Homeಮುಖಪುಟನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

ನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

- Advertisement -
- Advertisement -
ನಮ್ಮ ನಾಳೆಗಳಿಗೆ ನೀವು ಪ್ಲಾಸ್ಟಿಕ್ ಕೊಳೆಯನ್ನು ನೀಡಬೇಡಿ. ನಾಳೆಗಳು ನಮ್ಮದು. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಡಲು ಕೈಜೋಡಿಸಿ. ಅದಕ್ಕಾಗಿ ನಿಮ್ಮ ಕಸವನ್ನು ನೀವು ವಾಪಾಸು ಪಡೆಯಿರಿ. ಪಡೆದು ಅದನ್ನು ಪುನರ್ಬಳಕೆ ಮಾಡಿ. ಹೊಸ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿಕೊಳ್ಳಿ, ಎಂದು ದೇಶದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಇಪ್ಪತ್ತಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳಿಗೆ ಪತ್ರಕಳಿಸಿ ಆಗ್ರಹಿಸುವ ವಿನೂತನ ಅಭಿಯಾನವನ್ನು ಹೆಗ್ಗಡಹಳ್ಳಿಯ ಮಕ್ಕಳು ಆರಂಭಿಸಲಿದ್ದಾರೆ.
ಪಠ್ಯೇತರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಕೇವಲ ಜಾಣರಷ್ಟೇ ಅಲ್ಲ ಸಮಾಜಕ್ಕ ತುಡಿಯುವ ಸೂಕ್ಷ್ಮಜೀವಿಗಳು ಹೌದು. ಶಾಲೆಯಲ್ಲಿ ಅತ್ಯುತ್ತಮವಾಗಿ ಓದುವುದಲ್ಲದೇ ಸದಾ ಒಂದಿಲ್ಲೊಂದು ವಿಭಿನ್ನ ಚಟುವಟಿಕೆ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿ ಹೆಸರಿನಲ್ಲಿ ನಡೆಯುವ ಅಂತರ್‍ಶಾಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈ ಶಾಲೆಗೆ ಕಡ್ಡಾಯವಾಗಿ ಬಹುಮಾನಗಳ ಸುರಿಮಳೆಯಾಗುತ್ತದೆ. ರಾಜ್ಯ ಮಟ್ಟದವರೆಗೂ ವಿದ್ಯಾರ್ಥಿಗಳು ಹೋಗಿ ಬಹುಮಾನ ಗೆದ್ದು ತಂದಿದ್ದಾರೆ.
ಪ್ರತಿ ತಿಂಗಳು ಮಕ್ಕಳು ‘ಅರಳೀಮರ’ ಹೆಸರಿನಲ್ಲಿ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಈಗಾಗಲೇ 15 ಬಣ್ಣ ಬಣ್ಣದ ಕೈಬರದ ಮಕ್ಕಳ ಸಂಚಿಕೆಗಳು ಹಲವರ ಕೈಸೇರಿ ಮೆಚ್ಚಿಗೆ ಗಳಿಸಿವೆ. ಚಿತ್ರಗಳು, ಕಥೆ ಕವನಗಳ ಮೂಲಕ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಸಸಕ್ತವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ನಾಲ್ಕೈದು ಅತ್ಯುತ್ತಮ ನಾಟಕಗಳನ್ನು ಕಲಿತು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಲವು ನಾಟಕೋತ್ಸವಗಳಲ್ಲಿ ಭಾಗವಹಿಸಿ ತಮ್ಮ ನಾಟಕದ ಹುಚ್ಚನ್ನು ಜನರಿಗೂ ದಾಟಿಸಿದ್ದಾರೆ.
ಈ ರೀತಿ ಈ ಶಾಲೆಯ ಮಕ್ಕಳ ಬಗ್ಗೆ ಪುಟಗಟ್ಟಲೇ ಬರೆಯುತ್ತಲೇ ಹೋಗಬಹುದು. ಮಕ್ಕಳು ಇಷ್ಟೆಲ್ಲಾ ಗಮನಾರ್ಹವಾದ ಸಾಧನೆ ಮಾಡಲು ಕಾರಣವೆನೆಂದರೆ ಅವರೊಳಗಿನ ಪ್ರತಿಭೆಯ ಅಭಿವ್ಯಕ್ತಿಗೆ ವಾಹಕವಾಗಿ ಕೆಲಸ ಮಾಡುತ್ತಿರುವ ಅವರ ಉತ್ಸಾಹಿ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಿಯಂಗಡಿ ಗ್ರಾಮದ ಇವರು ಸಾಮಾಜಿಕ ಚಳವಳಿಗಳಲ್ಲಿ ತೊಡಗಿಕೊಂಡ ಪರಿಣಾಮ ಅಗಾಧ ಅನುಭವಗಳನ್ನು ಪಡೆದವರು. ನಂತರ ರಂಗಡಿಪ್ಲೋಮೊ ಕೋರ್ಸ್ ಮುಗಿಸಿ ನಾಟಕ ಕಲಿಸುತ್ತಿದ್ದರು. ಸರ್ಕಾರ ಒಮ್ಮೆ ಹೈಸ್ಕೂಲ್‍ಗಳಿಗೆ 46 ನಾಟಕದ ಮೇಷ್ಟ್ರುಗಳನ್ನು ಆಯ್ಕೆ ಮಾಡಿಕೊಂಡಾಗ ಇವರು ಸಹ ಆಯ್ಕೆಯಾದರು.
ಅಲ್ಲಿಂದ ಅವರು ತಾನು ಕಲಿತ ವಿದ್ಯೆ ಮತ್ತು ಸಾಮಾಜಿಕ ಚಳವಳಿ ಕೊಟ್ಟಿದ್ದ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಲು ಆರಂಭಿಸಿದರು. ಮೊದಲು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಅಲ್ಲಿನ ಮಕ್ಕಳೊಡನೆ ಬೆರೆಸು ಕಲಿಸುತ್ತಾ, ತಾನು ಕಲಿಸುತ್ತಾ ಮಕ್ಕಳನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ‘ಹೆಮ್ಮರ’ ಹೆಸರಿನ ಮಕ್ಕಳ ಮಾಸಿಕ ಪತ್ರಿಕೆಯನ್ನು ಆರಂಭಿಸಿ ಮಕ್ಕಳು ಬರೆಯಲು ಪ್ರೋತ್ಸಾಹ ನೀಡಿದರು. ಮಕ್ಕಳ ಬರಹಕ್ಕೆ ತಮ್ಮ ಕೈಬರಹ ಮತ್ತು ಚೆಂದದ ಚಿತ್ರ ಸೇರಿಸಿ ಎಲ್ಲರ ಗಮನ ಸೆಳಯುವಂತೆ ಮಾಡಿದರು. ನಾಟಕಗಳನ್ನು ಕಲಿಸಿ ರಂಗಭೂಮಿಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರು.
ಆಟ-ಪಾಠ ನಾಟಕದ ಜೊತೆಗೆ ತಾನಿರುವ ಸಮಾಜ – ಪರಿಸರವನ್ನು ಮಕ್ಕಳು ಅಧ್ಯಯನ ಮಾಡಬೇಕು, ಅದರೊಡನೆ ತಾದ್ಯಾತ್ಮ ಸಾಧಿಸಿ ಅದಕ್ಕೆ ಪ್ರತಿಕ್ರಿಯಿಸಬೇಕೆನ್ನುವುದು ಅವರ ಆಶಯ. ಅವರ ಕನಸನ್ನು ಮಕ್ಕಳು ಬಹುಬೇಗ ನನಸು ಮಾಡಿದರು. ತಾವು ಮಾಡುವ ಪ್ರತಿ ಕೆಲಸದಲ್ಲಿ ಹೊಸತು ಸೃಜನಶೀಲತೆಯನ್ನು ಮಕ್ಕಳು ಕಲಿತರು. ಸಮಾಜಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದರು. ಈ ಕುರಿತು ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಬಂದವು.

ಅಲ್ಲಿಂದ ಹೆಗ್ಗಡಹಳ್ಳಿ ಶಾಲೆಗೆ ವರ್ಗಾವಣೆಯಾದ ಸಂತೋಷ ಗುಡ್ಡಿಯಂಗಡಿಯವರು ಇಲ್ಲಿಯೂ ತಮ್ಮ ಕಾಯಕವನ್ನು ಮುಂದುವರೆಸಿದರು. ಇಲ್ಲಿಯ ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಮಕ್ಕಳು ಎಲ್ಲಾ ಹೊಸತನದ ಪ್ರಯೋಗಗಳಿಗೆ ಸಿದ್ದರಾಗಿರುತ್ತಾರೆ, ಪ್ರತಿ ಮಕ್ಕಳಲ್ಲಿಯೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಗೆಯಲು ಸಣ್ಣ ಸಹಾಯ ಬೇಕಾಗುತ್ತದೆ. ಅಂತಹ ಸಹಾಯ ಪೋಷಕರಿಂದಲೋ, ಅಥವಾ ಶಿಕ್ಷಕರಿಂದಲೋ ಸಿಕ್ಕಿದರೆ ಆ ಮಕ್ಕಳು ಮಹತ್ವದ್ದನ್ನು ಸಾಧಿಸುತ್ತಾರೆ ಎಂಬುದಕ್ಕೆ ಹೆಮ್ಮರಗಾಲ ಮತ್ತು ಹೆಗ್ಗಡಹಳ್ಳಿ ಮಕ್ಕಳೇ ಸಾಕ್ಷಿ.

ಮಕ್ಕಳೊಂದಿಗೆ ಸಂತೋಷ್ ಗುಡ್ಡಿಯಂಗಡಿ
ಈಗ ಹಗ್ಗಡಹಳ್ಳಿ ಶಾಲೆಯ ಮಕ್ಕಳು ಕಳೆದ ಐದು ದಿನಗಳಿಂದ ಬಣ್ಣದ ಮೇಳವನ್ನು ಆರಂಭಿಸಿದ್ದಾರೆ. ಪರಿಸರ ರಕ್ಷಣೆಯ ಕುರಿತು ಆ ಊರಿನ ದೊಡ್ಡವರಿಗೆ ನಾಟಕ, ಹಾಡು, ಚಿತ್ರಕಲೆ, ಪ್ರಚಾರಾಂದೋಲನದ ಮೂಲಕ ಪಾಠ ಹೇಳುತ್ತಿದ್ದಾರೆ. ಇಡೀ ಶಾಲೆಯ ಶಿಕ್ಷಕವೃಂದ ಮಕ್ಕಳ ಬೆನ್ನಿಗೆ ನಿಂತಿದೆ. ಸಂತೋಷ್ ಗುಡ್ಡಿಯಂಗಡಿಯವರು ಇದೆಲ್ಲದ ಚಾಲಕಶಕ್ತಿಯಾಗಿದ್ದಾರೆ. ನಾಗೇಶ್ ಹೆಗ್ಡೆ ತರಹದ ಜನಪರ ವಿಜ್ಞಾನಿಗಳ ಬೆಂಬಲ ಈ ಮಕ್ಕಳಿಗಿದೆ. ನಮ್ಮ ಕಾರ್ಯಕ್ಕೆ ಪ್ರೇರಣೆ ಸ್ವೀಡನ್ ದೇಶದ ಹದಿನಾರರ ಬಾಲಕಿ, ಹವಾಮಾನ ಬದಲಾವಣೆಯ ವಿರುದ್ಧ ಮಕ್ಕಳನ್ನು ಸಂಘಟಿಸುತ್ತಿರುವ GRETA THUNBERG. ಅವಳ fridayforfuture ಆಂದೋಲನವನ್ನ ನಾವು #ನಾಳೆಗಳು ನಮ್ಮದು #futureisours ಎಂದು ಅಭಿಯಾನದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಹೆಗ್ಗಡಹಳ್ಳಿಯ ಮಕ್ಕಳು. ಒಬ್ಬ ನಾಟಕ ಮೇಷ್ಟ್ರು ಇಷ್ಟೆಲ್ಲಾ ಮಕ್ಕಳಿಗೆ ಸ್ಫೂರ್ತಿಯಾಗಬಹುದಾದರೆ ಎಲ್ಲಾ ಶಾಲೆಗಳಲ್ಲಿಯೂ ರಂಗಭೂಮಿ ಶಿಕ್ಷಕರಿದ್ದರೆ ಎಷ್ಟು ಚೆನ್ನ ಅಲ್ವ?
ಸಂತೋಷ್ ಗುಡ್ಡಿಯಂಗಡಿಯವರ ಮುಖಪುಟಕ್ಕೆ ಹೋಗಿ ನೋಡಿ, ಓದಿ ಅವರನ್ನು ಬೆಂಬಲಿಸುವುದು, ಆ ಕೆಲಸಗಳನ್ನು ನಮ್ಮ ಊರಿನಲ್ಲಿಯೂ ಮಾಡಲು ಮುಂದಾಗುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗುತ್ತೀರಿ ಎಂಬುದು ಪತ್ರಿಕೆಯ ಆಶಯ. ಹೆಗ್ಗಡಹಳ್ಳಿ ಶಾಲಾ ಮಕ್ಕಳಿಗೆ, ಅವರ ಶಿಕ್ಷಕರಿಗೆ ನಾನು ಗೌರಿ ಪತ್ರಿಕೆ ಬಳಗದಿಂದ ಶುಭಾಶಯಗಳು.
ಈಗ ಮುಂದಿನದು ಆ ಮಕ್ಕಳು ಹೊರತಂದಿರುವ ಬಣ್ಣದ ಪತ್ರವನ್ನು ಯಥಾವತ್ತು ಪ್ರಕಟಿಸುತ್ತಿದ್ದೇವೆ. ನೀವೆಲ್ಲರೂ ತಪ್ಪದೇ ಓದಬೇಕೆಂದು ಮನವಿ.
ನಮ್ಮದು ಹೆಗ್ಗಡಹಳ್ಳಿ ಎಂಬ ಪುಟ್ಟ ಊರು. ಇದು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯಲ್ಲಿದೆ. ನಮ್ಮ ಊರಿನಲ್ಲಿ ಹತ್ತಿಪ್ಪತ್ತು ಚಿಕ್ಕ ಚಿಕ್ಕ ಅಂಗಡಿಗಳಿವೆ. ಎಲ್ಲಾ ಅಂಗಡಿಯಲ್ಲಿಯೂ ನೀವು ಉತ್ಪಾದಿಸುವ ತಿಂಡಿ ಸಿಗುತ್ತದೆ. ನಾವೂ ತಿನ್ನುತ್ತೇವೆ.
ನಮ್ಮ ಊರನ್ನ ನಾವು ಗಮನವಿಟ್ಟು ನೋಡಿದಾಗ, ಊರಿನ ಬೀದಿ, ಮೋರಿಗಳಲ್ಲೆಲ್ಲಾ ಪ್ಲಾಸ್ಟಿಕ್ ಕಸದ್ದೇ ರಾಶಿ. ನಾವೇ ತಿಂದು ಬಿಸಾಕಿದ ನಿಮ್ಮ ಕಂಪೆನಿಯ ಪ್ಯಾಕೇಟುಗಳು ಎಲ್ಲಿ ನೋಡಿದರೂ ಕಾಣಸಿಗುತ್ತಿವೆ. ನಮಗೆ ಕೆಲವೊಂದು ಪ್ರಶ್ನೆಗಳಿವೆ.
• ನೀವು ಭಾರತದ ಮಕ್ಕಳಿಗಾಗಿ ದಿನವೊಂದಕ್ಕೆ ಇಂತಹ ಎಷ್ಟು ಪ್ಯಾಕೇಟುಗಳನ್ನು ಉತ್ಪಾದಿಸುತ್ತೀರಿ?
• ಪ್ಯಾಕೇಟುಗಳ ತಯಾರಿಕೆಗೆ ಪ್ಲಾಸ್ಟಿಕ್ ಪುನರ್ಬಳಕೆ ಮಾಡುತ್ತೀರಾ?
• ನಿಮ್ಮ ಫ್ಯಾಕ್ಟರಿಯಿಂದ ನಮ್ಮ ಊರಿಗೆ ತಿಂಡಿ ಕಳಿಸಿ ಮಾರಾಟ ಮಾಡುವ ಬದ್ಧತೆಯುಳ್ಳ ನಿಮಗೆ, ನೀವೇ ಉತ್ಪಾದಿಸಿದ ಪ್ಲಾಸ್ಟಿಕ್ ಕೊಳೆಯನ್ನು ಮರಳಿ ಪಡೆದು ಪುನರ್ಬಳಕೆ ಮಾಡಬೇಕೆಂಬ ಸಣ್ಣ ಕಾಳಜಿಯೂ ಇಲ್ಲವಲ್ಲ ಯಾಕೆ?
• ನಿಮಗೆ ದುಡ್ಡು ಕೊಟ್ಟು ತಿಂಡಿಯ ಜೊತೆಗೆ, ನಮ್ಮ ನಾಳೆಗಳಿಗೆ ಮಾರಕವಾದ ಪ್ಲಾಸ್ಟಿಕ್ ಕೊಳೆಯನ್ನು ಕೊಂಡುಕೊಳ್ಳಬೇಕೆ?
• ಮಕ್ಕಳಿಗಾಗಿ ರುಚಿರುಚಿಯಾದ ತಿಂಡಿಯನ್ನು ಉತ್ಪಾದಿಸುವ ನಿಮಗೆ, ಮಕ್ಕಳ ನಾಳೆಗಳು ಸುಂದರವಾಗಿರಬೇಕೆಂದು ಎಂದಾದರೂ ಅನಿಸಿದೆಯೇ?
ಹಾಗೆ ಅನಿಸಿದರೆ, ನಿಮ್ಮ ಪ್ಲಾಸ್ಟಿಕ್ ಕೊಳೆಗೆ ನೀವು ಉತ್ತರದಾಯಿಯಾಗಲೇಬೇಕು. ನಾವು ಹೆಗ್ಗಡಹಳ್ಳಿಯ ಮಕ್ಕಳು ನಿಮ್ಮ ಬಳಿ ಹೇಳುವ ಪಿಸುಮಾತಿದು:
• ನಾಳೆಗಳು ನಮ್ಮದು
• ನಿಮ್ಮ ತಿಂಡಿ ಸಾಕು, ಪ್ಲಾಸ್ಟಿಕ್ ಕೊಳೆ ಬೇಡ.
• ನಮಗೆ ಆರೋಗ್ಯಕರವಾದ ನಾಳೆಗಳನ್ನು ಉಳಿಸಿಕೊಡಿ
• ನೀವು ತಿಂಡಿ ಸುತ್ತಿ ಕಳಿಸಿದ ಪ್ಯಾಕೇಟನ್ನು ನೀವು ವಾಪಾಸು ಪಡೆಯಲೇಬೇಕು. ಇಡೀ ದೇಶಕ್ಕೆ ನೀವು ಈಗಾಗಲೇ ಹಲವು ಟನ್ ಪ್ಲಾಸ್ಟಿಕ್‍ನ್ನು ನೀಡಿರಬಹುದು. ಇನ್ನು ಮುಂದೆಯಾದರೂ ನಿಮ್ಮ ಪ್ಯಾಕೇಟುಗಳನ್ನು ವಾಪಾಸು ಪಡೆದು ಅದನ್ನೇ ಮರುಬಳಕೆ ಮಾಡಿ. ಹೊಸ ಉತ್ಪಾದನೆಯನ್ನು ನಿಲ್ಲಿಸಿ. ನಮ್ಮ ಆರೋಗ್ಯಕರ ನಾಳೆಗಾಗಿ ಕೈಜೋಡಿಸಿ.
ಮಕ್ಕಳ ಮೇಲೆ ಪ್ರೀತಿಯಿಂದ ತಿಂಡಿ ಕೊಡಿಸುತ್ತೀರಲ್ಲ;
ಆ ಮಕ್ಕಳು ಬದುಕಲು ಯೋಗ್ಯವಾದ ಪರಿಸರವನ್ನೂ ಉಳಿಸಿಕೊಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....