Homeಮುಖಪುಟನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

ನಾವು ಮಕ್ಕಳು, ಮುಂದಿನ ಪ್ರಜೆಗಳು. ನಮಗೊಂದಿಷ್ಟು ಭೂಮಿ ಉಳಿಸಿ

- Advertisement -
- Advertisement -
ನಮ್ಮ ನಾಳೆಗಳಿಗೆ ನೀವು ಪ್ಲಾಸ್ಟಿಕ್ ಕೊಳೆಯನ್ನು ನೀಡಬೇಡಿ. ನಾಳೆಗಳು ನಮ್ಮದು. ನಮ್ಮ ನಾಳೆಗೆ ಸುಂದರ ಪರಿಸರವನ್ನು ಉಳಿಸಿಕೊಡಲು ಕೈಜೋಡಿಸಿ. ಅದಕ್ಕಾಗಿ ನಿಮ್ಮ ಕಸವನ್ನು ನೀವು ವಾಪಾಸು ಪಡೆಯಿರಿ. ಪಡೆದು ಅದನ್ನು ಪುನರ್ಬಳಕೆ ಮಾಡಿ. ಹೊಸ ಪ್ಲಾಸ್ಟಿಕ್ ಉತ್ಪಾದನೆಯನ್ನು ನಿಲ್ಲಿಸುವ ಯೋಜನೆಯನ್ನು ರೂಪಿಸಿಕೊಳ್ಳಿ, ಎಂದು ದೇಶದಲ್ಲಿ ಮಕ್ಕಳ ತಿಂಡಿಗಳನ್ನು ಉತ್ಪಾದಿಸುವ ಇಪ್ಪತ್ತಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳಿಗೆ ಪತ್ರಕಳಿಸಿ ಆಗ್ರಹಿಸುವ ವಿನೂತನ ಅಭಿಯಾನವನ್ನು ಹೆಗ್ಗಡಹಳ್ಳಿಯ ಮಕ್ಕಳು ಆರಂಭಿಸಲಿದ್ದಾರೆ.
ಪಠ್ಯೇತರ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸದಾ ಮುಂದಿರುವ ಹೆಗ್ಗಡಹಳ್ಳಿ ಶಾಲೆಯ ಮಕ್ಕಳು ಕೇವಲ ಜಾಣರಷ್ಟೇ ಅಲ್ಲ ಸಮಾಜಕ್ಕ ತುಡಿಯುವ ಸೂಕ್ಷ್ಮಜೀವಿಗಳು ಹೌದು. ಶಾಲೆಯಲ್ಲಿ ಅತ್ಯುತ್ತಮವಾಗಿ ಓದುವುದಲ್ಲದೇ ಸದಾ ಒಂದಿಲ್ಲೊಂದು ವಿಭಿನ್ನ ಚಟುವಟಿಕೆ ನಡೆಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿ ಹೆಸರಿನಲ್ಲಿ ನಡೆಯುವ ಅಂತರ್‍ಶಾಲಾ ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈ ಶಾಲೆಗೆ ಕಡ್ಡಾಯವಾಗಿ ಬಹುಮಾನಗಳ ಸುರಿಮಳೆಯಾಗುತ್ತದೆ. ರಾಜ್ಯ ಮಟ್ಟದವರೆಗೂ ವಿದ್ಯಾರ್ಥಿಗಳು ಹೋಗಿ ಬಹುಮಾನ ಗೆದ್ದು ತಂದಿದ್ದಾರೆ.
ಪ್ರತಿ ತಿಂಗಳು ಮಕ್ಕಳು ‘ಅರಳೀಮರ’ ಹೆಸರಿನಲ್ಲಿ ಮಾಸಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಈಗಾಗಲೇ 15 ಬಣ್ಣ ಬಣ್ಣದ ಕೈಬರದ ಮಕ್ಕಳ ಸಂಚಿಕೆಗಳು ಹಲವರ ಕೈಸೇರಿ ಮೆಚ್ಚಿಗೆ ಗಳಿಸಿವೆ. ಚಿತ್ರಗಳು, ಕಥೆ ಕವನಗಳ ಮೂಲಕ ಮಕ್ಕಳು ತಮ್ಮ ಅಭಿವ್ಯಕ್ತಿಯನ್ನು ಸಸಕ್ತವಾಗಿ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷವೂ ನಾಲ್ಕೈದು ಅತ್ಯುತ್ತಮ ನಾಟಕಗಳನ್ನು ಕಲಿತು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಲವು ನಾಟಕೋತ್ಸವಗಳಲ್ಲಿ ಭಾಗವಹಿಸಿ ತಮ್ಮ ನಾಟಕದ ಹುಚ್ಚನ್ನು ಜನರಿಗೂ ದಾಟಿಸಿದ್ದಾರೆ.
ಈ ರೀತಿ ಈ ಶಾಲೆಯ ಮಕ್ಕಳ ಬಗ್ಗೆ ಪುಟಗಟ್ಟಲೇ ಬರೆಯುತ್ತಲೇ ಹೋಗಬಹುದು. ಮಕ್ಕಳು ಇಷ್ಟೆಲ್ಲಾ ಗಮನಾರ್ಹವಾದ ಸಾಧನೆ ಮಾಡಲು ಕಾರಣವೆನೆಂದರೆ ಅವರೊಳಗಿನ ಪ್ರತಿಭೆಯ ಅಭಿವ್ಯಕ್ತಿಗೆ ವಾಹಕವಾಗಿ ಕೆಲಸ ಮಾಡುತ್ತಿರುವ ಅವರ ಉತ್ಸಾಹಿ ಮೇಷ್ಟ್ರು ಸಂತೋಷ್ ಗುಡ್ಡಿಯಂಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡಿಯಂಗಡಿ ಗ್ರಾಮದ ಇವರು ಸಾಮಾಜಿಕ ಚಳವಳಿಗಳಲ್ಲಿ ತೊಡಗಿಕೊಂಡ ಪರಿಣಾಮ ಅಗಾಧ ಅನುಭವಗಳನ್ನು ಪಡೆದವರು. ನಂತರ ರಂಗಡಿಪ್ಲೋಮೊ ಕೋರ್ಸ್ ಮುಗಿಸಿ ನಾಟಕ ಕಲಿಸುತ್ತಿದ್ದರು. ಸರ್ಕಾರ ಒಮ್ಮೆ ಹೈಸ್ಕೂಲ್‍ಗಳಿಗೆ 46 ನಾಟಕದ ಮೇಷ್ಟ್ರುಗಳನ್ನು ಆಯ್ಕೆ ಮಾಡಿಕೊಂಡಾಗ ಇವರು ಸಹ ಆಯ್ಕೆಯಾದರು.
ಅಲ್ಲಿಂದ ಅವರು ತಾನು ಕಲಿತ ವಿದ್ಯೆ ಮತ್ತು ಸಾಮಾಜಿಕ ಚಳವಳಿ ಕೊಟ್ಟಿದ್ದ ಅನುಭವಗಳನ್ನು ಮಕ್ಕಳಿಗೆ ಧಾರೆ ಎರೆಯಲು ಆರಂಭಿಸಿದರು. ಮೊದಲು ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಶಾಲೆಯಲ್ಲಿದ್ದಾಗ ಅಲ್ಲಿನ ಮಕ್ಕಳೊಡನೆ ಬೆರೆಸು ಕಲಿಸುತ್ತಾ, ತಾನು ಕಲಿಸುತ್ತಾ ಮಕ್ಕಳನ್ನು ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ‘ಹೆಮ್ಮರ’ ಹೆಸರಿನ ಮಕ್ಕಳ ಮಾಸಿಕ ಪತ್ರಿಕೆಯನ್ನು ಆರಂಭಿಸಿ ಮಕ್ಕಳು ಬರೆಯಲು ಪ್ರೋತ್ಸಾಹ ನೀಡಿದರು. ಮಕ್ಕಳ ಬರಹಕ್ಕೆ ತಮ್ಮ ಕೈಬರಹ ಮತ್ತು ಚೆಂದದ ಚಿತ್ರ ಸೇರಿಸಿ ಎಲ್ಲರ ಗಮನ ಸೆಳಯುವಂತೆ ಮಾಡಿದರು. ನಾಟಕಗಳನ್ನು ಕಲಿಸಿ ರಂಗಭೂಮಿಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದರು.
ಆಟ-ಪಾಠ ನಾಟಕದ ಜೊತೆಗೆ ತಾನಿರುವ ಸಮಾಜ – ಪರಿಸರವನ್ನು ಮಕ್ಕಳು ಅಧ್ಯಯನ ಮಾಡಬೇಕು, ಅದರೊಡನೆ ತಾದ್ಯಾತ್ಮ ಸಾಧಿಸಿ ಅದಕ್ಕೆ ಪ್ರತಿಕ್ರಿಯಿಸಬೇಕೆನ್ನುವುದು ಅವರ ಆಶಯ. ಅವರ ಕನಸನ್ನು ಮಕ್ಕಳು ಬಹುಬೇಗ ನನಸು ಮಾಡಿದರು. ತಾವು ಮಾಡುವ ಪ್ರತಿ ಕೆಲಸದಲ್ಲಿ ಹೊಸತು ಸೃಜನಶೀಲತೆಯನ್ನು ಮಕ್ಕಳು ಕಲಿತರು. ಸಮಾಜಕ್ಕೆ ಪೂರಕವಾಗಿ ಪ್ರತಿಸ್ಪಂದಿಸಿದರು. ಈ ಕುರಿತು ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಬಂದವು.

ಅಲ್ಲಿಂದ ಹೆಗ್ಗಡಹಳ್ಳಿ ಶಾಲೆಗೆ ವರ್ಗಾವಣೆಯಾದ ಸಂತೋಷ ಗುಡ್ಡಿಯಂಗಡಿಯವರು ಇಲ್ಲಿಯೂ ತಮ್ಮ ಕಾಯಕವನ್ನು ಮುಂದುವರೆಸಿದರು. ಇಲ್ಲಿಯ ಮಕ್ಕಳು ಸಹ ಅಷ್ಟೇ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಮಕ್ಕಳು ಎಲ್ಲಾ ಹೊಸತನದ ಪ್ರಯೋಗಗಳಿಗೆ ಸಿದ್ದರಾಗಿರುತ್ತಾರೆ, ಪ್ರತಿ ಮಕ್ಕಳಲ್ಲಿಯೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಗೆಯಲು ಸಣ್ಣ ಸಹಾಯ ಬೇಕಾಗುತ್ತದೆ. ಅಂತಹ ಸಹಾಯ ಪೋಷಕರಿಂದಲೋ, ಅಥವಾ ಶಿಕ್ಷಕರಿಂದಲೋ ಸಿಕ್ಕಿದರೆ ಆ ಮಕ್ಕಳು ಮಹತ್ವದ್ದನ್ನು ಸಾಧಿಸುತ್ತಾರೆ ಎಂಬುದಕ್ಕೆ ಹೆಮ್ಮರಗಾಲ ಮತ್ತು ಹೆಗ್ಗಡಹಳ್ಳಿ ಮಕ್ಕಳೇ ಸಾಕ್ಷಿ.

ಮಕ್ಕಳೊಂದಿಗೆ ಸಂತೋಷ್ ಗುಡ್ಡಿಯಂಗಡಿ
ಈಗ ಹಗ್ಗಡಹಳ್ಳಿ ಶಾಲೆಯ ಮಕ್ಕಳು ಕಳೆದ ಐದು ದಿನಗಳಿಂದ ಬಣ್ಣದ ಮೇಳವನ್ನು ಆರಂಭಿಸಿದ್ದಾರೆ. ಪರಿಸರ ರಕ್ಷಣೆಯ ಕುರಿತು ಆ ಊರಿನ ದೊಡ್ಡವರಿಗೆ ನಾಟಕ, ಹಾಡು, ಚಿತ್ರಕಲೆ, ಪ್ರಚಾರಾಂದೋಲನದ ಮೂಲಕ ಪಾಠ ಹೇಳುತ್ತಿದ್ದಾರೆ. ಇಡೀ ಶಾಲೆಯ ಶಿಕ್ಷಕವೃಂದ ಮಕ್ಕಳ ಬೆನ್ನಿಗೆ ನಿಂತಿದೆ. ಸಂತೋಷ್ ಗುಡ್ಡಿಯಂಗಡಿಯವರು ಇದೆಲ್ಲದ ಚಾಲಕಶಕ್ತಿಯಾಗಿದ್ದಾರೆ. ನಾಗೇಶ್ ಹೆಗ್ಡೆ ತರಹದ ಜನಪರ ವಿಜ್ಞಾನಿಗಳ ಬೆಂಬಲ ಈ ಮಕ್ಕಳಿಗಿದೆ. ನಮ್ಮ ಕಾರ್ಯಕ್ಕೆ ಪ್ರೇರಣೆ ಸ್ವೀಡನ್ ದೇಶದ ಹದಿನಾರರ ಬಾಲಕಿ, ಹವಾಮಾನ ಬದಲಾವಣೆಯ ವಿರುದ್ಧ ಮಕ್ಕಳನ್ನು ಸಂಘಟಿಸುತ್ತಿರುವ GRETA THUNBERG. ಅವಳ fridayforfuture ಆಂದೋಲನವನ್ನ ನಾವು #ನಾಳೆಗಳು ನಮ್ಮದು #futureisours ಎಂದು ಅಭಿಯಾನದಲ್ಲಿ ತೊಡಗಿದ್ದೇವೆ ಎನ್ನುತ್ತಾರೆ ಹೆಗ್ಗಡಹಳ್ಳಿಯ ಮಕ್ಕಳು. ಒಬ್ಬ ನಾಟಕ ಮೇಷ್ಟ್ರು ಇಷ್ಟೆಲ್ಲಾ ಮಕ್ಕಳಿಗೆ ಸ್ಫೂರ್ತಿಯಾಗಬಹುದಾದರೆ ಎಲ್ಲಾ ಶಾಲೆಗಳಲ್ಲಿಯೂ ರಂಗಭೂಮಿ ಶಿಕ್ಷಕರಿದ್ದರೆ ಎಷ್ಟು ಚೆನ್ನ ಅಲ್ವ?
ಸಂತೋಷ್ ಗುಡ್ಡಿಯಂಗಡಿಯವರ ಮುಖಪುಟಕ್ಕೆ ಹೋಗಿ ನೋಡಿ, ಓದಿ ಅವರನ್ನು ಬೆಂಬಲಿಸುವುದು, ಆ ಕೆಲಸಗಳನ್ನು ನಮ್ಮ ಊರಿನಲ್ಲಿಯೂ ಮಾಡಲು ಮುಂದಾಗುವುದು ನಾವು ಅವರಿಗೆ ಸಲ್ಲಿಸುವ ಗೌರವವಾಗುತ್ತದೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಮುಂದಾಗುತ್ತೀರಿ ಎಂಬುದು ಪತ್ರಿಕೆಯ ಆಶಯ. ಹೆಗ್ಗಡಹಳ್ಳಿ ಶಾಲಾ ಮಕ್ಕಳಿಗೆ, ಅವರ ಶಿಕ್ಷಕರಿಗೆ ನಾನು ಗೌರಿ ಪತ್ರಿಕೆ ಬಳಗದಿಂದ ಶುಭಾಶಯಗಳು.
ಈಗ ಮುಂದಿನದು ಆ ಮಕ್ಕಳು ಹೊರತಂದಿರುವ ಬಣ್ಣದ ಪತ್ರವನ್ನು ಯಥಾವತ್ತು ಪ್ರಕಟಿಸುತ್ತಿದ್ದೇವೆ. ನೀವೆಲ್ಲರೂ ತಪ್ಪದೇ ಓದಬೇಕೆಂದು ಮನವಿ.
ನಮ್ಮದು ಹೆಗ್ಗಡಹಳ್ಳಿ ಎಂಬ ಪುಟ್ಟ ಊರು. ಇದು ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯಲ್ಲಿದೆ. ನಮ್ಮ ಊರಿನಲ್ಲಿ ಹತ್ತಿಪ್ಪತ್ತು ಚಿಕ್ಕ ಚಿಕ್ಕ ಅಂಗಡಿಗಳಿವೆ. ಎಲ್ಲಾ ಅಂಗಡಿಯಲ್ಲಿಯೂ ನೀವು ಉತ್ಪಾದಿಸುವ ತಿಂಡಿ ಸಿಗುತ್ತದೆ. ನಾವೂ ತಿನ್ನುತ್ತೇವೆ.
ನಮ್ಮ ಊರನ್ನ ನಾವು ಗಮನವಿಟ್ಟು ನೋಡಿದಾಗ, ಊರಿನ ಬೀದಿ, ಮೋರಿಗಳಲ್ಲೆಲ್ಲಾ ಪ್ಲಾಸ್ಟಿಕ್ ಕಸದ್ದೇ ರಾಶಿ. ನಾವೇ ತಿಂದು ಬಿಸಾಕಿದ ನಿಮ್ಮ ಕಂಪೆನಿಯ ಪ್ಯಾಕೇಟುಗಳು ಎಲ್ಲಿ ನೋಡಿದರೂ ಕಾಣಸಿಗುತ್ತಿವೆ. ನಮಗೆ ಕೆಲವೊಂದು ಪ್ರಶ್ನೆಗಳಿವೆ.
• ನೀವು ಭಾರತದ ಮಕ್ಕಳಿಗಾಗಿ ದಿನವೊಂದಕ್ಕೆ ಇಂತಹ ಎಷ್ಟು ಪ್ಯಾಕೇಟುಗಳನ್ನು ಉತ್ಪಾದಿಸುತ್ತೀರಿ?
• ಪ್ಯಾಕೇಟುಗಳ ತಯಾರಿಕೆಗೆ ಪ್ಲಾಸ್ಟಿಕ್ ಪುನರ್ಬಳಕೆ ಮಾಡುತ್ತೀರಾ?
• ನಿಮ್ಮ ಫ್ಯಾಕ್ಟರಿಯಿಂದ ನಮ್ಮ ಊರಿಗೆ ತಿಂಡಿ ಕಳಿಸಿ ಮಾರಾಟ ಮಾಡುವ ಬದ್ಧತೆಯುಳ್ಳ ನಿಮಗೆ, ನೀವೇ ಉತ್ಪಾದಿಸಿದ ಪ್ಲಾಸ್ಟಿಕ್ ಕೊಳೆಯನ್ನು ಮರಳಿ ಪಡೆದು ಪುನರ್ಬಳಕೆ ಮಾಡಬೇಕೆಂಬ ಸಣ್ಣ ಕಾಳಜಿಯೂ ಇಲ್ಲವಲ್ಲ ಯಾಕೆ?
• ನಿಮಗೆ ದುಡ್ಡು ಕೊಟ್ಟು ತಿಂಡಿಯ ಜೊತೆಗೆ, ನಮ್ಮ ನಾಳೆಗಳಿಗೆ ಮಾರಕವಾದ ಪ್ಲಾಸ್ಟಿಕ್ ಕೊಳೆಯನ್ನು ಕೊಂಡುಕೊಳ್ಳಬೇಕೆ?
• ಮಕ್ಕಳಿಗಾಗಿ ರುಚಿರುಚಿಯಾದ ತಿಂಡಿಯನ್ನು ಉತ್ಪಾದಿಸುವ ನಿಮಗೆ, ಮಕ್ಕಳ ನಾಳೆಗಳು ಸುಂದರವಾಗಿರಬೇಕೆಂದು ಎಂದಾದರೂ ಅನಿಸಿದೆಯೇ?
ಹಾಗೆ ಅನಿಸಿದರೆ, ನಿಮ್ಮ ಪ್ಲಾಸ್ಟಿಕ್ ಕೊಳೆಗೆ ನೀವು ಉತ್ತರದಾಯಿಯಾಗಲೇಬೇಕು. ನಾವು ಹೆಗ್ಗಡಹಳ್ಳಿಯ ಮಕ್ಕಳು ನಿಮ್ಮ ಬಳಿ ಹೇಳುವ ಪಿಸುಮಾತಿದು:
• ನಾಳೆಗಳು ನಮ್ಮದು
• ನಿಮ್ಮ ತಿಂಡಿ ಸಾಕು, ಪ್ಲಾಸ್ಟಿಕ್ ಕೊಳೆ ಬೇಡ.
• ನಮಗೆ ಆರೋಗ್ಯಕರವಾದ ನಾಳೆಗಳನ್ನು ಉಳಿಸಿಕೊಡಿ
• ನೀವು ತಿಂಡಿ ಸುತ್ತಿ ಕಳಿಸಿದ ಪ್ಯಾಕೇಟನ್ನು ನೀವು ವಾಪಾಸು ಪಡೆಯಲೇಬೇಕು. ಇಡೀ ದೇಶಕ್ಕೆ ನೀವು ಈಗಾಗಲೇ ಹಲವು ಟನ್ ಪ್ಲಾಸ್ಟಿಕ್‍ನ್ನು ನೀಡಿರಬಹುದು. ಇನ್ನು ಮುಂದೆಯಾದರೂ ನಿಮ್ಮ ಪ್ಯಾಕೇಟುಗಳನ್ನು ವಾಪಾಸು ಪಡೆದು ಅದನ್ನೇ ಮರುಬಳಕೆ ಮಾಡಿ. ಹೊಸ ಉತ್ಪಾದನೆಯನ್ನು ನಿಲ್ಲಿಸಿ. ನಮ್ಮ ಆರೋಗ್ಯಕರ ನಾಳೆಗಾಗಿ ಕೈಜೋಡಿಸಿ.
ಮಕ್ಕಳ ಮೇಲೆ ಪ್ರೀತಿಯಿಂದ ತಿಂಡಿ ಕೊಡಿಸುತ್ತೀರಲ್ಲ;
ಆ ಮಕ್ಕಳು ಬದುಕಲು ಯೋಗ್ಯವಾದ ಪರಿಸರವನ್ನೂ ಉಳಿಸಿಕೊಡಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...