Homeಚಳವಳಿಅಂಬೇಡ್ಕರ್ ಪಟ - ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಅಂಬೇಡ್ಕರ್ ಪಟ – ತ್ರಿವರ್ಣ ಧ್ವಜ ಹಿಡಿದ ಮುಸ್ಲಿಂ ಮಹಿಳೆಯರು:ದೆಹಲಿಯಲ್ಲಿ ಹರ್ ಶಾಮ್ ಶಾಹೀನ್ ಬಾಗ್!

ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು. ಅಲ್ಲಿಂದ ಅದು ಒಂದೂವರೆ ಲಕ್ಷಕ್ಕೆ ಏರಿದೆ...

- Advertisement -
- Advertisement -

ರಾಮ್ ರಾಮ್, ಅಲ್ಲಾ ಹೋ ಅಕ್ಬರ್, ವಾಹೇ ಗುರೂ… ಹಿಂದು-ಮುಸ್ಲಿಮ್-ಸಿಖ್- ಕ್ರೈಸ್ತ ಧಾರ್ಮಿಕ ಜಯಕಾರಗಳು, ಜನಗಣಮನ… ಒಂದೇ ಚಪ್ಪರದಡಿ ಕುಳಿತ ಜನಸಮೂಹದಿಂದ ಮೊಳಗುತ್ತವೆ… ಪುರೋಹಿತರು ಹವನ ನೆರವೇರಿಸಿದರೆ ಮುಸಲ್ಮಾನರು ಭಕ್ತಿಯಿಂದ ಕೈ ಮುಗಿದು ಕುಳಿತಿರುತ್ತಾರೆ… ಖುರಾನ್, ಗೀತೆ, ಬೈಬಲ್ ಹಾಗೂ ಗುರು ಗ್ರಂಥಸಾಹೇಬದ ಪಠಣ ಅಕ್ಕಪಕ್ಕದಲ್ಲಿ ಜರುಗುತ್ತದೆ.. ದೇಶಭಕ್ತಿಯ ಘೋಷಣೆಗಳು, ಸಂವಿಧಾನದ ಮುನ್ನುಡಿಯ ವಾಚನ.. ಪ್ರತಿಭಟನೆಯ ಕವಿತೆಗಳು, ಚರ್ಚೆಗಳು, ಭಾಷಣಗಳು.. ಅಂಬೇಡ್ಕರ್- ಗಾಂಧೀ ಚಿತ್ರಪಟಗಳು, ಮೇಣದ ಬತ್ತಿ ಮೆರವಣಿಗೆಗಳು, ತಲೆಗಳಿಗೆ ಸುತ್ತಿಕೊಂಡ ತ್ರಿವರ್ಣ ಧ್ವಜಗಳು.. ಕತ್ತಲಲ್ಲಿ ತಾರೆಗಳಂತೆ ಒಮ್ಮೆಲೆ ಮಿನುಗುವ ಸಾವಿರಾರು ಮೊಬೈಲ್ ಫೋನುಗಳ ಬೆಳಕು… ದೆಹಲಿಯ ಶಾಹೀನ್ ಬಾಗ್ ನಲ್ಲಿ ನಿತ್ಯ ರಾತ್ರಿ ಕಾಣಬರುತ್ತಿರುವ ಮನತುಂಬುವ ಈ ನೋಟಗಳಿಗೆ, ಕಿವಿ ತುಂಬುವ ದನಿಗಳಿಗೆ ತಿಂಗಳು ತುಂಬಿದೆ.

ಎನ್.ಆರ್.ಸಿ-ಸಿಎಎ ವಿರೋಧಿಸಿ ನಡೆಯುತ್ತಿರುವ ಈ ಶಾಂತಿಯುತ ಪ್ರತಿಭಟನಾ ಸಭೆ ದಿನದಿಂದ ದಿನಕ್ಕೆ ದಾಖಲೆ ಸೃಷ್ಟಿಸತೊಡಗಿದೆ. ಇತಿಹಾಸ ರಚಿತವಾಗುತ್ತಿದೆ. ಮೊನ್ನೆ ಭಾನುವಾರ ಇಲ್ಲಿ ಸೇರಿದ್ದ ಜನಸಮೂಹದ ಅಂದಾಜು ಒಂದೂವರೆ ಲಕ್ಷ! ಪುಟ್ಟ ಮುಸ್ಲಿಮ್ ಬಾಲಕಿಯ ಕೈಯಲ್ಲಿನ ಭಿತ್ತಿಪತ್ರ ಇಲ್ಲಿನ ಪ್ರದರ್ಶನಕಾರರ ಮಾಡು ಇಲ್ಲವೇ ಮಡಿ ಹೋರಾಟದ ಮನೋಧರ್ಮವನ್ನು ಪ್ರತಿನಿಧಿಸುತ್ತದೆ.

ಜಹಾಂ ಪೈದಾ ಹುಯೋ ವಹಾಂ

ದಫನ್ ಭೀ ಹೋಂಗೇ (ಪಕ್ಕದಲ್ಲಿ ಭಾರತದ ಪುಟ್ಟ ಭೂಪಟ)

ಜೀತ್ ಗಯೇ ತೋ ವತನ್

ಮುಬಾರಕ್

ಹಾರ್ ಗಯೇ ತೋ ಕಫನ್

ಮುಬಾರಕ್

ನೋ ಎನ್.ಆರ್.ಸಿ.

ನೋ ಸಿಎಎ

(ಎಲ್ಲಿ ಜನಿಸಿದ್ದೇವೆಯೋ ಅಲ್ಲಿಯೇ

ಮಣ್ಣಾಗುತ್ತೇವೆ ಕೂಡ

ಗೆದ್ದರೆ ದೇಶ ದಕ್ಕುವ

ಅಭಿನಂದನೆ

ಸೋತರೆ ಸಾವಿನ

ಅಭಿನಂದನೆ)

ತ್ರಿವರ್ಣ ಧ್ವಜಗಳನ್ನು ಹಿಡಿದು ಬೀಸುತ್ತ ಆಜಾದಿ ಘೋಷಣೆಗಳ ಕೂಗುವ ಜನಸಮೂಹ. ತಾಪಮಾನ ಹತ್ತು ಡಿಗ್ರಿಗಳಿಗೆ ಕುಸಿದರೂ, ಚಳಿ ಮೈ ಮರಗಟ್ಟಿಸಿದರೂ ಜಗ್ಗದ ಜನಸಮೂಹ. ಶಾಹೀನ್ ಬಾಗ್ ನ ಸಾರ್ವಜನಿಕ ರಸ್ತೆಯಲ್ಲೇ ಎದ್ದು ನಿಂತಿರುವ ಪ್ರತಿಭಟನಾ ನೆಲೆಯಿದು. ನೆಲದ ಮೇಲೆ ಬಿಡಿಸಿದ ಸಿಎಎ-ಎನ್.ಆರ್.ಸಿ. ವಿರೋಧಿ ಬೃಹತ್ ಚಿತ್ರಗಳು… ಅವುಗಳ ಪಕ್ಕ ಉರಿಯುವ ಮೇಣದ ಬತ್ತಿಗಳು. ಬಾನೆತ್ತರದಲ್ಲಿ ಹಾರಾಡುವ ಕೇಸರಿ ಬಿಳಿ ಹಸಿರಿರುವ ಬಲೂನುಗಳು…

ಮರಗಟ್ಟಿಸುವ ಚಳಿ, ಮಳೆ, ಬೆದರಿಕೆಗಳಿಗೆ ಜಗ್ಗದ ಹೆಣ್ಣುಮಕ್ಕಳು ಇವರು. ನಮ್ಮ ಸಂವಿಧಾನ, ನಮ್ಮ ದೇಶ, ನಮ್ಮ ಉಳಿವಿಗಾಗಿ ಇಲ್ಲಿ ಸೇರುತ್ತಿದ್ದೇವೆ ಎನ್ನುತ್ತಾರೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯಕ್ಕೆ ನುಗ್ಗಿ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಮನಬಂದಂತೆ ಥಳಿಸಿ, ಗುಂಡು ಹಾರಿಸಿ ಪುಂಡಾಟ ನಡೆಸಿದ ಪೊಲೀಸರ ಹೇಯ ವರ್ತನೆಯ ನಂತರ ಆರಂಭವಾದ ಪ್ರತಿಫಟನೆಯಿದು. ಮೊದಲ ರಾತ್ರಿ ಇಲ್ಲಿ ಪ್ರತಿಭಟನೆಗೆ ಸೇರಿದವರು ಕೇವಲ ನಾಲ್ವರು ಮಹಿಳೆಯರು ಮತ್ತು ಆರು ಮಂದಿ ಪುರುಷರು. ಮರುದಿನದಿಂದ ಪುರುಷರು ಉದ್ಯೋಗಕ್ಕೆ ಹೋದರೂ ಮಹಿಳೆಯರ ಸಂಖ್ಯೆ ಏರುತ್ತಲೇ ಹೋಯಿತು.

ಈ ಪ್ರತಿಭಟನೆಯಲ್ಲಿ ಮಹಿಳೆಯರೇ ಮುಖ್ಯ ಸಭಿಕರು. ಹಸುಗೂಸು ಮಕ್ಕಳಿಂದ ಹಿಡಿದು ವೃದ್ದೆಯರವರೆಗೆ ಎಲ್ಲ ವಯೋಮಾನದ ಮಹಿಳೆಯರು. ಹಸಿ ಬಾಣಂತಿಯರು… ಪುಟ್ಟ ಮಕ್ಕಳನ್ನು ಕರೆತಂದ ಅಮ್ಮಂದಿರು..ಯುವತಿಯರು… ವಿದ್ಯಾರ್ಥಿನಿಯರು… ಎಲ್ಲರೂ ನಿರ್ಭೀತರು… ಮನಸಿನ ಮಾತನ್ನು ಗಟ್ಟಿದನಿಯಲ್ಲಿ ಹೇಳುವವರು.. ತಾತ ಮುತ್ತಾತಂದಿರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಸತ್ತವರು…ಇದೇ ನಾವು ಹುಟ್ಟಿದ ಮಣ್ಣು….ಇಲ್ಲಿಯೇ ಮಣ್ಣು ಸೇರುತ್ತೇವೆ… ನಮಗೆ ನಾಗರಿಕತೆ ನಿರಾಕರಿಸುವುದು ಪರಮ ಅನ್ಯಾಯ… ಈ ಕಾನೂನು ವಾಪಸಾಗುವ ತನಕ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎನ್ನುವವರು… ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಜನಸಮೂಹ ಹಿಗ್ಗುತ್ತದೆಯೇ ವಿನಾ ಕುಗ್ಗುವುದಿಲ್ಲ.

ಟ್ರಕ್ಕುಗಳಲ್ಲಿ ಚಹಾ, ಹಾಲು, ಊಟ ಬರುತ್ತದೆ.. ಅಜ್ಞಾತ ಹಿತೈಷಿಗಳ ಕೊಡುಗೆ. ಸ್ಥಳೀಯ ರಾಜಕಾರಣಿಗಳನ್ನು ದೂರ ಇರಿಸಲಾಗಿದೆ.

ಗುಂಪು ಹತ್ಯೆಗಳಿಗೆ ಮುಸಲ್ಮಾನರು ಬಲಿಯಾದಾಗ ಬೀದಿಗಿಳಿಯದ ಮುಸಲ್ಮಾನ ಹೆಣ್ಣುಮಕ್ಕಳು ಈಗ ಪ್ರತಿಭಟನೆಯ ಕಣಕ್ಕೆ ಇಳಿದಿದ್ದಾರೆ… ಹಿಮ್ಮೆಟ್ಟುವುದಿಲ್ಲ ಎನ್ನುವ ದೃಢನಿಶ್ಚಯ ಅವರದು. ಬುರ್ಖಾಗಳನ್ನು ಹಿಂದಿಟ್ಟು ಬಂದಿದ್ದಾರೆ… ಕಳೆದು ಹೋಗಿದ್ದ ದನಿಗಳನ್ನು ಮರಳಿ ಪಡೆದು ಬಂದಿದ್ದಾರೆ… ನಮ್ಮ ಸಂವಿಧಾನದ ಅಳಿವು ಉಳಿವಿನ ಪ್ರಶ್ನೆಯಿದು, ನಮ್ಮ ಮಕ್ಕಳು ಮೊಮ್ಮಕ್ಕಳ ಭವಿಷ್ಯದ ಪ್ರಶ್ನೆ… ನಮ್ಮ ಅಪ್ಪಂದಿರು… ತಾತಂದಿರು ಕೂಡ ಈ ಮಣ್ಣಿಗಾಗಿ ತ್ಯಾಗ ಮಾಡಿದ್ದಾರೆ.. ನಮ್ಮನ್ನೇಕೆ ಹೊರದಬ್ಬಲಾಗುತ್ತಿದೆ… ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಅರ್ಥವೇನು ಎಂಬ ನೋವಿನ ಕಣ್ಣೀರು ಕೆನ್ನೆಗಿಳಿಯುತ್ತವೆ… ಹಿಂದುಸ್ತಾನ್ ಎಂಬುದು ಗುಲದಸ್ತಾನ್… ಈ ಹೂಗೊಂಚಲಿನಲ್ಲಿ ಬಗೆಬಗೆಯ ಹೂವುಗಳು… ಪರಿಮಳಗಳು ಇಲ್ಲದಿದ್ದರೆ ಹೂಗೊಂಚಲಿನ ವಿಶೇಷತೆಯೇನು ಉಳಿಯುತ್ತದೆ? ಮುಸ್ಲಿಂ ಮಹಿಳೆಯರ ಕಷ್ಟ ಕಣ್ಣೀರು ಅಳಿಸಲೆಂದು ತ್ರಿವಳಿ ತಲಾಖ್ ರದ್ದುಗೊಳಿಸಿ ಕಾನೂನು ತಂದ ನರೇಂದ್ರ ಮೋದಿಯವರಿಗೆ ನಮ್ಮ ಈಗಿನ ಸಂಕಟ ಯಾಕೆ ಅರ್ಥವಾಗುತ್ತಿಲ್ಲ? ನಮಗೆ ಗುಂಡೇಟು, ಲಾಠಿಯೇಟು ಬಿದ್ದರೂ ನಾವು ಲೆಕ್ಕಿಸುವುದಿಲ್ಲ ಎನ್ನುತ್ತಾರೆ.

ಈ ಪ್ರತಿಭಟನೆ ಈಗಾಗಲೆ ಕಣ್ಣುಗಳನ್ನು ಕೆಂಪಾಗಿಸಿದೆ… ದಮನದ ಸಿಡಿಲು ಯಾವ ಕ್ಷಣದಲ್ಲಿ ಬಡಿಯುವುದೋ ಬಲ್ಲವರಾರು… ಆದರೆ ಈ ಮಹಿಳೆಯರ ಮನೋನಿಶ್ಚಯ ದಮನಗಳ ಬಿಸಿಗೆ ಕರಗುವಂತಹುದಲ್ಲ. ಲಕ್ಷ ವಾಹನಗಳು ಸಂಚರಿಸುವ ಈ ರಸ್ತೆಯನ್ನು ಪುನಃ ಸಂಚಾರಕ್ಕೆ ತೆರೆಯಬೇಕೆಂಬ ಅಹವಾಲು ಹೈಕೋರ್ಟ್ ಮೆಟ್ಟಿಲೇರಿದೆ. ಬಲಪ್ರಯೋಗ ನಡೆಸದೆ ಈ ಕ್ರಮ ಜರುಗಿಸುವಂತೆ ನ್ಯಾಯಾಲಯ ಹೇಳಿದೆ.

ಕೈಫಿ ಆಜ್ಮಿಯವರ ಉಠ್ ಮೇರೀ ಜಾನ್.. ಕವಿತೆಯ ಕೆಲ ಸಾಲುಗಳು…

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ

ಖಲ್ಬ್ ಎ ಮಾಹೋಲ್ ಮೇ ಲರ್ಜಾ ಶರರ್ ಎ ಜಂಗ್ ಹೈ ಆಜ್

ಹೋಸಲೇ ವಕ್ತ್ ಕೇ ಔರ್ ಜೀಸ್ತ್ ಕೆ ಯಕ್-ರಂಗ್ ಹೈ ಆಜ್

ಅಬಾಗೀನೋ ಮೇ ತಪಾಂ ವಲ್ವಲಾ-ಎ-ಸಂಗ್ ಹೈ ಆಜ್

ಹುಸ್ನ್ ಔರ್ ಇಶ್ಕ್ ಹಮ್ ಆವಾಜ್ ಓ ಹಮ್- ಆಹಂಗ್ ಹೈ ಆಜ್

ಜಿಸ್ ಮೇಂ ಜಲತಾ ಹೂಂ ಉಸೀ ಆಗ ಮೇ ಜಲನಾ ಹೈ ತುಝೇ

ಉಠ್ ಮೇರೀ ಜಾನ್ ಮೇರೇ ಸಾಥ್ ಹೀ ಚಲನಾ ಹೈ ತುಝೇ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...