Homeಮುಖಪುಟನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

ನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

- Advertisement -
- Advertisement -
ನಮ್ಮ ನಾಳೆಗಳಿಗೆ ನೀವು ಪ್ಲಾಸ್ಟಿಕ್ ಕೊಳೆಯನ್ನು ನೀಡಬೇಡಿ. ನಾಳೆಗಳು ನಮ್ಮದು. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಡಲು ಕೈಜೋಡಿಸಿ. ಅದಕ್ಕಾಗಿ ನಿಮ್ಮ ಕಸವನ್ನು ನೀವು ವಾಪಾಸು ಪಡೆಯಿರಿ. ಪಡೆದು ಅದನ್ನು ಪುನರ್ಬಳಕೆ ಮಾಡಿ. ಹೊಸ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿಕೊಳ್ಳಿ, ಎಂದು ದೇಶದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಇಪ್ಪತ್ತಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳಿಗೆ ಪತ್ರಕಳಿಸಿ ಆಗ್ರಹಿಸುವ ವಿನೂತನ ಅಭಿಯಾನವನ್ನು ಹೆಗ್ಗಡಹಳ್ಳಿಯ ಮಕ್ಕಳು ಆರಂಭಿಸಲಿದ್ದಾರೆ.
ಪಠ್ಯೇತರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಕೇವಲ ಜಾಣರಷ್ಟೇ ಅಲ್ಲ ಸಮಾಜಕ್ಕ ತುಡಿಯುವ ಸೂಕ್ಷ್ಮಜೀವಿಗಳು ಹೌದು. ಶಾಲೆಯಲ್ಲಿ ಅತ್ಯುತ್ತಮವಾಗಿ ಓದುವುದಲ್ಲದೇ ಸದಾ ಒಂದಿಲ್ಲೊಂದು ವಿಭಿನ್ನ ಚಟುವಟಿಕೆ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿ ಹೆಸರಿನಲ್ಲಿ ನಡೆಯುವ ಅಂತರ್‍ಶಾಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈ ಶಾಲೆಗೆ ಕಡ್ಡಾಯವಾಗಿ ಬಹುಮಾನಗಳ ಸುರಿಮಳೆಯಾಗುತ್ತದೆ. ರಾಜ್ಯ ಮಟ್ಟದವರೆಗೂ ವಿದ್ಯಾರ್ಥಿಗಳು ಹೋಗಿ ಬಹುಮಾನ ಗೆದ್ದು ತಂದಿದ್ದಾರೆ.
ಪ್ರತಿ ತಿಂಗಳು ಮಕ್ಕಳು ‘ಅರಳೀಮರ’ ಹೆಸರಿನಲ್ಲಿ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಈಗಾಗಲೇ 15 ಬಣ್ಣ ಬಣ್ಣದ ಕೈಬರದ ಮಕ್ಕಳ ಸಂಚಿಕೆಗಳು ಹಲವರ ಕೈಸೇರಿ ಮೆಚ್ಚಿಗೆ ಗಳಿಸಿವೆ. ಚಿತ್ರಗಳು, ಕಥೆ ಕವನಗಳ ಮೂಲಕ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಸಸಕ್ತವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ನಾಲ್ಕೈದು ಅತ್ಯುತ್ತಮ ನಾಟಕಗಳನ್ನು ಕಲಿತು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಲವು ನಾಟಕೋತ್ಸವಗಳಲ್ಲಿ ಭಾಗವಹಿಸಿ ತಮ್ಮ ನಾಟಕದ ಹುಚ್ಚನ್ನು ಜನರಿಗೂ ದಾಟಿಸಿದ್ದಾರೆ.
ಈ ರೀತಿ ಈ ಶಾಲೆಯ ಮಕ್ಕಳ ಬಗ್ಗೆ ಪುಟಗಟ್ಟಲೇ ಬರೆಯುತ್ತಲೇ ಹೋಗಬಹುದು. ಮಕ್ಕಳು ಇಷ್ಟೆಲ್ಲಾ ಗಮನಾರ್ಹವಾದ ಸಾಧನೆ ಮಾಡಲು ಕಾರಣವೆನೆಂದರೆ ಅವರೊಳಗಿನ ಪ್ರತಿಭೆಯ ಅಭಿವ್ಯಕ್ತಿಗೆ ವಾಹಕವಾಗಿ ಕೆಲಸ ಮಾಡುತ್ತಿರುವ ಅವರ ಉತ್ಸಾಹಿ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಿಯಂಗಡಿ ಗ್ರಾಮದ ಇವರು ಸಾಮಾಜಿಕ ಚಳವಳಿಗಳಲ್ಲಿ ತೊಡಗಿಕೊಂಡ ಪರಿಣಾಮ ಅಗಾಧ ಅನುಭವಗಳನ್ನು ಪಡೆದವರು. ನಂತರ ರಂಗಡಿಪ್ಲೋಮೊ ಕೋರ್ಸ್ ಮುಗಿಸಿ ನಾಟಕ ಕಲಿಸುತ್ತಿದ್ದರು. ಸರ್ಕಾರ ಒಮ್ಮೆ ಹೈಸ್ಕೂಲ್‍ಗಳಿಗೆ 46 ನಾಟಕದ ಮೇಷ್ಟ್ರುಗಳನ್ನು ಆಯ್ಕೆ ಮಾಡಿಕೊಂಡಾಗ ಇವರು ಸಹ ಆಯ್ಕೆಯಾದರು.
ಅಲ್ಲಿಂದ ಅವರು ತಾನು ಕಲಿತ ವಿದ್ಯೆ ಮತ್ತು ಸಾಮಾಜಿಕ ಚಳವಳಿ ಕೊಟ್ಟಿದ್ದ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಲು ಆರಂಭಿಸಿದರು. ಮೊದಲು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಅಲ್ಲಿನ ಮಕ್ಕಳೊಡನೆ ಬೆರೆಸು ಕಲಿಸುತ್ತಾ, ತಾನು ಕಲಿಸುತ್ತಾ ಮಕ್ಕಳನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ‘ಹೆಮ್ಮರ’ ಹೆಸರಿನ ಮಕ್ಕಳ ಮಾಸಿಕ ಪತ್ರಿಕೆಯನ್ನು ಆರಂಭಿಸಿ ಮಕ್ಕಳು ಬರೆಯಲು ಪ್ರೋತ್ಸಾಹ ನೀಡಿದರು. ಮಕ್ಕಳ ಬರಹಕ್ಕೆ ತಮ್ಮ ಕೈಬರಹ ಮತ್ತು ಚೆಂದದ ಚಿತ್ರ ಸೇರಿಸಿ ಎಲ್ಲರ ಗಮನ ಸೆಳಯುವಂತೆ ಮಾಡಿದರು. ನಾಟಕಗಳನ್ನು ಕಲಿಸಿ ರಂಗಭೂಮಿಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರು.
ಆಟ-ಪಾಠ ನಾಟಕದ ಜೊತೆಗೆ ತಾನಿರುವ ಸಮಾಜ – ಪರಿಸರವನ್ನು ಮಕ್ಕಳು ಅಧ್ಯಯನ ಮಾಡಬೇಕು, ಅದರೊಡನೆ ತಾದ್ಯಾತ್ಮ ಸಾಧಿಸಿ ಅದಕ್ಕೆ ಪ್ರತಿಕ್ರಿಯಿಸಬೇಕೆನ್ನುವುದು ಅವರ ಆಶಯ. ಅವರ ಕನಸನ್ನು ಮಕ್ಕಳು ಬಹುಬೇಗ ನನಸು ಮಾಡಿದರು. ತಾವು ಮಾಡುವ ಪ್ರತಿ ಕೆಲಸದಲ್ಲಿ ಹೊಸತು ಸೃಜನಶೀಲತೆಯನ್ನು ಮಕ್ಕಳು ಕಲಿತರು. ಸಮಾಜಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದರು. ಈ ಕುರಿತು ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಬಂದವು.

ಅಲ್ಲಿಂದ ಹೆಗ್ಗಡಹಳ್ಳಿ ಶಾಲೆಗೆ ವರ್ಗಾವಣೆಯಾದ ಸಂತೋಷ ಗುಡ್ಡಿಯಂಗಡಿಯವರು ಇಲ್ಲಿಯೂ ತಮ್ಮ ಕಾಯಕವನ್ನು ಮುಂದುವರೆಸಿದರು. ಇಲ್ಲಿಯ ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಮಕ್ಕಳು ಎಲ್ಲಾ ಹೊಸತನದ ಪ್ರಯೋಗಗಳಿಗೆ ಸಿದ್ದರಾಗಿರುತ್ತಾರೆ, ಪ್ರತಿ ಮಕ್ಕಳಲ್ಲಿಯೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಗೆಯಲು ಸಣ್ಣ ಸಹಾಯ ಬೇಕಾಗುತ್ತದೆ. ಅಂತಹ ಸಹಾಯ ಪೋಷಕರಿಂದಲೋ, ಅಥವಾ ಶಿಕ್ಷಕರಿಂದಲೋ ಸಿಕ್ಕಿದರೆ ಆ ಮಕ್ಕಳು ಮಹತ್ವದ್ದನ್ನು ಸಾಧಿಸುತ್ತಾರೆ ಎಂಬುದಕ್ಕೆ ಹೆಮ್ಮರಗಾಲ ಮತ್ತು ಹೆಗ್ಗಡಹಳ್ಳಿ ಮಕ್ಕಳೇ ಸಾಕ್ಷಿ.

ಮಕ್ಕಳೊಂದಿಗೆ ಸಂತೋಷ್ ಗುಡ್ಡಿಯಂಗಡಿ
ಈಗ ಹಗ್ಗಡಹಳ್ಳಿ ಶಾಲೆಯ ಮಕ್ಕಳು ಕಳೆದ ಐದು ದಿನಗಳಿಂದ ಬಣ್ಣದ ಮೇಳವನ್ನು ಆರಂಭಿಸಿದ್ದಾರೆ. ಪರಿಸರ ರಕ್ಷಣೆಯ ಕುರಿತು ಆ ಊರಿನ ದೊಡ್ಡವರಿಗೆ ನಾಟಕ, ಹಾಡು, ಚಿತ್ರಕಲೆ, ಪ್ರಚಾರಾಂದೋಲನದ ಮೂಲಕ ಪಾಠ ಹೇಳುತ್ತಿದ್ದಾರೆ. ಇಡೀ ಶಾಲೆಯ ಶಿಕ್ಷಕವೃಂದ ಮಕ್ಕಳ ಬೆನ್ನಿಗೆ ನಿಂತಿದೆ. ಸಂತೋಷ್ ಗುಡ್ಡಿಯಂಗಡಿಯವರು ಇದೆಲ್ಲದ ಚಾಲಕಶಕ್ತಿಯಾಗಿದ್ದಾರೆ. ನಾಗೇಶ್ ಹೆಗ್ಡೆ ತರಹದ ಜನಪರ ವಿಜ್ಞಾನಿಗಳ ಬೆಂಬಲ ಈ ಮಕ್ಕಳಿಗಿದೆ. ನಮ್ಮ ಕಾರ್ಯಕ್ಕೆ ಪ್ರೇರಣೆ ಸ್ವೀಡನ್ ದೇಶದ ಹದಿನಾರರ ಬಾಲಕಿ, ಹವಾಮಾನ ಬದಲಾವಣೆಯ ವಿರುದ್ಧ ಮಕ್ಕಳನ್ನು ಸಂಘಟಿಸುತ್ತಿರುವ GRETA THUNBERG. ಅವಳ fridayforfuture ಆಂದೋಲನವನ್ನ ನಾವು #ನಾಳೆಗಳು ನಮ್ಮದು #futureisours ಎಂದು ಅಭಿಯಾನದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಹೆಗ್ಗಡಹಳ್ಳಿಯ ಮಕ್ಕಳು. ಒಬ್ಬ ನಾಟಕ ಮೇಷ್ಟ್ರು ಇಷ್ಟೆಲ್ಲಾ ಮಕ್ಕಳಿಗೆ ಸ್ಫೂರ್ತಿಯಾಗಬಹುದಾದರೆ ಎಲ್ಲಾ ಶಾಲೆಗಳಲ್ಲಿಯೂ ರಂಗಭೂಮಿ ಶಿಕ್ಷಕರಿದ್ದರೆ ಎಷ್ಟು ಚೆನ್ನ ಅಲ್ವ?
ಸಂತೋಷ್ ಗುಡ್ಡಿಯಂಗಡಿಯವರ ಮುಖಪುಟಕ್ಕೆ ಹೋಗಿ ನೋಡಿ, ಓದಿ ಅವರನ್ನು ಬೆಂಬಲಿಸುವುದು, ಆ ಕೆಲಸಗಳನ್ನು ನಮ್ಮ ಊರಿನಲ್ಲಿಯೂ ಮಾಡಲು ಮುಂದಾಗುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗುತ್ತೀರಿ ಎಂಬುದು ಪತ್ರಿಕೆಯ ಆಶಯ. ಹೆಗ್ಗಡಹಳ್ಳಿ ಶಾಲಾ ಮಕ್ಕಳಿಗೆ, ಅವರ ಶಿಕ್ಷಕರಿಗೆ ನಾನು ಗೌರಿ ಪತ್ರಿಕೆ ಬಳಗದಿಂದ ಶುಭಾಶಯಗಳು.
ಈಗ ಮುಂದಿನದು ಆ ಮಕ್ಕಳು ಹೊರತಂದಿರುವ ಬಣ್ಣದ ಪತ್ರವನ್ನು ಯಥಾವತ್ತು ಪ್ರಕಟಿಸುತ್ತಿದ್ದೇವೆ. ನೀವೆಲ್ಲರೂ ತಪ್ಪದೇ ಓದಬೇಕೆಂದು ಮನವಿ.
ನಮ್ಮದು ಹೆಗ್ಗಡಹಳ್ಳಿ ಎಂಬ ಪುಟ್ಟ ಊರು. ಇದು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯಲ್ಲಿದೆ. ನಮ್ಮ ಊರಿನಲ್ಲಿ ಹತ್ತಿಪ್ಪತ್ತು ಚಿಕ್ಕ ಚಿಕ್ಕ ಅಂಗಡಿಗಳಿವೆ. ಎಲ್ಲಾ ಅಂಗಡಿಯಲ್ಲಿಯೂ ನೀವು ಉತ್ಪಾದಿಸುವ ತಿಂಡಿ ಸಿಗುತ್ತದೆ. ನಾವೂ ತಿನ್ನುತ್ತೇವೆ.
ನಮ್ಮ ಊರನ್ನ ನಾವು ಗಮನವಿಟ್ಟು ನೋಡಿದಾಗ, ಊರಿನ ಬೀದಿ, ಮೋರಿಗಳಲ್ಲೆಲ್ಲಾ ಪ್ಲಾಸ್ಟಿಕ್ ಕಸದ್ದೇ ರಾಶಿ. ನಾವೇ ತಿಂದು ಬಿಸಾಕಿದ ನಿಮ್ಮ ಕಂಪೆನಿಯ ಪ್ಯಾಕೇಟುಗಳು ಎಲ್ಲಿ ನೋಡಿದರೂ ಕಾಣಸಿಗುತ್ತಿವೆ. ನಮಗೆ ಕೆಲವೊಂದು ಪ್ರಶ್ನೆಗಳಿವೆ.
• ನೀವು ಭಾರತದ ಮಕ್ಕಳಿಗಾಗಿ ದಿನವೊಂದಕ್ಕೆ ಇಂತಹ ಎಷ್ಟು ಪ್ಯಾಕೇಟುಗಳನ್ನು ಉತ್ಪಾದಿಸುತ್ತೀರಿ?
• ಪ್ಯಾಕೇಟುಗಳ ತಯಾರಿಕೆಗೆ ಪ್ಲಾಸ್ಟಿಕ್ ಪುನರ್ಬಳಕೆ ಮಾಡುತ್ತೀರಾ?
• ನಿಮ್ಮ ಫ್ಯಾಕ್ಟರಿಯಿಂದ ನಮ್ಮ ಊರಿಗೆ ತಿಂಡಿ ಕಳಿಸಿ ಮಾರಾಟ ಮಾಡುವ ಬದ್ಧತೆಯುಳ್ಳ ನಿಮಗೆ, ನೀವೇ ಉತ್ಪಾದಿಸಿದ ಪ್ಲಾಸ್ಟಿಕ್ ಕೊಳೆಯನ್ನು ಮರಳಿ ಪಡೆದು ಪುನರ್ಬಳಕೆ ಮಾಡಬೇಕೆಂಬ ಸಣ್ಣ ಕಾಳಜಿಯೂ ಇಲ್ಲವಲ್ಲ ಯಾಕೆ?
• ನಿಮಗೆ ದುಡ್ಡು ಕೊಟ್ಟು ತಿಂಡಿಯ ಜೊತೆಗೆ, ನಮ್ಮ ನಾಳೆಗಳಿಗೆ ಮಾರಕವಾದ ಪ್ಲಾಸ್ಟಿಕ್ ಕೊಳೆಯನ್ನು ಕೊಂಡುಕೊಳ್ಳಬೇಕೆ?
• ಮಕ್ಕಳಿಗಾಗಿ ರುಚಿರುಚಿಯಾದ ತಿಂಡಿಯನ್ನು ಉತ್ಪಾದಿಸುವ ನಿಮಗೆ, ಮಕ್ಕಳ ನಾಳೆಗಳು ಸುಂದರವಾಗಿರಬೇಕೆಂದು ಎಂದಾದರೂ ಅನಿಸಿದೆಯೇ?
ಹಾಗೆ ಅನಿಸಿದರೆ, ನಿಮ್ಮ ಪ್ಲಾಸ್ಟಿಕ್ ಕೊಳೆಗೆ ನೀವು ಉತ್ತರದಾಯಿಯಾಗಲೇಬೇಕು. ನಾವು ಹೆಗ್ಗಡಹಳ್ಳಿಯ ಮಕ್ಕಳು ನಿಮ್ಮ ಬಳಿ ಹೇಳುವ ಪಿಸುಮಾತಿದು:
• ನಾಳೆಗಳು ನಮ್ಮದು
• ನಿಮ್ಮ ತಿಂಡಿ ಸಾಕು, ಪ್ಲಾಸ್ಟಿಕ್ ಕೊಳೆ ಬೇಡ.
• ನಮಗೆ ಆರೋಗ್ಯಕರವಾದ ನಾಳೆಗಳನ್ನು ಉಳಿಸಿಕೊಡಿ
• ನೀವು ತಿಂಡಿ ಸುತ್ತಿ ಕಳಿಸಿದ ಪ್ಯಾಕೇಟನ್ನು ನೀವು ವಾಪಾಸು ಪಡೆಯಲೇಬೇಕು. ಇಡೀ ದೇಶಕ್ಕೆ ನೀವು ಈಗಾಗಲೇ ಹಲವು ಟನ್ ಪ್ಲಾಸ್ಟಿಕ್‍ನ್ನು ನೀಡಿರಬಹುದು. ಇನ್ನು ಮುಂದೆಯಾದರೂ ನಿಮ್ಮ ಪ್ಯಾಕೇಟುಗಳನ್ನು ವಾಪಾಸು ಪಡೆದು ಅದನ್ನೇ ಮರುಬಳಕೆ ಮಾಡಿ. ಹೊಸ ಉತ್ಪಾದನೆಯನ್ನು ನಿಲ್ಲಿಸಿ. ನಮ್ಮ ಆರೋಗ್ಯಕರ ನಾಳೆಗಾಗಿ ಕೈಜೋಡಿಸಿ.
ಮಕ್ಕಳ ಮೇಲೆ ಪ್ರೀತಿಯಿಂದ ತಿಂಡಿ ಕೊಡಿಸುತ್ತೀರಲ್ಲ;
ಆ ಮಕ್ಕಳು ಬದುಕಲು ಯೋಗ್ಯವಾದ ಪರಿಸರವನ್ನೂ ಉಳಿಸಿಕೊಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...