HomeUncategorizedಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

ಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

- Advertisement -
ಲೇಖನ: ಸಿದ್ದು. ಯಾಪಲಪರವಿ 
ನಟರಾಜ್ ಹೊನ್ನವಳ್ಳಿ ಅವರು ನಿರ್ದೇಶಿಸಿದ ಔರಂಗಜೇಬ್ ನಾಟಕವನ್ನು ಸಾಣೆಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವೀಕ್ಷಿಸುವ ಅವಕಾಶ ಲಭಿಸಿತು. ಈಗಿರುವ ಸೂಕ್ಷ್ಮ ವಾತಾವರಣದಲ್ಲಿ ಮುಸ್ಲಿಂ ದೊರೆಗಳ ಜೀವನ ಆಧರಿಸಿ ನಾಟಕ ಆಡುವುದು ಕೊಂಚ ರಿಸ್ಕ್. ಅನವಶ್ಯಕ ವಿವಾದಗಳು ಸುತ್ತಿಕೊಳ್ಳುವ ಹೊತ್ತಿನಲ್ಲಿ ಯಾರ ಪರವಾಗಿ ಮಾತನಾಡಿದರೂ ಕಷ್ಟ.
ಪರ, ವಿರೋಧವೆಂಬ ಪೂರ್ವಗ್ರಹ ಇಟ್ಟುಕೊಂಡು ನಾಟಕ ನೋಡಿದೆ. ಆದರೆ ನಾಟಕ ನೋಡಿದ ಮೇಲೆ ಸಮಾಧಾನವಾಯಿತು. ನಾಟಕ ಯಾರ ಪರ ಅಥವಾ ವಿರೋಧವಾಗಿಯೂ ಇರದೆ ಕೇವಲ ಜೀವ ಪರವಾಗಿದೆ. ಶಹಜಾನ್, ದಾರಾ ಮತ್ತು ಔರಂಗಜೇಬ್ ಪಾತ್ರಗಳ ಮೂಲಕ ಮನುಷ್ಯನ ವಿವಿಧ ಮುಖಗಳನ್ನು ನಾಟಕ ಪರಿಚಯಿಸುವುದರಲ್ಲಿ ಯಶಸ್ವಿಯಾಗಿದೆ.
ಬುದ್ಧ ಬೋಧಿಸಿದ ಅನಾರೋಗ್ಯ, ಮುಪ್ಪು ಮತ್ತು ಸಾವಿನ ಭಯಾನಕತೆ ನಾಟಕ ನೋಡುವಾಗ ಅನುಭವಕ್ಕೆ ದಕ್ಕುತ್ತದೆ. ಸಾಯುವ ಹಂತದಲ್ಲಿ ಇರುವ ಮುದುಕ ಶಹಜಾನ್ ಕಾಣುವ ಕಪ್ಪು ಶಿಲೆಯ ಕನಸಿನ ಮಹಲಿನಿಂದ ನಾಟಕ ಆರಂಭವಾಗುತ್ತದೆ. ತಂದೆಯ ಕನಸು ನನಸಾಗಿಸಲು ಒಪ್ಪಿಕೊಳ್ಳುವ ದಾರಾನ ಜ್ಞಾನ, ಮಾನವೀಯತೆ ಮತ್ತು ಧರ್ಮ ಸಹಿಷ್ಣುತೆ ತಂದೆಯ ಕನಸನ್ನು ನನಸಾಗಿಸಲು ಸಾಲುವುದಿಲ್ಲ.
ಸಂಸ್ಕೃತಿ ಮತ್ತು ಕಲೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಧಾರ್ಮಿಕ ನಂಬಿಕೆಗಳ ಕಾರಣದಿಂದ ವಿರೋಧಿಸುವ ಔರಂಗಜೇಬ್ ತಂದೆಯ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಾನೆ. ಮುಸ್ಲಿಂ ಆಡಳಿತದ ಸಂದರ್ಭದಲ್ಲಿ ಅನೇಕ ಗೊಂದಲಗಳಿದ್ದವು, ಇಸ್ಲಾಂ ಧರ್ಮದ ಪರಿಪಾಲನೆಯ ಭರದಲ್ಲಿ ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ಆದದ್ದು ಸಹಜ.
ಧರ್ಮ ಮತ್ತು ರಾಜಕೀಯ ಸಂಘರ್ಷದ ಮೂಲ ಉದ್ದೇಶ ಅಧಿಕಾರ ಹಿಡಿದು ತಾವು ನಂಬಿದ ಸಿದ್ಧಾಂತಗಳೇ ಸರಿ ಎಂಬ ಅಭಿಪ್ರಾಯ ರೂಪಿಸುವುದು. ರಾಜ ಮಹಾರಾಜರುಗಳ ಮೋಜು ಮಸ್ತಿಗೆ ಬಹುಪತ್ನಿತ್ವ ಬಹು ದೊಡ್ಡ ಪ್ರತಿಷ್ಠೆಯಾಗಿತ್ತು ಎಂಬುದನ್ನು ನಾಟಕಕಾರ ಔರಂಗಜೇಬ್ ಮೂಲಕ ಹೇಳಿಸುತ್ತಾನೆ. ಹಾಗಂತ ಅವನೇನು ಸಾಚಾ ಅಲ್ಲ. ಅಧಿಕಾರದ ಆಸೆಗೆ ಅಣ್ಣನನ್ನೇ ಕೊಲ್ಲುತ್ತಾನೆ.
ಹುಚ್ಚ ಮುದುಕ ಶಹಜಾನ್ ಮಕ್ಕಳ ಸಾವು-ನೋವು ಲೆಕ್ಕಿಸದೆ ಕಪ್ಪು ಶಿಲೆಯ ಮಹಲಿನ ಕನಸು ಕಾಣುತ್ತಾನೆ.
ಪ್ರತಿಭಾ ಸಂಪನ್ನ ದಾರಾ ಸಾಯುವ ಕೊನೆಯ ಕ್ಷಣದ ತನಕ ತನ್ನ ಜೀವಪರ ಸಿದ್ಧಾಂತಗಳ ಪರವಾಗಿ ನಿಲ್ಲುತ್ತಾನೆ. ಮಹಾಭಾರತದ ದಾಯಾದಿ ಕಲಹ, ಮ್ಯಾಕ್‌‌ಬೆತ್ ನ ಮಹತ್ವಾಕಾಂಕ್ಷೆ, ಕಿಂಗ್ ಲಿಯರ್ ನ ಅಸಹಾಯಕತೆ ನಾಟಕ ನೋಡುವಾಗ ನೆನಪಾಗುವುದು ಸಹಜ.
ಪ್ರತಿಯೊಬ್ಬ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಎದುರಿಸುವ ಸಂಕಷ್ಟ ಮತ್ತು ಅಸಹಾಯಕತೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಲು ನಿರ್ದೇಶಕ ಯಶಸ್ವಿಯಾಗಿದ್ದಾರೆ. ವಿವಿಧ ಉದ್ಯೋಗದಲ್ಲಿರುವ ರಂಗಾಸಕ್ತ‌ ಯುವ ಕಲಾವಿದರು ಪ್ರೌಢಿಮೆಯಿಂದ ಅಭಿನಯಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರ ನಟನಾ ಕೌಶಲ್ಯದಲ್ಲಿ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ.
ಪ್ರೇಕ್ಷಕರು ತಮ್ಮ ಅಭಿರುಚಿ ಕಳೆದುಕೊಂಡ ಹೊತ್ತಿನಲ್ಲಿ ಗಂಭೀರ ನಾಟಕಗಳನ್ನು ತಲುಪಿಸುವುದು ಕಷ್ಟ ಹಾಗಂತ ನಾಟಕಕಾರರು ತಮ್ಮ ಗಂಭೀರ ಅಭಿರುಚಿ ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ ನಿರ್ದೇಶಕ ಹೊನ್ನವಳ್ಳಿ ಅವರದು. ಇಂತಹ ನಾಟಕಗಳ ಉದ್ದೇಶ ಕೇವಲ ಮನೋರಂಜನೆ ಅಲ್ಲ ಮನೋಪರಿವರ್ತನೆ ಎಂಬ ಕಾರಣಕ್ಕಾಗಿ ಇಡೀ ತಂಡದ ಪರಿಶ್ರಮವನ್ನು ಅಭಿನಂದಿಸಬೇಕು.
ತಮಿಳಿನ ಪ್ರಗತಿಪರ ಲೇಖಕ ಇಂದಿರಾ ಪಾರ್ಥಸಾರಥಿ ಅವರ  ನಾಟಕವನ್ನು ರಾಜಪ್ಪ ದಳವಾಯಿ ಮತ್ತು ಕನಕರಾಜ್ ಆರನಕಟ್ಟೆ ಕಾವ್ಯಾತ್ಮಕವಾಗಿ ಕನ್ನಡಿಕರಿಸಿದ್ದಾರೆ. ಗಂಭೀರತೆಯ ತೀವ್ರತೆಯನ್ನು ಕೊಂಚ ತಗ್ಗಿಸಲು ಒಂದೆರಡು ಕಾಮಿಕ್ ಪ್ರಸಂಗಗಳನ್ನು ಸೇರಿಸುವುದು ಒಳಿತು. ಅದು ಕೇವಲ ಪ್ರೇಕ್ಷಕರನ್ನು ಹಿಡಿದಿಡುವ ಕಾರಣದಿಂದಾಗಿ ಮಾತ್ರ. ಹತ್ತು ಹಲವು ಮಾನವನ ಮಿತಿಗಳನ್ನು ಕಣ್ಮುಂದೆ ಚಿತ್ರಿಸಿದ ಔರಂಗಜೇಬ್ ತಂಡವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...