Homeಮುಖಪುಟಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ಬೋಗಸ್ ದಾಖಲೆ ಬಳಸಿ ಮೋದಿ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಸೃಷ್ಟಿಸುತ್ತಿರುವ ಬ್ಯಾಂಕ್‌ಗಳು: ವರದಿ

ಗ್ರಾಹಕರ ಅನುಮತಿ ಪಡೆಯದೆ ವಿಮಾ ಯೋಜನೆಗಳಿಗೆ ಸೇರ್ಪಡೆ, ಖಾತೆಯಿಂದ ಹಣ ಕಡಿತ!

- Advertisement -
- Advertisement -

ಮೋದಿ ಸರ್ಕಾರದ ಪ್ರಧಾನ ಮಂತ್ರಿ ‘ಜೀವನ ಜ್ಯೋತಿ ಭೀಮಾ ಯೋಜನೆ’ ಸೇರಿದಂತೆ ಇನ್ನಿತರ ಹಲವು ವಿಮಾ ಯೋಜನೆಗಳಿಗೆ ಜನರ ಒಪ್ಪಿಗೆ ಇಲ್ಲದೆಯೇ ಬ್ಯಾಂಕ್‌ಗಳು ಅವರನ್ನು ಸೇರಿಸಿ ಖಾತೆಗಳಿಂದ ಪ್ರೀಮಿಯಂ ಮೊತ್ತ ಕಡಿತ ಮಾಡುತ್ತಿರುವುದು ಬಯಲಾಗಿದೆ. ಯೋಜನೆಗಳಿಗೆ ಜನರನ್ನು ಸೇರಿಸುವಾಗ ಬೇಕಿರುವ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಬ್ಯಾಂಕ್‌ಗಳೇ ಸೃಷ್ಟಿಸುತ್ತಿವೆ ಎಂದು artical-14.com ನ ತನಿಖಾ ವರದಿ ತಿಳಿಸಿದೆ.

ಮಾಧ್ಯಮ ವರದಿಗಳು ಮತ್ತು ಸಾರ್ವಜನಿಕರ ದೂರುಗಳ ಹೊರತಾಗಿಯೂ, ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ಕಡಿಮೆ ವೆಚ್ಚದ ಜೀವ ವಿಮೆ ಮತ್ತು ಅಪಘಾತ ವಿಮೆ ಯೋಜನೆಗಳಿಗೆ ಗ್ರಾಹಕರನ್ನು ನೋಂದಾಯಿಸಲು ಬ್ಯಾಂಕ್‌ಗಳು ಅವರ ಖಾತೆಗಳಿಂದ ಅನುಮತಿಯಿಲ್ಲದೆ ಹಣ ಕಡಿತ ಮಾಡುತ್ತಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿದ ಗುರಿ ಪೂರೈಸಲು ಬ್ಯಾಂಕ್‌ಗಳು ಗ್ರಾಹಕರ ಖಾತೆಗಳಿಂದ ಸಾಮೂಹಿಕವಾಗಿ ಹಣ ಕಡಿತ ಮಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಗ್ರಾಹಕರ ಒಪ್ಪಿಗೆಯನ್ನು ನಕಲಿಸುವುದು ಮತ್ತು ಅದನ್ನು ಮರೆಮಾಚಲು ಸ್ಥಳೀಯ ಕಚೇರಿಗಳಿಗೆ ಸೂಚಿಸುವುದು ಮಾಡುತ್ತಿದೆ ಎಂದು ತನಿಖಾ ವರದಿ ಹೇಳಿದೆ.

ಬ್ಯಾಂಕ್‌ಗಳು ಮೋದಿ ಸರ್ಕಾರದ ವಿಮಾ ಯೋಜನೆಗಳಿಗಾಗಿ ತಮ್ಮ ಖಾತೆಗಳಿಂದ ಹಣ ಕಡಿತಗೊಳಿಸುವುದರ ವಿರುದ್ಧ ಹೆಚ್ಚಿನ ಗ್ರಾಹಕರು ಆಕ್ರೋಶಗೊಂಡಿದ್ದಾರೆ. ಬ್ಯಾಂಕ್ ಶಾಖೆಗಳಿಗೆ ತೆರಳಿ ದಬಾಯಿಸಿದ್ದಾರೆ. ಇಂತಹ ಕೆಲವು ಗ್ರಾಹಕರಿಂದ ಕಡಿತ ಮಾಡಿದ್ದ ಹಣವನ್ನು ಬ್ಯಾಂಕ್‌ಗಳು ಹಿಂದಿರುಗಿಸಿವೆ. ಇನ್ನೂ ಕೆಲವರು ನ್ಯಾಯಾಲಯಗಳ ಮೆಟ್ಟಿಲೇರಿದ್ದಾರೆ. ಅವರೊಂದಿಗೆ ರಾಜಿ ಸಂಧಾನಕ್ಕಾಗಿ ಬ್ಯಾಂಕ್‌ಗಳು ಅಲವತ್ತುಕೊಂಡಿವೆ. ಇದಕ್ಕೆ ಕ್ಯಾರೇ ಎನ್ನದ ಗ್ರಾಹಕರು. “ಇದು ಕೇವಲ ಹಣದ ಪ್ರಶ್ನೆಯಲ್ಲ, ಇದು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಮಾಡುತ್ತಿರುವ ವಂಚನೆಯಾಗಿದೆ. ಇದನ್ನು ನಿಲ್ಲಿಸಲೇಬೇಕಿದೆ” ಎಂದು ಕಾನೂನು ಸಮರ ಮುಂದುರೆಸಿದ್ದಾರೆ.

ಬಿಹಾರದ ಸರನ್ ಜಿಲ್ಲೆಯ ಇಂಜಿನಿಯರಿಂಗ್ ಪದವೀಧರ ಕುಂದನ್ ಕುಮಾರ್ ಕಳೆದೊಂದು ವರ್ಷದಿಂದಲೂ ತಾನು ಖರೀದಿಸದ ವಿಮಾ ಪಾಲಿಸಿಯಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ ಎಂದು artical-14.com ತಿಳಿಸಿದೆ.

ಕುಮಾರ್ ಅವರ ಅನುಮತಿಯಿಲ್ಲದೇ ಅವರ ಖಾತೆಯಿಂದ ಬ್ಯಾಂಕ್‌ ಹಣವನ್ನು ಕಡಿತಗೊಳಿಸಿದೆ. ಅವರ ಹೆಸರನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (ಪಿಎಂಜೆಜೆಬಿವೈ)ಗೆ ಸೇರಿಸಿದೆ.

ಕುಮಾರ್ ಅವರು ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ನಲ್ಲಿ ಖಾತೆ ಹೊಂದಿದ್ದು, 2022 ಡಿಸೆಂಬರ್‌ 29ರಂದು ಬ್ಯಾಂಕ್‌ ಅವರ ಖಾತೆಯಿಂದ ಹಣ ಕಡಿತಗೊಳಿಸಿದೆ. ದಿನಗಳ ಬಳಿಕ ಈ ಕುರಿತು ಅರಿವಾದಾಗ, ಕುಮಾರ್ ಮಾಹಿತಿ ಹಕ್ಕು ಕಾಯ್ದೆಯಡಿ(ಆರ್‌ಟಿಐ) ಬ್ಯಾಂಕ್‌ನಿಂದ ವಿಮಾ ಪಾಲಿಸಿಗೆ ತನ್ನ ಅರ್ಜಿಯ ಪ್ರತಿಯನ್ನು ಕೋರಿದ್ದರು. ಸದ್ರಿ ವಿಮೆಗಾಗಿ ಯಾವುದೇ ಅರ್ಜಿಯು ಕಂಡು ಬಂದಿಲ್ಲ ಎಂದು ಬ್ಯಾಂಕ್‌ 2023, ಫೆ.2ರಂದು ನೀಡಿದ್ದ ಉತ್ತರದಲ್ಲಿ ತಿಳಿಸಿತ್ತು.

ಬ್ಯಾಂಕ್‌ಗಳು ಇತರ ವಿಮಾ ಯೋಜನೆಗಳಿಗೂ ಗ್ರಾಹಕರ ಅನುಮತಿ ಇಲ್ಲದೆ ಸೇರಿಸುತ್ತಿದೆ. “ನನ್ನ ಖಾತೆಯಿಂದ ಕಡಿತಗೊಳಿಸಿರುವ ಹಣವನ್ನು ಬ್ಯಾಂಕ್ ವಾಪಸ್ ಕೊಟ್ಟಿಲ್ಲ. ಈ ಕೊಳಕು ವ್ಯವಸ್ಥೆಯಿಂದ ಹೊರ ಬರಲು ನಾನು ಮಾರ್ಗ ಹುಡುಕುತ್ತಿದ್ದೇನೆ” ಎಂದು artical-14.com ಗೆ ಕುಮಾರ್ ಹೇಳಿದ್ದಾರೆ.

ಜೀವ ವಿಮೆಯಲ್ಲದೆ ಬ್ಯಾಂಕ್‌ಗಳು ಗ್ರಾಹಕರ ಅನುಮತಿಯಿಲ್ಲದೆ ಅವರನ್ನು ಅಪಘಾತ ವಿಮೆಯಾಗಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (ಪಿಎಂಎಸ್ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ)ಗೂ ಸೇರಿಸಿ ಖಾತೆಗಳಿಂದ ಹಣ ಕಡಿತಗೊಳಿಸುತ್ತಿವೆ.

ಕುಮಾರ್ ಒಪ್ಪಿಗೆಯಿಲ್ಲದೆ ಅವರನ್ನು ಪಿಎಂಜೆಜೆಬಿವೈಗೆ ಸೇರಿಸಿದ್ದರೆ, ಅವರ ತಾಯಿಯ ಹೆಸರನ್ನು ಒಪ್ಪಿಗೆ ಪಡೆಯದೇ ಎಪಿವೈಗೆ ಸೇರಿಸಲಾಗಿದೆ. ಪಿಎಂಜೆಜೆಬಿವೈಗೆ ವಾರ್ಷಿಕ ಪ್ರೀಮಿಯಂ 436 ರೂ.ಗಳಾಗಿದ್ದರೆ ಪಿಎಂಎಸ್‌ಬಿವೈಗೆ 20 ರೂ.ಗಳಾಗಿವೆ. ಗ್ರಾಹಕರು ಒಮ್ಮೆ ಈ ಯೋಜನೆಗಳಿಗೆ ಚಂದಾದಾರರಾದರೆ ಪ್ರತಿ ವರ್ಷ ಅವರ ಖಾತೆಯಿಂದ ಹಣ ಕಡಿತವಾಗುತ್ತಲೇ ಇರುತ್ತದೆ.

ಪಿಎಂಜೆಜೆಬಿವೈ ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ ಪಾಲಿಸಿದಾರನ ನಾಮಿನಿಗೆ 2 ಲಕ್ಷ ರೂ.ಗಳ ವಿಮೆ ಹಣವನ್ನು ನೀಡುತ್ತದೆ. ಪಿಎಂಎಸ್‌ಬಿವೈ ಅಪಘಾತದಿಂದ ಸಾವು ಸಂಭವಿಸಿದರೆ 2 ಲಕ್ಷ ರೂ. ಮತ್ತು ತೀವ್ರವಾಗಿ ಗಾಯಗೊಂಡರೆ 1 ಲಕ್ಷ ರೂ.ಗಳ ಪರಿಹಾರವನ್ನು ಒದಗಿಸುತ್ತದೆ. ಎಪಿವೈ 60 ವರ್ಷ ವಯಸ್ಸಿನ ಬಳಿಕ 5,000 ರೂ.ವರೆಗೂ ಮಾಸಿಕ ಪಿಂಚಣಿಯನ್ನು ನೀಡುತ್ತದೆ. ಇದು ಮಾಸಿಕ ಶುಲ್ಕವು ಆಯ್ಕೆ ಮಾಡಿದ ಪಿಂಚಣಿ ಪ್ಲಾನ್ ಅನ್ನು ಅವಲಂಬಿಸಿರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಅನುಮತಿಯಿಲ್ಲದೆ ಯೋಜನೆಗಳಿಗೆ ನೋಂದಾಯಿತರಾದವರಿಗೆ ತಾವು ವಿಮಾ ರಕ್ಷಣೆಗಾಗಿ ಪ್ರೀಮಿಯಂ ನೀಡುತ್ತಿದ್ದೇವೆ ಎನ್ನುವುದೂ ಗೊತ್ತಿರುವುದಿಲ್ಲ. ಇದು ದುರಂತ ಸಂಭವಿಸಿದ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ಯೋಜನೆಯ ಲಾಭಗಳನ್ನು ಪಡೆಯುವುದನ್ನು ತಡೆಯುತ್ತದೆ ಮತ್ತು ಅನುಮತಿಯಿಲ್ಲದೆ ಕಡಿತಗೊಂಡ ಪ್ರೀಮಿಯಂ ಹಣವೂ ವ್ಯರ್ಥವಾಗುತ್ತದೆ.

ಪಾಲಿಸಿದಾರರ/ಖಾತೆದಾರರ ಒಪ್ಪಿಗೆಯಿಲ್ಲದೆ ವಿಮೆ ಯೋಜನೆಗಳನ್ನು ಸಕ್ರಿಯಗೊಳಿಸುವಾಗ ಸುಳ್ಳು ಮಾಹಿತಿಗಳನ್ನು ನಮೂದಿಸಲಾಗುತ್ತದೆ ಎಂದು ಬ್ಯಾಂಕ್ ಉದ್ಯೋಗಿಗಳೇ ಒಪ್ಪಿಕೊಂಡಿದ್ದಾರೆ.

artical-14.comಗೆ ಲಭ್ಯವಾಗಿರುವ ಇಂತಹ ಗ್ರಾಹಕರ ಪಾಲಿಸಿಗಳು ಬೋಗಸ್ ನಾಮಿನಿಗಳನ್ನು ತೋರಿಸಿವೆ. ಇದು ಯೋಜನೆಯ ಲಾಭಗಳನ್ನು ಪಡೆದುಕೊಳ್ಳಲು ಪಾಲಿಸಿದಾರನ ಕುಟುಂಬಕ್ಕೆ ನಿರ್ಬಂಧವನ್ನೂ ಒಡ್ಡುತ್ತದೆ.

ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ಸಂಘಗಳು ಈ ಯೋಜನೆಗಳಿಗಾಗಿ ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಹಣವನ್ನು ಕಡಿತಗೊಳಿಸುವ ಅವ್ಯವಹಾರವನ್ನು ವಿರೋಧಿಸಿವೆ. ಆದರೆ, ಬ್ಯಾಂಕ್‌ಗಳು ಇದಕ್ಕೆ ಸೊಪ್ಪು ಹಾಕುತ್ತಿಲ್ಲ.

ಈ ಅವ್ಯವಹಾರವನ್ನು ಸಾಂಸ್ಥಿಕಗೊಳಿಸಲಾಗಿದೆ ಮತ್ತು ಬ್ಯಾಂಕ್‌ಗಳ ಪ್ರಾದೇಶಿಕ, ವಲಯ ಮತ್ತು ಮುಖ್ಯ ಕಚೇರಿಗಳು ಸಹ ಈ ವಂಚನೆಗಳನ್ನು ಕಾರ್ಯಗತಗೊಳಿಸುತ್ತಿವೆ. ಅದನ್ನು ಮರೆಮಾಚುವಂತೆ ಶಾಖೆಗಳನ್ನು ಒತ್ತಾಯಿಸುತ್ತವೆ ಎನ್ನುವುದನ್ನು ಹೊಸ ಸಾಕ್ಷ್ಯಾಧಾರಗಳು ಬಹಿರಂಗಗೊಳಿಸಿವೆ ಎಂದು artical-14 ವರದಿಯಲ್ಲಿ ತಿಳಿಸಿದೆ.

ಬಡವರಿಗೆ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಡಿಮೆ ವೆಚ್ಚದ ಕಲ್ಯಾಣ ಯೋಜನೆಗಳನ್ನು ಮೇ 2015 ರಲ್ಲಿ ಪ್ರಾರಂಭಿಸಿದರು. ಸರ್ಕಾರದ ಒತ್ತಡದ ಕಾರಣ ಮೊದಲಿನಿಂದಲೂ, ಬ್ಯಾಂಕ್‌ಗಳು ಈ ಯೋಜನೆಗಳಿಗೆ ಗ್ರಾಹಕರನ್ನು ಮೋಸದ ಮಾರ್ಗಗಳ ಮೂಲಕ ಸೇರಿಸುತ್ತಿರುವ ಆರೋಪ ಕೇಳಿ ಬಂದಿದೆ.

ಈ ವರದಿಯಲ್ಲಿ artical-14 ಉಲ್ಲೇಖಿಸಿದ ಬಿಹಾರದ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ಮಾತ್ರ ವಿವರಿಸಿದ್ದೇವೆ. artical-14 ವರದಿಯಲ್ಲಿ ವಂಚನೆಗೊಳಗಾದ ಇನ್ನಷ್ಟು ಗ್ರಾಹಕ ಸಮಸ್ಯೆಗಳನ್ನು ವಿಸ್ಕೃತವಾಗಿ ಬಿಚ್ಚಿಡಲಾಗಿದೆ.

ಬ್ಯಾಂಕ್‌ಗಳು ಮಾಹಿತಿ ನೀಡದೆ ವಿಮಾ ಯೋಜನೆಗಳಿಗೆ ಗ್ರಾಹಕರನ್ನು ಸೇರಿಸಿ, ಅವರ ಖಾತೆಗಳಿಂದ ಹಣ ಕಡಿತಗೊಳಿಸಿರುವ ಕುರಿತು ಅನೇಕ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. artical-14 ಪ್ರಕಾರ, ಬ್ಯಾಂಕ್‌ ಹೇಳದೆ ಕೇಳದೆ ಯುವ ಜನರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಖಾತೆಗಳಿಂದ ಹಣ ಕಡಿತ ಮಾಡುತ್ತಿದೆ. ಕೆಲವರಿಗೆ ಕಡಿತವಾಗುವ ಹಣ ಬಹಳ ಕಡಿಮೆ ಇದೆಯಲ್ಲವೇ ಎಂದನಿಸಿದರೂ, ಬಡ-ಮಧ್ಯಮ ವರ್ಗದವರಿಗೆ ಅದೊಂದು ದೊಡ್ಡ ಮೊತ್ತವಾಗಿದೆ. ಒಂದೊಂದು ರೂಪಾಯಿಯೂ ಅವರಿಗೆ ಅಮೂಲ್ಯವಾದ್ದದ್ದು. ಹಣ ಕಡಿತದ ಹೊರತಾಗಿಯೂ ಬ್ಯಾಂಕ್‌ಗಳು ಮಾಹಿತಿ ನೀಡದೆ ವಿಮಾ ಯೋಜನೆಗೆ ನೋಂದಣಿ ಮಾಡುವುದು ದೊಡ್ಡ ವಂಚನೆ.

ಕೃಪೆ : artical-14.com

ಇದನ್ನೂ ಓದಿ : ಬ್ಲೂಮ್‌ಬರ್ಗ್ ವರದಿಗೆ ತಡೆ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೆಟ್ಟು ಎಂದ ಸುಪ್ರೀಂ ಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...