Homeಮುಖಪುಟಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಉಂಟಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇರಬೇಕೆಂಬುದು ಕಡ್ಡಾಯವೇ?

- Advertisement -
- Advertisement -

ಕಳೆದ ತಿಂಗಳು ಸಂಭವಿಸಿದ ಬೆಂಗಳೂರಿನ ಕೆ.ಜೆ.ಹಳ್ಳಿ ಡಿಜೆಹಳ್ಳಿ ಗಲಭೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಬಲಾಡಿ ನೇತೃತ್ವದಲ್ಲಿ ಒಂದು ತಂಡವು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆ ಹೆಸರಿನಲ್ಲಿ ಸತ್ಯಶೋಧನೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಗಲಭೆ ಪೂರ್ವನಿಯೋಜಿತವಾಗಿದ್ದು, ಇದಕ್ಕೆ ಪಿಎಫ್‌ಐ ಮತ್ತು ಎಸ್‌ಡಿಪಿಐ ನೇರ ಕಾರಣ ಎಂದು ತಿಳಿಸಲಾಗಿದೆ. ಆದರೆ ಸತ್ಯಶೋಧನೆಗೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಹೆಸರು ಬಳಸಿದ್ದಕ್ಕೆ ಅದರ ಅಧ್ಯಕ್ಷರಾದ ಖ್ಯಾತ ಹೋರಾಟಗಾರ ಎಸ್‌.ಆರ್ ಹಿರೇಮಠ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಿತಿಯಲ್ಲಿದ್ದ ಬಹುತೇಕರು ಬಿಜೆಪಿ – ಸಂಘಪರಿವಾರದ ಒಡನಾಟ ಹೊಂದಿರುವವರಾಗಿರುವುದರಿಂದ ಕೆ.ಜೆ.ಹಳ್ಳಿಯಲ್ಲಿ ಸತ್ಯಶೋಧನೆ ಹೆಸರಿನಲ್ಲಿ ಸುಳ್ಳನ್ನು ಬಿತ್ತಿದರೇ ಎಂಬ ಅನುಮಾನ ಹುಟ್ಟುವಂತಾಗಿದೆ ಮತ್ತು ಅದನ್ನು ಬಲಗೊಳಿಸುವ ಇನ್ನೂ ಹಲವು ಸಂಗತಿಗಳು ಹೊರಬಂದಿವೆ.

ಮುಖ್ಯವಾಗಿ ಸತ್ಯಶೋಧನಾ ಸಮಿತಿಯಲ್ಲಿ ಯಾರು ಯಾರು ಇದ್ದರು ಎಂಬುದು ವರದಿಯ ಉದ್ದೇಶವನ್ನು ತಿಳಿಸುತ್ತದೆ. ಆದರೆ ಇದರಲ್ಲಿ ಯಾರು ಯಾರಿದ್ದರು ನೋಡೋಣ ಬನ್ನಿ.

ಯಡಿಯೂರಪ್ಪನವರಿಗೆ ವರದಿ ಸಲ್ಲಿಸಿದ ನಂತರ ನಿವೃತ್ತ ಐಎಸ್‌ಎಸ್‌ ಅಧಿಕಾರಿ ಮದನ್ ಗೋಪಾಲ್ “ಇದು ನಿರ್ದಿಷ್ಠ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು, ಭೀತಿ ಸೃಷ್ಟಿಸಲು, ಆ ಮೂಲಕ ದೇಶದ ಆರ್ಥಿಕತೆ ಕೆಡವಲು ನಡೆಸಿದ ಪೂರ್ವಯೋಜಿತ ಗಲಭೆ” ಎಂದು ಹೇಳಿದ್ದಾರೆ. ಇದೇ ಮದನ್ ಗೋಪಾಲ್‌ರವರು 2018ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುಂಚೆ 2017ರಲ್ಲಿ ಬಿಜೆಪಿ ರಚಿಸಿದ ಪ್ರಣಾಳಿಕೆ ಸಮಿತಿಯ ಸಕ್ರಿಯ ಸದಸ್ಯರಾಗಿದ್ದವರು. ಅಂದರೆ ಬಿಜೆಪಿಯ ಪ್ರಬಲ ಬೆಂಬಲಿಗರು ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಇನ್ನು ಸತ್ಯಶೋಧನ ಸಮಿತಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಡಾ.ಆರ್‌ರಾಜು. ಇವರು ನಿವೃತ್ತ ಐಎಫ್‌ಎಸ್‌ ಅಧಿಕಾರಿಗಳಾಗಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದರು. ಕಾಂಗ್ರೆಸ್‌ನ ಆರ್‌ ಧೃವನಾರಾಯಣ್‌ರವರನ್ನು ಎದುರಿಸುವುದಕ್ಕಾಗಿ ಟಿಕೆಟ್‌ಗಾಗಿ ಇವರು ಭಾರೀ ಪೈಪೋಟಿ ನಡೆಸಿದ್ದರು.

ಈ ಮೇಲಿನ ಎರಡು ಹೆಸರುಗಳು ಮಾಜಿ‌ ಅಧಿಕಾರಿಗಳದ್ದಾದರೆ ಸತ್ಯಶೋಧನಾ ಸಮಿತಿಯಲ್ಲಿದ್ದ ಮತ್ತೊಂದು ಹೆಸರು ಪತ್ರಕರ್ತರ ಕೋಟಾದ ಸಂತೋಷ್ ತಮ್ಮಯ್ಯ. ಇವರು ಮಡಿಕೇರಿಯವರಾಗಿದ್ದು ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಆರೋಪದಲ್ಲಿ ಇವರ ವಿರುದ್ಧ ದೂರು ದಾಖಲಾಗಿ 2018ರ ನವೆಂಬರ್ 13 ರಂದು ಗೋಣಿಕೊಪ್ಪದಲ್ಲಿ ಆತನನ್ನು ಬಂಧಿಸಲಾಗಿತ್ತು. ಅಂದರೆ ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಆರಂಭವಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇದ್ದಾರೆ. ಸತ್ಯಶೋಧನೆಯ ಮೂಲ ಉದ್ದೇಶದ ಬಗ್ಗೆಯೇ ಸಂಶಯ ಏಳುವುದು ಇಲ್ಲಿ.

ಈ ಸಂತೋಷ್ ತಮ್ಮಯ್ಯ ಎನ್ನುವ ಪತ್ರಕರ್ತ, ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ವಿರೋಧಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದವರು. ಅಲ್ಲದೇ ತಮ್ಮ ಹಲವು ಲೇಖನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಬಿಜೆಪಿ ಪಕ್ಷವನ್ನು ಹೊಗಳಿರುವವರು. ಇಂತವರು ಸತ್ಯಶೋಧನಾ ಸಮಿತಿಯ ಭಾಗವಾದರೆ ವರದಿ ಹೇಗಿರುತ್ತದೆ?

ಇನ್ನು ಬಹಳ ಮುಖ್ಯವಾದ ವಿಚಾರ ಎಂದರೆ ಸಮಿತಿಯು ತನ್ನ ವರದಿಯನ್ನು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ಹೆಸರಿನಲ್ಲಿ ಹೊರತಂದಿದೆ. ಅದರ ಹಾಲಿ ಅಧ್ಯಕ್ಷ ಎಸ್‌.ಆರ್‌ ಹಿರೇಮಠ್‌ರವರು ‘ಸಿಟಿಜನ್ ಫಾರ್ ಡೆಮಾಕ್ರಸಿ’ಗೂ ಸತ್ಯಶೋಧನಾ ವರದಿಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ವರದಿಯನ್ನು ಹಿಂಪಡೆದು ನಮ್ಮ ಸಂಘಟನೆಯ ಹೆಸರು ಕೈಬಿಟ್ಟು ಬೇರೆ ಸಂಘಟನೆಗಳ ಹೆಸರಿನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಿದ್ದಾರೆ.

1974ರಲ್ಲಿ ಜಯಪ್ರಕಾಶ್ ನಾರಾಯಣ್‌ರವರ ಮೊದಲ ಅಧ್ಯಕ್ಷರಾಗಿ ಸ್ಥಾಪನೆಯಾಗಿದ್ದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ತುರ್ತುಪರಿಸ್ಥಿತಿಯ ವಿರುದ್ಧ ದಿಟ್ಟ ಹೋರಾಟ ನಡೆಸಿತ್ತು. ಆನಂತರವೂ ಸಹ ಹಲವು ಜನಪರ ಖ್ಯಾತನಾಮರು ಅದರ ಅಧ್ಯಕ್ಷರಾಗಿ ತುಳಿತಕ್ಕೊಳಗಾದವರ ಪರ ದನಿ ಎತ್ತಿದ್ದಾರೆ. ಅಂತಹ ಸಂಘಟನೆಯ ಹೆಸರನ್ನು ಬಿಜೆಪಿಯು ಬಳಸಿಕೊಂಡು ವರದಿ ತಯಾರಿಸಿದೆ ಎಂದರೆ ಏನರ್ಥ ಬರಬಹುದು ಎಂದು ಸಮಿತಿಯಲ್ಲಿದ್ದ ಘಟಾನುಘಟಿಗಳು ಯೋಚಿಸಿಲ್ಲವೇ? ಬಿಜೆಪಿ ಹೆಸರಿನಲ್ಲಿ ಪ್ರಕಟಿಸಿದರೆ ಜನ ಒಪ್ಪುವುದಿಲ್ಲ ಎಂದು ತಿಳಿದು ಜನಪರ ಸಂಘಟನೆಗಳ ಹೆಸರಿನಲ್ಲಿ ಬಿಜೆಪಿಯವರೆ ತಯಾರಿಸಿದ ವರದಿ ಪ್ರಕಟಿಸಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ….. ಹೇಳುತ್ತಾರೆ.


ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ


ಇನ್ನು ಸತ್ಯಶೋಧನಾ ತಂಡವು ವರದಿಯಲ್ಲಿ ತನ್ನ ಕಚೇರಿ ವಿಳಾಸವನ್ನು ನಮೂದಿಸಿದೆ. ಅದರ ಜಾಡು ಹಿಡಿದು ಹೊರಟರೆ ಅದು ನಿಮ್ಮನ್ನು ಬೆಂಗಳೂರಿನ ಚಾಮರಾಜಪೇಟೆಯ ‘ವಿಕ್ರಮ’ ಪತ್ರಿಕಾ ಕಚೇರಿಗೆ ಕರೆದುಕೊಂಡು ಹೋಗುತ್ತದೆ. ತನ್ನನ್ನು ತಾನು ಹಿಂದೂತ್ವ ಪತ್ರಿಕೆ ಎಂದು ಕರೆದುಕೊಳ್ಳುತ್ತದೆ. “ಹಿಂದು ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ವೈಚಾರಿಕ ಜಾಗೃತಿಯ ಜವಾಬ್ದಾರಿ ಇರುವುದು ಪತ್ರಿಕೆಗಳು ಮತ್ತು ಕೃತಿಗಳ ಹೆಗಲ ಮೇಲೆ. ಈ ಉದ್ದೇಶದಿಂದಲೇ 1948ರ ವಿಜಯದಶಮಿಯಂದು ವಿಕ್ರಮ ವಾರಪತ್ರಿಕೆ ಸ್ಥಾಪನೆಯಾಯಿತು” ಎಂದು ಘೋಷಿಸಿಕೊಂಡ ಪತ್ರಿಕೆಯ ವಿಳಾಸವನ್ನು ಸತ್ಯಶೋಧನೆಯ ವರದಿಗೆ ಏಕೆ ನೀಡಲಾಯಿತು? ಆರೆಸ್ಸಸ್ ಮುಖಂಡರು ಹೇಳಲು ಅಂಜುವಂತಹ ಸಂಗತಿಗಳನ್ನೂ ವಿಕ್ರಮ ಪ್ರಕಟಿಸುತ್ತದೆ.

ಇನ್ನು ಈ ಸತ್ಯಶೋಧನಾ ತಂಡದ ಮುಖ್ಯ ಸಮನ್ವಯಕಾರರು ಕ್ಷಮಾ ನರಗುಂದ್. ಅವರು ಆರ್‌ಎಸ್‌ಎಸ್‌ನ ಮಹಿಳಾ ವಿಭಾಗ ದುರ್ಗಾವಾಹಿನಿಯ ಸದಸ್ಯೆ ಎನ್ನಲಾಗುತ್ತಿದೆ. ಅವರು ತಮ್ಮ ಟ್ವಿಟ್ಟರ್ ಬಯೋದಲ್ಲಿ ತಾವೊಬ್ಬ ಆರ್‌ಎಸ್‌ಎಸ್‌ ಸೇವಿಕ ಎಂದು ಘೋಷಿಸಿಕೊಂಡಿದ್ದಾರೆ.

ಸಮಿತಿಯಲ್ಲಿರುವ ಆರ್‌.ಕೆ.ಮಟ್ಟೂ ಎಂಬ ಪತ್ರಕರ್ತರು ಸಹ ಆರೆಸ್ಸೆಸ್ ಪರವಾದ ನಿಲುವಿಗೆ ಪ್ರಖ್ಯಾತರು.

ಇಷ್ಟೆಲ್ಲಾ ಸಂಘಪರಿವಾರದ ಮತ್ತು ಬಿಜೆಪಿಯ ವ್ಯಕ್ತಿಗಳು ಕೂತು ಬರೆದಿರುವ ವರದಿಯನ್ನು ‘ಸತ್ಯಶೋಧನೆ’ ಎಂದು ಕರೆಯಲಾಗುವುದೇ? ಆರೆಸ್ಸೆಸ್ ಪರಿವಾರವೇ ಹೋಗಿ ತಮ್ಮ ಪರವಾಗಿ ವರದಿ ಬರೆದುಕೊಂಡರೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಜೊತೆಗೆ ಇನ್ನೂ ಒಂದು ಗಮನಿಸಬೇಕಾದ ವಿಚಾರವಿದೆ: ಸಾಮಾನ್ಯವಾಗಿ ಆಡಳಿತ ನಡೆಸುವವರು ತಮ್ಮ ಅಡಿಯಲ್ಲೇ ಕೆಲಸ ಮಾಡುವ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವನ್ನಿಟ್ಟುಕೊಂಡಿರುತ್ತಾರೆ. ಹಾಗಾಗಿ ಆಡಳಿತ ವಿರೋಧಿಗಳು ಅಥವಾ ಆಡಳಿತದ ಬಗ್ಗೆ ಸಂಶಯ ಹೊಂದಿರುವವರು ‘ಸತ್ಯ ಶೋಧನೆ’ ನಡೆಸುತ್ತಾರೆ.‌ ಆದರೆ ಇಲ್ಲಿ ಆಡಳಿತ ಕೂಟವೇ ‘ಸತ್ಯ ಶೋಧನಾ ತಂಡ’ ರಚಿಸಿರುವುದನ್ನು ನೋಡಿದರೆ ಪೊಲೀಸರು ಹೇಳಬಹುದಾದ ಸತ್ಯಕ್ಕಿಂತ‌ ಹೆಚ್ಚಿನದ್ದನ್ನು ಬಿಜೆಪಿ ಪರಿವಾರ ಬಯಸಿದೆ.


ಇದನ್ನೂ ಓದಿ: PFI, SDPI ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತೇ?: ಇಲ್ಲಿದೆ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಕುರಿತ ವಿಶ್ವಸಂಸ್ಥೆಯ ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಎಸ್. ಮುರಳೀಧರ್

ಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದ ಕುರಿತಾದ ವಿಶ್ವಸಂಸ್ಥೆಯ ಸ್ವತಂತ್ರ ಅಂತರರಾಷ್ಟ್ರೀಯ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಹಿರಿಯ ವಕೀಲ ಮತ್ತು ಒರಿಸ್ಸಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್....

ಲೈಂಗಿಕ ದೌರ್ಜನ್ಯ: ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ದೂರು ದಾಖಲು

ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ ನಂತರ ಕೇರಳ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ...

ಉತ್ತರ ಪ್ರದೇಶ-ಮಹಾರಾಷ್ಟ್ರದಲ್ಲಿ ಜನನ ಪ್ರಮಾಣಪತ್ರಕ್ಕೆ ಆಧಾರ್ ಮಾನ್ಯವಲ್ಲ: ಹೊಸ ಮಾರ್ಗಸೂಚಿ

ಜನನ ಪ್ರಮಾಣಪತ್ರಗಳನ್ನು ನೀಡಲು ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಮಾನ್ಯ ಪುರಾವೆಯಾಗಿ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಘೋಷಿಸಿವೆ. ಈ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು...

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...