Homeಮುಖಪುಟಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

ಕಾನೂನು ಉಲ್ಲಂಘಿಸುತ್ತಿರುವ ನಮೋ ಟಿವಿ: ಲೈಸೆನ್ಸ್ ಇಲ್ಲದೇ ಉಪಗ್ರಹ ಬಳಕೆ!

- Advertisement -
- Advertisement -

ಸಾಕಷ್ಟು ವಿವಾದ ಸೃಷ್ಟಿಸಿದ ಪ್ರಧಾನಿಯ ಪ್ರಪಗಂಡಾ ಚಾನೆಲ್ ನಮೋ ಟಿವಿ ಯಾವುದೇ ಲೈಸೆನ್ಸ್ ಪಡೆಯದೇ ತನ್ನ ಸಿಗ್ನಲ್ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್‍ಗೆ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿದೆ. ವ್ಯಕ್ತಿಯೋರ್ವನ ಅಜೆಂಡಾಗಳನ್ನು, ಹಿಕ್ಮತ್ತುಗಳನ್ನು ಪ್ರಸಾರ ಮಾಡಲು ಈ ನೆಲದ ಕಾನೂನನ್ನು ಧಿಕ್ಕರಿಸಿರುವುದು ದೇಶದ್ರೋಹವೇ ಅಲ್ಲವೇ?

ಪ್ರಧಾನಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ಮಾಡಲೆಂದೇ ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಆರಂಭಗೊಂಡ ನಮೋ ಚಾನೆಲ್, ಪ್ರಸಾರದ ನಿಯಮಗಳನ್ನು ಪಾಲಿಸಿದೆಯೇ ಮತ್ತು ಇದೆಲ್ಲ ಚುಮಾವಣಾ ನೀತಿ ಸಂಹಿತೆಯ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆಗಳನ್ನು ಎತ್ತಿವೆ. ಆದರೆ ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಚುನಾವಣಾ ಆಯೋಗ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ ಮತ್ತು ಬರುವುದೂ ಇಲ್ಲ.
ವಾರ್ತಾ ಮತ್ತು ಪ್ರಸಾರ ಇಲಾಖೆ ಈಗಾಗಲೇ, ನಮೋ ಟಿವಿ ‘ವಿಶೇಷ ಸೇವೆಯ ಜಾಹಿರಾತು ಚಾನೆಲ್’ ಎಂದು ಘೋಷಿಸಿ, ಇದಕ್ಕೆಲ್ಲ ಲೈಸೆನ್ಸ್ ಅಗತ್ಯವಿಲ್ಲ ಎಂಬ ನಿಯಮವನ್ನು ಮುಂದೆ ಮಾಡಿದೆ. ಆದರೆ ಶುರುವಾದ ದಿನ ನ್ಯೂಸ್ ಚಾನೆಲ್ ಎಂದೇ ನಮೋ ಟಿವಿ ಹೇಳಿಕೊಂಡಿತ್ತು.

ಭಾರತದ ಕಾನೂನಿನ ಪ್ರಕಾರ, ಯಾವುದೇ ಚಾನೆಲ್ ಉಪಗ್ರಹಗಳಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡಲು ಪ್ರಸಾರ ಇಲಾಖೆಯ ಅನುಮತಿ ಪಡೆಯಬೇಕು. ಕಂಪನಿಯ ಹಿನ್ನೆಲೆ ಮತ್ತು ಭದ್ರತಾ ವಿಷಯಗಳ ಪರಿಶೀಲನೆ ನಂತರವಷ್ಟೇ ಈ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಇಂತಹ ಯಾವ ಲೈಸನ್ಸ್ ಹೊಂದಿರದ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹದಿಂದ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದೆ.

LyngSat ನೀಡಿದ ಮಾಹಿತಿ

ಜಗತ್ತಿನ ಸಂವಹನ ಮತ್ತು ಸಂಪರ್ಕ ತಜ್ಞರು ಮಾಹಿತಿಗಾಗಿ LyngSat ವೆಬ್‍ಸೈಟ್ ಫಾಲೋ ಮಾಡುತ್ತಾರೆ. ವಿಶ್ವದ ಉಪಗ್ರಹ ಆಧರಿತ ಪ್ರಸಾರ ಸೇವೆಗಳ ನಿಖರ ಮಾಹಿತಿಯನ್ನು ಈ ತಾಣ ಒಳಗೊಂಡಿದೆ. ಇದರ ಪ್ರಕಾರ, ನಮೋ ಟಿವೆ ಎನ್‍ಎಸ್‍ಎಸ್-6 ಉಪಗ್ರಹ ಸೇವೆ ಬಳಸಿಕೊಳ್ಳುತ್ತಿಯೀ ಉಪಗ್ರಹವು ಲುಕ್ಸೆಂಬರ್ಗ್ ಮೂಲದ ಎಸಿಎಸ್ ವರ್ಲ್ಡ್ ಸ್ಕೈಸ್ ಸಂಸ್ಥೆಗೆ ಸೇರಿದೆ. LyngSat ನಡೆಸುವ ಕ್ರಿಸ್ಟಿನ್ ಲಿಂಗಮಾರ್ಕ್ ಇದನ್ನು ‘ದಿ ವೈರ್’ ಪೋರ್ಟಲ್‍ಗೆ ಸ್ಪಷ್ಟಪಡಿಸಿದ್ದಾರೆ. ವೆಬ್‍ಸೈಟಿನಲ್ಲಿ ನಮೋ ಟಿವಿ ಲಿಸ್ಟ್ ಆಗಿರುವ ಸ್ಕ್ರೀನ್‍ಶಾಟ್ ಅನ್ನು ನೋಡಿ.

LyngSat ಮಾದರಿಯ ಸೇವೆ ಒದಗಿಸುವ ‘ಫ್ಲೈಸ್ಯಾಟ್; ವೆಬ್‍ಸೈಟ್ ಕೂಡ ನಮೋ ಟಿವಿ ಎನ್‍ಎಸ್‍ಎಸ್-6 ಉಪಗ್ರಹವನ್ನು ಬಳಸುತ್ತಿರುವುದನ್ನು ದೃಡಪಡಿಸಿದೆ.
ಸತ್ಯ ಹೀಗಿದ್ದರೂ, ಪ್ರಸಾರ ಇಲಾಖೆ ‘ವಿಶೇಷ ಸೇವೆ’ಯನ್ನಷ್ಟೇ ನೀಡುವ ನಮೋ ಟಿವೆಗೆ ಲೈಸೆನ್ಸ್ ಅಗತ್ಯವಿಲ್ಲ ಎಂದು ಜನರನ್ನು ದಾರಿ ತಪ್ಪಿಸುತ್ತಿದೆ. ಪ್ರಸಾರದ ಲೈಸೆನ್ಸ್ ಪಡೆಯದೇ ನಮೋ ಟಿವಿ ಉಪಗ್ರಹ ಬಳಸಿ ಅಪ್‍ಲಿಂಕ್ ಮತ್ತು ಡೌನ್‍ಲಿಂಕ್ ಮಾಡುತ್ತಿದ್ದು, ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ.

ಇಲ್ಲಿ ಒಂದು ಪ್ರಶ್ನೆ ಎಂದರೆ, ನಾವೇ ನಮೋ ಟಿವಿ ಮಾಲಿಕರು ಎಂದು ಹೇಳಲು ಯಾರೂ ಮುಂದೆ ಬರುತ್ತಿಲ್ಲ! ಪ್ರಸಾರ ಇಲಾಖೆ ತಡಯಾಜ್ಞೆ ಒಡ್ಡಿರುವುದು ಸದ್ಯಕ್ಕೆ ಸಮಾಧಾನದ ಸಂಗತಿ. ಅಧಿಕಾರದ ದುರುಪಯೋಗವನ್ನು ಅದರ ಅತಿ ತಳಮಟ್ಟಕ್ಕೆ ಒಯ್ದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗುತ್ತಿದ್ದಾರೆ.
(ಆಧಾರ: ದಿ ವೈರ್)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...