HomeUncategorizedಥೂ....ಮುಂದಿನ ಎಲೆಕ್ಷನ್ನಿನ್ಯಾಗೆ ನಾನು ಬ್ಲೂಜೆಪಿ ಪರುವಾಗಿ ಪ್ರಚಾರ ಮಾಡಕಿಲ್ಲ, ಮಾಡಕಿಲ್ಲ, ಮಾಡಕಿಲ್ಲsss

ಥೂ….ಮುಂದಿನ ಎಲೆಕ್ಷನ್ನಿನ್ಯಾಗೆ ನಾನು ಬ್ಲೂಜೆಪಿ ಪರುವಾಗಿ ಪ್ರಚಾರ ಮಾಡಕಿಲ್ಲ, ಮಾಡಕಿಲ್ಲ, ಮಾಡಕಿಲ್ಲsss

- Advertisement -
- Advertisement -

ಪ್ರಿಯ ಕೇಳುಗರಿಗೆಲ್ಲ ನಮಸ್ಕಾರ. ಆಘಾತವಾಣಿ ವಾರ್ತಾವಾಚನಕ್ಕೆ ಸ್ವಾಗತ. ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಇದೀಗ ವಾರ್ತೆಗಳ ವಿವರ.
ಬಾಬಾ ಲಾಂದೇವನಿಂದ ಹೆಡ್ಡಾಫೀಸಿಗೆ ಬಗನಿಗೂಟ: ಕಂಗಾಲಾಗಿ ಕುಳಿತುಕೊಂಡಿವೆ ನಾಗಪುರದ ಕ್ರಿಮಿಕೀಟ
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಣ್ಣ ಹಜಾರೆ ಜೊತೆ ಸೇರಿ ಭ್ರಷ್ಟಾಚಾರ ನಿರ್ಮೂಲನೆ, ಲೋಕಪಾಲ ಮಸೂದೆ ಇನ್ನಿತ್ಯಾದಿ ಜನಪ್ರಿಯ ಸ್ಲೋಗನ್‍ಗಳ ರಿಯಾಯಿತಿ ದರದ ಮಾರಾಟಕ್ಕಿಳಿದಿದ್ದ ಬಾಬಾ ಲಾಂದೇವ್ ನಂತರ ಬ್ಲೂಜೆಪಿ ಗೆದ್ದ ನಂತರ ಧರಿಸಿದ್ದ ಚೂಡಿದಾರ್ ಸಮೇತ ನಾಗಪುರದ ಕುದುರೆರೇಸ್ ಹೆಡ್ಡಾಫೀಸಿನ ಬಚ್ಚಲುಮನೆಗೆ ನೆಗೆದಿದ್ದರು. ತನ್ನ ಮೂರಡಿ ಗಡ್ಡವನ್ನು ನಿರ್ಮಾಪುಡಿ ನೀರಿನಲ್ಲಿ ನೆನೆಸಿ ನಾಗಪುರದ ಹೆಡ್ಡಾಫೀಸ್ ನೆಲ ಒರೆಸುತ್ತ ತನ್ನ ತಪಂಜಲಿ ಕಂಪನಿಯನ್ನು ಬೆಳೆಸಿಕೊಂಡ ಲಾಂದೇವ್ ಇದೀಗ ಹೆಡ್ಡಾಫೀಸ್ ಗಢವಗಳ ಮುಖಕ್ಕೆ ಡಿಚ್ಚಿ ಹೊಡೆದಿರುವ ವರ್ತಮಾನ ಲಭ್ಯವಾಗಿದೆ. ಮುಂದಿನ ಎಲೆಕ್ಷನ್ನಿನಲ್ಲಿ ನಾನು ಬ್ಲೂಜೆಪಿ ಪರವಾಗಿ ಪ್ರಚಾರ ಮಾಡುವುದಿಲ್ಲ, ನನ್ನ ಬಾಯೊಳಗೆ ಹುಣ್ಣಾಗಿದ್ದು ಮೊದಲಿನಂತೆ ಈಗ ಭಾಷಣ ಜಡಿಯಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಬ್ಲೂಜೆಪಿಯವರು ಅವರ ಗುಂಡಿಯನ್ನು ಅವರೇ ತೋಡಿಕೊಳ್ಳಲಿ, ಬೇಕಿದ್ರೆ, ಅದೇ ಗುಂಡಿಯೊಳಗೆ ಬಿದ್ದು ಅವರ ಮುಖದ ಮೇಲೆ ಅವರೇ ಮಣ್ಣು ಎಳೆದುಕೊಳ್ಳಲಿ, ನಾನು ಗೋಮೂತ್ರವನ್ನು 100 ಡಿಗ್ರಿಯಲ್ಲಿ ಕುದಿಸಿ, ಅದಕ್ಕೆ ಕರ್ಪೂರ ಚಕ್ಕೆ ಲವಂಗ ಮಿಕ್ಸ್ ಮಾಡಿ ಪೆಟ್ರೋಲ್ ಕಂಡುಹಿಡಿದು 35 ರುಪಾಯಿಗೆ ಲೀಟರಿನಂತೆ ಮಾರಿಕೊಂಡು ಬದುಕ್ಕೋತೀನಿ ಎಂದ ಲಾಂದೇವನ ಮಾತು ಕೇಳಿದ ನಾಗಪುರದ ವಯೋವೃದ್ಧ ಕ್ರಿಮಿಕೀಟಗಳು ಗಾಬರಿಬಿದ್ದು ಮೂಛೆರ್É ಹೋಗಿದ್ದಾರೆಂದು ತಿಳಿದುಬಂದಿದೆ.

********

ರೋಗಪೀಡಿತ ಮಂತ್ರಿಗಳೆಲ್ಲ ಫಾರಿನ್ನಿಗೆ ಹಾರ್ತಾವ್ರಲ್ಲ: ಚರಂಡಿಗ್ಯಾಸ್ ತಜ್ಞ ಮೋದಿ ಮಾತಿಗೆ ಬೆಲೆಯೇ ಇಲ್ಲ
ಜಿಲ್ಲೆಗೊಂದರಂತೆ ಆಯುರ್ವೇದ ಆಸ್ಪತ್ರೆ ತೆಗೀತೀನಿ, ಅಡ್ಮಿಟ್ ಆದವ್ರಿಗೆ ಗ್ಲೂಕೋಸ್ ಬದಲು ಗಂಜಲ ಹೆಟ್ಟಿ ರೋಗ ವಾಸಿ ಮಾಡ್ತೀನಿ, ಆಹಾರಪಥ್ಯಕ್ಕೆ ಬದಲಾಗಿ ಗೋವಿನಸೆಗಣಿ, ಹಾಸಿಗೆ ಬೆಡ್ ಬದಲು ಭತ್ತದ ಹುಲ್ಲಿನ ಮೆದೆ ಮೇಲೆ ರೋಗಿ ಮಲಗಿಸ್ತೀನಿ, ಹೀಗೆಂದು ಎರಡೂ ಕೈಯಲ್ಲಿ ಢಮಢಮನೆ ಎದೆ ಚಚ್ಚಿಕೊಂಡು ಆಯುರ್ವೇದದ ಬಗ್ಗೆ ಕಕ್ಕಿಕೊಂಡ ಮೋದಿ ಮಾತನ್ನು ಯಾರೂ ಮೂಸದೆ ಇರುವ ವರ್ತಮಾನ ತಿಳಿದುಬಂದಿದೆ. ಈ ಫುಲ್‍ಟೈಂ ಮೆಮೋರಿ ಲಾಸ್ ಗಿರಾಕಿಯ ಕ್ರಿಸ್ತಪೂರ್ವ ಕಾಲದ ಹೆಲ್ತ್ ಟ್ರೀಟ್‍ಮೆಂಟ್ ತಗೊಂಡ್ರೆ ಅಡ್ಮಿಟ್ ಆದ ಎರಡೇ ಗಂಟೆಗೆ ಕೈಲಾಸಕ್ಕೆ ಪಾರ್ಸೆಲ್ ಆಗೋದು ಗ್ಯಾರಂಟಿ ಎಂದರಿತ ಗೋವಾ ಮುಖ್ಯಮಂತ್ರಿ ಮನೋಹರ ಟುರಿಕ್ಕರ್ ಮೊನ್ನೆಯಷ್ಟೇ ಅಮೆರಿಕಕ್ಕೆ ಚಿಕಿತ್ಸೆಗಂತ ಓಡಿಹೋಗಿ ವಾಪಸ್ ಬಂದರು. ಇದೀಗ ಕೇಂದ್ರ ಕೆಮಿಕಲ್ & ಗೊಬ್ಬರದ ಮಂತ್ರಿ ಡೆಂಟಲ್ ಅನಂತ್ಕುಮಾರ್ ಲಂಡನ್ನಿಗೆ ಆರೋಗ್ಯ ಚಿಕಿತ್ಸೆಗೆ ಓಡಿಹೋಗಿದ್ದಾರೆ. ನಮ್ಮ ಟಣಾಟಣ ಸಂಸ್ಕøತಿಯ ಆರೋಗ್ಯವಿದ್ಯೆ, ವೇದಪುರಾಣ, ಆಯುರ್ವೇದ ಚರಕ ಪಂಡಿತನ ಜ್ಞಾನ ಆಧರಿಸಿದ ಚಿಕಿತ್ಸೆ ತಗೊಳ್ಳಿ ಎಂದು ಪುಂಗುವ ಈ ಪುಂಗಿವಾದಕರು ತಮಗೇನಾದರೂ ರೋಗ ಬಡಿದರೆ ಊರಿಗೆ ಮುಂಚೆ ದೇಶ ಬಿಟ್ಟು ವಿದೇಶಿ ಲಕ್ಸುರಿ ಆಸ್ಪತ್ರೆಗಳ ಬೆಡ್ ಮೇಲೆ ಮಕಾಡೆ ಮಲಗುವ ಈ ಐಚಿತ್ರಕ್ಕೆ ಭಕ್ತಗಣವೇ ಬೇಸ್ತುಬಿದ್ದಿರುವುದಾಗಿ ತಿಳಿದುಬಂದಿದೆ. ‘ಸ್ವದೇಶಿ ವೈದ್ಯಪದ್ದತಿಯ ಬಗ್ಗೆ ರಾತ್ರಿಹಗಲು ಬಡಬಡಿಸುವ ಈ ಮಂದಿ ಚಿಕಿತ್ಸೆಗಾಗಿ ಫಾರಿನ್‍ಗೆ ಹಾರುತ್ತಿದ್ದಾರೆಂದರೆ ಇವರಿಗೆ ಯಾವುದೋ ಗುಹ್ಯರೋಗಳು ಒಕ್ಕರಿಸಿಕೊಂಡಿರಬಹುದು; ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿಯೇ ಫಾರಿನ್‍ಗೆ ಹಾರುತ್ತಿರಬಹುದು’ ಎಂಬ ವಿಶ್ಲೇಷಣೆ ಅವರ ವಿರೋಧಿಗಳ ಪಡಸಾಲೆಯಿಂದ ಕೇಳಿಬಂದಿದೆ.

********

ಸರ್ಕಾರಿ ಬ್ಯಾಂಕ್ ಹೆಸರು ಕಿವಿಗೆ ಬಿದ್ದರೆ ಶ್ರೀಸಾಮಾನ್ಯ ಪರಾರಿ: ದರೋಡೆಕೋರರ ಕಷ್ಟ ನಿವಾರಿಸಲು ಏಕಗವಾಕ್ಷಿ ನೀತಿ ಜಾರಿ
ಓದು ಬರಹ ಗೊತ್ತಿಲ್ಲದ ಅನ್ನೆಜುಕೇಟೆಡ್ ಮುಠ್ಠಾಳರ ಕೊಂಪೆಯಾಗಿರುವ ಕೇಂದ್ರ ಸರ್ಕಾರದ ಮಟಾಶ್ ಯೋಜನೆಗಳಿಂದ ದೇಶದ ಸರ್ಕಾರಿ ಬ್ಯಾಂಕುಗಳು ಕಾಲು ಕಿಸಿದುಕೊಂಡು ಮಲಗಿರುವ ಹೊತ್ತಿನಲ್ಲೇ, ಜನರು ಈ ಬ್ಯಾಂಕ್‍ಗಳಲ್ಲಿ ಹಣ ಡಿಪಾಸಿಟ್ ಮಾಡುವ ಅಂದರ್‍ಬಾಹರ್ ಅಪಾಯಕಾರಿ ಆಟಕ್ಕೆ ಬೆನ್ನು ತಿರುಗಿಸಿ ದಿಕ್ಕಾಪಾಲಾಗಿ ಓಡುತ್ತಿರುವ ಸುದ್ದಿ ಬಂದಿದೆ. ಸರ್ಕಾರಿ ಬ್ಯಾಂಕುಗಳಲ್ಲಿ ಜನರು ಇಡುತ್ತಿದ್ದ ಠೇವಣಿಯ ಮೊತ್ತ ಕಳೆದ 4 ದಶಕಗಳಲ್ಲೇ ಅತ್ಯಂತ ಕನಿಷ್ಠಮಟ್ಟ ತಲುಪಿದೆಯೆಂದು ಸರ್ಕಾರದ ವರದಿಯಿಂದಲೇ ಬಯಲಾಗಿದೆ. ಜನರ ಠೇವಣಿ ದುಡ್ಡನ್ನು ಬ್ಯಾಂಕುಗಳು ವಂಚಕ ಕಂಪನಿಗಳಿಗೆ ಕೊಡುವುದು, ಕಂಪನಿ ಮಾಲೀಕರು, ಕೇಂದ್ರ ಸರ್ಕಾರದ ಮೂರೂಬಿಟ್ಟ ಮಂತ್ರಿಗಳಿಗೆ ಪುಳಿಯೊಗರೆ ಪಾರ್ಟಿ ಕೊಟ್ಟು ಹಣದ ಸಮೇತ ದೇಶ ಬಿಟ್ಟು ಓಡಿಹೋಗುವುದು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಬ್ಯಾಂಕಿನಲ್ಲಿ ಹಣವಿಡುವುದಕ್ಕಿಂತ ಆ ದುಡ್ಡನ್ನು ನಾವೇ ಪರಪರ ಹರಿದು ಬಿಸಾಕುವುದು ಬೆಟರ್ ಎಂಬ ತೀರ್ಮಾನಕ್ಕೆ ಜನರು ಬಂದಿರುವ ಸೂಚನೆಯಿದೆಯೆಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ. ಇದರೊಡನೆ ದೇನಾ ಬ್ಯಾಂಕ್, ವಿಜಯಾಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಬ್ಯಾಂಕ್‍ಗಳನ್ನು ಒಂದುಗೂಡಿಸಿ ಒಂದೇ ಬ್ಯಾಂಕ್ ಮಾಡಲು ಹೊರಟಿರೋ ಮುಠ್ಠಾಳ ಮಡೆಯರ ಹುನ್ನಾರವೇನೆಂದು ಆರ್ಥಿಕತಜ್ಞರಲ್ಲಿ ವಿಚಾರಿಸಿದಾಗ.. ಬ್ಯಾಂಕ್ ವಂಚಕರು ಸೆಪರೇಟ್ ಸೆಪರೇಟಾಗಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಮುಂಡಾಮೋಚಲು ತೊಂದರೆಯಾಗಿರುವುದರಿಂದ ಒಂದೇ ಬ್ಯಾಂಕಿನಲ್ಲಿ ದೊಡ್ಡಮೊತ್ತದ ಸಾಲದ ದರೋಡೆ ನಡೆಸಲು “ಏಕಗವಾಕ್ಷಿ ಟ್ಯಾಕ್ಸ್‍ಮನಿ ದರೋಡೆ’ ಸ್ಕೀಂ ಕೆಳಗೆ ಈ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

********

ಕಾಲೆತ್ತಿಕೊಂಡ ಧಡಿಯೂರಪ್ಪನ ಆಪರೇಷನ್ ಕಮಲ: ಬೆರಕೆ ಸರ್ಕಾರ ಉರುಳಿಸೋ ಯತ್ನ ವಿಫಲ
ಅಧಿಕಾರದಲ್ಲಿದ್ದಾಗ ಚೆಕ್ಕು, ಡಿಡಿ, ಮನಿಯಾರ್ಡರ್‍ನಲ್ಲೆಲ್ಲ ಲಂಚ ಗೆಬರಿದ ಕಳ್ಳಗಂಟನ್ನು ಬಿಚ್ಚದೆ, ಬೆಂಗಳೂರು ಸಕಲೇಶಪುರ ಮುಂತಾದ ಊರುಗಳ ಪಿಕ್‍ಪಾಕೆಟರ್‍ಗಳು, ದರೋಡೆಕೋರರು, ಮಣ್ಣುಕಳ್ಳರ ಹಿಂದೆ ಬಿದ್ದಿರುವ ಧಡಿಯೂರಪ್ಪ ‘ನಿನ್ನ ಮಿನಿಸ್ಟರ್ ಮಾಡ್ತೀನಿ ಕೈ-ದಳ ಪಕ್ಷದ ಎಮ್ಮೆಲ್ಲೆಗಳನ್ನ ಪರ್ಚೇಸ್ ಮಾಡ್ಕೊಡು’ ಎಂದು ದುಂಬಾಲು ಬಿದ್ದಿದ್ದರೆಂಬ ಸುದ್ದಿ ವರದಿಯಾಗಿದೆ. ಅತ್ತ ಜಾರಕಿಹೊಳಿ ಬ್ರದರ್ಸ್ ಒದ್ದ ಎಡಗಾಲಿನ ಏಟಿಗೆ ಬುರುಡೆ ತೂತು ಮಾಡಿಕೊಂಡು ಬ್ಯಾಂಡೇಜ್ ಹಾಕಿಸಿಕೊಳ್ಳೋ ಲೆವೆಲ್ಲಿಗೆ ಬಂದಿರುವ ಬ್ಲೂಜೆಪಿ ಪಕ್ಷದ ಪ್ಲಾನು ಎರಡೂ ಕಾಲೆತ್ತಿಕೊಂಡು ಕಿಸಕೊಂಡು ಬಿದ್ದಿದ್ದು ಮತ್ತೊಮ್ಮೆ ಮುಖಭಂಗವಾಗಿದೆ. ಹೊಲಿಸಿಕೊಂಡಿದ್ದ ಹೊಸ ಕೋಟನ್ನು ಮಡಚಿಡುತ್ತ ಗೋಳಾಡುತ್ತಲೇ ವಾಮಿಟ್ ಶಾಗೆ ಫೋನ್ ಮಾಡಿದ ಧಡಿಯೂರಪ್ಪ ‘ಹಲೋ ಹಲೋ, ನಮ್ ಪ್ಲಾನಿಗೆ ವಾಂತಿಬೇಧಿಯಾಗಿ ಸ್ಕೆಚ್ಚು.. ಪಚ್ಚ್ ಎಂದಿದೆ.. ಮುಂದೆ ಯಾವತಿಪ್ಪೆ ಸೆಗಣಿ ತಿಂದರೆ ಅಧಿಕಾರ ಪಡೆಯಬಹುದು ಹೇಳಿ’ ಎಂದು ಕೇಳಿದರಂತೆ. ಅದಕ್ಕೆ ವಾಮಿಟ್ ಶಾ “ಅರೇ ಧಡಿಯೂರಪ್ಪಾಜೀ.. ಆಪ್ ಕೈಕೂ ಬಾರ್ ಬಾರ್ ಅಗಣಿ ಹಾಕಕ್ಕೆ ಹೋಗಿ.. ಉಸ್ಕೋ ಸಿಗಿಸ್ಕೋತೀರಿ, ಫಿರ್‍ಸೆ ಮತ್ ಫೋನ್ ಕರ್ನಾ.. ಮುಝೆ ಬಹೋತ್ ದರ್ದ್ ಹೋತಾ ಹಯ್, ಆಪ್ ಏಕ್ ಕಾಮ್ ಕೀಜಿಯೇ, ಏಕ್ ಚೊಂಬು ಉಠಾಕೆ ಕೋಯಿ ಡ್ಯಾಮ್ ಕಡೀಕೆ ಜಾವೋ. ವಾಪಸ್ ಮತ್ ಆನಾ.. ಡ್ಯಾಮ್ ಕೆ ಅಂದರ್ ಜಂಪ್ ಮಾರ್ಕೆ ಡೂಬ್ ಮರೋ” ಎಂದು ಬೈದು ಫೋನ್ ಕುಕ್ಕಿದರೆಂದು ಬಲ್ಲ ಮೂಲಗಳು ತಿಳಿಸಿವೆ.
ಇಲ್ಲಿಗೆ ನಮ್ಮ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ, ಮುಂದಿನವಾರ ಇದೇ ಸಮಯಕ್ಕೆ. ಮತ್ತೆ ಸಿಗೋಣ. ಅಲ್ಲಿಯವರೆಗೂ ನಮಸ್ಕಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...