Homeಅಂಕಣಗಳುಕಳೆದುಹೋದ ದಿನಗಳುಭಿನ್ನಾಭಿಪ್ರಾಯಗಳ ನಡುವೆಯೂ ಅಮರ ಸ್ನೇಹ: ಸಿ.ಎಂ ಪೂಣಚ್ಚ ಮತ್ತು ಗಣಪಯ್ಯ ಹೀಗಿದ್ದರು

ಭಿನ್ನಾಭಿಪ್ರಾಯಗಳ ನಡುವೆಯೂ ಅಮರ ಸ್ನೇಹ: ಸಿ.ಎಂ ಪೂಣಚ್ಚ ಮತ್ತು ಗಣಪಯ್ಯ ಹೀಗಿದ್ದರು

ಪೂಣಚ್ಚನವರು ತೀರಿಕೊಂಡಾಗ "ಸದಾ ಬಿಳಿ ಉಡುಪನ್ನು ಧರಿಸುತ್ತಿದ್ದ ಪೂಣಚ್ಚ ಕೊಳೆ ಮಾಡಿಕೊಳ್ಳದೆ, ಶುಭ್ರವಾಗಿಯೇ ನಿರ್ಗಮಿಸಿದರು" ಎಂದು ಲಂಕೇಶ್ ಬರೆದಿದ್ದರು...

- Advertisement -
- Advertisement -

ಕಳೆದುಹೋದ ದಿನಗಳು – 28

ಸಕಲೇಶಪುರಕ್ಕೆ ಬಂದ ನಂತರ ಗಣಪಯ್ಯನವರ ಕೊನೆಯ ದಿನಗಳವರೆಗೂ ಆಪ್ತ ಬಳಗದವರೆಂದು ಪರಿಗಣಿತವಾಗಿ ಇದ್ದವರು ಇಬ್ಬರು. ಒಬ್ಬರು ಸಿ.ಎಂ.ಪೂಣಚ್ಚ ಇನ್ನೊಬ್ಬರು  ಗ್ರೆಗೊರಿ ಮಥಾಯಿಸ್, ಪೂಣಚ್ಚನವರ ಪೂರ್ಣಿಮಾ ಎಸ್ಟೇಟ್ ಮತ್ತು ಗ್ರೆಗೊರಿ ಮಥಾಯಿಸ್ ಅವರ ಶ್ರೀನಿವಾಸ ಎಸ್ಟೇಟ್ ಇವೆರಡೂ ತೋಟಗಳು ಐವತ್ತರ ದಶಕದಿಂದಲೇ ಹಾರ್ಲೆ ಮ್ಯಾನೇಜ್ಮೆಂಟ್ ಸರ್ವಿಸಸ್ ಅಡಿಯಲ್ಲೇ ಇದ್ದವು. ಮಥಾಯಿಸ್ ಅವರು ಕೆಲಕಾಲ ಅಮೆರಿಕಾದಲ್ಲಿಯೂ ನಂತರ ಕರ್ನಾಟಕ ಮತ್ತು ಭಾರತ ಸರ್ಕಾರಗಳ ಹಿರಿಯ ಅಧಿಕಾರಿಯೂ ಆಗಿ ಇದ್ದುದರಿಂದ ತೋಟಕ್ಕೆ ಬರುತ್ತಿದ್ದುದು ಕಡಿಮೆಯೇ. ಅವರ ನಿವೃತ್ತಿಯ ನಂತರ ಕೆಲವು ಸಲ ತೋಟಕ್ಕೆ ಬಂದು ಇರುತ್ತಿದ್ದರು. ಅವರ ಮಗ ಜೆರೋಮ್ ಪೀಟರ್ ಮಥಾಯಿಸ್ ಹೃದ್ರೋಗ ತಜ್ಞ ವೈದ್ಯರಾಗಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಶ್ರೀನಿವಾಸ ಎಸ್ಟೇಟ್‌ನ ಒಡೆತನವನ್ನು ಇನ್ನೂ ಉಳಿಸಿಕೊಂಡಿದ್ದಾರೆ.

ಪೂಣಚ್ಚನವರು ರಾಜಕೀಯದಿಂದ ನಿವೃತ್ತರಾದನಂತರ ಒಮ್ಮೊಮ್ಮೆ ತೋಟಕ್ಕೆ ಬರುತ್ತಿದ್ದರು.

ಸಾಹಿತ್ಯದ ಅಭ್ಯಾಸಿಯಾಗಿದ್ದ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು ಮಡಿಕೇರಿಯ “ಕೊಡಗು” ಪತ್ರಿಕೆಯ ಸಂಪಾದಕರಾಗಿ. ನಂತರ ಅವರು ರಾಜಕಾರಣದಲ್ಲಿ ತೊಡಗಿದರು. ಆದ್ದರಿಂದ ಅವರಿಗೆ ಸಾಂಸ್ಕೃತಿಕ ಚುಟುವಟಿಕೆಗಳಲ್ಲಿಯೂ ಒಲವಿತ್ತು.

ಪೂಣಚ್ಚನವರು ಕೇಂದ್ರ ಸಚಿವರಾಗಿದ್ದಾಗ ಮತ್ತು ನಂತರ ರಾಜ್ಯಪಾಲರಾಗಿದ್ದ ಅವಧಿಯಲ್ಲಿಯೂ ನಮ್ಮ ನಾಟಕ ಪ್ರದರ್ಶನವಿದ್ದಾಗ ಅದರ ಆಹ್ವಾನ ಪತ್ರವನ್ನಿಟ್ಟು ಅವರಿಗೆ ಕಾಗದ ಬರೆಯುತ್ತಿದೆ. ಅವರ ಅಷ್ಟೆಲ್ಲ ಕೆಲಸಕಾರ್ಯಗಳ ನಡುವೆಯೂ ನಮ್ಮ ನಮ್ಮ ನಾಟಕಕ್ಕೆ ಶುಭಹಾರೈಸಿ ಪತ್ರ ಬರೆಯುತ್ತಿದ್ದರು.

ಒಮ್ಮೆ ಪೂಣಚ್ಚನವರು ತೋಟಕ್ಕೆ ಬಂದಾಗ ನಾನು ಇದುವರೆಗೆ ನಿಮ್ಮ ನಾಟಕಗಳನ್ನು ನೋಡಲಾಗಲಿಲ್ಲ. ಇನ್ನೊಮ್ಮೆ ಬಂದಾಗ ಸಾಧ್ಯವಾದರೆ ನೋಡುತ್ತೇನೆ ಎಂದಿದ್ದರು. ನೀವು ಬರುವ ಕಾರ್ಯಕ್ರಮವನ್ನು ಒಂದು ತಿಂಗಳಿಗೆ ಮೊದಲು ತಿಳಿಸಿದರೆ ನಾನು ಏನಾದರೂ ಮಾಡಬಹುದು ಎಂದಿದ್ದೆ.

ಆ ವರ್ಷ ನಾವು ಮಹದೇವ ಬಣಕಾರ ಅವರ “ಮಕ್ಕಳಿರಲವ್ವ ಮನೆತುಂಬ” ಎಂಬ ನಾಟಕವನ್ನು ತೆಗೆದುಕೊಂಡಿದ್ದೆವು. ಮೊದಲ ಪ್ರದರ್ಶನವಾದಾಗ ಎಂದಿನಂತೆ ಪೂಣಚ್ಚನವರಿಗೆ ಪತ್ರ ಬರೆದಿದ್ದೆ. ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಕೆಲವೇ ದಿನಗಳಲ್ಲಿ “ಮುಂದಿನ ತಿಂಗಳ ಮೊದಲವಾರದಲ್ಲಿ ಬರುತ್ತೇನೆ, ನಾಟಕ ಪ್ರದರ್ಶನ ಮಾಡಲು ಸಾಧ್ಯವೇ?” ಎಂದು ಪತ್ರಬರೆದಿದ್ದರು.

ನಾವು ಮತ್ತೆ ಉತ್ಸಾಹದಿಂದ ತಾಲೀಮು ಪ್ರಾರಂಭಿಸಿದೆವು. ಅವರಿಗಾಗಿ ಒಂದು ಪ್ರದರ್ಶನ ಮಾಡಲು ಸಿದ್ಧರಾದೆವು.

ಪೂಣಚ್ಚ ದಂಪತಿ (ಶ್ರೀಮತಿ ಗಂಗವ್ವ ಪೂಣಚ್ಚ) ತೋಟದಲ್ಲೇ ಬಂದು ಉಳಿದಿದ್ದರು. ತೋಟದ ಕಾಫಿ ಕಣದ ಪಕ್ಕದಲ್ಲೇ ನಾವು ರಂಗವೇದಿಕೆಯನ್ನು ಸಿದ್ಧಮಾಡಿಕೊಂಡು, ಸಾರ್ವಜನಿಕರಿಗೂ ಮುಕ್ತ ಪ್ರವೇಶ ಇಟ್ಟೆವು. ಈ ಪದ್ಧತಿ ಹಾರ್ಲೆ ಗುಂಪಿನ ಎಲ್ಲ ಸಂಸ್ಥೆಗಳಲ್ಲೂ ನಡೆದು ಬಂದ ರೀತಿ. ಹಾರ್ಲೆ ಎಸ್ಟೇಟಿನಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ ಅಲ್ಲಿ ಸುತ್ತಲಿನ ಗ್ರಾಮಸ್ಥರಿಗೂ ಮುಕ್ತ ಪ್ರವೇಶ.

ನಮ್ಮ ನಾಟಕ ಪ್ರದರ್ಶನಕ್ಕೆ ಅಂದು ಗಣಪಯ್ಯನವರೂ ಬಂದರು. ಅವರಿಗೆ ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತದಿಂದ ಕಾಲಿಗೆ ಪೆಟ್ಟಾದದ್ದು ಇನ್ನೂ ವಾಸಿಯಾಗಿರಲಿಲ್ಲ. ಕಾಲಿಗೆ ಕಟ್ಟಿದ ಪಟ್ಟಿಗಳು ಹಾಗೇ ಇದ್ದವು. ಆದರೂ ಸಂಜೆ ಬಂದು ಗೆಳೆಯನ ಜೊತೆ ಕುಳಿತು ಇಡೀ ನಾಟಕ ನೋಡಿದರು.

ನಾವು ಆಡಿದ ನಾಟಕ ಮಕ್ಕಳಿರಲವ್ವ ಮನೆತುಂಬ ಜನಸಂಖ್ಯಾ ನಿಯಂತ್ರಣದ ಅಗತ್ಯದ ಬಗ್ಗೆ ಇತ್ತು. ನಾಟಕದ ನಂತರ ಮಾತಾಡಿದ ಪೂಣಚ್ಚ ಸಂಜಯ ಗಾಂಧಿಯ ಪ್ರಸ್ತಾಪ ಮಾಡಿ, “ನಾವು ಸಂಜಯಗಾಂಧಿಯವರ ರಾಜಕೀಯವನ್ನು ಮತ್ತು ಅನೇಕ ಕ್ರಮಗಳನ್ನು ವಿರೋಧಿಸಬಹುದು, ಆದರೆ ಅವರ ಕಾರ್ಯಕ್ರಮಗಳಲ್ಲಿ ಎರಡು ವಿಚಾರಗಳಿಗೆ ನಮ್ಮ ವಿರೋಧ ಇರಬಾರದು. ಆ ಕಾರ್ಯಕ್ರಮಗಳನ್ನು ಜಾರಿಗೊಳಿಸುವಾಗ ಆದ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಆದರೆ ಜನಸಂಖ್ಯಾ ನಿಯಂತ್ರಣ ಮತ್ತು ವ್ಯಾಪಕವಾದ ಅರಣ್ಯೀಕರಣ ಇವೆರಡು ವಿಷಯಗಳನ್ನು ನಾವು ಎಲ್ಲ ರಾಜಕಾರಣವನ್ನು ಬದಿಗಿಟ್ಟು ಮುಕ್ತವಾಗಿ ಮುನ್ನಡೆಸಬೇಕು. ಇಲ್ಲದಿದ್ದರೆ ಮುಂದೆ ದೊಡ್ಡ ಅನಾಹುತ ಕಾದಿದೆ. ಇದು ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಅನ್ವಯಿಸುವ ವಿಷಯ” ಎಂದರು.

ನಾಟಕ ಮಕ್ಕಳಿರಲವ್ವ ಮನೆತುಂಬ 1986 ರಲ್ಲಿ

ಅದು ಈ ಗೆಳೆಯರಿಬ್ಬರು ಒಟ್ಟಿಗೆ ಕುಳಿತು ಮಾತಾಡಿದ ಕೊನೆಯ ಸಂದರ್ಭವಾಗಿತ್ತು. ನಂತರ ಮೊದಲು ಅಗಲಿದವರು ಗಣಪಯ್ಯನವರೇ.

ಇಬ್ಬರೂ ಗಾಂಧಿ ಅನುಯಾಯಿಗಳು, ಆದರೆ ರಾಜಕೀಯವಾಗಿ ವಿಭಿನ್ನ ಹಾದಿ ಹಿಡಿದವರು. ಪೂಣಚ್ಚ ಕೊನೆಯವರೆಗೂ ಗಣಪಯ್ಯನವರನ್ನು ತನ್ನ ಗುರುಗಳೆಂದೇ ಹೇಳುತ್ತಿದ್ದರು.

ಅಂದಿನ ದಿನಗಳ ಸೊಬಗಿದು.

ಗಾಂಧಿಯಿಂದ ಪ್ರಭಾವಿತರಾಗಿ ಸರಳ ಜೀವನ ನಡೆಸುತ್ತಾ ರಾಜಾಜಿ ಅನುಯಾಯಿಯೂ ಆಗಿ ನಿಜವಾದ ಅರ್ಥದ ಬಲಪಂಥೀಯ ಆರ್ಥಿಕ ಚಿಂತನೆಯ ಸ್ವತಂತ್ರ ಪಾರ್ಟಿಯಲ್ಲಿ ಇದ್ದು ಕಾಂಗ್ರೆಸ್‌ನ ಕಡು ವಿರೋಧಿಯೂ ವೈಯಕ್ತಿಕವಾಗಿ ಸಮಾಜ ಸೇವಕರೂ ಆಗಿದ್ದ ಗಣಪಯ್ಯ.

ಕಾಂಗ್ರೆಸ್‌ನ ಅನುಯಾಯಿಯಾಗಿ ಇಂದಿರಾ ಸರ್ಕಾರದಲ್ಲಿ ಮಂತ್ರಿಯಾಗಿ ನಂತರ ತುರ್ತುಸ್ಥಿತಿ ಯನ್ನು ವಿರೋಧಿಸಿದರೂ ನಂತರ ಮತ್ತೆ ಇಂದಿರಾ ಸರ್ಕಾರ ಬಂದಾಗಲೂ ಮತ್ತೆ ರಾಜ್ಯಪಾಲರಾಗಿ ಮುಂದುವರಿದ ಪೂಣಚ್ಚ ಇವರಿಬ್ಬರಲ್ಲಿ ರಾಜಕೀಯವನ್ನು ಮೀರಿದ ಸ್ನೇಹ ಸಾಧ್ಯವಾಗಿತ್ತು.

ತನ್ನನ್ನು ವಿರೋಧಿಸಿ ಜನತಾ ಪಾಳೆಯ ಸೇರಿದ ಪೂಣಚ್ಚ ಜನತಾ ಸರ್ಕಾರದಿಂದ ರಾಜ್ಯಪಾಲರಾಗಿ ನಿಯುಕ್ತರಾಗಿದ್ದರೂ ಇಂದಿರಾಗಾಂಧಿ ಮತ್ತೆ ತನಗೆ ಅಧಿಕಾರ ಬಂದಾಗ ಅವರನ್ನು ರಾಜ್ಯಪಾಲರಾಗಿ ಮುಂದುವರೆಸಿದ್ದು…..

ಇದು ಕೃಪೆಯಲ್ಲ ಯಾಕೆಂದರೆ ಪೂಣಚ್ಚನವರ ಪ್ರಾಮಾಣಿಕತೆಯ ಬಗ್ಗೆ ಇಂದಿರಾಗಾಂಧಿಗೂ ಅರಿವಿತ್ತು.

ಪೂಣಚ್ಚನವರು ತೀರಿಕೊಂಡಾಗ ಸಾಮಾನ್ಯವಾಗಿ ಮತ್ತು ಸುಲಭವಾಗಿ ಯಾವ ರಾಜಕಾರಣಿಗಳನ್ನು ಹೊಗಳದ ಲಂಕೇಶ್ “ಸದಾ ಬಿಳಿ ಉಡುಪನ್ನು ಧರಿಸುತ್ತಿದ್ದ ಪೂಣಚ್ಚ ಕೊಳೆ ಮಾಡಿಕೊಳ್ಳದೆ, ಶುಭ್ರವಾಗಿಯೇ ನಿರ್ಗಮಿಸಿದರು” ಎಂದು ಬರೆದರು.

ಇಂತಹ ಸಂಬಂಧಗಳೇ ಮರೆಯಾಗುತ್ತ ಭಿನ್ನಾಭಿಪ್ರಾಯ ಹೊಂದಿದವರೆಲ್ಲ ನಮ್ಮ ಶತ್ರುಗಳು ಎಂದುಕೊಳ್ಳುವ ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ‘ನಮ್ಮ ಎಲುಬುಗಳ ಮೇಲೆ’ – ನಾವು ಪ್ರದರ್ಶಿಸಿದ ಮೊದಲ ನಾಟಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...