Homeಕರ್ನಾಟಕಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

ಕಾಟಾಚಾರಕ್ಕೆ ಯಾವುದೊ ಕಾರ್ಯಕ್ರಮಗಳನ್ನು ಮಾಡಿದರೆ ಬಹಿಷ್ಕರಿಸಬೇಕು: ಡಾ. ಪುರುಷೋತ್ತಮ ಬಿಳಿಮಲೆ

1992 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡು ಅದು ಹೆಚ್ಚಾಗುತ್ತಾ ಇದ್ದು, ಈಗ ಹುಣ್ಣು ಆಗಿ, ಕೀವು ಆಗುತ್ತಿದೆ ಎಂದು ಅವರು ಹೇಳಿದರು

- Advertisement -
- Advertisement -

ಭಾಷೆಗಳು ಸಾಯುತ್ತಿದ್ದಾಗ ಭಾಷೆಗೆ ಸಂಬಂಧ ಪಟ್ಟಂತಹ ಸಂಘ-ಸಂಸ್ಥೆಗಳು ಏನು ಮಾಡುತ್ತಿವೆ ಎಂಬುವುದು ಬಹಳ ಮುಖ್ಯವಾದ ಪ್ರಶ್ನೆಯಾಗಿದ್ದು, ಕಾಟಾಚಾರಕ್ಕೆ ಯಾವುದೋ ಕಾರ್ಯಕ್ರಮಗಳನ್ನು ಮಾಡಿದರೆ ಅದನ್ನು ಬಹಿಷ್ಕರಿಸುವುದೇ ಸರಿ ಎಂದು ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಜೆಎನ್‌ಯು ನಿವೃತ್ತ ಪ್ರಾದ್ಯಾಪಕ, ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ಭಾನುವಾರ ಬೆಂಗಳೂರಿನ ಕೆ.ಆರ್. ಸರ್ಕಲ್ ಬಳಿಯ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ನಡೆದ ಜನಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

“ಅಲ್ಲಿ ಹೋಗಿ ಏನು ಮಾಡುವುದಿದೆ? ಅಲ್ಲಿಗೆ ಹೋಗಬೇಕಾಗಿಲ್ಲ. ಹಾಗಾಗಿ ಜನಸಾಹಿತ್ಯ ಸಮ್ಮೇಳನದಂತಹ ಸಮಾವೇಶಗಳನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಲ್ಲಿ ಏರ್ಪಡಿಸುವುದರ ಜೊತೆಗೆ ಕರ್ನಾಟಕಕ್ಕೆ ಅತ್ಯಗತ್ಯವಾದ ಭಾಷಾ ನೀತಿಯನ್ನು ರೂಪಿಸುವ ಹಾಗೆ ಸರ್ಕಾರ, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಮೇಲೆ ನಾವು ಒತ್ತಡ ಹಾಕಬೇಕಾಗಿದೆ” ಎಂದು ಅವರು ಹೇಳಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕರ್ನಾಟಕ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಚರ್ಚೆ ಮಾಡಲು ಸೂಕ್ತ ವೇದಿಕೆ ಇಲ್ಲ. ವಿಶ್ವವಿದ್ಯಾಲಯಗಳು, ಸರ್ಕಾರದಿಂದ ಅನುದಾನ ಪಡೆಯುವ ಇತರ ಅಕಾಡೆಮಿಗಳು ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಪಟ್ಟಂತೆ ಏನಾಗುತ್ತಿದೆ ಎಂಬುವುದನ್ನು ಕನ್ನಡ ಸಾಹಿತ್ಯ ಸಮ್ಮೇಳನಗಳು ಹೇಳಬೇಕಾಗಿತ್ತು. ಆದರೆ ಇಂದಿನ “ಹಾವೇರಿ ಸಾಹಿತ್ಯ ಸಮ್ಮೇಳನ ಕಾಟಾಚಾರದ ಸಮ್ಮೇಳನ”ಳಾಗಿವೆ. ಅವರು ಕರ್ನಾಟದ ಭವಿಷ್ಯವನ್ನು ಕಟ್ಟುವುದಕ್ಕೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ಮಾರ್ಗದರ್ಶನ ಮಾಡಬಲ್ಲಂತಹ ಯಾವ ವಿಚಾರಗಳನ್ನು ಕೂಡಾ ಒಳಗೊಂಡಿಲ್ಲ ಎಂದು ಪ್ರೊ. ಬಿಳಿಮಲೆ ಹೇಳಿದರು.

2011 ರ ಜನಗಣತಿಯ ಪ್ರಕಾರ ಭಾರತದ ದೇಶದಲ್ಲಿ ತಾಯಿನುಡಿಗಳ ಸಂಖ್ಯೆ 19,659. ಇವುಗಳಲ್ಲಿ ನಮ್ಮ ದೇಶದ ಸಂವಿಧಾನ ಅಂಗೀಕರಿಸಿದ ಭಾಷೆಗಳು 22 ಆಗಿದೆ. ಈ 22 ಭಾಷೆಗಳಲ್ಲಿ ಉತ್ತರ ಭಾರತದ ಭಾಷೆಗಳು 18 ದಕ್ಷಿಣ ಭಾರತದ ಭಾಷೆಗಳು ಕೇವಲ 4. ಆದರೆ ಕರ್ನಾಟಕ ಒಂದರಲ್ಲೇ 72 ಭಾಷೆಗಳಿವೆ. ಇವುಗಳಲ್ಲಿ ಅನೇಕ ಭಾಷೆಗಳು ಅವಸಾನದತ್ತ ಚಲಿಸುತ್ತಾ ಇವೆ. 1871 ರಲ್ಲೇ 58 ಸಾವಿರದಷ್ಟು ಕೊರಗ ಭಾಷೆ ಮಾತನಾಡುತ್ತಿದ್ದ ಜನರ ಸಂಖ್ಯೆ 3 ಸಾವಿರಕ್ಕೆ ತಲುಪಿದೆ. ಅದಲ್ಲದೆ ಕೊರಗ ಸಮುದಾಯದ ಸಂಖ್ಯೆ ಕೂಡಾ 11 ಸಾವಿರಕ್ಕೆ ತಲುಪಿದೆ ಎಂದು ಅವರು ವಿಷಾದಿಸಿದರು.

ಕರ್ನಾಟಕದ ಜೀವ ಚೈತನ್ಯವಾಗಿದ್ದ ಭಾಷೆ ನಮ್ಮ ಮುಂದೆಯೆ ಪತನಮುಖಿಯಾಗುತ್ತಿದ್ದಾಗ ಪರಿಷತ್ತು ಹಾಗೂ ಅಕಾಡೆಮಿಗಳು ಇದರ ಬಗ್ಗ ಯೋಚನೆ ಮಾಡಿ ವಿದ್ವಾಂಸರನ್ನು ಕರೆಸಿ, ಚರ್ಚೆ ಮಾಡಿ ಈ ಭಾಷೆಯನ್ನು ಉಳಿಸುವ ಬಗೆ ಹೇಗೆ ಎಂಬುದಕ್ಕೆ ಸೂಕ್ತವಾದ ಯೋಜನೆ ತಯಾರಿಸಿ ಸರ್ಕಾರಕ್ಕೆ ಕೊಟ್ಟು ಸರ್ಕಾರದಿಂದ ಅವುಗಳನ್ನು ಇಂಪ್ಲಿಮೆಂಟ್ ಆಗುವ ಹಾಗೆ ಮಾಡಬೇಕು. ಇವು ಸ್ವಾಯತ್ತ ಸಂಸ್ಥೆಗಳ ಕೆಲಸ. ಆದರೆ ಅಲ್ಲಿರುವವರು ಅವುಗಳನ್ನು ಮಾಡದೆ, ತಮಗೆ ಮಂತ್ರಿ ಪದವಿಯ ಸಮಾನವಾದ ಸ್ಥಾನಮಾನ ಬೇಕು ಎಂದು ಅದನ್ನು ಪತ್ರಿಕೆ ಹಾಗೂ ಲೆಟರ್‌ಹೆಡ್‌ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾಹಿತಿಗಳು ಹಾಗೂ ಕಲಾವಿದರು ನಾಚಿಕೊಳ್ಳಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“2011 ಜನಗಣತಿಯ ಪ್ರಕಾರ ತುಳು, ಕೊಡವ, ಬಂಜಾರ ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೇಳುತ್ತಿವೆ. ಒಟ್ಟು 99 ಭಾಷೆಗಳು ಇವತ್ತು ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂದು ಹೋರಾಟ ಮಾಡುತ್ತಿವೆ. ಉರ್ದು ವಿಚಾರ ಹೇಳಬೇಕಾದರೆ, ಅದು ಕರ್ನಾಟಕದ ದಖ್ಖನಿ ಭಾಷೆ. ಈಗ ಅದು ವಿಶ್ವದ ಭಾಷೆಯಾಗಿದೆ. ನಾವು ಹೆಮ್ಮೆ ಪಟ್ಟುಕೊಳ್ಳಬೇಕಾದ ಭಾಷೆ. ನಮ್ಮದಲ್ಲದ ಸಂಸ್ಕೃತ ಭಾಷೆ ಆಗುತ್ತದೆ, ಆದರೆ ನಮ್ಮದೆ ಭಾಷೆಯಾದ ಉರ್ದು ಯಾಕೆ ಆಗಬಾರದು? ಇವೆಲ್ಲವೂ ನಮ್ಮ ಸಣ್ಣತನ ಎಂದು ಅವರು ಹೇಳಿದರು.

ನಾನೇನು ಸಂಸ್ಕೃತದ ವಿರೋಧಿ ಏನಲ್ಲ. ಯಾಕೆಂದರೆ ಪಂಪ, ಪೊನ್ನ, ಕುಮಾರವ್ಯಾಸನನ್ನು ಓದಿದವರು ಹೇಗೆ ಸಂಸ್ಕೃತದ ಜೊತೆಗೆ ಸಂವಾದ ಬೆಳೆಸಿಕೊಂಡಿದ್ದೇವೆ ಎಂಬವುದು ನನಗೆ ಗೊತ್ತಿದೆ ಎಂದು ಪ್ರೊ. ಬಿಳಿಮಲೆ ತಿಳಿಸಿದರು.

ರಾಜ್ಯದಲ್ಲಿರುವ 72 ಭಾಷೆಗಳಲ್ಲಿ ಒಂದು ಭಾಷೆ ಸತ್ತರು ಕೂಡಾ ಕರ್ನಾಟಕ ಅಷ್ಟರ ಮಟ್ಟಿಗೆ ಬಡವಾಗುತ್ತದೆ. ಕರ್ನಾಟಕ ಎಂಬುವುದು ಅನೇಕ ಬಣ್ಣಗಳು ಒಂದು ರಂಗೋಲಿ. ಅದಕ್ಕೆ ಹೆಚ್ಚು ಹೆಚ್ಚು ಬಣ್ಣ ಹಾಕಿದಷ್ಟು ರಂಗೋಲಿ ಚಂದವಾಗಿ ಕಾಣುತ್ತದೆ ಎಂದು ಅವರು ತಿಳಿಸಿದರು.

90 ದಶಕದಲ್ಲಿ ಪ್ರಾರಂಭವಾದ ಜಾಗತೀಕರಣದ ನಂತರ ನಮ್ಮ ಬದುಕಿನಲ್ಲಿ ಅಮೂಲಗ್ರ ಬದಲಾವಣೆ ನಡೆಯಿತು. ಇದರ ನಂತರ 92 ರಲ್ಲಿ ಬಾಬರಿ ಮಸೀದಿ ಬಿದ್ದ ಮೇಲೆ ಭಾರತ ಆಳವಾಗಿ ಗಾಯಗೊಂಡಿತು ಮತ್ತು ಇದು ಹೆಚ್ಚಾಗುತ್ತಾ ಇದೆ, ಅಲ್ಲದೆ ಅದೀಗ ಹುಣ್ಣು ಆಗುತ್ತಿದೆ, ಕೀವು ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾಷೆ ಹಾಗೂ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿರುವ ಒಬ್ಬ ಲೇಖಕನ ಜವಾಬ್ದಾರಿ ಏನು ಎಂಬ ಪ್ರಶ್ನೆಯನ್ನು ಕರ್ನಾಟಕದ ಪ್ರತಿಯೊಬ್ಬ ಲೇಕನನಿಗೂ ಕೇಳಬೇಕು ಎಂದು ಅವರು ಕರೆ ನೀಡಿದರು.

ಗೀತಾ ಹರಿಹರ ಅವರು ಎಂಎಂ ಕಲಬುರ್ಗಿ ಅವರ ಸಾವನ್ನು ಇಟ್ಟುಕೊಂಡು ಒಂದು ಕಾದಂಬರಿ ಬರೆದಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಕನ್ನಡದಲ್ಲಿ ಯಾವ ಕತೆ ಅಥವಾ ಕಾದಂಬರಿ ಬಂದಿದೆ? ಸೃಜನಶೀಲ ಕೃತಿಗಳಲ್ಲಿ ಲೇಖಕರ ಜವಾಬ್ದಾರಿಯನ್ನು ಪುನರ್‌ವಿವೇಚಿಸಿ, ನಮ್ಮ ಚಿಂತನಾ ಕ್ರಮಗಳನ್ನು ಜನರ ಕಡೆಗೆ ತೆಗೆದುಕೊಂಡು ಹೋಗಬೇಕಾಗಿದೆ. ಈ ಮೂಲಕ ನಮ್ಮ ಬರಹಗಳಿಗೆ ಚೈತ್ಯನ್ಯವನ್ನು ತಂದುಕೊಳ್ಳಬೇಕಾಗಿದೆ. ಇಲ್ಲವೆಂದರೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.

ಈಗ ಸಂಸ್ಕೃತಿಯ ಬಗ್ಗೆ ಅಪವ್ಯಾಖ್ಯಾನಗಳು ಹೆಚ್ಚಾದ್ದು, ಅವುಗಳೇ ನಂಬಿಕೆಯಾಗಿ, ನಿಜವಾದ ವ್ಯಾಖ್ಯಾನಗಳು ಹಿನ್ನಲೆಗೆ ಸರಿದಿವೆ. ಕರ್ನಾಟಕದ ‘ಕರ್ನಾಟ’ ಎಂಬುವುದರ ಹಳೆಯ ಶಬ್ಧ, ಆ ಕಾಲಗಟ್ಟದಲ್ಲಿ ಗುಲ್ಬರ್ಗದ ಸನ್ನತಿಯಿಂದ, ಕೊಪ್ಪಳದ ಗವೀಮಠದಿಂದ, ಮಸ್ಕಿಯಿಂದ, ಚಿತ್ರದುರ್ಗದಿಂದ, ಮಂಗಳೂರಿನ ಕದ್ರಿಯಿಂದ ಈ ಸಂಸ್ಕೃತಿಯ ಮೂಲಭೂತ ಗುಣಗಳನ್ನು ಕಟ್ಟಿದವರು ಬೌದ್ಧರಾಗಿದ್ದಾರೆ ಎಂದು ಅವರು ಹೇಳಿದರು.

ನಮ್ಮ ಜನಪದ ಕಾವ್ಯದಲ್ಲಿ ಕಾಣುವ ಜ್ಯೋತ್ಯಪ್ಪ, ಬೆಳಕಪ್ಪ, ಅದು ಬೌದ್ಧ ಧರ್ಮದಿಂದ ಬಂದಿದೆ. ಆಮೇಲೆ ಕ್ರಿ.ಶ. 3 ನೇ ಶತಮಾನದಲ್ಲಿ ಬಿಹಾರದಿಂದ ವಲಸೆ ಬಂದಂತಹ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರಬಾಹು ಭಟಾರರು ನೆಲೆ ನಿಂತಿದ್ದು ಕರ್ನಾಟಕದಲ್ಲಿ. ಮುಂದೆ ಜಿನ ಧರ್ಮ ಕರ್ನಾಟಕದಲ್ಲಿ ಬೆಳೆಯಿತು. ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ, ರತ್ನಾಕರವರ್ಣಿ ಸೇರಿದಂತೆ ಕನ್ನಡ ಸಾಹಿತ್ಯವೆಂದರೆ ಅದು ಜೈನ ಸಾಹಿತ್ಯ ಎಂಬಂತೆ ಒಳಗೊಂಡಿತ್ತು. ಆಮೇಲೆ ಧಾರ್ಮಿಕವಾಗಿ ತಮಿಳುನಾಡಿನಿಂದ ಚೋಳರು ಓಡಿಸಿದ ರಾಮನುಜಾಚಾರ್ಯರಿಗೆ ನಾವು ಮೇಲುಕೋಟೆಯಲ್ಲಿ ನೆಲೆಕೊಟ್ಟೆವು ಎಂದು ಅವರು ತಿಳಿಸಿದರು.

ಉತ್ತರದ ಬಿಹಾರದಿಂದ ಬಂದ ಸುರೇಶಾಚಾರ್ಯರು ಶೃಂಗೇರಿಯಲ್ಲಿ ನೆಲೆನಿಂತರು. ದ್ವೈತವನ್ನು ನಾವು ಒಳಗೊಂಡಿದ್ದೇವೆ. ಕ್ರಿಶ್ಚಿಯನ್ನರು ಆ ಕಾಲದಲ್ಲಿ ಶಾಲೆಗಳನ್ನು ಪ್ರಾರಂಭ ಮಾಡಿದರು. ಆ ಕಾಲದಲ್ಲಿ ಅವರು ಶಾಲೆಗಳನ್ನು ಆರಂಭ ಮಾಡದೆ ಇದ್ದರೆ ನಾನು  ಈಗ ಈ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಮುನ್ನೂರು ವರ್ಷಗಳ ಬಿಜಾಪುರದ ಸುಲ್ತಾನರು ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ವಚನ ಚಳವಳಿ ಬಂತು. ಇವೆಲ್ಲವೂ ನಮ್ಮ ಸಂಸ್ಕೃತಿಯಾಗಿದೆ ಎಂದು ಅವರು ಹೇಳಿದರು.

ಭಾರತದ ಬೇರೆ ರಾಜ್ಯಗಳಿಗಿಂತ ಕರ್ನಾಟಕ 72 ಭಾಷೆಗಳನ್ನು ಒಳಗೊಂಡಿದೆ. ಇದು ನಮ್ಮ ರಾಜ್ಯ ಒಳಗೊಳ್ಳುವ ಗುಣವನ್ನು ಹೇಳುತ್ತದೆ. ಈ ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ ನಮ್ಮ ಪರಂಪರೆಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಆಗುತ್ತದೆ. ಯಾರು ಪರಂಪರೆಯ ಬಗ್ಗೆ ಮಾತನಾಡುತ್ತಿದ್ದಾರೋ ಅವರು ಪರಂಪರೆಯ ದುಷ್ಕೃತ್ಯಗಳನ್ನು ಹೇಳುತ್ತಿದ್ದರೆ, ನಾವು ಪರಂಪರೆಯಲ್ಲಿರವ ಒಳ್ಳೆಯ ಗುಣಗಳನ್ನು ಹೇಳಬೇಕು. ಅದಕ್ಕಾಗಿ ನಾವು ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಕುವೆಂಪು ಅವರು ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಒಳಗೊಳ್ಳುವ ಪರಂಪರೆಯನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ನಿರಂತರವಾಗಿ ಆಗುತ್ತಿರುವ ಅನ್ಯಾಯವನ್ನು ಪ್ರತಿರೋಧಿಸುತ್ತಾ, ಜಾಗತಿಕವಾಗಿ ಭಾಷೆ ಎದುರಿಸುವ ಸಮಸ್ಯೆಗಳನ್ನು ಅರಿತು ಮುನ್ನಡೆಯಬೇಕಿದೆ ಎಂದು ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯುತ್ ಖಾಸಗೀಕರಣ ವಿರುದ್ದದ ಹೋರಾಟಕ್ಕೆ ಗೆಲುವು: ಅರ್ಜಿ ಹಿಂಪಡೆದ ಟಾಟಾ ಪವರ್ ಕಂಪನಿ

ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು...

SIR: ಮತದಾರರ ಮನೆಗೆ ಹೋಗದೆ ಕಚೇರಿಯಲ್ಲೇ ಕುಳಿತು ಫಾರ್ಮ್ ವಿತರಣೆ ಆರೋಪ, BLO ಗಳಿಗೆ ಎಚ್ಚರಿಕೆ ನೀಡಿದ ಆಯೋಗ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ರಾಜ್ಯ ಚುನಾವಣಾ ಆಯೋಗವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮತದಾರರ ಮನೆ-ಮನೆಗೆ ಭೇಟಿ...

ಅಳುವ ಕಂದಮ್ಮಗಳನ್ನು ವಾಷಿಂಗ್ ಮೆಷಿನ್‌ನಲ್ಲಿ ಕೂಡಿಹಾಕ್ತಿದ್ದ ಇಬ್ಬರು ಕೇರ್‌ಟೇಕರ್ ಅರೆಸ್ಟ್

ಸಿಲಿಕಾನ್ ಸಿಟಿಯ ಬ್ರೂಕ್‌ಫೀಲ್ಡ್‌ನಲ್ಲಿರುವ ಪ್ರಮುಖ ಐಟಿ ಸಂಸ್ಥೆ 'ಕ್ಯಾಪ್‌ಜೆಮಿನಿ' ಕ್ಯಾಂಪಸ್‌ನ ಡೇ-ಕೇರ್ ಸೆಂಟರ್‌ನಲ್ಲಿ ಪುಟ್ಟ ಕಂದಮ್ಮಗಳನ್ನು ಬಾತ್‌ರೂಮ್ ಹಾಗೂ ವಾಷಿಂಗ್ ಮೆಷಿನ್‌ಗಳಲ್ಲಿ ಕೂಡಿಹಾಕಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರಕರಣದ...

“ನಾಗರಿಕರು ಸರ್ಕಾರದ ಗುಲಾಮರಲ್ಲ”: ಸಿಎಎ, ಜ್ಞಾನವಾಪಿ ವಿರೋಧಿ ಪ್ರತಿಭಟನೆ ಸಂಬಂಧ ಎಸ್‌ಡಿಪಿಐ ನಾಯಕನ ಗಡಿಪಾರು ಪ್ರಶ್ನಿಸಿದ ಬಾಂಬೆ ಹೈಕೋರ್ಟ್

“ದೇಶದ ನಾಗರಿಕರು ಸರ್ಕಾರದ ಗುಲಾಮರಲ್ಲ. ಕೇವಲ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ಅಥವಾ ಆಡಳಿತ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗುವುದು ಒಬ್ಬ ನಾಗರಿಕನನ್ನು ಗಡಿಪಾರು ಮಾಡಲು ಕಾನೂನಾತ್ಮಕ ಕಾರಣವಾಗಲಾರದು,” ಎಂದು ಬಾಂಬೆ ಹೈಕೋರ್ಟ್‌ ಐತಿಹಾಸಿಕ...

ಗೌರಿಯಕ್ಕ, ಸುರೇಶ್ ಭಟ್ರ ಬಗ್ಗೆ ತಿಳಿಯಲು ಎಕ್ಸ್ ಆರೆಸ್ಸೆಸ್‌ನವರ ಪ್ರಮಾಣ ಪತ್ರ ಬೇಕಿಲ್ಲ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯಲ್ಲಿ ನಮ್ಮ ಒಡನಾಡಿಯಾಗಿದ್ದ ಎ‌ಐಸಿಸಿ ಕಾರ್ಯದರ್ಶಿಯೂ ಆಗಿರುವ ಪಿ.ವಿ.ಮೋಹನ್‌ರಿಗೆ ವಿಧಾನ ಪರಿಷತ್ ಸದಸ್ಯತ್ವ ಸಿಕ್ಕಿದ್ದು ಸಹಜವಾಗಿಯೇ ನಮಗೆ ಖುಷಿಯಾಗಿತ್ತು. ಈ ನಿಟ್ಟಿನಲ್ಲಿ ಮಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲಲ್ಲಿ ಕೋಮು ಸೌಹಾರ್ದ...

ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ‘ಆಪರೇಷನ್ RISE’ ಮತ್ತು ‘ಬೇಡ BRO’ ಅಭಿಯಾನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಕರೆ

ಬೆಂಗಳೂರು: ಮಾದಕ ದ್ರವ್ಯ ಮುಕ್ತ ಕರ್ನಾಟಕವನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮಾದಕ ವ್ಯಸನದ ವಿರುದ್ಧ ಯುವಜನತೆ ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ...

ಬೆಂಗಳೂರಿನ 3 ಪ್ರಮುಖ ಮಾರ್ಗಗಳಲ್ಲಿ ಟೋಲ್ ದರ ಭಾರಿ ಹೆಚ್ಚಳ: ಇಂದಿನಿಂದಲೇ ಜಾರಿ 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಜುಲೈ ಒಂದರಿಂದಲೇ ಅನ್ವಯವಾಗುವಂತೆ ಬೆಲೆ ಏರಿಕೆಯ ಭಾರಿ ಬಿಸಿ ತಟ್ಟಿದೆ. ಬೆಂಗಳೂರಿನ ಪ್ರಮುಖ ಸಂಪರ್ಕ ರಸ್ತೆಗಳಾದ ನೈಸ್ ರಸ್ತೆ (NICE Road), ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್...

ಕೊಪ್ಪಳದ ಬೋಚನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ: ದೂರು-ಪ್ರತಿದೂರು; ಹೋರಾಟಕ್ಕೆ ಸಂಘಟನೆಗಳ ನಿರ್ಧಾರ

ಮೊಹರಂ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದಲಿತರ ಮನೆಗಳಿಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಅಳವಂಡಿ ಬಳಿಯ ಬೋಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜೂನ್ 25ರಂದು ಗ್ರಾಮದಲ್ಲಿ ಮೊಹರಂ ಮೆರವಣಿಗೆ...

ಎನ್ಯೂಮರೇಷನ್ ಫಾರಂ ಭರ್ತಿ ಮಾಡುವ ಮೂಲಕ SIR ಗೆ ಚಾಲನೆ ನೀಡಿದ ಸಿಎಂ ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು (ಜೂನ್ 30) ಮಂಗಳವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ದಾಖಲಾತಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಅಭಿಯಾನಕ್ಕೆ ಅಧಿಕೃತವಾಗಿ...

‘ಆಪರೇಷನ್ ಸಿಂಧೂರ್‌’ ಕುರಿತು ಸಂಸತ್ತಿಗೆ ಸುಳ್ಳು ಮಾಹಿತಿ: ರಾಜನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹಕ್ಕುಚ್ಯುತಿ ನೋಟಿಸ್

ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ. ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು,...