ಬೆಂಗಳೂರಿನಲ್ಲಿ ಕಳೆದ 12 ಗಂಟೆಯೊಳಗೆ ಮೂರು ಕೊಲೆಗಳು ವರದಿಯಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ನಗರದ ಈಶಾನ್ಯ ಭಾಗದಲ್ಲಿ ಲಾಜಿಸ್ಟಿಕ್ಸ್ ಸಂಸ್ಥೆಯೊಂದರಲ್ಲಿ ಕ್ಲೀನರ್ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕಡಿದು ಕೊಲೆ ಮಾಡಲಾಗಿದ್ದು, ಹೊಂಗಸಂದ್ರದಲ್ಲಿ ಮಹಿಳೆಯೊಬ್ಬರನ್ನು ಆಕೆಯ ಮಗನೆ ಹತ್ಯೆಗೈದಿರುವ ಘಟನೆ ಸಂಭವಿಸಿದೆ. ಬೆಂಗಳೂರು
ಶನಿವಾರ ಬೆಳಗ್ಗೆ ಸಹೋದ್ಯೋಗಿಯೊಬ್ಬರು ಅವರು ಕೆಲಸ ಮಾಡುತ್ತಿದ್ದ ಶೆಡ್ಗೆ ಪ್ರವೇಶಿಸಿದಾಗ ಕ್ರಮವಾಗಿ ರಾಮನಗರ ಮತ್ತು ಮಂಡ್ಯ ಮೂಲದ ನಾಗೇಶ್ (52) ಮತ್ತು ಮಂಜು ಗೌಡ (44) ಅವರ ಶವಗಳು ಪತ್ತೆಯಾಗಿವೆ. ಕೊಲೆಗೀಡಾ ವ್ಯಕ್ತಿಗಳಿಬ್ಬರಿಗೆ ಗಟ್ಟಿಯಾದ ವಸ್ತುವಿನಿಂದ ತಲೆಗೆ ಮಾರಣಾಂತಿಕ ಗಾಯ ಮಾಡಲಾಗಿದ್ದು, ತೀವ್ರ ರಕ್ತಶ್ರಾವದ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಬಾಗಲೂರು ಸಮೀಪದ ಸಿಂಗಹಳ್ಳಿಯಲ್ಲಿರುವ ಲಾಜಿಸ್ಟಿಕ್ ಕಂಪನಿಯಲ್ಲಿ ನಾಲ್ಕು ವರ್ಷಗಳಿಂದ ಉದ್ಯೋಗಿಯಾಗಿದ್ದರು. ಬೆಂಗಳೂರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇವರಿಬ್ಬರ ಜೊತೆ ಶೆಡ್ ಹಂಚಿಕೊಂಡಿದ್ದ ಸಹೋದ್ಯೋಗಿ ಸುರೇಶ್ ಪ್ರಮುಖ ಶಂಕಿತ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಮೂವರು ಸಹೋದ್ಯೋಗಿಗಳು ಮದ್ಯಪಾನ ಮಾಡಲು ಜಮಾಯಿಸಿದ್ದಾಗ ಘಟನೆ ನಡೆದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 11.30 ರ ಸುಮಾರಿಗೆ ಸುರೇಶ್ ಸ್ಥಳದಿಂದ ಪರಾರಿಯಾಗುವ ಮೊದಲು ನಾಗೇಶ್ ಮತ್ತು ಮಂಜು ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 103 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಆರೋಪಿ ಸುರೇಶ್ ಹುಡುಕಾಟಕ್ಕಾಗಿ ತಂಡವನ್ನು ರಚಿಸಿದ್ದಾರೆ ಎಂದು ವರದಿ ಹೇಳಿದೆ.
ಎರಡನೇ ಘಟನೆಯಲ್ಲಿ, ತಮಿಳುನಾಡು ಮೂಲದ ಜಯಮ್ಮ ಶುಕ್ರವಾರ ಸಂಜೆ ಆಕೆಯ ಹಿರಿಯ ಮಗ ಉಮೇಶ್ (33) ಅವರನ್ನು ಭೇಟಿ ಮಾಡಿದ ನಂತರ ಅವರ ಮನೆಯಲ್ಲಿ ಕೊಲೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಮೇಶ್ ತಮ್ಮ ತಾಯಿಯ ಜೊತೆಯಲ್ಲಿ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಜಯಮ್ಮ ಕಿರಿಯ ಮಗನೊಂದಿಗೆ ಹೊಂಗಸಂದ್ರಕ್ಕೆ ತೆರಳಿದ್ದರು.
ಮಹಿಳೆಯು ಇದ್ದ ಮನೆಯ ಓನರ್ ಜಯಮ್ಮ ಅವರ ದೇಹವನ್ನು ಪತ್ತೆ ಮಾಡಿದ್ದು, ಈ ವೇಳೆ ಮೃತದೇಹದಲ್ಲಿ ಕತ್ತು ಹಿಸುಕಿರುವುದು ಅಥವಾ ಉಸಿರುಗಟ್ಟಿಸುವಿಕೆಯ ಗುರುತುಗಳನ್ನು ಹೊಂದಿದ್ದು, ಹಾಗಾಗಿ ಅವರು ಪೋಲೀಸರಿಗೆ ತಿಳಿಸಿದ್ದಾರೆ. ಅವರ ಮೃತದೇಹವನ್ನು ಸಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತನ್ನ ತಾಯಿ ಇದ್ದ ಹೊಸ ಮನೆಯ ಜಾಡು ಹಿಡಿದು ಆರೋಪಿ ಉಮೇಶ್ ಅಲ್ಲಿಗೆ ತೆರಳಿದ್ದು, ಅಲ್ಲಿ ಅವರೊಂದಿಗೆ ಹಣದ ವಿಚಾರವಾಗಿ ಆಕೆಯನ್ನು ಕೊಲೆ ಮಾಡಿರಬಹುದು ಎಂದು ಪೊಲೀಸರು ನಂಬಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಸ್ತಿಯನ್ನು ಮಾರಾಟ ಮಾಡಿದರೂ ಅದರಿಂದ ಬಂದ ಹಣವನ್ನು ಅವರು ಅವರಿಗೆ ನೀಡಿರಲಿಲ್ಲ ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ, ಆಕೆಯ ಕಿರಿಯ ಮಗ, ಕೆಎಸ್ಆರ್ಟಿಸಿ ಬಸ್ ಚಾಲಕನು ಆನೇಕಲ್ನಲ್ಲಿ ಕರ್ತವ್ಯದಲ್ಲಿದ್ದರು ಎನ್ನಲಾಗಿದೆ.
ಬೊಮ್ಮನಹಳ್ಳಿ ಪೊಲೀಸರು ಬಿಎನ್ಎಸ್ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಂಕಿತನನ್ನು ಗುರುತಿಸಲಾಗಿದೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ NEET ಆಕಾಂಕ್ಷಿಯನ್ನು ಒತ್ತೆಯಾಳಾಗಿ ಇರಿಸಿ ಅತ್ಯಾಚಾರ; ಇಬ್ಬರು ಶಿಕ್ಷಕರ ಬಂಧನ
ಅಪ್ರಾಪ್ತ NEET ಆಕಾಂಕ್ಷಿಯನ್ನು ಒತ್ತೆಯಾಳಾಗಿ ಇರಿಸಿ ಅತ್ಯಾಚಾರ; ಇಬ್ಬರು ಶಿಕ್ಷಕರ ಬಂಧನ


