Homeಸಾಹಿತ್ಯ-ಸಂಸ್ಕೃತಿಕಥೆಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ - ಯೋಗೇಶ್ ಮಾಸ್ಟರ್

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

- Advertisement -
- Advertisement -

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ.
“ನೋಡಿದೆ ಅಪ್ಪಾ.”
“ಎಲ್ಲಾ ಅರ್ಥ ಆಯ್ತೇನೋ?”
“ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ ರಾಜ್ಯ, ಹೆಂಡತಿ, ಮಗ; ಎಲ್ಲವನ್ನೂ ಬಿಟ್ಟು ಹೋದವನು, ತಗಡಿನ ಬಿಲ್ಲೆ ಕೊಡ್ತೀವಿ ಅಂದ ತಕ್ಷಣ ಓಡಿ ಬಂದುಬಿಟ್ಟನಲ್ಲಪ್ಪಾ?”ಬೀಚಿಯ ಬೆಳ್ಳಿ ತಿಂಮ ಒಬ್ಬ ಬಾಲಕ. ಅವನು ತಾನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನೋಡುವುದನ್ನೆಲ್ಲಾ ಪ್ರಶ್ನಿಸುತ್ತಾನೆ. ಅವನ ಪ್ರಶ್ನೆಗಳು ಸಮಾಜವು ಯಾವುದನ್ನು ಗಂಭೀರ ಅಂತ ಪರಿಗಣಿಸುತ್ತದೋ ಅದನ್ನು ಲೇವಡಿ ಮಾಡುತ್ತದೆ. ಹೀಗೆ ವ್ಯಂಗ್ಯವಾಡುವುದು ವ್ಯವಸ್ಥೆಯನ್ನು ಪ್ರತಿಭಟಿಸುವ, ಚಿಂತನೆಗೆ ಹಚ್ಚುವ ಬೀಚಿಯವರ ರೀತಿ.

ಬುದ್ಧ ತಗಡಿನ ಬಿಲ್ಲೆಗೆ ಓಡಿ ಬರುವುದು, ತಿಂಮನಿಗೆ ನಾಟಕ ಮತ್ತು ವಾಸ್ತವದ ಅರಿವಿಲ್ಲ ಅಂತಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅದಕ್ಕೆ ಪ್ರಶಸ್ತಿ ಬರಲೆಂದು ಅರ್ಜಿ ಹಾಕುವುದನ್ನು, ಲಾಬಿ ಮಾಡುವ ವಾಸ್ತವವನ್ನು ಅದು ಅಣಕಿಸುತ್ತದೆ.

ರಸ್ತೆಯಲ್ಲಿ ಯಾರಿಗೋ ಕೈಕೋಳ, ಕಾಲ್ಗಳಿಗೆ ಸರಪಳಿ ಹಾಕಿ ಎಳೆದೊಯ್ಯುತ್ತಿದ್ದ ಗಲಾಟೆ. ತಿಂಮ ಕೇಳಿದ ಅದೇನೆಂದು. ಜೈಲಿಗೆಂದರು ಯಾರೋ. ‘ಜೈಲಿಗೋ ಇಷ್ಟು ರಂಪು! ನಾನೆಲ್ಲೋ ಸ್ಕೂಲಿಗೆ ಎಂದುಕೊಂಡೆ’ ಎನ್ನುತ್ತಾ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾನೆ ತಿಂಮ.

“ಇವತ್ತು ಬರುವ ಅತಿಥಿಯ ಮೂಗಿನ ಬಗ್ಗೆ ಏನೂ ಮಾತಾಡಬೇಡ” ಎಂದು ತಂದೆ ಎಚ್ಚರಿಸಿರುತ್ತಾನೆ. ಅತಿಥಿ ಬಂದಾಗ ಅವರನ್ನೇ ನೋಡಿಕೊಂಡು ತಿಂಮ ಕುಳಿತಿರುತ್ತಾನೆ. ಅತಿಥಿಗೂ ಅದು ಗಮನಕ್ಕೆ ಬಂದು, ಯಾಕಪ್ಪಾ ಎಂದು ಕೇಳುತ್ತಾರೆ. ಅವನು ಏನಿಲ್ಲ ಎಂದು ತಂದೆಗೆ ಕೇಳುತ್ತಾನೆ. “ಅಪ್ಪಾ, ಇವರ ಮೂಗಿನ ಬಗ್ಗೆ ಏನೂ ಮಾತಾಡಬೇಡಾಂದೆ. ಆದರೆ, ಇವರಿಗೆ ಮೂಗೇ ಇಲ್ಲ!” ಎಂದು ಮಕ್ಕಳ ಮುಖವಾಡವಿಲ್ಲದ ಮನಸ್ಸನ್ನು ತೋರಿಸುವ ಮಗುವಿನ ಮನೋವಿಜ್ಞಾನ ಬೀಚಿಯದು.

“ಹಸುವಿಗೆ ನಾಲ್ಕಿರುತ್ತವೆ. ನನಗೆ ಎರಡಿವೆ. ಏನದು ಹೇಳು?” ಶಾಲೆಗೆ ಸೇರಿಸಿಕೊಳ್ಳುವ ಉಪಾಧ್ಯಾಯಿನಿ ತಿಂಮನ ಪರೀಕ್ಷಿಸಿದಳು. ಅವನಿಗೆ ಕಂಡದ್ದು ಹೇಳಿದ. ಶಿಕ್ಷಕಿ ಮುಜುಗರಗೊಂಡು ಇವನು ದೊಡ್ಡ ತರಗತಿಗೆ ಹೋಗಬೇಕೆನ್ನುವಳು. ಪಾಪ, ಕಾಲುಗಳೆಂಬ ಉತ್ತರ ಅವಳು ಬಯಸಿದ್ದಳು. ಕಿರಿಯ ಪೀಳಿಗೆ ದಡ್ಡರಿರುತ್ತಾರೆಂದು ಕಡೆಗಣಿಸದಿರಲು ಬೀಚಿ ಹಿರಿಯರಿಗೆ ಎಚ್ಚರಿಸುತ್ತಾರೆ.

ಪಶುವೈದ್ಯರು ಹಸುವಿಗೆ ಹೇಗೆ ಗುಳಿಗೆ ನುಂಗಿಸಬೇಕೆಂದು ಹೇಳಿ ತಿಂಮನ ಕಳುಹಿಸಿದ್ದರು. ಸ್ವಲ್ಪ ಹೊತ್ತಿಗೆ ತಿಂಮ ಗಾಬರಿಯಿಂದ ಮರಳಿ ಹಸುವಿಗೆ ಗುಳಿಗೆ ನುಂಗಿಸಲಾಗಲಿಲ್ಲವೆಂದು ಹೇಳಿದ.
“ಯಾಕೋ, ಗೊಟ್ಟದಲ್ಲಿ (ಬಿದಿರಿನ ಕೊಳವೆ) ಗುಳಿಗೆ ಇಟ್ಟೆಯೇನೋ?”
“ಇಟ್ಟೆ.”
“ಗೊಟ್ಟವನ್ನು ಹಸುವಿನ ಗಂಟಲಿಗಿಟ್ಟೆಯೇನೋ?”
“ಇಟ್ಟೆ.”
“ಜೋರಾಗಿ ಊದಿದೆಯೇನೋ?”
“ನಾನು ಊದುವಷ್ಟರಲ್ಲಿ ಅದೇ ಊದಿಬಿಟ್ಟಿತು!” ತಿಂಮನ ಗಾಬರಿಯ ಕಾರಣ ಅದು.
ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೋದವರನ್ನು ವ್ಯವಸ್ಥೆಯೇ ಬದಲಿಸುವ ಕತೆ ಈ ತಿಂಮನಲ್ಲಿ.
ಈ ಪುಸ್ತಕದ ಪ್ರತಿ ಈಗ ನನ್ನಲ್ಲಿಲ್ಲ. ಆದರೆ ಸಂದರ್ಭಾನುಸಾರವಾಗಿ ಬೇಕಾದ ಪುಟಗಳು ನನ್ನೊಳಗೆ ತೆರೆದುಕೊಂಡಿರುತ್ತವೆ.
“ತಿಂಮ, ಚೌಡಯ್ಯನವರ ಪಿಟೀಲು ಕೇಳಿದ್ಯೇನೋ?”
“ಕೇಳಿದೆ. ಕೊಡಲಿಲ್ಲಪ್ಪಾ.”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...