Homeಎಲೆಮರೆಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

- Advertisement -
- Advertisement -

ತೆಲಂಗಾಣದಿಂದ 27 ಕಿಮೀ ದೂರದ ಸೇಡಂ ತಾಲೂಕಿನ ತೆಲುಗು ಭಾಷಿಕರೇ ಹೆಚ್ಚಿರುವ ಜಾಕನಪಲ್ಲಿ ಎಂಬ ಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ತನ್ನೂರ ದೊಡ್ಡಾಟ ಶೈಲಿಯ `ಬಲಲಲ ಬಲಿಯೇ’ ನಾಟಕ ಪ್ರದರ್ಶಿಸಿ ತೃತೀಯ ಬಹುಮಾನ ಪಡೆಯುತ್ತಾರೆ. `ಮಣ್ಣು ರೈತನ ಕಣ್ಣು’ ಎನ್ನುವ ನಾಟಕವನ್ನು ಮೈಸೂರು ಜಿಲ್ಲೆ ಹೆಗ್ಗಡದೇವನ ಕೋಟೆ ತಾಲೂಕಿನ ಹೊಸಳ್ಳಿ ಗ್ರಾಮವನ್ನು ಒಳಗೊಂಡಂತೆ, ಹೆಗ್ಗೋಡು, ಬೆಂಗಳೂರು, ಬಿಜಾಪುರ, ಚಿತ್ರದುರ್ಗದಲ್ಲಿ ಅಭಿನಯಿಸಿ ಬೆರಗು ಮೂಡಿಸುತ್ತಾರೆ. ಹೀಗೆ ಕರ್ನಾಟಕದ ಅಂಚಿನ ಹಳ್ಳಿಯೊಂದರ ಮಕ್ಕಳು ರಾಜ್ಯದ ಇನ್ನೊಂದು ಅಂಚನ್ನು ತಲುಪಿ ನಾಟಕ ಪ್ರದರ್ಶನ ಮಾಡುವಂತೆ ಮಕ್ಕಳನ್ನು ರೂಪಿಸಿದವರು ರಂಗ ಶಿಕ್ಷಕ ಅಶೋಕ ತೋಟ್ನಳ್ಳಿ.

ಚಿತ್ತಾಪುರ ತಾಲೂಕಿನ ಗದ್ದಿಗೆ ಅಳ್ಳೊಳ್ಳಿ ಎನ್ನುವ ಗ್ರಾಮದ ಅಶೋಕ್ ಅವರು ಪದವಿ ನಂತರ ಶರಣಬಸವೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಎಂ.ಎ ಫೈನ್ ಆರ್ಟ್ಸ ಮುಗಿಸಿ,2006-07ರಲ್ಲಿ ನೀನಾಸಂನಲ್ಲಿ ನಾಟಕ ಡಿಪ್ಲೊಮಾ ಮಾಡುತ್ತಾರೆ. 2008ಅಕ್ಟೋಬರ್ 30ಕ್ಕೆ ನಾಟಕ ಶಿಕ್ಷಕರಾಗಿ ಜಾಕನಪಲ್ಲಿಯ ಪ್ರೌಢಶಾಲೆಗೆ ಬರುತ್ತಾರೆ.

ಜಡಗೊಂಡಿದ್ದ ಶಾಲೆಯನ್ನು ತನ್ನೊಳಗಿನ ಕ್ರಿಯಾಶೀಲ ‘ಕಲಾವಿದ’ನ ನೆರವಿಂದ ನಿಧಾನಕ್ಕೆ ಜೀವಂತಗೊಳಿಸಲು ಶುರುಮಾಡುತ್ತಾರೆ. ಶಾಲೆಯ ಕಡೆಗೆ ಊರಿನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 2009 ರಲ್ಲಿ ‘ಹಮದ ಮೊಚಿ’ ನಾಟಕವನ್ನು ಒಳಗೊಂಡಂತೆ ಗಡಿನಾಡ ಸಮ್ಮೇಳನದಲ್ಲಿ ಮಕ್ಕಳಿಂದ ಮೂರು ನಾಟಕಗಳನ್ನು ಮಾಡಿಸಿ ಗಮನ ಸೆಳೆಯುತ್ತಾರೆ. ಆಗ ಶಾಲೆಯ ಚಟುವಟಿಕೆಯ ಜೊತೆ ಊರನ್ನು ಬೆಸೆಯಲು ೨೦೧೦ ರಲ್ಲಿ `ತಿಂಗಳ ಸಂಜೆ’ ಎನ್ನುವ ವೇದಿಕೆಯೊಂದನ್ನು ಹುಟ್ಟುಹಾಕುತ್ತಾರೆ. ಇದರ ಚಟುವಟಿಕೆಗಳಿಗೆ ಪೂರಕವಾಗಿ ಶಾಲೆಯಲ್ಲಿ `ನಾನು-ನನ್ನೂರು’ ಎನ್ನುವ ಮಕ್ಕಳ ವೇದಿಕೆಯನ್ನು ಶುರುಮಾಡುತ್ತಾರೆ. ತಿಂಗಳು ಪೂರ್ತಿ ಕಲಿತ ಮಕ್ಕಳ ನಾಟಕ, ಅಭಿನಯಗಳು ಈ ತಿಂಗಳ ಸಂಜೆಯಲ್ಲಿ ಪ್ರದರ್ಶನವಾಗುವಂತೆಯೂ, ಹಳ್ಳಿಯ ಜನರೆಲ್ಲರೂ ಈ ಸಂಜೆಯಲ್ಲಿ ತಮ್ಮದೇ ಮಕ್ಕಳ ಅಭಿನಯವನ್ನು ಸವಿಯುವಂತೆ ಮಾಡಲಾಗುತ್ತದೆ.

ನಂತರ ಊರಿನ ಹಿರಿಯರಲ್ಲಿರುವ ಜನಪದ ಕಲೆಯನ್ನು ಶಾಲೆಯ ಮಕ್ಕಳಲ್ಲಿ ಕಸಿ ಮಾಡುವ ಪ್ರಯತ್ನ ಶುರುಮಾಡುತ್ತಾರೆ. ಜಾಕನಪಲ್ಲಿಯಲ್ಲಿ ಮರೆವಿಗೆ ಸರಿದಿದ್ದ ದೊಡ್ಡಾಟಕ್ಕೆ ಜೀವ ತುಂಬುತ್ತಾರೆ. ಊರಲ್ಲಿನ ದೊಡ್ಡಾಟದ ಕಲಾವಿದರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ತರಬೇತಿ ಕೊಡಿಸುತ್ತಾರೆ. ಅಜ್ಜ ಅಜ್ಜಿಯರ ಕರೆಸಿ ಜನಪದ ಕಥೆಗಳನ್ನು ಹೇಳಿಸುತ್ತಾರೆ. ಇದಕ್ಕೆ ಬೆಂಗಳೂರಿನ ಫೋಕ್ ಆರ್ಟ್ ಫೌಂಡೇಷನ್ ಕಲಿ-ಕಲಿಸು ಯೋಜನೆಯಡಿಯಲ್ಲಿ ಸಹಾಯ ಮಾಡುತ್ತದೆ. ಹೀಗೆ ನಿಧಾನಕ್ಕೆ ಶಾಲೆಗೆ ಸರಕಾರ ನೇಮಿಸಿದ ಶಿಕ್ಷಕರಲ್ಲದೆ ಊರಿನ ಹಿರಿಯ ಕಲಾವಿದರೂ ಶಿಕ್ಷಕರಾಗಿ ರೂಪಾಂತರ ಹೊಂದುತ್ತಾರೆ.

ಈಚಿನ `ಒಂದು ರಾತ್ರಿ’ ನಾಟಕವನ್ನು ಒಳಗೊಂಡಂತೆ ಮಕ್ಕಳಿಗಾಗಿ ಅಶೋಕ್ ಈ ತನಕ 28 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶಾಲಾ ಪಠ್ಯಗಳಲ್ಲಿ ಕೆಲವನ್ನು ಆಶು ಅಭಿನಯವಾಗಿ ರೂಪಾಂತರಗೊಳಿಸುತ್ತಾರೆ. ಶಿಲ್ಪ ಮತ್ತು ಚಿತ್ರ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿ, ಸಾಂಜಿ ಕಲೆಯ ಕಾರ್ಯಾಗಾರ ನಡೆಸಿ ಮಕ್ಕಳಿಗೆ ಶಿಲ್ಪ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸುತ್ತಾರೆ. ಮಕ್ಕಳಿಂದ ಪತ್ರಿಕೆಗಳಲ್ಲಿ ಬಂದ ವ್ಯಂಗ್ಯಚಿತ್ರಗಳನ್ನು ಆಧರಿಸಿ ಕಥೆ ಬರೆಸುವ ಸ್ಪರ್ಧೆ ಏರ್ಪಡಿಸಿ, ವ್ಯಂಗ್ಯಚಿತ್ರ ಪ್ರದರ್ಶನ ಮಾಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಶಾಲಾ ಮಕ್ಕಳಿಂದ ಮಣ್ಣೆತ್ತು ಮಾಡಿಸಿ, ಮಣ್ಣಿನ ಗಣೇಶನ ಮಾಡಿಸುವ ಸ್ಪರ್ಧೆಗಳಲ್ಲಿ ಮಕ್ಕಳನ್ನು ಕಲೆಯತ್ತ ಸೆಳೆದಿದ್ದಾರೆ.

‘ಗ್ರಾಮೀಣ ನಾಟಕೋತ್ಸವ’ ಏರ್ಪಡಿಸಿ ಹಳ್ಳಿಗಳಲ್ಲಿ ಮಕ್ಕಳ ನಾಟಕದ ಅಭಿರುಚಿ ಹೆಚ್ಚಿಸಿ, ಸ್ಥಳೀಯ ಸಾಹಿತಿಗಳಿಂದ ಕಥೆ, ಕವಿತಾ ವಾಚನ ಮಾಡಿಸಿ ಸಾಹಿತ್ಯದ ಅಭಿರುಚಿ ಮೂಡಿಸಿದ್ದಾರೆ. ಗಾಂಧಿ ಜಯಂತಿಯಲ್ಲಿ `ಕುಡಿಯೋದ ಬಿಡ್ರಿ, ಒಳ್ಳೇದಲ್ಲ’ ಎಂದು ಜಾಗೃತಿ ಮೂಡಿಸುತ್ತಲೇ, ವಿಶ್ವರಂಗಭೂಮಿ ದಿನ ಊರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿ ಮಕ್ಕಳಿಂದ ನಾಟಕ ಆಡಿಸುತ್ತಾರೆ. `ಸರಕಾರಿ ಶಾಲೆಗಳೆ ನಮ್ಮ ಜೀವಾಳ’ ಎನ್ನುವ ಅಭಿಯಾನವನ್ನು ದೊಡ್ಡಾಟದ ವೇಷ ಧರಿಸಿ ಮಕ್ಕಳು ಸರಕಾರಿ ಶಾಲೆಯ ಮಹತ್ವವನ್ನು ಸಾರುತ್ತಾರೆ.

‘ಪ್ರತಿಭಾ ಕಾರಂಜಿಗೆಂದು ತಯಾರು ಮಾಡಿದ ನಾಟಕಗಳನ್ನು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಭಿನಯಿಸುತ್ತಾರೆ. ಹೀಗೆ ಹಳ್ಳಿಗಳಲ್ಲಿ ಮಕ್ಕಳು ನಾಟಕ ಆಡಿದಾಗ, ನಾಟಕ ಮೆಚ್ಚಿ ಊರಿನವರು ಆಯರ್ ಮಾಡುತ್ತಾರೆ. ಹೀಗೆ ಆಯರ್ ಮಾಡಿದ ಹಣವನ್ನು ಸಂಗ್ರಹಿಸಿ, ಅದಕ್ಕೆ ನಾವು ಒಂದಷ್ಟು ಹಣ ಹಾಕಿ ಟ್ರಾವೆಲ್ ಖರ್ಚು ತೆಗೆದು, ಉಳಿದ ಹಣದಲ್ಲಿ ಮಕ್ಕಳಿಗೆ ಟ್ರಾವೆಲಿಂಗ್ ಬ್ಯಾಗ್ ತಂದು ಕೊಟ್ಟಿದೀವಿ. ಮೈಸೂರು ಬೆಂಗಳೂರಿಗೆ ಪ್ರತಿಭಾ ಕಾರಂಜಿಗೆ ಹೋದಾಗ ಅದರ ಖೂನ ಇರಲಿ ಅಂತ ಮಕ್ಕಳಿಗೆ ಸ್ಟಡಿ ಚೇರು, ಸ್ಟಡಿ ಲ್ಯಾಂಪು ತಂದಿದ್ದೀವಿ’ ಎನ್ನುತ್ತಾರೆ.

ಮುಂದುವರಿದು `ಮೇಕಪ್, ಲೈಟಿಂಗ್, ಸೌಂಡ್ ಸಿಸ್ಟಮ್ ಎಲ್ಲವನ್ನು ಮಕ್ಕಳೆ ಮಾಡುತ್ತಾರೆ. ನನ್ನ ಸಂಬಳದಲ್ಲಿ ಕೊಂಡ ಎರಡುವರೆ ಲಕ್ಷದ ಪ್ರಾಪರ್ಟಿ ಇದೆ. ತುಂಬಾ ಅಗತ್ಯವಾದ ರಂಗಪರಿಕರಗಳು ನಮ್ಮಲ್ಲಿವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ನಮ್ಮ ಹೈಸ್ಕೂಲ್ ಕಾರ್ಯಕ್ರಮಗಳಿಗೆ ಜೊತೆಯಾಗುತ್ತಾರೆ. ನಮ್ಮ ಕೈಲಿ ದುಡ್ಡು ಹಾಕಿ ಮಕ್ಕಳನ್ನು ಪ್ರತಿಭಾ ಕಾರಂಜಿಗೆ ದೂರ ದೂರ ಕರಕೊಂಡು ಹೋಗಿ ಎರಡು ವರ್ಷ ಆದ್ರೂನು ಟ್ರಾವೆಲ್ ಬಿಲ್ ಬರೋದಿಲ್ಲ, ಆದ್ರೂ ಉತ್ಸಾಹ ಕಳಕೊಳ್ಳಂಗಿಲ್ಲ’ ಎಂದು ಅಶೋಕ್ ತಮ್ಮ ಬಿಕ್ಕಟ್ಟನ್ನೂ ಹೇಳುತ್ತಾರೆ.

ಮಕ್ಕಳೊಂದಿಗೆ ಅಶೋಕ ತೋಟ್ನಳ್ಳಿಯವರು

ಅಶೋಕ ತೋಟ್ನಳ್ಳಿಯವರು ಕಲಾವಿದರೂ, ನಾಟಕಕಾರರೂ ಆದ ಕಾರಣ ತಮಗೆ ಲಭ್ಯವಿರುವ ವಸ್ತುಗಳನ್ನೆ ನಾಟಕದ ಪರಿಕರಗಳನ್ನಾಗಿ ಪರಿವರ್ತಿಸುತ್ತಾರೆ. ಊರಿನ ಜನಪದ ವಸ್ತುಗಳನ್ನು ಸೇರಿಸಿ, ಅವುಗಳನ್ನು ಬಣ್ಣದಿಂದ ಸಿಂಗರಿಸಿದ್ದಾರೆ. ಹಾಗಾಗಿ ಶಾಲೆಯೆ ಒಂದು ಆರ್ಟ್ಗ್ಯಾಲರಿಯಂತಿದೆ. ಹೀಗೆ ಒಬ್ಬ ರಂಗಭೂಮಿ ಶಿಕ್ಷಕ ತನ್ನೊಳಗಿನ ಕಲಾವಿದನನ್ನು ಕ್ರಿಯಾಶೀಲಗೊಳಿಸಿ ಇಡೀ ಊರನ್ನೇ ರಂಗಭೂಮಿಯನ್ನಾಗಿ ರೂಪಾಂತರಿಸಿದ ಶ್ರಮ ಮತ್ತು ಬದ್ಧತೆ ನಿಜಕ್ಕೂ ಮೆಚ್ಚುವಂಥದ್ದು. ಊರಿನ ಜನರು, ಮಕ್ಕಳ ಸಹಕಾರ ಮರೆಯುವಂತಿಲ್ಲ ಎನ್ನುವ ಅಶೋಕ ಅವರು ಮತ್ತಷ್ಟು ಮಾದರಿ ಕೆಲಸಗಳಲ್ಲಿ ತೊಡಗಿಕೊಳ್ಳಲೆಂದು ಪತ್ರಿಕೆ ಶುಭಕೋರುತ್ತದೆ.

ಅಶೋಕ ತೋಟ್ನಳ್ಳಿಯವರ ಯೂಟೂಬ್ ಚಾನಲ್‌ಗೆ ಇಲ್ಲಿ ಕ್ಲಿಕ್ ಮಾಡಿ

ಅವರ ಫೇಸ್‌ಬುಕ್ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ಕಡುಬಡತನದಲ್ಲಿ ಬೆಳೆದು ನೂರಾರು ಮಕ್ಕಳಿಗೆ ನೆರಳಾದ ಒಂದು ಹೆಮ್ಮರ ‘ಸಂತೋಷ ಗುಡ್ಡಿಯಂಗಡಿ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...