Homeಮುಖಪುಟಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ?: ಲೇಖಕಿ ಬಾನು ಮುಷ್ತಾಕ್ ಪ್ರಶ್ನೆ

"ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು 'ಆ' ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ"

- Advertisement -
- Advertisement -

“ಕನ್ನಡ ಭಾಷೆಯ ಬಗ್ಗೆ ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ ಎಂದರೆ, ಕನ್ನಡವನ್ನು ಬಳಸಲು ನನಗೆ ನೀವು ಅವಕಾಶವನ್ನೆ ಕೊಡಲಿಲ್ಲ. ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿದಿರಿ. ಕನ್ನಡ ಬಾವುಟವನ್ನು ಅರಿಶಿನ ಕುಂಕುಮ ಎಂದು ಮಂದಾಸನದ ಮೇಲೆ ಕೂರಿಸಿಬಿಟ್ಟರಿ. ಆಗ ನಾನು ಎಲ್ಲಿ ನಿಲ್ಲಬೇಕು, ಎಲ್ಲಿ ನೋಡಬೇಕು? ನನ್ನ ಹೊರಗಟ್ಟುವಿಕೆ ಯಾವತ್ತೊ ಆರಂಭವಾಗಿದೆ, ಇಂದು ಪೂರ್ಣಗೊಳ್ಳುತ್ತಿದೆ ಅಷ್ಟೆ” ಎಂದು ಲೇಖಕಿ ಬಾನು ಮುಷ್ತಾಕ್‌ರವರು ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಜನಸಾಹಿತ್ಯ ಸಮ್ಮೇಳನ ಉದ್ಘಾಟನಾ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅವರು ಕೊಲೆ ಮಾಡಿದರೂ ಸಹ ಚರ್ಚೆ ಆಗುವುದಿಲ್ಲ. ಆದರೆ ನಾವು ‘ಆ’ ನೋವಾಗುತ್ತಿದೆ ಎಂದರೂ ಬದ್ನಾಮ್ ಆಗಿ ಬಿಡುತ್ತೇವೆ-ದೇಶದ್ರೋಹಿ ಆಗಿಬಿಡ್ತಿವಿ” ಎಂದು 1946ರಲ್ಲಿ ಉರ್ದು ಕವಿ ಬರೆದಿದ್ದಾರೆ. ಈ ಪರಿಸ್ಥಿತಿ ಇವತ್ತಿಗೂ ಕೂಡ ಪುನರಾವರ್ತನೆಯಾಗುತ್ತಿದೆ ಎಂದರೆ ನಾವು ಎಂತಹ ಭಯಾನಕ ಸ್ಥಿತಿಯಲ್ಲಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇಂದು ದ್ವೇಷ ಭಾಷಣಗಳ, ಸುಳ್ಳು ಸುದ್ದಿಗಳ ಪ್ರಾಸನವಾಗುತ್ತಿದೆ. ನಮ್ಮ ನಂದಿನಿ ಕೈತಪ್ಪಿ ಹೋಗುತ್ತಿದೆ. ನಾವು ಕರ್ನಾಟಕದವರು ಬಹಳ ದೇಶಭಕ್ತರು, ಉದಾರಿಗಳೆಂದುಕೊಂಡು ಸುಮ್ಮನಿದ್ದೇವೆ. ನಂದಿನಿ ನಮ್ಮ ಸಾಹಿತ್ಯ, ಅನ್ನ, ಯುವಜನರ ನೆಮ್ಮದಿ ನೀರು, ವಸತಿ ಎಲ್ಲವೂ ಆಗಿದೆ. ಆದರೆ ಅದು ಕೈ ತಪ್ಪುತ್ತಿದ್ದರು ಸಹ ಏಕೆ ನಾವು ಮಾತನಾಡುತ್ತಿಲ್ಲ ಎಂದು ಬಾನು ಮುಷ್ತಾಕ್ ಪ್ರಶ್ನಿಸಿದರು.

ಮಹಿಳೆಯರನ್ನು ಹೇಗೆ ಹೊಗಳಿ, ಮಂದಾಸನದಲ್ಲಿ ಕೂರಿಸಿ ತುಳಿಯುತ್ತಿದ್ದಾರೋ, ನೀವುಗಳು ಹಾಗೆಯೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆ, ಪರಿಷೆ ಮಾಡಿ ನನ್ನನ್ನು ಅಂದರೆ ಮುಸ್ಲಿಮರನ್ನು ಹೊರಗಟ್ಟಲಿಕ್ಕೆ ಇಷ್ಟು ಹುನ್ನಾರ ಬೇಕಿತ್ತೆ? ಏಕೆ ಹೀಗೆ ಮಾಡುತ್ತಿದ್ದೀರಿ ಎಂಬುದಕ್ಕೆ ನನಗೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಒಂದೂ ಪುಸ್ತಕ ಪ್ರಕಟಿಸದ ಕನಿಷ್ಟ 600ಕ್ಕಿಂತ ಹೆಚ್ಚಿನ ಮುಸ್ಲಿಂ ಬರಹಗಾರರಿದ್ದಾರೆ. ಆದರೆ ಅವರನ್ನೆಲ್ಲ ನಾವು ಮರೆತುಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯು ಅಲ್ಪಸಂಖ್ಯಾತರು, ದಲಿತರು, ಅಲಕ್ಷಿತ ಸಮುದಾಯಗಳಿಗೆ ಕನ್ನಡದ ಹೆಬ್ಬಾಗಿಲನ್ನು ತೆಗೆದರು. ನಮ್ಮ ಅಭಿವ್ಯಕ್ತಿಯ ಅಡೆತಡೆಗಳನ್ನು ಬಂಡಾಯ ಸಂಘಟನೆ ನಿವಾರಣೆ ಮಾಡಿತು. ಇಂದು ಜನ ಸಾಹಿತ್ಯ ಸಮ್ಮೇಳನ ಆ ಕೆಲಸಕ್ಕೆ ಮುಂದಾಗಿದೆ. ಈ ಪ್ರತಿರೋಧ ಸಮಾವೇಶ ಒಂದು ಅದ್ಭುತವಾದ ಅವಕಾಶ ಕಲ್ಪಿಸಿಕೊಟ್ಟಿದೆ. ಇದು ಸಂತೋಷದ ವಿಷಯ ಎಂದರು.

ಅತ್ಯಂತ ಸಂವೇದನಶೀಲ ಕಲೆ ಸೃಷ್ಟಿಯಾಗಲು ತಳಸಮುದಾಯಗಳ ಚಲನಶೀಲತೆ ಮತ್ತು ಔದಾರ್ಯವೇ ಮುಖ್ಯ ಕಾರಣ. ಇಂದಿಗೂ ಆ ಸಮುದಾಯಗಳ ಕಲೆ ಮತ್ತು ಸಾಹಿತ್ಯದ ಮೌಲ್ಯ ಮಾಪನ ಮಾಡುವುದು ಬಿಟ್ಟು ಟಿಪ್ಪುವಿನಲ್ಲಿ, ಎಂ ಎಫ್ ಹುಸೇನ್‌ನಲ್ಲಿ ಮುಸ್ಲಿಮನನ್ನು ಹುಡುಕುವ, ಬಾಬಾ ಸಾಹೇಬರಲ್ಲಿ ದಲಿತನನ್ನು ಕಾಣುವ ನಿಮ್ಮ ದೃಷ್ಟಿಯನ್ನು ನೀವೆ ಸರಿಪಡಿಸಿಕೊಳ್ಳಿ ಎಂದು ಒತ್ತಾಯಿಸಿದರು.

ಕೆಲವರು ನಾನು ಅವರ ಮರಿ ಮಗ, ಮರಿ ಮೊಮ್ಮಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಮರಿ ಮಗನೊ, ನರಿ ಮಗನೊ ಏನಾದರೂ ಆಗಿ. ಆದರೆ ನೀವು ಯಾರ ಮಗ ಎಂದುಕೊಳ್ಳುತ್ತೀರಿ ಆ ಮಹಾನ್ ಪುರುಷನ ಗೌರವಕ್ಕೆ ಚ್ಯುತಿ ತರದಂತೆ ನಡೆದುಕೊಳ್ಳಿ. ಅವರ ಜೀವಪರ-ಜನಪರ ಮೌಲ್ಯಗಳಿಗೆ ಅನುಗುಣವಾಗಿ ನಡೆದುಕೊಳ್ಳಿ. ಏಕೆಂದರೆ ಅವರ ಮೆರಗು ಇಳಿದುಹೋಗುತ್ತದೆ, ಉಳಿಯುವುದಿಲ್ಲ ಎಂದು ಬಾನು ಮುಷ್ತಾಕ್ ಹೇಳಿದರು.

ಸರ್ವಾಧಿಕಾರಿಗಳು ಉಪಯುಕ್ತವಾದ ಶತ್ರು ಅಥವಾ ಅನ್ಯನನ್ನು ಆಯ್ಕೆ ಮಾಡಿಕೊಂಡು ಜನರ ರೋಷವನ್ನು ಘರ್ಷಣೆ ಅಥವಾ ಯುದ್ದದ ಮೂಲಕ ಆ ಕಡೆ ತಿರುಗಿಸುತ್ತಾರೆ. ಇಂದು ಅವರು ಮುಸ್ಲಿಮರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರನ್ನು ದೇಶದ್ರೋಹಿಗಳಾಗಿ ಬಿಂಬಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಕಲಾವಿದರು ಕೆಲಸ ಮಾಡಬೇಕಾದ ಕಾಲ ಇದು. ಇಲ್ಲಿ ನಿರಾಶೆಗೆ ಜಾಗವಿಲ್ಲ. ನಾವು ಮಾತಾಡುತ್ತೇವೆ, ಬರೆಯುತ್ತೇವೆ, ನಾವು ಭಾಷೆಯನ್ನು ಬಳಸುತ್ತೇವೆ ಹೀಗೆ ಆದಾಗ ಮಾತ್ರ ನಾಗರೀಕತೆಗಳು ವಾಸಿಯಾಗುತ್ತವೆ ಎಂದರು.

ಇದನ್ನೂ ಓದಿ; ರಾಷ್ಟ್ರಗಳನ್ನು ನಿರ್ಮಿಸುವವರು ಕಲಾವಿದರು ಮತ್ತು ಕವಿಗಳೆ ಹೊರತು ವ್ಯಾಪಾರಿಗಳು, ರಾಜಕಾರಣಿಗಳಲ್ಲ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಪ್ರತಿ ಕ್ಷಣ ಈ ಭಾರತ. ಪ್ರತಿ ವರ್ಷದ ಹಾಗೆ ಎಲ್ಲಾ ತರಹದಲ್ಲೂ ಹಿಂದೆ ಉರುಳುತ್ಹಿದೆ.
    ನಮ್ಮೆಲ್ಲರ ಕರ್ತವ್ಯ ನಿಷ್ಠೆಗೆ ಯಾವ ಬೆಲೆಯೇ ಇಲ್ಲಾ
    ನಮ್ಮ ದ್ವನಿ ಅರನುರೋಧನೆ ಯಾಗಿದೆ.

LEAVE A REPLY

Please enter your comment!
Please enter your name here

- Advertisment -

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...

ಉಪವಾಸ ಕೊನೆಗೊಳಿಸಲು ನಿರಾಕರಿಸಿದ ಸೋನಮ್ ವಾಂಗ್‌ಚುಕ್ : 19ನೇ ದಿನವೂ ಮುಂದುವರಿದ ಸತ್ಯಾಗ್ರಹ; ಇನ್ನಷ್ಟು ಹದಗೆಟ್ಟ ಆರೋಗ್ಯ

ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...