Homeಕರ್ನಾಟಕಫೆಬ್ರವರಿ 27 ಹುಟ್ಟುಹಬ್ಬದ ನೆಪ; ಹೈಕಮಾಂಡ್‍ಗೆ ತಟ್ಟಲಿದೆಯೇ ತಾಪ!?

ಫೆಬ್ರವರಿ 27 ಹುಟ್ಟುಹಬ್ಬದ ನೆಪ; ಹೈಕಮಾಂಡ್‍ಗೆ ತಟ್ಟಲಿದೆಯೇ ತಾಪ!?

- Advertisement -
- Advertisement -

ಫೆಬ್ರವರಿ 27 ಯಡಿಯೂರಪ್ಪನವರ ಹುಟ್ಟುಹಬ್ಬದ ದಿನ. ಅವತ್ತು ಲಕ್ಷಾಂತರ ಜನರನ್ನು ಸೇರಿಸಿ ಅದ್ದೂರಿ ಸಮಾವೇಶ ನಡೆಸಲು ಯಡ್ಯೂರಪ್ಪ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಉಪಚುನಾವಣೆಯಲ್ಲಿ ಅನರ್ಹರನ್ನು ಗೆಲ್ಲಿಸಿಕೊಂಡು ಸರ್ಕಾರವನ್ನು ಸೇಫ್ ಮಾಡಿದ ನಂತರವೂ ಹೈಕಮಾಂಡ್ ತನ್ನತ್ತ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಪ್ರತಿಯಾಗಿ ಈ ಶಕ್ತಿ ಪ್ರದರ್ಶನ ಎನ್ನಲಾಗುತ್ತಿದೆ. ತಮ್ಮ ಇಮೇಜ್ ಬಿಲ್ಡ್ ಮಾಡುವುದಕ್ಕಾಗಿಯೇ ಹೈದ್ರಾಬಾದ್ ಮೂಲದ ಜಾಹೀರಾತು ತಂಡವೊಂದರ ಜೊತೆ ಒಪ್ಪಂದ ಮಾಡಿಕೊಂಡಿರುವ ಯಡ್ಡಿ ಇಡೀ ಸಮಾವೇಶವನ್ನು ಗ್ರ್ಯಾಂಡ್ ಸಕ್ಸಸ್ ಮಾಡಲು ಒಂದು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಗೆ ದುಬಾರಿ ಮೊತ್ತಕ್ಕೆ ಗುತ್ತಿಗೆ ಕೊಟ್ಟಿರುವ ಸುದ್ದಿಯೂ ಹೊರಬರುತ್ತಿದೆ….

ಕನಕಪುರ ಬಂಡೆಯಂತಿದ್ದ ಮೈತ್ರಿ ಸರ್ಕಾರವನ್ನೇ ತಲೆಕೆಳಗಾಗಿಸಿದ ಯಡಿಯೂರಪ್ಪನವರಿಗೆ ಸಂಪುಟ ವಿಸ್ತರಣೆಯ ಸಂಕಟ ಯಾಕಿಷ್ಟು ಬಾಧಿಸುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಬಿಜೆಪಿ ಆಂತರಿಕ ವಲಯದಲ್ಲಿ ಸಾಕಷ್ಟು ಮನಸ್ತಾಪಗಳು ಎದ್ದು ಕಾಣುತ್ತವೆ. ಯಡಿಯೂರಪ್ಪ ಸಿಎಂ ಆದಾಗಿನಿಂದ ಒಂದಲ್ಲಾ ಒಂದು ತೊಡಕುಗಳು ಎದುರಾಗುತ್ತಲೇ ಇವೆ. ಬಲಭೀಮನಂತಿದ್ದ ಎದುರಾಳಿ ಪಕ್ಷಗಳನ್ನ ಸೋಲಿಸಿ ಸುಣ್ಣವಾಗಿಸಿದ ಮೇಲೆ ಯಡಿಯೂರಪ್ಪನವರ ಹಾದಿ ಹೂವಿನ ಹಾಸಿಗೆ ಆಗುವ ಬದಲಿಗೆ ಕಲ್ಲುಮುಳ್ಳಿನಿಂದ ತುಂಬಿಹೋಗಿದೆ.

ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರದ ಶಾಸಕರನ್ನ ಸೆಳೆಯುವಲ್ಲಿ ಯಶಸ್ವಿಯಾದ ಬಿಎಸ್‍ವೈ ಅದ್ಯಾಕೋ ಬಿಜೆಪಿ ಹೈಕಮಾಂಡ್ ಸೆಳೆಯುವಲ್ಲಿ ವಿಫಲರಾದಂತೆ ಕಾಣುತ್ತದೆ. ಬಿಎಸ್‍ವೈ ಅಧಿಕಾರಕ್ಕೆ ಬಂದಾಗಿನಿಂದ ಹೈಕಮಾಂಡ್ ಸಹಕಾರ ಸಹನೀಯವಾಗಿಲ್ಲ. ಇದು ಬಿಎಸ್‍ವೈ ತಾಳ್ಮೆಯನ್ನ ದಿನದಿಂದ ದಿನಕ್ಕೆ ಪರೀಕ್ಷೆಗೆ ಒಡ್ಡಿದೆ.

ಎಸ್… ಮೈತ್ರಿ ಸರ್ಕಾರ ಬೀಳಿಸಿದ ಯಡಿಯೂರಪ್ಪ ಸಿಎಂ ಪಟ್ಟಕ್ಕೆ ಬರುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಹೈಕಮಾಂಡ್ ಕೊಂಚ ಸಮಯ ತೆಗೆದುಕೊಂಡ್ರು ಬಿಎಸ್‍ವೈಗೆ ಸಿಎಂ ಸ್ಥಾನ ಕೊಟ್ಟಿತು. ಇದರ ಮಧ್ಯೆ ಬಿರುಗಾಳಿಯಂತೆ ಬಂದ ಪ್ರವಾಹ ಸಿಎಂ ಕುರ್ಚಿಯನ್ನೇ ಅಲುಗಾಡಿಸಿಬಿಡ್ತು. ಒಂದುಕ್ಷಣ ಸಿಎಂ, ರಾಜ್ಯದಲ್ಲಿ ಏನಾಗ್ತಿದೆ ಅನ್ನೋದನ್ನ ಊಹೆ ಮಾಡಿಕೊಳ್ಳೋದು ಅದಕ್ಕೆ ಪರಿಹಾರ ಕಂಡುಕೊಳ್ಳೋದು ಕೂಡ ಕಷ್ಟ ಸಾಧ್ಯವಾಗಿ ಹೋಯ್ತು.

ಇದರ ಮಧ್ಯೆ ಸಚಿವಸಂಪುಟ ವಿಸ್ತರಣೆ ಬೇರೆ ಆಗಿರಲಿಲ್ಲ. ವಿರೋಧ ಪಕ್ಷಗಳು ಜನರ ನೆರವಿಗಾಗಿ ನಿಲ್ಲುವುದಕ್ಕಿಂತ ಸಮಯವನ್ನ ರಾಜಕೀಯ ಕೆಸರೆರೆಚಾಟಕ್ಕೆ ಬಳಕೆ ಮಾಡಿಕೊಳ್ಳಲು ಶುರು ಮಾಡಿದ್ವು. ಭೀಕರ ಪ್ರವಾಹಕ್ಕೆ ನಲುಗಿದ ರಾಜ್ಯದ ಜನರ ಸ್ಥಿತಿಗಳನ್ನ ಆಲಿಸುವುದಕ್ಕಿಂತ ಸಚಿವ ಸ್ಥಾನದ ಗುಂಗೇ ಅಧಿಕವಾಗಿಹೋಗಿತ್ತು. ಒಂದು ಕಡೆ ರಾಜ್ಯದ ಜನತೆಯ ನರಳಾಟ, ಇನ್ನೊಂದು ಕಡೆ ಸಚಿವ ಸ್ಥಾನಕ್ಕಾಗಿ ಅಭ್ಯರ್ಥಿಗಳ ಪರದಾಟ, ಮತ್ತೊಂದು ಕಡೆ ಇದ್ಯಾವುದನ್ನ ಲೆಕ್ಕಿಸದ ಹೈಕಮಾಂಡ್ ಹೀಗೆ ಈ ಮೂರು ದಿಕ್ಕುಗಳು ಸಿಎಂ ಕುರ್ಚಿಯನ್ನೇ ಅಲುಗಾಡಿಸಿಬಿಟ್ಟಿದ್ವು.

ಸಚಿವ ಸಂಪುಟ ವಿಸ್ತರಣೆಗೂ ಅಸ್ತು ಎನ್ನದ ಅಮಿತ್ ಶಾ, ಇತ್ತ ಪರಿಹಾರ ಕೊಡಲು ಸಿದ್ಧವಿರದ ಪ್ರಧಾನಿ ಮೋದಿ ಇವರಿಬ್ಬರ ನಡುವೆ ಸೊರಗಿದ ಯಡಿಯೂರಪ್ಪನವರಿಗೆ ರಾಜ್ಯದ ಜನ ಹಾಗೂ ವಿರೋಧ ಪಕ್ಷಗಳ ವಾಗ್ದಾಳಿಗಳಿಗೆ ತಲೆ ಕೊಡಲೇಬೇಕಾದಂತ ಸ್ಥಿತಿ ಬಂದೊದಗಿತ್ತು. ರಾಜ್ಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ರಾಜ್ಯದ ಜನತೆಯ ಕಷ್ಟಕಾಲಕ್ಕೆ ಆಗಲಿಲ್ಲವಲ್ಲ ಅನ್ನೋ ಸಂಕಟ. ಕೇಂದ್ರ ಸರ್ಕಾರ ಕಷ್ಟಕಾಲಕ್ಕೆ ನೆರವಾಗಲಿಲ್ಲ ಎನ್ನುವ ಬೇಸರ. ಹೀಗೆ ಬಿಎಸ್‍ವೈಗೆ ಒಂದಲ್ಲಾ ಎರಡಲ್ಲಾ ದಾರಿಯುದ್ಧಕ್ಕೂ ಪ್ರತಿಪಕ್ಷಗಳಿಗಿಂತಲೂ ಹೆಚ್ಚು ಅಡೆತಡೆ ಉಂಟುಮಾಡಿದ್ದು ಬಿಜೆಪಿ ಹೈಕಮಾಂಡ್.

ಅನರ್ಹರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ಕೊಟ್ಟಿದ್ದ ಬಿಎಸ್‍ವೈಗೆ ಅಡ್ಡಗಾಲು ಹಾಕಿದ್ದು ಬಿಜೆಪಿಯ ಮೂಲ ಶಾಸಕರು. ತಾವು ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳು ಎನ್ನುವುದಾಗಿ ಒಬ್ಬೊಬ್ಬರಾಗಿ ತಮ್ಮ ಇಂಗಿತವನ್ನ ವ್ಯಕ್ತಪಡಿಸಲು ಮುಂದಾದ್ರು. ರಾಜ್ಯದ ಸಚಿವ ಸ್ಥಾನದ ಆಕಾಂಕ್ಷಿಗಳು ಒಂದು ಕಡೆ ಇರಲಿ ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಗೆ ಕೊಡಲು ಹಿಂದೇಟು ಹಾಕುತ್ತಲೇ ಇದೆ. ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ನೀಡುವ ಬದಲಿಗೆ ಮನವೊಲಿಕೆ ಬಳಿಕ 8 ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಹೇಳುತ್ತಿದೆ. ಈ ರೀತಿಯ ಹೈಕಮಾಂಡ್ ವರ್ತನೆಯಿಂದ ಸಿಎಂ ಸ್ಥಿತಿ ಅತಂತ್ರವಾಗಿದೆ. ಮಾತಿನ ಪ್ರಕಾರ ಶಾಸಕರಿಗೆ ಸಚಿವ ಸ್ಥಾನ ಕೊಡದಿದ್ದರೆ ಅಧಿಕಾರಕ್ಕೆ ಮತ್ತೆ ಕುತ್ತು ಬರುವ ಆತಂಕದಲ್ಲಿ ಸಿಎಂ ಹೈಕಮಾಂಡ್ ವಿರುದ್ಧ ಒಳಗೊಳಗೇ ಕೆಂಡ ಕಾರುತ್ತಿರುವಂತೆ ಕಾಣುತ್ತದೆ. ಕೊಟ್ಟ ಮಾತು ಉಳಿಸಿಕೊಳ್ಳಬೇಕಾದರೆ ಬಿಜೆಪಿ ಹೈಕಮಾಂಡ್‍ನ ಅಸಹಕಾರದ ವಿರುದ್ಧ ತೊಡೆ ತಟ್ಟಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪನವರಿಗೆ ಬಂದಿದೆ. ಅದಕ್ಕೆ ಕೊನೆಗೂ ಯಡಿಯೂರಪ್ಪ ಮುಂದಾಗಿದ್ದಾರೆ.

ಅಷ್ಟಕ್ಕೂ ಹೈಕಮಾಂಡ್‍ಗೆ ಬಿಎಸ್‍ವೈ ಮೇಲೆ ಯಾಕಿಷ್ಟು ಸಿಟ್ಟು… ಅಂದರೆ ಅಮಿತ್ ಶಾ ಮತ್ತು ಮೋದಿಯವರದ್ದೇ ಒಂದು ದಿಕ್ಕು ಆದರೆ, ಯಡಿಯೂರಪ್ಪ ಅವರದ್ದೇ ಇನ್ನೊಂದು ದಿಕ್ಕು. ತಾವು ಹೇಳಿದಂತೆ ಕೇಳಿಕೊಂಡಿರುವ ಮುಖ್ಯಮಂತ್ರಿ ಬೇಕೆಂದು ಮೋದಿ-ಶಾ ಬಯಸಿದರೆ, ಅನರ್ಹರಿಗೆ ಸಚಿವಸ್ಥಾನ ಕೊಡುವುದು ಸೇರಿದಂತೆ ಹಲವು ವಿಷಯಗಳಲ್ಲಿ ಯಡಿಯೂರಪ್ಪನವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಿದೆ. ಅದಕ್ಕಾಗಿಯೇ ರಾಜ್ಯದಲ್ಲಿ ಲಿಂಗಾಯತರ ಸಂಪೂರ್ಣ ಬೆಂಬಲ ಪಡೆದಿರುವ ಬಿಎಸ್‍ವೈಯನ್ನ ಕೈಬಿಡಲೂ ಆಗದೇ ಇತ್ತ ಇವರು ಸೂಚಿಸುವ ಪಕ್ಷಾಂತರಗೊಂಡ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡಲು ಆಗದೇ ಅಸಹಕಾರ ತೋರುತ್ತಿದ್ದಾರೆ ದಿಲ್ಲಿ ನಾಯಕರು.

ಇಷ್ಟಾದರೂ ಮರಳಿ ಯತ್ನವ ಮಾಡಲು ಸಿಎಂ ಬಿಎಸ್‍ವೈ ದೆಹಲಿ ಹೈಕಮಾಂಡ್ ಮನವೊಲಿಕೆಗೆ ಮುಂದಾದರೆ ಅಮಿತ್ ಶಾ ಭೇಟಿಗೆ ಅವಕಾಶವನ್ನೆ ನೀಡುತ್ತಿಲ್ಲಾ. ಮೂಲತಃ ಮೋದಿ ಮತ್ತು ಶಾ ಕಂಪನಿಯಷ್ಟು ಕೋಮುವಾದಿಯಾಗಿರದ ಯಡ್ಡಿಗೆ ತನ್ನು ಜಾತಿಯ ಬೆಂಬಲವನ್ನು ಉಳಿಸಿಕೊಳ್ಳಬೇಕು ಜೊತೆಗೆ ಕೊಟ್ಟ ಮಾತನ್ನು ಸಹ… ಹಾಗಾಗಿ ಯಡಿಯೂರಪ್ಪ ಹೈಕಮಾಂಡ್‍ಗೆ ಬಿಸಿಮುಟ್ಟಿಸಲು ಯೋಜನೆ ರೂಪಿಸುತ್ತಿದ್ದಾರೆ.

ಅದೆಂದರೆ ದಿಲ್ಲಿ ನಾಯಕರನ್ನ ಕಂಟ್ರೋಲ್‍ಗೆ ತರಲು ಮತ್ತು ರಾಜ್ಯದಲ್ಲಿ ತಮ್ಮ ಅಸ್ತಿತ್ವ ಕಾಯ್ದಿರಿಸಲು ಸಿಎಂ ಬಿಎಸ್‍ವೈ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಲಕ್ಷಾಂತರ ಜನರನ್ನು ಸೇರಿಸಿ ದೊಡ್ಡ ಸಮಾವೇಶ ಮಾಡುವ ಮೂಲಕ ತಮಗಿರುವ ಜನ ಬೆಂಬಲವನ್ನು ಪ್ರದರ್ಶನ ಮಾಡಲು ಯೋಚಿಸುತ್ತಿದ್ದಾರೆ. ಜೊತೆಗೆ ತಮ್ಮ ಇಮೇಜ್ ಬಿಲ್ಡ್ ಮಾಡುವುದಕ್ಕಾಗಿಯೇ ಹತ್ತು ಹಲವು ರೀತಿಯಲ್ಲಿ ಜಾಹೀರಾತು ನೀಡಲು ಖಾಸಗಿ ತಂಡವೊಂದರ ಜೊತೆ ಯಡ್ಡಿ ಒಪ್ಪಂದ ಮಾಡಿಕೊಂಡಿದ್ದಾರೆ. ಆ ಮೂಲಕ ಮುಂದಿನ ತಿಂಗಳು ಫೆ.27ಕ್ಕೆ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನ ಕರ್ನಾಟಕದಲ್ಲಿ ಬಹುದೊಡ್ಡ ಶಕ್ತಿ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಬಿಜೆಪಿಯಲ್ಲಿನ ಃSಙ ಬಣ ದೊಡ್ಡ ಪ್ಲಾನ್ ಅನ್ನು ಹಾಕಿಕೊಂಡಿದ್ದು, ಅದಕ್ಕಾಗಿ ಕಾರ್ಯಯೋಜನೆ ಮಾಡುತ್ತಿದೆ..

ಈ ಕಾರ್ಯಕ್ರಮಕ್ಕೆ ಕೇಂದ್ರದ ನಾಯಕರಿಗೆ ಆಹ್ವಾನ ಕೊಡುತ್ತಾರ? ಇಲ್ಲವಾ ಎಂಬುದು ಮಾತ್ರ ಇನ್ನು ಸ್ಪಷ್ಟವಾಗಿಲ್ಲ. ಆದರೆ ರಾಜ್ಯದ ಮೂಲೆ-ಮೂಲೆಗಳಿಂದ ತಮ್ಮ ಬೆಂಬಲಿಗರನ್ನು ಸೇರಿಸಿ ನಾನು ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಲ್ಲೆ ಎಂಬ ಸಂದೇಶ ಕೊಡಲು ತಯಾರಿ ನಡೆಸಿದ್ದಾರೆ. ಆ ಮೂಲಕ ಯಡ್ಡಿ ಹೈಕಮಾಂಡ್‍ಗೆ ಮತ್ತು ಪಕ್ಷದಲ್ಲಿ ತಮ್ಮ ವಿರುದ್ಧ ಕತ್ತಿ ಮಸೆಯುತ್ತಿರುವವರಿಗೆ ಈಗಲೂ ತಾನೊಬ್ಬ ಮಾಸ್ ಲೀಡರ್ ಎಂಬ ಸ್ಪಷ್ಟ ಸಂದೇಶ ನೀಡಲು ಮುಂದಾಗಿದ್ದಾರೆ. ನನ್ನೊಂದಿಗೆ ಸಹಕರಿಸಿ ಇಲ್ಲದಿದ್ದಲ್ಲಿ ತಾನು ಮತ್ತೆ ಬಂಡೆದ್ದರೆ ಅದಕ್ಕೆ ನೀವೆ ಹೊಣೆಗಾರರು ಎಂದು ಮೈಕೊಡವಲು ಯಡ್ಡಿ ಸಿದ್ಧರಾಗಿದ್ದಾರೆ. ಇದಕ್ಕಾಗಿ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ನಾನು ಕೈಕಟ್ಟಿ ಕೂರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ…? ಅದಕ್ಕೆ ಸಿಎಂ ತಲೆ ಬಾಗ್ತಾರ..? ಅರ್ಹರಿಗೆ ದಿಲ್ಲಿ ನಾಯಕರ ನಿರ್ಧಾರ ಒಪ್ಪಿಗೆ ಆಗುತ್ತಾ..? ಒಂದು ವೇಳೆ ಆಗದೇ ಹೋದರೆ ಬಿಎಸ್ ವೈ ಹುಟ್ಟುಹಬ್ಬಕ್ಕೆ ಯಾವ ಶಕ್ತಿ ಪ್ರದರ್ಶನ ಮಾಡಲಿದ್ದಾರೆ..? ಈ ಮೂಲಕ ಮೋದಿ – ಶಾ ಜೋಡಿಗೆ ಬಿಎಸ್‍ವೈ ಶಾಕ್ ಹೇಗಿರುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...