Homeಮುಖಪುಟಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

"ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು 'ಆ' ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ"

- Advertisement -
- Advertisement -

“ಕನ್ನಡ ಭಾಷೆಯ ಬಗ್ಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ ಎಂದರೆ, ಕನ್ನಡವನ್ನು ಬಳಸಲು ನನಗೆ ನೀವು ಅವಕಾಶವನ್ನೆ ಕೊಡಲಿಲ್ಲ. ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿದಿರಿ. ಕನ್ನಡ ಬಾವುಟವನ್ನು ಅರಿಶಿನ ಕುಂಕುಮ ಎಂದು ಮಂದಾಸನದ ಮೇಲೆ ಕೂರಿಸಿಬಿಟ್ಟರಿ. ಆಗ ನಾನು ಎಲ್ಲಿ ನಿಲ್ಲಬೇಕು, ಎಲ್ಲಿ ನೋಡಬೇಕು? ನನ್ನ ಹೊರಗಟ್ಟುವಿಕೆ ಯಾವತ್ತೊ ಆರಂಭವಾಗಿದೆ, ಇಂದು ಪೂರ್ಣಗೊಳ್ಳುತ್ತಿದೆ ಅಷ್ಟೆ” ಎಂದು ಲೇಖಕಿ ಬಾನು ಮುಷ್ತಾಕ್‌ರವರು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನ ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು ‘ಆ’ ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ” ಎಂದು 1946ರಲ್ಲಿ ಉರ್ದು ಕವಿ ಬರೆದಿದ್ದಾರೆ. ಈ ಪರಿಸ್ಥಿತಿ ಇವತ್ತಿಗೂ ಕೂಡ ಪುನರಾವರ್ತನೆಯಾಗುತ್ತಿದೆ ಎಂದರೆ ನಾವು ಎಂತಹ ಭಯಾನಕ ಸ್ಥಿತಿಯಲ್ಲಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂದು ದ್ವೇಷ ಭಾಷಣಗಳ, ಸುಳ್ಳು ಸುದ್ದಿಗಳ ಪ್ರಾಸನವಾಗುತ್ತಿದೆ. ನಮ್ಮ ನಂದಿನಿ ಕೈತಪ್ಪಿ ಹೋಗುತ್ತಿದೆ. ನಾವು ಕರ್ನಾಟಕದವರು ಬಹಳ ದೇಶಭಕ್ತರು, ಉದಾರಿಗಳೆಂದುಕೊಂಡು ಸುಮ್ಮನಿದ್ದೇವೆ. ನಂದಿನಿ ನಮ್ಮ ಸಾಹಿತ್ಯ, ಅನ್ನ, ಯುವಜನರ ನೆಮ್ಮದಿ ನೀರು, ವಸತಿ ಎಲ್ಲವೂ ಆಗಿದೆ. ಆದರೆ ಅದು ಕೈ ತಪ್ಪುತ್ತಿದ್ದರು ಸಹ ಏಕೆ ನಾವು ಮಾತನಾಡುತ್ತಿಲ್ಲ ಎಂದು ಬಾನು ಮುಷ್ತಾಕ್ ಪ್ರಶ್ನಿಸಿದರು.

ಮಹಿಳೆಯರನ್ನು ಹೇಗೆ ಹೊಗಳಿ, ಮಂದಾಸನದಲ್ಲಿ ಕೂರಿಸಿ ತುಳಿಯುತ್ತಿದ್ದಾರೋ, ನೀವುಗಳು ಹಾಗೆಯೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆ, ಪರಿಷೆ ಮಾಡಿ ನನ್ನನ್ನು ಅಂದರೆ ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ? ಏಕೆ ಹೀಗೆ ಮಾಡುತ್ತಿದ್ದೀರಿ ಎಂಬುದಕ್ಕೆ ನನಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಒಂದೂ ಪುಸ್ತಕ ಪ್ರಕಟಿಸದ ಕನಿಷ್ಟ 600ಕ್ಕಿಂತ ಹೆಚ್ಚಿನ ಮುಸ್ಲಿಂ ಬರಹಗಾರರಿದ್ದಾರೆ. ಆದರೆ ಅವರನ್ನೆಲ್ಲ ನಾವು ಮರೆತುಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳಿಗೆ ಕನ್ನಡದ ಹೆಬ್ಬಾಗಿಲನ್ನು ತೆಗೆದರು. ನಮ್ಮ ಅಭಿವ್ಯಕ್ತಿಯ ಅಡೆತಡೆಗಳನ್ನು ಬಂಡಾಯ ಸಂಘಟನೆ ನಿವಾರಣೆ ಮಾಡಿತು. ಇಂದು ಜನ ಸಾಹಿತ್ಯ ಸಮ್ಮೇಳನ ಆ ಕೆಲಸಕ್ಕೆ ಮುಂದಾಗಿದೆ. ಈ ಪ್ರತಿರೋಧ ಸಮಾವೇಶ ಒಂದು ಅದ್ಭುತವಾದ ಅವಕಾಶ ಕಲ್ಪಿಸಿಕೊಟ್ಟಿದೆ. ಇದು ಸಂತೋಷದ ವಿಷಯ ಎಂದರು.

ಅತ್ಯಂತ ಸಂವೇದನಶೀಲ ಕಲೆ ಸೃಷ್ಟಿಯಾಗಲು ತಳಸಮುದಾಯಗಳ ಚಲನಶೀಲತೆ ಮತ್ತು ಔದಾರ್ಯವೇ ಮುಖ್ಯ ಕಾರಣ. ಇಂದಿಗೂ ಆ ಸಮುದಾಯಗಳ ಕಲೆ ಮತ್ತು ಸಾಹಿತ್ಯದ ಮೌಲ್ಯ ಮಾಪನ ಮಾಡುವುದು ಬಿಟ್ಟು ಟಿಪ್ಪುವಿನಲ್ಲಿ, ಎಂ ಎಫ್ ಹುಸೇನ್‌ನಲ್ಲಿ ಮುಸ್ಲಿಮನನ್ನು ಹುಡುಕುವ, ಬಾಬಾ ಸಾಹೇಬರಲ್ಲಿ ದಲಿತನನ್ನು ಕಾಣುವ ನಿಮ್ಮ ದೃಷ್ಟಿಯನ್ನು ನೀವೆ ಸರಿಪಡಿಸಿಕೊಳ್ಳಿ ಎಂದು ಒತ್ತಾಯಿಸಿದರು.

ಕೆಲವರು ನಾನು ಅವರ ಮರಿ ಮಗ, ಮರಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಮರಿ ಮಗನೊ, ನರಿ ಮಗನೊ ಏನಾದರೂ ಆಗಿ. ಆದರೆ ನೀವು ಯಾರ ಮಗ ಎಂದುಕೊಳ್ಳುತ್ತೀರಿ ಆ ಮಹಾನ್ ಪುರುಷನ ಗೌರವಕ್ಕೆ ಚ್ಯುತಿ ತರದಂತೆ ನಡೆದುಕೊಳ್ಳಿ. ಅವರ ಜೀವಪರ-ಜನಪರ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಿ. ಏಕೆಂದರೆ ಅವರ ಮೆರಗು ಇಳಿದುಹೋಗುತ್ತದೆ, ಉಳಿಯುವುದಿಲ್ಲ ಎಂದು ಬಾನು ಮುಷ್ತಾಕ್ ಹೇಳಿದರು.

ಸರ್ವಾಧಿಕಾರಿಗಳು ಉಪಯುಕ್ತವಾದ ಶತ್ರು ಅಥವಾ ಅನ್ಯನನ್ನು ಆಯ್ಕೆ ಮಾಡಿಕೊಂಡು ಜನರ ರೋಷವನ್ನು ಘರ್ಷಣೆ ಅಥವಾ ಯುದ್ದದ ಮೂಲಕ ಆ ಕಡೆ ತಿರುಗಿಸುತ್ತಾರೆ. ಇಂದು ಅವರು ಮುಸ್ಲಿಮರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರನ್ನು ದೇಶದ್ರೋಹಿಗಳಾಗಿ ಬಿಂಬಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಕಲಾವಿದರು ಕೆಲಸ ಮಾಡಬೇಕಾದ ಕಾಲ ಇದು. ಇಲ್ಲಿ ನಿರಾಶೆಗೆ ಜಾಗವಿಲ್ಲ. ನಾವು ಮಾತಾಡುತ್ತೇವೆ, ಬರೆಯುತ್ತೇವೆ, ನಾವು ಭಾಷೆಯನ್ನು ಬಳಸುತ್ತೇವೆ ಹೀಗೆ ಆದಾಗ ಮಾತ್ರ ನಾಗರೀಕತೆಗಳು ವಾಸಿಯಾಗುತ್ತವೆ ಎಂದರು.

ಇದನ್ನೂ ಓದಿ; ರಾಷ್ಟ್ರಗಳನ್ನು ನಿರ್ಮಿಸುವವರು ಕಲಾವಿದರು ಮತ್ತು ಕವಿಗಳೆ ಹೊರತು ವ್ಯಾಪಾರಿಗಳು, ರಾಜಕಾರಣಿಗಳಲ್ಲ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರತಿ ಕ್ಷಣ ಈ ಭಾರತ. ಪ್ರತಿ ವರ್ಷದ ಹಾಗೆ ಎಲ್ಲಾ ತರಹದಲ್ಲೂ ಹಿಂದೆ ಉರುಳುತ್ಹಿದೆ.
    ನಮ್ಮೆಲ್ಲರ ಕರ್ತವ್ಯ ನಿಷ್ಠೆಗೆ ಯಾವ ಬೆಲೆಯೇ ಇಲ್ಲಾ
    ನಮ್ಮ ದ್ವನಿ ಅರನುರೋಧನೆ ಯಾಗಿದೆ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...