Homeಮುಖಪುಟಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಹೆಸರೂ ಸೇರಿ ಎಲ್ಲವೂ ಸಂಶಯಾಸ್ಪದವಾಗಿದ್ದ ಸತ್ಯಶೋಧನಾ ಸಮಿತಿ: ಆರೆಸ್ಸೆಸ್ ಹೀಗೇಕೆ ಮಾಡಿತು?

ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಉಂಟಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇರಬೇಕೆಂಬುದು ಕಡ್ಡಾಯವೇ?

- Advertisement -
- Advertisement -

ಕಳೆದ ತಿಂಗಳು ಸಂಭವಿಸಿದ ಬೆಂಗಳೂರಿನ ಕೆ.ಜೆ.ಹಳ್ಳಿ ಡಿಜೆಹಳ್ಳಿ ಗಲಭೆ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ್ ಡಿ ಬಬಲಾಡಿ ನೇತೃತ್ವದಲ್ಲಿ ಒಂದು ತಂಡವು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆ ಹೆಸರಿನಲ್ಲಿ ಸತ್ಯಶೋಧನೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಗಲಭೆ ಪೂರ್ವನಿಯೋಜಿತವಾಗಿದ್ದು, ಇದಕ್ಕೆ ಪಿಎಫ್‌ಐ ಮತ್ತು ಎಸ್‌ಡಿಪಿಐ ನೇರ ಕಾರಣ ಎಂದು ತಿಳಿಸಲಾಗಿದೆ. ಆದರೆ ಸತ್ಯಶೋಧನೆಗೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಹೆಸರು ಬಳಸಿದ್ದಕ್ಕೆ ಅದರ ಅಧ್ಯಕ್ಷರಾದ ಖ್ಯಾತ ಹೋರಾಟಗಾರ ಎಸ್‌.ಆರ್ ಹಿರೇಮಠ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಮಿತಿಯಲ್ಲಿದ್ದ ಬಹುತೇಕರು ಬಿಜೆಪಿ – ಸಂಘಪರಿವಾರದ ಒಡನಾಟ ಹೊಂದಿರುವವರಾಗಿರುವುದರಿಂದ ಕೆ.ಜೆ.ಹಳ್ಳಿಯಲ್ಲಿ ಸತ್ಯಶೋಧನೆ ಹೆಸರಿನಲ್ಲಿ ಸುಳ್ಳನ್ನು ಬಿತ್ತಿದರೇ ಎಂಬ ಅನುಮಾನ ಹುಟ್ಟುವಂತಾಗಿದೆ ಮತ್ತು ಅದನ್ನು ಬಲಗೊಳಿಸುವ ಇನ್ನೂ ಹಲವು ಸಂಗತಿಗಳು ಹೊರಬಂದಿವೆ.

ಮುಖ್ಯವಾಗಿ ಸತ್ಯಶೋಧನಾ ಸಮಿತಿಯಲ್ಲಿ ಯಾರು ಯಾರು ಇದ್ದರು ಎಂಬುದು ವರದಿಯ ಉದ್ದೇಶವನ್ನು ತಿಳಿಸುತ್ತದೆ. ಆದರೆ ಇದರಲ್ಲಿ ಯಾರು ಯಾರಿದ್ದರು ನೋಡೋಣ ಬನ್ನಿ.

ಯಡಿಯೂರಪ್ಪನವರಿಗೆ ವರದಿ ಸಲ್ಲಿಸಿದ ನಂತರ ನಿವೃತ್ತ ಐಎಸ್‌ಎಸ್‌ ಅಧಿಕಾರಿ ಮದನ್ ಗೋಪಾಲ್ “ಇದು ನಿರ್ದಿಷ್ಠ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು, ಭೀತಿ ಸೃಷ್ಟಿಸಲು, ಆ ಮೂಲಕ ದೇಶದ ಆರ್ಥಿಕತೆ ಕೆಡವಲು ನಡೆಸಿದ ಪೂರ್ವಯೋಜಿತ ಗಲಭೆ” ಎಂದು ಹೇಳಿದ್ದಾರೆ. ಇದೇ ಮದನ್ ಗೋಪಾಲ್‌ರವರು 2018ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುಂಚೆ 2017ರಲ್ಲಿ ಬಿಜೆಪಿ ರಚಿಸಿದ ಪ್ರಣಾಳಿಕೆ ಸಮಿತಿಯ ಸಕ್ರಿಯ ಸದಸ್ಯರಾಗಿದ್ದವರು. ಅಂದರೆ ಬಿಜೆಪಿಯ ಪ್ರಬಲ ಬೆಂಬಲಿಗರು ಸತ್ಯಶೋಧನಾ ಸಮಿತಿಯ ಭಾಗವಾಗಿದ್ದರು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಇನ್ನು ಸತ್ಯಶೋಧನ ಸಮಿತಿಯಲ್ಲಿದ್ದ ಮತ್ತೋರ್ವ ವ್ಯಕ್ತಿ ಡಾ.ಆರ್‌ರಾಜು. ಇವರು ನಿವೃತ್ತ ಐಎಫ್‌ಎಸ್‌ ಅಧಿಕಾರಿಗಳಾಗಿದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಲ್ಲೊಬ್ಬರಾಗಿದ್ದರು. ಕಾಂಗ್ರೆಸ್‌ನ ಆರ್‌ ಧೃವನಾರಾಯಣ್‌ರವರನ್ನು ಎದುರಿಸುವುದಕ್ಕಾಗಿ ಟಿಕೆಟ್‌ಗಾಗಿ ಇವರು ಭಾರೀ ಪೈಪೋಟಿ ನಡೆಸಿದ್ದರು.

ಈ ಮೇಲಿನ ಎರಡು ಹೆಸರುಗಳು ಮಾಜಿ‌ ಅಧಿಕಾರಿಗಳದ್ದಾದರೆ ಸತ್ಯಶೋಧನಾ ಸಮಿತಿಯಲ್ಲಿದ್ದ ಮತ್ತೊಂದು ಹೆಸರು ಪತ್ರಕರ್ತರ ಕೋಟಾದ ಸಂತೋಷ್ ತಮ್ಮಯ್ಯ. ಇವರು ಮಡಿಕೇರಿಯವರಾಗಿದ್ದು ಪ್ರವಾದಿ ನಿಂದನೆ ಪೋಸ್ಟ್ ಮಾಡಿದ ಆರೋಪದಲ್ಲಿ ಇವರ ವಿರುದ್ಧ ದೂರು ದಾಖಲಾಗಿ 2018ರ ನವೆಂಬರ್ 13 ರಂದು ಗೋಣಿಕೊಪ್ಪದಲ್ಲಿ ಆತನನ್ನು ಬಂಧಿಸಲಾಗಿತ್ತು. ಅಂದರೆ ಪ್ರವಾದಿ ನಿಂದನೆ ಪೋಸ್ಟ್‌ನಿಂದಾಗಿ ಆರಂಭವಾದ ಗಲಭೆಯ ಸತ್ಯಶೋಧನೆಯಲ್ಲಿ ಪ್ರವಾದಿ ನಿಂದನೆ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ವ್ಯಕ್ತಿಗಳು ಇದ್ದಾರೆ. ಸತ್ಯಶೋಧನೆಯ ಮೂಲ ಉದ್ದೇಶದ ಬಗ್ಗೆಯೇ ಸಂಶಯ ಏಳುವುದು ಇಲ್ಲಿ.

ಈ ಸಂತೋಷ್ ತಮ್ಮಯ್ಯ ಎನ್ನುವ ಪತ್ರಕರ್ತ, ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿ ವಿರೋಧಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದ್ದವರು. ಅಲ್ಲದೇ ತಮ್ಮ ಹಲವು ಲೇಖನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ ಬಿಜೆಪಿ ಪಕ್ಷವನ್ನು ಹೊಗಳಿರುವವರು. ಇಂತವರು ಸತ್ಯಶೋಧನಾ ಸಮಿತಿಯ ಭಾಗವಾದರೆ ವರದಿ ಹೇಗಿರುತ್ತದೆ?

ಇನ್ನು ಬಹಳ ಮುಖ್ಯವಾದ ವಿಚಾರ ಎಂದರೆ ಸಮಿತಿಯು ತನ್ನ ವರದಿಯನ್ನು ‘ಸಿಟಿಜನ್ ಫಾರ್ ಡೆಮಾಕ್ರಸಿ’ ಸಂಘಟನೆಯ ಹೆಸರಿನಲ್ಲಿ ಹೊರತಂದಿದೆ. ಅದರ ಹಾಲಿ ಅಧ್ಯಕ್ಷ ಎಸ್‌.ಆರ್‌ ಹಿರೇಮಠ್‌ರವರು ‘ಸಿಟಿಜನ್ ಫಾರ್ ಡೆಮಾಕ್ರಸಿ’ಗೂ ಸತ್ಯಶೋಧನಾ ವರದಿಗೂ ಯಾವುದೇ ಸಂಬಂಧವಿಲ್ಲ. ಕೂಡಲೇ ವರದಿಯನ್ನು ಹಿಂಪಡೆದು ನಮ್ಮ ಸಂಘಟನೆಯ ಹೆಸರು ಕೈಬಿಟ್ಟು ಬೇರೆ ಸಂಘಟನೆಗಳ ಹೆಸರಿನಲ್ಲಿ ಪ್ರಕಟಿಸಬೇಕು ಎಂದು ತಾಕೀತು ಮಾಡಿದ್ದಾರೆ.

1974ರಲ್ಲಿ ಜಯಪ್ರಕಾಶ್ ನಾರಾಯಣ್‌ರವರ ಮೊದಲ ಅಧ್ಯಕ್ಷರಾಗಿ ಸ್ಥಾಪನೆಯಾಗಿದ್ದ ‘ಸಿಟಿಜನ್ ಫಾರ್ ಡೆಮಾಕ್ರಸಿ’ ತುರ್ತುಪರಿಸ್ಥಿತಿಯ ವಿರುದ್ಧ ದಿಟ್ಟ ಹೋರಾಟ ನಡೆಸಿತ್ತು. ಆನಂತರವೂ ಸಹ ಹಲವು ಜನಪರ ಖ್ಯಾತನಾಮರು ಅದರ ಅಧ್ಯಕ್ಷರಾಗಿ ತುಳಿತಕ್ಕೊಳಗಾದವರ ಪರ ದನಿ ಎತ್ತಿದ್ದಾರೆ. ಅಂತಹ ಸಂಘಟನೆಯ ಹೆಸರನ್ನು ಬಿಜೆಪಿಯು ಬಳಸಿಕೊಂಡು ವರದಿ ತಯಾರಿಸಿದೆ ಎಂದರೆ ಏನರ್ಥ ಬರಬಹುದು ಎಂದು ಸಮಿತಿಯಲ್ಲಿದ್ದ ಘಟಾನುಘಟಿಗಳು ಯೋಚಿಸಿಲ್ಲವೇ? ಬಿಜೆಪಿ ಹೆಸರಿನಲ್ಲಿ ಪ್ರಕಟಿಸಿದರೆ ಜನ ಒಪ್ಪುವುದಿಲ್ಲ ಎಂದು ತಿಳಿದು ಜನಪರ ಸಂಘಟನೆಗಳ ಹೆಸರಿನಲ್ಲಿ ಬಿಜೆಪಿಯವರೆ ತಯಾರಿಸಿದ ವರದಿ ಪ್ರಕಟಿಸಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ….. ಹೇಳುತ್ತಾರೆ.


ಇದನ್ನೂ ಓದಿ: ಎಸ್‌ಡಿಪಿಐಗೆ ನೇರ ಪ್ರಶ್ನೆಗಳು: ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆಯವರ ಸಂದರ್ಶನ


ಇನ್ನು ಸತ್ಯಶೋಧನಾ ತಂಡವು ವರದಿಯಲ್ಲಿ ತನ್ನ ಕಚೇರಿ ವಿಳಾಸವನ್ನು ನಮೂದಿಸಿದೆ. ಅದರ ಜಾಡು ಹಿಡಿದು ಹೊರಟರೆ ಅದು ನಿಮ್ಮನ್ನು ಬೆಂಗಳೂರಿನ ಚಾಮರಾಜಪೇಟೆಯ ‘ವಿಕ್ರಮ’ ಪತ್ರಿಕಾ ಕಚೇರಿಗೆ ಕರೆದುಕೊಂಡು ಹೋಗುತ್ತದೆ. ತನ್ನನ್ನು ತಾನು ಹಿಂದೂತ್ವ ಪತ್ರಿಕೆ ಎಂದು ಕರೆದುಕೊಳ್ಳುತ್ತದೆ. “ಹಿಂದು ಸಂಘಟನೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕೆಲಸವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ ಮತ್ತು ಅದರಲ್ಲಿ ಯಶಸ್ವಿಯೂ ಆಗಿದೆ. ಆದರೆ ವೈಚಾರಿಕ ಜಾಗೃತಿಯ ಜವಾಬ್ದಾರಿ ಇರುವುದು ಪತ್ರಿಕೆಗಳು ಮತ್ತು ಕೃತಿಗಳ ಹೆಗಲ ಮೇಲೆ. ಈ ಉದ್ದೇಶದಿಂದಲೇ 1948ರ ವಿಜಯದಶಮಿಯಂದು ವಿಕ್ರಮ ವಾರಪತ್ರಿಕೆ ಸ್ಥಾಪನೆಯಾಯಿತು” ಎಂದು ಘೋಷಿಸಿಕೊಂಡ ಪತ್ರಿಕೆಯ ವಿಳಾಸವನ್ನು ಸತ್ಯಶೋಧನೆಯ ವರದಿಗೆ ಏಕೆ ನೀಡಲಾಯಿತು? ಆರೆಸ್ಸಸ್ ಮುಖಂಡರು ಹೇಳಲು ಅಂಜುವಂತಹ ಸಂಗತಿಗಳನ್ನೂ ವಿಕ್ರಮ ಪ್ರಕಟಿಸುತ್ತದೆ.

ಇನ್ನು ಈ ಸತ್ಯಶೋಧನಾ ತಂಡದ ಮುಖ್ಯ ಸಮನ್ವಯಕಾರರು ಕ್ಷಮಾ ನರಗುಂದ್. ಅವರು ಆರ್‌ಎಸ್‌ಎಸ್‌ನ ಮಹಿಳಾ ವಿಭಾಗ ದುರ್ಗಾವಾಹಿನಿಯ ಸದಸ್ಯೆ ಎನ್ನಲಾಗುತ್ತಿದೆ. ಅವರು ತಮ್ಮ ಟ್ವಿಟ್ಟರ್ ಬಯೋದಲ್ಲಿ ತಾವೊಬ್ಬ ಆರ್‌ಎಸ್‌ಎಸ್‌ ಸೇವಿಕ ಎಂದು ಘೋಷಿಸಿಕೊಂಡಿದ್ದಾರೆ.

ಸಮಿತಿಯಲ್ಲಿರುವ ಆರ್‌.ಕೆ.ಮಟ್ಟೂ ಎಂಬ ಪತ್ರಕರ್ತರು ಸಹ ಆರೆಸ್ಸೆಸ್ ಪರವಾದ ನಿಲುವಿಗೆ ಪ್ರಖ್ಯಾತರು.

ಇಷ್ಟೆಲ್ಲಾ ಸಂಘಪರಿವಾರದ ಮತ್ತು ಬಿಜೆಪಿಯ ವ್ಯಕ್ತಿಗಳು ಕೂತು ಬರೆದಿರುವ ವರದಿಯನ್ನು ‘ಸತ್ಯಶೋಧನೆ’ ಎಂದು ಕರೆಯಲಾಗುವುದೇ? ಆರೆಸ್ಸೆಸ್ ಪರಿವಾರವೇ ಹೋಗಿ ತಮ್ಮ ಪರವಾಗಿ ವರದಿ ಬರೆದುಕೊಂಡರೇ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

ಜೊತೆಗೆ ಇನ್ನೂ ಒಂದು ಗಮನಿಸಬೇಕಾದ ವಿಚಾರವಿದೆ: ಸಾಮಾನ್ಯವಾಗಿ ಆಡಳಿತ ನಡೆಸುವವರು ತಮ್ಮ ಅಡಿಯಲ್ಲೇ ಕೆಲಸ ಮಾಡುವ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವನ್ನಿಟ್ಟುಕೊಂಡಿರುತ್ತಾರೆ. ಹಾಗಾಗಿ ಆಡಳಿತ ವಿರೋಧಿಗಳು ಅಥವಾ ಆಡಳಿತದ ಬಗ್ಗೆ ಸಂಶಯ ಹೊಂದಿರುವವರು ‘ಸತ್ಯ ಶೋಧನೆ’ ನಡೆಸುತ್ತಾರೆ.‌ ಆದರೆ ಇಲ್ಲಿ ಆಡಳಿತ ಕೂಟವೇ ‘ಸತ್ಯ ಶೋಧನಾ ತಂಡ’ ರಚಿಸಿರುವುದನ್ನು ನೋಡಿದರೆ ಪೊಲೀಸರು ಹೇಳಬಹುದಾದ ಸತ್ಯಕ್ಕಿಂತ‌ ಹೆಚ್ಚಿನದ್ದನ್ನು ಬಿಜೆಪಿ ಪರಿವಾರ ಬಯಸಿದೆ.


ಇದನ್ನೂ ಓದಿ: PFI, SDPI ವಿರುದ್ಧದ 175 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತೇ?: ಇಲ್ಲಿದೆ ವಿವರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟ; ಹೇಮಂತ್ ಸೊರೇನ್ – ರಾಹುಲ್ ಗಾಂಧಿ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು

ಜಾರ್ಖಂಡ್ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಗಸ್ಟ್ 16 ರಂದು (ಭಾನುವಾರ) ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ...

BJP ರಾಷ್ಟ್ರೀಯ ವಕ್ತಾರ ಹುದ್ದೆಗೆ ಮತ್ತೆ ರಾಜೀನಾಮೆ! ಕಾರಣ ಬಿಚ್ಚಿಟ್ಟ ಶೆಹಝಾದ್ ಪೂನಾವಾಲಾ

BJP ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನಾವಾಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ತಮ್ಮ ಹುದ್ದೆಗೆ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ತಕ್ಷಣವೇ ಅಂಗೀಕರಿಸುವಂತೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ...

NALSAR ಘಟಿಕೋತ್ಸವ ವಿವಾದ: ಆಹ್ವಾನ ತಿರಸ್ಕರಿಸಿದ ಸಿಜೆಐ ಸೂರ್ಯಕಾಂತ್!

ಹೈದರಾಬಾದ್‌ನ ಪ್ರತಿಷ್ಠಿತ NALSAR ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕುರಿತು ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ತಾವು ಈ ಆಹ್ವಾನವನ್ನು ಸ್ವೀಕರಿಸಿಲ್ಲ, ಹೀಗಾಗಿ ಘಟಿಕೋತ್ಸವದಲ್ಲಿ ಭಾಗವಹಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ...

ಹೈದರಾಬಾದ್ : ಡಿಜಿಟಲೀಕರಣಗೊಂಡ ಶೇ. 21ರಷ್ಟು ಮತದಾರರಿಗೆ SIR ನೋಟಿಸ್

ಹೈದರಾಬಾದ್ ಜಿಲ್ಲಾ ಚುನಾವಣಾ ಪ್ರಾಧಿಕಾರವು (ಡಿಇಎ) ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 2026ರ ಅಡಿಯಲ್ಲಿ ಸೋಮವಾರ (ಆ. 17) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ, 5.82 ಲಕ್ಷ ಮತದಾರರಿಗೆ ನೋಟಿಸ್ ಜಾರಿ...

ಕಾವೇರಿ: ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಡಿ.ಕೆ.ಶಿವಕುಮಾರ್

ರಾಜ್ಯದ ಜಲಾಶಯಗಳಲ್ಲಿ ನೀರಿನ ಲಭ್ಯತೆ ಕಡಿಮೆಯಿರುವಾಗ ನಮ್ಮ ರೈತರನ್ನು ಬದುಕಿಸುವ ಸವಾಲಿನ ಜೊತೆಗೆ ಕಾನೂನನ್ನೂ ಕಾಪಾಡಬೇಕಾದ ಹೊಣೆಗಾರಿಕೆ ಇದೆ. ಕಾವೇರಿ ವಿಚಾರದಲ್ಲಿ ನಮ್ಮ ರೈತರ ಹಿತ ಕಾಯುವುದು ನನ್ನ ಮೊದಲ ಕರ್ತವ್ಯ ಎಂದು...

‘ಅಸ್ತಿತ್ವದ ಸಮಸ್ಯೆಯಲ್ಲ, ಹೊಣೆಗಾರಿಕೆಯೇ ಮುಖ್ಯ’: ಆರ್‌ಎಸ್‌ಎಸ್ ನೋಂದಣಿ ಕುರಿತು ಬಿ.ಎಲ್. ಸಂತೋಷ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ಹಾಗೂ ಅದರ ಕಾನೂನಾತ್ಮಕ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹಾಗೂ ಕರ್ನಾಟಕದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್...

ನಾನು ‘ದಿಮಾಗಿ ನಕ್ಸಲ್’ ಆಗಿದ್ದರೆ ಅದಕ್ಕೆ ಹೆಮ್ಮೆ ಇದೆ: ಮೋದಿ-ರಿಜಿಜು ವಿರುದ್ಧ ಚಿದಂಬರಂ ತಿರುಗೇಟು

ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಳಸಿದ್ದ ‘ದಿಮಾಗಿ ನಕ್ಸಲರು’ (ವೈಚಾರಿಕ ನಕ್ಸಲರು) ಎಂಬ ಪದ ಬಳಕೆ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರಧಾನಿಯವರ ಈ...

CAA ವಿರೋಧಿ ಪ್ರತಿಭಟನೆಗೆ ಕಾರಣವಾಗಿದ್ದ ಪ್ರಶ್ನೆಗಳು ಮತ್ತೆ ಜನಗಣತಿಯಲ್ಲಿ-ವರದಿ

ಶೀಘ್ರದಲ್ಲೇ ಪ್ರಾರಂಭವಾಗಲಿರುವ ಜನಗಣತಿಯ ಜನಸಂಖ್ಯಾ ಎಣಿಕೆ ಹಂತವು, 2011ರ ಜನಗಣತಿಗೆ ಹೋಲಿಸಿದರೆ 14 ಹೊಸ ಅಥವಾ ಮಾರ್ಪಡಿಸಿದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪೈಕಿ ಹಲವು ಪ್ರಶ್ನೆಗಳು 2020ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದ ರಾಷ್ಟ್ರೀಯ ಜನಸಂಖ್ಯಾ ನೋಂದಣಿ...

ಹಿಂಗೋಲಿ ಶಾಲೆಯಲ್ಲಿ ಪ್ರಾಂಶುಪಾಲರ ಮದ್ಯಪಾನ, ಶಿಕ್ಷಕರ ಅಭಾವ: ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಅಭಿಜೀತ್ ದೀಪ್ಕೆ

ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಲಿಂಬಾಲಾ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಶೈಕ್ಷಣಿಕ ವಾತಾವರಣ ಸಂಪೂರ್ಣವಾಗಿ ಕುಸಿದಿದ್ದು, ಶಾಲಾ ಪ್ರಾಂಶುಪಾಲರ ಹೊಣೆಗೇಡಿತನ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರ ಆಕ್ರೋಶ ಮುಗಿಲುಮುಟ್ಟಿದೆ. ಶಾಲೆಯ ಪ್ರಾಂಶುಪಾಲರು...

ರಾಜ್ಯಗಳಿಗೆ ನೀಡುವ ವಿಪತ್ತು ಪರಿಹಾರದಲ್ಲೂ ಕೇಂದ್ರದಿಂದ ವಂಚನೆ? CAG ವರದಿ

ದೇಶಾದ್ಯಂತ ನೆರೆ, ಬರ, ಭೂಕುಸಿತದಂತಹ ಭೀಕರ ಪ್ರಕೃತಿ ವಿಕೋಪಗಳಿಂದ ಕಂಗಾಲಾಗಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಸಿಗಬೇಕಾದ ವಿಪತ್ತು ಪರಿಹಾರ ಅನುದಾನದಲ್ಲಿ ಭಾರಿ ಪ್ರಮಾಣದ ಕಡಿತವಾಗುತ್ತಿರುವುದು ಈಗ ನಿರೂಪಿತವಾಗಿದೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ...