ಅದರ ಪರಿಣಾಮ ಏನು? ಹಾಸ್ಯಕ್ಕೆ ಇದು ಸರಿಯಾದ ಸಮಯವೇ? ಇವುಗಳನ್ನು ಪರಿಗಣಿಸಿನಿಮ್ಮ ಹಾಸ್ಯದ ಬತ್ತಳಿಕೆಯನ್ನು ಬಿಚ್ಚಿ. ಅಕಸ್ಮಾತ್ ನಿಮ್ಮ ಹಾಸ್ಯದ ಪ್ರಯತ್ನ ಸರಿಹೋಗಲಿಲ್ಲವೆಂದರೆ ಕೂಡಲೇ ಪರಿಸ್ಥಿತಿಯನ್ನು ನಿಯಂತ್ರಿಸಿ. ಯಾರಿಗೆ ಅದರಿಂದ ನೋವಾಗಿದೆಯೋ ಅವರ ಕ್ಷಮೆ ಕೋರಿ.

ನಮ್ಮ ಸೋದರಮಾವ ಅರವತ್ತರ ದಶಕದಲ್ಲಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾರತ-ಚೀನ ಯುದ್ಧದ ನಂತರದ ರೇಷನ್ ಕಾಲ. ಇನ್ನೂ ಮದುವೆಯಾಗದ ಮಾವನ ರೇಷನ್ ಕಾರ್ಡಿನಲ್ಲಿದ್ದುದು ಒಂದೇ ಹೆಸರು. ಕಾಫಿ ಮಾತ್ರ ಮನೆಯಲ್ಲಿ ಮಾಡಿಕೊಂಡು ಊಟಕ್ಕೆ ಖಾನಾವಳಿ ಆಶ್ರಯಿಸಿದ್ದರು. ಸಕ್ಕರೆ ಹೊರಗೆ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಾಗಿರಲಿಲ್ಲ. ಒಬ್ಬರಿಗೆ ಒಂದು ತಿಂಗಳಿಗೆ ಕೇವಲ ಒಂದು ಪೌಂಡ್ (454 ಗ್ರಾಂ) ಸಕ್ಕರೆ ಸಿಗುತ್ತಿತ್ತು. ಅದನ್ನು ಪ್ರತಿ ವಾರ ಪಡಿತರ ಅಂಗಡಿಯ ಸರದಿಯಲ್ಲಿ ನಿಂತು, ಕಾಯ್ದು ತರಬೇಕಿತ್ತು. ಇವರ ಸರದಿ ಬಂದಾಗ ಕೇವಲ ಸಕ್ಕರೆ ಎಂದಿದ್ದು ನೋಡಿ, ಅಂಗಡಿಯವನು ಲೆಕ್ಕ ಹಾಕಿ ಇವರ ಪಾಲಿನ ಸಕ್ಕರೆಯನ್ನು ಕಾಗದದ ಪೊಟ್ಟಣದಲ್ಲಿ ಕಟ್ಟುವ ಮುನ್ನ ಕೇಳಿದ “ಇದನ್ನು ಇಲ್ಲೇ ತಿನ್ನುತ್ತೀರೋ ಅಥವಾ ಮನೆಗೆ ಒಯ್ಯುತ್ತೀರೋ” ಎಂದು ಕೇಳಿದನಂತೆ. ಏಕೆಂದರೆ ಅವರಿಗೆ ಸಿಗುತ್ತಿದ್ದದ್ದು ಕೇವಲ 113 ಗ್ರಾಂ ಸಕ್ಕರೆ. ಅದನ್ನು ಮಾವ ಒಂದು ವಾರಕ್ಕೆ ಸಾಕಾಗುವಂತೆ ನಿರ್ವಹಣೆ ಮಾಡಿಕೊಳ್ಳಬೇಕಾಗಿತ್ತು. ಇದರಲ್ಲಿ ಹಾಸ್ಯ ಎಲ್ಲಿದೆ ಎಂದು ಕೆಲವರಿಗೆ ಅನಿಸಬಹುದು.

ಹಾಸ್ಯ ಎಲ್ಲೆಡೆ ಹರಡಿರುತ್ತದೆ. ಅದನ್ನು ಸರಿಯಾಗಿ ಹೆಕ್ಕಿ, ತೊಳೆದು, ಸರಿಯಾದ ಸ್ಥಳದಲ್ಲಿ ಮಿಂಚುವಂತೆ ಪ್ರದರ್ಶಿಸಿದರೆ ಅದು ನಗೆ ಹನಿಯಾಗುತ್ತದೆ. ಹೆಚ್ಚಿನ ಅಳತೆಯಲ್ಲಿದ್ದರೆ ನಗೆಯ ಹೊಳೆಯಾಗುತ್ತದೆ. ನಮ್ಮ ದಿನನಿತ್ಯದ ಜೀವನದಲ್ಲಿ ಅನೇಕ ಸ್ವಾರಸ್ಯಕರ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವನ್ನು ಅಷ್ಟೇ ರೋಚಕವಾಗಿ ಇನ್ನೊಬ್ಬರಿಗೆ ಬಣ್ಣಿಸುವುದೇ ಓರ್ವ ಹಾಸ್ಯ ಕಲಾವಿದನ ಸಾಮರ್ಥ್ಯ. ಎಲ್ಲರೂ ಹಾಸ್ಯ ಕಲಾವಿದರಾಗಬೇಕಿಲ್ಲ, ಹಾಸ್ಯವನ್ನು ಗುರುತಿಸಿ, ಸವಿದು ಇತರರೊಂದಿಗೆ ಹಂಚಿಕೊಂಡರೆ ಸಾಕು.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...